ಅಂಕಣ
FOR STUDENTS | ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಹೀಗಿರಲಿ ನಿಮ್ಮ ತಯಾರಿ..!

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು:
1. ಪರೀಕ್ಷೆಯನ್ನು ಅರ್ಥಮಾಡಿಕೊಳ್ಳಿ: ಪರೀಕ್ಷೆಯ ಪಠ್ಯಕ್ರಮ, ಪ್ರಶ್ನೆ ಪತ್ರಿಕೆಯ ಮಾದರಿ, ಅಂಕಗಳ ವಿಂಗಡಣೆ ಮತ್ತು ಸಮಯದ ಮಿತಿಯನ್ನು ಅಧ್ಯಯನ ಮಾಡಿ. ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಪರಿಶೀಲಿಸಿ, ಯಾವ ವಿಷಯಗಳು ಪ್ರಮುಖವಾಗಿವೆ ಎಂದು ತಿಳಿಯಿರಿ.
2. ಅಧ್ಯಯನ ಯೋಜನೆ ರೂಪಿಸಿ:ಪಠ್ಯಕ್ರಮವನ್ನು ಚಿಕ್ಕ ಚಿಕ್ಕ ಭಾಗಗಳಾಗಿ ವಿಂಗಡಿಸಿ, ದಿನನಿತ್ಯದ ಗುರಿಗಳನ್ನು ನಿಗದಿಪಡಿಸಿ.ಕಠಿಣ ವಿಷಯಗಳಿಗೆ ಹೆಚ್ಚು ಸಮಯ ಮೀಸಲಿಡಿ ಮತ್ತು ದೈನಂದಿನ/ಸಾಪ್ತಾಹಿಕ ಗುರಿಗಳನ್ನು ರಚಿಸಿ.
3. ಗುಣಮಟ್ಟದ ಅಧ್ಯಯನ ಸಾಮಗ್ರಿ:ಪ್ರಮಾಣಿತ ಪುಸ್ತಕಗಳು, ಆನ್ಲೈನ್ ಸಂಪನ್ಮೂಲಗಳು, ಮತ್ತು ಕೋಚಿಂಗ್ ಸಾಮಗ್ರಿಗಳನ್ನು ಬಳಸಿ.NCERT ಪುಸ್ತಕಗಳು (UPSC, SSC ಗೆ) ಅಥವಾ ಇತರ ಪ್ರಮಾಣಿತ ಉಲ್ಲೇಖ ಪುಸ್ತಕಗಳನ್ನು ಆಯ್ಕೆ ಮಾಡಿ.
4.ಸಮಯ ವ್ಯವಸ್ಥಾಪನೆ:ದಿನಕ್ಕೆ 5-6 ಗಂಟೆ ಗುಣಮಟ್ಟದ ಅಧ್ಯಯನಕ್ಕೆ ಮೀಸಲಿಡಿ, ಆದರೆ ವಿರಾಮಗಳನ್ನು ಒಳಗೊಂಡಿರಿ.ಪರೀಕ್ಷೆಯ ಸಮಯದಂತೆ ಅಭ್ಯಾಸ ಮಾಡಿ, ಉದಾಹರಣೆಗೆ, ಮಾಕ್ ಟೆಸ್ಟ್ಗಳನ್ನು ನಿಗದಿತ ಸಮಯದಲ್ಲಿ ಬರೆಯಿರಿ.
5.ಮಾಕ್ ಟೆಸ್ಟ್ ಮತ್ತು ಹಿಂದಿನ ಪ್ರಶ್ನೆಗಳು: ನಿಯಮಿತವಾಗಿ ಮಾಕ್ ಟೆಸ್ಟ್ಗಳನ್ನು ತೆಗೆದುಕೊಳ್ಳಿ, ತಪ್ಪುಗಳನ್ನು ವಿಶ್ಲೇಷಿಸಿ.ಹಿಂದಿನ ವರ್ಷಗಳ ಪ್ರಶ್ನೆಗಳನ್ನು ಅಭ್ಯಾಸ ಮಾಡಿ, ಪರೀಕ್ಷೆಯ ಮಾದರಿಯನ್ನು ಅರ್ಥಮಾಡಿಕೊಳ್ಳಿ.
6.ಪುನರಾವರ್ತನೆ ಮತ್ತು ಟಿಪ್ಪಣಿಗಳು: ಪ್ರಮುಖ ವಿಷಯಗಳ ಸಂಕ್ಷಿಪ್ತ ಟಿಪ್ಪಣಿಗಳನ್ನು ತಯಾರಿಸಿ, ಇದು ಕೊನೆಯ ಕ್ಷಣದ ಪುನರಾವರ್ತನೆಗೆ ಸಹಾಯಕವಾಗುತ್ತದೆ. ಸೂತ್ರಗಳು, ದಿನಾಂಕಗಳು, ಮತ್ತು ಪ್ರಮುಖ ಸಂಗತಿಗಳನ್ನು ನಿಯಮಿತವಾಗಿ ಓದಿರಿ.
7.ವಿಷಯಾಧಾರಿತ ಕೌಶಲ: ಗಣಿತ/ತಾರ್ಕಿಕತೆ: ದಿನನಿತ್ಯ ಗಣಿತದ ಸಮಸ್ಯೆಗಳನ್ನು ಬಿಡಿಸಿ, ಕಾಲಗಣನೆಯನ್ನು ಅಭ್ಯಾಸ ಮಾಡಿ. ಭಾಷೆ/ಇಂಗ್ಲಿಷ್: ಓದುವಿಕೆ, ವ್ಯಾಕರಣ, ಮತ್ತು ಶಬ್ದಕೋಶವನ್ನು ಸುಧಾರಿಸಿ.ಸಾಮಾನ್ಯ ಜ್ಞಾನ: ದಿನಪತ್ರಿಕೆಗಳು, ಆನ್ಲೈನ್ ಸಂಪನ್ಮೂಲಗಳಿಂದ ಕರೆಂಟ್ ಅಫೇರ್ಸ್ ಓದಿರಿ.
8.ಆರೋಗ್ಯ ಮತ್ತು ಮಾನಸಿಕ ಶಕ್ತಿ:ಆರೋಗ್ಯಕರ ಆಹಾರ, ವ್ಯಾಯಾಮ, ಮತ್ತು 6-8 ಗಂಟೆ ನಿದ್ದೆಯನ್ನು ಕಾಪಾಡಿಕೊಳ್ಳಿ. ಧ್ಯಾನ ಅಥವಾ ಯೋಗದಿಂದ ಒತ್ತಡವನ್ನು ನಿಯಂತ್ರಿಸಿ.
9.ಸಕಾರಾತ್ಮಕ ಮನೋಭಾವ:ಸ್ಥಿರವಾದ ಕೆಲಸದ ಶೈಲಿಯನ್ನು ಇರಿಸಿಕೊಳ್ಳಿ, ಸಣ್ಣ ಯಶಸ್ಸುಗಳನ್ನು ಆಚರಿಸಿ. ವಿಫಲತೆಯಿಂದ ಕಲಿಯಿರಿ ಮತ್ತು ಧೈರ್ಯವಾಗಿರಿ.
10.ತಂತ್ರಜ್ಞಾನದ ಬಳಕೆ: ಆನ್ಲೈನ್ ಕೋರ್ಸ್ಗಳು, ಯೂಟ್ಯೂಬ್ ಚಾನೆಲ್ಗಳು, ಮತ್ತು ಆಪ್ಗಳನ್ನು (Unacademy, BYJU’s, ಇತ್ಯಾದಿ) ಬಳಸಿ. ಆನ್ಲೈನ್ ಗುಂಪುಗಳಲ್ಲಿ ಚರ್ಚೆಗಳಿಗೆ ಸೇರಿ, ಜ್ಞಾನವನ್ನು ಹಂಚಿಕೊಳ್ಳಿ.
ಹೆಚ್ಚುವರಿ ಸಲಹೆ:ಒಂದೇ ಸಮಯದಲ್ಲಿ ಒಂದು ವಿಷಯಕ್ಕೆ ಗಮನ ಕೊಡಿ, ಗೊಂದಲವನ್ನು ತಪ್ಪಿಸಿ.ಗುಂಪು ಅಧ್ಯಯನ ಅಥವಾ ಕೋಚಿಂಗ್ಗೆ ಸೇರಿಕೊಂಡರೆ, ಚರ್ಚೆಗಳಿಂದ ಕಲಿಯಿರಿ. ನಿಮ್ಮ ದೌರ್ಬಲ್ಯಗಳನ್ನು ಗುರುತಿಸಿ, ಅವುಗಳನ್ನು ಸುಧಾರಿಸಲು ಕೆಲಸ ಮಾಡಿ.
ನಿರಂತರ ಅಭ್ಯಾಸ, ಶಿಸ್ತು, ಮತ್ತು ಸಕಾರಾತ್ಮಕ ಮನೋಭಾವದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬಹುದು. ಶುಭವಾಗಲಿ..!
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಚಿತ್ರ ವಿಮರ್ಶೆ | ಸೂಲಗಿತ್ತಿ ತಾಯವ್ವ

~ಡಾ. ಪುಷ್ಪಲತ ಸಿ ಭದ್ರಾವತಿ
ಚಿತ್ರ – ತಾಯವ್ವ ,ನಿರ್ಮಾಣ – ಅಮರ ಫಿಲಂಸ್, ನಿರ್ದೇಶನ- ಸಾತ್ವಿಕ ಪವನ ಕುಮಾರ್,ತಾರಾಗಣ – ಗೀತಪ್ರಿಯ. ಬೇಬಿ ಯಶಿಕಾ, ಮತ್ತಿತರರು
ನಾವು ಎಷ್ಟೇ ಆಧುನಿಕತೆ, ಸಮಾನತೆ, ಸ್ವಾತಂತ್ರ್ಯ ಎಂದು ಹೆಣ್ಣು ಮಾತನಾಡಿದರೂ, ಈ ಸಮಾಜದ ಸಂಕೋಲೆಯಲ್ಲಿ ಇವತ್ತಿಗೂ ನಾವು ಕಂಡು ಕಾಣದಂತೆ ಬಂಧಿಯಾಗಿದ್ದೇವೆ. ಈ ಪುರುಷ ನಿರ್ಮಿತ ಸಮಾಜದಲ್ಲಿ ಹೆಣ್ಣನ್ನು ತನ್ನ ಸಂಕೂಲೆಯಲ್ಲಿಯೇ ಬಂಧಿಸಿಟ್ಟಿರುವನು. ಅದೊಂದು ಸ್ವೇಚ್ಛಾಚಾರದ, ಸಮಾನತೆಯ, ಹೆಸರಿನ ಮುಖವಾಡ ತೊಟ್ಟಿದೆ ಅಷ್ಟೇ. ಈ ಮುಖವಾಡಗಳ ನಡುವಿನ ಪುರುಷ ನಿಯಂತ್ರಿತ ಬದುಕಿನಲ್ಲಿ ಹೋರಾಟವೆಂಬುದು ಹೆಣ್ಣಿಗೆ ನಿತ್ಯವಾಗಿದೆ.
ಸ್ತ್ರೀ ಅವಳು ಪ್ರಕೃತಿ, ಪ್ರಕೃತಿ ಇಲ್ಲವಾದರೆ ಇನ್ನೂ ನಾವೆಲ್ಲ ತೃಣಮೂಲ. ಇಂತಹ ಸತ್ಯ ಅರಿವಿದ್ದರೂ ನಾವು ಪದೇ ಪದೇ ಈ ಪ್ರಕೃತಿಯನ್ನು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಹಾಗೆಯೇ ಪ್ರಕೃತಿಯ ಇನ್ನೊಂದು ರೂಪವಾದ ‘ಹೆಣ್ಣನ್ನು’ ನಾವು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಇದರ ಪರಿಣಾಮವಾಗಿಯೇ ಹೆಣ್ಣಿನ ಸರಾಸರಿ ಗಂಡಿಗಿಂತ ಗಣನೀಯವಾಗಿ ಕಡಿಮೆಯಾಗುತ್ತಿರುವುದು. ” ಹೆಣ್ಣು ಭ್ರೂಣಹತ್ಯೆ” ಎಂಬುದು ಸಮಾಜದ ಅದು ಹಾಗೂ ವಿಶ್ವಕ್ಕೂ ಮಾರಕ. ಇಂತಹ ಒಂದು ವಿಷಯ ವಸ್ತುವನ್ನು ಕೇಂದ್ರಿಕರಿಸಿಕೊಂಡು ಸಮಾಜಕ್ಕೆ ಜಾಗೃತಿ ಮೂಡಿಸುವ ಸಲುವಾಗಿ, ಎಚ್ಚರಿಕೆಯ ಕರೆಘಂಟೆಯೆಂಬಂತೆ “ತಾಯವ್ವ” ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆಗೊಂಡಿದೆ.
ಕಳೆದ ವರ್ಷಗಳಲ್ಲಿಯೇ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಹಿಂದೆ ಸುಮಾರು 500ಕ್ಕೂ ಹೆಚ್ಚಿನ ಭ್ರೂಣಗಳು ಸಿಕ್ಕವು. ವಿಚಾರ ಪ್ರಚಾರವೂ ಆಯಿತು. ಆದರೆ ಕೇವಲ ಸುದ್ದಿಯಾಗಿ ಕಣ್ಮರೆಯಾಗುತ್ತವೆ. ಇಂದಿನ ಸಮಾಜಕ್ಕೆ ಇಂತಹ ಸೂಕ್ಷ್ಮ ವಿಷಯಗಳನ್ನು ಮುನ್ನೆಲೆಗೆ ತಂದು ಯುವಕರಿಗೆ ಹಾಗೂ ಸಮಾಜಕ್ಕೆ ಜಾಗೃತಿಮೂಡಿಸಬೇಕಾಗಿದೆ. ಇಂತಹ ಕಾರ್ಯದಲ್ಲಿ
” ತಾಯವ್ವ” ಸಿನಿಮಾ ಗೆದ್ದಿದೆ ಎಂದರೆ ಅತಿಶಯೋಕ್ತಿಯೆನಲ್ಲಾ. ಈ ಗೆಲುವು ಚಿತ್ರದ ನಾಯಕಿ ” ಗೀತ ಪ್ರಿಯಾ” ಅವರ ಶ್ರಮ, ಹಾಗೂ ಅವರ ಪೂರ್ಣ ಪ್ರಮಾಣದ ಪಾತ್ರದ ತಲ್ಲೀನತೆಯು ಸಿನಿಮಾದುದ್ದಕ್ಕೂ ಕಾಣುತ್ತದೆ.
ಮೂಲತಃ ” ಗೀತ ಪ್ರಿಯಾ” ಅವರು ಕಳೆದ 35 ವರ್ಷಗಳ ಅಧಿಕವಾಗಿ ತಮ್ಮನ್ನು ತಾವು ಶೈಕ್ಷಣಿಕ ರಂಗದಲ್ಲಿ ತೊಡಗಿಸಿಕೊಂಡು ವಿಧ್ಯಾಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ್ದಾರೆ. ಇವರ ತಾಯಿ ನೆರಳಲ್ಲಿ ಹುಟ್ಟಿದ ಮಗುವೇ ” ಕೃಪಾನಿಧಿ ಗ್ರೂಪ್ ಸಂಸ್ಥೆ”. ಸದಾ ಮಿಡಿವ ತಾಯಿ ಹೃದಯ ಇವರದ್ದಾಗಿದ್ದರಿಂದಲೇ ತಮ್ಮ ಪ್ರಥಮ ಚಿತ್ರದಲ್ಲಿಯೇ ಗಂಭೀರ ವಿಷಯ ವಸ್ತುವಿನ ಆಯ್ಕೆ, ಗಂಭೀರವಾದ ಅಭಿನಯ, ಸಮಾಜಮುಖಿ ಕಾಳಜಿಯಿರುವುದರಿಂದಲೇ ಇದರೆಲ್ಲರ ಫಲಿತಗಳೆಂಬಂತೆೇ “ತಾಯವ್ವ” ರೂಪುಗೊಂಡಿದೆ.
ಸಿನಿಮಾ ಕಲಾಪ್ರಿಯರಿಗೆ ಒಂದೊಳ್ಳೆ ಸುಗ್ಗಿ, ಕುಟುಂಬದ ಸಮೇತ ಸಿನಿಮಾ ವೀಕ್ಷಿಸಬಹುದು. ಗೀತ ಪ್ರಿಯಾ ಅವರು ಈ ಸಿನಿಮಾದಲ್ಲಿ ಅಭಿನಯಿಸಿ, ಹಾಗೂ ಸಂಗೀತಕ್ಕೆ ತಮ್ಮ ಧ್ವನಿಯನ್ನು ನೀಡಿರುವುದು ಇನ್ನೂ ವಿಶೇಷ. ಬೇಬಿ ಯಶೀಕಾ ಮುಂದಿನ ಭವಿಷ್ಯ ಇನ್ನಷ್ಟು ಸಿನಿಮಾರಂಗದಲ್ಲಿ ಉಜ್ವಲವಾಗಿರಲಿ. ನಿರ್ದೇಶಕರ ಪ್ರಯತ್ನ. ಚಿತ್ರಕಥೆಯ ಹಿಡಿತ ಹಾಗೂ ಎಲ್ಲೂ ಸಡಿಲವಿರದೇ ಸಾಗಿರುವುದು ನಮ್ಮ ಕನ್ನಡ ಚಿತ್ರರಂಗಕ್ಕೆ ಪ್ರಸ್ತುತ ಕೊಡುಗೆಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಜಗತ್ತಿನ ಅಪಾಯಕಾರಿ ಜೀವಿ..!?

~ ಹೆಚ್.ಕೆ.ಕೃಷ್ಣ ಅರಕೆರೆ
ಭೂಮಿಮೇಲಿನ ಕೋಟ್ಯಾಂತರ ಜೀವರಾಶಿಗಳಲ್ಲಿ ಮನುಷ್ಯನು ಸಹ ಒಬ್ಬ ಜೀವಿ, ಮನುಷ್ಯನಂತೆಯೇ ಇಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗಳಿಗೂ ಭೂಮಿಯಮೇಲೆ ಬದುಕುವ ಸಮಾನ ಹಕ್ಕಿದೆ.
ಮನುಷ್ಯ ಸೃಷ್ಠಿಯ ಎಲ್ಲಾ ಜೀವಿಗಳಿಗಿಂತ ಅಂತ್ಯಂತ ಬುದ್ಧಿವಂತ , ಮನುಷ್ಯನಿಗೆ ಭೂಮಿಮೇಲಿನ ಯಾವ ಜೀವಿಗಳಿಗೂ ಇಲ್ಲದ ಬುದ್ಧಿವಂತಿಕೆ, ಮತ್ತು ಆಲೋಚನ ಶಕ್ತಿಯನ್ನ ಪ್ರಕೃತಿ ನೀಡಿದೆ , ಇದನ್ನ ಬಳಸಿಕೊಂಡ ಮನುಷ್ಯ ತನ್ನ ಜ್ಞಾನ ವಿಕಾಶಗೊಂಡಂತೆ ಪ್ರಕೃತಿಯ ವಿಷ್ಮಯಗಳನ್ನ ಬೇಧಿಸಲು ಹವಣಿಸುತ್ತಿದ್ದಾನೆ.
ಅವನ ಸಾಧನೆ ಕೃತಕ ಮಾನವನ ಸೃಷ್ಠಿಯಿಂದ ಹಿಡಿದು ಆಕಾಶಕ್ಕೆ ಚಿಮ್ಮಿ, ಸಮುದ್ರದ ಆಳಕ್ಕೆ ಇಳಿದು ಸಂಶೋಧನೆ ನಡೆಸುವುದರ ಜೊತೆಗೆ ಪ್ರಪಂಚದ ಎಲ್ಲಿ ಜೀವರಾಶಿಗಳನ್ನ ಪ್ರಕೃತಿ ಸಂಪತ್ತನ್ನ ಕ್ಷಣಮಾತ್ರದಲ್ಲಿ ನಾಶಮಾಡಬಲ್ಲ ಅಸ್ತ್ರಗಳಂತಹ ಅಪಾಯಕಾರಿ ಆಯುದಗಳನ್ನ ತಯಯಾರಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾನೆ.
ವಿಕಾಶಗೊಂಡ ಮಾನವ ಸೃಷ್ಠಿಯ ಸಕಲ ಜೀವರಾಶಿಗಳಲ್ಲೇ ಅತ್ಯಂತ ಶ್ರೇಷ್ಟ ಬದುಕನ್ನ ನಡೆಸಲು ಅವಕಾಶಮಾಡಿಕೊಟ್ಟಿರುವ ಪ್ರಕೃತಿಯನ್ನ ನಾಶಮಾಡುವ ಸಂಶೋಧನೆ ಅದು ಮನುಷ್ಯನ ವಿಕೃತಿ ಮತ್ತು ಅವನ ಅತ್ಯಂತ ಅಪಾಯಕಾರಿ ಕೆಟ್ಟತನಕ್ಕೆ ಸಾಕ್ಷಿಯಾಗಿದೆ . ಬದುಕುವುದಕ್ಕೆ ಮದ್ದುಗುಂಡುಗಳು ಬೇಕೆ..?
ಕೇವಲ ಕೆಲವು ಸಾವಿರ ವರ್ಷಗಳಲ್ಲಿಯೇ ಇಷ್ಟೆಲ್ಲ ಸಾಧಿಸಿರುವ ಮನುಷ್ಯ ಪ್ರಕೃತಿಯ ಮುಂದೆ ಅವನು ಕುಬ್ಜ ಎನ್ನುವ ಸತ್ಯವನ್ನ ಮರೆತಿದ್ದಾನೆ,ಅಥವ ಅದನ್ನ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಅವನಿಲ್ಲ , ಅವನ ಮುಂದಿರುವ ಗುರಿ ಒಂದೇ, ಇಡೀ ಜಗತ್ತೆ ನಾಶವಾದರು ಸರಿ, ಅವನು ಗೆಲ್ಲಬೇಕು ಮುಂದೊಂದು ದಿನ ಅವನೇ ಉಳಿಯದಿದ್ದರು ಸರಿ ಅವನು ಗೆಲ್ಲಲೇ ಬೇಕು. ಹಾಗಾದರೆ ಪ್ರಪಂಚವನ್ನೆ ಗೆಲ್ಲಲು ಹೊರಟವನಿಗೆ ಒಂದು ನೊಣದಂತ ಸಣ್ಣ ಕೀಟಜೀವಿಯನ್ನ ಗೆಲ್ಲಲು ಸಾದ್ಯವೇ..?
ಒಂದು ದಿನ ಜಗತ್ತಿನ್ನೆ ಗೆಲ್ಲುವೆನೆಂದು ವಿಶ್ವನಾಶದ ಆಯುಧಗಳನ್ನ ಉಡಾವಣೆಗೆ ಸಿದ್ದಮಾಡಿಕೊಂಡು ಮನುಷ್ಯನೊಬ್ಬ ಇನ್ನು ಸ್ವಲ್ಪ ಕ್ಷಣದಲ್ಲೆ ಎಲ್ಲರನ್ನು, ಎಲ್ಲವನ್ನು ನಾನು ನಾಶಮಾಡಿಬಿಡುವೆ ಎಂದು ಕುಳಿತಿದ್ದಾನೆ, ಇಡೀ ಜಗತ್ತೇ ಈ ಕ್ಷಣ ನನ್ನ ಕೈ ಬೆರಳಿನಲ್ಲಿದೆ ಈ ಜಗತ್ತಿನ ಅಳಿವು ಉಳಿವು ನಾನೇ ಎನ್ನುವ ಜಂಬ, ಅಹಂಕಾರ, ಗರ್ವ ಏನೇಲ್ಲ ಹೇಳಬಹುದೋ ಅದೆಲ್ಲವು ಅವನಲ್ಲಿದೆ, ಹಾಗಲೇ ಒಂದು ಚಿಕ್ಕ ನೊಣವೂಂದು ಅವನ ಕಿವಿಯ ಬಳಿ ಬಂದು ಗುಯ್ ಗುಟ್ಟುತ್ತಿದೆ, ಒಮ್ಮೆ ಮತ್ತೊಮ್ಮೆ ಓಡಿಸುತ್ತಾನೆ, ಅದು ಹಠಕ್ಕೆ ಬಿದ್ದಂತೆ ಮತ್ತೆ ಮತ್ತೆ ಬಂದು ಗುಯ್ ಗುಟ್ಟಲು ಪ್ರಾರಂಬಿಸುತ್ತದೆ ಅದನ್ನ ಎದುರಿಸಲು, ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅವನಿಗೆ ಅದೆಷ್ಟು ಸಿಟ್ಟು, ಕೋಪ , ಅಸಹನೆ ಬಂದು ಬಿಡುತ್ತದೆಂದರೆ ಜಗತ್ತನ್ನೆ ಗೆಲ್ಲಬಲ್ಲೆ ಅಂದುಕೊಂಡವನಿಗೆ ನೊಣವನ್ನು ಗೆಲ್ಲಲಾಗದಿರುವ ಸ್ಥಿತಿ, ಇಂತಹ ಅನುಬವಗಳು ಒಂದಲ್ಲ ಒಮ್ಮೆ ಪ್ರತಿಯೊಬ್ಬರಿಗೂ ಆಗಿರುತ್ತೆ , ಒಂದು ನೊಣ ನಮ್ಮನ್ನ ಅಷ್ಟೊಂದು ಘಾಸಿಗೊಳಿಸುತ್ತೆ ಎಂದರೆ ಆ ಜಾಗದಲ್ಲಿ , ಹತ್ತು, ನೂರು ಹೀಗೆ ಕಲ್ಪನೆ ಮಾಡಿಕೊಳ್ಳಿ ಸೃಷ್ಠಿ ಮುಂದೆ ನಾವು ಏನು ಅಲ್ಲ ಅನ್ನಿಸಿಬಿಡುತ್ತೆ .
ಮನುಷ್ಯ ಏನೆಲ್ಲಾ ಸಾಧಿಸಿರಬಹುದು ಪ್ರಕೃತಿಯ ಮುಂದೆ ಅವನು ನೊಣಕಿಂತಲೂ ಕಡಿಮೆ, ಇದೇ ವಾಸ್ತವ, ಪ್ರಕೃತಿ ನಮಗೆ ಸೌಂದರ್ಯವನ್ನ ಕೊಟ್ಟಿದೆ, ಅನೇಕ ವಿಸ್ಮಯಗಳನ್ನ ಸೃಷ್ಠಿಸಿದೆ ಅದೆಲ್ಲವನ್ನು, ಸವಿಯುವ ಆನಂದಿಸು ಹಕ್ಕು ಮಾತ್ರ ನಮ್ಮದು. ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರ, ಪ್ರಾಣಿ ಸಂಕುಲ ಎಲ್ಲವನ್ನೂ ನಾಶಮಾಡುತ್ತಿದ್ದಾನೆ , ಮುಂದೊಂದು ದಿನ ಪ್ರಕೃತಿ ನಾಶದಿಂದ ಮಾನವ ಸಂಕುಲವೂ ನಾಶವಾಗುತ್ತದೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲವಾಗಿದೆ, ಜಗತ್ತನ್ನೇ ನಾಶಮಾಡಬಲ್ಲ ಅಣ್ವಸ್ತ್ರ ಕಂಡುಹಿಡಿದವನು ,ಚಂದ್ರನ ಮೇಲೆ ನಡೆದವನು ಯಾರು ಸಹ ಇಂದು ಭೂಮಿಯಮೇಲೆ ಶಾಸ್ವತವಾಗಿ ಬದುಕಲು ಸಾಧ್ಯವಾಗಿಲ್ಲ.
ಅದಕ್ಕಾಗಿ ಜೀವಜಗತ್ತನ್ನೆ ನಾಶಮಾಡಬಲ್ಲ ಅಸ್ತ್ರಗಳು, ಅಂತಹ ಆಲೋಚನೆಗಳು ನಾಶವಾಗಿ ಪ್ರೇಮಜಗತ್ತು ನಿರ್ಮಾಣವಾಗಬೇಕು , ಯಾರನ್ನೂ ಸಹ ಮದ್ದುಗುಂಡುಗಳಿಂದ ಗೆಲ್ಲಲು ಸಾದ್ಯವಿಲ್ಲ, ಇದಕ್ಕೆ ಇತಿಹಾಸವೇ ಸಾಕ್ಷಿಯಾಗಿ ನಿಂತಿದೆ ಮದ್ದುಗುಂಡುಗಳಿಂದ ಜಗತ್ತನ್ನ ಗೆಲ್ಲುವ ಭ್ರಮೆಯಲ್ಲಿದ್ದ ಹಿಟ್ಲರ್ ನಾಶವಾಗಿಹೋದ, ಶಸ್ತ್ರವನ್ನ ತ್ಯಜಿಸಿದ ಅಶೋಕ ವಿಶ್ವಕ್ಕೆ ಕರುಣೆ , ಪ್ರೀತಿಯನ್ನ ಸಾರಿ ಸಾಮ್ರಾಟನಾದ.
ಸನಾತನವನ್ನ ತ್ಯಜಿಸಿದ ಬುದ್ಧ,ಬಸವ, ಯೇಸು, ಪೈಗಂಬರ್, ತೀರ್ಥಾಕರ, ಗುರುನಾನಕ್ ಎಲ್ಲಾ ದಾರ್ಶನಿಕರು ಜೀವ ಮತ್ತು ಜೀವನ ಪ್ರೀತಿಯನ್ನ ಸಾರಿದರು ಇದೆಲ್ಲ ಕಣ್ಣೆದುರಿಗೆ ಇದ್ದರು ಮನುಷ್ಯ ಬದಲಾಗಲು ಮನಸ್ಸುಮಾಡುತ್ತಿಲ್ಲ , ಬದಲಾಗದಿದ್ದರೆ ಮುಂದೊಂದು ದಿನ ಪ್ರಕೃತಿ ಅವನನ್ನೆ ಬದಲಿಸುತ್ತದೆ .
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಅನ್ನಕ್ಕೆ ಯಾವ ಧರ್ಮ..? ಮತ್ತು ಇತರೆ ಕವಿತೆಗಳು

~ವಿಜಯ್ ನವಿಲೇಹಾಳು
ನನ್ನ ಮನವ, ಹಸಿದ ತೋಳಗಳಂತೆ ಕಿತ್ತು ತಿಂದು ಅದೆಷ್ಟೋ ದಿನಗಳಿಂದ ಎದೆನಡುಗಿಸುತ್ತ ರಣಕೇಕೆ ಹಾಕುತ್ತಿರುವ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ
ಮಾರಮ್ಮನ ಜಾತ್ರೆಯ ಪ್ರಸಾದ,
ಮೊಹರಮ್ ನ ಚೋಂಗಿ ಕೂಡಿ ಉಂಡು
ಅಡುಗೆ ರುಚಿಯೂ; ಮಾಯಾ ದೀವಿಗೆಯನು
ತಿಕ್ಕಿದಾಗ ಬರುವ ಜೀನಿಯಂತೆ ಅದ್ಭುತ ವಾಗಿತ್ತು
ಪಂಕ್ತಿಯಲ್ಲಿ ಹಿಂದುವೋ, ಮುಸಲ್ಮಾನನೋ, ಕ್ರಿಶ್ಚಿಯನ್ನನೋ, ಯಾರಾದರೇನು? ಅನ್ನಕ್ಕೆ ಯಾವ ಧರ್ಮ ?
ಈಗ ಅಲ್ಲೆಲ್ಲೊ ಯಾರೋ ಕೆಲವರು ಜಾತಿ ಧರ್ಮದ ವಿಷವನು ಹನಿ ಹನಿ ಉಣಬಡಿಸಿ ಊರಿಗೂರಿಗೆ ದ್ವೇಷದ ನಶೆಯೇರಿಸಿದ್ದಾರೆ
ಈಗೀಗ ಅವರ ಹಸಿವು ನೀಗುತ್ತಿರುವುದು ಕ್ರೌರ್ಯದ ಕತ್ತಿಯಿಂದ ಜಿನಿಗುತ್ತಿರುವ ರಕ್ತದಿಂದ
ನಾನೆಂದು ಕವಿತೆ ಬರೆದವನಲ್ಲ ಎದೆಯೊಳಗಿನ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ.
ಇತರೆ ಕವಿತೆಗಳು
೧..
ಅವಳ ಮಾತುಗಳು ಅಲ್ಪ ಪ್ರಾಣಗಳಂತೆ
ಕಿವಿಗಳಿಗೆ ನಾಟುತ್ತವೆ
ಅವಳ ಮೌನ ಮಹಾ ಪ್ರಾಣಗಳಂತೆ
ಸೀದ ಹೃದಯಕ್ಕೆ ಅಪ್ಪಳಿಸುತ್ತವೆ
ಅವಳ ಮಾತು ಮತ್ತು ಮೌನದ ಕೊನೆಯಲಿ
ನಾನು ಅನುನಾಸಿಕದಂತೆ.
೨..
ಮಡಿವಂತಿಕೆಯೇ ಶ್ರೇಷ್ಟ ಮೈಲಿಗೆಯು ಅನಿಷ್ಟ ಅಂದುಕೊಂಡಿದ್ದರೆ ಊರಾಚೆಗಿನ ಕಲ್ಲು ಬಂಡೆ ವಿಗ್ರಹವಾಗುತ್ತಿರಲಿಲ್ಲ.
೩..
ಅವಳು ಅಣು ಅಣುವಾಗಿ ಹೃದಯದ
ಆಳವನು ಸೇರಿಕೊಂಡು ಬೇರು ಬಿಟ್ಟಳು
ಅವಳ ಒಲವಿನ ಆಕ್ರಮಣಕೆ
ನಾ ಮರುಮಾತುಗಳಾಡದೆ ಹೆಪ್ಪುಗಟ್ಟಿದೆ. (ಕವಿ:ವಿಜಯ್ ನವಿಲೇಹಾಳು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ವಿಜ್ಞಾನಿಗಳ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ : ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್
-
ದಿನದ ಸುದ್ದಿ20 hours ago
ರಾಜ್ಯದಲ್ಲಿ ಜಾತಿ ಗಣತಿ ಮರು ಸಮೀಕ್ಷೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ19 hours ago
ರಾಜ್ಯದ ಹಲವೆಡೆ ಧಾರಾಕಾರ ಮಳೆ ; ಜನಜೀವನ ಅಸ್ತವ್ಯಸ್ತ
-
ದಿನದ ಸುದ್ದಿ19 hours ago
ಐಎಎಸ್ – ಐಪಿಎಸ್ ಅಧಿಕಾರಿಗಳ ವರ್ಗಾವಣೆ ; ಆದೇಶ
-
ದಿನದ ಸುದ್ದಿ4 days ago
ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮ ; ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ20 hours ago
ಗುಜರಾತ್ನ ಅಹಮದಾಬಾದ್ನಲ್ಲಿ ಏರ್ಇಂಡಿಯಾ ಪ್ರಯಾಣಿಕ ವಿಮಾನ ಪತನ : 242 ಪ್ರಯಾಣಿಕರು ಸಾವು
-
ದಿನದ ಸುದ್ದಿ4 days ago
ಜೂನ್ 9, 2025 ರ ಅಡಿಕೆ ರೇಟು ಹೀಗಿದೆ
-
ದಿನದ ಸುದ್ದಿ19 hours ago
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮನವಿ