Connect with us

ದಿನದ ಸುದ್ದಿ

ಆಪರೇಷನ್ ಹ್ಯಾಶ್ಟ್ಯಾಗ್: ರಾಜಕೀಯ, ಹಿಂದುತ್ವ ವಿಚಾರಗಳು ಟ್ವಿಟರ್ನಲ್ಲಿ ಹೇಗೆ ಟ್ರೆಂಡ್ ಆಗುತ್ತವೆ..?

Published

on

ಟ್ವಿಟರ್ ಹ್ಯಾಶ್ ಟ್ಯಾಗ್ಗಳ ಹಿಂದೆ ಕೆಲವು ಗುಂಪುಗಳು ಕೆಲಸ ಮಾಡುತ್ತಿವೆ ಎಂಬುದು ಹೊಸದೇನಲ್ಲ. ಈ ಹಿಂದೆ ಹಿಂದುತ್ವ, ಮೋದಿ ಪ್ರಣೀತ ವಿಷಯಗಳು, ಬಿಜೆಪಿ ಸರ್ಕಾರದ ಯೋಜನೆಗಳು ಇವೇ ಮೊದಲಾದ ಹ್ಯಾಶ್ಟ್ಯಾಗ್ಗಳನ್ನು ಟ್ರೆಂಡ್ ಮಾಡಲು ಸ್ವಯಂ ಸೇವಕರಿಗೆ ಹಣ ನೀಡಿ ಟ್ವೀಟ್ ಮಾಡಿಸುತ್ತಿದ್ದ ವಿಷಯ ಗೊತ್ತೇ ಇದೆ.

ಚಾಟ್ಬೋಟ್ಗಳನ್ನು ಬಳಸಿ ನಿಗದಿತ ಹ್ಯಾಶ್ ಟ್ಯಾಗ್ ಇರುವ ಟ್ವೀಟ್ಗಳು ತಂತಾನೇ ಮರು ಟ್ವೀಟ್ ಮಾಡುವ ತಂತ್ರ ಹೊಸದೇನಲ್ಲ.

ಈಗ ಫೇಸ್ಬುಕ್ನಲ್ಲಿ ಸಕ್ರಿಯವಾಗಿರುವ ಗುಂಪುಗಳು ಹಿಂದುತ್ವ ಕುರಿತ ವಿಷಯಗಳನ್ನು ಟ್ವಿಟರ್ನ ಟಾಪ್ ಟ್ರೆಂಡ್ಗೆ ತರುವ ಪ್ರಕ್ರಿಯೆಗೆ ಬೆನ್ನೆಲುಬಾಗಿ ನಿಂತಿವೆ. ಈ ರೀತಿ ಕೆಲಸ ಮಾಡುವ ನೂರಾರು ಫೇಸ್ಬುಕ್ ಖಾಸಗಿ ಗ್ರೂಪ್ಗಳು ಸಕ್ರಿಯವಾಗಿದ್ದು ಪ್ರತೀ ಗ್ರೂಪ್ಗಳು ಸಾವಿರಾರು ಸದಸ್ಯರನ್ನು ಹೊಂದಿವೆ.

ಈ ರೀತಿ ಕೆಲಸ ಮಾಡುತ್ತಿರುವ ಫೇಸ್ಬುಕ್ ಬಲಪಂಥೀಯ ಗುಂಪೊಂದು ಕಳೆದ 28 ದಿನಗಳಲ್ಲಿ ನೂರಾರು ಹಿಂದುತ್ವ ವಿಷಯ ಕುರಿತ ಹ್ಯಾಶ್ಟ್ಯಾಗ್ಗಳನ್ನು ಟ್ವಿಟರ್ನಲ್ಲಿ ಟ್ರೆಂಡ್ ಮಾಡಿದೆ. ಇದೊಂದೇ ಗುಂಪು 1700 ಪೋಸ್ಟ್ಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ ಎಂದು ಗ್ರೂಪ್ನ ಸದಸ್ಯರೊಬ್ಬರು ತಿಳಿಸಿದ್ದಾರೆ.

ಪ್ರೌಡ್ ಹಿಂದು‘ ಹೆಸರಿನ ಬಲಪಂಥೀಯ ಗುಂಪೊಂದು ತನ್ನ ಬಯೋದಲ್ಲಿ ಕೆಲವೊಂದು ವಿಷಯಗಳನ್ನು ಬರೆದುಕೊಂಡಿದೆ. ಈ ಗುಂಪನ್ನು ಸೇರಲು ವಯಸ್ಸು, ವಿದ್ಯಾರ್ಹತೆ ಏನೂ ಇಲ್ಲ. ಬದಲಾಗಿ ಗುಂಪಿನ ಸದಸ್ಯ ತನ್ನ ಅಹಂ ಅನ್ನು ಪಕ್ಕಕ್ಕಿಟ್ಟು ಗುಂಪಿನ ಅಡ್ಮಿನ್ ನೀಡುವ ವಿಷಯವನ್ನು ರೀಟ್ವೀಟ್ ಮಾಡುವ ಮೂಲಕ, ಆ ಪೋಸ್ಟ್ ಪ್ರೋತ್ಸಾಹಿಸಿ ಇನ್ನಷ್ಟು ವಿಷಯಗಳನ್ನು ಬರೆಯುವ ಮೂಲಕ ಟ್ವಿಟರ್ ಟಾಪ್ ಟ್ರೆಂಡಿಂಗ್ನಲ್ಲಿ ತರಬೇಕು ಎಂದು ಈ ಗುಂಪಿನ ಸದಸ್ಯ ತಿಳಿಸಿದ್ದಾರೆ.

ಟೇಕ್ ಓವರ್ ಹೆಸರಿನ ವ್ಯಕ್ತಿ ಈ ಗುಂಪಿನ ಆಥರ್ ಆಗಿದ್ದು, ಆತ ಮಾಡುವ ಟ್ವೀಟ್ಅನ್ನು ಮರು ಟ್ವೀಟ್ ಮಾಡುವುದು. ಅದೇ ವಿಷಯವನ್ನು ಟ್ವಿಟರ್ನಲ್ಲಿ ಟ್ವೀಟ್ ಮಾಡುವುದು. ಸ್ಕ್ರೀನ್ ಶಾಟ್ಗಳನ್ನು ಶೇರ್ ಮಾಡುವುದು ಇದು ಈ ಗುಂಪಿನ ಕೆಲಸವಾಗಿದೆ.

ಈ ಗುಂಪಿನಲ್ಲಿ ಲಿಂಗ ತಾರತಮ್ಯ, ಹಿಂದುತ್ವ ಇವೇ ಮೊದಲಾದ ಪ್ರಚೋದನೀಯ ವಿಷಯಗಳನ್ನು ಟ್ರೆಂಡ್ ಮಾಡುವುದು. ಜನರನ್ನು ಪ್ರಚೋದಿಸುವುದು ಸದಸ್ಯರ ಕೆಲಸವಾಗಿದೆ.

ಹ್ಯಾಶ್ಟ್ಯಾಗ್ ಇಕ್ಕಳಕ್ಕೆ ಸಿಲುಕಿದ ಪಾತಾಳ್ ಲೋಕ್

ಪಾತಾಳ್ ಲೋಕ್ ಎನ್ನುವ ವೆಬ್ ಸರಣಿಯು ಅಮೇಜಾನ್ ಪ್ರೈಮ್ ವಿಡಿಯೋಸ್ನಲ್ಲಿ ಬಿಡುಗಡೆಯಾಯಿತು. ಈ ಸರಣಿಯಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ರಾಜಕೀಯ ಅಡೆತಡೆಗಳ ವಿರುದ್ಧ ಪ್ರಸ್ತಾಪಿಸಲಾಗಿದೆ.

ಇದು ಪ್ರಸ್ತುತ ರಾಜಕೀಯ ಸನ್ನಿವೇಶಗಳನ್ನು ಟೀಕಿಸುತ್ತಿದೆ ಎಂದು ಆರೋಪಿಸಿದರೆ. ಇಲ್ಲಿ ಪ್ರಧಾನಿ ಮೋದಿ ಅವರ ಮಾಧ್ಯಮ ನೀತಿಯನ್ನು ವಿರೋಧಿಸುತ್ತಿದೆ ಎನ್ನುವ ಚರ್ಚೆಗಳು ಶುರುವಾದವು.

ಮೇ 20 ಸಂಜೆ 6.33ಕ್ಕೆ ಖಾಸಗಿ ಗ್ರೂಪ್ ಅಡ್ಮಿನ್ ತನ್ನ ಗುಂಪಿನಲ್ಲಿ ಪಾತಾಳ್ ಲೋಕ್ ಪೋಸ್ಟರ್ ಉಲ್ಲೇಖಿಸಿ #Hinduphobic_Bollywood ಎನ್ನುವ ಪೋಸ್ಟ್ ಮಾಡಿದ್ದ. ಅದಾದ ನಾಲ್ಕು ನಿಮಿಷಕ್ಕೆ ಸರಿಯಾಗಿ ಟ್ವಿಟರ್ನಲ್ಲಿ ಮೊದಲ ಟ್ವೀಟ್ ಪೋಸ್ಟ್ ಆಯಿತು.

ಗುಂಪಿನ ನಿಯಮದ ಪ್ರಕಾರ ಅಡ್ಮಿನ್ ಶೇರ್ ಮಾಡುವ ಸ್ಕ್ರೀನ್ ಶಾಟ್ಅನ್ನು ಟ್ವಿಟರ್ನಲ್ಲಿ ಹ್ಯಾಶ್ಟ್ಯಾಗ್ ಸಮೇತ ಟ್ವೀಟ್ ಮಾಡಬೇಕು. ಈ ಗುಂಪು ಮೊದಲು ಪಾತಾಳ್ ಲೋಕ್ನ ನಿರ್ಮಾಪಕರಲ್ಲಿ ಒಬ್ಬರಾದ ಅನುಷ್ಕಾ ಶರ್ಮಾ ಅವರನ್ನು ಟ್ರೋಲ್ ಮಾಡಿತು. ಟೀಮ್ ಇಂಡಿಯಾ ಕ್ಯಾಪ್ಟನ್ ಹಾಗೂ ಅನುಷ್ಕಾ ಅವರ ಪತಿಯೂ ಇಲ್ಲಿ ಟ್ರೋಲ್ಗೆ ಒಳಗಾದರು. ನೋಡ ನೋಡುತ್ತಿದ್ದಂತೆಯೇ ಟ್ವೀಟ್ಗಳ ಸುರಿಮಳೆಯೇ ಹರಿದುಬಂತು. ರೂಢಿಯಂತೆ ಸೋನಂ ಕಪೂರ್, ಸ್ವರ ಭಾಸ್ಕರ್, ಶೃತಿ ಸೇಠ್, ವಿಶಾಲ್ ದಾದ್ಲಾನಿ ಇವರೇ ಮೊದಲಾದವರು ಟ್ರೋಲ್ಗೆ ಗುರಿಯಾದರು.

ಸುಮಾರು 8.30 ಅಂದರೆ ಮೊದಲ ಟ್ವೀಟ್ ಆದ ಎರಡು ಗಂಟೆಗಳ ತರುವಾಯ ಈ ಹ್ಯಾಶ್ ಟ್ಯಾಗ್ ಟಾಪ್ 15 ಟ್ರೆಂಡಿಂಗ್ನಲ್ಲಿತ್ತು. 9.38ರ ವೇಳೆಗೆ ಈ ಹ್ಯಾಶ್ ಟ್ಯಾಗ್ 21 ಸಾವಿರ ಟ್ವೀಟ್ಗಳೊಂದಿಗೆ ಟಾಪ್ 10 ಮೀರಿ ಟಾಪ್ 6ನಲ್ಲಿ ಟ್ರೆಂಡಿಂಗ್ ಆಯಿತು.

11.10ಕ್ಕೆ ಸರಿಯಾಗಿ ಈ ಹ್ಯಾಶ್ಟ್ಯಾಗ್ ಟಾಪ್ 2 ಟ್ರೆಂಡಿಂಗ್ನಲ್ಲಿತ್ತು. 50 ಸಾವಿರ ಟ್ವೀಟ್ಗಳು ಈ ವಿಷಯವಾಗಿ ಹರಿದುಬಂದವು. ಗುಂಪಿನ ಅಡ್ಮಿನ್ಗೆ ಶುಭಾಶಯಗಳ ಮಳೆಯೇ ಹರಿದುಬಂತು. ಆ ದಿನ ಟಾಪ್ 1 ಸ್ಥಾನಕ್ಕೆ ಈ ಹ್ಯಾಶ್ಟ್ಯಾಗ್ ಬರಲಿಲ್ಲ ಕಾರಣ ಆಫಾನ್ ಚಂಡಮಾರುತವು ಮೊದಲ ಸ್ಥಾನದಲ್ಲಿತ್ತು.

ಟ್ವಿಟರ್ ಮತ್ತೆ ವಿಫಲ

ಪ್ರಾಮಾಣಿಕವಾಗಿ ಹರಿದುಬರುವ ವಿಷಯಗಳನ್ನೇ ಟ್ರೆಂಡ್ ಮಾಡಬೇಕೆನ್ನುವುದು ಟ್ವಿಟರ್ ಉದ್ದೇಶವಾದರೂ, ಈ ರೀತಿಯಾದ ಉದ್ದೇಶಪೂರಿತ ತಂತ್ರಗಳಿಂದ ಯಾವ್ಯಾವುದೋ ವಿಷಯಗಳು ಚರ್ಚೆಗೆ ಬರುವುದು ಸಮಾನ್ಯವಾಗಿದೆ. ಟ್ವಿಟರ್ ಈ ವಿಷಯದಲ್ಲಿ ಸೋಲುತ್ತಲೇ ಇದೆ.

ಈ ರೀತಿ ಉದ್ದೇಶಪೂರಿತವಾಗಿ ಟ್ವೀಟ್ ಮಾಡಿ ಅಡ್ಡದಾರಿ ಮೂಲಕ ಟ್ರೆಂಡಿಂಗ್ಗೆ ತರುವುದು ಟ್ವಿಟರ್ನ ಮೂಲ ನಿಯಮದ ಉಲ್ಲಂಘನೆಯಾದರೂ ಅದನ್ನು ಹೇಳುವವರು ಕೇಳುವವರು ಯಾರೂ ಇಲ್ಲವಾಗಿದ್ದಾರೆ.

ಕೃಪೆ: ದಿ ವೈರ್ಆನ್ಲೈನ್ ನ್ಯೂಸ್ ಪೋರ್ಟಲ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

‘ಕಣ್ಣಪ್ಪ’ ಚಿತ್ರದ ವಿಶೇಷ ಪಾತ್ರದಲ್ಲಿ ಪ್ರಭಾಸ್‌ ನಟನೆ

Published

on

ಸುದ್ದಿದಿನ ಡೆಸ್ಕ್ : ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ‘ಕಣ್ಣಪ್ಪ’ ಚಿತ್ರಕ್ಕೆ ಇನ್ನೊಬ್ಬ ಸ್ಟಾರ್‌ ನಟನ ಎಂಟ್ರಿಯಾಗಿದೆ. ಅದು ಬೇರಾರು ಅಲ್ಲ, ಪ್ರಭಾಸ್.

ಈಗಾಗಲೇ ಅಕ್ಷಯ್‌ ಕುಮಾರ್‌, ಮೋಹನ್‌ ಬಾಬು, ಮೋಹನ್‌ ಲಾಲ್‌, ಶರತ್‌ಕುಮಾರ್‌ ಮುಂತಾದವರು ‘ಕಣ್ಣಪ್ಪ’ ಚಿತ್ರದ ತಾರಾಬಳಗದಲ್ಲಿದ್ದಾರೆ. ಈಗ ಈ ಸ್ಟಾರ್‌ ತಾರಾಬಳಗಕ್ಕೆ ಪ್ರಭಾಸ್‌ ಅವರ ಎಂಟ್ರಿಯೂ ಆಗಿದೆ.

ಈ ವಿಚಾರವನ್ನು ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಮುಖೇಶ‍್‍ ಕುಮಾರ್‌ ಸಿಂಗ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕಣ್ಣಪ್ಪ’ ಚಿತ್ರದಲ್ಲಿ ಶಿವನ ಪರಮ ಭಕ್ತ ಕಣ್ಣಪ್ಪನಾಗಿ ವಿಷ್ಣು ಮಂಚು ನಟಿಸಲಿದ್ದಾರೆ. ಹಾಲಿವುಡ್‌ನ ಶೆಲ್ಡೋನ್‌ ಚಾವ್‌ ಅವರ ಛಾಯಾಗ್ರಹಣ, ಕೇಚ ಖಂಫಕದೀ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇದೇ 12 ರಂದು ದಾವಣಗೆರೆಯಲ್ಲಿ ಪಾರಂಪರಿಕ ಬೀಜೋತ್ಸವ; ಒಂದು ಸಾವಿರಕ್ಕೂ ಹೆಚ್ಚು ದೇಸಿ ಧಾನ್ಯಗಳ ಪ್ರದರ್ಶನ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ದಾವಣಗೆರೆ : ದೇಸಿಯ ಬಿತ್ತನೆ ಬೀಜಗಳ ವೈವಿಧ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಇದೇ 12ರಂದು ದಾವಣಗೆರೆ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ‘ಪಾರಂಪರಿಕ ಬೀಜೋತ್ಸವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ದೇವರಾಜ್ ಹೇಳಿದ್ದಾರೆ.

ಒಂದು ದಿನದ ಈ ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ 30ಕ್ಕೂ ಹೆಚ್ಚಿನ ಬೀಜ ಸಂರಕ್ಷಕರ ತಂಡಗಳು ಪಾಲ್ಗೊಳ್ಳಲಿವೆ. ವಿವಿಧ ದೇಸಿ ತಳಿಗಳನ್ನು ಪ್ರದರ್ಶಿಸಲಾಗುತ್ತಿದ್ದು, ಒಂದು ಸಾವಿರಕ್ಕೂ ಹೆಚ್ಚಿನ ದೇಸಿ ಧಾನ್ಯ, ತರಕಾರಿ, ಕಾಳು, ಗೆಡ್ಡೆ ಗೆಣಸು, ಸೊಪ್ಪು ಮತ್ತು ಹಣ್ಣಿನ ತಳಿಗಳು ಪ್ರದರ್ಶನಗೊಳ್ಳಲಿವೆ.

ಗುಣಮಟ್ಟದ ಭತ್ತ, ಸಿರಿಧಾನ್ಯ ಮತ್ತು ತರಕಾರಿ ಬೀಜಗಳು ಮಾರಾಟಕ್ಕೆ ಸಿಗಲಿವೆ. ಕೆಂಪು ಬಣ್ಣದ ’ಸಿದ್ಧ ಹಲಸು’ ಮತ್ತು ಇತರೆ ಹಣ್ಣಿನ ಗಿಡಗಳು ಮಾರಾಟಕ್ಕೆ ಲಭ್ಯವಿರುತ್ತವೆ. ರೈತ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಭತ್ತದ ತಳಿಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆಯುವ ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಕೋಲಾರದ ಬೀಜಮಾತೆ ಪಾಪಮ್ಮ ಮತ್ತು ಮೈಸೂರಿನ ಬೀಜಮಾತೆ ಪದ್ಮಾವತಮ್ಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚನ್ನಗಿರಿ ಡಿಗ್ರಿ ಕಾಲೇಜಿನಲ್ಲಿ ಬಸವ ಜಯಂತಿ ಆಚರಣೆ

Published

on

ಸುದ್ದಿದಿನ, ಚನ್ನಗಿರಿ : ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಮಾಡುವುದರ ಮೂಲಕ ಬಸವ ಜಯಂತಿಯನ್ನು ಇಂದು ಬೆಳಗ್ಗೆ ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿಜಿ ಅಮೃತೇಶ್ವರ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending