ನಿತ್ಯ ಭವಿಷ್ಯ
ಈ ದಿನದ ಜ್ಯೋತಿಷ್ಯವಾಣಿ ಶ್ರೀ ಗುರು ರಾಘವೇಂದ್ರ ಸ್ವಾಮಿ ಆರಾಧನೆ ಯಿಂದ ಉತ್ತಮ ಭವಿಷ್ಯ ನಿಮ್ಮದಾಗಬಹುದು | 18/08/2019 ಭಾನುವಾರ
ಶ್ರೀ ಗುರು ರಾಘವೇಂದ್ರ ಸ್ವಾಮಿ ಆರಾಧನೆ ಯಿಂದ ವಿವಿಧ ವಿಶೇಷ ಪೂಜಾಶಕ್ತೀಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾದ ಶಾಶ್ವತವಾದ ಪರಿಹಾರ ಕಂಡುಕೊಳ್ಳಬಹುದು ಇಂದೇ ಕರೆಮಾಡಿ ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು PH:- 9900494333.
ನಿತ್ಯ ಭವಿಷ್ಯ
ಮೇಷ ರಾಶಿ
ನಿಮ್ಮ ಪ್ರೀತಿಪಾತ್ರರ ನಿಮ್ಮ ಮಾತು ಕೇಳದೆ ತೊಂದರೆಯನ್ನುಂಟು ಮಾಡುತ್ತಿರುತ್ತಾರೆ. ಸುಂದರವಾದ ಸ್ಥಳಗಳಿಗೆ ಭೇಟಿ ಮಾಡಿ ಮನಸ್ಸಿನ ಚಿಂತನೆಯನ್ನು ದೂರ ಮಾಡಿಕೊಳ್ಳುತ್ತೀರಾ. ದಂಪತಿಗಳ ಸಮೇತ ಈದಿನ ಧರ್ಮಕಾರ್ಯಗಳನ್ನು ಪೂಜೆ ಮಾಡಿಸುವುದು ಒಳ್ಳೆಯದು. ಹಣಕಾಸಿನಲ್ಲಿ ಮುಗ್ಗಟ್ಟು ಕಾಣಿಸುತ್ತದೆ. ಪೋಷಕರು ಮಕ್ಕಳನ್ನು ವಿದ್ಯಾಭ್ಯಾಸದಲ್ಲಿ ತೊಡಗಿಸಬೇಕು ಉನ್ನತ ವ್ಯಾಸಂಗ ಮಾಡಲು ಪ್ರೋತ್ಸಾಹಿಸಬೇಕು. ಉದ್ಯೋಗಕ್ಕೆ ತೆರಳಬೇಕಾದರೆ ಹಣೆಗೆ ಕುಂಕುಮವನ್ನು ಹಚ್ಚಿಕೊಂಡು ಹೋಗುವುದರಿಂದ ಯಶಸ್ಸು ನಿಮ್ಮದಾಗುತ್ತದೆ. ಗುಪ್ತ ರೀತಿಯ ಸಮಸ್ಯೆಗಳು ಇದ್ದರೆ ಜ್ಯೋತಿಷ್ಯ ರೊಡನೆ ಸಂಪರ್ಕಿಸಿ ಮಾತನಾಡುವುದು ಉತ್ತಮ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ವೃಷಭ ರಾಶಿ
ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ನಿಮ್ಮೊಡನೆ ಸ್ವಂತ ದವರು ಕೀಳಾಗಿ ಮಾತನಾಡುವುದು ನಿಮ್ಮ ಸಾಮರ್ಥ್ಯವನ್ನು ಹಾಳುಮಾಡುತ್ತದೆ. ಕೆಟ್ಟ ಹವ್ಯಾಸಗಳನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುವುದರಿಂದ ದೈಹಿಕವಾಗಿ ಇರಲು ಸಹಾಯವಾಗುತ್ತದೆ. ನೀವು ಹೋಗುವಂತ ಉದ್ಯೋಗದಲ್ಲಿ ಆಕರ್ಷ ವಾದ ಸುದ್ದಿಗಳು ಕೇಳಿಬರುತ್ತವೆ. ರಹಸ್ಯಮಯ ಜೀವನ ನಿಮ್ಮದಾಗಿರುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಮಿಥುನ ರಾಶಿ
ಕುಟುಂಬದ ಜನರು ನಿಮ್ಮಲ್ಲಿ ಹೆಚ್ಚಿಗೆ ಬೇಡಿಕೆ ಇಟ್ಟರು ಬೆಂಬಲ ನೀಡುವುದು ಕಡಿಮೆ ಇರುತ್ತದೆ. ಸಾಧ್ಯವಾದಷ್ಟು ನಿಮ್ಮ ಪ್ರೇಮಿಯನ್ನು ಹತ್ತಿರದಿಂದ ಮಾತನಾಡಿಸುವುದು ಉತ್ತಮವಾಗಿರುತ್ತದೆ. ಹೊಸ ಯೋಜನೆಗಳು ತುಂಬಾ ಮುಕ್ತತೆಯಿಂದ ನಿರ್ವಹಿಸುವಾಗ ನೀವು ಅವುಗಳನ್ನು ಹಾಳುಮಾಡಬಹುದು. ಆರ್ಥಿಕ ಸಮಸ್ಯೆ ರಚನಾತ್ಮಕವಾಗಿ ಯೋಚನೆ ಮಾಡಿ ಪರಿಹಾರ ಕಂಡುಕೊಳ್ಳುವುದು ಉತ್ತಮವಾಗಿರುತ್ತದೆ. ಈಸಂಜೆ ಮಧುರವಾಗಿ ಕಂಡುಬಂದು ನಿಮ್ಮ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ಮಹಾಗಣಪತಿಯನ್ನು ಪೂಜಿಸುವುದರಿಂದ ನಿಮಗೆ ಆಗುವ ಕೆಲವು ವಿಘ್ನಗಳನ್ನು ದೂರಮಾಡಬಹುದು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಕರ್ಕಾಟಕ ರಾಶಿ
ಈ ದಿನ ನಿಮ್ಮ ಆರೋಗ್ಯ ಪರಿಪೂರ್ಣವಾಗಿರುತ್ತದೆ. ಬ್ಯಾಂಕಿಂಗ್ ವ್ಯವಹಾರಗಳು ಇದ್ದರೆ ಅವುಗಳನ್ನು ಪೂರ್ಣವಾಗಿ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಪ್ರೀತಿ ಯಾವಾಗಲೂ ಕಲ್ಪನೆಯಲ್ಲೇ ಉಳಿದುಕೊಂಡು ಇರುತ್ತದೆ. ಹಣಕಾಸಿನಲ್ಲಿ ದುಪ್ಪಟ್ಟು ಮಾಡಿಕೊಳ್ಳಲು ದುಸ್ಸಾಹಸಕ್ಕೆ ಇಳಿಯಬಾರದು. ಆಸ್ತಿಪಾಸ್ತಿಯಲ್ಲಿ ಕುಟುಂಬದವರಿಂದ ತೊಂದರೆಗಳು ಇದ್ದರೆ ದೈವ ಶಕ್ತಿಯಿಂದ ಇವುಗಳನ್ನು ಪರಿಹಾರ ಮಾಡಿಕೊಳ್ಳುವುದು ಪ್ರಯೋಜನವಾಗುತ್ತದೆ. ನಿಮ್ಮ ಮಕ್ಕಳು ನಿಮ್ಮ ಜೊತೆ ಕೆಲಸಗಳನ್ನು ನಿರ್ವಹಿಸಿ ಜವಾಬ್ದಾರಿಯನ್ನು ಕಡಿಮೆ ಮಾಡುತ್ತಾರೆ. ವಿವಾಹ ಕಾರ್ಯಕ್ರಮಗಳು ಈ ದಿನ ಮುಂದೆ ನಡೆಸಿಕೊಂಡು ಹೋಗುವುದು ಉತ್ತಮ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಸಿಂಹ ರಾಶಿ
ಈ ದಿನ ನೀವು ನಿಮ್ಮ ಬುದ್ಧಿವಂತಿಕೆಯಿಂದ ಹಣಕಾಸನ್ನು ವ್ಯಾಪಾರಗಳಲ್ಲಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬಹುದು. ನಿಮ್ಮ ಪ್ರೇಮಿಯ ಜೊತೆ ಪ್ರವಾಸಿ ತಾಣಕ್ಕೆ ಹೋದಾಗ ನಿಮ್ಮ ಜವಾಬ್ದಾರಿಯನ್ನು ಮರೆತು ಕುಳಿತುಕೊಳ್ಳಬಾರದು. ದೈನಂದಿನ ಒತ್ತಡದಿಂದ ಕುಟುಂಬದಲ್ಲಿ ನಿಮಗೆ ಉಪಚಾರ ಮತ್ತು ಗೌರವ ದೊರೆಯುತ್ತದೆ. ಧ್ಯಾನ ಮತ್ತು ಯೋಗ ಆರೋಗ್ಯದ ಲಾಭ ತರುತ್ತದೆ. ವಿವಾಹದಲ್ಲಿ ಗುರುಬಲ ನಿಮಗೆ ಇರುವುದಿಲ್ಲ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಕನ್ಯಾ ರಾಶಿ
ಈ ದಿನ ನಿಮ್ಮ ಮನಸ್ಸು ಒಳ್ಳೆಯ ವಿಷಯಗಳನ್ನು ಗ್ರಹಿಸುತ್ತದೆ. ನಿಮ್ಮ ಪೂಜಾ ಕಾರ್ಯಕ್ರಮದ ಕೆಲಸಗಳು ನಿಮ್ಮ ಸಂಗಾತಿಯ ಅನಾರೋಗ್ಯದಿಂದ ಇಂದು ಅಡ್ಡಿಯಾಗಬಹುದು. ನೀವು ಪ್ರೀತಿಸುವ ವ್ಯಕ್ತಿಯ ಕಡೆಗೆ ಇಂದು ಪ್ರಯಾಣವನ್ನು ಬೆಳೆಸುವಿರಿ. ಉದ್ಯೋಗದಲ್ಲಿ ನಿಮಗೆ ಸಾಮರಸ್ಯ ಉಂಟಾಗುತ್ತದೆ. ಹಣಕಾಸಿನಲ್ಲಿ ಅಡ್ಡಿ-ಆತಂಕಗಳು ನಿಮಗೆ ಕಾಣುತ್ತವೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ತುಲಾ ರಾಶಿ
ಈ ದಿನ ಉದ್ಯೋಗದಲ್ಲಿ ಚೈತನ್ಯದಾಯಕ ವಾಗಿ ಮತ್ತು ಆರಾಮಾಗಿ ಕೆಲಸ ಕಾರ್ಯಗಳನ್ನು ಮುಂದುವರಿಸಬಹುದು. ನೀವು ಮಾಡುವಂತಹ ಪ್ರೀತಿ-ಪ್ರೇಮದಲ್ಲಿ ನಕರಾತ್ಮಕ ಫಲಿತಾಂಶಗಳು ಕಾಣುವವು. ಕುಟುಂಬದಲ್ಲಿರುವ ಎಲ್ಲ ಜನರ ಗಮನ ನಿಮ್ಮ ಮೇಲೆ ಬರುವುದು. ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬಹುದು. ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಅತ್ಯುತ್ತಮ ದಿನವಾಗಿರುತ್ತದೆ. ಹೆಚ್ಚಿನ ಆಹಾರ ಸೇವಿಸುವುದರಿಂದ ಅಜೀರ್ಣ ಉಂಟಾಗಬಹುದು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ವೃಶ್ಚಿಕ ರಾಶಿ
ಇಂದಿನ ಪ್ರಯಾಣ ತುಂಬಾ ಅನುಕೂಲಕರವಾಗಿದ್ದರೆ ಅದು ದುಬಾರಿಯಾಗಿರುತ್ತದೆ. ದಾಂಪತ್ಯದಲ್ಲಿನ ಮುಗ್ಧ ನಡುವಳಿಕೆ ನಿಮ್ಮ ದಿನವನ್ನು ನಗುಮುಖದಿಂದ ಇರಲು ಸಾಧ್ಯವಾಗಿಸುತ್ತದೆ. ಹೆಚ್ಚು ಹಠಮಾರಿತನವನ್ನು ಹೊಂದಿದ್ದರೆ ಈಗಿನ ಪರಿಸ್ಥಿತಿ ಕುಟುಂಬದವರಿಗೆ ತೊಂದರೆ ಉಂಟು ಮಾಡುತ್ತದೆ. ಹಣಕಾಸನ್ನು ಹೆಚ್ಚಿನ ರೀತಿಯಲ್ಲಿ ಖರ್ಚು ಮಾಡುವುದರಿಂದ ನಿಮಗೆ ನಂತರ ದಿನದಲ್ಲಿ ಅದರ ಬೆಲೆ ಗೊತ್ತಾಗುತ್ತದೆ. ಮದುವೆಗಾಗಿ ಇನ್ನೂ ಕಾಯಬೇಕಿಲ್ಲ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಧನಸ್ಸು ರಾಶಿ
ನಿಮಗೆ ಇಂದು ಆರ್ಥಿಕ ಲಾಭ ಉಂಟಾಗುತ್ತದೆ. ನಿಮ್ಮ ಆರೋಗ್ಯವನ್ನು ಹೆಚ್ಚಿನ ರೀತಿಯಲ್ಲಿ ಸುಧಾರಿಸಿಕೊಳ್ಳಲು ಪ್ರಯತ್ನಿಸಬೇಕು. ಇಲ್ಲವಾದರೆ ಆಪರೇಷನ್ ಸರ್ಜರಿ ಇಂತಹ ಸಮಸ್ಯೆಗಳು ನಿಮಗೆ ಕಾಣಿಸಿಕೊಳ್ಳುತ್ತವೆ. ಉದ್ಯೋಗದಲ್ಲಿ ಒಂದು ರೋಮಾಂಚನಕಾರಿ ವಿಷಯ ಕಂಡು ನಿಮ್ಮ ಮನಸ್ಸು ಬೆರಗಾಗಬಹುದು. ಮಕ್ಕಳ ಸಾಧನೆಗಳಿಂದ ನೀವು ಹೆಮ್ಮೆಪಡುವಂತೆ ಆಗಬಹುದು. ಮದುವೆ ವಿಷಯಗಳು ಮುಂದಕ್ಕೆ ಹಾಕುವಂತೆ ಹೇಳಬಾರದು. ಯಾಕೆಂದರೆ ಸಮಯ ಬಹಳ ಚೆನ್ನಾಗಿ ಒದಗಿ ಬಂದಿರುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಮಕರ ರಾಶಿ
ನಿಮ್ಮಲ್ಲಿರುವ ಹಣಕಾಸು ಸ್ಥಿತಿ ಅನಿರೀಕ್ಷಿತ ಲಾಭದ ಮೂಲಕ ಸುಧಾರಿಸಿಕೊಳ್ಳಬಹುದು. ಉದ್ಯೋಗದಲ್ಲಿ ನಿಮಗೆ ಹೆಚ್ಚು ಹೊಗಳಿಕೆಯಿಂದ ಲಾಭ ಹೊಂದಬಹುದು.ನಿಮ್ಮ ಸಂಗಾತಿಯು ಎಂದಿಗಿಂತ ಇಂದು ಬಹಳ ಅದ್ಭುತವಾಗಿ ಕಾಣಬಹುದು. ನಿಮ್ಮನ್ನು ನೀವೇ ದೂಷಿಸಿ ಕೊಳ್ಳುವುದರಿಂದ ಅನಗತ್ಯವಾಗಿ ಸಮಸ್ಯೆಗಳನ್ನು ತಂದುಕೊಳ್ಳಬಹುದು. ಯಾಕೆಂದರೆ ಗ್ರಹಗತಿಗಳ ಪ್ರಭಾವ ಉಂಟಾಗುತ್ತವೆ. ಸಾಂಪ್ರದಾಯಕವಾಗಿ ಮದುವೆ ವಿಚಾರಗಳು ನಡೆಯಬಹುದು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಕುಂಭ ರಾಶಿ
ಮದುವೆಯಾಗುವವರು ಈಗ ಕೆಲವು ಹೊಸಹೊಸ ಸುದ್ದಿಗಳನ್ನು ಸಂಬಂಧದ ವರಿಂದ ಕೇಳಬಹುದು. ಉದ್ಯೋಗದಲ್ಲಿ ತೆರಳುವ ಮುನ್ನ ನಿಮ್ಮ ವೇಳಾಪಟ್ಟಿಯು ಬದಲಾವಣೆ ಮಾಡಿಕೊಳ್ಳುವುದು ಉತ್ತಮವಾಗಿರುತ್ತದೆ. ಕುಟುಂಬದಲ್ಲಿರುವ ಒತ್ತಡ ನಿಮ್ಮ ಮನಸ್ಸನ್ನು ಪೂರ್ಣವಾಗಿ ಆವರಿಸಿ ಕೊಳ್ಳಬಹುದು. ಇಂದು ನಿಮ್ಮ ಕಾರ್ಯವನ್ನು ನಿರ್ಲಕ್ಷ ಮಾಡಬೇಡಿ ಧನ ವ್ಯಯವಾಗುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಮೀನಾ ರಾಶಿ
ಹೊರ ಸ್ಥಳಕ್ಕೆ ಪ್ರಯಾಣ ಮಾಡುವುದರಿಂದ ನಿಮಗೆ ಬೇಸರತನ ಉಂಟಾಗಬಹುದು. ಮದುವೆ ಕಾರ್ಯಕ್ರಮಗಳು ಆರಂಭಗೊಳ್ಳುವುದು ಬಹಳ ಜವಾಬ್ದಾರಿಯಿಂದ ವರ್ತಿಸಬೇಕು. ನೀವು ಮನೋರಂಜನೆ ಕಾರ್ಯಕ್ರಮಗಳನ್ನು ವೀಕ್ಷಿಸಿ ಅದರಲ್ಲಿರುವ ಹೊಸ ಚಿಂತನೆ ನಿಮ್ಮ ಮನಸ್ಸಿಗೆ ಮೂಡುತ್ತದೆ. ಆರೋಗ್ಯವಾಗಿರಲು ಆರಾಮದಾಯಕವಾದ ಸ್ಥಳಗಳನ್ನು ಆಯ್ಕೆ ಮಾಡುವುದು. ಉತ್ತಮ ಹಣಕಾಸಿನಲ್ಲಿ ಅಂದುಕೊಂಡಷ್ಟು ಲಾಭ ಬೇಗನೆ ದೊರಕುತ್ತಿಲ್ಲ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
5. ಕತಾರ್ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.
6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಈರುಳ್ಳಿ ಕೇವಲ ತರಕಾರಿಯಲ್ಲ ; ಅದ್ಭುತ ಔಷಧ
ನಾವು ನಿತ್ಯವೂ ತಯಾರಿಸುವ ಅಡುಗೆ ಪದಾರ್ಥಗಳಿಗೆ ಈರುಳ್ಳಿಯನ್ನು ಹಾಕದಿದ್ದಾಗ ಒಂದು ರುಚಿಯಾದರೆ ಅದನ್ನು ಹಾಕಿದಾಗ ಆ ಪದಾರ್ಥದ ರುಚಿಯೇ ಬೇರೆಯಾಗುತ್ತದೆ. ನಾವು ಈರುಳ್ಳಿಯ ಗುಣಗಳು, ಅದರ ಉಪಯೋಗಗಳು ಮತ್ತು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.
ಆಯುರ್ವೇದದಲ್ಲಿ ಈರುಳ್ಳಿಯ ಬಗ್ಗೆ ವಿಸ್ತೃತ ವಿವರಣೆ ಇದೆ. ಆಯುರ್ವೇದ ಗ್ರಂಥಗಳ ಪ್ರಕಾರ ಈರುಳ್ಳಿಗೆ ಬೆಳ್ಳುಳ್ಳಿಯ ಗುಣಗಳಿವೆ. ಆದರೆ ಬೆಳ್ಳುಳ್ಳಿಯಂತೆ ಇದು ಉಷ್ಣವಲ್ಲ. ಹಾಗಾಗಿ ಬೆಳ್ಳುಳ್ಳಿಯ ಅದ್ಭುತ ಗುಣಗಳನ್ನು ಪಡೆಯಬೇಕು ಎಂದಾದರೆ ಮತ್ತು ಬೆಳ್ಳುಳ್ಳಿಯನ್ನು ಸೇವಿಸಿದರೆ ಉಷ್ಣವಾಗುತ್ತದೆ ಎಂಬ ಯೋಚನೆ ಇದ್ದರೆ ಬದಲಿಗೆ ಈರುಳ್ಳಿಯನ್ನು ಬಳಸಬಹುದು.
ಭಾವ ಪ್ರಕಾಶ ನಿಘಂಟು ಎಂಬ ಗ್ರಂಥದಲ್ಲಿ “ಬಲವೀರ್ಯ ಕೈರೋ ಗುರುಃ” ಎಂದಿದ್ದಾರೆ. ಅಂದರೆ ಈರುಳ್ಳಿಯು ದೇಹದ ಬಲವನ್ನು, ವೀರ್ಯದ ಗುಣಮಟ್ಟವನ್ನು, ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರ್ಥ. ಬಹುತೇಕ ಎಲ್ಲಾ ಆಯುರ್ವೇದ ಗ್ರಂಥಗಳಲ್ಲಿಯೂ ಈರುಳ್ಳಿಯಿಂದ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬುದನ್ನು ಹೇಳಲಾಗಿದೆ. ಇದು ಚರ್ಮಕ್ಕೆ ಕೂಡ ಅತ್ಯಂತ ಅನುಕೂಲಕರವಾದದ್ದು. ಚರ್ಮವನ್ನು ಸ್ನಿಗ್ಧಗೊಳಿಸಿ ಒರಟುತನವನ್ನು ಹೋಗಲಾಡಿಸುತ್ತದೆ; ಚರ್ಮಕ್ಕೆ ಕಾಂತಿಯನ್ನು ಕೊಡುತ್ತದೆ; ಜೊತೆಗೆ ಚರ್ಮದ ಶುದ್ಧಿಯನ್ನೂ ಮಾಡುತ್ತದೆ ಎಂದು ವಿವರಿಸಲಾಗಿದೆ. ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಬಾಹ್ಯ ಮತ್ತು ಆಂತರಿಕ ಕಾಂತಿ ಹೆಚ್ಚುತ್ತದೆ.
ಅಂದರೆ ಕೇವಲ ಸೌಂದರ್ಯವೃದ್ಧಿಯಷ್ಟೇ ಅಲ್ಲ ದೇಹದೊಳಗಿನ ರೋಗನಿರೋಧಕ ಶಕ್ತಿ ತುಂಬಾ ಚೆನ್ನಾಗಿ ಹೆಚ್ಚುತ್ತದೆ. ಈರುಳ್ಳಿಯು ಧ್ವನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಿ ಒಳ್ಳೆಯ ಧ್ವನಿಯನ್ನು ನೀಡುತ್ತದೆ ಎಂದು ವಿವರಿಸಲಾಗಿದೆ. ಹೀಗಾಗಿ ಹಾಡುಗಾರರು, ಅಧ್ಯಾಪಕರಂಥವರಿಗೆ ನಿಯಮಿತ ಈರುಳ್ಳಿ ಸೇವನೆ ಅನುಕೂಲಕರ. ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದರಿಂದ ಹತ್ತರಿಂದ ಹದಿನೈದು ಮಿಲೀ ಈರುಳ್ಳಿ ರಸವನ್ನು ಸುಮಾರು ಒಂದು ತಿಂಗಳು ದಿನಕ್ಕೊಮ್ಮೆ ಸೇವಿಸುವುದರಿಂದ ಚಿಕ್ಕಪುಟ್ಟ ಕಣ್ಣಿನ ತೊಂದರೆಗಳು ನಿವಾರಣೆಯಾಗುತ್ತವೆ. ಸ್ವಲ್ಪ ಸಿಹಿ ಇರುವ ಅಂದರೆ ಖಾರ ಕಡಿಮೆ ಇರುವ ಈರುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದು ನಿಯಮಿತವಾಗಿ ಸೇವಿಸಿದರೆ ಲೈಂಗಿಕ ಶಕ್ತಿಯ ವೃದ್ಧಿಯಾಗುತ್ತದೆ.
ಕೂದಲು ಉದುರುವುದನ್ನು ಕಡಿಮೆ ಮಾಡಲು ಈರುಳ್ಳಿಯು ಸಹಕಾರಿ. ಈರುಳ್ಳಿಯ ರಸ ತೆಗೆದು ತಲೆ ಸ್ನಾನ ಮಾಡುವ ಹತ್ತು ನಿಮಿಷ ಮೊದಲು ಕೂದಲಿನ ಬುಡಕ್ಕೆ ಹಚ್ಚಬೇಕು. ಇದರಿಂದ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗಲು ಮತ್ತು ಕೂದಲು ಉದುರುವುದು ನಿಲ್ಲಲು ಸಹಾಯವಾಗುತ್ತದೆ. ಬೊಜ್ಜನ್ನು ಕಡಿಮೆ ಮಾಡಲು ಕೂಡ ಈರುಳ್ಳಿಯು ಸಹಕಾರಿ. ಬೆಳ್ಳುಳ್ಳಿಯ ಇನ್ನೊಂದು ಅದ್ಭುತ ಗುಣವೆಂದರೆ ಅದು ನರದ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಯಾಟಿಕಾದಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಈರುಳ್ಳಿ ತುಂಬಾ ಲಾಭದಾಯಕ.
ಕಫದ ಸಮಸ್ಯೆಯಿಂದ ಬಳಲುತ್ತಿದ್ದು ಕಫ ಹೊರಗೆ ಬರುತ್ತಿಲ್ಲದಿದ್ದರೆ ಎರಡು ಚಮಚದಷ್ಟು ಈರುಳ್ಳಿ ರಸ, ಅರ್ಧ ಚಮಚದಷ್ಟು ಶುಂಠಿ ರಸ, ಅರ್ಧ ಚಮಚದಷ್ಟು ತುಳಸಿ ಎಲೆಗಳ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿದರೆ ಕಫ ಹೊರಗೆ ಬಂದು ಸಮಸ್ಯೆ ನಿವಾರಣೆಯಾಗುತ್ತದೆ.
ಈರುಳ್ಳಿ ಒಳ್ಳೆಯ ಜೀರ್ಣಕಾರಿಯೂ ಹೌದು ಹಾಗಾಗಿ ಅಜೀರ್ಣ ಇರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ಹಾಕಿ ಹೆಸರುಬೇಳೆಯ ತಿಳಿಸಾರು ಮಾಡಿ ಊಟಕ್ಕೆ ನೀಡಿದರೆ ಅಜೀರ್ಣದ ಸಮಸ್ಯೆ ತುಂಬಾ ಚೆನ್ನಾಗಿ ಹತೋಟಿಗೆ ಬರುತ್ತದೆ. ಜೊತೆಗೆ ಶಕ್ತಿ ವೃದ್ಧಿಯೂ ಆಗುತ್ತದೆ. ಒಟ್ಟಿನಲ್ಲಿ ಈರುಳ್ಳಿಯನ್ನು ಸರಿಯಾಗಿ ಬಳಸಿಕೊಂಡರೆ ಅದು ಕೇವಲ ತರಕಾರಿಯಲ್ಲ ಅದ್ಭುತ ಔಷಧ.(ಬರಹ-ಡಾ|| ವೆಂಕಟ್ರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ, ಶಿರಸಿ, ಉ.ಕನ್ನಡ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ಅಂತರಂಗ3 days agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
-
ದಿನದ ಸುದ್ದಿ3 days agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
-
ದಿನದ ಸುದ್ದಿ4 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ


