Connect with us

ದಿನದ ಸುದ್ದಿ

ವೆರಿಕೋಸ್ ವೇನ್ಸ್ ಗೆ ಆಪರೇಷನ್ ರಹಿತ ಆಯುರ್ವೇದ ಚಿಕಿತ್ಸೆ

Published

on

ವೆರಿಕೋಸ್ ವೇನ್ಸ್ ಈಗ ಮನೆ ಮನೆ ಸಮಸ್ಯೆ ಅನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಆಧುನಿಕ ಜೀವನ ಶೈಲಿ ಸೃಷ್ಟಿಸಿರುವ ಅತಿ ದೊಡ್ಡ ಆರೋಗ್ಯ ಸವಾಲು ಇದಾಗಿದೆ. ಸುದೈವವಶಾತ್, ನಮ್ಮ ಹಿರಿಯರು ನಮಗೆ ಕಾಣಿಕೆಯಾಗಿ ನೀಡಿರುವ ಆಯುರ್ವೇದ ವೈದ್ಯಶಾಸ್ತ್ರ, ಈ ಸಮಸ್ಯೆಗೆ ಶಸ್ತ್ರಚಿಕಿತ್ಸೆ ರಹಿತ, ಶಾಶ್ವತ ಪರಿಹಾರವನ್ನು ಕೊಟ್ಟಿದೆ.

ರಕ್ತನಾಳಗಳ ಉಬ್ಬುವಿಕೆಯ ಸಮಸ್ಯೆ ಸುಮಾರು 30ರಿಂದ 40 ಶೇಕಡಾ ಜನರನ್ನು ಈಗ ಬಾಧಿಸುತ್ತಿದೆ. ಈ ಸಮಸ್ಯೆ ಉಲ್ಬಣಗೊಂಡರೆ, ಶಸ್ತ್ರಚಿಕಿತ್ಸೆ ಮೂಲಕ ಕಾಲು ಅಥವಾ ಬೆರಳನ್ನು ಕತ್ತರಿಸಬೇಕಾದ ಅನಿವಾರ್ಯತೆ ಕೂಡ ಎದುರಾಗಬಹುದು. ಆದರೆ ಈಗ ಈ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಡಾ.ಎಂ ವಿ ಉರಾಳ್ ಅವರು ತಮ್ಮ ಅಪಾರ ಆಯುರ್ವೇದ ಜ್ಞಾನ- ಸಂಶೋಧನೆಗಳಿಂದ ಅಭಿವೃದ್ಧಿಪಡಿಸಿರುವ ಔಷಧ ,ಈ ಸಮಸ್ಯೆಯಿಂದ ಶಾಶ್ವತ ಪರಿಹಾರ ಕೊಡುತ್ತಿದೆ.

ಅವೈಜಾನಿಕ ಜೀವನ ಶೈಲಿಯೇ ಈ ಸಮಸ್ಯೆಯ ಮೂಲ ಕಾರಣ

ಮನೆ ಇರಲಿ, ಕಚೇರಿ ಇರಲಿ, ಇಂದು ನಾವು ಮಾಡುವ ಕೆಲಸಗಳೆಲ್ಲವೂ ಸತತ ನಿಲ್ಲುವಿಕೆಯನ್ನು ಅಪೇಕ್ಷಿಸುತ್ತವೆ. ಪರಿಣಾಮ ನಮ್ಮ ಕಾಲಿನ ರಕ್ತನಾಳಗಳ ಉಬ್ಬುವಿಕೆ ಸಮಸ್ಯೆ ಸಾಮಾನ್ಯ ಎಂಬುವಂತಾಗಿದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ “ವೆರಿಕೋಸ್ ವೇನ್ಸ್” ಎನ್ನುತ್ತಾರೆ. ಈ ಸಮಸ್ಯೆಗೆ ಆರಂಭದಲ್ಲೇ ಪರಿಹಾರ ಕಂಡುಕೊಳ್ಳದಿದ್ದಲ್ಲಿ, ನೋವು ಕ್ರಮೇಣ ಹೆಚ್ಚಾಗುತ್ತದೆ, ಚರ್ಮ ಕಪ್ಪಾಗುತ್ತದೆ. ತುರಿಕೆ ಗಾಯವಾಗಿ, ಶಸ್ತ್ರಚಿಕಿತ್ಸೆಯ ಮೂಲಕ ಬೆರಳು ಅಥವಾ ಕಾಲು ಕತ್ತರಿಸುವ ಹಂತಕ್ಕೂ ಇದು ಮುಟ್ಟಬಹುದು. ನಮ್ಮ ದೈಹಿಕ ಚಟುವಟಿಕೆಗಳಲ್ಲಿನ ಅಸ್ಥಿರತೆ, ಅವೈಜ್ಞಾನಿಕತೆ, ಆಹಾರ ವ್ಯತ್ಯಾಸಗಳು, ಹೀಗೆ ನಮ್ಮ ಅವೈಜಾನಿಕ ಜೀವನ ಶೈಲಿಯೇ ಈ ಸಮಸ್ಯೆಯ ಮೂಲ ಕಾರಣ.

ಈ ಸಮಸ್ಯೆಗೆ ಕಾರಣವಾಗುವ ಅಂಶಗಳನ್ನು ಮೂರೂ ವಿಧವಾಗಿ ವಿಂಗಡಿಸಬಹುದು. ನೈಸರ್ಗಿಕ ಕಾರಣಗಳು, ಜೀವನ ಶೈಲಿ ಕಾರಣಗಳು, ಹಾಗು ಅನುವಂಶಿಕ ಕಾರಣಗಳು. ಹೃದಯವು ರಕ್ತವನ್ನು ದೇಹದೆಲ್ಲೆಡೆ ಪ್ರಸರರಿಸುವ ಕಾರ್ಯಮಾಡುತ್ತದೆ, ರಕ್ತವನ್ನು ಮತ್ತೆ ಹೃದಯಕ್ಕೆ ಸೇರುವ ಕಾರ್ಯ ಮಾಡಲು ಕಾಲಿನ ಮೀನಖಂಡಗಳು, ನಮ್ಮ ಉಸಿರಾಟ ಪ್ರಕ್ರಿಯೆ ಮತ್ತು ವೈನ್ಸ್ ಗಳಲ್ಲಿ ಮೇಲ್ಮುಖವಾಗಿ, ಏಕಮುಖ ರಕ್ತ ಸಂಚಾರಕ್ಕೆ ಸಹಕಾರಿಯಾಗುವ ವಾಲ್ವ್ ಗಳು ಪ್ರಮುಖ ಕಾರ್ಯವಹಿಸುತ್ತವೆ. ಮೀನಖಂಡಗಳು ಮತ್ತು ಉಸಿರಾಟ ಪ್ರಕ್ರಿಯೆಗಳು ನಮ್ಮ ಎರಡನೇ ಹೃದಯ ದಂತೆ ಕಾರ್ಯ ನಿರ್ವಹಿಸುತ್ತವೆ. ಇವುಗಳ ಕಾರ್ಯದಲ್ಲಿ ಉಂಟಾಗುವ ಪೂರ್ಣತೆ ಅಥವಾ ಅಶಕ್ತತೆ ಇಂದ ವೆರಿಕೋಸ್ ವೇನ್ಸ್ ಸಂಭವಿಸುತ್ತದೆ

ಸ್ವಾಭಾವಿಕವಾಗಿ ವೇನ್ಸ್ ಗಳಲ್ಲಿ ಕಡಿಮೆ ಇರುವ ರಕ್ತದೊತ್ತಡ, ರಕ್ತ ಪರಿಚಲನೆಯಲ್ಲಾಗುವ ಏರಿಳಿತ, ಹೆಚ್ಚು ರಕ್ತವನ್ನು ಹಿಡಿದಿಟ್ಟುಕೊಳ್ಳಲು ಹಿಗ್ಗುವ ರಕ್ತನಾಳಗಳು, ಮುಪ್ಪಿನ ಕಾರಣ ವೇನ್ಸ್ ಹಿಗ್ಗುವಿಕೆಯು ಕಡಿಮೆಯಾಗುತ್ತದೆ , ಹಾಗೂ ವೈನ್ಸ್ ವಾಲ್ವ್ ಗಳಿ ಗೆ ಗುರುತ್ವಾಕರ್ಷಣೆಯ ಒತ್ತಡ ನೈಸರ್ಗಿಕ ಕಾರಣಗಳು. ಅನಿಯಮಿತ ತೂಕ ಹೆಚ್ಚಳ, ಅನಿಯಮಿತ ವ್ಯಾಯಾಮ, ಅವೈಜ್ಞಾನಿಕ ಆಹಾರ ಪದ್ಧತಿ, ಮಲ ಬದ್ಧತೆ, ಹೆಚ್ಚು ಸಮಯ ನಿಂತು ಅಥವಾ ಕುಳಿತು ಕೆಲಸ ಮಾಡುವುದು, ಧೂಮಪಾನ ಮತ್ತು ಮದ್ಯಪಾನ ಜೀವನ ಶೈಲಿ ಕಾರಣಗಳು. ಕೆಲವರಿಗೆ, ಕೌಟುಂಬಿಕ ಕಾರಣಕ್ಕೂ ಈ ಸಮಸ್ಯೆ ಎದುರಾಗಬಹುದು. ಹೆಚ್ಚು ಹೊತ್ತು ನಿಂತೇ ಕೆಲಸ ಮಾಡುವ ಶಿಕ್ಷಕರು,ಕಾರ್ಮಿಕರು, ಪೊಲೀಸರು, ಭದ್ರತಾ ಸಿಬ್ಬಂದಿ, ಇತ್ಯಾದಿ ದುಡಿಯುವ ವರ್ಗದ ಜನರಲ್ಲಿ ಈ ಸಮಸ್ಯೆ ಹೆಚ್ಚು ಕಂಡು ಬರುತ್ತದೆ.

ವೆರಿಕೋಸ್ ವೇನ್ಸ್ : ಪ್ರಮುಖ ಲಕ್ಷಣಗಳು

* ಕಾಲುಗಳಲ್ಲಿ ಅಥವಾ ಮೀನಖಂಡ ಗಳಲ್ಲಿ ಸೆಳೆತ
* ಕಾಲುಗಳ ಜೋಮು ಹಿಡಿಯುವಿಕೆ
* ಕಾಲುಗಳು ಅಥವ ಪಾದ ಊದಿ ಕೊಳ್ಳುವುದು
* ಕಾಲಿನ ವೇನ್ಸ್ ಉಬ್ಬಿರಿವುದು, ಕೆಂಪು ನೀಲಿ ಬಣ್ಣ ಅಥವಾ ಸ್ವಲ್ಪ ಹಸಿರು ಬಣ್ಣಕ್ಕೆ ತಿರುಗುವು
* ಕಾಲಿನ ಚರ್ಮ ಕಪ್ಪಾಗುವಿಕೆ ಮತ್ತು ತುರಿಕೆ
* ಕಾಲುಗಳಲ್ಲಿ ಗುಣವಾಗದ ಗಾಯ ಮತ್ತು ನೋವು

ಚಿಕಿತ್ಸೆ : ಈ ಸಮಸ್ಯೆಗೆ ಶಾಶ್ವತ ಸರ್ಜರಿ ರಹಿತ ಚಿಕಿತ್ಸೆಯನ್ನು ಖ್ಯಾತ ಆಯುರ್ವೇದಿಕ್ ತಜ್ಞ ವೈದ್ಯ ಡಾ. ಎಂ ವಿ ಉರಾಳ್ ಅಭಿವೃದ್ಧಿ ಪಡಿಸಿದ್ದಾರೆ. ಡಾ ಉರಾಳ್ ವೆರಿಕೋಸ್ ವೇನ್ಸ್ ಆಯುರ್ವೇದಿಕ್ ಕೇರ್’ 15 ವರ್ಷಗಳ ಸತತ ಪರಿಶ್ರಮದ ಫಲವಾಗಿದೆ. ಯೋಗ, ಪ್ರಾಣಾಯಾಮ ಮತ್ತು ಆಯುರ್ವೇದಗಳ ಸಂಗಮ ಈ ಚಿಕಿತ್ಸೆ. ಈ ವಿಧಾನದ ಸದುಪಯೋಗವನ್ನು ಈಗಾಗಲೇ ದೇಶ -ವಿದೇಶಗಳ ಸಾವಿರಾರು ಜನರು ಪಡೆದು, ನೋವಿನಿಂದ ಶಾಶ್ವತ ಮುಕ್ತಿ ಪಡೆದಿದ್ದಾರೆ.

ಈವರೆಗೆ ಕೇವಲ ರೋಗದ ಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ದೊರೆಯುತ್ತಿತ್ತು. ಆದರೆ ಈಗ ಈ ರೋಗಕ್ಕೆ ಆಯುರ್ವೇದ ಚಿಕಿತ್ಸೆ ಲಭ್ಯವಿದೆ. ಆಯುರ್ವೇದ ಔಷಧಿ ಜೊತೆಗೆ ಯೋಗಾಸನಗಳಾದ ತಾಡಾಸನ, ಪ್ರಸಾರಿತ ಪಾದೋತ್ತಾನಾಸನ, ತ್ರಿಕೋನಾಸನ, ಸರ್ವಾಂಗಾಸನ, ಪಶ್ಚಿಮೋತ್ತಾಸನ, ಹಲಾಸನ, ಮತ್ಸ್ಯಾಸನ, ಭುಜಂಗಾಸನ, ಶಲಭಾಸನ, ಧನುರಾಸನ ಮತ್ತು ಅನುಲೋಮ ವಿಲೋಮ ಪ್ರಾಣಾಯಾಮ, ಕಪಾಲಭಾತಿಗಳು ಮೀನಖಂಡಗಳ ಮತ್ತು ಉಸಿರಾಟ ಪ್ರಕ್ರಿಯೆಗಳಲ್ಲಿ ಉಂಟಾಗುವ ಅಪರಿಪೂರ್ಣತೆ ಅಥವಾ ಅಶಕ್ತತೆಯನ್ನು ಸರಿಪಡಿಸುವಲ್ಲಿ ಸಹಕಾರಿಯಾಗಿವೆ.
ವೆರಿಕೋಸ್ ವೇನ್ಸ್: ಮುನ್ನೆಚ್ಚರಿಕೆ ಕ್ರಮಗಳು -ಕುಳಿತಾಗ, ಮಲಗಿದಾಗ ಕಾಲನ್ನು ಸ್ವಲ್ಪ ಎತ್ತರದಲ್ಲಿಡುವುದು.

*ದಿನಕೊಮ್ಮ 30 ನಿಮಿಷ ಎಣ್ಣೆ ಹಚ್ಚಿ ಮೇಲ್ಮುಖವಾಗಿ ಮಸಾಜ್ ಮಾಡುವುದು.
* ಕಾಲುಗಳಿಗೆ ನಿಯಮಿತವಾಗಿ ವಿಶ್ರಾಂತಿ ನೀಡುವುದು.
-ವೈಜ್ಞಾನಿಕವಾಗಿ ಕುಳಿತುಕೊಳ್ಳುವುದು, ನಡೆಯುವುದು ಹಾಗೂ ನಿಂತು ಕೊಳ್ಳುವುದು.
* ಪ್ರಯಾಣದ ಸಂದರ್ಭದಲ್ಲಿ ಬಿಗಿಯಾದ ಕಾಲುಚೀಲ ಧರಿಸುವುದು.
* ನಿತ್ಯದ ದಿನಚರಿಯಲ್ಲಿ ವ್ಯಾಯಾಮ ಮತ್ತು ಪ್ರಾಣಾಯಾಮಕ್ಕೆ ಆದ್ಯತೆ
* ದೇಹದ ತೂಕ ಹೆಚ್ಚಾಗದಂತೆ ಮುನ್ನೆಚ್ಚರಿಕೆ
* ಧೂಮಪಾನ, ಮದ್ಯಪಾನಗಳಿಂದ ದೂರ ಇರುವುದು.
* ಶಿಸ್ತಿನ ಜೀವನ ಶೈಲಿ.(DrVasudev Ural,ಡಾ ಎಂ. ವಿ. ಉರಾಳ್, ಶೃಂಗೇರಿ.8105371042 ಗೆ ಕರೆ ಮಾಡಿ.www.uralsayurveda.in)ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿ ವಾಸವಿದ್ದರೆ ಮಾಹಿತಿ ಕೊಡಿ

Published

on

ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆ ವ್ಯಾಪ್ತಿಯಲ್ಲಿನ ಬೀದಿ ನಾಯಿಗಳ ಉಪಟಳ ತಡೆಯಲು ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಆಸ್ಪತೆಗಳು, ಕ್ರೀಡಾ ಸಂಕೀರ್ಣ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಯಾವುದೇ ಬೀದಿ ನಾಯಿಗಳು ವಾಸವಿದ್ದಲ್ಲಿ ಮಾಹಿತಿಯನ್ನು ಹರಿಹರ ಪೌರಾಯುಕ್ತರಿಗೆ ನೀಡಲು ತಿಳಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇಣುಕಾ ದೇವಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖರೀದಿಸಿದ ಸಾಮಾಗ್ರಿಗಳ ಬಿಲ್ಲಿನ ದಿನಾಂಕಕ್ಕೂ ಹಾಗೂ ದಾಸ್ತಾನು ವಹಿಯಲ್ಲಿ ನಮೂದಾಗಿರುವ ದಿನಾಂಕಕ್ಕೂ ಇರುವ ವ್ಯತ್ಯಾಸಕ್ಕೆ ಸ್ಪಷ್ಟನೆ ಕೋರಿ 3 ತಿಂಗಳು ಕಳೆದರೂ ಯಾವುದೇ ಸ್ಪಷ್ಟನೆ ನೀಡದೆ ಕರ್ತವ್ಯ ಲೋಪ ಎಸಗಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರೇಣುಕಾ ದೇವಿ ವಿರುದ್ಧ ಲೋಕಾಯುಕ್ತಕ್ಕೆ ವಕೀಲ ಡಾ.ಕೆ.ಎ.ಓಬಳೇಶ್ ದೂರು ನೀಡಿದ್ದಾರೆ.

ದಾವಣಗೆರೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2020-21 ರಿಂದ 2024-25ನೇ ಸಾಲಿನ ಅವಧಿಯ ದಾಸ್ತಾನು ವಹಿಯನ್ನು ಮಾಹಿತಿಹಕ್ಕು ಅಧಿನಿಯಮ ಅಡಿಯಲ್ಲಿ ಪಡೆದು ಪರಿಶಿಲನೆ ಮಾಡಿದಾಗ ಸಾಮಾಗ್ರಿಗಳು ಖರೀದಿ ದಿನಾಂಕ ಹಾಗೂ ದಾಸ್ತಾನು ವಹಿಯಲ್ಲಿ ನಮೂದಾಗಿರುವ ದಿನಾಂಕಕ್ಕೂ ಸಾಕಷ್ಟು ವ್ಯತ್ಯಾಸ ಕಂಡು ಬಂದಿದ್ದು, ಈ ಬಗ್ಗೆ ಸ್ಪಷ್ಟತೆ ನೀಡುವಂತೆ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿಯವರಿಗೆ ಅರ್ಜಿ ಸಲ್ಲಿಸಿರುತ್ತಾರೆ. ನಿಗದಿತ ಅವಧಿಯಲ್ಲಿ ಯಾವುದೇ ಸ್ಪಷ್ಟನೆ ನೀಡದ ಕಾರಣ ಜ್ಞಾಪನವನ್ನು ನೀಡಲಾಗಿತ್ತು. ಜ್ಞಾಪನ ಪತ್ರ ನೀಡಿ ನಿಗದಿತ ಅವಧಿ ಮುಕ್ತಾಯವಾದರೂ ಯಾವುದೇ ಸ್ಪಷ್ಟನೆ ನೀಡದೆ ನಿರ್ಲಕ್ಷö್ಯ ತೋರಿದ ರೇಣುಕಾ ದೇವಿಯವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಏಕಲವ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:2024 ನೇ ಸಾಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿರುವ ರಾಜ್ಯದ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಕ್ರೀಡಾಪಟುಗಳು ಅಧಿಕೃತ ಜಾಲತಾಣ http://sevasindhu.karnataka.gov.in ಆನ್‍ಲೈನ್ ಮೂಲಕ ಡಿಸೆಂಬರ್ 3 ರೊಳಗಾಗಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ:08192-237480 ನ್ನು ಸಂಪರ್ಕಿಸಲು ಇಲಾಖೆಯ ಸಹಾಯಕ ನಿರ್ದೇಶಕರಾದ ಹರ್ಷ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending