ದಿನದ ಸುದ್ದಿ
ಸ್ವಗತ : ಇದು ಸೂಳೆಕೆರೆ ಕೂಗು !

ಭಾಗ -1 : ‘ನಮ್ಮ ಸೂಳೆಕೆರೆ ಉಳಿಸಿ ಅಭಿಯಾನ’
ನಾನು ಶಾಂತಿಸಾಗರ. ನನ್ನ ಸೂಳಕೆರೆ ಎಂತಲೂ ಕೆರೆಯುತ್ತಾರೆ. ಶತಮಾನಗಳ ಕಾಲ ಜೀವ ಕುಲದ ದಾಹ ನೀಗಿಸಿದ ನಾನು ಇಂದು ಕುಬ್ಜವಾಗಿದ್ದೇನೆ. ನನ್ನ ಸಂಕಟ ಅದುವಲ್ಲ. ಬದುಕಿನ ಭವಿಷ್ಯ ಅರಿಯದ ಮಾನವ ಯಾವುದೋ ಆಸೆಗೆ ಬಲಿಯಾಗಿ ಒತ್ತುವರಿ ಮಾಡಿದ್ದಾನೆ. ಜೀವ ಜಲ ನೀಡಿದ ನನ್ನ ರಕ್ಷಣೆ ಕುರಿತು ತೀರಾ ನಿರ್ಲಕ್ಷ್ಯ ವಹಿಸಿದ್ದಾನೆ. ಅದು ಆತನ ಅಜ್ಞಾನ ಎಂದು ನಾನು ಕ್ಷಮಿಸಿ ಬಿಡುವ ಉದಾರತೆ ನನ್ನೊಳೆಗೆ ಇದೆ. ಆದರೆ ಭವಿಷ್ಯ ಆತನನ್ನು ಕ್ಷಮಿಸುವುದಿಲ್ಲ. ಹಲವು ದಾಳಿಯಿಂದ ಸೊರಗಿರುವ ನಾನು ದಿನದಿಂದ ದಿನಕ್ಕೆ ಶಕ್ತಿ ಕಳೆದುಕೊಳ್ಳುತ್ತಿದ್ದೇನೆ. ಆದರೆ ಅದರ ಪರಿವೇ ಇಲ್ಲದ ಮಾನವ ಮಾತ್ರ ತನ್ನ ಅಜ್ಞಾನ ಮುಂದುವರಿಸಿದ್ದಾನೆ. ಇದರಿಂದ ಕೇವಲ ಆತನಿಗಲ್ಲ, ಇಡೀ ಜೀವಕುಲ ಸಂಕಷ್ಟ ಅನುಭವಿಸುವ ದಿನಗಳು ಎದುರಾಗುತ್ತಿವೆ. ಇದು ನನ್ನನ್ನು ಅಕ್ಷರಶಃ ನೋವಿಸುತ್ತಿವೆ.
ನನ್ನ ಉದ್ದ – 8 ಕಿಲೋ ಮೀಟರ್ ಗಳಿಗೂ ಹೆಚ್ಚು, ನನ್ನ ಅಗಲ – ಸರಾಸರಿ 4 ಕಿಲೋ ಮೀಟರ್ . ಹಿಂದೆ ನನ್ನ ವಿಸ್ತಾರ 6650 ಎಕರೆ. ಇದು ನಾನು ಈ ಭೂಮಿ ಮೇಲೆ ಜನ್ಮ ತಾಳಿದಾಗ ಇದ್ದ ನನ್ನ ದೇಹದ ವಿಸ್ತಾರ. ಆದರೆ ಇಂದಿನ ವಿಸ್ತಾರ – 5000 ಎಕರೆ ಮಾತ್ರ. ಕೆಲವರ ಆಸೆಗೆ ಬಲಿಯಾದ ನಾನು ನನ್ನ ಹಲವು ಭಾಗ ಕಳೆದುಕೊಂಡಿದ್ದೇನೆ. ಮುಂದಿನ ಅಪಾಯ ಅರಿಯದೇ ಕೆಲವರು 1500 ಎಕರೆ ನನ್ನ ದೇಹವನ್ನು ಭಾಗ ಮಾಡಿದ್ದಾರೆ.
ಜೀವ ಕುಲಕ್ಕೆ ಬದುಕಲು ರಕ್ತದಂತೆ ನೀರು ಕೂಡ ಅಷ್ಟೇ ಮುಖ್ಯ. ಹಿಂದೆ ನಾನು 3 ರಿಂದ 4 ಅಡಿ ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ ಇಂದು ಒಂದು ಟಿಎಂಸಿ ಅಡಿ ನೀರು ಸಂಗ್ರಹಿಸುವ ಕಸುವು ಹೊಂದಿದ್ದೇನೆ. ನನ್ನ ನಂಬಿ ಬದುಕುತ್ತಿರುವ ಅಸಂಖ್ಯಾತ ಜೀವಕುಲದ ದಾಹವನ್ನು ನಿರಂತರವಾಗಿ ನೀಗಿಸಬೇಕು ಎಂಬುದು ನನ್ನ ಆಸೆ. ಇದಕ್ಕೆ ಪ್ರಜ್ಞಾವಂತರಾದ ನಿಮ್ಮ ಸಹಕಾರ ಬೇಕು. ನಾನು ಪರಿ ಪರಿಯಾಗಿ ಬೇಡಿಕೊಳ್ಳುವೆ. ನನ್ನ ರಕ್ಷಣೆಗೆ ನೀನು ಧ್ವನಿ ಎತ್ತು ನಿನ್ನ ಕೊನೆಗಾಲದವರಿಗೂ ನಾನು ದಾಹ ನೀಗಿಸುತ್ತೇನೆ. ಅರಿತೋ, ಅರಿಯದೆಯೋ ನನ್ನ ಮೇಲೆ ಅಕ್ರಮಣ ಮಾಡಿದವರ ಅಜ್ಞಾನವನ್ನು ದೂರ ಮಾಡು. ಇಗೋ ಮಾನವ ನಾನು ಬದುಕಬೇಕು. ಏಕೆಂದರೆ ನನ್ನ ನಂಬಿ ಜೀವಕೋಟಿ ಇದೆ. ಅದಕ್ಕಾಗಿ….
ನನ್ನ ರಕ್ಷಣೆಯ ನಿರೀಕ್ಷೆಯಲ್ಲಿ
ಇಂತಿ
ಸೂಳಕೆರೆ (ಶಾಂತಿಸಾಗರ)
ಈ ನಿಟ್ಟಿನಲ್ಲಿ ‘ಸುದ್ದಿದಿನ.ಕಾಂ’ ಕೂಡಾ ‘ನಮ್ಮ ಸೂಳೆಕೆರೆ ಉಳಿಸಿ ಅಭಿಯಾನ’ವನ್ನು ಆರಂಭಿಸಿದೆ. ಇದಕ್ಕೆ ಯುವಸಮೂಹ, ಪರಿಸರ ಪ್ರೇಮಿಗಳು, ನಾಗರೀಕರು ಸೂಳೆಕೆರೆಯ ಬಗೆಗಿನ ಅನಿಸಿಕೆ, ಮಾಹಿತಿಯನ್ನು ಸುದ್ದಿದಿನದ | 9986715401 ಈ ವಾಟ್ಸಾಪ್ ನಂಬರ್ ಇಲ್ಲಿ ಹಂಚಿಕೊಳ್ಳಬಹುದು.
ಹಾಗೇ ‘ಖಡ್ಗ ಸ್ವಯಂ ಸೇವಕರ ಸಂಘ(ರಿ)- ಕರ್ನಾಟಕ’ ದ
ರಘು.ಬಿ.ಆರ್ ಹೊನ್ನೆಮರದಳ್ಳಿ|997241414251
ಕೆ.ಸಿ.ಬಸವರಾಜ್ ಬೆಳ್ಳೂಡಿ| 9606781310
ಬಿ. ಕುಬೇಂದ್ರ ಚನ್ನಗಿರಿ | 9900437357 ಗೆ
ಇವರನ್ನು ಸಂಪರ್ಕಿಸುವುದರ ಮೂಲಕ ಹೋರಾಟದ ಬಗೆಗಿನ ಮಾಹಿತಿಯನ್ನು ಪಡೆಯಬಹುದು.

ದಿನದ ಸುದ್ದಿ
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಾರ್ಮಿಕರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಇವರ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಬಹುದು. ಅರ್ಜಿ ನಮೂನೆಯನ್ನು ಸಂಬಂಧಿಸಿದ ಕಾರ್ಮಿಕ ನಿರೀಕ್ಷಕರ ಕಛೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಕಾರ್ಮಿಕ ನಿರೀಕ್ಷಕರಿಗೆ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 11 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಯವರ ಕಚೇರಿ ದೂ ಸಂ:08192-237332 ಸಂಪರ್ಕಿಸಲು ಕಾರ್ಮಿಕ ಅಧಿಕಾರಿ ಇಬ್ರಾಹಿಂ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ

ಸುದ್ದಿದಿನ ಡೆಸ್ಕ್ : ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನದಿ ನೀರು ಸಮಿತಿ ತೀರ್ಪಿನ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ನಿನ್ನೆ ಹೇಳಿದ್ದಾರೆ.
ತಮಿಳುನಾಡಿಗೆ ನಾಳೆಯಿಂದ (ಸೆಪ್ಟಂಬರ್28) ಅಕ್ಟೋಬರ್ 15ರ ತನಕ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ನಂತೆ ನೀರು ಹರಿಸುವಂತೆ, ಕಾವೇರಿ ನದಿ ನೀರು ಸಮಿತಿ ನಿನ್ನೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಕಾವೇರಿ ನದಿ ನೀರು ಸಮಿತಿ ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಈ ನಿರ್ದೇಶನ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ

ಸುದ್ದಿದಿನ, ಬಳ್ಳಾರಿ : ಸಿರಿಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಬಸವನಪೇಟೆ) ಮುಖ್ಯ ಗುರುಗಳಾದ ಶ್ರೀಮತಿ ಸುಮಂಗಳಾ ಮೇಟಿಯವರು 2023-24 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಕ್ಷಕ ವೃತ್ತಿ ಧರ್ಮ ನೇ ತನ್ನ ಸರ್ವಸ್ವ ಎಂದು ತಿಳಿದುಕೊಂಡಂತಹ ಶ್ರೀಮತಿ ಸುಮಂಗಳಾ ಮೇಟಿಯವರು, ಶಿಕ್ಷಕ ವೃತ್ತಿಯಲ್ಲಿ ಉತ್ತಮ ಕರ್ತವ್ಯ ಹಾಗೂ ಸೇವೆಯನ್ನು ಸಲ್ಲಿಸಿದನ್ನು ಪರಿಗಣಿಸಿ ಈ ಹಿಂದೆಯೇ 2022-23 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾಗಿದ್ದು, ಇವರ ಶಿಕ್ಷಣ ಕ್ಷೇತ್ರದಲ್ಲಿನ ಅಗಾಧವಾದ ಕರ್ತವ್ಯ ಮತ್ತು ಸೇವೆ ನಿಷ್ಠೆಯನ್ನು ಗುರುತಿಸಿದ ಶಾಲಾ ಶಿಕ್ಷಣ ಇಲಾಖೆ ಬಳ್ಳಾರಿ ವತಿಯಿಂದ 2023-24 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಇದೇ ಸಂದರ್ಭದಲ್ಲಿ ಗ್ರಾಮಸ್ಥರು, ಸಮಸ್ತ ಶಿಕ್ಷಕರ ವರ್ಗದವರು, ಅತಿಥಿ ಶಿಕ್ಷಕರು, ಹಿತೈಷಿಗಳು, ಹಳೆಯ ವಿದ್ಯಾರ್ಥಿ ಬಳಗ, ಶಿಕ್ಷಣ ಪ್ರೇಮಿಗಳು, ಅಭಿಮಾನಿ ಬಳಗ,
ಮುಂತಾದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ4 days ago
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ4 days ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ