Connect with us

ನೆಲದನಿ

ಅಪರೂಪಕ್ಕೊಮ್ಮೆ,ಅಪರೂಪದ ವ್ಯಕ್ತಿ ‘ಶೋಭಾ ಗುನ್ನಾಪೂರ’..!

Published

on

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಮಸಳಿರವರು,ತವರುಮನೆ ಶಿರಶ್ಯಾಡ.ಗಂಡ ತುಕಾರಾಮ್ ಗುನ್ನಾಪೂರ ರೈತರಾಗಿದ್ದಾರೆ. ಇವರಿಗೆ ಮೂವರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗು,ಓದುವ ಹವ್ಯಾಸ ಉಳ್ಳವರು ಎಲ್ಲಿದ್ದರೂ,ಸುಖಿಯಾಗಿರಬಲ್ಲರು ಎಂಬ ಮಾತೊಂದಿದೆ,ಆ ಮಾತಿಗೆ ಕೈಗನ್ನಡಿ ಹಾಗೂ ಅಲ್ಪ‌ ವಿದ್ಯೆ ಮಹಾಗರ್ವಿ ಎಂಬ ಮಾತಿಗೆ ತದ್ವೀರುದ್ಧವಾಗಿದ್ದಾರೆ ಈ ಶೋಭಾ ಅಮ್ಮನವರು.

ಓದಿದ್ದು ಕೇವಲ ಒಂಬತ್ತನೇ ತರಗತಿಯವರೆಗೆ ಮಾತ್ರ ಆದರೆ ಕನ್ನಡ ಸಾಹಿತ್ಯವನ್ನು ಓದುವ ಅಪಾರ ಆಸಕ್ತಿ ಇರಿಸಿಕೊಂಡಿದ್ದಾರೆ.ಮುಂದೆ ಕಲಿಯಲು ಹಳ್ಳಿಯಲ್ಲಿ ಹೆಣ್ಮಕ್ಕಳಿಗೆ ಆಸ್ಪಾದವಿರಲಿಲ್ಲ.ನಮ್ಮ ತಂದೆಯವರು ನಾವು ದೊಡ್ಡವರಾದ ಬಳಿಕ ನೀವು ಶಾಲೆಗೆ ಹೋಗೋದು ಬೇಡ ಅಂತ್ಹೇಳಿ ನಮ್ಮನ್ನು ಮದುವೆ ಮಾಡಿಕೊಟ್ಟರು.ನಮಗಿನ್ನೂ ಕಲಿಯಬೇಕೆಂಬ ಆಸಕ್ತಿ ಇನ್ನೂ ಇತ್ತು.ಆದರೆ ಹಳ್ಳಿಯಲ್ಲಿ ದೊಡ್ಡವರಾದ ಬಳಿಕ ಮತ್ತೆಲ್ಲಿ ಶಾಲೆಗೆ ಕಳಿಸಬೇಕಂತ ಹೇಳಿ ಕೊಟ್ಟು ಮದುವೆ ಮಾಡಿದರು.

ಆದರೆ ನಾವು ಕಲಿಯಲೇಬೇಕೆಂಬ ಛಲವಿರುವುದರಿಂದ ಬರೆಯಲು,ಓದಲು ರೂಢಿಸಿಕೊಂಡೆವು.ಕಸದಾಗಿನ ಯಾವುದಾದರೂ ಪೇಪರ್ ಬಿದ್ದಿತ್ತೆಂದರೆ ನನಗೆ ಅದು ಓದದೇ ಇದ್ರೆ ಸಮಾಧಾನನೇ ಆಗುತ್ತಿರಲಿಲ್ಲ.ನಮ್ಮದು ಕೂಡುತುಂಬು ಕುಟುಂಬ ಏಳು ಮಂದಿ ಅಣ್ಣ-ತಮ್ಮದಿಂರು ಏಳು ಮಂದಿ ಹೆಣ್ಣುಮಕ್ಕಳು ಅತ್ತೆ,ಮಾವ ಅಷ್ಟಿದ್ದರೂ ಅವರ ಜೊತೆ ನಾನು ಕೆಲಸ ಮಾಡಿ ಓದು-ಬರಹದ ಕಡೆ ಲಕ್ಷ್ಯ,ಸಮಯವೂ ಕೊಟ್ಟಿದ್ದೆ. ಬೇಕಾದಷ್ಟೂ ಕೆಲಸವಿರಲದು ಓದು ಬರಹಕ್ಕೆ ಎರಡು ಗಂಟೆ ಕಡ್ಡಾಯವಾಗಿ ಸಮಯ ಮೀಸಲು ಮಾಡಿ ಓದುತ್ತಿದ್ದೆ,ಬರೆಯುತ್ತಿದ್ದೆ.ಈಗ ಅದು ಪ್ರಸ್ತುತ ಓದಿ-ಓದಿ ಅಭ್ಯಾಸವಾಗಿ ಕಥೆ,ಕಾದಂಬರಿ ಬರೆಯಲು ತೊಡಗಿದೆ.

ಮುಂದೆ ಬರುಬರುತ್ತಾ ನನ್ನ ಮಕ್ಕಳು ನನಗೆ ಬುದ್ಧಿ ಹೇಳತೋಡಗಿದರು.ಅಮ್ಮ ನೀನು ಇಷ್ಟೇಲ್ಲಾ ಕಥೆ,ಕಾದಂಬರಿ ಓದುತ್ತಿಯಾ,ಬರೆಯುತ್ತೀಯಾ ಏನಾದರೂ ನೀನು ಬರೆ ಎಂದರು.ಮಕ್ಕಳ ಪರಿಣಾಮವೇ ಇರಬಹುದು, ಇವರ ಎರಡು ಪುಸ್ತಕಗಳು (ಕಥಾ-ಸಂಕಲನ,ಆತ್ಮಚರಿತ್ರೆ) ಮುದ್ರಣದ ಹಂತದಲ್ಲಿವೆ.ಇವರು ಬರೆದ ಕವಿತೆಗಳು ಪಂಜಾಬಿ ಭಾಷೆಗೆ ಅನುವಾದಗೊಂಡಿವೆ ಹಾಗೂ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.(ಬದುಕಿನ ಪಯಣವನ್ನು ಎಳೆ-ಎಳೆಯಾಗಿ ಖುಷಿಯಿಂದ ಬಿಚ್ಚಿಟ್ಟುತ್ತಾರೆ.)

ಬಾಲ್ಯದಲ್ಲಿಯೂ ಸಾಕಷ್ಟು ಕಷ್ಟ ಅನುಭವಿಸಿ,ಸದಾ ಸಂಸಾರದ ಜಂಜಾಟದಲ್ಲಿದ್ದರೂ,ದಿನಕ್ಕೆರಡು ಗಂಟೆ ಕಡ್ಡಾಯವಾಗಿ ಚಾಚೂ-ತಪ್ಪದೇ ಓದಲು ಸಮಯವಿರುಸುತ್ತಿದ್ದರಿವರು,ಆದರೆ ನನಗನ್ನಿಸಿದ್ದು ಈಗ ಅರ್ಧದಿನ,ಒಮ್ಮೊಮ್ಮೆ ದಿನಪೂರ್ತಿಯೂ ಓದಬಹುದೆಂದು ನಂಬಿಕೆಯಿದೆ,ಕಾರಣ‌ ತುಂಬಾ ಕಷ್ಟದಿಂದ,ಹಳ್ಳಿಯ ಮಹಿಳೆ ಹೊಲ-ಮನೆ ಕೆಲಸ ತಾನೇನೂ,ತನ್ನ ಕುಟುಂಬದ ಜಗತ್ತೇನೂ ಎನ್ನುತ್ತಿದ್ದರಿವರು. *ಮಕ್ಕಳಿಗೆ ಅಕ್ಕ-ಪಕ್ಕದ ಮಕ್ಕಳಿಗೂ ಶುದ್ಧಬರಹ ಹಾಕಿಕೊಟ್ಟು,ದಿನಾಲೂ ಶಾಲೆಯ ಮನೆಕೆಲಸ ಮಾಡಿಸುತ್ತಿದ್ದರು.ಇಂದು ಆ ಮಕ್ಕಳು ಒಳ್ಳೆಯಸ್ಥಾನದಲ್ಲಿ,ಸ್ಥಿತಿಯಲ್ಲಿದ್ದಾರೆ.

ಇಂದು ಇವರ ಕುಟುಂಬ ಸುಸ್ಥಿರವಾಗಿದೆ,ಮಕ್ಕಳೂ ಸಹ ಉತ್ತಮವಾದ ಉದ್ಯೋಗದಲ್ಲಿದ್ದಾರೆ.ಈಗಲೂ ಸಹ ಹೊಲ-ಮನೆ ಕೆಲಸ ಮಾಡುತ್ತಾ ಅತಿಹೆಚ್ಚು ಸಮಯ ಓದುತ್ತಾರೆ.ಬದುಕಿನ ಒತ್ತಡದ ನಡುವೆ ಪುಸ್ತಕಗಳನ್ನು ಓದುವುದು ಬಿಟ್ಟಿರಲಿಲ್ಲ.ಅದರ ಪರಿಣಾಮವಾಗಿಯೇ ಇವರಿಂದ ಇತ್ತಿಚೀಗೆ ಕಥೆ,ಕವಿತೆಗಳು ಹತ್ತಾರು ಸೃಷ್ಟಿ ಆಗಿದ್ದಾವೆ,ಆಗುತ್ತವೆಯೂ ಕೂಡ ಅದು ಹೀಗೆಯೇ,ಇವರು ಕನ್ನಡ ಸಾಹಿತ್ಯ ಸೇವೆಯನ್ನು ಮಾಡಲಿಕ್ಕೆ ಇನ್ನೂ ಆ ಅಕ್ಷರಾಂಬೆ ಶಕ್ತಿ ನೀಡಲೆಂದು ಆಶಿಸೋಣ.!

ಸಾಮಾನ್ಯ ಹಳ್ಳಿಯ ಹೆಣ್ಣುಮಗಳಾದ ಶೋಭಾ ಗುನ್ನಾಪೂರ ಅಮ್ಮನವರು.ತಮ್ಮ ಬದುಕಿನ ಇಚ್ಛಾಶಕ್ತಿಯಿಂದ ನೋವು ನಲಿವುಗಳಿಂದ ಆಚೆ ಬಂದು ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘದ ಪ್ರತಿನಿಧಿಯಾಗಿ ಅನೇಕ ಹೆಣ್ಣುಮಕ್ಕಳ ಬದುಕಿಗೆ ಸ್ಪೂರ್ತಿಯಾಗಿದ್ದಾರೆ. ಪ್ರಗತಿಪರ ರೈತರಾಗಿರಾಗಿದ್ದಾರೆ.ಹಿರೇಮಸಳಿಯಲ್ಲಿ ಕುಡಿತ ಬಿಡಿಸಲು,ಮಕ್ಕಳಿಗೆ ವಿಧ್ಯಾಭ್ಯಾಸ ನೀಡಲು, ನೊಂದ ಮಹಿಳೆಯರಿಗೆ ಸಾಂತ್ವಾನ ನೀಡಿ ಆಸರೆಯಾಗಿ ನಿಲ್ಲಲು ಶ್ರಮಿಸಿದ್ದಾರೆ.

ಇವರು ಮಕ್ಕಳಿಗಾಗಿ ಆಸ್ತಿ ಮಾಡಲಿಲ್ಲ,ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದ್ದಾರೆ.!

ಇವರ ಮಕ್ಕಳು ಬೇರೆ ಬೇರೆ ಊರಲ್ಲಿ ನೌಕ್ರಿ(ಉದ್ಯೋಗ) ಹಿಡಿದು ಹೆಮ್ಮೆ ತರುವ ಕೆಲಸ ಮಾಡಿದ್ದಾರೆ,ಮಾಡುತ್ತಿದ್ದಾರೆಯೂ ಕೂಡ ಬೆಂಗಳೂರಲ್ಲಿ ಸುನಿಲ್ ಕುಮಾರ್ ಗುನ್ನಾಪೂರ ಎನ್ನುವವರು ಲಾಯಾರ್ ಆಗಿ,ಬಾಗಲಕೋಟೆಯಲ್ಲಿ ಅನಿಲ್ ಕುಮಾರ್ ಗುನ್ನಾಪೂರರವರು ಸರ್ವೆಯರ್ ಕೆಲಸದಲ್ಲಿದ್ದು ಮತ್ತು ಕವಿಗಳಾಗಿದ್ದಾರೆ.

ಇನ್ನೊಬ್ಬರು ಭೀಮರಾವ್ ಧಾರವಾಡದಲ್ಲಿ ಪ್ರಸ್ತುತ ಕೆ.ಎ.ಎಸ್ ಪರೀಕ್ಷೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಇನ್ನೊಬ್ಬ ಹೆಣ್ಣುಮಗಳು ಅನಿತಾ ಗಂಡನ ಮನೆಯಲ್ಲಿ ಸುಖ ಸಾಂಸರೀಕವಾದ ಜೀವನವನ್ನು ಸಾಗಿಸುತ್ತಿದ್ದಾರೆ.

ಪ್ರೀಯ ಓದುಗರೇ,

ಶೋಭಾ ಅಮ್ಮನವರು ಮಹಿಳೆಯರಿಗೆ ಒಂದು ಸಲಹೆನ ನೀಡುತ್ತಾರೆ ಬನ್ನಿ,ಅವರ ಮಾತಿನಲ್ಲೇ ಕೇಳೋಣ..

ಹೆಣ್ಣುಮಕ್ಕಳು ಸದಾ ಕೆಲಸ-ಕೆಲಸ ಅಂತ ಆರೋಗ್ಯದ ಕಡೆ ಗಮನವೇ ಹರಿಸುವುದಿಲ್ಲ.ಸದಾ ಗಂಡ,ಮಕ್ಕಳು,ಸಂಸಾರದಲ್ಲಿಯೇ ಅವರ ಸಮಯ ಕಳೆದು ಹೋಗುತ್ತದೆ.

ಆರೋಗ್ಯದ ಬಗೆಯಲ್ಲಿ ಸರಿಯಾದ ಸಮಯಕ್ಕೆ ಊಟ ಮಾಡುವುದಿಲ್ಲ,ಸಮಯಕ್ಕೆ ಹೊಂದುವಂತೆ ನಿದ್ದೆಯೇ ಬರುವುದಿಲ್ಲ,ಬರೀ ಸಂಸಾರದಲ್ಲಿಯೇ ಹೋಗುತ್ತದೆ.ಅದಕ್ಕೆ ಇದೆಲ್ಲದರ ಒತ್ತಡದ ಕೆಲಸದ ಜೊತೆಯೂ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ.ಜೊತೆಗೆ ಸರಿಯಾಗಿ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸೋಣ,ಆ ಮಕ್ಕಳನ್ನೇ ನಾವು ಆಸ್ತಿ ಮಾಡಿಕೊಳ್ಳೋಣ. “ನಾವು ಆಸ್ತಿ ಮಾಡುವುದು ಬೇಕಾಗಿಲ್ಲ.ಮಕ್ಕಳೇ ನಮಗೊಂದು ಆಸ್ತಿ”.

ಆದರೆ ಸರಿಯಾಗಿ ಅಭ್ಯಾಸ ಕೊಟ್ಟು ಮಕ್ಕಳಿಗೆ ಮಾರ್ಗದಾಳುಗಳಾಗೋಣ.ನಮಗೆಷ್ಟೇ ಬರಲಿ,ತಿಳಿದಿರಲಿ ಮಕ್ಕಳಿಗೆ ಹೇಳಬೇಕು.ಉದಾಹರಣೆಗೆ ನಾವೇ ಒಂದು ಪುಸ್ತಕವನ್ನು ತೆಗೆದುಕೊಂಡು ಕೂತರೇ,ಮಕ್ಕಳೂ ಸಹ ಪುಸ್ತಕ ತೆಗೆದುಕೊಂಡು ಕುಳಿತುಕೊಳ್ಳುತ್ತಾರೆ.ಟಿವಿ ನೋಡಿದರೆ,ಅವರೂ ಟಿವಿ ನೋಡುತ್ತಾ ಕೂರುತ್ತಾರೆ.ಅದು ಪ್ರತಿಯೊಬ್ಬ ತಾಯಿಯ ಅನುಕರಣೆಯಲ್ಲಿ ಅಡಗಿರುತ್ತದೆ.ಪುರುಷರು(ಗಂಡ) ಏನೂ ಮಾಡುವುದಿಲ್ಲ.ಅವರು ತಂದು ಹಾಕಿ ಹೊರಗಡೆ ಹೋಗಿ ಬಿಡುತ್ತಾರಷ್ಟೇ,(ತುಸು-ನಸುನಕ್ಕು) ಅದು ಅನುಕರಣೆ ತಾಯಿಕಡೆ ಇರುತ್ತದೆ.

ತಾಯಿಯಾಗಿ ಸುಸಜ್ಜಿತವಾಗಿ ವಿದ್ಯೆ-ಬುದ್ಧಿ,ಸಂಸ್ಕೃತಿ ಮಕ್ಕಳಿಗೆ ಕಲಿಸಿದೇವೆಂದರೆ,ಮಕ್ಕಳು ತಮ್ಮಿಂದ ಅಚಾನಕವಾಗಿ ಕಲಿಯುತ್ತಾರೆ.ತಾಯಿಗಳಾದ ನಾವೇ ಏನೂ ಕಲಿಸದೇ ಬರೀ ಟಿವಿ ನೋಡೋದು,ನೌಕರಸ್ಥ ತಾಯಿಯವರು ಉದ್ಯೋಗಕ್ಕೇನೆ ಸೀಮಿತವಾಗಿ ಮಕ್ಕಳಿಗೆ ನಮಗೆ ಆಗುವುದಿಲ್ಲ,ಓದಿರಿ,ಬರೆಯಿರಿ ಅಂದರೆ ಪಾಪ ಮಕ್ಕಳು ಏನೂ ಮಾಡಲಸಾಧ್ಯ.ಸಣ್ಣ ಮಕ್ಕಳಿಗೆ ನಾವು ಒತ್ತಡದ ಜೀವನದಲ್ಲಿಯೂ ಸ್ವಲ್ಪ ಹೇಳಬೇಕು.ತಳಪಾಯ ದುರಸ್ತಿ ಮಾಡಿ,ಒಳ್ಳೆಯ ಮಾರ್ಗದರ್ಶನ ನಾವು ನೀಡಿದರೆ ಮಕ್ಕಳ ಕೈ ಹಿಡಿಯುವವರೇ ಯಾರಿಲ್ಲ ಅದಕ್ಕೆ ನಮ್ಮ ಮಕ್ಕಳಿಗೆ ಸರಿಯಾಗಿ ಕಲಿಸಬೇಕು.

ಈ ಹೆಣ್ಣುಮಕ್ಕಳು(ಪ್ರೌಢಶಾಲಾ-ಮಕ್ಕಳು) ಇದಾರಲ್ಲ,ಈ ದೇಶದ ಪ್ರಜೆಗಳು.ತೊಟ್ಟಿಲು ತೂಗುವ ಇವರ ಕೈಗಳು,ಜಗತ್ತನೇ ತೂಗುತ್ತದೆ. ಏನೋ ಒಂದು ತಾರತಮ್ಯಕ್ಕೆ ಹೆಣ್ಣು ಹುಟ್ಟಬಾರದೆಂದು ಹೇಳುತ್ತಾರೆ.ಮೊದಲು ಹೆಣ್ಣಾಗಬೇಕು.ಹೆಣ್ಣಿನಿಂದಲೇ ಜಗತ್ತು,ಹೆಣ್ಣಿನಿಂದಲೇ ಸರ್ವಸ್ವ.ಆ ಹೆಣ್ಣು ನಮಗೆ ಎಷ್ಟು ಮಹತ್ವವೆಂದರೆ,ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳಿರಬೇಕು.ಒಂದು ಮಾದರಿಯಾಗುತ್ತಾರೆ.ಕಷ್ಟಕ್ಕೂ-ಸುಖಕ್ಕೂ ಹೆಣ್ಮಕ್ಕಳು ಆಗುತ್ತಾರೆ,ಗಂಡುಮಕ್ಕಳು ಆಗುವುದಿಲ್ಲ.ಸತ್ತರೆ ಗಂಡು ಮಕ್ಕಳು ದೂರಹೋಗಿ ಕೂರುತ್ತಾರೆ,ಹೆಣ್ಮಕ್ಕಳು ಕೂಡುತ್ತಾರೇನೂ.?

ಅದಕ್ಕೆ ಹೆಣ್ಣು-ಗಂಡೆಂಬ ತಾರತಮ್ಯ ಮಾಡದಿರಿ.ನಮಗೆ ಹೆಣ್ಣುಮಕ್ಕಳು-ಗಂಡುಮಕ್ಕಳೂ ಬೇಕು.ಅಷ್ಟೇ ಚಿಕ್ಕ-ಚೊಕ್ಕ ಸಂಸಾರದ ಜೀವನ ಮಾಡಿಕೊಂಡು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಪದವಿ,ಸರ್ಟಿಫೀಕೇಟ್ ಇಲ್ಲದ ಮಹಿಳೆಯೂ ಸಾಧಿಸಬಹುದೆಂದು ಹೆಣ್ಣು ಅಬಲೆಯಲ್ಲ ಸಬಲೆ ಎಂದು ತೋರಿಸಿ ಇಂದು ನಮ್ಮ ಮುಂದೆ ಮಾದರಿಯಾಗಿ ನಿಂತಿದ್ದಾರೆ.ಪ್ರಚಾರದಿಂದ ದೂರ ಇರುವ ಶೋಭಾ ಗುನ್ನಾಪೂರ ಅಮ್ಮನವರು ಎಲೆ ಮರೆಯ ಕಾಯಿಯಂತೆ ತಮ್ಮ ಕೆಲಸ ಪ್ರೀತಿಯಿಂದ ಮಾಡುತ್ತಾ ಸಾಗಿದ್ದಾರೆ,ಸಾಗುತ್ತಿದ್ದಾರೆಯೂ ಕೂಡ..ಅವರ ಸೇವೆಯೂ,ಹೀಗೆಯೇ ಸಾಗುತ್ತಾ ಅವಿಸ್ಮರಣೀಯವಾಗಿ ಇತಿಹಾಸದ ಪುಟಗಳಲ್ಲಿ ಸೇರಲಿ ಎನ್ನುತ್ತಾ..!

ಶಿವರಾಜ್ ಮೋತಿ
ಪದವಿ ವಿಧ್ಯಾರ್ಥಿ
ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಆತ್ಮಕತೆ | ತುರ್ತು ಪರಿಸ್ಥಿತಿ ಮತ್ತು ನಮ್ಮೂರಿನ ಭೂ ಹೋರಾಟ

Published

on

  • ರುದ್ರಪ್ಪ ಹನಗವಾಡಿ

ದೇಶದಾದ್ಯಂತ ತುರ್ತುಪರಿಸ್ಥಿತಿ ಇತ್ತು. ಶಾಲಾ ಕಾಲೇಜುಗಳಲ್ಲಿ ಪಾಠ ಪ್ರವಚನಗಳು ನಿಗದಿಯಂತೆ ನಡೆಯುತ್ತಿದ್ದವು. ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾಂಗ್ರೆಸ್ ವಿರೋಧಿ ರಾಜಕೀಯ ನಾಯಕರನ್ನು ಬಂಧಿಸಿ ಜೈಲಿನಲ್ಲಿರಿಸಿದ್ದರು. ಇಂದಿರಾ ಗಾಂಧಿಯವರ 20 ಅಂಶದ ಕಾರ್ಯಕ್ರಮಗಳು ವಿಶೇಷವಾಗಿ ದಲಿತ ಹಿಂದುಳಿದವರ ಪರವಾಗಿದ್ದುದನ್ನು ಮುಖ್ಯಮಂತ್ರಿ ದೇವರಾಜ ಅರಸು ಅವರು ಒತ್ತಿ ಹೇಳುತ್ತಿದ್ದರು ಮತ್ತು ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಂಡು ರಾಜ್ಯಾಡಳಿತವನ್ನು ನಡೆಸುತ್ತಿದ್ದರು.

ದೇವರಾಜ ಅರಸು ಅವರು ಕರ್ನಾಟಕದಲ್ಲಿ ಹಿಂದೆಂದೂ ನೀಡಿರದಿದ್ದ ವಿಶೇಷ ಸವಲತ್ತುಗಳನ್ನು ದಲಿತರು, ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೆ ನೀಡುತ್ತಿದ್ದರು. ಹಾಗೆ ಹೇಳುತ್ತಲೂ ಇದ್ದರು. ಅದು ನಿಜವೂ ಆಗಿತ್ತು. ಆದರೆ ನಾವೆಲ್ಲ ತುರ್ತುಪರಿಸ್ಥಿತಿಯ ವಿರುದ್ಧವಾಗಿ ಕೆಲಸ ಮಾಡುತ್ತಿದ್ದೆವು.

ನಮ್ಮ ಊರಿನಲ್ಲಿ ವೀರಭದ್ರ ದೇವರ ಚಾಕರಿ (ಮ್ಯಾಳ) ಮಾಡುತ್ತಿದ್ದ ಕಾರಣ ಹದಿನೇಳು ಎಕರೆ ವೀರಭದ್ರ ದೇವರ ಹೆಸರಿನಲ್ಲಿದ್ದುದನ್ನು ನಮ್ಮ ಎಲ್ಲ ಆರು ಕುಟುಂಬಗಳಿಗೆ ಊರಿನ ಪ್ರಮುಖರು ನಾವಿನ್ನು ಹುಟ್ಟುವ ಮುಂಚೆಯೇ ಹಂಚಿ ಕೊಟ್ಟಿದ್ದರು. ಅದರಲ್ಲಿ ಅಪ್ಪನಿಗೆ ಸುಮಾರು ನಾಲ್ಕು ಎಕರೆಯಷ್ಟನ್ನು ನೀಡಿದ್ದು ಸಾಗುವಳಿ ಮಾಡಿಕೊಂಡು ಬರುತ್ತಿದ್ದೆವು. ಈ ನಡುವೆ ಭೂಸುಧಾರಣಾ ಕಾನೂನು ಜಾರಿ ಮಾಡುವ ಬಗ್ಗೆ ಅರಸು ಸರ್ಕಾರ ವಿಶೇಷವಾಗಿ ಭೂನ್ಯಾಯ ಮಂಡಳಿಯನ್ನು ರಚಿಸಿತ್ತು. ಇದನ್ನರಿತ ನಮ್ಮವರೆಲ್ಲ ಸೇರಿ ನಮ್ಮ ಅಣ್ಣ ತಿಪ್ಪಣ್ಣನ ಪ್ರಯತ್ನದಿಂದ ಸರ್ಕಾರ ರಚಿಸಿದ್ದ ಭೂನ್ಯಾಯ ಮಂಡಳಿಯ ಮುಂದೆ ಎಲ್ಲ ಆರು ಜನರೂ ತಮಗೆ ಭೂಮಿಯ ಹಕ್ಕು ನೀಡಲು ನಮೂನೆ 7ರ ಅರ್ಜಿ ಸಲ್ಲಿಸಿದ್ದರು.

ಭೂನ್ಯಾಯ ಮಂಡಳಿಯ ಮುಂದೆ ಅರ್ಜಿ ಹಾಕಿದ ವಿಷಯ ಊರಲ್ಲಿ ದೊಡ್ಡ ಅಸಮಾಧಾನದ ಕಿಚ್ಚನ್ನು ಮೂಡಿಸಿತ್ತು. ಈ ನಡುವೆ ನಮಗಾಗಿ ಕೊಟ್ಟಿದ್ದ 17 ಎಕರೆಯಲ್ಲಿ ಮಧ್ಯ ಭಾಗದಲ್ಲಿ 4 ಎಕರೆಯನ್ನು ಕಬಳಿಸುವಷ್ಟು ರಾಷ್ಟ್ರೀಯ ಹೆದ್ದಾರಿಯು ದಾವಣಗೆರೆಯಿಂದ ಹುಬ್ಬಳ್ಳಿವರೆಗೆ ಬೈಪಾಸ್ ರಸ್ತೆಗಾಗಿ ಸರ್ಕಾರ ವಶಪಡಿಸಿಕೊಂಡಿತ್ತು. ಸರ್ಕಾರದಿಂದ ನೀಡಿದ ನಾಲ್ಕು ಎಕರೆ ಪರಿಹಾರದ ಹಣವನ್ನು ಕೂಡ ದೇವಸ್ಥಾನದವರೇ ತೆಗೆದುಕೊಂಡಿದ್ದರು. ಉಳಿದಿದ್ದ 13 ಎಕರೆಯಲ್ಲಿ ಮತ್ತೆ ಪುನಃ ಮರು ಹಂಚಿಕೆ ಮಾಡಿಕೊಂಡು ಆರು ಜನರು ಸುಮಾರು ಎರಡೆರಡು ಎಕರೆಗಳಷ್ಟು ಸಾಗುವಳಿ ಮಾಡುತ್ತಿದ್ದರು.
ದೇವಸ್ಥಾನ ಧರ್ಮದರ್ಶಿ ಕಮಿಟಿಯಲ್ಲಿ ಊರಿನ ಹಿರಿಯರಿದ್ದರೂ ಉಳಿದಿರುವ ಭೂಮಿಯನ್ನು ನಮ್ಮವರಿಂದ ಬಿಡಿಸುವುದು ಮತ್ತು ಪ್ರತಿ ಮಂಗಳವಾರ ಗುಡಿಯಲ್ಲಿ ಮಾಡುತ್ತಿರುವ ಮ್ಯಾಳಗಳನ್ನು ನಿಲ್ಲಿಸಬೇಕೆಂದು ಚರ್ಚೆ ಆಗ ಊರಲ್ಲಿ ನಡೆಯುತ್ತಿತ್ತು. ಅವರೆಲ್ಲರ ಚರ್ಚೆಗಳ ಮಧ್ಯೆ ಮ್ಯಾಳದವರು ನಿಲ್ಲಿಸದೆ ಪ್ರತಿ ಮಂಗಳವಾರ ತಪ್ಪಿಸದೆ ಗುಡಿಗೆ ಹೋಗಿ ಎಂದಿನಂತೆ ಮ್ಯಾಳ ಮಾಡಿ ಬರುತ್ತಿದ್ದರು.

ನಮ್ಮೂರ ಚಲುವಾದಿಗಳಿಗೆ ಈ ರೀತಿಯ ಧೈರ್ಯವಿರಲಿಲ್ಲ. ಇವೆಲ್ಲದರ ಹಿಂದಿನ ಯೋಜಕ ಮೈಸೂರಲ್ಲಿ ಓದುತ್ತಿರುವ ಹುಡುಗ ನಾನೇ ಎಂದು ಊರವರು ಮಾತಾಡಿಕೊಂಡರು. ಅವನು ಊರಿಗೆ ಯಾವ ದಾರಿಯಲ್ಲಿ ಬರುತ್ತಾನೋ ಕಾದು ಕುಳಿತು ಕಾಲು ಮುರಿಯಬೇಕೆಂಬ ಯೋಜನೆ ಕೂಡ ಹಾಕಿಕೊಂಡಿದ್ದರಂತೆ. ಆದರೆ ಏಕಾಂಗಿಯಾಗಿ ಓಡಾಡುತ್ತಿದ್ದ ನನಗೆ ಒಳಗೊಳಗೆ ಅಳುಕು ಇದ್ದರೂ ನಾನೇನು ತಪ್ಪು ಮಾಡುತ್ತಿಲ್ಲ ಎಂಬ ತಿಳುವಳಿಕೆ ಧರ‍್ಯ ನೀಡುತ್ತಿತ್ತು. ಆದರೆ ಊರಿಗೆ ಬಂದು ಹೊರಗೆ ಓಡಾಡುತ್ತಿದ್ದರೆ ನಮ್ಮವರೆಲ್ಲ ದೂರದಲ್ಲಿದ್ದುಕೊಂಡೇ ನನ್ನನ್ನು ಊರಲ್ಲಿರುವ ತನಕ ವಿಶೇಷವಾಗಿ ಕವರ್ ಮಾಡುತ್ತಿದ್ದರು.

ಇದಕ್ಕೂ ಮುಂಚೆ ನಾನಿನ್ನು ಬಿ.ಎ.ನಲ್ಲಿ ಓದುತ್ತಿರುವಾಗ ಸರ್ಕಾರದ ವತಿಯಿಂದ ನಮ್ಮ ಮನೆಯ ಹತ್ತಿರದಲ್ಲೇ ಸಾರ್ವಜನಿಕರಿಗಾಗಿ ಕುಡಿಯಲು ಒಂದು ತೆರೆದ ಬಾವಿಯನ್ನು ತೆಗೆದಿದ್ದರು. ಊರಲ್ಲಿದ್ದ ಎರಡು ಬಾವಿಗಳಿಂದ ನೀರು ಸೇದುತ್ತಿದ್ದ ಮೇಲ್ಜಾತಿಗಳ ಜನರಿಂದ ನಮ್ಮವರೆಲ್ಲ ಹೊಯ್ ನೀರು ತರುತ್ತಿದ್ದರು. ಅಂದರೆ ಮೇಲ್ಜಾತಿಯವರಿಂದ ನೀರು ಸೇದಿ ಇವರ ಕೊಡಗಳಿಗೆ ನೀರು ಹಾಕಬೇಕು, ಆಗ ಇವರ ಮನೆಗಳಿಗೆ ತೆಗೆದುಕೊಳ್ಳಬೇಕು. 1936ರಲ್ಲಿ ಸರ್ಕಾರ ನಮಗೊಂದು ರಂಗಜ್ಜನ ಮಠದ ಹತ್ತಿರ ಬಾವಿ ತೆಗೆಸಿತ್ತು. ಅದು ನಮ್ಮ ಮನೆಗಳಿಗೆ ಅರ್ಧ ಕಿಲೋಮೀಟರ್ ದೂರದಲ್ಲಿತ್ತು. ಆದರೆ ಅಲ್ಲಿನ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ.

ಮನೆಯ ಹತ್ತಿರವಿರುವ ಬಾವಿಯನ್ನು ವಿಧ್ಯುಕ್ತವಾಗಿ ಉದ್ಘಾಟಿಸುವ ಮುನ್ನ ನಾನು ನಮ್ಮಲ್ಲಿದ್ದ ಹಸುವಿನ ಜೊತೆ ಆ ಹೊಸ ಬಾವಿಯಿಂದ ನೀರು ಸೇದಿ ಅದಕ್ಕೆ ಕುಡಿಸಿ ನಾನು ಅಲ್ಲೇ ಸ್ನಾನ ಮಾಡಿಕೊಂಡು ಬರುತ್ತಿದ್ದೆ. ನಾನಿರುವಾಗ ಯಾರೂ ಮಾತಾಡದೆ ಇದ್ದವರು, ನಾನು ಮೈಸೂರಿಗೆ ವಾಪಸ್ ಓದಲು ಹೋದಾಕ್ಷಣ ಮಾರನೆ ದಿನ ನಮ್ಮ ಮನೆಯ ಹೆಣ್ಣು ಮಕ್ಕಳು ನೀರಿಗೆ ಹೋದಾಗ ಹಗ್ಗ ಕೊಡಪಾನಗಳನ್ನು ಕಿತ್ತು ಬಿಸಾಕಿ ನೀರು ಸೇದಲು ಬಿಟ್ಟಿರಲಿಲ್ಲ. ಆಗಿನ್ನು ಅಪ್ಪ ಇದ್ದ. ‘ನೀನು ಊರ ಉಸಾಬರಿಗೆ ಬರಬೇಡ ನಿನ್ನ ಓದು ನೀನು ಮಾಡಿಕೊಂಡು ಸುಮ್ಮನಿರು’ ಎಂದು ಪತ್ರ ಬರೆಸಿ ಸಮಾಧಾನ ಹೇಳಿದ್ದ. ಆದರೂ ನಾನು ಆಗಿರುವ ಅವಮಾನದ ಬಗ್ಗೆ ಚಿಂತಿಸುತ್ತಿದ್ದಾಗ ಒಂದು ದಿನ ಮೈಸೂರಿಗೆ ಬಂದಿದ್ದ ಕಂದಾಯ ಮಂತ್ರಿಗಳಾಗಿದ್ದ ಬಸವಲಿಂಗಪ್ಪನವರ ಹತ್ತಿರ ಹೋಗಿ, ನಮ್ಮೂರಲ್ಲಿ ಸಾರ್ವಜನಿಕ ಬಾವಿಯಿಂದ ನೀರು ಸೇದಲು ಲಿಂಗಾಯತರು ತೊಂದರೆ ಕೊಡುತ್ತಿರುವ ಬಗ್ಗೆ ಹೇಳಿದೆ.

ಅವರು ಅದನ್ನು ಮನಸ್ಸಿನಲ್ಲಿಕೊಂಡು ಬೆಂಗಳೂರಿಗೆ ವಾಪಸಾಗಿದ್ದರು. ನಮ್ಮೂರ ಛರ‍್ಮನ್ ಬಸಪ್ಪನವರು ಮತ್ತು ನಮ್ಮ ಹರಿಹರದವರೇ ಬಿ. ಬಸವಲಿಂಗಪ್ಪನವರು ಮೊದಲಿಂದಲೂ ಬಳಕೆಯಲ್ಲಿದ್ದವರಾಗಿದ್ದರು. ಛರ‍್ಮನ್ ಬಸಪ್ಪನವರು ಇನ್ನು ನಮ್ಮ ಊರಿನವರೊಡನೆ ಬೆಂಗಳೂರಲ್ಲಿ ತಮ್ಮ ಯಾವುದೋ ಕೆಲಸಕ್ಕೆ ಭೇಟಿ ಮಾಡಿದಾಗ ನಾನು ಹೇಳಿದ ವಿಷಯವನ್ನು ಪ್ರಸ್ತಾಪಿಸಿ, ‘ನೀವೇನು ಹೆಂಡ ಕುಡಿಯೋದಿಲ್ಲವಾ? ಮಾಂಸ ತಿನ್ನೋದಿಲ್ವಾ’ ಎಂದೆಲ್ಲಾ ಕೇಳಿ ‘ಬಸವಣ್ಣ ಏನು ಹೇಳಿದ್ದಾನೆ ಗೊತ್ತಾ? ಅದನ್ನ ಪಾಲಿಸೋದು ಬಿಟ್ಟು, ಸರ್ಕಾರ ಕಟ್ಟಿಸಿದ ಬಾವಿಯ ನೀರು ಸೇದಲು ಅಡ್ಡಿಪಡಿಸಬಾರದೆಂದು ಗರ್ಜನೆ ಹಾಕಿ ತಾಕೀತು ಮಾಡಿ ಕಳಿಸಿದ್ದರು.

ನಮ್ಮೂರ ಛರ‍್ಮನ್ ಬಸಪ್ಪನವರು ಬಹಳ ದಿನಗಳ ಕಾಲ ನಮ್ಮೂರ ಛರ‍್ಮನ್‌ರಾಗಿ ಎಲ್ಲರ ಜೊತೆ ಒಳ್ಳೆಯ ಸಂಬಂಧವಿಟ್ಟುಕೊಂಡಿದ್ದರು. ಆದರೆ ಊರ ಸಮಷ್ಟಿಯ ಸಮಸ್ಯೆಗಳು ಬಂದಾಗ ಧೈರ್ಯವಾಗಿ ಒಬ್ಬರೇ ತೀರ್ಮಾನ ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಆದರೆ ಬೆಂಗಳೂರಿನಿಂದ ಬಂದವರೇ ಯಾರು ನಿಮಗೆ ನೀರು ತರಲು ಅಡ್ಡಿಪಡಿಸಿದವರು ಎಂದು ಹೇಳಿ ಅವರೇ ನಮ್ಮ ಕೇರಿಗೆ ಬಂದು ನಮ್ಮವರನ್ನೇ ನೀರು ಸೇದಿಕೊಳ್ಳಲು ಹೇಳಿದ್ದರು. ಊರಲ್ಲಿ ವಿರೋಧಿಸಿದವರಿಗೆ ಸರ್ಕಾರದಿಂದ ಆದೇಶವಾಗಿದೆ ಎಂದೆಲ್ಲ ಹೇಳಿ ಬಾಯಿ ಮುಚ್ಚಿಸಿದ್ದರು. ಛರ‍್ಮನ್ ಬಸಪ್ಪನವರು ಸುಮಾರು 20 ವರ್ಷಗಳ ಕಾಲ ಛರ‍್ಮನ್‌ರಾಗಿದ್ದರು. ಯಾರಿಗೂ ಕೇಡು ಬಯಸುವ ವ್ಯಕ್ತಿಯಾಗಿರಲಿಲ್ಲ. ಇದೇ ಸಮಸ್ಯೆ ಬೇರೆಯವರ ಕೈಗೆ ಬಿದ್ದಿದ್ದರೆ, ಏನೆಲ್ಲಾ ಅನಾಹುತ ಮಾಡುತ್ತಿದ್ದರೋ ಊಹಿಸಲೂ ಅಸಾಧ್ಯ.

ಈ ಹಿನ್ನೆಲೆಯಲ್ಲಿ ಈಗ ಊರ ಮಟ್ಟದಲ್ಲಿ ಮತ್ತೊಂದು ಮಹತ್ತರವಾದ ಸಮಸ್ಯೆಯಾಗಿ ಎದ್ದು ಕೂತಿತ್ತು. ಅದು ಭೂ ನ್ಯಾಯ ಮಂಡಳಿಗೆ ಅರ್ಜಿ ಫಾರಂ ಹಾಕಿದ್ದು. ಹರಿಹರದಲ್ಲಿ ನಡೆಸುತ್ತಿದ್ದ ಭೂನ್ಯಾಯ ಮಂಡಳಿಯ ಮುಂದೆ ಹಾಜರಾಗಬೇಕು. ನಮ್ಮವರೆಲ್ಲ ದೇವಸ್ಥಾನದ ಧರ್ಮದರ್ಶಿಗಳ ಜೊತೆಗೆ ಮಾತಾಡಿಕೊಂಡು ಅವರು ತರುತ್ತಿದ್ದ ಟ್ರಾಕ್ಟರ್‌ನಲ್ಲಿ ಕೂತು ಹೋಗುತ್ತಿದ್ದರು. ನಮ್ಮ ಅಣ್ಣ ತಿಪ್ಪಣ್ಣ ಮಾತ್ರ ಅವರ ಜೊತೆಗೆ ಹೋಗುತ್ತಿರಲಿಲ್ಲ. ಅವರ ಜೊತೆ ಇರುವಾಗ, ನೀವು ಹೇಳಿದ ಹಾಗೆ ಸಾಕ್ಷಿ ಹೇಳುತ್ತೇವೆಂದು ಅವರ ಹತ್ತಿರವೇ ಬೀಡಿ ಕೇಳಿ ಸೇದಿಕೊಳ್ಳುತ್ತಿದ್ದರು. `ಇದೆಲ್ಲ ನಮ್ಮ ಹುಡುಗನ ಕೆಲಸ, ನಮಗ್ಯಾಕಣ್ಣ ದೇವರ ಜಮೀನು’ ಎಂದೆಲ್ಲ ಅವರ ಜೊತೆಯೇ ತಾಳ ಹಾಕುತ್ತ ಇದ್ದರು. ನಾನು ಊರಿಗೆ ಹೋದಾಗ ಯಾವಾಗ ತೀರ್ಮಾನಿಸಲಾಗುತ್ತದೆ ಎಂದು ಬಂದು ಗುಟ್ಟಾಗಿ ನನ್ನ ಬಳಿ ಕೇಳುತ್ತಿದ್ದರು. ನಮ್ಮವರೆಲ್ಲರ ಅದೃಷ್ಟವೋ ಎನ್ನುವಂತೆ ನನಗೆ 1969-1972ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಕೆ.ಎಂ. ಶಂಕರಲಿಂಗೇಗೌಡರನ್ನು ದಾವಣಗೆರೆ ಭೂನ್ಯಾಯ ಮಂಡಳಿಯ ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿತ್ತು. ನಾನು ನಮ್ಮ ಊರಿನ ಸ್ಥಿತಿಯನ್ನೆಲ್ಲ್ಲ ಅವರಿಗೆ ವಿವರಿಸಿ, ನಮಗೆ ಆದಷ್ಟು ಬೇಗ ಇತ್ಯರ್ಥಗೊಳಿಸಿಕೊಡಬೇಕೆಂದು ಅವರಲ್ಲಿ ವಿನಂತಿಸಿದೆ. ನಾನು ಹೋಗಿ ವಿನಂತಿಸಿದ 3-4 ತಿಂಗಳಲ್ಲಿ ನಮ್ಮವರೆಲ್ಲರ ಹೆಸರಿಗೆ ಭೂನ್ಯಾಯ ಮಂಡಳಿಯಲ್ಲಿ 1976ರ ವರ್ಷದ ಮಧ್ಯ ಭಾಗದಲ್ಲಿ ಭೂನ್ಯಾಯ ಮಂಡಳಿಯಿಂದ ತೀರ್ಮಾನಿಸಲಾಗಿತ್ತು.

ಆ ಸಂದರ್ಭದಲ್ಲಿ ಹೆಚ್. ಶಿವಪ್ಪನವರು ಹರಿಹರ ತಾಲ್ಲೂಕು ಶಾಸಕರು ಮತ್ತು ಭೂನ್ಯಾಯ ಮಂಡಳಿಯ ಸದಸ್ಯರಾಗಿದ್ದರು. ಅವರು ನಮಗೆಲ್ಲ ಜಮೀನು ನೋಂದಾಯಿಸುವ ಪ್ರಕರಣದಲ್ಲಿ ವಿರೋಧಿಸದೆ ಸಹಕಾರ ನೀಡಿದ್ದನ್ನು ನಾನು ನೆನಪಿಸಿಕೊಳ್ಳಬೇಕು. ಆದೇಶ ನೀಡುವ ಸಮಯದಲ್ಲಿ ದೇವಸ್ಥಾನದ ಧರ್ಮದರ್ಶಿಗಳು, ಭೂನ್ಯಾಯ ಮಂಡಳಿಯ ಅಧ್ಯಕ್ಷರ ಎದುರೇ ‘ಊರಿಗೆ ರ‍್ರಲೇ ನೋಡಿಕೊಳ್ಳುತ್ತೇವೆ’ ಎನ್ನೋ ಧಮ್ಕಿ ಹಾಕಿದಾಗ, ಅಧ್ಯಕ್ಷರು ‘ನಿಮ್ಮನ್ನೆಲ್ಲ ಪೊಲೀಸ್ ಕರೆಸಿ ಈಗಲೇ ಜೈಲಿಗೆ ಕಳಿಸುತ್ತೇನೆಂದು ಹೇಳಿ ಎಚ್ಚರಿಕೆ ನೀಡಿದರೆಂದು ನಮ್ಮವರೆಲ್ಲ ನನ್ನ ಬಳಿ ಸಂತೋಷದಿಂದ ಎಲ್ಲ ಮುಗಿದ ಮೇಲೆ ಹೇಳಿಕೊಂಡಿದ್ದರು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಡೋಜೆ ಡಾ. ಕಮಲಾ ಹಂಪನಾಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಗಣ್ಯರಿಂದ ಅಂತಿಮ ನಮನ

Published

on

ಸುದ್ದಿದಿನ,ಬೆಂಗಳೂರು:ಹಿರಿಯ ಸಾಹಿತಿ ನಾಡೋಜ ಡಾ. ಕಮಲಾ ಹಂಪನಾ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವೀಂದ್ರ ಕಲಾಕ್ಷೇತ್ರದಲ್ಲಿ ಪಡೆದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ಸಾಹಿತಿ ಹಂಪನಾ ಮತ್ತು ಬರಗೂರು ರಾಮಚಂದ್ರಪ್ಪ ಸೇರಿ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಈ ವೇಳೆ, ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡದ ಉತ್ತಮ ಸಾಹಿತಿಯನ್ನು ಕಳೆದುಕೊಂಡಿದ್ದೇವೆ, ಕಮಲಾ ಹಂಪನಾ, ಬೋಧಕರಾಗಿ, ಸಂಶೋಧಕರಾಗಿ, ಸಾಹಿತಿಯಾಗಿ ಕನ್ನಡ ಭಾಷೆಗಾಗಿ ಬಹಳ ಶ್ರಮಿಸಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಂಪನಾ ಮತ್ತು ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಡೋಜೆ ಕಮಲಾ ಹಂಪನ ನಿಧನ ; ಮೆಡಿಕಲ್ ಕಾಲೇಜಿಗೆ ದೇಹದಾನ : ಗಣ್ಯರ ಸಂತಾಪ

Published

on

ಸುದ್ದಿದಿನಡೆಸ್ಕ್:ಕನ್ನಡದ ಖ್ಯಾತ ಸಾಹಿತಿ ನಾಡೋಜೆ ಕಮಲ ಹಂಪನಾ (89) ಅವರು ಇಂದು ರಾಜಾಜಿನಗರದ ಮನೆಯಲ್ಲಿ ಮಲಗಿದ್ದಲ್ಲಿಯೇ ಅಸುನೀಗಿದ್ದಾರೆ. ಅವರು ಪ್ರಾಧ್ಯಾಪಕರಾಗಿ, ಬಹಳಷ್ಟು ಪ್ರಾಚೀನ ಕೃತಿಗಳ ಅನುಸಂಧಾನಕಾರರಾಗಿ ಸೇವೆ ಸಲ್ಲಿಸಿದ್ದಾರೆ.

ಹಂಪನಾ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥ ಮಾಡಲಾಗಿದ್ದು, ಬಳಿಕ ಮೃತರ ಆಸೆಯಂತೆ ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುವುದು ಎಂದು ಅವರ ಕುಟುಂಬ ತಿಳಿಸಿದೆ.

ಸಿಎಂ ಸಂತಾಪ


ಹಿರಿಯ ಸಾಹಿತಿ ಡಾ.ಕಮಲ ಹಂಪನಾ ಅವರ ಅನಿರೀಕ್ಷಿತ ಸಾವಿನಿಂದ ದು:ಖಿತನಾಗಿದ್ದೇನೆ.

ಸಾಹಿತ್ಯ ಕೃಷಿಯ ಜೊತೆ ಸಂಶೋಧನೆ ಮತ್ತು ಬೋಧನೆಗಳಿಂದಲೂ ಜನಪ್ರಿಯರಾಗಿದ್ದ ಡಾ.ಕಮಲಾ ಅವರದ್ದು ಸರ್ವರಿಗೂ ಒಳಿತನ್ನು ಬಯಸಿದ ಜೀವ.

ಡಾ.ಹಂಪ ನಾಗರಾಜಯ್ಯ ಮತ್ತವರ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ.
ಮೃತರ ಆತ್ಮಕ್ಕೆ ಶಾಂತಿ ಕೋರುವೆ.


ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending