ದಿನದ ಸುದ್ದಿ
ಸ್ಟಾರ್ ಗಳ ಫೇವರೆಟ್ ಫೋಟೋಗ್ರಾಫರ್ : ಯಶಸ್ಸಿನ ಶಿಖರ ಏರಿದ ಉತ್ತರಕರ್ನಾಟಕದ ಪ್ರತಿಭೆ ‘ಪ್ರಶಾಂತ್ ಪಚ್ಚಿ’..!

ಚಿತ್ರರಂಗದಲ್ಲಿ ಪ್ರಶಾಂತ್ ಪಚ್ಚಿ ಎಂದರೆ ತಕ್ಷಣವೆ ನೆನಪಾಗುವುದು ಇವರು ಕ್ಲಿಕ್ಕಿಸಿದ ಅದ್ಭುತ ಫೋಟೋಗಳು, ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಹಾಗೆ ಯಾರಿಗೂ ಕ್ಲಿಕ್ಕಿಸಲಾಗದ ಅದ್ಭುತ ಅಚ್ಚರಿಯ ಫೋಟೋಗಳು ಇವರ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಇವರು ಒಬ್ಬ ಮಾಂತ್ರಿಕ ಛಾಯಾಗ್ರಾಹಕ ಎಂದರೆ ತಪ್ಪಲ್ಲ, ಇವರು ಕ್ಲಿಕ್ಕಿಸಿದ ಎಲ್ಲಾ ಫೋಟೋಗಳು ಭಾರಿ ಪ್ರಮಾಣದಲ್ಲಿ ವೈರಲ್ ಆಗುತ್ತದೆ, ಸ್ಟಾರ್ ಗಳ ಫೇವರೆಟ್ ಫೋಟೋಗ್ರಾಫರ್ ಈ ನಮ್ಮ ಉತ್ತರ ಕರ್ನಾಟಕದ ಹೈದ.
ಈ ಫೋಟೋಗಳ ಜಾದೂಗಾರ ಮೂಲತಃ ಗದಗ ಜಿಲ್ಲೆಯ ಬಿಂಕದಕಟ್ಟಿ ಎಂಬ ಹಳ್ಳಿಯವರು, ಇವರ ಜನನ ಅಕ್ಟೋಬರ್ 11/ 1994, ಇವರ ತಂದೆ ಬಸವರಾಜ್ ಮಲಗವಿ, ತಾಯಿ ಲಕ್ಷ್ಮವ್ವ, ಇವರು ಮನೆಯ ಕಿರಿಯ ಪುತ್ರ, ಇವರ ಸಹೋದರರು ರಾಜು ಮತ್ತು ಚೇತನ್.
ಚಿಕ್ಕ ವಯಸ್ಸಿನಲ್ಲಿ ಮನೆಯ ಜವಾಬ್ಧಾರಿ ಹೆಗಲ ಮೇಲೆ ಹೊತ್ತು , ತಾನು ಎಸೆಸೆಲ್ಸಿ ಓದುವಾಗಲೇ ಕೆಲಸ ಮಾಡುವುದಕ್ಕೆ ಶುರುಮಾಡಿದ್ದರು, ಇವರ ಕುಟುಂಬ ಆರ್ಥಿಕವಾಗಿ ಉತ್ತಮವಾಗಿ ಇರಲಿಲ್ಲ, ಕಷ್ಟದ ನಡುವೆ ಜೇವನವನ್ನು ನೋಡಿ ಬೆಳದು ಇವರು ಜೀವನೋಪಾಯಕ್ಕಾಗಿ ಅಡುಗೆ ಕೆಲಸದವರಾಗಿ ಬೆಂಗಳೂರಿಗೆ ಬಂದರು.
ಹೌದು 1 ಕ್ಯಾಟರಿಂಗ್ ಅಲ್ಲಿ ಅಡಿಗೆ ಕೆಲಸಕ್ಕೆ ಇವರು ಬೆಂಗಳೂರಿಗೆ ಬಂದರು, ಮೊದಮೊದಲು ಇಂತಹ ದೊಡ್ಡ ಬೆಂಗಳೂರಿನಲ್ಲಿ ಕೆಲಸ ಮಾಡಿ ಬೇಸತ್ತು ಪ್ರಯೋಜನವಿಲ್ಲವೆಂದು ಮರಳಿ ತಮ್ಮ ಊರಿಗೆ ವಾಪಸ್ಸಾದರು, ಊರಲ್ಲಿರುವ ತನ್ನ ತಂದೆಯ ಚಿಕ್ಕ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಅದರ ಜೊತೆಗೆ ಓದುತ್ತಾ ಜೀವನ ಕಳೆಯುತ್ತಿದ್ದರು, ಈಗಲೂ ಇವರ ತಂದೆ ಊರಿನಲ್ಲಿ ಟೀ ಅಂಗಡಿಯನ್ನು ನಡೆಸುತ್ತಿದ್ದಾರೆ.
ಪ್ರಶಾಂತ್ ಅವರು ವಿದ್ಯೆಯಲ್ಲಿ ಬುದ್ಧಿವಂತ ರಾಗಿರಲಿಲ್ಲ, ಪಿಯುಸಿಯಲ್ಲಿ ಫೇಲಾದರೂ, ಫೇಲಾದ ಬಳಿಕ ಜೀವನಕ್ಕೆ ಏನು ಮಾಡಬೇಕು ಎಂದು ತಿಳಿಯದ ಇವರು ತಮ್ಮ ಬಡ ಕುಟುಂಬವನ್ನು ನೋಡುತ್ತಾ ಜೀವನದಲ್ಲಿ ಏನಾದರೂ ಮಾಡಲೇಬೇಕು ಹೇಗಾದರೂ ಮಾಡಿ ಒಂದು ಒಳ್ಳೆ ಹೆಸರು ಮಾಡಲೇಬೇಕು ಎಲ್ಲಾದರೂ ಕೆಲಸ ಮಾಡುತ್ತಾ ಜೀವ ನಡೆಸಬೇಕು ಎಂದು ಛಲದಿಂದ ಡಿಸೈಡ್ ಮಾಡಿದರು.
ಇವರ ಸಹೋದರ ಬೆಂಗಳೂರಿನಲ್ಲಿ ಒಂದು ಸ್ಟುಡಿಯೋದಲ್ಲಿ ವಿಡಿಯೋ ಎಡಿಟರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು, ಆದರಿಂದ ಇವರ ಅಣ್ಣ ಇವರನ್ನು ತನ್ನ ಊರಿನಲ್ಲಿ ಇರುವ ಹೂವಿನ ಅಡಗಲಿ ಎಂಬ ಸ್ಟುಡಿಯೋದಲ್ಲಿ ಕೆಲಸಕ್ಕೆ ಸೇರಿಸಿದರು, ಮೂರು ತಿಂಗಳುಗಳ ಕಾಲ ಸ್ಟುಡಿಯೋದಲ್ಲಿ ಪ್ರಶಾಂತ್ ಅವರು ಕಸಗುಡಿಸಿ, ಸ್ಟುಡಿಯೋ ಕ್ಲೀನ್ ಮಾಡುವ ಕೆಲಸವನ್ನು ಮಾಡುತ್ತಿದ್ದರು, ಕಂಪ್ಯೂಟರ್ ಅನ್ನು ಹೇಗೆ ಉಪಯೋಗಿಸಬೇಕು ಎನ್ನುವ ಅರಿವಿಲ್ಲದ ಇವರು ದಿನೇದಿನೇ ಬೇರೆಯವರನ್ನು ನೋಡಿ ಬೇರೆಯವರಿಂದ ಸ್ವಲ್ಪ ಸ್ವಲ್ಪ ಕಂಪ್ಯೂಟರ್ ಬಳಕೆಯನ್ನು ಕಲಿತುಕೊಂಡರು.
ಆ ಸ್ಟುಡಿಯೋ ಮಾಲೀಕರೆ ಇವರಿಗೆ ಆಶ್ರಯವನ್ನು ಸಹ ಕೊಟ್ಟಿದ್ದರು, ದಿನಕಳೆದಂತೆ ಕ್ಯಾಮರಾದ ಬಗ್ಗೆ ಮತ್ತು ಫೋಟೋ ತೆಗೆಯುವುದನ್ನು ಸಹ ಇವರು ಕಲಿತುಕೊಂಡರು ನಂತರ ಚಿಕ್ಕ-ಚಿಕ್ಕ ಫಂಕ್ಷನ್ ಗಳಿಗೆ ಛಾಯಾಗ್ರಾಹಕನಾಗಿ ಹೋಗುತ್ತಿದ್ದರು, ಹೀಗೆ ಕೆಲವು ತಿಂಗಳುಗಳ ಕಾಲ ಹಗಲು-ರಾತ್ರಿಯೆನ್ನದೆ ಕೆಲಸ ಮಾಡುತ್ತಿದ್ದರು, ನಂತರ ಇನ್ನು ಏನಾದರೂ ಮಾಡಬೇಕು ಎಂದು ಮತ್ತೆ 2015ರಲ್ಲಿ ಬೆಂಗಳೂರಿನ ಕಡೆಗೆ ತಮ್ಮ ಸಹೋದರನ ಸಹಾಯದಿಂದ ಬಂದರು.
ಬೆಂಗಳೂರಿಗೆ ಬಂದಾಗ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಬೇರೆ ಯಾರದೋ ರೂಮಿನಲ್ಲಿ ಆಶ್ರಯ ಪಡೆದು ಹಗಲು-ರಾತ್ರಿಯೆನ್ನದೆ ತಮ್ಮ ಕ್ಯಾಮರಾವನ್ನು ನಂಬಿ ಛಾಯಾಗ್ರಾಹಕ ವೃತ್ತಿಯನ್ನು ಮಾಡುತ್ತಿದ್ದರು, ಇವರ ಕೈಗೆ ಕ್ಯಾಮೆರಾ ಸಿಕ್ಕರೆ ಸಾಕು ಎಲ್ಲರ ಮನಸ್ಸನ್ನು ಸೆಳೆಯುವ ಫೋಟೋ ಇವರು ತೆಗೆಯುತ್ತಾರೆ,
ಹೀಗೆ ಕೆಲಸ ಮಾಡುತ್ತಾ ಮಾಡುತ್ತಾ ತಮ್ಮ ವೃತ್ತಿಯಲ್ಲಿ ಮದುವೆ ಸಮಾರಂಭಗಳಿಗೆ ಫೋಟೋ ತೆಗೆಯುವ ಜೊತೆಗೆ ಸೆಲೆಬ್ರಿಟಿಗಳ ಈವೆಂಟ್ಗಳು, ಮಾಡಲಿಂಗ್ ಗಳಿಗೆ ಫೋಟೋಗ್ರಾಫರ್ ಆಗಿ ಹೋಗಲು ಆರಂಭಿಸಿ ಯಶಸ್ಸನ್ನು ಕಂಡರು.
ಒಂದು ಚಿಕ್ಕ ಸ್ಟುಡಿಯೋ ಇಂದ ಆರಂಭಿಸಿದ ಇವರ ವೃತ್ತಿ ಇವತ್ತು ಎಲ್ಲಾ ಸೆಲೆಬ್ರಿಟಿಗಳ ಫೇವರೆಟ್ ಫೋಟೋಗ್ರಾಫರ್ ಆಗಿ ಬೆಳೆದಿದ್ದಾರೆ, ಸ್ಟಾರ್ಸ್ ಗಳಾದ ಶಿವಣ್ಣ, ಕಿಚ್ಚ ಸುದೀಪ್, ರಮೇಶ್ ಅರವಿಂದ್, ಪ್ರಭಾಸ್, ತಮ್ಮನ್ನ, ಕರೀನಾ ಕಪೂರ್, ಇನ್ನು ಮುಂತಾದ ಸ್ಟಾರ್ಸ್ ಗಳ ಅದ್ಭುತವಾದ ಫೋಟೋವನ್ನು ಕ್ಲಿಕ್ಕಿಸಿದ್ದಾರೆ, ಇವರು ತೆಗೆದಿರುವ ಫೋಟೋವನ್ನು ಇಷ್ಟಪಟ್ಟು ಸ್ಟಾರ್ ಗಳೆ ಇವರ ಜೊತೆ ಸೆಲ್ಫಿ ಅನ್ನು ಕೂಡ ತೆಗೆದುಕೊಂಡಿದ್ದಾರೆ.
ನಮ್ಮ ಪ್ರಶಾಂತ್ ಅವರು ಫೋಟೋಗ್ರಫಿಯನ್ನು ಎಷ್ಟರಮಟ್ಟಿಗೆ ಇವರು ಇಷ್ಟಪಡುತ್ತಾರೆ ಎಂದರೆ ಆಗಸ್ಟ್ 19 ವರ್ಲ್ಡ್ ಫೋಟೋಗ್ರಫಿ ದಿನದಂದೇ ತನ್ನ ಪ್ರೇಯಸಿ ಚೈತ್ರಾಳ ಜೊತೆ ವೈವಾಹಿಕ ಜೀವನವನ್ನು ಸಹ ಆರಂಭಿಸಿದ್ದಾರೆ, ಈಗ ಪುಟ್ಟ ಮಗುವಿನೊಂದಿಗೆ ಇವರ ಕುಟುಂಬ ಸಂತೋಷದಿಂದ ಕೂಡಿದೆ, ಕ್ಯಾಮೆರಾ, ಹೆಂಡತಿ ಮತ್ತು ಮಗು ನನ್ನ ಆಸ್ತಿ ಎಂದು ಹೇಳುವ ಪ್ರಶಾಂತ್ ಪಚ್ಚಿ ಅವರು ಯಶಸ್ಸನ್ನು ಕಂಡರು, ಸ್ಟಾರ್ಸ್ ಗಳ ಜೊತೆ ಕೆಲಸ ಮಾಡಿದರು, ಸೆಲೆಬ್ರಿಟಿಗಳ ಫೇವರೆಟ್ ಫೋಟೋಗ್ರಾಫರ್ ಎಂಬ ಬಿರುದು ಇದ್ದರು ಯಾವುದೇ ಅಹಂ ಇಲ್ಲದೆ ಬಹಳ ಸರಳ ಜೀವನವನ್ನು ನಡೆಸುತ್ತಿದ್ದಾರೆ.
ಹೀಗೆ 8 ವರ್ಷಗಳ ಕಾಲ ಕಷ್ಟಪಟ್ಟು ಬೆಳೆದ ನಮ್ಮ ಛಾಯಾಗ್ರಹದ ಜಾದುಗಾರ ಪ್ರಶಾಂತ್ ಪಚ್ಚಿ ಇನ್ನು ಎತ್ತರಕ್ಕೆ ಬೆಳೆಯಲಿ ಇನ್ನು ಹೆಚ್ಚು ಮಟ್ಟದಲ್ಲಿ ಇವರ ಫೋಟೋಗಳು ವೈರಲ್ ಆಗಲಿ ಎಂದು ಆಶಿಸೋಣ.
ಯಾರಾದರೂ ಇವರನ್ನು ಮದುವೆ ಸಮಾರಂಭಗಳಿಗೆ ಅಥವಾ ಫೋಟೋಶೂಟ್ ಗಳಿಗೆ ಸಂಪರ್ಕಿಸಬೇಕು ಎಂದರೆ ಕೆಳಗಿರುವ ಇ-ಮೇಲ್ ಮತ್ತು ಮೊಬೈಲ್ ನಂಬರ್ ಗೆ ಸಂಪರ್ಕಿಸಿ:[email protected]
9886242294
–ದಿವ್ಯಶ್ರೀ. ವಿ
ಬೆಂಗಳೂರು
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಧ್ಯಮ ಉದ್ಯಮವಾಗಿರುವ ಈ ಕಾಲಘಟ್ಟದಲ್ಲಿ ಜನರೇ ಜನಾಭಿಪ್ರಾಯ ರೂಪಿಸುವ ಹೊಣೆ ಹೊರಬೇಕು : ಹಿರಿಯ ಪತ್ರಕರ್ತ ಬಸವರಾಜ್ ದೊಡ್ಮನಿ

ಸುದ್ದಿದಿನ,ಹರಪನಹಳ್ಳಿ: ಮಾಧ್ಯಮರಂಗ ಕಾವಲು ನಾಯಿಯಾಗಿ ಕೆಲಸ ಮಾಡುವಂತಹ ಕಾಲವಿತ್ತು, ಆದ್ರೆ ಈಗ ಯಾರ ಮನೆಯ ನಾಯಿ ಎಂದು ಜನರೇ ಕೇಳುವ ಮಟ್ಟಕ್ಕೆ ಮಾಧ್ಯಮರಂಗ ತನ್ನ ನೈತಿಕ ಅಂಧ ಪತನ ಕಾಣುತ್ತಿದೆ ಎಂದು ಹಿರಿಯ ಪತ್ರಕರ್ತ ಬಸವರಾಜ ದೊಡ್ಮನಿ ಬೇಸರ ವ್ಯಕ್ತಪಡಿಸಿದ್ರು.
ಹರಪನಹಳ್ಳಿಯಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ “ಬುಡಕಟ್ಟು ಸಮುದಾಯಗಳ ಐಕ್ಯತಾ ವೇದಿಕೆ ಹಾಗೂ ಪೆರಿಯರ್ ಮತ್ತು ಎಂ ಪಿ ಪ್ರಕಾಶ್ ಸೇವಾ ಸಂಸ್ಥೆ ಆಯೋಜಿಸಿರುವ ಯುವಜನರ ಸವಾಲುಗಳು ಹಾಗೂ ನಾಯಕತ್ವ ಶಿಬಿರದ “ಮಾಧ್ಯಮ ಮತ್ತು ಯುವಜನ” ಗೋಷ್ಠಿ ಉದ್ದೇಶಿಸಿ ಮಾತ್ನಾಡಿದ್ರು.
ಇದನ್ನೂ ಓದಿ | ಪ್ರತಿರೋಧದ ದನಿಗಳು ಸರ್ವಾಧಿಕಾರಕ್ಕೆ ಸದಾ ಅಪಥ್ಯವೇ
ಜನಾಭಿಪ್ರಾಯ ರೂಪಿಸಬೇಕಾದ ಮಾಧ್ಯಮ ಇಂದು ಸುದ್ದಿ ಹಪಾಹಪಿತನದಿಂದ ಜನರನ್ನೇ ದಾರಿ ತಪ್ಪಿಸುವಂತಹ ಹಂತಕ್ಕೆ ಬಂದು ತಲುಪಿದೆ. ಸುದ್ದಿ ಪ್ರಮಾಖ್ಯತೆಗಳನ್ನ ಆಯ್ಕೆ ಮಾಡುವಾಗ ಜನರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ. ಆಳುವ ಜನರ ಕಪಿಮುಷ್ಠಿಯಿಂದ ಮಾಧ್ಯಮ ರಂಗವನ್ನ ಜನರೇ ಬಿಡಸಬೇಕಾದ ಅನಿವಾರ್ಯತೆ ಹಾಗೂ ಜವಾಬ್ದಾರಿ ನಮ್ಮ ಮೇಲಿದೆ. ಮಾಧ್ಯಮಗಳಿಗೆ ಈಗ ಸೆಕ್ಸ್, ಕ್ರೈಂ, ಫಿಲ್ಮ್ ಮಾತ್ರವೇ ಸುದ್ದಿಯ ಮೂಲವಾಗಿರುವುದು ನಿಜಕ್ಕೂ ದುರಂತ ಎಂದು ಅಭಿಪ್ರಾಯಿಸಿದ್ರು.
ಸುದ್ದಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ ವರದರಾಜ್ ಮಾತ್ನಾಡಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಬಹುದೊಡ್ಡ ಪಾತ್ರವಹಿಸಿದೆ. ಸಮಾಜದ ಓರೆಕೋರೆಗಳನ್ನ ತಿದ್ದುವಲ್ಲಿ ಹಾಗೂ ಸಮಾಜದ ಜ್ವಲಂತ ಸಮಸ್ಯೆಗಳನ್ನ ಬೆಳಕಿಗೆ ತರುವಲ್ಲಿ ಮಾಧ್ಯಮಗಳು ಪಾತ್ರವಹಿಸಿದೆ. ಕಟ್ಟಕಡೆಯ ಹಳ್ಳಿಗಳ ಸಮಸ್ಯೆಗಳನ್ನ ಸರ್ಕಾರದ ಅಧಿಕಾರಿಗಳ ಗಮನಕ್ಕೆ ತಂದು ಕಿವಿ ಹಿಂಡುವ ಕೆಲಸಗಳು ಇವೆ. ಇಂತಹ ದೊಡ್ಡ ಶಕ್ತಿ ಇರುವ ಮಾಧ್ಯಮ ಎಲ್ಲೋ ಒಂದು ಕಡೆ ದಾರಿ ತಪ್ಪುತ್ತಿರುವುದು ವಿಷಾದ. ರಾಜಕೀಯ ನಾಯಕರೇ ಮಾಧ್ಯಮಗಳನ್ನ ನಿಯಂತ್ರಿಸುತ್ತಿರುವುದರಿಂದ ಜನರು ಮಾಧ್ಯಮದ ಮೇಲೆ ನಂಬಿಕೆ ಕಳೆದುಕೊಳ್ಳಲು ಕಾರಣ ಎಂದು ಅಭಿಪ್ರಾಯಿಸಿದ್ರು.
ಸತೀಶ್ ನಾಯಕ್ ಮಾತ್ನಾಡಿ ಪ್ರಭುತ್ವವನ್ನ ಪ್ರಶ್ನೆ ಮಾಡುವಂತಹ ಪತ್ರಕರ್ತರ ಮೇಲೆ ಬಹುದೊಡ್ಡ ದಾಳಿಗಳು ನಡೆಯುತ್ತಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯುವಜನರು ಮಾಧ್ಯಮದ ಸವಾಲುಗಳ ಬಗ್ಗೆ ಚರ್ಚೆ ನಡೆಸುತ್ತಿರುವುದು ಆಶಾದಾಯಕ ಬೆಳವಣಿಗೆ. ಭವಿಷ್ಯತ್ತಿನಲ್ಲಿ ಯುವಜನರೇ ಮಾಧ್ಯಮದ ಜವಬ್ದಾರಿ ಹೊರಬೇಕಿದೆ ಎಂದು ಕರೆ ನೀಡಿದ್ರು.
ಕಾರ್ಯಕ್ರಮದಲ್ಲಿ ಕೋಡಿಹಳ್ಳಿ ಭೀಮಣ್ಣ, ಈಶ್ವರ್ ನಾಯಕ್ ಸೇರಿದಂತೆ ನೂರಾರು ಯುವಜನರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೊರೋನ ಲಸಿಕೆ ಪಡೆದ ಸಂಸದ ಜಿ.ಎಂ.ಸಿದ್ದೇಶ್ವರ್

ಸುದ್ದಿದಿನ,ದಾವಣಗೆರೆ: ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಮೂರನೇ ಹಂತದ ಕೋವಿಡ್-19 ಲಸಿಕೆ ನೀಡುವ ಅಭಿಯಾನವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಮಂಗಳವಾರ ನಗರದ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಭಿಯಾನದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ (69) ಹಾಗೂ ಅವರ ಪತ್ನಿ ಗಾಯತ್ರಮ್ಮ.ಜಿ.ಎಸ್ (66), ಹಿರಿಯ ನಾಗರೀಕರು ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟ ಅನಾರೋಗ್ಯ ಪೀಡಿತರು ಸೇರಿದಂತೆ ಒಟ್ಟು 74 ಜನರು ಲಸಿಕೆ ಪಡೆದುಕೊಂಡರು.
ಈ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರ ತಮ್ಮ ಮಡದಿಯೊಂದಿಗೆ ಲಸಿಕೆ ಪಡೆದು ಮಾತನಾಡಿ, ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದ ಕೊರೋನ ನಿಯಂತ್ರಣಕ್ಕೆ 10 ತಿಂಗಳೊಳಗಾಗಿ ಲಸಿಕೆ ಕಂಡುಹಿಡಿದಿರುವುದು ಅಭಿನಂದನಾರ್ಹ.
ಮೊದಲ ಹಂತದಲ್ಲಿ ಕೋವಿಡ್ ನಿಯಂತ್ರಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ನಂತರ ಕಂದಾಯ, ಪೌರಾಡಳಿತ, ಪಂಚಾಯತ್ ರಾಜ್ ಇಲಾಖೆ, ಪೊಲೀಸ್ ಇಲಾಖೆ ಫಲಾನುಭವಿಗಳಿಗೆ ನೀಡಲಾಗಿದೆ. ಈ ಲಸಿಕೆ ಸುರಕ್ಷಿತವಾಗಿದ್ದು, ಇದುವರೆಗೂ ಯಾರಿಗೂ ತೊಂದರೆಯಾಗಿಲ್ಲ ಎಂದು ತಿಳಿಸಿದರು.
ಮಾರ್ಚ್ 1 ರಂದು ಲಸಿಕೆ ಪಡೆಯಬೇಕಿತ್ತು. ಕಾರಣಾಂತರಗಳಿಂದ ಲಸಿಕೆ ಪಡೆಯಲು ಸಾಧ್ಯವಾಗಲಿಲ್ಲ. ಇಂದು ಸ್ವ-ಇಚ್ಚೆಯಿಂದ ನನ್ನ ಮಡದಿಯೊಂದಿಗೆ ಬಂದು ಲಸಿಕೆ ಪಡೆದಿದ್ದು, ಯಾವುದೇ ತೊಂದರೆಯಾಗಿಲ್ಲ. ಸುರಕ್ಷಿರಾಗಿದ್ದೇವೆ. ಲಸಿಕೆ ಪಡೆಯುವುದಕ್ಕು ಮುನ್ನ ಇಲ್ಲಿ ಲಸಿಕೆ ಪಡೆದ ಹಿರಿಯರನ್ನು ವಿಚಾರಿಸಿದ್ದು, ಯಾವುದೇ ರೀತಿಯ ಅಡ್ಡಪರಿಣಾಮ ಸಂಭವಿಸಿಲ್ಲ ಎಂದು ಭರವಸೆ ನೀಡಿದ್ದಾರೆ.
ಆದ್ದರಿಂದ ಲಸಿಕೆ ಪಡೆಯದ ಎಲ್ಲಾ ಹಿರಿಯ ನಾಗರೀಕರು ಹಾಗೂ 45 ವರ್ಷ ಮೇಲ್ಪಟ್ಟ ಎಲ್ಲಾ ಅನಾರೋಗ್ಯ ಪೀಡಿತರು ಯಾವುದೇ ಭಯವಿಲ್ಲದೇ, ಹಿಂಜರಿಯದೆ ಲಸಿಕೆ ಪಡೆದುಕೊಂಡು ದೇಶಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.
ಅಭಿಯಾನದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಎರಡನೇ ಹಂತದಲ್ಲಿ ಮುಂಚೂಣಿ ಕೊರೋನ ವಾರಿಯರ್ಸ್ಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ಮಾರ್ಚ್ 1 ರಿಂದ ಮೂರನೇ ಹಂತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಅಂತಹವರು ತಮ್ಮ ಆಧಾರ ಕಾರ್ಡ್ನೊಂದಿಗೆ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಶೇಕಡ 80 ರಷ್ಟು ಜನರು ಲಸಿಕೆ ಪಡೆದುಕೊಂಡಿದ್ದು, ನಂತರ ಮುಂಚೂಣಿ ಕೊರೋನ ವಾರಿಯರ್ಸ್ಗಳಲ್ಲಿ ಶೇಕಡ 70 ರಷ್ಟು ಜನರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಇನ್ನೂ ಕಂದಾಯ ಇಲಾಖೆಯಲ್ಲಿ ಶೇಕಡ 55 ರಷ್ಟು ಹಾಗೂ ಇನ್ನಿತರರು ಸೇರಿ ಶೇಕಡ 60 ರಷ್ಟು ಜನರು ಲಸಿಕೆ ಪಡೆದುಕೊಂಡಿದ್ದು, ಲಸಿಕೆ ಪಡೆಯದವರಿಗೆ ಮಾ.6 ರವರೆಗೆ ಕಾಲವಕಾಶವಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು.
ಇದನ್ನೂ ಓದಿ | ಎ ಸಿ ಬಿ ಬಲೆಗೆ ಬಿದ್ದ ಕೊಪ್ಪಳದ ಬಿ ಇ ಓ ಮತ್ತು ಎಫ್ ಡಿ ಎ
ಮಾರ್ಚ್ 1 ರಿಂದ ಮೂರನೇ ಹಂತದ ಲಸಿಕೆ ಅಭಿಯಾನ ಪ್ರಾರಂಭವಾಗಿದ್ದು, ಮೊದಲ ದಿನ 11 ಜನ ಲಸಿಕೆ ಪಡೆದಿದ್ದರು. ಆದರೆ ಇಂದು ಸರ್ಕಾರಿ ಹಾಗೂ ಖಾಸಗಿ ಎರಡು ವಲಯಗಳು ಸೇರಿ 63 ಜನರು ಲಸಿಕೆ ಪಡೆದುಕೊಂಡಿದ್ದು, ಒಟ್ಟು 74 ಜನರು ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಮಂಗಳವಾರ ಸಂಸದರಾದ ಸಿದ್ದೇಶ್ವರ ಹಾಗೂ ಅವರ ಪತ್ನಿ ಲಸಿಕೆ ಹಾಕಿಸಿಕೊಂಡಿದ್ದು ಯಾವುದೇ ತೊಂದರೆಗಳು ಸಂಭವಿಸಿಲ್ಲ. ಆದ ಕಾರಣ ಯಾರು ಭಯ ಪಡದೇ, ಲಸಿಕೆ ಕುರಿತು ಪೂರ್ವಾಗ್ರಹ ಇಟ್ಟುಕೊಳ್ಳದೇ, ಧೈರ್ಯದಿಂದ ಮುಂದೆ ಬಂದು ಕೋವಿಶೀಲ್ಡ್ ವ್ಯಾಕ್ಸಿನ್ ತೆಗೆದುಕೊಳ್ಳಬೇಕು. ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರೊಂದಿಗೆ ತಮ್ಮ ಕುಟುಂಬದವರನ್ನು ರಕ್ಷಣೆ ಮಾಡಬೇಕು. ಕೊರೋನ ಮುಕ್ತ ದೇಶವನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಅಭಿಯಾನದಲ್ಲಿ ಸಂಸದರ ಪತ್ನಿ ಗಾಯತ್ರಮ್ಮ ಜಿ.ಎಸ್, ಕಾರ್ಪೋರೇಟರ್ ಆರ್.ಎಲ್.ಶಿವಪ್ರಕಾಶ್, ಆರ್ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀಕ್ಷಕ ನೀಲಕಂಠ, ಯುವ ಮುಖಂಡರಾದ ಶಿವಕುಮಾರ್, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎ ಸಿ ಬಿ ಬಲೆಗೆ ಬಿದ್ದ ಕೊಪ್ಪಳದ ಬಿ ಇ ಓ ಮತ್ತು ಎಫ್ ಡಿ ಎ

ಸುದ್ದಿದಿನ,ಕೊಪ್ಪಳ : ಬಂದ್ ಆಗಿರುವ ಶಾಲೆಯ ಡಿಪಾಸಿಟ್ ಅನ್ನು ವಾಪಾಸ್ ಪಡೆಯಲು ಮೂರುವರೆ (3.500ರೂ) ಲಂಚ ಕೇಳಿದ್ದ ಬಿ ಇ ಓ ಮತ್ತು ಎಫ್ ಡಿ ಎ ಇಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಭಾಗ್ಯನಗರದ ಎಸ್ ಎಸ್ ಕರ ಶಾಲೆಯ ಬಾಲಚಂದ್ರ ಕಬಾಡೆ ಎಂಬುವವರ ದೂರಿನ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ, ಮೂರೂವರೆ ಸಾವಿರ ಲಂಚ ಪಡೆಯುವಾಗವಾಗ ಬಿಇಓ ಉಮಾದೇವಿ ಸೊನ್ನದ, ಎಫ್ ಡಿ ಎ ಎ ಆರುಂಧತಿ ಬಲೆಗೆ ಬಿದ್ದಿದ್ದಾರೆ. ಶಾಲೆ 2002ರಲ್ಲಿ ಆರಂಭವಾಗಿದ್ದು ೨೦೦೯ 2009 ರಲ್ಲಿ ಬಂದಾಗಿತ್ತು.
ಇದನ್ನೂ ಓದಿ | ಅಶ್ಲೀಲ ಸಿಡಿ ವೈರಲ್ | ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ; ಆರೋಪ ಮುಕ್ತನಾದ ಮೇಲೆ ಸಚಿವ ಸ್ಥಾನ ನೀಡಿ
ಬಳ್ಳಾರಿ ಎಸ್ಪಿ ಗುರುನಾಥ ಮತ್ತೂರ ಮಾರ್ಗದರ್ಶನದಲ್ಲಿ ಡಿಎಸ್ಪಿ ಶಿವಕುಮಾರ್, ಎಸ್ ಐ ಎಸ್ ಎಸ್ ಬೀಳಗಿ, ಎಸೈ ಬಾಳನಗೌಡ ತಂಡವು ಈ ದಾಳಿ ನಡೆಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಬಹಿರಂಗ7 days ago
ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇ ಮೊದಲ ತಪ್ಪು..!
-
ಕ್ರೀಡೆ7 days ago
ಅತಿ ಕಡಿಮೆ ಪಂದ್ಯ ; 400 ವಿಕೆಟ್ : ದಾಖಲೆ ಬರೆದ ಸ್ಪಿನ್ನರ್ ಆರ್ ಅಶ್ವಿನ್
-
ಕ್ರೀಡೆ7 days ago
ರಾಜ್ಯದ ಕ್ರೀಡಾ ವಿಜ್ಞಾನ ಸಂಸ್ಥೆಯಿಂದ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ
-
ಲೈಫ್ ಸ್ಟೈಲ್6 days ago
ರೆಸಿಪಿ | ಖರ್ಜೂರದ ಹೋಳಿಗೆ ಮಾಡೋದು ಹೇಗೆ ಗೊತ್ತಾ..?
-
ದಿನದ ಸುದ್ದಿ5 days ago
ಅಸ್ಸಾಂ | ಅಥ್ಲೀಟ್ ಹಿಮಾ ದಾಸ್ ಡಿಎಸ್ಪಿಯಾಗಿ ನೇಮಕ ; ನನ್ನ ಮತ್ತು ತಾಯಿಯ ಕನಸು ನನಸಾದ ದಿನವಿದು : ಹಿಮಾ ಭಾವುಕ ನುಡಿ
-
ಸಿನಿ ಸುದ್ದಿ4 days ago
ಇಂದು ಕನ್ನಡ ಬಿಗ್ ಬಾಸ್ ಸೀಸನ್ 8 ಗ್ರ್ಯಾಂಡ್ ಓಪನಿಂಗ್ | ಒಂಟಿ ಮನೆಯಲ್ಲಿ ಯಾರೆಲ್ಲಾ ಇರಲಿದ್ದಾರೆ ಗೊತ್ತಾ..?
-
ದಿನದ ಸುದ್ದಿ7 days ago
ಹೆಚ್.ಎ.ಎಲ್ ನಲ್ಲಿ ತರಬೇತಿಗಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ7 days ago
ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ 25 ರೂ ಹೆಚ್ಚಳ ; ಇತಿಹಾಸದಲ್ಲೇ ಮೊದಲ ಸಲ ಒಂದೇ ತಿಂಗಳಲ್ಲಿ ಮೂರನೇ ಬಾರಿಗೆ ಗ್ಯಾಸ್ ಬೆಲೆ ಏರಿಕೆಯಾಗಿದ್ದು..!