ದಿನದ ಸುದ್ದಿ
ಲೋಕಸಭಾ ಚುನಾವಣೆ | ದಾವಣಗೆರೆ ಜಿಲ್ಲೆಯಲ್ಲಿ 63 ವಿಶೇಷ ಮತಗಟ್ಟೆಗಳ ಸ್ಥಾಪನೆ, ವಿಭಿನ್ನವಾಗಿ ಸಿದ್ದವಾಗಿರುವ ಮತಗಟ್ಟೆಗಳು
ಸುದ್ದಿದಿನ ಡೆಸ್ಕ್ : ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಚುನಾವಣೆ ನಡೆಯುತ್ತಿದ್ದು ಜಿಲ್ಲೆಯಲ್ಲಿನ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ರಂತೆ 35 ಸಖಿ ಮತಗಟ್ಟೆಗಳು, ತಲಾ 1 ರಂತೆ 7 ಯುವ ನಿರ್ವಾಹಣೆ ಮತಗಟ್ಟೆಗಳು, ತಲಾ 1 ರಂತೆ 7 ಸಾಂಪ್ರದಾಯಿಕ ಮತಗಟ್ಟೆಗಳು, ತಲಾ 1 ರಂತೆ 7 ಧೈಯ ಆಧಾರಿತ ಮತಗಟ್ಟೆಗಳು ಹಾಗೂ ತಲಾ 1 ರಂತೆ 7 ವಿಶೇಷ ಚೇತನ ಮತಗಟ್ಟೆಗಳು ಸೇರಿ 63 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿ ವಿಶೇಷವಾಗಿ ಅಲಂಕರಿಸಿ ಮತದಾರರನ್ನು ಕೈಬೀಸಿ ಕರೆಯುವಂತೆ ಸಿಂಗರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಸಖಿ ಮತಗಟ್ಟೆ
103- ಜಗಳೂರು ತಾ; ಮತಗಟ್ಟೆ 8 ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕೊಠಡಿ 1 ಅರಸೀಕೆರೆ. ಇಲ್ಲಿ ಪುರುಷ 334, ಮಹಿಳೆ 345 ಸೇರಿ 679, ಸೊಕ್ಕೆ ಮತಗಟ್ಟೆ 20 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪುರುಷ 388, ಮಹಿಳೆ 395 ಒಟ್ಟು-783. ಪಲ್ಲಾಗಟ್ಟೆ ಮತಗಟ್ಟೆ 90 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪುರುಷ 390, ಮಹಿಳೆ 389 ಸೇರಿ 779, ಜಗಳೂರು ಪಟ್ಟಣ ಮತಗಟ್ಟೆ 190 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಸಂತೆ ಪೇಟೆ) ಕೊಠಡಿ ಸಂಖ್ಯೆ 2 ಇಲ್ಲಿ ಪುರುಷ 635, ಮಹಿಳೆ 688 ಸೇರಿ 1323, ಬಿದರಿಕೆರೆ ಮತಗಟ್ಟೆ 250 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, (ಹಳೆಯ ಕಟ್ಟಡ) (ಪಶ್ಚಿಮ ಭಾಗ) ಪುರುಷ 575, ಮಹಿಳೆ 614 ಸೇರಿ 1189.
ಹರಿಹರ ವಿಧಾನಸಭಾ ಕ್ಷೇತ್ರ
ಹರಿಹರ ಮತಗಟ್ಟೆ 59, ಮೈಸೂರು ಕಿರ್ಲೋಸ್ಕರ್ ಹೈಸ್ಕೂಲ್ ಕೊಠಡಿ ಸಂಖ್ಯೆ-2 ರಲ್ಲಿ ಪುರುಷ 505, ಮಹಿಳೆ 487 ಸೇರಿ 992, ಬೆಳ್ಳೂಡಿ ಮತಗಟ್ಟೆ 111 ಶ್ರೀ ಪಟೇಲ್ ಗುರು ಬಸಪ್ಪ ಪ್ರೌಢಶಾಲೆ ಪುರುಷ 420, ಮಹಿಳೆ 388 ಸೇರಿದಂತೆ 808, ಹರಿಹರ ಮತಗಟ್ಟೆ 46, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಇಲ್ಲಿ ಪುರುಷ 650, ಮಹಿಳೆ 623 ಸೇರಿ 1273, ಮಲೆಬೆನ್ನೂರು ಮತಗಟ್ಟೆ 192 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ 2 ಇಲ್ಲಿ ಪುರುಷ 520, ಮಹಿಳೆ 573 ಸೇರಿ 1093. ಕುಂಬಳೂರು ಮತಗಟ್ಟೆ 167 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-1 ಇಲ್ಲಿ ಪುರುಷ 513, ಮಹಿಳೆ 526 ಒಟ್ಟು-1039.
ವಿಧಾನಸಭಾ ಕ್ಷೇತ್ರ ದಾವಣಗೆರೆ ಉತ್ತರ
ಕ್ಕಕರಗೊಳ್ಳ ಮತಗಟ್ಟೆ 4 ಸರ್ಕಾರಿ ಸಂಯುಕ್ತ ಪಿಯು ಕಾಲೇಜು ಕೊಠಡಿ ಸಂಖ್ಯೆ 1 ಪುರುಷ 582, ಮಹಿಳೆ 615 ಸೇರಿ 1197, ಬೇತೂರು 23 ಗ್ರಾಮ ಪಂಚಾಯಿತಿ ಕಚೆÉೀರಿ ಇಲ್ಲಿ ಪುರುಷ 564, ಮಹಿಳೆ 593 ಒಟ್ಟು-1157, ದಾವಣಗೆರೆ 208 ಅಥಣಿ ಹೈಸ್ಕೂಲ್ ಎಂಸಿಸಿ ಬಿ.ಬ್ಲಾಕ್ ಪುರುಷ 656, ಮಹಿಳೆ 671 ಒಟ್ಟು-1327. ದಾವಣಗೆರೆ 98 ಈಶ್ವರಮ್ಮ ಹೈಯರ್ ಪ್ರೈಮರಿ ಸ್ಕೂಲ್, ಪಿ.ಜೆ.ಬಡಾವಣೆ ಇಲ್ಲಿ ಪುರುಷ 606, ಮಹಿಳೆ 594 ಒಟ್ಟು-1200, ನಿಟ್ಟುವಳ್ಳಿ 137 ಸರ್ಕಾರಿ ಪ್ರೌಢಶಾಲೆ ಶಾಲಾ ಕೊಠಡಿ ಸಂಖ್ಯೆ 2 ರಲ್ಲಿ ಪುರುಷ 477, ಮಹಿಳೆ 539 ಒಟ್ಟು-1016.
ದಾವಣಗೆರೆ ದಕ್ಷಿಣ ಕ್ಷೇತ್ರ
ದಾವಣಗೆರೆ 142 ಮುದೇಗೌಡ್ರು ಮಲ್ಲಮ್ಮ ಮುರಿಗೆಪ್ಪ ಬಾಲಕಿಯರ ಪ್ರೌಢಶಾಲೆ, ಕೆ.ಆರ್.ರಸ್ತೆ ಇಲ್ಲಿ ಪುರುಷ 731, ಮಹಿಳೆ 737 ಒಟ್ಟು-1468. ಶಿರಮಗೊಂಡನಹಳ್ಳಿ 178 ಸರ್ಕಾರಿ ಪ್ರೌಢಶಾಲೆ ಪುರುಷ 497, ಮಹಿಳೆ 519 ಒಟ್ಟು-1016. ಹದಡಿ 202 ಗ್ರಾಮ ಪಂಚಾಯಿತಿ ಕಚೇರಿ ಪುರುಷ 554, ಮಹಿಳೆ 582 ಒಟ್ಟು-1136. ಜಾಲಿನಗರ 36 ಶ್ರೀ ದುಗಾರ್ಂಬಿಕಾ ಸಂಯುಕ್ತ ಪ್ರೌಢಶಾಲೆ ಪ್ರಯೋಗಾಲಯ ಪುರುಷ 336, ಮಹಿಳೆ 378 ಒಟ್ಟು-714, ದಾವಣಗೆರೆ ದೇವರಾಜ ಅರಸ್ ಬಡಾವಣೆ 41 ಶ್ರೀಮತಿ ಚಿರಡೋಣಿ ಕಮಲಮ್ಮ ವೈ ತಿಮ್ಮಪ್ಪ ಶೆಟ್ಟಿ ಸರ್ಕಾರಿ ಮಾಡರ್ನ್ ಹೈಯರ್ ಪ್ರೈಮರಿ ಸ್ಕೂಲ್ ಪುರುಷ 456, ಮಹಿಳೆ 449 ಒಟ್ಟು-905.
ಮಾಯಕೊಂಡ ಕ್ಷೇತ್ರ
ಆನಗೋಡು 61 ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುರುಷ 630, ಮಹಿಳೆ 640 ಒಟ್ಟು-1231, ತೋಳಹುಣಸೆ ಯಲ್ಲಮ್ಮನಗರ 36 ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ಸಂಖ್ಯೆ 1 ಪುರುಷ 364, ಮಹಿಳೆ 357 ಒಟ್ಟು-706. ಮಾಯಕೊಂಡ 160 ಕರ್ನಾಟಕ ಪಬ್ಲಿಕ್ ಸ್ಕೂಲ್ ಪುರುಷ 264, ಮಹಿಳೆ 275 ಒಟ್ಟು-539, ಅತ್ತಿಗೆರೆ 112 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುರುಷ 493, ಮಹಿಳೆ 499 ಒಟ್ಟು-990, ತ್ಯಾವಣಿಗಿ 177, ಕರ್ನಾಟಕ ಪಬ್ಲಿಕ್ ಸ್ಕೂಲ್ ಹೈಸ್ಕೂಲ್ ವಿಭಾಗ ಪುರುಷ 492, ಮಹಿಳೆ 507 ಒಟ್ಟು 999 ಮತದಾರರು.
ವಿಧಾನಸಭಾ ಕ್ಷೇತ್ರ ಚನ್ನಗಿರಿ
ನಲ್ಲೂರು 105 ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಪುರುಷ 640, ಮಹಿಳೆ 635 ಸೇರಿ 1275, ಮಸಣಿಕೆರೆ 248 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪುರುಷ 329, ಮಹಿಳೆ 299 ಸೇರಿ 628. ಕೆರೆಬಿಳಚಿ 62 ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ (ಪಶ್ಚಿಮ ಭಾಗ) ಪುರುಷ 401, ಮಹಿಳೆ 465 ಒಟ್ಟು-866, ಹಿರೇಕೂಗಲೂರು 17 ಶ್ರೀ ತರಳಬಾಳು ಜಗದ್ಗುರ ಸರ್ಕಾರಿ ಜೂನಿಯರ್ ಕಾಲೇಜು ಹೈಸ್ಕೂಲ್ ವಿಭಾಗ ಪುರುಷ 608, ಮಹಿಳೆ 636 ಒಟ್ಟು-1244, ಚನ್ನಗಿರಿ ಬಿ.ಇ.ಓ ಕಚೇರಿ ಹಿಂಭಾಗ 169 ಸರ್ಕಾರಿ ಸಂಯುಕ್ತ ಬಾಲಕಿಯರ ಪ್ರೌಢಶಾಲೆ ಪುರುಷ 608, ಮಹಿಳೆ 636 ಒಟ್ಟು-1244.
ಹೊನ್ನಾಳಿ ಕ್ಷೇತ್ರ
ಸುರಹೊನ್ನೆ 169 ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪುರುಷ 432 ಮಹಿಳೆ 489 ಒಟ್ಟು-921, ಗೋವಿನಕೋವಿ 149 ಸರ್ಕಾರಿ ಪ್ರೌಢಶಾಲೆ ಪುರುಷ 563, ಮಹಿಳೆ 616 ಒಟ್ಟು-1179, ನ್ಯಾಮತಿ 178 ಸರ್ಕಾರಿ ಪಿಯು ಕಾಲೇಜು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುರುಷ 495, ಮಹಿಳೆ 520 ಒಟ್ಟು-1015, ಹಿರೇಬಾಸೂರು 129 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುರುಷ 340, ಮಹಿಳೆ 314 ಒಟ್ಟು-654, ಹೊನ್ನಾಳಿ ತಾಲ್ಲೂಕು ಪಂಚಾಯತ್ ಕಚೇರಿ 84 ಪುರುಷ 294, ಮಹಿಳೆ 303 ಸೇರಿ 597 ಮತದಾರರು.
ಯುವ ಮತದಾರರ ಮತಗಟ್ಟೆಗಳು
ಜಗಳೂರು ತಾ; 183 ಜಗಳೂರು ಪಟ್ಟಣದ ಹೊರಕೆರೆ ಅಂಗನವಾಡಿ ಕೇಂದ್ರ ಇಲ್ಲಿ ಪುರುಷ 353, ಮಹಿಳೆ 377 ಒಟ್ಟು-730, ಹರಿಹರ ತಾ; 61 ಮೈಸೂರು ಕಿರ್ಲೋಸ್ಕರ್ ಪ್ರೌಢಶಾಲೆ ಕೊಠಡಿ ಸಂಖ್ಯೆ-5 ಇಲ್ಲಿ ಪುರುಷ 708, ಮಹಿಳೆ 731 ಸೇರಿ 1439, ದಾವಣಗೆರೆ ಉತ್ತರ; ಕುಂದುವಾಡ ರಸ್ತೆ ಚಿಗಟೇರಿ ಬಡಾವಣೆ 49 ಸಪ್ತಗಿರಿ ವಿದ್ಯಾಲಯ ಇಲ್ಲಿ ಪುರುಷ 415, ಮಹಿಳೆ 403 ಸೇರಿ 818, ದಾವಣಗೆರೆ- ದಕ್ಷಿಣ; 2 ಯರಗುಂಟೆ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 725, ಮಹಿಳೆ 747, ಒಟ್ಟು-1472. ಮಾಯಕೊಂಡ ಕ್ಷೇತ್ರ; 159 ಮಾಯಕೊಂಡ ಕರ್ನಾಟಕ ಪಬ್ಲಿಕ್ ಶಾಲೆ (ಪ್ರಾಥಮಿಕ ವಿಭಾಗ) ಪುರುಷ 453, ಮಹಿಳೆ 488 ಸೇರಿ ಒಟ್ಟು-941. ಚನ್ನಗಿರಿ ಕ್ಷೇತ್ರ; 138 ಮುದಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 499, ಮಹಿಳೆ 508 ಒಟ್ಟು-1007. ಹೊನ್ನಾಳಿ ಕ್ಷೇತ್ರ; 193 ಕುಳಗಟ್ಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 382, ಮಹಿಳೆ 369 ಸೇರಿ 751 ಮತದಾರರಿದ್ದಾರೆ.
ಸಾಂಪ್ರದಾಯಿಕ ಮತಗಟ್ಟೆಗಳು
ಜಗಳೂರು ತಾ; 76 ಅಣಬೂರು ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 638, ಮಹಿಳೆ 616 ಒಟ್ಟು-1254. ಹರಿಹರ ಕ್ಷೇತ್ರ; 153 ಯಲವಟ್ಟಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 457, ಮಹಿಳೆ 434 ಒಟ್ಟು-891. ದಾವಣಗೆರೆ ಉತ್ತರ; 200 ದಾವಣಗೆರೆ ಭದ್ರಾ ಕಾಲೋನಿಯ ಕಾರ್ಯಪಾಲಕ ಅಭಿಯಂತರ ಕಚೇರಿ ಇಲ್ಲಿ ಪುರುಷ 667, ಮಹಿಳೆ 654 ಒಟ್ಟು-1321, ದಾವಣಗೆರೆ- ದಕ್ಷಿಣ; 169 ಜಾಲಿನಗರ ಜನತಾ ವಿದ್ಯಾಲಯ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ ಇಲ್ಲಿ ಪುರುಷ 476, ಮಹಿಳೆ 476 ಒಟ್ಟು-952. ಮಾಯಕೊಂಡ ಕ್ಷೇತ್ರ; 5 ಶ್ರೀರಾಮನಗರ ಲಂಬಾಣಿಹಟ್ಟಿ ಮಜರೆ ಗ್ರಾಮ ಆಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೂರ್ವ ಭಾಗ, ಇಲ್ಲಿ ಪುರುಷ 325, ಮಹಿಳೆ 345 ಒಟ್ಟು-670. ಚನ್ನಗಿರಿ ವಿಧಾನಸಭಾ ಕ್ಷೇತ್ರ; 100 ಅಸ್ತಾಪನಹಳ್ಳಿ ಸರ್ಕಾರಿ ಎಸ್ಟಿ ಆಶ್ರಮ ಶಾಲೆ ಇಲ್ಲಿ ಪುರುಷ 474, ಮಹಿಳೆ 505, ಒಟ್ಟು-979. ಹೊನ್ನಾಳಿ ಕ್ಷೇತ್ರ; 92 ಆಂಜಿನೇಯಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 296, ಮಹಿಳೆ 276 ಸೇರಿ ಒಟ್ಟು-572.
ಧ್ಯೇಯ ಆಧಾರಿತ ಮತಗಟ್ಟೆಗಳು
ಜಗಳೂರು ಕ್ಷೇತ್ರ; 238 ಮುಸ್ಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 501, ಮಹಿಳೆ 546 ಒಟ್ಟು-1047. ಹರಿಹರ ಕ್ಷೇತ್ರ; 98 ಹನಗವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 325, ಮಹಿಳೆ 330 ಒಟ್ಟು-655, ದಾವಣಗೆರೆ- ಉತ್ತರ; 201 ದಾವಣಗೆರೆ ಭದ್ರಾ ಕಾಲೋನಿಯ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಇಲ್ಲಿ ಪುರುಷ 678, ಮಹಿಳೆ 680 ಒಟ್ಟು-1358, ದಾವಣಗೆರೆ- ದಕ್ಷಿಣ; 139 ಜಯದೇವ ಹಾಸ್ಟೆಲ್, ಹದಡಿ ರಸ್ತೆಯ ಶ್ರೀಮತಿ ಗೌರಮ್ಮ ಡಿ.ಎಂ. ಹನಗೋಡಿ ಮಠದ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಇಲ್ಲಿ ಪುರುಷ 158, ಮಹಿಳೆ 173 ಒಟ್ಟು-331. ಮಾಯಕೊಂಡ ಕ್ಷೇತ್ರ; 41 ಹೊನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಇಲ್ಲಿ ಪುರುಷ 449, ಮಹಿಳೆ 461, ಒಟ್ಟು-910, ಚನ್ನಗಿರಿ ಕ್ಷೇತ್ರ; 160 ಚನ್ನಗಿರಿ ಪಟ್ಟಣ ಸರ್ಕಾರಿ ಸಂಯುಕ್ತ ಬಾಲಕಿಯರ ಪ್ರೌಢಶಾಲೆ ಇಲ್ಲಿ ಪುರುಷ 573, ಮಹಿಳೆ 607, ಒಟ್ಟು-1180. ಹೊನ್ನಾಳಿ ಕ್ಷೇತ್ರ; 232 ಚೀಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 462, ಮಹಿಳೆ 510, ಒಟ್ಟು-972 ಮತದಾರರು.
ವಿಶೇಷ ಚೇತನರಿಂದ ನಿರ್ವಹಿಸುವ ಮತಗಟ್ಟೆಗಳು
ಜಗಳೂರು ಕ್ಷೇತ್ರ; 181 ಜಗಳೂರು ಪಟ್ಟಣದ ಹೊರಕೆರೆ ಸರ್ಕಾರಿ ಕನ್ನಡ ಮಾದರಿ ಹೈಯರ್ ಪ್ರೈಮರಿ ಸ್ಕೂಲ್, ಇಲ್ಲಿ ಪುರುಷ 257, ಮಹಿಳೆ 244, ಒಟ್ಟು-501. ಹರಿಹರ ಕ್ಷೇತ್ರ; 113 ಬೆಳ್ಳೂಡಿ ಶ್ರೀ ಪಟೇಲ್ ಗುರುಬಸಪ್ಪ ಪ್ರೌಢಶಾಲೆ ಇಲ್ಲಿ ಪುರುಷ 601, ಮಹಿಳೆ 613 ಸೇರಿ 1214. ದಾವಣಗೆರೆ- ಉತ್ತರ; 178 ನಿಟ್ಟುವಳ್ಳಿ ಸರ್ಕಾರಿ ಪ್ರೌಢಶಾಲೆ ಕೊಠಡಿ 4 ರಲ್ಲಿ ಪುರುಷ 620, ಮಹಿಳೆ 664 ಒಟ್ಟು-1284. ದಾವಣಗೆರೆ- ದಕ್ಷಿಣ; 39 ಶಿವಾಲಿ ಟಾಕೀಸ್ ರಸ್ತೆ, ಕೌಶಲಾಭಿವೃದ್ಧಿಗಾಗಿ ಸಂಯೋಜಿತ ಪ್ರಾದೇಶಿಕ ಕೇಂದ್ರ ಇಲ್ಲಿ ಪುರುಷ 614, ಮಹಿಳೆ 620 ಸೇರಿ 1234. ಮಾಯಕೊಂಡ ಕ್ಷೇತ್ರ; 61 ಆನಗೋಡು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 598, ಮಹಿಳೆ 634 ಸೇರಿ 1232. ಚನ್ನಗಿರಿ ಕ್ಷೇತ್ರ; 36 ಸಂತೆಬೆನ್ನೂರು ಶ್ರೀಶೈಲ ಜಗದ್ಗುರು ವಾಗೀಶ ಪಾಂಡಿತರಾಧ್ಯ ಸರ್ಕಾರಿ ಜೂನಿಯರ್ ಕಾಲೇಜು, ಇಲ್ಲಿ ಪುರುಷ 420, ಮಹಿಳೆ 423, ಒಟ್ಟು-843. ಹಾಗೂ ಹೊನ್ನಾಳಿ ವಿಧಾನಸಭಾ ಕ್ಷೇತ್ರ ಮತಗಟ್ಟೆ 74 ಹೊನ್ನಾಳಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಇಲ್ಲಿ ಪುರುಷ 270, ಮಹಿಳೆ 314 ಸೇರಿದಂತೆ ಒಟ್ಟು 584 ಮತದಾರರಿದ್ದಾರೆ.
ವಿಶೇಷಚೇತನರಿಗೆ ವಿಶೇಷವಾಗಿ ಎಲ್ಲಾ ಮತಗಟ್ಟೆ ಸಿಬ್ಬಂದಿಗಳಿಗೆ ಇನ್ನೋವಾ ವಾಹನ ನೀಡಿದ್ದು ಮಸ್ಟರಿಂಗ್, ಡಿ.ಮಸ್ಟರಿಂಗ್ನಲ್ಲಿ ಮೊದಲ ಆದ್ಯತೆ ನೀಡಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ
ಸುದ್ದಿದಿನ,ದಾವಣಗೆರೆ:ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದ್ದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ,
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ನಂತರ 23ಕ್ಕೆ ಹೆಚ್ಚು ವಿದ್ಯಾರ್ಥಿನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ ವಿದ್ಯಾರ್ಥಿಗಳನ್ನು ಕೊಲ್ಲುವ ಭ್ರಷ್ಟ ಆಡಳಿತ ವ್ಯವಸ್ಥೆ ಕೊನೆಯಾಗಬೇಕು ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ *ಮಹಬೂಬ್ ಭಾಷಾ* ಆಗ್ರಹಿಸಿದ್ದಾರೆ ಸಂವಿಧಾನ ವಿರೋಧಿ ಆಡಳಿತಕ್ಕೆ ಕಡಿವಾಣ ಹಾಕಲು ದೇಶದ ಯುವಜನರು ಹಾಗೂ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು, ಸಂವಿಧಾನ ವಿರೋಧಿ ನಡೆ ಹಾಗೂ ಹೋರಾಟವನ್ನು ಹತ್ತಿಕ್ಕು ಹೊನ್ನಾರವಾಗಿದೆ.
ನೀಟ್ ಹಗರಣ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಕಾರ್ಪೊರೇಟರ್ ಶಿಕ್ಷಣ ನೀತಿಗಳ ಕಾರಣ, ಪರೀಕ್ಷೆಯ ಅಕ್ರಮ ವಿರುದ್ಧ ಹೋರಾಟ ಎರಡನೇ ಸ್ವತಂತ್ರ ಸಂಗ್ರಾಯದ ರೀತಿಯಲ್ಲಿ ದೇಶದಿಂದ ವ್ಯಾಪಿಸುತ್ತಿದ್ದು, ಆಳುವ ಸರ್ಕಾರ ರಾಷ್ಟ್ರದ ಭವಿಷ್ಯ ವಾಗಿರುವ ಯುವ ಸಮೂಹದ ಕನಸುಗಳನ್ನು ಹೊಸಕಿ ಹಾಕಬಾರದೆಂದು ಹೇಳಿದ್ದಾರೆ.
ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳನ್ನು ತಕ್ಷಣವೇ ಸರಿಪಡಿಸಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸುದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇನೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ
ಸುದ್ದಿದಿನ,ದಾವಣಗೆರೆ :ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಂತರ20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ
ರಾಜಿನಾಮೆ ನೀಡಬೇಕು. ವಿದ್ಯಾರ್ಥಿಗಳನ್ನು ಕೊಲ್ಲುವ ಭ್ರಷ್ಟ ಆಡಳಿತ ವ್ಯವಸ್ಥೆ ಕೊನೆಯಾಗಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೀತಿ ,ಸಂಶೋಧನೆ ಮತ್ತು ತರಬೇತಿ ವಿಭಾಗದ ರಾಜ್ಯ ಸಂಚಾಲಕರಾದ ವಿನಾಯಕ ಬಿ.ಎನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹ ಮಾಡಿದ್ದಾರೆ.
ಸಂವಿಧಾನ ವಿರೋಧಿ ಆಡಳಿತಕ್ಕೆ ಕಡಿವಾಣ ಹಾಕಲು ದೇಶದ
ಯುವಜನರು, ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು. ಸೊನಮ್ ವಾಂಗ್ಟಕ್ ಅವರನ್ನು ಏಕಾಏಕಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಸಂವಿಧಾನವಿರೋಧಿ ನಡೆ, ಹೋರಾಟ ಹತ್ತಿಕ್ಕುವ ಹುನ್ನಾರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀಟ್ ಹಗರಣ, ವಿದ್ಯಾರ್ಥಿಗಳ ಆತ್ಮ ಹತ್ಯೆಗೆ ಕಾರ್ಪೊರೇಟ್ ಶಿಕ್ಷಣ ನೀತಿಗಳು ಕಾರಣ. ನೀಟ್ ಪರೀಕ್ಷೆ ಅಕ್ರಮದ ವಿರುದ್ಧದ ಹೋರಾಟ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ರೀತಿಯಲ್ಲಿ ದೇಶದಾದ್ಯಂತ ವ್ಯಾಪಿಸುತ್ತಿದೆ. ಆಳುವ ಸರ್ಕಾರ ರಾಷ್ಟ್ರದ ಭವಿಷ್ಯವಾಗಿರುವ ಯುವ ಸಮೂಹದ ಕನಸುಗಳನ್ನು ಹೊಸಕಿ ಹಾಕಬಾರದು’.ಎಂದು ತಿಳಿಸಿದ್ದಾರೆ.
ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಂದನೆಗಳೊಂದಿಗೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
ಸುದ್ದಿದಿನ,ದಾವಣಗೆರೆ : ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಮಾಯಾಕೊಂಡ ಕ್ಷೇತ್ರವು ನಿಗದಿತ ಅವಧಿಗಿಂತ ಮೊದಲೇ ಗಣತಿ ನಮೂನೆಗಳ ಹಂಚಿಕೆಯನ್ನು ಪೂರ್ಣಗೊಳಿಸಿರುವುದರಿಂದ ಮತ್ತು ಶೇ. 92.31 ರಷ್ಟು ಡಿಜಿಟಲೀಕರಣ ಸಾಧನೆ ಮಾಡಲಾಗಿರುವುದರಿಂದ, ಪ್ರಗತಿಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು 108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಅವರು ತಿಳಿಸಿದರು.
ಅವರು ಮಂಗಳವಾರ ದಾವಣಗೆರೆ ತಾಲ್ಲೂಕು ಕಚೇರಿಯಲ್ಲಿ ದಾವಣಗೆರೆ ಜಿಲ್ಲೆಯ 108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕುರಿತು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಒಟ್ಟು 1,97,048 ಮತದಾರರನ್ನು ಹೊಂದಿದ್ದು ಎಲ್ಲಾ 1,97,048 ಗಣತಿ ನಮೂನೆಗಳನ್ನು ಹಂಚಿಕೆ ಮಾಡಲಾಗಿದೆ ಇದುವರೆಗೆ ಒಟ್ಟು 1,81,890 ಗಣತಿ ನಮೂನೆಗಳನ್ನು ಡಿಜಿಟಲೀಕರಿಸಲಾಗಿದ್ದು, ಶೇಕಡಾ 92.31 ರಷ್ಟು ಗುರಿಯನ್ನು ತಲುಪಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (SIR) ಪ್ರಕ್ರಿಯೆಯಲ್ಲಿ ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಗಣತಿ ನಮೂನೆಗಳ ಹಂಚಿಕೆ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯು ಬಿರುಸಿನಿಂದ ಸಾಗಿದ್ದು, ಇನ್ನು ಕೇವಲ 4,165 ಫಾರ್ಮ್ಗಳು (ಶೇಕಡಾ 2.11) ಮಾತ್ರ ಡಿಜಿಟಲೀಕರಣಕ್ಕೆ ಬಾಕಿ ಇವೆ ಕ್ಷೇತ್ರದಲ್ಲಿ ಯಾವುದೇ ಹಂಚಿಕೆಯಾಗದ ಫಾರ್ಮ್ಗಳು ಬಾಕಿ ಉಳಿದಿಲ್ಲ, ಬಾಕಿ ಉಳಿದಿರುವ ಗಣತಿ ನಮೂನೆಗಳ ಗಣಕೀಕರಣ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು.
ಮನೆ ಮನೆ ಭೇಟಿ ಸಂದರ್ಭದಲ್ಲಿ ಇಂದಿನವರೆಗೆ ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 10,993 ಮತದಾರರನ್ನು ಸ್ಥಳಾಂತರ, ವಲಸೆ, ಮರಣ, ದ್ವಿಪತಿ (ಡೂಪ್ಲಿಕೇಟ್) ಸೇರಿದಂತೆ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 193 ನಮೂನೆಗಳು ಸಂಗ್ರಹವಾಗದೆ ಉಳಿದಿದ್ದು, 5059 ಶಾಶ್ವತ ವಲಸೆ, 3951 ಮರಣ ಪ್ರಕರಣ, 1760 ದ್ವಿಪ್ರತಿ ನಮೂನೆಗಳು ಹಾಗೂ 30 ಇತರೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ರಾಜೇಶ್ ಕುಮಾರ್ ಸಿ ಅವರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
-
ದಿನದ ಸುದ್ದಿ3 days agoನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ
-
ದಿನದ ಸುದ್ದಿ2 days agoಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ

