ರಾಜಕೀಯ
ಸ್ವಾತಂತ್ರ್ಯದ ಮೇಲೆ ಪ್ರಹಾರಗಳು- ಈ ಆಗಸ್ಟ್ 15 ರಂದುಮೋದಿ-ಷಾ ಜೋಡಿಯ ಕಾಶ್ಮೀರ ಅತ್ಯಾಚಾರದ ಸಂದೇಶ
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2019/08/Jammu-and-Kashmir-suddidina-43.jpg&description=ಸ್ವಾತಂತ್ರ್ಯದ ಮೇಲೆ ಪ್ರಹಾರಗಳು- ಈ ಆಗಸ್ಟ್ 15 ರಂದುಮೋದಿ-ಷಾ ಜೋಡಿಯ ಕಾಶ್ಮೀರ ಅತ್ಯಾಚಾರದ ಸಂದೇಶ', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2019/08/Jammu-and-Kashmir-suddidina-43.jpg&description=ಸ್ವಾತಂತ್ರ್ಯದ ಮೇಲೆ ಪ್ರಹಾರಗಳು- ಈ ಆಗಸ್ಟ್ 15 ರಂದುಮೋದಿ-ಷಾ ಜೋಡಿಯ ಕಾಶ್ಮೀರ ಅತ್ಯಾಚಾರದ ಸಂದೇಶ', 'pinterestShare', 'width=750,height=350'); return false;" title="Pin This Post">
- ಮೋದಿ ಸರಕಾರ ಭಾರತದೊಂದಿಗೆ “ಜಮ್ಮು ಮತ್ತು ಕಾಶ್ಮೀರವನ್ನು ಸಮಗ್ರೀಕರಿಸಿರುವುದು” ತಮ್ಮ ಮಹಾಸಾಧನೆ ಎಂದು ಡಂಗುರ ಹೊಡೆಯುತ್ತಿದ್ದರೆ, ಅತ್ತ ಕಾಶ್ಮೀರದ ಜನತೆ, ಭಾರತದ ಇತರರೊಂದಿಗೆ ಹೋಲಿಸಿದರೆ ಸ್ವಾತಂತ್ರ್ಯದ ಅರ್ಥವಾದರೂ ಏನು ಎಂದು ಆಶ್ಚರ್ಯ ಪಡುವಂತಹ ವೈದೃಶ್ಯ ಕಣ್ಣಿಗೆ ರಾಚುತ್ತಿದೆ. ಸ್ವಾತಂತ್ರ್ಯ ಮತ್ತು ಗಣತಂತ್ರ ಸಂವಿಧಾನದೊಂದಿಗೆ ಬಂದಿರುವ ಸ್ವಾತಂತ್ರ್ಯಗಳು ಅಪಾಯದಲ್ಲಿವೆ. ಇದೀಗ ಮೋದಿ-ಷಾ ದ್ವಯರು ನಡೆಸಿರುವ ಕಾಶ್ಮೀರ ಅತ್ಯಾಚಾರ ನೀಡುತ್ತಿರುವ ಸಂದೇಶ. ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲಿನ ಈ ಕ್ರೂರ ಪ್ರಹಾರವನ್ನು ಉಪೇಕ್ಷಿಸಿದರೆ ಅದರಿಂದ ದೇಶದ ಇತರ ಭಾಗಗಳಿಗೂ ಕೇಡು ಸಂಭವಿಸುತ್ತದೆ. ಸರ್ವಾಧಿಕಾರಶಾಹಿ ಆಳ್ವಿಕೆ ಯಾರನ್ನೂ ಬಿಡುವುದಿಲ್ಲ. ಇಂತಹ ಒಂದು ಸನ್ನಿವೇಶದಲ್ಲಿ, ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಯನ್ನು, ಹೆಚ್ಚೆಚ್ಚು ಜನಗಳನ್ನು ಅಣಿನೆರೆಸುವ ಮೂಲಕ ಮತ್ತು ಐಕ್ಯ ಜನಾಂದೋಲನಗಳ ಮೂಲಕ ಸಾಧಿಸಬೇಕಾಗಿದೆ. ಆಗಸ್ಟ್ 15, ಎಲ್ಲ ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಒಗ್ಗೂಡಿಸಿ ಈ ಸಾವು-ಬದುಕಿನ ಸಾಹಸಕಾರ್ಯವನ್ನು ಕೈಗೆತ್ತಿಕೊಳ್ಳುವ ದೃಢನಿರ್ಧಾರ ಮಾಡುವ ದಿನವಾಗಿದೆ.
ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಚಿಂದಿ ಮಾಡಿರುವ, ಬೃಹತ್ ಪ್ರಮಾಣದಲ್ಲಿ ಕಣಿವೆಯ ಜನಗಳಿಗೆ ಬೀಗ ಜಡಿದಿರುವ ಮಬ್ಬಿನಲ್ಲಿ ನಡೆಯುತ್ತಿದೆ. ಕೆಂಪುಕೋಟೆಯಲ್ಲಿ ಈ ಆಗಸ್ಟ್ 15ರಂದು ನರೇಂದ್ರ ಮೋದಿ ತ್ರಿವರ್ಣ ಧ್ವಜವನ್ನು ಆರೋಹಿಸುವಾಗ, ಅತ್ತ ಲಕ್ಷಾಂತರ ಕಾಶ್ಮೀರಿಗಳು ಸತತವಾಗಿ ಹನ್ನೊಂದನೇ ದಿನ ತಮ್ಮ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಸಂಚರಿಸುವ, ತಮಗೆ ಬೇಕಾದವರನ್ನು ಸಂಪರ್ಕಿಸುವ, ಬದುಕು ನಡೆಸಲು ಕೆಲಸ ಮಾಡುವ, ಶಾಲೆಗೆ ಹೋಗುವ, ಆರೋಗ್ಯಪಾಲನೆ ಮತ್ತು ಔಷಧಿಗಳನ್ನು ಪಡೆಯುವ ಅವರ ಹಕ್ಕನ್ನು ಕಳಚಿ ಹಾಕಲಾಗಿದೆ. ಇವೆಲ್ಲವೂ ಸ್ವತಂತ್ರ ಭಾರತದ ನಾಗರಿಕರಾಗಿ ಇರುವ ಮೂಲಭೂತ ಹಕ್ಕುಗಳು.
ನೂರಾರು ಕಾಶ್ಮೀರಿ ರಾಜಕಾರಣಿಗಳು ಮತ್ತು ಕಾರ್ಯಕರ್ತರುಗಳು ಜೈಲುಗಳಲ್ಲಿದ್ದಾರೆ ಅಥವ ಗುಪ್ತಸ್ಥಳಗಳಲ್ಲಿ ಸ್ಥಾನಬದ್ಧತೆಯಲ್ಲಿದ್ದಾರೆ. ಹಲವರನ್ನು ಹೊರಗೊಯ್ದು ಆಗ್ರಾ, ಬರೇಲಿ, ಲಕ್ನೌ ಮುಂತಾದೆಡೆಗಳಲ್ಲಿ ಜೈಲುಗಳಲ್ಲಿ ಇಡಲಾಗಿದೆ. ಅವರೆಲ್ಲಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ, ಅವರ ಕುಟುಂಬದವರು, ಸಂಬಂಧಿಕರು ಅವರನ್ನು ಭೇಟಿ ಮಾಡಲು ಸಾಧ್ಯವಿಲ್ಲವಾಗಿದೆ. ಮೋದಿ ಸರಕಾರ ಭಾರತದೊಂದಿಗೆ “ಜಮ್ಮು ಮತ್ತು ಕಾಶ್ಮೀರವನ್ನು ಸಮಗ್ರೀಕರಿಸಿರುವುದು” ತಮ್ಮ ಮಹಾಸಾಧನೆ ಎಂದು ಡಂಗುರ ಹೊಡೆಯುತ್ತಿದ್ದರೆ, ಅತ್ತ ಕಾಶ್ಮೀರದ ಜನತೆ, ಭಾರತದ ಇತರರೊಂದಿಗೆ ಹೋಲಿಸಿದರೆ ಸ್ವಾತಂತ್ರ್ಯದ ಅರ್ಥವಾದರೂ ಏನು ಎಂದು ಆಶ್ಚರ್ಯ ಪಡುವಂತಹ ವೈದೃಶ್ಯ ಕಣ್ಣಿಗೆ ರಾಚುತ್ತಿದೆ.
ಕಾಶ್ಮೀರಿಗಳಿಗೆ ಎಂತಹ ಅವಮಾನ ಮಾಡಲಾಗಿದೆ ಎಂಬುದು ಅವರನ್ನು ರಾಜಕೀಯ ಹಕ್ಕುಗಳನ್ನು ಕಸಿದುಕೊಂಡಿರುವ ರೀತಿಯಲ್ಲಿ ವ್ಯಕ್ತವಾಗುತ್ತದೆ. ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶದ ಮಟ್ಟಕ್ಕೆ ಇಳಿಸಿದ ನಂತರ, ಹೊಸ ವಿಧಾನಸಭೆ ಪುದುಚೇರಿಯ ಮಾದರಿಯಲ್ಲಿ ಇರುತ್ತದೆ, ಉಪರಾಜ್ಯಪಾಲರೆಂಬವರು ಹೇಳಿದ್ದೇ ಆಳ್ವಿಕೆಯಾಗುತ್ತದೆ. ಈ ಮೊಟಕುಗೊಳಿಸಿದ ವಿಧಾನ ಸಭೆಯ ಸಂಯೋಜನೆ ಕೂಡ ಬದಲಾಗಲಿದೆ. ಜಮ್ಮ ಮತ್ತು ಕಾಶ್ಮೀರ ಮರುಸಂಘಟನೆಯ ಮಸೂದೆ ಮತಕ್ಷೇತ್ರಗಳ ಮರುವಿಂಗಡಣೆಗೆ ಅವಕಾಶ ಕಲ್ಪಿಸಿದೆ. ಇದನ್ನು ಚುನಾವಣಾ ಆಯೋಗ ಮಾಡುತ್ತದೆ.
ಹಿಂದಿನ ವಿಧಾನಸಭೆಯ ಬಲ ಜಮ್ಮು ಮತ್ತು ಕಾಶ್ಮೀರ ವಿಭಾಗಗಳಿಂದ 83ಆಗಿತ್ತು. ಅದನ್ನು90ಕ್ಕೆ ಏರಿಸಲಾಗುತ್ತದೆ. ಈ ಮರುವಿಂಗಡಣೆಯ ಕಸರತ್ತಿನಲ್ಲಿ ಜಮ್ಮು ಭಾಗದ ಸೀಟುಗಳ ಸಂಖ್ಯೆ ಏರಲಿದೆ. ಹಿಂದಿನ ವಿಧಾನಸಭೆಯಲ್ಲಿ ಅದು37 ಇತ್ತು. ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸೀಟುಗಳನ್ನು ಪತ್ರ್ಯೇಕಿಸಿದಾಗ, ಕಾಶ್ಮೀರ ಕಣಿವೆಗೆ ಉಳಿಯುವ ಸೀಟುಗಳ ಸಂಖ್ಯೆಯಲ್ಲಿ (ಇದುವರೆಗೆ 46) ಕಡಿತವಾಗುತ್ತದೆ. ಈ ಮೂಲಕ ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತದ ಆಶ್ವಾಸನೆ ಸಿಗುವಂತಾಗುತ್ತದೆ. ಉಪರಾಜ್ಯಪಾಲರು ಇಬ್ಬರು ಮಹಿಳಾ ಸದಸ್ಯರನ್ನು ನೇಮಿಸಲು ಅವಕಾಶ ಇರುವುದು ಅದನ್ನು ಇನ್ನಷ್ಟು ಖಾತ್ರಿಗೊಳಿಸುತ್ತದೆ.
ಇನ್ನೊಂದು ಕುಟಿಲ ನಡೆಯೆಂದರೆ, ಕಾಶ್ಮೀರ ಕಣಿವೆಯಲ್ಲಿ ಜನಸಂಖ್ಯಾ ಸಂಯೋಜನೆಯಲ್ಲಿ ಒಂದು ಬದಲಾವಣೆ ತರುವುದು. ಆರ್ಥಿಕ ಅಭಿವೃದ್ಧಿ ಮತ್ತು ಹೂಡಿಕೆಯ ಹೆಸರಲ್ಲಿ, ಜಮ್ಮು ಮತ್ತು ಕಾಶ್ಮೀರದ ಹೊರಗೆ ಇರುವ ಜನಗಳು ಕಣಿವೆ ಪ್ರದೇಶಕ್ಕೆ ಬಂದು ಭೂಮಿ ಖರೀದಿಸಲು ಮತ್ತು ನೆಲೆಸಲು ಉತ್ತೇಜನೆ ನೀಡಲಾಗುವುದು. ಅದಾಗಲೇ 2016ರಲ್ಲಿ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮಾಜಿ ಯೋಧರನ್ನು ವಸತಿ ಕಾಲೊನಿಗಳಲ್ಲಿ ನೆಲೆಗೊಳಿಸುವ ಒಂದು ಪ್ರಸ್ತಾವ ಇತ್ತು. ಅದಕ್ಕೆ ಭೂಮಿ ನೀಡುವ ಮಾತೂ ಇತ್ತು. ಕಾಶ್ಮೀರದ ಜನಸಂಖ್ಯಾ ಸಂಯೋಜನೆಯನ್ನು ಬದಲಾಯಿಸುವುದು ಅಥವ ಕಾಶ್ಮೀರಿ ಜನಗಳ ಅಸ್ಮಿತೆಯನ್ನು ದುರ್ಬಲಗೊಳಿಸುವುದು ಇದರ ಗುರಿ.
ಬಹಳ ಕಾಲದಿಂದ ಕಾಶ್ಮೀರಿ ಜನಗಳ ನಾಗರಿಕ ಸ್ವಾತಂತ್ರ್ಯಗಳ ದಮನ ಮತ್ತು ಪ್ರಭುತ್ವದ ದಬ್ಬಾಳಿಕೆ ರೂಢಿಯಾಗಿ ಬಿಟ್ಟಿರುವ ದೇಶದ ಇತರ ಭಾಗಗಳ ಜನರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿನ ಸನ್ನಿವೇಶ ಹದಗೆಡುತ್ತಿರುವ ಸನ್ನಿವೇಶದ ಮತ್ತೊಂದು ಅಧ್ಯಾಯ ಮಾತ್ರ, ಅದನ್ನು ಕೇಂದ್ರ ಸರಕಾರ ದೃಢವಾಗಿ ನಿಭಾಯಿಸುತ್ತಿದೆ ಎಂದು ಕಾಣಬಹುದು.
ಆದರೆ ಹೀಗೆ ಭಾವಿಸುವುದು ಒಂದು ಪ್ರಮಾದವಾಗುತ್ತದೆ. ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲಿನ ಈ ಕ್ರೂರ ಪ್ರಹಾರವನ್ನು ಉಪೇಕ್ಷಿಸಿದರೆ ಅದರಿಂದ ದೇಶದ ಇತರ ಭಾಗಗಳಿಗೂ ಕೇಡು ಸಂಭವಿಸುತ್ತದೆ. ಸರ್ವಾಧಿಕಾರಶಾಹಿ ಆಳ್ವಿಕೆ ಯಾರನ್ನೂ ಬಿಡುವುದಿಲ್ಲ-ಭಿನ್ನ ಅಭಿಪ್ರಾಯ ಇರುವವರನ್ನು, ಪ್ರತಿಪಕ್ಷಗಳಿಲ್ಲಿ ಇರುವವರನ್ನು, ಮತ್ತು ತಮ್ಮ ಪ್ರಜಾಪ್ರಭುತ್ವ ಹಕ್ಕುಗಳನ್ನು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸುವ ಯಾರನ್ನೂ. ಸ್ವಾತಂತ್ರ್ಯ ಮತ್ತು ಗಣತಂತ್ರ ಸಂವಿಧಾನದೊಂದಿಗೆ ಬಂದಿರುವ ಸ್ವಾತಂತ್ರ್ಯಗಳು ಅಪಾಯದಲ್ಲಿವೆ. ಇದೀಗ ಮೊದಿ-ಷಾ ದ್ವಯರು ನಡೆಸಿರುವ ಕಾಶ್ಮೀರ ಅತ್ಯಾಚಾರ ನೀಡುತ್ತಿರುವ ಸಂದೇಶ.
ಸ್ವಾತಂತ್ರ್ಯ ದಿನದಂದು, ಕಳೆದ ಐದು ವರ್ಷಗಳ ಸರ್ವಾಧಿಕಾರಶಾಹಿ ಆಳ್ವಿಕೆ ಸಂವಿಧಾನದ ಅಡಿಯಲ್ಲಿರುವ ಎಲ್ಲ ಸಂಸ್ಥೆಗಳನ್ನು ಶಿಥಿಲಗೊಳಿಸುವ ದಾರಿಯಲ್ಲಿ ಸಾಗಿದೆ ಎಂಬುದನ್ನು ವೀಕ್ಷಿಸುವುದು ಕೂಡ ಉಚಿತವಾಗಿದೆ. ಇದರ ಒಂದು ಸಣ್ಣ ಉದಾಹರಣೆಯೆಂದರೆ, ಸುಪ್ರಿಂ ಕೋರ್ಟಿನ ಮೂವರು ನ್ಯಾಯಾಧೀಶರ ಪೀಠ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಸ್ವಾತಂತ್ರ್ಯಗಳ ಮತ್ತು ಮೂಲಭೂತ ಹಕ್ಕುಗಳ ವ್ಯಾಪಕ ಪ್ರಮಾಣದ ಉಲ್ಲಂಘನೆಗಳನ್ನು ನಿಲ್ಲಿಸಲು ಮಧ್ಯಪ್ರವೇಶಿಸಲು ನಿರಾಕರಿಸಿರುವುದು.
ಇಂತಹ ಒಂದು ಸನ್ನಿವೇಶದಲ್ಲಿ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಜೀವನಾಧಾರದ ಹಕ್ಕೂ ಸೇರಿದಂತೆ ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಯನ್ನು, ಹೆಚ್ಚೆಚ್ಚು ಜನಗಳನ್ನು ಅಣಿನೆರೆಸುವ ಮೂಲಕ ಮತ್ತು ಐಕ್ಯ ಜನಾಂದೋಲನಗಳ ಮೂಲಕ ಸಾಧಿಸಬೇಕಾಗಿದೆ. ಆಗಸ್ಟ್ 15, ಎಲ್ಲ ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಒಗ್ಗೂಡಿಸಿ ಈ ಸಾವು-ಬದುಕಿನ ಸಾಹಸಕಾರ್ಯವನ್ನು ಕೈಗೆತ್ತಿಕೊಳುವ್ಳ ದೃಢನಿರ್ಧಾರ ಮಾಡುವ ದಿನವಾಗಿದೆ.
–ಪ್ರಕಾಶ ಕಾರಟ್
- ಕೃಪೆ : ಈ ವಾರದ ಜನಶಕ್ತಿ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲೆಯ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯು ಒಟ್ಟಾರೆ ಶೇಕಡ 81.99 ರಷ್ಟು ಸಾಧನೆ ಮಾಡಿದ್ದು, ರಾಜ್ಯದಲ್ಲಿ 25 ನೇ ಸ್ಥಾನ ಪಡೆದಿದೆ. ಈ ಬಾರಿಯೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಅತಿ ಹೆಚ್ಚು ಶೇಕಡ 90.91 ರಷ್ಟು ಫಲಿತಾಂಶ ಪಡೆದು ಮೇಲುಗೈ ಸಾಧಿಸಿದ್ದಾರೆ.
ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 20,810 ವಿದ್ಯಾರ್ಥಿಗಳ ಪೈಕಿ 16,046 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇಕಡ 77.11 ರಷ್ಟು ಹಾಗೂ ಹೊಸದಾಗಿ ಪರೀಕ್ಷೆ ಬರೆದ (Freshers) 18,949 ವಿದ್ಯಾರ್ಥಿಗಳಲ್ಲಿ 15,540 ಮಂದಿ ಉತ್ತೀರ್ಣರಾಗಿದ್ದಾರೆ ಶೇಕಡ 82.01 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಭಾಗವಾರು ಫಲಿತಾಂಶದ ವಿಶ್ಲೇಷಣೆ
ವಿಜ್ಞಾನ ವಿಭಾಗ (Science): ಜಿಲ್ಲೆಯಲ್ಲಿ ಅತಿ ಹೆಚ್ಚು ಸಾಧನೆ ಈ ವಿಭಾಗದಲ್ಲಿ ದಾಖಲಾಗಿದೆ. ಒಟ್ಟು 12,536 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,936 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 87.24). ಹೊಸ ವಿದ್ಯಾರ್ಥಿಗಳ ಪೈಕಿ 11,770 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,736 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 90.91 ರಷ್ಟು ಅದ್ಭುತ ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗ (Commerce)
ಈ ವಿಭಾಗದಲ್ಲಿ ಹಾಜರಾದ 4,295 ವಿದ್ಯಾರ್ಥಿಗಳಲ್ಲಿ 3,075 ಮಂದಿ ಉತ್ತೀರ್ಣರಾಗಿದ್ದಾರೆ (ಶೇ. 71.59). ಹೊಸ ವಿದ್ಯಾರ್ಥಿಗಳ ಪೈಕಿ 3858 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2960 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 76.72 ರಷ್ಟು ಫಲಿತಾಂಶ ಬಂದಿದೆ.
ಕಲಾ ವಿಭಾಗ (Arts): ಕಲಾ ವಿಭಾಗದಲ್ಲಿ ಒಟ್ಟು 3,979 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2,035 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 51.14). ಹೊಸ ವಿದ್ಯಾರ್ಥಿಗಳ ಪೈಕಿ 3321 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1880 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 56.61 ರಷ್ಟು ಫಲಿತಾಂಶ ಬಂದಿದೆ.
ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ವಿಜ್ಞಾನ ವಿಭಾಗವು ಪ್ರಥಮ ಸ್ಥಾನದಲ್ಲಿದ್ದರೆ, ವಾಣಿಜ್ಯ ಮತ್ತು ಕಲಾ ವಿಭಾಗಗಳು ನಂತರದ ಸ್ಥಾನ ಪಡೆದಿವೆ ಎಂದು ಉಪ ನಿರ್ದೇಶಕ ಪಳಿನಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಇಂದು ನಡೆದ ಉಪ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಒಟ್ಟಾರೆ ಶೇ. 68.55ರಷ್ಟು ಮತದಾನ ದಾಖಲಾಗಿದೆ.
ಬೆಳಿಗ್ಗೆಯಿಂದಲೇ ಮತಗಟ್ಟೆಗಳ ಮುಂದೆ ಮತದಾರರು ಉತ್ಸಾಹದಿಂದ ಸರದಿಯಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳು ಹಾಗೂ ಪೊಲೀಸ್ ಬಂದೋಬಸ್ತ್ನಿಂದಾಗಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.
ಯುವಕರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡಿದ್ದು ಕಂಡುಬಂದಿತು. ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಪಡೆಯ ಸಹಕಾರದೊಂದಿಗೆ ಮತದಾನ ಪ್ರಕ್ರಿಯೆಯು ಸುಗಮವಾಗಿ ಜರುಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ
ಸುದ್ದಿದಿನಡೆಸ್ಕ್:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹದಡಿ ಗ್ರಾಮದ ಮತಗಟ್ಟೆಯಲ್ಲಿ ತೃತೀಯ ಲಿಂಗತ್ವ ಮತದಾರರು ಮತಗಟ್ಟೆಗೆ ಆಗಮಿಸಿ ಸಂತೋಷದಿಂದ ಮತ ಚಲಾಯಿಸಿದರು.
ಸಮಾಜದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಎಂಬ ಸಂದೇಶವನ್ನು ಸಾರಿದ ಕ್ಷಣ! ತಮ್ಮ ಅಮೂಲ್ಯ ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಿದ ತೃತೀಯ ಲಿಂಗತ್ವ ಮತದಾರರಿಗೆ ಅಭಿನಂದನೆಗಳು ಎಂದು ಜಿಲ್ಲಾ ಪಂಚಾಯತ್ ಸಿಇಓ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ7 days agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ಅಂತರಂಗ4 days agoಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
-
ದಿನದ ಸುದ್ದಿ7 days agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ
-
ದಿನದ ಸುದ್ದಿ2 days agoಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ
-
ದಿನದ ಸುದ್ದಿ4 days agoಸುಸೂತ್ರ ಮತದಾನಕ್ಕೆ ಜಿಲ್ಲಾಡಳಿತದ ಸಕಲ ಸಿದ್ಧತೆ
-
ದಿನದ ಸುದ್ದಿ3 days agoಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಪರಿಶಿಷ್ಟ ಪಂಗಡದ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ: ಅರ್ಜಿ ಆಹ್ವಾನ
-
ದಿನದ ಸುದ್ದಿ21 hours agoದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ

