ಲೈಫ್ ಸ್ಟೈಲ್
ಪರಿಸರ ಪಾಠ
ಅಂದು ಮುಂಜಾನೆ ಬೇಗನೆ ಎದ್ದು , ಪರಿಸರ ಅಧ್ಯಯನ ಶಿಬಿರಕ್ಕೆ ಹೋಗಲು ತಯಾರಾದೆ.ಕಳೆದ ಶೈಕ್ಷಣಿಕ ಸಾಲಿನಲ್ಲಿ ನಮ್ಮ ಕಾಲೇಜಿನ ವತಿಯಿಂದ ನಮ್ಮನ್ನು ಬಂಡಿಪುರ ಅರಣ್ಯಕ್ಕೆ ಕರೆದೊಯ್ದಿದ್ದರು . ಈ ಭಾರಿ ಭದ್ರಾ ಅಭಯಾರಣ್ಯಕ್ಕೆ ಹೊರಟಿದ್ದೆವು. ಅಂದು ಮಂಜಿನ ಬೆಳಗ್ಗೆ ಸುಮಾರು ಒಂದು ತಾಸು ನಗರದ ಬೀದಿ ಬೀದಿಗಳಲ್ಲಿ ನನ್ನ ಸ್ನೇಹಿತರು ತಂಗಿದ್ದ ತಾಣವನ್ನೇ ಹುಡುಕಿದೆ. ಹಲವು ಕಟ್ಟಡಗಳ ನಡುವೆ ಅವರಿದ್ದ ಕಟ್ಟಡ ಮರೆಯಾಗಿತ್ತು.
ಹೇಗೋ ನಮ್ಮ ವಿಭಾಗದ ಮೇಷ್ಟ್ರಿಗೆ ಕರೆ ಮಾಡಿ ಶಿಬಿರಕ್ಕೆ ಹೋಗಲೆಂದು ಹೊರಟ್ಟಿದ್ದ ಬಸ್ ಬಳಿ ತಲುಪಿದೆ. ಸಮಯ ಐದಕ್ಕೆ ಸರಿಯಾಗಿ ಹಾಸನದಿಂದ ಭದ್ರಾ ಅಭಯಾರಣ್ಯಕ್ಕೆ ನಮ್ಮ ಬಂಡಿ ಸಾಗಿತು. ಇನ್ನು ಚಂದಿರ ಸರಿದಿರದ ಕಾರಣ ನಾವೆಲ್ಲರೂ ನಿದ್ದೆಗೆ ಜಾರಿದೆವು. ದಾರಿ ಹರಿದಂತೆ ಪಯಣದ ಹುಮ್ಮಸ್ಸಿಗಾಗಿ ಡಿ.ಜೆ. ಹಾಡಿಗೆ ಹೆಜ್ಜೆ ಹಾಕ ತೊಡಗಿದೆವು., ಸಮಯ-ಹಾದಿ ಕಳದದ್ದೆ ತಿಳಿಯಲಿಲ್ಲ….!ಸುಮಾರು ಒಂಬತ್ತು ಮೂವತಕ್ಕೆ ಸರಿಯಾಗಿ ಲಕ್ಕವಳ್ಳಿ ತಲುಪಿದೆವು .
ಅರಣ್ಯಕ್ಕೆ ಹೋದಾಕ್ಷಣ ನಮ್ಮೊಳಗೆ ಮೌನ ಆವರಿಸಿತು. ಪರಿಸರದ ಬಗ್ಗೆ , ಕುತೂಹಲ , ಏಕಾಗ್ರತೆ ಹೆಚ್ಚಾಯಿತು, ನಾವೆಲ್ಲರೂ ನಮ್ಮ ಜಂಗಮವಾಣಿಗಳನ್ನು ಬಂದ್ ಮಾಡಿ ಶಿಬಿರದ ಉದ್ಘಾಟನಾ ಕಾರ್ಯಕ್ರದಲ್ಲಿ ಭಾಗಿಯಾದೆವು . ಕೇವಲ ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದು ಸರ್ವೆ ಸಾಮಾನ್ಯ ಅದೇ ನೈಜ್ಯ ಶಾಲೆಯಾದ ಪರಿಸರದೊಂದಿಗೆ ಕಲಿಯುವುದು ಸಾಕಷ್ಟಿದೆ ಎಂಬುದು ನನಗರಿವಾಯಿತು. ಅಲ್ಲಿನ ಸ್ಥಳೀಯ ಪರಿಸರ ತಜ್ಞರೊಬ್ಬರು ಶಿಬಿರವನ್ನು ಉದ್ಘಾಟಿಸಿ ಭದ್ರಾ ಅಭಯಾರಣ್ಯದಲ್ಲಿರುವ ಸಸ್ಯ ಸಂಕುಲದ ಬಗ್ಗೆ ಪರಿಚಯಿಸಿದರು. ವಿಧ ವಿಧ ಬಗೆಯ ಕೀಟ , ಪ್ರಾಣಿ , ಪಕ್ಷಿ , ಹೂಗಳ ಬಗ್ಗೆ ಮಾಹಿತಿ ನೀಡಿದರು. ಬರೀ ಪಠ್ಯಕ್ರಮಕ್ಕೆ ಸೀಮಿತವಾಗಿ ಕಲಿತುತ್ತಿರುವ ನಮಗೆ ಪಠ್ಯೇತ್ತರ ಪಾಠಗಳನ್ನು ಆಲಿಸುವುದು ಬಹಳ ಹಿತಕರವೆನ್ನಿಸಿತು.
ನಂತರ ಅರಣ್ಯದ ವೈಶಿಷ್ಟ್ಯತೆಯ ಕುರಿತು ವಿಡಿಯೋ ತೋರಿಸುತ್ತಾ ಸಿಗ್ನೇಚರ್ ಎಂಬ ಜೇಡರ ಹುಳಿವಿನ ಬಗ್ಗೆ ವಿವರಿಸಿದರು. ಈ ಜೇಡ ಬಲೆಯಲ್ಲಿ ಒಂದು ರೀತಿಯ ಬಿಳಿ ಗೆರೆ ಹೆಣೆದಿರುತ್ತದೆ ಎಂದು ತಿಳಿಸಿದರು. ಅದಾದ ಮೇಲೆ ಹೀಗೆ ಸಫಾರಿ ಹೋಗಲು ಹೊರಡುವ ಮುನ್ನ ಅತ್ತಿತ್ತ ಸುತ್ತಾಡುತ್ತಾ ಇದ್ದಾಗ ಅಲ್ಲಿಯೇ ಲೈಟು ಕಂಬಕ್ಕೆ ಬಲೆಯೊಂದು ಹೆಣೆದಿತ್ತು . ಅದು ತಜ್ಞರು ವಿವರಿಸಿದ ಸಿಗ್ನೇಚರ್ ಜೇಡ ಒಂದು ರೀತಿಯ ಅಪರೂಪದ ಕೀಟವಾಗಿತ್ತು.ಅದರ ವೈಶಿಷ್ಟ್ಯತೆ ಹಾಗು ಕುಶಲತೆಯನ್ನು ಕಂಡು ಅಚ್ಚರಿಯಾಯಿತು.
ನಮ್ಮನ್ನು ಸಫಾರಿ ಕರೆದುಕೊಂಡು ಹೋದರು. ಸಫಾರಿಯಲ್ಲಿ ಮೊದಮೊದಲು ಖಾಲಿ ಕಾಡು ಕಾಣಿಸಿತಾದರೂ ಮುಂದೆ ದಾರಿ ಸವೆದಂತೆ ಲಂಗೂರ್, ಸಾಂಬಾರ್, ಕಾಡು ಎಮ್ಮೆ- ಕೋಣ , ಗುಳ್ಳೇ ನರಿ , ವಿಶಿಷ್ಟ ಕೆಂಪು ಬಾಲದ ಅಳಿಲು , ಉಲಿವ ನವಿಲು , ಉಡ, ಕಾಡು ಹಂದಿ ಎಲ್ಲವೂ ನೋಡಲು ಸಿಕ್ಕವು. ಆ ರಾತ್ರಿ ಸಫಾರಿಯಿಂದ ವಾಪ್ಪಸ್ಸಾದಾಗ ಮೇಷ್ಟ್ರು ಹೇಳಿದ ಮಾತಿನಂತೆ ಇಡೀ ರಾತ್ರಿ ಅನುಭವ ಲೇಖನ ವನ್ನು ಬರೆಯುತ್ತಿದ್ದವು.ಅಲ್ಲಿನ ಚಳಿಗೆ ನಿದ್ದೆಗೆ ಜಾರಿದ್ದೆ ಅರಿವಾಗಲಿಲ್ಲ. ಬೆಳಗಾದಾಗ ಭದ್ರಾ ನದಿಯ ಹಿನ್ನೋಟ ನಮ್ಮೆಲ್ಲರ ಕಣ್ ಸೆಳೆಯಿತು . ಬಂದ್ ಮಾಡಿದ್ದ ಮೊಬೈಲ್ ಗಳ ತೆಗೆದುಕೊಂಡು ಸುಂದರ ಪಟಗಳ ತೆಗೆಯುವಲ್ಲಿ-ತೆಗೆದುಕೊಳ್ಲುವಲ್ಲಿ ನಿರತರಾದೆವು . ಮುಂದೆ ನಮ್ಮ ಪಯಣ ಹತ್ತಿರದ ಸಕ್ಕರೆಬೈಲು ಆನೆ ಶಿಬಿರಕ್ಕೆ ಭೇಟಿ ನೀಡಿದೆವು . ಅಲ್ಲಿ ಆನೆಗಳಿಗೆ ತಾಲೀಮು ಮಾಡುತ್ತಿದ್ದದ್ದನ್ನು ಹತ್ತಿರದಿಂದ ಗಮನಿಸಿದೆವು.
ಮಾವುತರ ಆದೇಶದಂತೆ ಆನೆಗಳು ಶಿಸ್ತು ಭದ್ದವಾಗಿ ವರ್ತಿಸುತ್ತಿದ್ದವು, ಮಕ್ಕಳಂತೆ ಚೆಂಡಾಟ ಆಡುತ್ತಾ, ಪ್ರವಾಸಿಗರಿಗೆ ಸೊಂಡಿಲಲ್ಲಿ ನಮಿಸುತ್ತಾ ಲವಲವಿಕೆಯಿಂದ ಇದ್ದವು. ಮನುಷ್ಯನ ದುರಾಸೆಯಿಂದಾಗಿಯೇ ಎಷ್ಟೋ ಕಾಡು ನಾಶವಾಗುತ್ತದೆ. ಪ್ರಾಣಿಗಳು ನಾಡಿಗೆ ಬಂದು ದಾಳಿ ಮಾಡಲು ಕೆಲವೊಮ್ಮೆ ಮಾನವನೇ ಕಾರಣಕರ್ತರಾಗಿದ್ದಾನೆ. ಇಂತಹ ವಿಚಾರಗಳನ್ನು ನಾವೂ ಪರಿಸರದೊಳಗೆ ಪರಿಸರ ಜೀವಿಯಾದಾಗ ಮಾತ್ರ ಅರಿವಾಗುತ್ತದೆ ಹೊರತು ಕಾಂಕ್ರೀಟ್ ಕಾಡೊಳಗೆ ಬಾವಿ ಕಪ್ಪೆಗಳಂತೆ ಇದ್ದರೆ ಪ್ರಕೃತಿಯ ಬಗ್ಗೆ ಕಿಂಚಿತ್ತು ತಿಳಿಯಲಾಗುವುದಿಲ್ಲ.
ಸಕ್ಕರೆಬೈಲಿನಲ್ಲಿ ಸಂವೇದನೀಯ ವಿಚಾರಗಳು ಮಸ್ತಕದಲ್ಲಿ ಮೂಡಿದವು. ಮಧ್ಯಾಹ್ನ ನಮ್ಮ ನಾಡಿನ ಹೆಮ್ಮೆಯ ಕವಿ ಮನೆಗೆ (ಕುಪ್ಪಳಿಯ ಕವಿಶೈಲಕ್ಕೆ) ಭೇಟಿ ನೀಡಿದೆವು . ಮನೆಯಲ್ಲಿ ಹೆಜ್ಜೆ ಹಾಕುತ್ತಾ ಹೋದಂತೆ ಪುರಾತನ ಬದುಕಿನ ಶೈಲಿಯ ಬಗ್ಗೆ ಕುತೂಹಲ ಮೂಡಿತು. ಹೇಮಾವತಿ ಅಮ್ಮನವರ ಅಡುಗೆ ಮನೆಯ ಸಾಮಗ್ರಿಗಳನ್ನು ಕಂಡು ಅವರು ಪಡುತ್ತಿದ್ದ ಶ್ರಮ ಕಾಯಕ ಕಣ್ಮುಂದೆ ಗೋಚರಿಸಿತು. ಅಂದಿನ ಬದುಕಿನ ಶೈಲಿ , ಸಂಸ್ಕøತಿಯನ್ನು ಗಮನಿಸಿ ಕನಿಷ್ಟ ಪದ್ಧತಿ, ಬದುಕಿನ ಅಚ್ಚುಕಟ್ಟುತನವನ್ನು ಅಳವಡಿಸಿಕೊಳ್ಳಬೇಕಿನಿಸಿತು. ನಂತರ ಪ್ರವಾಸಿಗರ ಅನಿಸಿಕೆ ಪುಸ್ತಕದಲ್ಲಿ ಕವಿಮನೆ ನನ್ನ ಕನಸು ಎಂದು ಬರೆದೆ. ತೇಜಸ್ವಿಯವರ ಸಮಾಧಿಯ ಬಳಿ ಹೋಗುವ ಮುನ್ನ ಕವಿ ಶೈಲದ ಗುಡ್ಡದಲ್ಲಿ ಕುಳಿತು ಕುವೆಂಪುರವರ ಒಂದೆರಡು ಭಾವಗೀತೆಗಳನ್ನು ಧ್ಯಾನಸ್ತಳಾಗಿ ಹಾಡಿದೆ. ಮನಸ್ಸಿಗೆ ನೆಮ್ಮದಿಯಾಯಿತು, ಮನ ನಿರಾಳವಾಯಿತು.
ತೇಜಸ್ವಿಯವರು ಗತಿಸಿದ ದಿನ ನಾನು ಚಿಕ್ಕವಳಿದ್ದೆ ನನ್ನಪ್ಪ(ಎನ್ಕೆ),ಅಪ್ಪನ ಸ್ನೇಹಿತರಾದ ಎಸ್. ಗಂಗಾಧರಯ್ಯ ಮತ್ತು ಇನ್ನಿತ್ತರ ಜೊತೆ ಅವರ ಕೊನೆ ಭಾರಿ ನೋಡಲು ಹೋಗಿದ್ದೆವು . ಅದು ಮುಸುಕು ಮುಸುಕು ನೆನಪು ಅದಾದ ಬಳಿಕ ಅವರ ಸಮಾಧಿಯ ನೋಡುವ ಅವಕಾಶ ಒದಗಿರಲಿಲ್ಲ…..ಜಾತಿ – ಧರ್ಮವ ಮೀರಿದ ಮನುಜರಾಗಿದ್ದ ತೇಜಸ್ವಿಯವರು ಪ್ರಕೃತಿಯ ಒಡಲಿನಲ್ಲಿ ದೀರ್ಘಕಾಲ ವಿಶ್ರಮಿಸುತ್ತಿರುವುದ ಕಂಡ ಒಂದು ರೀತಿಯ ಸಾತ್ವಿಕ ಭಾವ ಮೂಡಿತು. ಬದುಕಿದರೆ
ಕುವೆಂಪು,ತೇಜಸ್ವಿಯವರಂತೆ ಆದರ್ಶ ಬದುಕನ್ನು ಜೀವಿಸಬೇಕೆಂದು ನಿರ್ಧರಿಸಿದೆ.ಮಾನವ ನಿರ್ಮಿತ ಕಟ್ಟುಪಾಡುಗಳನ್ನು ಮೀರಿ ನಿಷ್ಕಲ್ಮಶ ಮನಸ್ಸಿನಿಂದ ಇರುವ ಕಾಲ ಒಳಿತು ಮಾಡುವತ್ತ ಸಾಗೋಣ ಎನಿಸಿತು.
-ಸಂಘಮಿತ್ರೆ ಹೆಚ್.ಎಸ್.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ7 days agoದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
-
ದಿನದ ಸುದ್ದಿ4 days agoಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
-
ದಿನದ ಸುದ್ದಿ2 days agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ4 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
-
ದಿನದ ಸುದ್ದಿ7 hours agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ


