ದಿನದ ಸುದ್ದಿ
ಲೋಕಸಭಾ ಚುನಾವಣೆ | ದಾವಣಗೆರೆ ಜಿಲ್ಲೆಯಲ್ಲಿ 63 ವಿಶೇಷ ಮತಗಟ್ಟೆಗಳ ಸ್ಥಾಪನೆ, ವಿಭಿನ್ನವಾಗಿ ಸಿದ್ದವಾಗಿರುವ ಮತಗಟ್ಟೆಗಳು

ಸುದ್ದಿದಿನ ಡೆಸ್ಕ್ : ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಚುನಾವಣೆ ನಡೆಯುತ್ತಿದ್ದು ಜಿಲ್ಲೆಯಲ್ಲಿನ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ರಂತೆ 35 ಸಖಿ ಮತಗಟ್ಟೆಗಳು, ತಲಾ 1 ರಂತೆ 7 ಯುವ ನಿರ್ವಾಹಣೆ ಮತಗಟ್ಟೆಗಳು, ತಲಾ 1 ರಂತೆ 7 ಸಾಂಪ್ರದಾಯಿಕ ಮತಗಟ್ಟೆಗಳು, ತಲಾ 1 ರಂತೆ 7 ಧೈಯ ಆಧಾರಿತ ಮತಗಟ್ಟೆಗಳು ಹಾಗೂ ತಲಾ 1 ರಂತೆ 7 ವಿಶೇಷ ಚೇತನ ಮತಗಟ್ಟೆಗಳು ಸೇರಿ 63 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿ ವಿಶೇಷವಾಗಿ ಅಲಂಕರಿಸಿ ಮತದಾರರನ್ನು ಕೈಬೀಸಿ ಕರೆಯುವಂತೆ ಸಿಂಗರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಸಖಿ ಮತಗಟ್ಟೆ
103- ಜಗಳೂರು ತಾ; ಮತಗಟ್ಟೆ 8 ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕೊಠಡಿ 1 ಅರಸೀಕೆರೆ. ಇಲ್ಲಿ ಪುರುಷ 334, ಮಹಿಳೆ 345 ಸೇರಿ 679, ಸೊಕ್ಕೆ ಮತಗಟ್ಟೆ 20 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪುರುಷ 388, ಮಹಿಳೆ 395 ಒಟ್ಟು-783. ಪಲ್ಲಾಗಟ್ಟೆ ಮತಗಟ್ಟೆ 90 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪುರುಷ 390, ಮಹಿಳೆ 389 ಸೇರಿ 779, ಜಗಳೂರು ಪಟ್ಟಣ ಮತಗಟ್ಟೆ 190 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಸಂತೆ ಪೇಟೆ) ಕೊಠಡಿ ಸಂಖ್ಯೆ 2 ಇಲ್ಲಿ ಪುರುಷ 635, ಮಹಿಳೆ 688 ಸೇರಿ 1323, ಬಿದರಿಕೆರೆ ಮತಗಟ್ಟೆ 250 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, (ಹಳೆಯ ಕಟ್ಟಡ) (ಪಶ್ಚಿಮ ಭಾಗ) ಪುರುಷ 575, ಮಹಿಳೆ 614 ಸೇರಿ 1189.
ಹರಿಹರ ವಿಧಾನಸಭಾ ಕ್ಷೇತ್ರ
ಹರಿಹರ ಮತಗಟ್ಟೆ 59, ಮೈಸೂರು ಕಿರ್ಲೋಸ್ಕರ್ ಹೈಸ್ಕೂಲ್ ಕೊಠಡಿ ಸಂಖ್ಯೆ-2 ರಲ್ಲಿ ಪುರುಷ 505, ಮಹಿಳೆ 487 ಸೇರಿ 992, ಬೆಳ್ಳೂಡಿ ಮತಗಟ್ಟೆ 111 ಶ್ರೀ ಪಟೇಲ್ ಗುರು ಬಸಪ್ಪ ಪ್ರೌಢಶಾಲೆ ಪುರುಷ 420, ಮಹಿಳೆ 388 ಸೇರಿದಂತೆ 808, ಹರಿಹರ ಮತಗಟ್ಟೆ 46, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಇಲ್ಲಿ ಪುರುಷ 650, ಮಹಿಳೆ 623 ಸೇರಿ 1273, ಮಲೆಬೆನ್ನೂರು ಮತಗಟ್ಟೆ 192 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ 2 ಇಲ್ಲಿ ಪುರುಷ 520, ಮಹಿಳೆ 573 ಸೇರಿ 1093. ಕುಂಬಳೂರು ಮತಗಟ್ಟೆ 167 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-1 ಇಲ್ಲಿ ಪುರುಷ 513, ಮಹಿಳೆ 526 ಒಟ್ಟು-1039.
ವಿಧಾನಸಭಾ ಕ್ಷೇತ್ರ ದಾವಣಗೆರೆ ಉತ್ತರ
ಕ್ಕಕರಗೊಳ್ಳ ಮತಗಟ್ಟೆ 4 ಸರ್ಕಾರಿ ಸಂಯುಕ್ತ ಪಿಯು ಕಾಲೇಜು ಕೊಠಡಿ ಸಂಖ್ಯೆ 1 ಪುರುಷ 582, ಮಹಿಳೆ 615 ಸೇರಿ 1197, ಬೇತೂರು 23 ಗ್ರಾಮ ಪಂಚಾಯಿತಿ ಕಚೆÉೀರಿ ಇಲ್ಲಿ ಪುರುಷ 564, ಮಹಿಳೆ 593 ಒಟ್ಟು-1157, ದಾವಣಗೆರೆ 208 ಅಥಣಿ ಹೈಸ್ಕೂಲ್ ಎಂಸಿಸಿ ಬಿ.ಬ್ಲಾಕ್ ಪುರುಷ 656, ಮಹಿಳೆ 671 ಒಟ್ಟು-1327. ದಾವಣಗೆರೆ 98 ಈಶ್ವರಮ್ಮ ಹೈಯರ್ ಪ್ರೈಮರಿ ಸ್ಕೂಲ್, ಪಿ.ಜೆ.ಬಡಾವಣೆ ಇಲ್ಲಿ ಪುರುಷ 606, ಮಹಿಳೆ 594 ಒಟ್ಟು-1200, ನಿಟ್ಟುವಳ್ಳಿ 137 ಸರ್ಕಾರಿ ಪ್ರೌಢಶಾಲೆ ಶಾಲಾ ಕೊಠಡಿ ಸಂಖ್ಯೆ 2 ರಲ್ಲಿ ಪುರುಷ 477, ಮಹಿಳೆ 539 ಒಟ್ಟು-1016.
ದಾವಣಗೆರೆ ದಕ್ಷಿಣ ಕ್ಷೇತ್ರ
ದಾವಣಗೆರೆ 142 ಮುದೇಗೌಡ್ರು ಮಲ್ಲಮ್ಮ ಮುರಿಗೆಪ್ಪ ಬಾಲಕಿಯರ ಪ್ರೌಢಶಾಲೆ, ಕೆ.ಆರ್.ರಸ್ತೆ ಇಲ್ಲಿ ಪುರುಷ 731, ಮಹಿಳೆ 737 ಒಟ್ಟು-1468. ಶಿರಮಗೊಂಡನಹಳ್ಳಿ 178 ಸರ್ಕಾರಿ ಪ್ರೌಢಶಾಲೆ ಪುರುಷ 497, ಮಹಿಳೆ 519 ಒಟ್ಟು-1016. ಹದಡಿ 202 ಗ್ರಾಮ ಪಂಚಾಯಿತಿ ಕಚೇರಿ ಪುರುಷ 554, ಮಹಿಳೆ 582 ಒಟ್ಟು-1136. ಜಾಲಿನಗರ 36 ಶ್ರೀ ದುಗಾರ್ಂಬಿಕಾ ಸಂಯುಕ್ತ ಪ್ರೌಢಶಾಲೆ ಪ್ರಯೋಗಾಲಯ ಪುರುಷ 336, ಮಹಿಳೆ 378 ಒಟ್ಟು-714, ದಾವಣಗೆರೆ ದೇವರಾಜ ಅರಸ್ ಬಡಾವಣೆ 41 ಶ್ರೀಮತಿ ಚಿರಡೋಣಿ ಕಮಲಮ್ಮ ವೈ ತಿಮ್ಮಪ್ಪ ಶೆಟ್ಟಿ ಸರ್ಕಾರಿ ಮಾಡರ್ನ್ ಹೈಯರ್ ಪ್ರೈಮರಿ ಸ್ಕೂಲ್ ಪುರುಷ 456, ಮಹಿಳೆ 449 ಒಟ್ಟು-905.
ಮಾಯಕೊಂಡ ಕ್ಷೇತ್ರ
ಆನಗೋಡು 61 ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುರುಷ 630, ಮಹಿಳೆ 640 ಒಟ್ಟು-1231, ತೋಳಹುಣಸೆ ಯಲ್ಲಮ್ಮನಗರ 36 ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ಸಂಖ್ಯೆ 1 ಪುರುಷ 364, ಮಹಿಳೆ 357 ಒಟ್ಟು-706. ಮಾಯಕೊಂಡ 160 ಕರ್ನಾಟಕ ಪಬ್ಲಿಕ್ ಸ್ಕೂಲ್ ಪುರುಷ 264, ಮಹಿಳೆ 275 ಒಟ್ಟು-539, ಅತ್ತಿಗೆರೆ 112 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುರುಷ 493, ಮಹಿಳೆ 499 ಒಟ್ಟು-990, ತ್ಯಾವಣಿಗಿ 177, ಕರ್ನಾಟಕ ಪಬ್ಲಿಕ್ ಸ್ಕೂಲ್ ಹೈಸ್ಕೂಲ್ ವಿಭಾಗ ಪುರುಷ 492, ಮಹಿಳೆ 507 ಒಟ್ಟು 999 ಮತದಾರರು.
ವಿಧಾನಸಭಾ ಕ್ಷೇತ್ರ ಚನ್ನಗಿರಿ
ನಲ್ಲೂರು 105 ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಪುರುಷ 640, ಮಹಿಳೆ 635 ಸೇರಿ 1275, ಮಸಣಿಕೆರೆ 248 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪುರುಷ 329, ಮಹಿಳೆ 299 ಸೇರಿ 628. ಕೆರೆಬಿಳಚಿ 62 ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ (ಪಶ್ಚಿಮ ಭಾಗ) ಪುರುಷ 401, ಮಹಿಳೆ 465 ಒಟ್ಟು-866, ಹಿರೇಕೂಗಲೂರು 17 ಶ್ರೀ ತರಳಬಾಳು ಜಗದ್ಗುರ ಸರ್ಕಾರಿ ಜೂನಿಯರ್ ಕಾಲೇಜು ಹೈಸ್ಕೂಲ್ ವಿಭಾಗ ಪುರುಷ 608, ಮಹಿಳೆ 636 ಒಟ್ಟು-1244, ಚನ್ನಗಿರಿ ಬಿ.ಇ.ಓ ಕಚೇರಿ ಹಿಂಭಾಗ 169 ಸರ್ಕಾರಿ ಸಂಯುಕ್ತ ಬಾಲಕಿಯರ ಪ್ರೌಢಶಾಲೆ ಪುರುಷ 608, ಮಹಿಳೆ 636 ಒಟ್ಟು-1244.
ಹೊನ್ನಾಳಿ ಕ್ಷೇತ್ರ
ಸುರಹೊನ್ನೆ 169 ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪುರುಷ 432 ಮಹಿಳೆ 489 ಒಟ್ಟು-921, ಗೋವಿನಕೋವಿ 149 ಸರ್ಕಾರಿ ಪ್ರೌಢಶಾಲೆ ಪುರುಷ 563, ಮಹಿಳೆ 616 ಒಟ್ಟು-1179, ನ್ಯಾಮತಿ 178 ಸರ್ಕಾರಿ ಪಿಯು ಕಾಲೇಜು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುರುಷ 495, ಮಹಿಳೆ 520 ಒಟ್ಟು-1015, ಹಿರೇಬಾಸೂರು 129 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುರುಷ 340, ಮಹಿಳೆ 314 ಒಟ್ಟು-654, ಹೊನ್ನಾಳಿ ತಾಲ್ಲೂಕು ಪಂಚಾಯತ್ ಕಚೇರಿ 84 ಪುರುಷ 294, ಮಹಿಳೆ 303 ಸೇರಿ 597 ಮತದಾರರು.
ಯುವ ಮತದಾರರ ಮತಗಟ್ಟೆಗಳು
ಜಗಳೂರು ತಾ; 183 ಜಗಳೂರು ಪಟ್ಟಣದ ಹೊರಕೆರೆ ಅಂಗನವಾಡಿ ಕೇಂದ್ರ ಇಲ್ಲಿ ಪುರುಷ 353, ಮಹಿಳೆ 377 ಒಟ್ಟು-730, ಹರಿಹರ ತಾ; 61 ಮೈಸೂರು ಕಿರ್ಲೋಸ್ಕರ್ ಪ್ರೌಢಶಾಲೆ ಕೊಠಡಿ ಸಂಖ್ಯೆ-5 ಇಲ್ಲಿ ಪುರುಷ 708, ಮಹಿಳೆ 731 ಸೇರಿ 1439, ದಾವಣಗೆರೆ ಉತ್ತರ; ಕುಂದುವಾಡ ರಸ್ತೆ ಚಿಗಟೇರಿ ಬಡಾವಣೆ 49 ಸಪ್ತಗಿರಿ ವಿದ್ಯಾಲಯ ಇಲ್ಲಿ ಪುರುಷ 415, ಮಹಿಳೆ 403 ಸೇರಿ 818, ದಾವಣಗೆರೆ- ದಕ್ಷಿಣ; 2 ಯರಗುಂಟೆ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 725, ಮಹಿಳೆ 747, ಒಟ್ಟು-1472. ಮಾಯಕೊಂಡ ಕ್ಷೇತ್ರ; 159 ಮಾಯಕೊಂಡ ಕರ್ನಾಟಕ ಪಬ್ಲಿಕ್ ಶಾಲೆ (ಪ್ರಾಥಮಿಕ ವಿಭಾಗ) ಪುರುಷ 453, ಮಹಿಳೆ 488 ಸೇರಿ ಒಟ್ಟು-941. ಚನ್ನಗಿರಿ ಕ್ಷೇತ್ರ; 138 ಮುದಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 499, ಮಹಿಳೆ 508 ಒಟ್ಟು-1007. ಹೊನ್ನಾಳಿ ಕ್ಷೇತ್ರ; 193 ಕುಳಗಟ್ಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 382, ಮಹಿಳೆ 369 ಸೇರಿ 751 ಮತದಾರರಿದ್ದಾರೆ.
ಸಾಂಪ್ರದಾಯಿಕ ಮತಗಟ್ಟೆಗಳು
ಜಗಳೂರು ತಾ; 76 ಅಣಬೂರು ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 638, ಮಹಿಳೆ 616 ಒಟ್ಟು-1254. ಹರಿಹರ ಕ್ಷೇತ್ರ; 153 ಯಲವಟ್ಟಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 457, ಮಹಿಳೆ 434 ಒಟ್ಟು-891. ದಾವಣಗೆರೆ ಉತ್ತರ; 200 ದಾವಣಗೆರೆ ಭದ್ರಾ ಕಾಲೋನಿಯ ಕಾರ್ಯಪಾಲಕ ಅಭಿಯಂತರ ಕಚೇರಿ ಇಲ್ಲಿ ಪುರುಷ 667, ಮಹಿಳೆ 654 ಒಟ್ಟು-1321, ದಾವಣಗೆರೆ- ದಕ್ಷಿಣ; 169 ಜಾಲಿನಗರ ಜನತಾ ವಿದ್ಯಾಲಯ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ ಇಲ್ಲಿ ಪುರುಷ 476, ಮಹಿಳೆ 476 ಒಟ್ಟು-952. ಮಾಯಕೊಂಡ ಕ್ಷೇತ್ರ; 5 ಶ್ರೀರಾಮನಗರ ಲಂಬಾಣಿಹಟ್ಟಿ ಮಜರೆ ಗ್ರಾಮ ಆಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೂರ್ವ ಭಾಗ, ಇಲ್ಲಿ ಪುರುಷ 325, ಮಹಿಳೆ 345 ಒಟ್ಟು-670. ಚನ್ನಗಿರಿ ವಿಧಾನಸಭಾ ಕ್ಷೇತ್ರ; 100 ಅಸ್ತಾಪನಹಳ್ಳಿ ಸರ್ಕಾರಿ ಎಸ್ಟಿ ಆಶ್ರಮ ಶಾಲೆ ಇಲ್ಲಿ ಪುರುಷ 474, ಮಹಿಳೆ 505, ಒಟ್ಟು-979. ಹೊನ್ನಾಳಿ ಕ್ಷೇತ್ರ; 92 ಆಂಜಿನೇಯಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 296, ಮಹಿಳೆ 276 ಸೇರಿ ಒಟ್ಟು-572.
ಧ್ಯೇಯ ಆಧಾರಿತ ಮತಗಟ್ಟೆಗಳು
ಜಗಳೂರು ಕ್ಷೇತ್ರ; 238 ಮುಸ್ಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 501, ಮಹಿಳೆ 546 ಒಟ್ಟು-1047. ಹರಿಹರ ಕ್ಷೇತ್ರ; 98 ಹನಗವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 325, ಮಹಿಳೆ 330 ಒಟ್ಟು-655, ದಾವಣಗೆರೆ- ಉತ್ತರ; 201 ದಾವಣಗೆರೆ ಭದ್ರಾ ಕಾಲೋನಿಯ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಇಲ್ಲಿ ಪುರುಷ 678, ಮಹಿಳೆ 680 ಒಟ್ಟು-1358, ದಾವಣಗೆರೆ- ದಕ್ಷಿಣ; 139 ಜಯದೇವ ಹಾಸ್ಟೆಲ್, ಹದಡಿ ರಸ್ತೆಯ ಶ್ರೀಮತಿ ಗೌರಮ್ಮ ಡಿ.ಎಂ. ಹನಗೋಡಿ ಮಠದ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಇಲ್ಲಿ ಪುರುಷ 158, ಮಹಿಳೆ 173 ಒಟ್ಟು-331. ಮಾಯಕೊಂಡ ಕ್ಷೇತ್ರ; 41 ಹೊನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಇಲ್ಲಿ ಪುರುಷ 449, ಮಹಿಳೆ 461, ಒಟ್ಟು-910, ಚನ್ನಗಿರಿ ಕ್ಷೇತ್ರ; 160 ಚನ್ನಗಿರಿ ಪಟ್ಟಣ ಸರ್ಕಾರಿ ಸಂಯುಕ್ತ ಬಾಲಕಿಯರ ಪ್ರೌಢಶಾಲೆ ಇಲ್ಲಿ ಪುರುಷ 573, ಮಹಿಳೆ 607, ಒಟ್ಟು-1180. ಹೊನ್ನಾಳಿ ಕ್ಷೇತ್ರ; 232 ಚೀಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 462, ಮಹಿಳೆ 510, ಒಟ್ಟು-972 ಮತದಾರರು.
ವಿಶೇಷ ಚೇತನರಿಂದ ನಿರ್ವಹಿಸುವ ಮತಗಟ್ಟೆಗಳು
ಜಗಳೂರು ಕ್ಷೇತ್ರ; 181 ಜಗಳೂರು ಪಟ್ಟಣದ ಹೊರಕೆರೆ ಸರ್ಕಾರಿ ಕನ್ನಡ ಮಾದರಿ ಹೈಯರ್ ಪ್ರೈಮರಿ ಸ್ಕೂಲ್, ಇಲ್ಲಿ ಪುರುಷ 257, ಮಹಿಳೆ 244, ಒಟ್ಟು-501. ಹರಿಹರ ಕ್ಷೇತ್ರ; 113 ಬೆಳ್ಳೂಡಿ ಶ್ರೀ ಪಟೇಲ್ ಗುರುಬಸಪ್ಪ ಪ್ರೌಢಶಾಲೆ ಇಲ್ಲಿ ಪುರುಷ 601, ಮಹಿಳೆ 613 ಸೇರಿ 1214. ದಾವಣಗೆರೆ- ಉತ್ತರ; 178 ನಿಟ್ಟುವಳ್ಳಿ ಸರ್ಕಾರಿ ಪ್ರೌಢಶಾಲೆ ಕೊಠಡಿ 4 ರಲ್ಲಿ ಪುರುಷ 620, ಮಹಿಳೆ 664 ಒಟ್ಟು-1284. ದಾವಣಗೆರೆ- ದಕ್ಷಿಣ; 39 ಶಿವಾಲಿ ಟಾಕೀಸ್ ರಸ್ತೆ, ಕೌಶಲಾಭಿವೃದ್ಧಿಗಾಗಿ ಸಂಯೋಜಿತ ಪ್ರಾದೇಶಿಕ ಕೇಂದ್ರ ಇಲ್ಲಿ ಪುರುಷ 614, ಮಹಿಳೆ 620 ಸೇರಿ 1234. ಮಾಯಕೊಂಡ ಕ್ಷೇತ್ರ; 61 ಆನಗೋಡು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 598, ಮಹಿಳೆ 634 ಸೇರಿ 1232. ಚನ್ನಗಿರಿ ಕ್ಷೇತ್ರ; 36 ಸಂತೆಬೆನ್ನೂರು ಶ್ರೀಶೈಲ ಜಗದ್ಗುರು ವಾಗೀಶ ಪಾಂಡಿತರಾಧ್ಯ ಸರ್ಕಾರಿ ಜೂನಿಯರ್ ಕಾಲೇಜು, ಇಲ್ಲಿ ಪುರುಷ 420, ಮಹಿಳೆ 423, ಒಟ್ಟು-843. ಹಾಗೂ ಹೊನ್ನಾಳಿ ವಿಧಾನಸಭಾ ಕ್ಷೇತ್ರ ಮತಗಟ್ಟೆ 74 ಹೊನ್ನಾಳಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಇಲ್ಲಿ ಪುರುಷ 270, ಮಹಿಳೆ 314 ಸೇರಿದಂತೆ ಒಟ್ಟು 584 ಮತದಾರರಿದ್ದಾರೆ.
ವಿಶೇಷಚೇತನರಿಗೆ ವಿಶೇಷವಾಗಿ ಎಲ್ಲಾ ಮತಗಟ್ಟೆ ಸಿಬ್ಬಂದಿಗಳಿಗೆ ಇನ್ನೋವಾ ವಾಹನ ನೀಡಿದ್ದು ಮಸ್ಟರಿಂಗ್, ಡಿ.ಮಸ್ಟರಿಂಗ್ನಲ್ಲಿ ಮೊದಲ ಆದ್ಯತೆ ನೀಡಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಸುದ್ದಿದಿನಡೆಸ್ಕ್: 2024-25ನೇ ಸಾಲಿನ ರಾಜ್ಯ ಮುಂಗಡ ಪತ್ರ ಹಿನ್ನೆಲೆಯಲ್ಲಿ ರೈತ ಸಂಘಗಳ ಪ್ರತಿನಿಧಿಗಳು ಹಾಗೂ ಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿಂದು ಸಭೆ ನಡೆಸಿದರು.ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಮುಂಗಡ ಪತ್ರ ಮಂಡನೆ ಹಿನ್ನೆಲೆಯಲ್ಲಿ ರೈತ ನಾಯಕರೊಂದಿಗೆ ಸಭೆ ನಡೆಸಿ, ಅವರ ಅಭಿಪ್ರಾಯ ಪಡೆಯಲಾಗಿದೆ. ಬಜೆಟ್ನಲ್ಲಿ ಸರ್ಕಾರದ ಇತಿಮಿತಿಯಲ್ಲಿ ಏನು ಸೇರಿಸಬೇಕು ಎಂಬ ಬಗ್ಗೆ ಚರ್ಚೆಯಾಗಿದೆ. ರೈತರ ಹಿತ ಕಾಪಾಡುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಗೃಹಲಕ್ಷ್ಮಿ, ಪಡಿತರ ಸಹಾಯಧನದ ಬಾಕಿಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯನ್ನು ನಡೆಸಲು ರಾಜ್ಯ ಸರ್ಕಾರ ಸಿದ್ಧವಿದೆ. ಈ ಸಂಬಂಧ ಹೈಕೋರ್ಟ್ ನೀಡುವ ಆದೇಶವನ್ನು ಪಾಲಿಸಲಾಗುವುದು ಎಂದು ಪುನರುಚ್ಚರಿಸಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಅವರು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾರ್ಚ್ 3 ರಂದು ವಿಧಾನಮಂಡಲ ಅಧಿವೇಶನ; 7 ರಂದು ಬಜೆಟ್ ಮಂಡನೆಗೆ ಸರ್ಕಾರ ನಿರ್ಧಾರ

ಸುದ್ದಿದಿನಡೆಸ್ಕ್:ಮಾರ್ಚ್ 7 ರಂದು ರಾಜ್ಯ ಸರ್ಕಾರದ ಬಜೆಟ್ ಮಂಡನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ 3 ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಅಂದು ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಮಾರ್ಚ್ 4 ರಿಂದ ಮೂರು ದಿನ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಎಷ್ಟು ದಿನ ಅಧಿವೇಶನ ನಡೆಸಬೇಕು ಎನ್ನುವುದನ್ನು ಕಲಾಪ ಸಲಹಾ ಸಮಿತಿ ನಿರ್ಧಾರ ಮಾಡಲಿದೆ ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉತ್ಸವಗಳ ಹೆಸರಲ್ಲಿ ಮೌಢ್ಯ ತೊರೆಯಬೇಕು : ಈಶ್ವರಾನಂದಪುರಿ ಸ್ವಾಮೀಜಿ

ಸುದ್ದಿದಿನ,ದಾವಣಗೆರೆ: ನಮಗೆ ಇಂದು ಭಕ್ತಿ ಮತ್ತು ಜ್ಞಾನ ಎರಡೂ ಮುಖ್ಯ. ಭಕ್ತಿ ಹೆಚ್ಚಿಸುವ ದೇವಾಲಯಗಳ ಜತೆಯಲ್ಲೇ ಜ್ಞಾನ ವಿಸ್ತರಿಸುವ ವಿದ್ಯಾಲಯಗಳೂ ಹೆಚ್ಚಬೇಕು ಎಂದು ಹೊಸದುರ್ಗ ಕನಕ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಹಳೆಕುಂದುವಾಡ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಆಂಜನೇಯ ಸ್ವಾಮಿ, ಶ್ರೀ ಬಸವೇಶ್ವರ ದೇವಸ್ಥಾನದ ಉದ್ಘಾಟನೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಂದಿನ ಮಕ್ಕಳನ್ನು ಐಎಎಎಸ್, ಕೆಎಎಸ್ನಂತಹ ಉನ್ನತ ಶಿಕ್ಷಣ ಹಾಗೂ ಸಂಸ್ಕಾರ ನೀಡಲು ಪಾಲಕರು ಮುಂದಾಗಬೇಕು. ಉತ್ಸವಗಳ ಹೆಸರಲ್ಲಿ ಮೌಢ್ಯ ತೊರೆಯಬೇಕು. ದುಂದುವೆಚ್ಚ ಕಡಿಮೆ ಮಾಡಬೇಕು ಎಂದೂ ಸಲಹೆ ನೀಡಿದರು.
ಶ್ರೀಕೃಷ್ಣನು ಕನಕನಿಗೆ, ಶ್ರೀರಾಮನು ಶಬರಿಗೆ ಒಲಿದಿದ್ದು ಜಾತಿಯಿಂದಲ್ಲ; ಅವರಲ್ಲಿದ್ದ ಭಕ್ತಿಯಿಂದಾಗಿ. ಭಕ್ತಿ ಮತ್ತು ಭಕ್ತನಿಗೆ ಜಾತಿ ಇಲ್ಲ. ಎಲ್ಲ ಸ್ವಾಮೀಜಿಗಳನ್ನು, ವರ್ಗದವರನ್ನು ಒಗ್ಗೂಡಿಸಿದ ಕುಂದುವಾಡ, ಸಾಮರಸ್ಯದ ಗ್ರಾಮವಾಗಿದೆ. ಪ್ರತಿ ಗ್ರಾಮದಲ್ಲೂ ಇಂತಹ ವಾತಾವರಣ ಇರಬೇಕು ಎಂದು ಆಶಿಸಿದರು.
ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ ಆಂಜನೇಯನಿಗೆ ಸೀಮಿತ ಜಾತಿಯ ಭಕ್ತರಿಲ್ಲ. ಆತ ಜಾತ್ಯತೀತ ವ್ಯಕ್ತಿ. ಭಕ್ತಿಗೆ ಹೆಸರಾದ ಆಂಜನೇಯ ಹಾಗೂ ಸಮಾನತೆಗೆ ಹೆಸರಾದ ಬಸವೇಶ್ವರರ ದೇಗುಲ ಪ್ರತಿಷ್ಠಾಪನೆಯನ್ನು ಕುಂದುವಾಡ ಗ್ರಾಮಸ್ಥರು ಭಾವೈಕ್ಯ, ಸೌಹಾರ್ದ ಹಾಗೂ ಸಹಬಾಳ್ವೆಯಿಂದ ಮಾಡುತ್ತಿದ್ದಾರೆ. ಈ ಕುಂದುವಾಡ ಗ್ರಾಮ ಸೌಹಾರ್ದ ಗ್ರಾಮವಾಗಿ ಬದಲಾಗಲಿ ಎಂದು ಹೇಳಿದರು.
ಹದಡಿಯ ಚಂದ್ರಗಿರಿ ಮಠದ ಮುರಳೀಧರ ಸ್ವಾಮೀಜಿ ಮಾತನಾಡಿ ಎಲ್ಲವನ್ನು ಕೊಟ್ಟ ದೇವರನ್ನು ಮರೆಯುತ್ತಿದ್ದೇವೆ. ನಿಸರ್ಗವನ್ನು ಹಾಳು ಮಾಡುತ್ತ, ಮಾಲಿನ್ಯ ಹೆಚ್ಚಿಸುತ್ತಿದ್ದೇವೆ. ನಮ್ಮಲ್ಲಿ ಭಯ ಮೂಡಿಸಲು ಹಿರಿಯರು ಊರಿಗೊಂದು ದೇವಸ್ಥಾನ ನಿರ್ಮಿಸಿದ್ದಾರೆ. ಆದರೆ ನಮ್ಮೊಳಗಿರುವ ದೇವರನ್ನು ನಾವು ಕಾಣಬೇಕು. ಮದಗಳನ್ನು ಕೈಬಿಡಬೇಕು. ಧರ್ಮ ಕಾರ್ಯ, ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ ಬಸವತತ್ವ ಎಲ್ಲರೂ ಕೂಡಿ ಬಾಳುವುದನ್ನು ಹೇಳಿದೆ. ಎಲ್ಲ ವರ್ಗಗಳಿಗೂ ಬಸವಣ್ಣನವರು ಸಾಮಾಜಿಕ ನ್ಯಾಯ ನೀಡಿದರು. ನಾವಿಂದು ಅವರ ದಾರಿಯಲ್ಲಿ ಸಾಗಬೇಕಿದೆ. ಬಸವಣ್ಣ ಕಂಡು ಕನಸು ಕುಂದುವಾಡ ಗ್ರಾಮದಲ್ಲಿ ಅನಾವರಣವಾಗಿದ್ದು, ಇಲ್ಲಿ ಸದಾ ಶಾಂತಿ ನೆಲೆಸಲಿ ಎಂದು ಆಶಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಗ್ರಾಮದವರು ತುಂಬಾ ಒಗ್ಗಟ್ಟಿನಿಂದ ದೇವಾಲಯ ನಿರ್ಮಾಣ ಮಾಡಿರೋದು ಮೆಚ್ಚುವಂತಾಗಿದೆ,
ತಡವಾಗಿಯಾದರೂ ಗ್ರಾಮದಲ್ಲಿ ದೇಗುಲಗಳು ಉತ್ತಮವಾಗಿ ನಿರ್ಮಿತವಾಗಿವೆ. ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.
ದಾವಣಗೆರೆ- ಹಳೇ ಕುಂದುವಾಡ ಮುಖ್ಯ ರಸ್ತೆಗೆ ಹೊಂದಿಕೊಂಡ ರಸ್ತೆ ವ್ಯಾಜ್ಯ ನ್ಯಾಯಾಲಯದಲ್ಲಿದ್ದು ಇದನ್ನು ತೆರವುಗೊಳಿಸಿದಲ್ಲಿ ಗ್ರಾಮಸ್ಥರು ಬಯಸಿದಂತೆ 80 ಅಡಿ ರಸ್ತೆ ನಿರ್ಮಾಣ ಮಾಡಲು ಬದ್ಧನಿದ್ದೇನೆ. ಈ ಸಂಬಂಧ ದೂಡಾ ಅಧಿಕಾರಿಗಳು, ಜಮೀನಿನ ಮಾಲೀಕರು, ಗುತ್ತಿಗೆದಾರರನ್ನು ಸೇರಿಸಿ ಸಭೆ ನಡೆಸೋಣ ಎಂದರು.
ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಈ ಭಾಗದಲ್ಲಿ ದೇಗುಲಗಳ ಸಂಖ್ಯೆ ಹೆಚ್ಚಿದೆ. ಹಿಂದುಳಿದ ವರ್ಗದ ಮಕ್ಕಳು ವಿದ್ಯಾವಂತರಾದರೆ ಇಂತಹ ಹತ್ತು ದೇವಸ್ಥಾನ ಕಟ್ಟುತ್ತಾರೆ, ಹೀಗಾಗಿ ಶಾಲೆಗಳ ನಿರ್ಮಾಣಕ್ಕೂ ಮಹತ್ವ ನೀಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಮೈಲಾರ ಕ್ಷೇತ್ರದ ಕಾರ್ಣಿಕ ನುಡಿಯುವ ರಾಮಪ್ಪಜ್ಜ, ಹಳೆಕುಂದುವಾಡದ ಸ್ವಾಮಿಜಿ ರಾಜಣ್ಣ, ಮುಖಂಡರಾದ ಬಿ.ಜಿ. ಅಜಯಕುಮಾರ್, ಲೋಕಿಕೆರೆ ನಾಗರಾಜ್, ಶ್ರೀನಿವಾಸ ದಾಸಕರಿಯಪ್ಪ, ಎಚ್. ವೆಂಕಟೇಶ್, ಜೆ.ಎನ್. ಶ್ರೀನಿವಾಸ್. ಶ್ವೇತಾ ಶ್ರೀನಿವಾಸ್, ಮುದೇಗೌಡ್ರ ಗಿರೀಶ್, ತಹಸೀಲ್ದಾರ್ ಬಿ.ಎನ್.ಅಶ್ವಥ್, ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮದ ಮುಖಂಡರು, ಯುವಕರು, ಗ್ರಾಮಸ್ಥರು ಸೇರಿದಂತೆ ಇತರರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಫೆಬ್ರವರಿ 17 ಮತ್ತು 18ಕ್ಕೆ ಕಲಬುರಗಿಯಲ್ಲಿ ಮೀಡಿಯಾ ಫೆಸ್ಟ್-2025
-
ದಿನದ ಸುದ್ದಿ7 days ago
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
-
ದಿನದ ಸುದ್ದಿ5 days ago
ಜಿಎಂ ಡಿಪ್ಲೋಮೋ ಕಾಲೇಜಿನ 44 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ
-
ದಿನದ ಸುದ್ದಿ2 days ago
ಕವಿತೆ | ನಾನೊಲಿದೆನಯ್ಯಾ
-
ದಿನದ ಸುದ್ದಿ4 days ago
ತುಂಬಿದ ಕೊಡ ತುಳುಕಿತಲೇ ಪರಾಕ್..!
-
ದಿನದ ಸುದ್ದಿ3 days ago
ಜನಸಿರಿ ಫೌಂಡೇಶನ್ ವತಿಯಿಂದ ಕವಿಗಳ ಕಲರವ
-
ದಿನದ ಸುದ್ದಿ18 hours ago
ಉತ್ಸವಗಳ ಹೆಸರಲ್ಲಿ ಮೌಢ್ಯ ತೊರೆಯಬೇಕು : ಈಶ್ವರಾನಂದಪುರಿ ಸ್ವಾಮೀಜಿ
-
ದಿನದ ಸುದ್ದಿ18 hours ago
ಮಾರ್ಚ್ 3 ರಂದು ವಿಧಾನಮಂಡಲ ಅಧಿವೇಶನ; 7 ರಂದು ಬಜೆಟ್ ಮಂಡನೆಗೆ ಸರ್ಕಾರ ನಿರ್ಧಾರ