ದಿನದ ಸುದ್ದಿ
ಸ್ಟಾರ್ ಗಳ ಫೇವರೆಟ್ ಫೋಟೋಗ್ರಾಫರ್ : ಯಶಸ್ಸಿನ ಶಿಖರ ಏರಿದ ಉತ್ತರಕರ್ನಾಟಕದ ಪ್ರತಿಭೆ ‘ಪ್ರಶಾಂತ್ ಪಚ್ಚಿ’..!
ಚಿತ್ರರಂಗದಲ್ಲಿ ಪ್ರಶಾಂತ್ ಪಚ್ಚಿ ಎಂದರೆ ತಕ್ಷಣವೆ ನೆನಪಾಗುವುದು ಇವರು ಕ್ಲಿಕ್ಕಿಸಿದ ಅದ್ಭುತ ಫೋಟೋಗಳು, ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಹಾಗೆ ಯಾರಿಗೂ ಕ್ಲಿಕ್ಕಿಸಲಾಗದ ಅದ್ಭುತ ಅಚ್ಚರಿಯ ಫೋಟೋಗಳು ಇವರ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಇವರು ಒಬ್ಬ ಮಾಂತ್ರಿಕ ಛಾಯಾಗ್ರಾಹಕ ಎಂದರೆ ತಪ್ಪಲ್ಲ, ಇವರು ಕ್ಲಿಕ್ಕಿಸಿದ ಎಲ್ಲಾ ಫೋಟೋಗಳು ಭಾರಿ ಪ್ರಮಾಣದಲ್ಲಿ ವೈರಲ್ ಆಗುತ್ತದೆ, ಸ್ಟಾರ್ ಗಳ ಫೇವರೆಟ್ ಫೋಟೋಗ್ರಾಫರ್ ಈ ನಮ್ಮ ಉತ್ತರ ಕರ್ನಾಟಕದ ಹೈದ.
ಈ ಫೋಟೋಗಳ ಜಾದೂಗಾರ ಮೂಲತಃ ಗದಗ ಜಿಲ್ಲೆಯ ಬಿಂಕದಕಟ್ಟಿ ಎಂಬ ಹಳ್ಳಿಯವರು, ಇವರ ಜನನ ಅಕ್ಟೋಬರ್ 11/ 1994, ಇವರ ತಂದೆ ಬಸವರಾಜ್ ಮಲಗವಿ, ತಾಯಿ ಲಕ್ಷ್ಮವ್ವ, ಇವರು ಮನೆಯ ಕಿರಿಯ ಪುತ್ರ, ಇವರ ಸಹೋದರರು ರಾಜು ಮತ್ತು ಚೇತನ್.
ಚಿಕ್ಕ ವಯಸ್ಸಿನಲ್ಲಿ ಮನೆಯ ಜವಾಬ್ಧಾರಿ ಹೆಗಲ ಮೇಲೆ ಹೊತ್ತು , ತಾನು ಎಸೆಸೆಲ್ಸಿ ಓದುವಾಗಲೇ ಕೆಲಸ ಮಾಡುವುದಕ್ಕೆ ಶುರುಮಾಡಿದ್ದರು, ಇವರ ಕುಟುಂಬ ಆರ್ಥಿಕವಾಗಿ ಉತ್ತಮವಾಗಿ ಇರಲಿಲ್ಲ, ಕಷ್ಟದ ನಡುವೆ ಜೇವನವನ್ನು ನೋಡಿ ಬೆಳದು ಇವರು ಜೀವನೋಪಾಯಕ್ಕಾಗಿ ಅಡುಗೆ ಕೆಲಸದವರಾಗಿ ಬೆಂಗಳೂರಿಗೆ ಬಂದರು.
ಹೌದು 1 ಕ್ಯಾಟರಿಂಗ್ ಅಲ್ಲಿ ಅಡಿಗೆ ಕೆಲಸಕ್ಕೆ ಇವರು ಬೆಂಗಳೂರಿಗೆ ಬಂದರು, ಮೊದಮೊದಲು ಇಂತಹ ದೊಡ್ಡ ಬೆಂಗಳೂರಿನಲ್ಲಿ ಕೆಲಸ ಮಾಡಿ ಬೇಸತ್ತು ಪ್ರಯೋಜನವಿಲ್ಲವೆಂದು ಮರಳಿ ತಮ್ಮ ಊರಿಗೆ ವಾಪಸ್ಸಾದರು, ಊರಲ್ಲಿರುವ ತನ್ನ ತಂದೆಯ ಚಿಕ್ಕ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಅದರ ಜೊತೆಗೆ ಓದುತ್ತಾ ಜೀವನ ಕಳೆಯುತ್ತಿದ್ದರು, ಈಗಲೂ ಇವರ ತಂದೆ ಊರಿನಲ್ಲಿ ಟೀ ಅಂಗಡಿಯನ್ನು ನಡೆಸುತ್ತಿದ್ದಾರೆ.
ಪ್ರಶಾಂತ್ ಅವರು ವಿದ್ಯೆಯಲ್ಲಿ ಬುದ್ಧಿವಂತ ರಾಗಿರಲಿಲ್ಲ, ಪಿಯುಸಿಯಲ್ಲಿ ಫೇಲಾದರೂ, ಫೇಲಾದ ಬಳಿಕ ಜೀವನಕ್ಕೆ ಏನು ಮಾಡಬೇಕು ಎಂದು ತಿಳಿಯದ ಇವರು ತಮ್ಮ ಬಡ ಕುಟುಂಬವನ್ನು ನೋಡುತ್ತಾ ಜೀವನದಲ್ಲಿ ಏನಾದರೂ ಮಾಡಲೇಬೇಕು ಹೇಗಾದರೂ ಮಾಡಿ ಒಂದು ಒಳ್ಳೆ ಹೆಸರು ಮಾಡಲೇಬೇಕು ಎಲ್ಲಾದರೂ ಕೆಲಸ ಮಾಡುತ್ತಾ ಜೀವ ನಡೆಸಬೇಕು ಎಂದು ಛಲದಿಂದ ಡಿಸೈಡ್ ಮಾಡಿದರು.
ಇವರ ಸಹೋದರ ಬೆಂಗಳೂರಿನಲ್ಲಿ ಒಂದು ಸ್ಟುಡಿಯೋದಲ್ಲಿ ವಿಡಿಯೋ ಎಡಿಟರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು, ಆದರಿಂದ ಇವರ ಅಣ್ಣ ಇವರನ್ನು ತನ್ನ ಊರಿನಲ್ಲಿ ಇರುವ ಹೂವಿನ ಅಡಗಲಿ ಎಂಬ ಸ್ಟುಡಿಯೋದಲ್ಲಿ ಕೆಲಸಕ್ಕೆ ಸೇರಿಸಿದರು, ಮೂರು ತಿಂಗಳುಗಳ ಕಾಲ ಸ್ಟುಡಿಯೋದಲ್ಲಿ ಪ್ರಶಾಂತ್ ಅವರು ಕಸಗುಡಿಸಿ, ಸ್ಟುಡಿಯೋ ಕ್ಲೀನ್ ಮಾಡುವ ಕೆಲಸವನ್ನು ಮಾಡುತ್ತಿದ್ದರು, ಕಂಪ್ಯೂಟರ್ ಅನ್ನು ಹೇಗೆ ಉಪಯೋಗಿಸಬೇಕು ಎನ್ನುವ ಅರಿವಿಲ್ಲದ ಇವರು ದಿನೇದಿನೇ ಬೇರೆಯವರನ್ನು ನೋಡಿ ಬೇರೆಯವರಿಂದ ಸ್ವಲ್ಪ ಸ್ವಲ್ಪ ಕಂಪ್ಯೂಟರ್ ಬಳಕೆಯನ್ನು ಕಲಿತುಕೊಂಡರು.
ಆ ಸ್ಟುಡಿಯೋ ಮಾಲೀಕರೆ ಇವರಿಗೆ ಆಶ್ರಯವನ್ನು ಸಹ ಕೊಟ್ಟಿದ್ದರು, ದಿನಕಳೆದಂತೆ ಕ್ಯಾಮರಾದ ಬಗ್ಗೆ ಮತ್ತು ಫೋಟೋ ತೆಗೆಯುವುದನ್ನು ಸಹ ಇವರು ಕಲಿತುಕೊಂಡರು ನಂತರ ಚಿಕ್ಕ-ಚಿಕ್ಕ ಫಂಕ್ಷನ್ ಗಳಿಗೆ ಛಾಯಾಗ್ರಾಹಕನಾಗಿ ಹೋಗುತ್ತಿದ್ದರು, ಹೀಗೆ ಕೆಲವು ತಿಂಗಳುಗಳ ಕಾಲ ಹಗಲು-ರಾತ್ರಿಯೆನ್ನದೆ ಕೆಲಸ ಮಾಡುತ್ತಿದ್ದರು, ನಂತರ ಇನ್ನು ಏನಾದರೂ ಮಾಡಬೇಕು ಎಂದು ಮತ್ತೆ 2015ರಲ್ಲಿ ಬೆಂಗಳೂರಿನ ಕಡೆಗೆ ತಮ್ಮ ಸಹೋದರನ ಸಹಾಯದಿಂದ ಬಂದರು.
ಬೆಂಗಳೂರಿಗೆ ಬಂದಾಗ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಬೇರೆ ಯಾರದೋ ರೂಮಿನಲ್ಲಿ ಆಶ್ರಯ ಪಡೆದು ಹಗಲು-ರಾತ್ರಿಯೆನ್ನದೆ ತಮ್ಮ ಕ್ಯಾಮರಾವನ್ನು ನಂಬಿ ಛಾಯಾಗ್ರಾಹಕ ವೃತ್ತಿಯನ್ನು ಮಾಡುತ್ತಿದ್ದರು, ಇವರ ಕೈಗೆ ಕ್ಯಾಮೆರಾ ಸಿಕ್ಕರೆ ಸಾಕು ಎಲ್ಲರ ಮನಸ್ಸನ್ನು ಸೆಳೆಯುವ ಫೋಟೋ ಇವರು ತೆಗೆಯುತ್ತಾರೆ,
ಹೀಗೆ ಕೆಲಸ ಮಾಡುತ್ತಾ ಮಾಡುತ್ತಾ ತಮ್ಮ ವೃತ್ತಿಯಲ್ಲಿ ಮದುವೆ ಸಮಾರಂಭಗಳಿಗೆ ಫೋಟೋ ತೆಗೆಯುವ ಜೊತೆಗೆ ಸೆಲೆಬ್ರಿಟಿಗಳ ಈವೆಂಟ್ಗಳು, ಮಾಡಲಿಂಗ್ ಗಳಿಗೆ ಫೋಟೋಗ್ರಾಫರ್ ಆಗಿ ಹೋಗಲು ಆರಂಭಿಸಿ ಯಶಸ್ಸನ್ನು ಕಂಡರು.
ಒಂದು ಚಿಕ್ಕ ಸ್ಟುಡಿಯೋ ಇಂದ ಆರಂಭಿಸಿದ ಇವರ ವೃತ್ತಿ ಇವತ್ತು ಎಲ್ಲಾ ಸೆಲೆಬ್ರಿಟಿಗಳ ಫೇವರೆಟ್ ಫೋಟೋಗ್ರಾಫರ್ ಆಗಿ ಬೆಳೆದಿದ್ದಾರೆ, ಸ್ಟಾರ್ಸ್ ಗಳಾದ ಶಿವಣ್ಣ, ಕಿಚ್ಚ ಸುದೀಪ್, ರಮೇಶ್ ಅರವಿಂದ್, ಪ್ರಭಾಸ್, ತಮ್ಮನ್ನ, ಕರೀನಾ ಕಪೂರ್, ಇನ್ನು ಮುಂತಾದ ಸ್ಟಾರ್ಸ್ ಗಳ ಅದ್ಭುತವಾದ ಫೋಟೋವನ್ನು ಕ್ಲಿಕ್ಕಿಸಿದ್ದಾರೆ, ಇವರು ತೆಗೆದಿರುವ ಫೋಟೋವನ್ನು ಇಷ್ಟಪಟ್ಟು ಸ್ಟಾರ್ ಗಳೆ ಇವರ ಜೊತೆ ಸೆಲ್ಫಿ ಅನ್ನು ಕೂಡ ತೆಗೆದುಕೊಂಡಿದ್ದಾರೆ.
ನಮ್ಮ ಪ್ರಶಾಂತ್ ಅವರು ಫೋಟೋಗ್ರಫಿಯನ್ನು ಎಷ್ಟರಮಟ್ಟಿಗೆ ಇವರು ಇಷ್ಟಪಡುತ್ತಾರೆ ಎಂದರೆ ಆಗಸ್ಟ್ 19 ವರ್ಲ್ಡ್ ಫೋಟೋಗ್ರಫಿ ದಿನದಂದೇ ತನ್ನ ಪ್ರೇಯಸಿ ಚೈತ್ರಾಳ ಜೊತೆ ವೈವಾಹಿಕ ಜೀವನವನ್ನು ಸಹ ಆರಂಭಿಸಿದ್ದಾರೆ, ಈಗ ಪುಟ್ಟ ಮಗುವಿನೊಂದಿಗೆ ಇವರ ಕುಟುಂಬ ಸಂತೋಷದಿಂದ ಕೂಡಿದೆ, ಕ್ಯಾಮೆರಾ, ಹೆಂಡತಿ ಮತ್ತು ಮಗು ನನ್ನ ಆಸ್ತಿ ಎಂದು ಹೇಳುವ ಪ್ರಶಾಂತ್ ಪಚ್ಚಿ ಅವರು ಯಶಸ್ಸನ್ನು ಕಂಡರು, ಸ್ಟಾರ್ಸ್ ಗಳ ಜೊತೆ ಕೆಲಸ ಮಾಡಿದರು, ಸೆಲೆಬ್ರಿಟಿಗಳ ಫೇವರೆಟ್ ಫೋಟೋಗ್ರಾಫರ್ ಎಂಬ ಬಿರುದು ಇದ್ದರು ಯಾವುದೇ ಅಹಂ ಇಲ್ಲದೆ ಬಹಳ ಸರಳ ಜೀವನವನ್ನು ನಡೆಸುತ್ತಿದ್ದಾರೆ.
ಹೀಗೆ 8 ವರ್ಷಗಳ ಕಾಲ ಕಷ್ಟಪಟ್ಟು ಬೆಳೆದ ನಮ್ಮ ಛಾಯಾಗ್ರಹದ ಜಾದುಗಾರ ಪ್ರಶಾಂತ್ ಪಚ್ಚಿ ಇನ್ನು ಎತ್ತರಕ್ಕೆ ಬೆಳೆಯಲಿ ಇನ್ನು ಹೆಚ್ಚು ಮಟ್ಟದಲ್ಲಿ ಇವರ ಫೋಟೋಗಳು ವೈರಲ್ ಆಗಲಿ ಎಂದು ಆಶಿಸೋಣ.
ಯಾರಾದರೂ ಇವರನ್ನು ಮದುವೆ ಸಮಾರಂಭಗಳಿಗೆ ಅಥವಾ ಫೋಟೋಶೂಟ್ ಗಳಿಗೆ ಸಂಪರ್ಕಿಸಬೇಕು ಎಂದರೆ ಕೆಳಗಿರುವ ಇ-ಮೇಲ್ ಮತ್ತು ಮೊಬೈಲ್ ನಂಬರ್ ಗೆ ಸಂಪರ್ಕಿಸಿ:prashantpachi8951@gmail.com
9886242294
–ದಿವ್ಯಶ್ರೀ. ವಿ
ಬೆಂಗಳೂರು
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ದಾವಣಗೆರೆ | ವಿನೋಬನಗರದ ಶ್ರೀ ಚೌಡೇಶ್ವರಿ ಜಾತ್ರೆ ಸಂಭ್ರಮ
-
ದಿನದ ಸುದ್ದಿ6 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ4 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ