Connect with us

ದಿನದ ಸುದ್ದಿ

ಅನ್ನದಾತನ ಉನ್ನತಿಗಾಗಿ ಸಮಾಜಮುಖಿ ಶ್ರಾವಣಾನುಷ್ಟಾನ ಕೈಗೊಂಡಿರುವ ತರಳಬಾಳು ಶ್ರೀ ಜಗದ್ಗುರುವರ್ಯರು

Published

on

ನ್ನಡನಾಡಿನ ಹಬ್ಬ ಹರಿದಿನಗಳ ಸಂಖ್ಯೆಗೆ ಕಡಿವಾಣವ ಹಾಕುವ ಕಾರ್ಯ ಆ ವಿಧಾತನಿಂದಲೂ ಸಾಧ್ಯವಿಲ್ಲ.ಜನರ ಉದ್ದಾರಕ್ಕೂ ? ತಮ್ಮ ಅಸ್ತಿತ್ವದ ಕಡ್ಡಾಯ ಅಭಿವ್ಯಕ್ತಿಗೋ ? ಮುಗ್ಧ ಭಕ್ತರ ಭಾವನೆಯ ಬಂಡವಾಳದ ಸದುಪಯೋಗಕ್ಕೊ,? ಧಾರ್ಮಿಕ ದಬ್ಬಾಳಿಕೆಯ ಪ್ರತಿಷ್ಠೆಗೋ ? ಪ್ರಶ್ನೆ ಮಾಡಲು ಯಾವ ಬುದ್ಧಿವಂತನೂ ಇಲ್ಲ ಎನ್ನುವ ಪರಿಸ್ಥಿತಿಯ ಲಾಭ ಹಾಗೂ ಸ್ವಪ್ರಶಂಸೆಯಿಂದಲೊ ? ಈ ನೆಲದ ಕರ್ಮವೋ,ಎಂಬಂತೆ ನಿತ್ಯವೂ ಸರ್ವಅಲಂಕಾರ ಭೂಷಿತ ಸ್ವಘೋಷಿತ ದೇವಮಾನವ ಕಪಟ ಕಾವಿಧಾರಿಗಳಿಂದಅಡ್ಡ ಪಲ್ಲಕ್ಕಿ, ಉದ್ದಪಲ್ಲಕ್ಕಿ ,ಹೋಮ,ಹವನ,ಯಜ್ಞ ,ಲಕ್ಷ ಪೂಜೆ, ಕೋಟಿ ಪೂಜೆ ಹೀಗೆ ಹೊಸ ಹೆಸರಿಡಲು ಸಾಧ್ಯವಿರದಷ್ಟು ಅತೀರೇಖದ ಅವಿವೇಕಿಗಳ ನಾಟಕಕ್ಕೆ ಮುಗ್ದ ಸಮಾಜ ‘ಭಕ್ತರು ‘ ‘ ಶಿಷ್ಯರು’ ಎಂಬ ಹೆಸರಲ್ಲಿ ಕಣ್ಣಿದ್ದು ಕುರುಡರಾಗಿ,ಕಿವಿ ಇದ್ದು ಕಿವುಡರಾಗಿ ಅವರಾಡುವ,ಆಡಿಸುವ ಡೋಂಗಿ ನಾಟಕಕ್ಕೆ ಪ್ರೇಕ್ಷಕರಾಗಿ ಕೆಲವೊಮ್ಮೆ ದಿಢೀರ್ ಪಾತ್ರಧಾರಿಗಳಾಗಿ ಪ್ರಬುದ್ಧ ನಾಗರಿಕ ಸಮಾಜ ಹಂಗಿಸುವ ಗುಲಾಮರಂತೆ ಚಾಚು ತಪ್ಪದೆ ಕಾರ್ಯಪ್ರವೃತ್ತರಾಗಿರುವುದು ಸಮಾಜದ ದುರಂತವೇ ಸರಿ.

ಈ ಶ್ರಾವಣ ಮಾಸವೆಂದರೆ ಅದು ಪೂಜೆ ಅನುಷ್ಠಾನಗಳಿಗೆ ಒಳ್ಳೆಯ ಮಾರುಕಟ್ಟೆ. ಉತ್ಸವ ಹಾಗೂ ಪಲ್ಲಕ್ಕಿ ಪ್ರಿಯರಾದ ಕಾವಿಧಾರಿಗಳಿಗಂತೂ ಫುಲ್ ಕಲೆಕ್ಷನ್ ಹಾಗೂ ಸಂವಿಧಾನದಲ್ಲೇ ಉಲ್ಲೇಖ ಇಲ್ಲದ ಸ್ವಯಂ ಘೋಷಿತ ಕಾನೂನಿನ ನಿರ್ಮಾತೃಗಳಂತೆ
ತಮ್ಮ ಸರಹದ್ದಿನ ವ್ಯಾಪ್ತಿಯಲ್ಲಿ ಮತ್ತೋರ್ವ ಮಠಾಧೀಶರು ಬಂದರೆ ತಮ್ಮ ವ್ಯಾಪರಕ್ಕೆ ಎಲ್ಲಿ ಭಂಗ ಬರುತ್ತದೆಯೋ ಎಂಬ ಉದರ ಸಂಕಟದಿಂದ ತಮ್ಮ ಸುತ್ತಲಿನ ಅರೆಬೆಂದ ಮತಿಹೀನರನ್ನು ಧರ್ಮದ ಹೆಸರಿನಲ್ಲಿ ಎತ್ತಿಕಟ್ಟಿ ಧಮಕೀ ಹಾಕಿದ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ.ಇಂತಹ ವಿಷ ವರ್ತುಲದಲ್ಲಿ ಕಾಯಕವೇ ಕೈಲಾಸ ಅದುವೇ’ ಕರ್ತವ್ಯದ ಉದ್ದೇಶ’ ಎಂದು,ನಾಳೆ ಬಪ್ಪುದು ನಮಗಿಂದೇ ಬರಲಿ, ಇಂದು ಬಪ್ಪುದು ನಮಗೀಗಲೇ ಬರಲಿ ಎಂಬ ಶರಣರ ಸಂಕಲ್ಪದಂತೆ ರೈತರ ಬದುಕು ನಿತ್ಯವೂ ಶ್ರಾವಣವಾಗಲೆಂದು ತ್ರೀಕಾಲವೂ ಅನ್ನಧಾತನ ಅಭ್ಯುಧಯಕ್ಕೆ ಕೈಂಕರ್ಯ ಬದ್ದರಾಗಿರುವ ರೈತಮೆಚ್ಚಿದ ಗುರುವಾಗಿ ಪ್ರತ್ಯಕ್ಷ ದೇವರೆಂದೇ ನಾಮಾಂಕಿತರಾದ ಪರಮ ಪೂಜನೀಯ ಶ್ರೀ ಮದುಜ್ಠಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ೧೧೦೮ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ಶ್ರಾವಣಾನುಷ್ಟಾನ ದೇಶವೇ ಮೆಚ್ಚುವಂತಹದ್ದು.

ಭರಪೂರ ಮಳೆಯ ಪರಿಣಾಮ ನಾಡಿನ ಎಲ್ಲಾ ಜಲಾಶಯಗಳು ಭರ್ತಿಯಾಗಿ ಪ್ರತಿದಿನವೂ 3 ರಿಂದ 4 ಲಕ್ಷ ಕ್ಯೂಸೆಕ್ಸ್ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿಯುತ್ತಿರುವ ದೃಶ್ಯವನ್ನು ಹಳ್ಳಿಯ ಜನ ತಮ್ಮ ಬಿರುಕುಬಿಟ್ಟ ಕೆರೆಯ ದಡಗಳಲ್ಲಿ ನಿಂತು ನೋಡುತ್ತಿದ್ದರೆ ಹೃದಯ ಕಲಕುತ್ತದೆ.ಆಳುವ ಸರ್ಕಾರಗಳ ದೂರದರ್ಶಿತ್ವದ ಶಾಶ್ವತ ರೈತ ಸ್ನೇಹಿ ಯೋಜನೆಗಳು ರೂಪುಗೊಳ್ಳದ ಫಲವಾಗಿ ಅನ್ನಧಾತ ಇಂದು ಆತ್ಮಹತ್ಯೆಯ ಜಾಡು ಹಿಡಿದಿದ್ದಾನೆ.

ತರಳಬಾಳು ಶ್ರೀ ಜಗದ್ಗುರುವರ್ಯರ ಮಾತಿನಲ್ಲಿಯೇ ಹೇಳುವುದಾದರೆ ರೈತರಿಗೆ ಯಾವ ಭಾಗ್ಯವೂ ಬೇಡ ಸಮರ್ಪಕವಾದ ನೀರು ಮತ್ತು ವಿದ್ಯುತ್ ನೀಡಿದರೆ ರೈತರೇ ಸರ್ಕಾರಕ್ಕೆ ಸಾಲ ನೀಡುವಂತಾಗುತ್ತಾರೆ ಎಂಬುದರಲ್ಲಿ ಎಷ್ಟೊಂದು ಅರ್ಥವಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಮೇಲಿನ ನಂಬಿಕೆ ಅನ್ನಧಾತನ ಮನದಲ್ಲಿ ಅಳಿದು. ಧಾರ್ಮಿಕ ನೇತಾರರ ಸಾಮಿಪ್ಯದಿ ನಮ್ಮ ಕಾರ್ಪಣ್ಯಕ್ಕೆ ಉತ್ತರವಿದೆ ಎಂಬ ಆಶಾಭಾವನೆ ಉಳಿದಿದೆ. ಸಂಪ್ರದಾಯಸ್ಥ ಸತ್ಯ ತತ್ವಾದಾರ್ಶ ಧಾರ್ಮಿಕ ಪೀಠದ ಅಧಿಪತಿಗಳಿಗೆ ಶ್ರಾವಣ ಮಾಸವನ್ನು ಸಮಾಜದ ಶ್ರೇಯೋಭಿವೃದ್ದಿಯ ಪೂಜಾ ಕೈಂಕರ್ಯಗಳ ಅಣಿಯಾಗಿದ್ದರೆ ಕಪಟ ಕಾವಿಧಾರಿಗಳಿಗೆ ಶ್ರಾವಣ ಮಾಸ ಕೇವಲ ಅತ್ಯುತ್ತಮ ವಹಿವಾಟಿನ ತಿಂಗಳಾಗಿದೆ. ಇವೆರೆಡಕ್ಕಿಂಲೂ ಬಿನ್ನವಾಗಿ ಬಸವ ಮರುಳಸಿದ್ದರ ವೈಚಾರಿಕ ತತ್ವ ಪರಂಪರೆಯ ವಿದ್ವತ್ತಿನ ಸಂಗಮವಾದ ತರಳಬಾಳು ಶ್ರೀ ಗಳು ಬೆಂಗಳೂರಿನ ಆರ್ ಟಿ ನಗರದಲ್ಲಿರುವ ತರಳಬಾಳು ಕೇಂದ್ರದಲ್ಲಿ ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ, ಎಲ್ಲಾ ಪರಿಣಿತ ಎಂಜಿನಿಯರ್ ಗಳ ಸಭೆಯನ್ನು ತಮ್ಮ ಸಾನ್ನಿಧ್ಯದಲ್ಲಿ ಏರ್ಪಡಿಸಿ.ರಾಜಕೀಯ ರಂಗದ ಅಪರೂಪ ಜನಸ್ನೇಹಿ ಚಿಂತಕ ಬಿ.ಎಲ್.ಶಂಕರ್ ಅಧ್ಯಕ್ಷತೆಯಲ್ಲಿ ದಾವಣಗೆರೆಯಿಂದ ವ್ಯರ್ಥವಾಗಿ ಹರಿಯುತ್ತಿರುವ ಭದ್ರಾ ನದಿಯ ನೀರನ್ನು ಜಗಳೂರು ಹಾಗೂ ಭರಮಸಾಗರ ವ್ಯಾಪ್ತಿಯ ಕೆರೆಗಳಿಗೆ ಶೀಘ್ರವಾಗಿ ಮತ್ತು ಸಮರ್ಪಕವಾಗಿ ಹರಿಸುವ ವಿಸ್ತೃ ಯೋಜನೆಯ ಬಗ್ಗೆ ವಿಸ್ತೃತ ಚರ್ಚೆ ನಡೆಸುತ್ತಿರುವ ಮಾಹಿತಿಯನ್ನು ಸಮಾಜ ಭಾಂಧವರಿಗೆ ತಿಳಿಸಲೇಬೇಕಾಗುತ್ತದೆ .
ರಾಜನಹಳ್ಳಿ ಏತ ನೀರಾವರಿಯ ಯೋಜನೆಯ1 ನೇ ಹಂತದ ಯೋಜನೆಯಲ್ಲಿ ದಾವಣಗೆರೆ ಮತ್ತು ಜಗಳೂರು ತಾಲ್ಲೂಕಿನ 23ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಳೆದ ವರ್ಷದಿಂದಲೇ ಜಾರಿಯಲ್ಲಿದೆ.ಆದರೂ ಹಲವು ತಾಂತ್ರಿಕ ದೋಷಗಳಿಂದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಫಲಪ್ರದವಾಗಿರಲಿಲ್ಲ, ಮಲೆನಾಡಿನಲ್ಲಿ ವಿಪರೀತ ಮಳೆಯಾಗಿ ತುಂಗಾ ಮತ್ತು ಭದ್ರಾ ಜಲಾಶಯಗಳು ತುಂಬಿ ಹರಿದು,ಹೆಚ್ಚುವರಿ ನೀರನ್ನು ಜಲಾಶಯಗಳಿಂದ ಹೊರಬಿಡುತ್ತಿದ್ದರೂ ಸಹ ತಾಂತ್ರಿಕ ಕಾರಣಗಳಿಂದ ಸುತ್ತಲಿನ ಕೆರೆಗಳಿಗೆ ನೀರು ಬಾರದರಿರುವುದು ಶ್ರೀಗಳ ಬೇಸರಕ್ಕೆ ಕಾರಣವಾಗಿದೆ. ಹೆಚ್ಚುವರಿ ನೀರಿನಿಂದ ಆಡಳಿತ ಮತ್ತು ಅಧಿಕಾರಿಗಳ ಜಾಗೃತಿವಹಿಸಿದ್ದರೆ ಎಲ್ಲಾ ಕೆರೆಗಳಿನ್ನು ತುಂಬಿಸಬಹುದಿತ್ತೆಂಬುದು ಮನೋ ಇಂಗಿತ.

ಈ ನಿಟ್ಟಿನಲ್ಲಿ ಈ ಯೋಜನೆಯಲ್ಲಿ ಇರುವ ದೋಷಗಳನ್ನು ಸರಿಪಡಿಸಿ 1 ನೇ ಹಂತದ ಯೋಜನೆಯ ಎಲ್ಲಾ ಕೆರೆಗಳಿಗೆ ಶತಾಯಗತಾಯ ನೀರು ತುಂಬಿಸುವಂತೆ ಶ್ರೀಗಳು ತಾಕೀತು ಮಾಡಿದರು.ಜಗಳೂರು ತರಳಬಾಳು ಹುಣ್ಣಿಮೆಯ ರೈತಕೊಡುಗೆ ಎನ್ನುವಂತೆ 2 ನೇ ಹಂತದ 2
ಯೋಜನೆಗಳಿಗೆ 500 ಕೋಟಿ ರೂಪಾಯಿ ಅನುದಾನ ಬಜೆಟ್ನಲ್ಲಿ ದೊರೆತಿದ್ದು,ಮೊದಲ ಹಂತದಲ್ಲಿ ಕಂಡುಬಂದ ಎಲ್ಲಾ ನ್ಯೂನತೆಗಳು 2 ನೇ ಹಂತದ ಕಾರ್ಯಯೋಜನೆಯಲ್ಲಿ ಪುನರಾವರ್ತನೆಯಾಗದಂತೆ ಎಚ್ಚರವಹಿಸಲು ಕ್ರಮವಹಿಸಿವ ಪರಮರ್ಶೆಯನ್ನು ಶ್ರೀಗಳು ನಡೆಸಿದರು.

ಜೊತೆಗೆ ಚಿಕ್ಕಮಂಗಳೂರು ಜಿಲ್ಲೆಯ ಹಬ್ಬೆ ಫಾಲ್ಸ್ ,ಮದಗದಕೆರೆ,ಅಯ್ಯನಕೆರೆ,ಲಿಂಗದಹಳ್ಳಿ ವ್ಯಾಪ್ತಿಯ ಎಲ್ಲಾ ಕೆರೆಗಳಿಗೆ ನೀರು ಹರಿಸುವ ಕುರಿತು ಶ್ರೀಗಳು ಸಮಾಲೋಚನೆ ನಡೆಸಿದರು. ಅಧಿಕಾರಿಗಳ ಮೇಲೆ ನಿಯಮಿತ ಒತ್ತಡ ಹಾಕಿದರೆ ಸಾರ್ವಜನಿಕ ಕೆಲಸಗಳು ಆಗುವುದು ಕಷ್ಟ ಎಂದು ಅರಿತಿರುವ ಶ್ರೀಗಳು ,ಈ ಸಭೆಯ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕ್ರಮಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ನೀರಾವರಿ ನಿಗಮದ ಚೀಫ್ ಎಂಜಿನಿಯರ್ ಗಳು,ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಅಧಿಕಾರಿಗಳು ಹಾಜರಿದ್ದರು.

ರೈತಾಭ್ಯುದಯದ ಕಲ್ಯಾಣದ ಕನಸೇ ಶ್ರೀ ಜಗದ್ಗುರುವರ್ಯರ ಅಂತರಾಳದ ಆಶಯ ತ್ರೀಕಾಲವೂ ಸಮಾಜದ ಉತ್ಕೃಷ್ಟ ಉನ್ನತಿಗೆ ಶ್ರಮದಋಷಿಯಂತೆ ಕೈಂಕರ್ಯಬದ್ದರಾಗಿರುವ ಪರಮಾರಾಧ್ಯ ಶ್ರೀಗಳ ಪವಿತ್ರ ಪಾದಗಳಲ್ಲಿ ಭಕ್ತಿ ಪೂರ್ವಕ ಪ್ರಣಾಮಗಳನ್ನು ಸಲ್ಲಿಸಲಷ್ಟೇ ನಮಗೆ ಸಾಧ್ಯ.

-ಬಸವರಾಜ ಸಿರಿಗೆರೆ

ದಿನದ ಸುದ್ದಿ

ಮೇ 22 | ಇಂದಿನ ಅಡಿಕೆ ದರ

Published

on

ಇಂದು, ಮೇ 22, 2025 ರಂದು ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ದರಗಳು ಹೀಗಿವೆ (ಪ್ರತಿ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ):

ಶಿವಮೊಗ್ಗ ಮಾರುಕಟ್ಟೆ:

ರಾಶಿ: ₹48,169 (ಕನಿಷ್ಠ) – ₹58,099 (ಗರಿಷ್ಠ), ಮೋಡಲ್ ಬೆಲೆ: ₹55,869
ಸರಕು: ₹60,399 (ಕನಿಷ್ಠ) – ₹92,510 (ಗರಿಷ್ಠ), ಮೋಡಲ್ ಬೆಲೆ: ₹77,009
ಬೆಟ್ಟೆ: ₹51,319 (ಕನಿಷ್ಠ) – ₹58,219 (ಗರಿಷ್ಠ), ಮೋಡಲ್ ಬೆಲೆ: ₹57,989
ಗೊರಬಲು: ₹15,499 (ಕನಿಷ್ಠ) – ₹30,699 (ಗರಿಷ್ಠ), ಮೋಡಲ್ ಬೆಲೆ: ₹28,429

ಚನ್ನಗಿರಿ ಮಾರುಕಟ್ಟೆ (ದಾವಣಗೆರೆ):

ರಾಶಿ: ₹41,199 (ಕನಿಷ್ಠ) – ₹59,312 (ಗರಿಷ್ಠ), ಮೋಡಲ್ ಬೆಲೆ: ₹57,767

ಸಾಗರ ಮಾರುಕಟ್ಟೆ (ಶಿವಮೊಗ್ಗ):

ಚಾಲಿ: ₹35,699 (ಕನಿಷ್ಠ) – ₹37,141 (ಗರಿಷ್ಠ), ಮೋಡಲ್ ಬೆಲೆ: ₹36,699
ಬಿಳೆಗೋಟು: ₹21,611 (ಕನಿಷ್ಠ) – ₹25,587 (ಗರಿಷ್ಠ), ಮೋಡಲ್ ಬೆಲೆ: ₹24,111
ಕೆಂಪುಗೋಟು: ₹17,599 (ಕನಿಷ್ಠ) – ₹27,499 (ಗರಿಷ್ಠ), ಮೋಡಲ್ ಬೆಲೆ: ₹24,919
ರಾಶಿ: ₹22,899 (ಕನಿಷ್ಠ) – ₹57,470 (ಗರಿಷ್ಠ), ಮೋಡಲ್ ಬೆಲೆ: ₹56,621

ಕುಮಟಾ ಮಾರುಕಟ್ಟೆ (ಉತ್ತರ ಕನ್ನಡ):

ಚಿಪ್ಪು: ₹11,199 (ಕನಿಷ್ಠ) – ₹26,919 (ಗರಿಷ್ಠ), ಮೋಡಲ್ ಬೆಲೆ: ₹24,549
ಕೋಕಾ: ₹6,899 (ಕನಿಷ್ಠ) – ₹22,189 (ಗರಿಷ್ಠ), ಮೋಡಲ್ ಬೆಲೆ: ₹20,429
ಹಣ್ಣು: ₹32,589 (ಕನಿಷ್ಠ) – ₹42,500 (ಗರಿಷ್ಠ), ಮೋಡಲ್ ಬೆಲೆ: ₹39,729

ಚಿತ್ರದುರ್ಗ ಮಾರುಕಟ್ಟೆ:

ರಾಶಿ: ₹52,449 (ಕನಿಷ್ಠ) – ₹52,899 (ಗರಿಷ್ಠ), ಮೋಡಲ್ ಬೆಲೆ: ₹52,679

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಾದಕ ವ್ಯಸನಿಗಳು ಸಮಾಜಘಾತುಕ ವ್ಯಕ್ತಿಗಳು : ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ.ಕರೆಣ್ಣವರ

Published

on

ಸುದ್ದಿದಿನ,ದಾವಣಗೆರೆ:ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಯುವಕ – ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಗಾಂಜಾ, ಹಫೀಮು, ಬೌನ್‌ಶುಗರ್, ಕೋಕೆನ್, ನಿಕೋಟಿನ್‌ನಂತಹ ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಇವರೆಲ್ಲಾ ಸಮಾಜಘಾತುಕ ವ್ಯಕ್ತಿಗಳು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಇವರ ಸಂಯುಕ್ತಶ್ರಯದಲ್ಲಿ ಗುರುವಾರ ನಗರದ ಭಾಷಾ ನಗರದಲ್ಲಿನ ನಗರ ಆರೋಗ್ಯ ಕೇಂದ್ರ (ಪ್ರಸೂತಿ ಆರೋಗ್ಯ ಕೇಂದ್ರ) ದಲ್ಲಿ ಆಯೋಜಿಸಲಾಗಿದ್ದ “ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005 ಮತ್ತು ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ” ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕವಾಗಿ ಮಾದಕ ವಸ್ತುಗಳ ಸೇವನೆ, ಮಾರಾಟ, ಸಾಗಾಣೆ ಇಂತಹ ಪ್ರಕರಣಗಳು ಕಂಡುಬAದಲ್ಲಿ ಆಲಸ್ಯ ಮಾಡದೇ ಸಂಬAಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು. ಮಾದಕ ವ್ಯಸನಗಳಿಗೆ ದಾಸರಾಗುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಗಾಢವಾದ ಪರಿಣಾಮ ಬೀರುತ್ತದೆ. ಅಲ್ಲದೇ ಪುರುಷತ್ವ ಮತ್ತು ಲೈಂಗಿಕತೆಯನ್ನು ಕುಂದಿಸುತ್ತದೆ. ಮಾದಕ ವ್ಯಸನಗಳಿಂದ ವಿವಿ ರೀತಿಯ ಕೃತ್ಯಗಳ್ಲಲಿ ಭಾಗಿಯಾಗಿ ಶಿಕ್ಷೆಗೆ ಗುರಿಯಾಗುವುದಲ್ಲದೇ ಕುಟುಂಬಗಳು ಬೀದಿಗೆ ಬರುತ್ತವೆ. ಆದ್ದರಿಂದ ವ್ಯಸನಮುಕ್ತರಾಗಿ ಸಮಾಜದಲ್ಲಿ ಮೌಲ್ಯಯುತವಾದ ಜೀವನ ಕಟ್ಟಿಕೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉನ್ನತ ಮಟ್ಟದ ವ್ಯಕತಿಗಳಾಗಿ ಬಾಳಬೇಕು. ಈ ನಿಟ್ಟಿನಲ್ಲಿ ತಮ್ಮಗಳ ಸಹಕಾರ ಅತ್ಯಗತ್ಯ ಎಂದರು.

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005 ರಲ್ಲಿ ಜಾರಿ ಮಾಡಿದ್ದು, ಕೇವಲ ದೈಹಿಕ ಹಿಂಸೆಗೆ ಸೀಮಿತಗೊಳಿಸದೆ, ಲೈಂಗಿಕ, ಮೌಖಿಕ, ಭಾವನಾತ್ಮಕ, ಆರ್ಥಿಕ, ಮತ್ತು ಮಾನಸಿಕ ಹಿಂಸೆಯನ್ನು ಸಹ ಒಳಗೊಂಡಿದೆ. ವರದಕ್ಷಿಣೆಗಾಗಿ ಕಿರುಕುಳ ನೀಡುವುದು, ಮನೆಯಿಂದ ಹೊರಹಾಕುವುದು ಇವೆಲ್ಲವೂ ದೌರ್ಜನ್ಯ ತಡೆ ಕಾಯ್ದೆ ವ್ಯಾಪ್ತಿಗೆ ಬರುತ್ತವೆ. ಕಾಯ್ದೆಯ ಮೂಲಕ ಮಹಿಳೆಯರಿಗೆ ಅರ್ಥಿಕ, ಸಾಮಾಜಿಕ, ಭದ್ರತೆಯನ್ನು ಒದಗಿಸಲಾಗುತ್ತದೆ. ಮಹಿಳೆಯರಿಗೆ ಕೌಟುಂಬಿಕ ದೌರ್ಜನ್ಯಗಳಂತಹ ದೈಹಕ ಮತ್ತು ಮಾನಸಿಕ ಹಿಂಸೆ, ಕಿರುಕುಳ ನೀಡಿದಲ್ಲಿ ಹತ್ತಿರದ ಸಖಿ ಒನ್ ಸ್ಟಾಪ್ ಸೆಂಟರ್ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಪರ್ಕಿಸಿ ಸಲಹೆ ಸೂಚನೆಗಳನ್ನು ಪಡೆಯಬಹುದು. ಇದಕ್ಕೆ ಸಂಬAಧಿಸಿದAತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಕಾರದ ವತಿಯಿಂದ ಉಚಿತ ಕಾನೂನು ನರೆವು ನೀಡಲು 40 ವಕೀಲರಿದ್ದಾರೆ. ಇದನ್ನು ಪ್ರತಿಯೊಬ್ಬರು ಸದುಪಯೋಗಪಡೆದುಕೊಳ್ಳಬೇಕು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆಗಳ ಕುರಿತು ಮಾಹಿತಿ ನೀಡಲು 15100 ಸಹಾಯವಾಣಿ ಸಂಖ್ಯೆ ಸ್ಥಾಪಿಸಿದ್ದು, ಕರೆ ಮಾಡಿ ಸೂಕ್ತ ಕಾನೂನು ಸಲಹೆ ಪಡೆಯಬಹುದು. ಸಮಾಜದಲ್ಲಿ ಹಿಂದುಳಿದ ಪ್ರತಿಯೊಬ್ಬರನ್ನು ಮುಖ್ಯವಾಹಿನಿಗೆ ತರಲು ಕಂಕಣಬದ್ದರಾಗಿ ಕಾರ್ಯನಿರ್ವಹಿಸಬೇಕು. ಈ ಎರಡೂ ಕಾಯ್ದೆಗಳು ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ಹೇಳಿದರು.

ಇದೇ ವೇಳೆ ನೆರಳು ಬೀಡಿ ಕಾರ್ಮಿಕ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಸಂವಿಧಾನ ಪೀಠಿಕೆ ವಾಚಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್ ಕುಮಾರ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯದರ್ಶಿನಿ, ತಾಲ್ಲೂಕು ಆರೋಗ್ಯಾಧಿಕಾರಿ ದೇವರಾಜ್ ಪಟ್ಟಿಗೆ, ಸಖಿ ಕೇಂದ್ರದ ಕಾನೂನು ಸಲಹೆಗಾರರಾದ ತಂಜಿಮ್ ಕೌಸರಿ, ನಗರ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಎನ್.ರೇಖಾ, ನೆರಳು ಬೀಡಿ ಕಾರ್ಮಿಕ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎಂ.ಕರಿಬಸಪ್ಪ, ಸದಸ್ಯೆ ಸಬ್ರಿನ್ ತಾಜ್ ಸೇರಿದಂತೆ ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಮೆಟ್ರಿಕ್ ನಂತರದ ಬಾಲಕ, ವಿದ್ಯಾರ್ಥಿನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ ಮತ್ತು ಪ.ವರ್ಗದ ಪಿ.ಯು.ಸಿ. ಐ.ಟಿ.ಐ. ಮತ್ತು ಡಿಪ್ಲೊಮೋ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು https://shp.karnataka.gov.in/bcwd ಆನ್‍ಲೈನ್‍ನಲ್ಲಿ ಜೂನ್ 20 ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.

ತಾಲ್ಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್ ಸೈಟ್ https://bcwd.karnataka.gov.in ನ್ನು ನೋಡಬಹುದು.

ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ bcwdhelpline@gmail.com ಇ-ಮೇಲ್ ಮುಖಾಂತರ ಅಥವಾ ಜಿಲ್ಲಾ, ತಾಲ್ಲೂಕು ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ದೂ.ಸಂ: 8050770004 ಮತ್ತು 8050770005.ಇವರನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸಲು ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending