ಕ್ರೀಡೆ
ಫಿಫಾ ವಿಶ್ವಕಪ್ ಫುಟ್ಬಾಲ್ : ಇರಾನ್ ತಂಡ ಮಣಿಸಿದ ಸ್ಪೇನ್
ಸುದ್ದಿದಿನ,ಮಾಸ್ಕೋ : ಇರಾನ್ ಮತ್ತು ಸ್ಪೇನ್ ತಂಡಗಳು ಬುಧವಾರ ಫಿಫಾ ವಿಶ್ವಕಪ್ ಪಂದ್ಯಕ್ಕಾಗಿ ಬಿ ಗ್ರೂಪ್ ನಿಂದ ಕಣಕ್ಕಿಳಿದು ಸೆಣಸಾಡಿದವು. ಈ ಸೆಣಸಾಟದಲ್ಲಿ ಸ್ಪೇನ್ 1-0ಯ ಗೆಲುವನ್ನು ಸಾಧಿಸಿದೆ. 54 ನೇ ನಿಮಿಷದಲ್ಲಿ ಡಿಯಾಗೋ ಕೋಸ್ಟ ಅವರು ಸಿಡಿಸಿದ ಗೋಲ್ ಸ್ಪೇನ್ ಗೆ ಗೆಲುವು ತಂದು ಕೊಟ್ಟಿದೆ.
#FIFAWorldCup2018 Diego Costa scores in the 54th minute as Spain beat Iran 1-0 in a Group B match. https://t.co/NBQrjPL5xT pic.twitter.com/pTKvmXMKN8
— The Quint (@TheQuint) June 20, 2018
ಇರಾನ್ – ಸ್ಪೇನ್ ನ ನಡುವಿನ ಕಾದಾಟದಲ್ಲಿ ಪಂದ್ಯದ ಮೊದಲಾರ್ಧ ಕೊನೆಯವರೆಗೂ ಗೋಲ್ ಧಾಖಲಾಗದೆ ಎರಡೂ ತಂಡಗಳು ಸಮಬಲ ಸಾಧಿಸಿದವು. ಗೋಲ್ ಗಾಗಿ ಎರಡೂ ತಂಡಗಳು ನಡೆಸಿದ ಸೆಣಸಾರ ರೋಚಕವಾಗಿತ್ತು.
Spain beat Iran 1-0 to close in on World Cup last 16 pic.twitter.com/tXZOzIfxDm
— The Gulf Today (@thegulftoday) June 20, 2018
Spain beat Iran 1-0 in the World Cup Group B match#ESPIRA pic.twitter.com/BIuUsEh1Ji
— The Gulf Today (@thegulftoday) June 20, 2018
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಕ್ರೀಡೆ
ಕ್ಲಸ್ಟರ್ ಮಟ್ಟದ ಕ್ರೀಡಾಕೂಟ : ಕಂದಗಲ್ಲು ಸರ್ಕಾರಿ ಶಾಲೆಯ ಬಾಲಕಿಯರಿಗೆ ಸಮಗ್ರ ಪ್ರಶಸ್ತಿ

ಸುದ್ದಿದಿನ, ದಾವಣಗೆರೆ : ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಕಂದಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು ಸಮಗ್ರ ಪ್ರಶಸ್ತಿ ಪಡೆದಿರುತ್ತಾರೆ.
ಬಾಲಕಿಯರ ವಾಲಿಬಾಲ್ ವಿಭಾಗದಲ್ಲಿ ಕಲ್ಪನಾ ಮತ್ತು ತಂಡ ಪ್ರಥಮ, ಬಾಲಕಿಯರ ಥ್ರೋಬಾಲ್ ವಿಭಾಗದಲ್ಲಿ ಕೋಮಲ ಮತ್ತು ತಂಡ ಪ್ರಥಮ, ಬಾಲಕಿಯರ ವಿಭಾಗದ 100 ಮೀಟರ್, 200 ಮೀಟರ್, ಮತ್ತು 400 ಮೀಟರ್ ವಿಭಾಗದಲ್ಲಿ ಕೋಮಲ ಪ್ರಥಮ, ರಿಲೇ 4* 100 ವಿಭಾಗದಲ್ಲಿ ನಿಖಿತಾ ಮತ್ತು ತಂಡ ತೃತೀಯ, ಗುಂಡು ಎಸೆತ ವಿಭಾಗದಲ್ಲಿ ಕಲ್ಪನಾ ತೃತೀಯ, ತಟ್ಟೆ ಎಸೆತ ವಿಭಾಗದಲ್ಲಿ ಕೋಮಲ ಪ್ರಥಮ. ಬಾಲಕರ 200 ಮೀಟರ್ ಓಟದ ವಿಭಾಗದಲ್ಲಿ ಮಾರುತಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಸರ್ಕಾರಿ ಶಾಲಾ ಮಕ್ಕಳ ಈ ಸಾಧನೆಗೆ ಶಾಲಾ ಶಿಕ್ಷಕ ಸಿಬ್ಬಂದಿ, ಎಸ್.ಡಿ.ಎಂ.ಸಿ ಸಿಬ್ಬಂದಿ, ಕಂದಗಲ್ಲು ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಪೋಷಕರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ವಿಶ್ವಕಪ್ ಶೂಟಿಂಗ್ ಪಂದ್ಯಾವಳಿ; ಭಾರತದ ರೈತಮ್ ಸಂಗ್ವಾನ್ಗೆ ಕಂಚಿನ ಪದಕ

ಸುದ್ದಿದಿನ ಡೆಸ್ಕ್ : ಅಜರ್ ಬೈಜಾನ್ನ ಬಾಕುವಿನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ ಪಂದ್ಯಾವಳಿಯ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ರೈತಮ್ ಸಂಗ್ವಾನ್ ಕಂಚಿನ ಪದಕ ಗೆದ್ದಿದ್ದಾರೆ.
ಅಂತಿಮ ಸುತ್ತಿನಲ್ಲಿ ಅವರು,219.1 ಅಂಕ ಗಳಿಸುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು, ಕಂಚಿನ ಪದಕ ತಮ್ಮದಾಗಿಸಿಕೊಂಡರು. ವಿಶ್ವಕಪ್ ಶೂಟಿಂಗ್ ಪಂದ್ಯಾವಳಿಯಲ್ಲಿ ಇದು ಸಂಗ್ವಾನ್ ಅವರ ಪ್ರಥಮ ವೈಯಕ್ತಿಕ ಪದಕವಾಗಿದೆ.
#RhythmSangwan wins bronze medal in women’s 10 metre air pistol event at #ISSF World Cup 2023 for rifle, pistol shooters in Baku, Azerbaijan. She scores 219.1 in final to finish third behind Anna 2016 Rio Olympic champion Anna Korakaki of Greece and 2004 Athens Olympics gold… pic.twitter.com/sey5MaBXWD
— All India Radio News (@airnewsalerts) May 11, 2023
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್: ಭಾರತದ ಚಿರಾಗ್ ಮತ್ತು ಸಾತ್ವಿಕ್ ಜೋಡಿಗೆ ಸ್ವರ್ಣ ಪದಕ

ಸುದ್ದಿದಿನ, ದುಬೈ : ದುಬೈನಲ್ಲಿ ನಡೆದ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ 8ನೇ ಶ್ರೇಯಾಂಕಿತ ಮಲೇಷ್ಯಾದ ಟಿಯೊ ಇ ಯಿ ಮತ್ತು ಒಂಗ್ ಯೆವ್ ಸಿನ್ ವಿರುದ್ಧ 16-21,21-17ಮತ್ತು 21-19 ಗೇಮ್ ಗಳ ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿದೆ.1965ರಲ್ಲಿ ದಿನೇಶ್ ಖನ್ನಾ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದ ನಂತರ ಭಾರತಕ್ಕೆ ಒಲಿದ ಮೊದಲ ಸ್ವರ್ಣ ಪದಕ ಇದಾಗಿದೆ.
ಭಾರತ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿರುವ ಚಿರಾಗ್ ಮತ್ತು ಸಾತ್ವಿಕ್ ಜೋಡಿಗೆ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವ ಹಾಗೂ ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಪುರುಷರ ಡಬಲ್ಸ್ ಜೋಡಿಯಾಗಿರುವ ಸಾತ್ವಿಕ್ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿಗೆ ಅಭಿನಂದನೆಗಳು ಎಂದಿದ್ದಾರೆ.
Congratulations to Satwiksairaj Rankireddy & Chirag Shetty on winning the gold medal at the Badminton Asia Championships 2023.
🏸 They become the first Indian 🇮🇳 duo to win a 🥇 in the Men's Doubles event at the tournament pic.twitter.com/F7QGQgpx5p
— Doordarshan Sports (@ddsportschannel) April 30, 2023
Prime Minister Narendra Modi congratulates Satwik SaiRaj Rankireddy and Chirag Shetty for becoming the first Indian Men's Doubles pair to win the Badminton Asia Championships Title. pic.twitter.com/2C6L2DG725
— ANI (@ANI) April 30, 2023
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ3 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ1 day ago
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ