ದಿನದ ಸುದ್ದಿ
ಜೀವನಾಧಾರ ಮತ್ತು ಉತ್ತಮ ಅವಕಾಶಗಳಿಗಾಗಿ ಚಾಲನಾ ವೃತ್ತಿ; ಮಹಿಳೆಯರನ್ನು ಬೆಂಬಲಿಸುವ ರಾಷ್ಟ್ರೀಯ ಅಭಿಯಾನ
ಸುದ್ದಿದಿನ,ಬೆಂಗಳೂರು : ಯುನೈಟೆಡ್ ಕಿಂಗ್ಲಂ (ಯುಕೆ) ಮೂಲದ ಶೆಲ್ ಫೌಂಡೇಶನ್ ಮತ್ತು ಯುಕೆ ಸರ್ಕಾರಗಳ ಸಹಭಾಗಿತ್ವದಲ್ಲಿ ಮೂವಿಂಗ್ ವುಮೆನ್ ಸೋಷಿಯಲ್ ಇನಿಷಿಯೇಟಿವ್ ಫೌಂಡೇಶನ್ (MOWO) “ಮೂವಿಂಗ್ ಬೌಂಡರೀಸ್” ಎಂಬ ಅಭಿಯಾನವನ್ನು ಆರಂಭಿಸಿದೆ.
ಇದು, ಮಹಿಳೆಯರು ಚಾಲನಾ ಕೌಶಲವನ್ನು ಪಡೆದು ವ್ಯವಸ್ಥೆಯಲ್ಲಿನ ಅಡೆತಡೆಯನ್ನು ನಿವಾರಿಸಿಕೊಂಡು ಸಾರಿಗೆ ವ್ಯವಹಾರ ಕ್ಷೇತ್ರದಲ್ಲಿ ಚಾಲನೆಯನ್ನು ವೃತ್ತಿಯನ್ನಾಗಿ ಸ್ವೀಕರಿಸುವುದನ್ನು ಉತ್ತೇಜಿಸುವ ಅಭಿಯಾನವಾಗಿದೆ. ಟ್ಯಾಕ್ಸಿ ಮತ್ತು ಇ-ರಿಕ್ಷಾ ಚಾಲಕರಾಗಿ ಅಥವಾ ಇ-ಕಾಮರ್ಸ್ ಕಂಪನಿಗಳಿಗೆ ಡೆಲಿವರಿ ಏಜೆಂಟ್ಸ್ ಆಗಿ ಕಾರ್ಯನಿರ್ವಹಿಸುವುದಕ್ಕೆ ಪ್ರೇರಣೆ ನೀಡಲಾಗುತ್ತದೆ.
ಈ ಅಭಿಯಾನದಲ್ಲಿ, MOWO ಸಂಸ್ಥಾಪಕರಾದ ಜೈ ಭಾರತಿ ಅವರು ತಮ್ಮ ಮೋಟಾರ್ ಬೈಕ್ನಲ್ಲಿ ಭಾರತದಾದ್ಯಂತ ಅಕ್ಟೋಬರ್ 11ರಿಂದ 40 ದಿನಗಳ ಕಾಲ ಪ್ರವಾಸ ಮಾಡಲಿದ್ದಾರೆ. ಈ ಅವಧಿಯಲ್ಲಿ ಅವರು 20 ಕ್ಕೂ ಅಧಿಕ ನಗರಗಳಿಗೆ ಭೇಟಿ ನೀಡಿ ಅಲ್ಲಿ ಮಹಿಳೆಯರು ಚಾಲನಾ ಕೌಶಲ ಅಭಿವೃದ್ಧಿ ಪಡಿಸಿಕೊಳ್ಳುವುದರಿಂದ ಅವರಿಗೆ ಉದ್ಯೋಗಾವಕಾಶ ಹೆಚ್ಚುತ್ತದೆ ಎಂಬ ಅರಿವು ಮೂಡಿಸುವುದು ಮತ್ತು ಚಾಲನಾ ವೃತ್ತಿ ಕಲಿಕೆಗೆ ಉತ್ತೇಜನ ನೀಡುವ ಕೆಲಸ ಮಾಡುತ್ತಾರೆ.
ಅವರು ಈ ಪ್ರವಾಸದ ಅಂಗವಾಗಿ ಇಂದು ಬೆಂಗಳೂರಿಗೆ ತಲುಪಿದ್ದಾರೆ. ಹೈದರಾಬಾದ್ನಿಂದ ಅವರ ಪ್ರವಾಸ ಆರಂಭವಾಗಿದ್ದು, ಮುಂದೆ ಚೆನ್ನೈ, ಕೊಚ್ಚಿ, ಗೋವಾ, ಪುಣೆ, ಮುಂಬೈ, ಸೂರತ್, ಅಹಮದಾಬಾದ್, ಉದಯಪುರ್, ಜೈಪುರ, ಅಮೃತಸರ, ಶ್ರೀನಗರ, ನವದೆಹಲಿ, ಲಖನೌ, ಅಲಹಾಬಾದ್, ಪಟನಾ, ಗುವಾಹಟಿ, ಕೋಲ್ಕತ, ರಾಂಚಿ, ಭುವನೇಶ್ವರ ಮತ್ತು ಇತರೆ ನಗರಗಳಿಗೆ ಭೇಟಿ ನೀಡುವವರಿದ್ದಾರೆ.
ಮಹಿಳೆಯರಲ್ಲಿ ಚಾಲನಾ ಶಕ್ತಿ ಮಹತ್ವವನ್ನು ಸಾರುತ್ತ, ಪ್ರಯಾಣದಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುತ್ತ ಅವರು ಸಾಗುತ್ತಿದ್ದಾರೆ. ಅಲ್ಲದೆ, ಮಹಿಳೆಯರು ತಮ್ಮ ಬದುಕಿನ ಎಲ್ಲ ಆಯಾಮಗಳಲ್ಲೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಸುರಕ್ಷಿತವಾಗಿ ಓಡಿಸುವ ಮತ್ತು ಪ್ರಯಾಣಿಸುವ ಶಕ್ತಿಯನ್ನು ಪಡೆದುಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು ಕೂಡ ಅವರ ಉದ್ದೇಶ, ಡ್ರೈವಿಂಗ್ ಕಲಿಯುವುದು ಮಾತ್ರವಲ್ಲದೆ ಸ್ವಂತ ಇಲೆಕ್ನಿಕ್ ವಾಹನವನ್ನು ಖರೀದಿಸಿ ಅವುಗಳ ಮೂಲಕ ಆದಾಯ ಗಳಿಸುವುದಕ್ಕೆ ಅನುವು ಮಾಡಿಕೊಡುವುದು. ಇಲೆಕ್ನಿಕ್ ವಾಹನಗಳನ್ನು ಬಳಸುವುದರಿಂದಾಗಿ ಕಾರ್ಬನ್ ಹೊರಸೂಸುವಿಕೆ ತಗ್ಗಿಸುವ ಮೂಲಕ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದು ಸಾಧ್ಯವಾಗಲಿದೆ ಎಂಬ ಆಶಯವನ್ನೂ ಅವರು ಪ್ರಚುರ ಪಡಿಸುತ್ತಿದ್ದಾರೆ.
‘ಇವನ್ ಕಾರ್ಗೊ’ ಎಂಬ ಸಾಮಾಜಿಕ ಉದ್ಯಮವೊಂದು ಇಲೆಕ್ನಿಕ್ ವಾಹನಗಳ ಮಾಲೀಕತ್ವ ಹೊಂದಲು ಮಹಿಳೆಯರಿಗೆ ಬೇಕಾದ ತರಬೇತಿ, ಉದ್ಯೋಗಾವಕಾಶಕ್ಕೆ ಬೇಕಾದ ಕೌಶಲಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ. ಈ ಸಂಸ್ಥೆ ಕೂಡ ಈ ಅಭಿಯಾನವನ್ನು ಬೆಂಬಲಿಸುತ್ತಿದೆ.
“ಮೂವಿಂಗ್ ಬೌಂಡರೀಸ್’ ಬಗ್ಗೆ ಪ್ರತಿಕ್ರಿಯಿಸಿದ ‘MOWO’ ಸಂಸ್ಥಾಪಕರಾದ ಜೈ ಭಾರತಿ ಅವರು ಹೇಳಿದ್ದಿಷ್ಟು – ಜಗತ್ತಿನಾದ್ಯಂತ ಮಹಿಳೆಯರ ಓಡಾಟದ ಮೇಲೆ ಒಂದಷ್ಟು ನಿಯಮ, ನಿಬಂಧನೆಗಳು ಇವೆ. ಇದೇ ಕಾರಣಕ್ಕೆ ಅವರು ಒಂದು ಉತ್ತಮ ಶಿಕ್ಷಣ ಪಡೆಯುವುದಕ್ಕೋ ಅಥವಾ ಸಂಕೀರ್ಣ ಉದ್ಯೋಗ ಮಾಡುವುದಕ್ಕೋ ಅಥವಾ ಪ್ರಯಾಣ ಸುರಕ್ಷಿತವಲ್ಲ ಎಂಬ ಕಾರಣಕ್ಕೂ ದೀರ್ಘ ದೂರ ಪ್ರಯಾಣಿಸುವುದು ಸಾಧ್ಯವಾಗುತ್ತಿಲ್ಲ.
ಇದರಿಂದಾಗಿ ಅವರಿಗೆ ಬಹಳ ಸೀಮಿತ ಉದ್ಯೋಗಾವಕಾಶವಷ್ಟೇ ಸಿಗುತ್ತಿದೆ. ದೇಶದ ಎಲ್ಲ ವರ್ಗದ ಮಹಿಳೆಯರನ್ನು ಭೇಟಿ ಮಾಡುವುದಕ್ಕೆ ನನ್ನ ಮೋಟಾರ್ ಬೈಕ್ನಲ್ಲಿ ಕೈಗೊಳ್ಳುತ್ತಿರುವ ಈ 40 ದಿನಗಳ ಪ್ರವಾಸ ನಿಜಕ್ಕೂ ಖುಷಿ ಮತ್ತು ಉತ್ತಮ ಅನುಭವವನ್ನು ಕೊಡುವಂಥದ್ದು.
ಚಾಲನೆಯನ್ನು ವೃತ್ತಿಯನ್ನಾಗಿ ಸ್ವೀಕರಿಸುವ ಮಹಿಳೆಯರಿಗೆ ಅವರ ಉದ್ಯೋಗ ಮಾಡುವುದಕ್ಕೆ ಉತ್ತೇಜನ ನೀಡುವಂಥದ್ದು ಮತ್ತು ಅದಕ್ಕೆ ಬೇಕಾದ ಕಾರ್ಯಾಗಾರ ಆಯೋಜಿಸುವುದು ಈ ಪ್ರವಾಸದ ಉದ್ದೇಶ, ಚಾಲನೆಯನ್ನು ವೃತ್ತಿಯನ್ನಾಗಿ ಸ್ವೀಕರಿಸುವುದು ಮಹಿಳೆಯರಿಂದಲೂ ಸಾಧ್ಯವಿದೆ ಎಂಬ ವಿಶ್ವಾಸವನ್ನು ಅವರಲ್ಲಿ ಮೂಡಿಸಬೇಕು.
ಸಾರಿಗೆ ಕ್ಷೇತ್ರದಲ್ಲಿ ಮಹಿಳೆಯರಿಗೂ ಅವಕಾಶವಿದ್ದು, ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು ಮತ್ತು ಅವರು ತಮ್ಮ ಸ್ವಂತ ವಾಹನಗಳನ್ನು ಚಲಾಯಿಸಿಕೊಂಡು ಜೀವನೋಪಾಯವನ್ನು ಕಂಡುಕೊಳ್ಳುವಂತೆ ಮಾಡಬೇಕು. ಪುರುಷ ಪ್ರಧಾನವಾಗಿರುವ ಈ ಕ್ಷೇತ್ರದಲ್ಲಿ ಮಹಿಳೆಯರಿಗೂ ಉದ್ಯೋಗಾವಕಾಶ ಹೆಚ್ಚಿಸುವುದು ಉತ್ತಮ ನಡೆಯಾಗಿದೆ.”
ಪಾಲುದಾರಿಕೆ ಕುರಿತು ಪ್ರತಿಕ್ರಿಯಿಸುತ್ತ ಶಲ್ ಫೌಂಡೇಶನ್ನ ಶ್ರೀಮತಿ ಶಿಪ್ರಾ ನಯ್ಯರ್, “ನಾವು ‘ಮೂವಿಂಗ್ ಬೌಂಡರೀಸ್ ಗೆ ಚಾಲನೆ ನೀಡಿದ್ದೇವೆ. ಇದು ಮಹಿಳೆಯರಿಗಾಗಿ ಸುರಕ್ಷಿತ, ಕೈಗೆಟಕುವ ಮತ್ತು ಸ್ವಚ್ಛ ಸಾರಿಗೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಈ ಮೂಲಕ ಮಹಿಳೆಯರು ಅವರ ತಮ್ಮ ಬದುಕಿಗೆ ಅಗತ್ಯ ಮೂಲಸೌಕರ್ಯಗಳಾದ ಆರೋಗ್ಯಸೇವೆ, ಶಿಕ್ಷಣ ಮತ್ತು ಉದ್ಯೋಗ ಹೊಂದುವಂತಾಗಬೇಕು.
ಇ-ರಿಕ್ಷಾಗಳು ಮತ್ತು ಡೆಲಿವರಿ ಏಜೆಂಟ್ ಮುಂತಾದ ಕೆಲಸಗಳ ಮೂಲಕ ಸಾರಿಗೆ ಸಂಬಂಧಿತ ವಲಯಗಳಲ್ಲಿ ತಮ್ಮ ವಾಹನಗಳ ಮಾಲೀಕರು, ಉದ್ಯಮಿಗಳಾಗುವುದನ್ನು ಕಲಿಯುವ ಮೂಲಕ ಹೆಚ್ಚಿನ ಮಹಿಳೆಯರು ಈ ಕ್ಷೇತ್ರಕ್ಕೆ ಕಾಲಿರಿಸುವಂತಹ ವಾತಾವರಣವನ್ನು ನಿರ್ಮಿಸುವ ಕಡೆಗೆ ಗಮನಹರಿಸುವುದು. ಮಹಿಳೆಯರು ಹೆಚ್ಚು ಹೆಚ್ಚು ಚಲನಶೀಲರಾಗುವ ನಿಟ್ಟಿನಲ್ಲಿ ಅವರಿಗೆ ನೆರವಾಗುವುದು ಮತ್ತು ಸಮಾನವಾದ ಅವಕಾಶಗಳು ಅವರಿಗೆ ಸಿಗಬೇಕು ಎಂಬುದು ನಮ್ಮ ಮಹತ್ವಾಕಾಂಕ್ಷೆಯಾಗಿದೆ.
ಮುಂದಿನ 5 ವರ್ಷಗಳ ಅವಧಿಯಲ್ಲಿ ಕಡಿಮೆ ಆದಾಯ ಹೊಂದಿರುವ ಮಹಿಳೆಯರನ್ನು ಗುರುತಿಸಿ ಅವರಿಗೆ ತರಬೇತಿ ನೀಡುವ ಮತ್ತು ಉದ್ಯೋಗ ಒದಗಿಸುವ ಇಂತಹ ಉದ್ಯಮಗಳನ್ನು ಇನ್ನಷ್ಟು ಸ್ಥಾಪಿಸುವುದನ್ನು ಬೆಂಬಲಿಸುವ ಕೆಲಸ ಮಾಡುತ್ತೇವೆ. ಇದರಂತೆ 100 ಕ್ಕೂ ಹೆಚ್ಚು ನಗರಗಳಲ್ಲಿ ಮತ್ತು ಗ್ರಾಮಗಳಲ್ಲಿ ಗಣನೀಯವೆನ್ನುವ ಪ್ರಮಾಣದಲ್ಲಿ ಮಹಿಳಾ ಚಾಲಕರು ಸ್ವಂತ ವಾಹನ ಮತ್ತು ಇಲೆಕ್ನಿಕ್ ವಾಹನ ಓಡಿಸುವುದನ್ನು ನಾವು ಕಾಣುವವರಿದ್ದೇವೆ. ಭಾರತದಾದ್ಯಂತ ಇರುವ ಇತರೆ ಮಹಿಳೆಯರಿಗೆ ಇದರಿಂದ ಸುರಕ್ಷಿತ ಸಾರಿಗೆ ಮತ್ತು ಸಂಪರ್ಕವನ್ನು ಇದು ಒದಗಿಸಲಿದೆ.”
ಮಹಿಳೆಯರಿಗಾಗಿ ಉದ್ಯೋಗ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ಉತ್ತೇಜಿಸುವುದು ಶಟ್ ಫೌಂಡೇಶನ್ನ ಪ್ರಮುಖ ಗುರಿಯಾಗಿರುತ್ತದೆ. ಯುಕೆ ಸರ್ಕಾರ ಮತ್ತು ಶೆಲ್ ಫೌಂಡೇಶನ್ ಜತೆಯಾಗಿ “POWERED (ಪ್ರೊಮೋಶನ್ ಆಫ್ ವುಮೆನ್ ಇನ್ ಎನರ್ಜಿ ರಿಲೇಟೆಡ್ ಎಂಟರ್ಪ್ರೈಸಸ್ ಫಾರ್ ಡೆವಲಪ್ಮೆಂಟ್)ಗೆ 2017ರಲ್ಲಿ ಚಾಲನೆ ನೀಡಿದೆ.
ಇದು ಮಹಿಳಾ ಕೇಂದ್ರಿತ ಕಾರ್ಯಕ್ರಮವಾಗಿದ್ದು ಭಾರತದಲ್ಲಿ ಕ್ಲೀನ್ ಎನರ್ಜಿ ಮತ್ತು ಮೊಬಿಲಿಟಿ ವ್ಯಾಲ್ಯೂ ಚೇನ್ ಕ್ಷೇತ್ರದಲ್ಲಿ ಮಹಿಳಾ ಭಾಗವಹಿಸುವಿಕೆ ಹೆಚ್ಚಿಸುವ ಉದ್ದೇಶ ಹೊಂದಿದೆ. ಸಾರಿಗೆ ಮತ್ತು ಸರಕು ಸಾಗಣೆ ಕ್ಷೇತ್ರದಲ್ಲಿನ ಉದ್ಯೋಗ ಹೊಂದುವುದಕ್ಕೆ ಅದೇ ರೀತಿ ಸ್ವಂತ ಇಲೆಕ್ನಿಕ್ ವಾಹನಗಳನ್ನು ಹೊಂದಿ ಆದಾಯಗಳಿಸುವುದಕ್ಕೆ POWERED ಪ್ರೋಗ್ರಾಂ ಬೆಂಬಲ ನೀಡುತ್ತದೆ.
ಶಲ್ ಫೌಂಡೇಶನ್ ಪರಿಚಯ
ಶೆಲ್ ಫೌಂಡೇಶನ್ ಎಂಬುದು ಯುಕೆಯಲ್ಲಿ ನೋಂದಾಯಿತ (ನೋಂದಾಯಿತ ದತ್ತಿ ಸಂಖ್ಯೆ: 1080999) ದತ್ತಿ ಸಂಸ್ಥೆಯಾಗಿದೆ. ಕಡಿಮೆ ಆದಾಯ ಹೊಂದಿದ ಸಮುದಾಯದ ಜನರಿಗೆ ಬೆಂಬಲ ನೀಡುತ್ತ ಅವರ ಬಡತನ ಮತ್ತು ಸಂಕಷ್ಟ ನಿವಾರಣೆಗೆ ನೆರವಾವುದಕ್ಕಾಗಿ ಕೆಲಸ ಮಾಡುತ್ತಿದೆ. ವ್ಯಾಪಾರ ಸೃಷ್ಟಿಸಲು ಮತ್ತು ಹೆಚ್ಚಿಸಲು ನಾವು ನೆರವು ನೀಡುತ್ತಿದ್ದು, ವಿಶೇಷವಾಗಿ ಎನರ್ಜಿ ಮತ್ತು ಕೈಗೆಟಕುವ ದರದ ಸಾರಿಗೆ ಅಂದರೆ ಕಾರ್ಯಸಾಧುವಾದ ಯೋಜನೆಗಳಿಗೆ ನೆರವಾಗುತ್ತೇವೆ.
ಭಾರತದಲ್ಲಿ ಯುಕೆ ಸರ್ಕಾರದ ಚಟುವಟಿಕೆ
ಯುಕೆ-ಭಾರತ ಪಾಲುದಾರಿಕೆಯು ಉತ್ತಮ ಕೆಲಸಗಳಿಗೆ ನೆರವಾಗುತ್ತಿದ್ದು, ಹೂಡಿಕೆ ಮತ್ತು ವ್ಯಾಪಾರ ಹೆಚ್ಚಿಸಲು, ಎರಡೂ ರಾಷ್ಟ್ರಗಳಲ್ಲಿ ಉದ್ಯೋಗ ಮತ್ತು ಸಂಪತ್ತು ಹೆಚ್ಚಿಸಲು, ಎರಡೂ ರಾಷ್ಟ್ರಗಳಿಗೂ ಅನ್ವಯಿಸುವ ಜಾಗತಿಕ ವಿಚಾರಗಳು ವಿಶೇಷವಾಗಿ ಬಡತನ, ಹವಾಮಾನ ವೈಪರೀತ್ಯ: ಜ್ಞಾನ ಮತ್ತು ತಂತ್ರಜ್ಞಾನದ ಬಳಕೆಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ.
ಮೂವಿಂಗ್ ವುಮೆನ್ ಕುರಿತು (MOWO)
ಕ್ರಾಂತಿಕಾರಿ ಉಪಕ್ರಮವಾಗಿರುವ MOWO ನ ಮೂಲ ಹೈದರಾಬಾದ್, ಇದು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆ, ಮಹಿಳ ಸ್ವತಂತ್ರಳಾಗಿ ದ್ವಿಚಕ್ರ ಅಥವಾ ತ್ರಿಚಕ್ರ ವಾಹನಗಳ ತರಬೇತಿ ಪಡೆದು ಅವರ ಜೀವನಾಧಾರ ಮತ್ತು ಉದ್ಯೋಗಾವಕಾಶ ಕಂಡುಕೊಳ್ಳಬೇಕು ಎಂಬುದು ಈ ಉಪಕ್ರಮದ ಉದ್ದೇಶ. ಭಾರತದ ಹೈದರಾಬಾದ್ನಲ್ಲಿ ಇದ್ದುಕೊಂಡು MOWO ಇದುವರೆಗೆ 10000+ ಮಹಿಳೆಯರನ್ನು ತಲುಪಿದ್ದು, 1500+ ಮಹಿಳೆಯರಿಗೆ ದ್ವಿಚಕ್ರ ವಾಹನ ಚಾಲನೆ ತರಬೇತಿ ನೀಡಿ, ಚಾಲನಾ ಪರವಾನಗಿ ಒದಗಿಸಿದೆ. ಕೆಲವರಿಗೆ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಉದ್ಯೋಗವನ್ನೂ ಕೊಟ್ಟಿದೆ.
ಇವೆನ್ ಕಾರ್ಗೋ ಪರಿಚಯ
ಇವೆನ್ ಕಾರ್ಗೊ – ಇದು ಭಾರತದ ಮೊಟ್ಟ ಮೊದಲ ಮಹಿಳೆಯರೇ ನಡೆಸುವ ಲಾಜಿಸ್ಟಿಕ್ಸ್ ಡೆಲಿವರಿ ಕಂಪನಿಯಾಗಿದ್ದು, ಮಹಿಳೆಯರಿಗೆ ಮೊಬಿಲಿಟಿ ಮತ್ತು ಲಾಜಿಸ್ಟಿಕ್ಸ್ ನಲ್ಲಿ ತರಬೇತಿ ನೀಡಿ ಅವರನ್ನು ಡೆಲಿವರಿ ಏಜೆಂಟ್ಗಳಾಗಿ ಉದ್ಯೋಗಕ್ಕೂ ಸೇರಿಸುತ್ತಿದೆ. ಜೀವನಾಧಾರವನ್ನೂ ಖಾತರಿಪಡಿಸುತ್ತಿದ್ದು, ಸುಸ್ಥಿರ ಮತ್ತು ಸಮಾನ ಚಾಲನಾವಕಾಶ ಮತ್ತು ಗೌರವದಿಂದ ಬದುಕಲು ಬೇಕಾದ ಅವಕಾಶವನ್ನು ಒದಗಿಸುತ್ತಿದೆ.
ಇದು ಮಹಿಳಾ ಕೇಂದ್ರಿತ ತರಬೇತಿ, ಸಾಮಾಜಿಕ ಮತ್ತು ಹಣಕಾಸಿನ ನೆರವನ್ನೂ ಕೊಡುತ್ತಿದೆ. ಡೆಲಿವರಿ ಅಸೋಸಿಯೇಟ್ ಆಗಿ ಕೆಲಸ ಮಾಡುವುದಕ್ಕೆ ಇಲೆಕ್ಕಿಕ ಬೈಕ್ ಖರೀದಿಸುವುದಕ್ಕೂ ಅವರು ನೆರವು ನೀಡುತ್ತಿದ್ದು, ಪ್ರಮುಖ ಇ-ಕಾಮರ್ಸ್ ಕಂಪನಿಗಳು ಸೇರಿ ಅನೇಕ ಕಂಪನಿಗಳ ಜತೆಗೆ ಪಾಲುದಾರಿಕೆ ಹೊಂದಿದ್ದಾರೆ. 2016 ರಿಂದೀಚೆಗೆ ಇವನ್ ಲೈವಿಹುಡ್ಸ್ 500 ಮಹಿಳೆಯರಿಗೆ ತರಬೇತಿ ನೀಡಿದೆ ಮತ್ತು 250 ಮಹಿಳೆಯರನ್ನು ಡೆಲಿವರಿ ಅಸೋಸಿಯೇಟ್ಸ್ ಆಗಿ ಕೆಲಸಕ್ಕೆ ಸೇರಿಸಿದೆ. ಇವರು ಈಗ ಭಾರತದ ಏಳು ವಿಭಿನ್ನ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಯುರ್ವೇದ ಆರೋಗ್ಯಕರ ಜೀವನ ಶೈಲಿ
ಸುದ್ದಿದಿನ,ದಾವಣಗೆರೆ:ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ ಎಂದು ಘನವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ಅವರು ಶನಿವಾರ ತಪೋವನ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಸಂಸ್ಥೆಯು ಏರ್ಪಡಿಸಿದ್ದ ದ್ವಿತೀಯ ಘಟಿಕೋತ್ಸವ ಸಮಾರಂಭವನ್ನು ಉದ್ಪಾಟಿಸಿ ಮಾತನಾಡಿದರು.
ಈಗಿನ ದಿನಮಾನಗಳಲ್ಲಿ ಇಡೀ ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ, ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.
ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ. ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ಆರೋಗ್ಯ ಸೇವೆಗಳು ಇಂದಿನ ವೈದ್ಯಕೀಯ ಕ್ಷೇತ್ರದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸುತ್ತಿವೆ. ಇಂತಹ ತಾಂತ್ರಿಕ ಕ್ರಾಂತಿಯ ಯುಗದಲ್ಲಿ ಪದವಿ ಪಡೆದು ಹೊರಬರುತ್ತಿರುವ ನೂತನ ವೈದ್ಯರು ಕೇವಲ ಸಾಂಪ್ರದಾಯಿಕ ವೈದ್ಯಕೀಯ ಜ್ಞಾನಕ್ಕೆ ಸೀಮಿತವಾಗದೆ, ಆಧುನಿಕ ವಿಜ್ಞಾನದ ನೂತನ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಉಭಯ ಕ್ಷೇತ್ರಗಳ ನಡುವೆ ಬಲವಾದ ಸೇತುವೆಯಾಗಿ ಕೆಲಸ ಮಾಡಬೇಕಾದ ತುರ್ತು ಅಗತ್ಯವಿದೆ ಎಂದರು.
ಕೃತಕ ಬುದ್ಧಿಮತ್ತೆಯು ರೋಗನಿರ್ಣಯವನ್ನು ಹೆಚ್ಚು ನಿಖರ ಹಾಗೂ ವೇಗವಾಗಿಸಲು ನೆರವಾದರೆ, ಡಿಜಿಟಲ್ ಆರೋಗ್ಯ ಸೇವೆಗಳು ದೂರದ ಊರುಗಳಿಗೂ ಚಿಕಿತ್ಸೆಯನ್ನು ತಲುಪಿಸಲು ಸಹಕಾರಿಯಾಗಿವೆ. ಆದ್ದರಿಂದ, ಹೊಸ ತಲೆಮಾರಿನ ವೈದ್ಯರು ಕೇವಲ ದಿನನಿತ್ಯದ ಕ್ಲಿನಿಕ್ ಅಥವಾ ಆಸ್ಪತ್ರೆಯ ಚಿಕಿತ್ಸೆಗೆ ಸೀಮಿತವಾಗದೆ, ತಂತ್ರಜ್ಞಾನದ ದತ್ತಾಂಶಗಳನ್ನು ಬಳಸಿಕೊಂಡು ಹೊಸ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಉತ್ತಮ ಸಂಶೋಧಕರಾಗಬೇಕು. ಇದರೊಂದಿಗೆ, ಸಮಾಜದಲ್ಲಿ ತಂತ್ರಜ್ಞಾನ ಮತ್ತು ಆರೋಗ್ಯದ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರಾಗಿಸಿ, ಮಾನವೀಯ ಕಾಳಜಿಯೊಂದಿಗೆ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ನೈಜ ಮಾರ್ಗದರ್ಶಕರಾಗಿ ಹೊರಹೊಮ್ಮಬೇಕಿದೆ ಎಂದು ತಿಳಿಸಿದರು.
ವೈದ್ಯಕೀಯ ಸೇವೆಯು ಅತ್ಯಂತ ಪವಿತ್ರವಾದ ಮಾನವೀಯ ಸೇವೆಯಾಗಿದೆ. ರೋಗಿಗಳಿಗೆ ಔಷಧಿಗಿಂತ ಮುಂಚಿತವಾಗಿ ವೈದ್ಯರ ಪ್ರೀತಿಯ ನುಡಿಗಳು ಹಾಗೂ ಸಕಾರಾತ್ಮಕ ನಡವಳಿಕೆಯ ಅಗತ್ಯವಿರುತ್ತದೆ. ಆದ್ದರಿಂದ ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು. ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯವು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಗುಜರಾತ್ನ ಜಾಮ್ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಗ್ಲೋಬಲ್ ಟ್ರೆಡಿಷನಲ್ ಮೆಡಿಸಿನ್ ಸೆಂಟರ್’ ಸ್ಥಾಪಿಸುತ್ತಿದೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣಸಾ ಭಾಂಡಗೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಡೀನ್ ಡಾ: ಶ್ರೀನಿವಾಸ್ ಬನ್ನಿಗೊಳ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಎಸ್.ವಿ.ಹಲಸೆ, ತಪೋವನ ಸಂಸ್ಥೆಯ ಅಧ್ಯಕ್ಷ ಡಾ. ಶಶಿಕುಮಾರ್ ವಿ.ಎಂ, ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಅಶ್ವಿನಿ ಕೆ.ಆರ್., ಡಾ.ಸುಮನ ಭಟ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಸತಿ ಯೋಜನೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ.
ಈ ಯೋಜನೆಯಡಿ ಸೌಲಭ್ಯ ಒದಗಿಸಲು ನಿಗಧಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚನ್ನಗಿರಿ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


