ಸಿನಿ ಸುದ್ದಿ
ಜಂಟಲ್ಮನ್ ಕರ್ಣನಲ್ಲ ; ಕುಂಬಕರ್ಣ..!

- ಮಾಸ್ತಿ
ಚೆನ್ನಾಗಿ ನಿದ್ದೆ ಮಾಡಿದ್ರೆ ಯಾವುದೇ ಖಾಯಿಲೆನಾದ್ರೂ ವಾಸಿ ಆಗುತ್ತೆ ಅದ್ರೆ ಮಲಗಿರೋದೇ ಖಾಯಿಲೆ ಆದ್ರೆ ?
ಡಾಕ್ಟ್ರು ಹೇಳ್ತಾರೆ ಇವನಿಗೆ ಮಾರಕ ಖಾಯಿಲೆ ಇದೆ ದಿನದ ಇಪ್ಪತ್ನಾಲ್ಕು ತಾಸಲ್ಲಿ ಬರೋಬ್ಬರಿ ಹದಿನೆಂಟು ತಾಸು ಮಲಗಿರ್ತಾನೆ ಬರೀ ಆರು ತಾಸು ಮಾತ್ರ ಎದ್ದಿರ್ತಾನೆ ಅಂತ , ಆಗೊಬ್ಬ ಕೇಳ್ತಾನೆ ಅಲಾರಂ ಇಟ್ರು ಎದ್ದೇಳಲ್ವಾ ಅಂತ ? ಅದಕ್ಕೆ ಡಾಕ್ಟರ್ ‘ ಅಲಾರಂ ಅಲ್ಲ ಅಲ್ಲಾ ರಾಮ್ ಇಬ್ರು ಬಂದ್ರು ಇವನು ಎದ್ದೇಳಲ್ಲ !.
ಇದನ್ನ ಮಾರಕ ಖಾಯಿಲೆ ಅಂತೇಳೋ ಬದಲು ಮಂಪರು ಖಾಯಿಲೆ ಅಂತನ್ನಬಹುದು .ಬರೀ ಆರು ತಾಸಲ್ಲಿ ಅವನು ರೆಡಿಯಾಗ್ಬೇಕು ಕೆಲಸಕ್ಕೋಗ್ಬೇಕು ತಿನ್ನಬೇಕು ಟ್ರೀಟ್ಮೆಂಟ್ ತಗೋಬೇಕು ಒಂದಾ ಎರಡಾ, ಇವನಿಗೊಂದು ಸಣ್ಣ ಕುಟುಂಬ , ಇದರ ಮದ್ಯೆ ಇವನದೊಂದು ಲವ್ ಸ್ಟೋರಿ , ಸಮಯ ಒದಗಿಸಲಕ್ಕಾಗದೇ ಕೆಲಸ ಬಿಡ್ತಾನೆ , ಬಾಸ್ ಕೇಳ್ತಾನೆ ಅಲ್ಲಯ್ಯ ಯಾರಾದ್ರೂ ಲವ್ ಗೋಸ್ಕರ ಕೆಲಸ ಬಿಡ್ತಾರ ? ಅದಕ್ಕೆ ಹೀರೋ ಹೇಳ್ತಾನೆ ಲವ್ಗೋಸ್ಕರ ಪ್ರಾಣಾನೇ ಬಿಡ್ತಾರೆ ಅಂತದ್ರಲ್ಲಿ ಕೆಲಸ ಬಿಟ್ರೆ ಏನು ?. ದೇವರೇ ಅನ್ಯಾಯವೆಸಗಿರುವ ಈ ರೋಗಿಯ ಬದುಕಿನಲ್ಲಿ ಎದುರಾಗುವ ಸವಾಲುಗಳೇನು ಅದನ್ನವನು ಎದುರಿಸುವ ರೀತಿ ಏನು ಇದೇ ಈ ಸಿನಿಮಾದ ತಿರುಳು.
ಜಡೇಶ್ ಕುಮಾರ್ ಹಂಪಿ ವಯಸ್ಸಲ್ಲಿ ಅಂತಹ ಹಿರಿಯನಲ್ಲದಿದ್ದರೂ ಈ ತರಹದ ಮೆಚ್ಯೂರ್ಡ್ ಥ್ರಿಲ್ಲಿಂಗ್ ಸ್ಟೋರಿ ಮಾಡಿಕೊಂಡು ಚೆಂದದ ಸಿನಿಮಾ ಮಾಡಿದ್ದಾರೆ, ಅದಕ್ಕೆ ಅವರ ಗುರುಗಳಾದ ಗುರುದೇಶ್ಪಾಂಡೆ ಅವರೇ ಹಣ ಹೂಡಿದ್ದಾರೆ, ಪ್ರಜ್ವಲ್ ಈ ಸಿನಿಮಾದಲ್ಲಿ ತುಂಬಾನೇ ಚೆನ್ನಾಗಿ ಕಾಣ್ತಾರೆ, ಪಾತ್ರದಲ್ಲಿ ಮಲಗಿದ್ರೂ ಪಾತ್ರಪೋಷಣೆಯಲ್ಲಿ ಮಿಂದೆದ್ದಿದ್ದಾರೆ, ಪಾತ್ರದಲ್ಲಿ ಮಾಗಿದ್ದಾರೆ ಪಾತ್ರಕ್ಕಾಗಿ ಬಾಗಿದ್ದಾರೆ.
ನಿಶ್ವಿಕ ಅಪರೂಪದ ಅಲಾರಂ ಪೀಸ್ನಂತೆ ಸುಂದರವಾಗಿ, ಇಂಚರದಷ್ಟೇ ಇಂಪಾಗಿ ಸದ್ದು ಮಾಡುತ್ತಾರೆ. ಆರೂರು ಸುಧಾಕರ್ ಶೆಟ್ಟರ ಸಿನಿಮಾಟೋಗ್ರಫಿ ನೂರೂರಿನವರನ್ನು ಒಪ್ಪಿಸುವಂತಿದೆ, ತಾಂತ್ರಿಕತೆ ಉತ್ಕೃಷ್ಟವಾಗಿದೆ, ಅವರೇನು ಅಂತೇಳಲು ಸೆಲ್ಫಿ ಫೈಟ್ನಲ್ಲಿ ಅವರು ಮಾಡಿರುವ ಲೈಟಿಂಗ್ ಮತ್ತು ಕ್ಯಾಮರಾವನ್ನಾಡಿಸಿರುವ ರೀತಿಯೇ ಉದಾಹರಣೆ, ಸಾಹಸದಲ್ಲಾಗಲೀ ಸಂಗೀತದಲ್ಲಾಗಲಿ , ಹಾಸ್ಯದಲ್ಲಾಗಲಿ ಲಾಸ್ಯದಲ್ಲಾಗಲೀ, ಗಾತ್ರದ ಕ್ಯಾಮರಾವನ್ನು ಪಾತ್ರವನ್ನಾಗಿಸಿದ್ದಾರೆ.
ಸಿಕ್ಕ ಸಮಯದಲ್ಲೇ ಕತ್ತಲನ್ನೂತು ಬೆಳಕನ್ನು ಬೆಳೆದಿದ್ದಾರೆಂದರೆ ಸೋಜಿಗವಲ್ಲ. ಅಜನೀಶರ ಸಂಗೀತ ನಿಜಕ್ಕೂ ನಿದ್ದೆಕತೆಯಲ್ಲೂ ಲಾಲಿ ಹಾಡಿಸುತ್ತೆ, ಮಂಪರಲ್ಲೂ ಮನರಂಜಿಸುತ್ತೆ, ಹಿನ್ನೆಲೆಸಂಗೀತದಲ್ಲಿ ನಿಮ್ಮಿಂದೆ ನಾನಿದೀನಿ ಅಂತ ಧೈರ್ಯ ತುಂಬುತ್ತೆ , ಸಂಚಿತ್ ಹೆಗ್ಗಡೆಯೆಂಬ ” ಉಸಿರಾಡುವ ಮೈಕು ” ಕಿವಿಗಲ್ಲ ಮನಸ್ಸಿಗಿಡಿಸುವಂತಾಡಿದ್ದಾನೆ.
ಬರುವ ಎಲ್ಲಾ ಪಾತ್ರಗಳೂ ಅವಶ್ಯಕಥೆಯ ಹಾಗೂ ಜಡೇಶರ ಕಥೆಯ ಚೌಕಟ್ಟಿನಲ್ಲೇ ಇದೆ. ಸಂಚಾರಿ ವಿಜಯ್ ಖಾಕಿ ತೊಟ್ಟು ಖಡಕ್ ಪಾತ್ರದಲ್ಲಿ ಕಾಣಿಸಿದ್ದಾರೆ. ಮನೆಯಲ್ಲೊಂದು ಮಗು ಇದ್ದರೆ ಎಂಥಾವ್ರಿಗೂ ಮನೆ ಕಡೆ ಹೋಗ್ಬೇಕನ್ನಿಸುತ್ತದೆ ಹಾಗೆಯೇ ಬೇಬಿ ಅರಾಧ್ಯ ಎಂಬ ಆರು ವರುಷದ ಮಗು ಒಂದು ಪಾತ್ರ ಮಾಡಿದೆ ನಿಜಕ್ಕೂ ಆ ಪುಟ್ಟ ಪಾತ್ರಕ್ಕೆ ಈ ಹುಡುಗಿ ದೊಡ್ಡ ಮೆರಗು ತುಂಬಿದ್ದಾಳೆ. ಭಾವುಕಳಾದರಂತೂ ನಿರ್ಭಾವುಕರ ಕಣ್ಣಲ್ಲಿಯೂ ನೀರು ತುಂಬಿಸುತ್ತಾಳೆ .
ಕಿರುತೆರೆಯ ನಟ ಅರ್ಜುನ್ ಹಿರಿತೆರೆಯಲ್ಲಿ ಆರ್ಭಟಿಸಿದ್ದಾರೆ. ಅನಿಲ್ ಯಾದವ್ ಚಿಕ್ಕ ಪಾತ್ರವನ್ನು ಚೊಕ್ಕವಾಗಿಸಿದ್ದರೆ ಪ್ರಶಾಂತ್ ಪಾತ್ರವನ್ನು ಸಿದ್ದಿಸಿದ್ದಾರೆ. ಮಿಕ್ಕಂತೆ ಜಡೇಶ್ ವೆಂಕಿಯ ಸಂಕಲನವನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡಿದ್ದಾರೆ. ಜಂಟಲ್ಮನ್ ಅಂದ್ರೆ ಸಂಭಾವಿತ, ಸಭ್ಯಸ್ಥ , ಸುಸಂಸ್ಕೃತ. ನಂಬಿ ಈ ಸಿನಿಮಾ ಸಹ ಇವುಗಳಷ್ಟೇ ಅರ್ಥಗರ್ಭಿತವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮತ್ತೆ ತಾಯಿಯಾಗಬೇಕು : ನಟಿ ಸಮಂತಾ

ಸುದ್ದಿದಿನಡೆಸ್ಕ್:ಇತ್ತೀಚೆಗೆ ನಟಿ ಸಮಂತಾ ಅವರ ಕಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆ ಹೇಳಿಕೆಗಳ ಮೇಲೆ ನಾನಾ ರೀತಿಯ ಅನುಮಾನಗಳೂ ವ್ಯಕ್ತವಾಗಿವೆ.
ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸದ್ಯ ಸಮಂತಾ ಸತತ ಚಿತ್ರಗಳಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಇತ್ತೀಚಿಗೆ ಸಮಂತಾ ಅವರ ವೆಬ್ ಸಿರೀಸ್ ವಿಚಾರಕ್ಕೆ ಸುದ್ದಿಯಾಗಿದ್ದರು. ನಟಿಯ ಇತ್ತೀಚಿನ ವೆಬ್ ಸಿರೀಸ್ ಸಿಟಾಡೆಲ್ ಸಖತ್ ಸುದ್ದಿಯಾಗಿದೆ. ಸದ್ಯ ಈ ವೆಬ್ ಸೀರೀಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ ಎಂದು ತಿಳಿದುಬಂದಿದೆ. ಈ ವೆಬ್ ಸರಣಿಯ ಪ್ರಚಾರದ ವೇಳೆ ಮಾಡಿದ ಕಾಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದರ ಭಾಗವಾಗಿ ಸಮಂತಾ ರಾಜ್ ಮತ್ತು ಡಿಕೆ ಸಂದರ್ಶನವೊಂದರಲ್ಲಿ ಹೇಳಿದ್ದು ದಿ ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣದ ವೇಳೆ ನಾನು ಹಲವು ಭಾವನೆಗಳಿಗೆ ಒಳಗಾಗಿದ್ದೆ ಎಂದು ಸಮಂತಾ ಹೇಳಿದ್ದಾರೆ. ಅಲ್ಲದೇ ಅವರ ನಿರ್ದೇಶನದಲ್ಲಿ ನಟಿಸುವುದು ಕಷ್ಟ ಎಂದಿದ್ದಾರೆ. ನಂತರ ಅದೇ ಸಂದರ್ಶನದಲ್ಲಿ ನಟಿ ಬೇರೆ ವಿಚಾರವನ್ನೂ ಹೇಳಿದ್ದಾರೆ.
ಹನಿ ಬನ್ನಿ ವೆಬ್ ಸರಣಿಯಲ್ಲಿ ತಾಯಿ ಪಾತ್ರದ ಬಗ್ಗೆ ಮಾತನಾಡುತ್ತಾ, ಅವರು ಸಂವೇದನಾಶೀಲ ಕಾಮೆಂಟ್ಗಳನ್ನು ಮಾಡಿದ್ದಾರೆ. ನನಗೆ ತಾಯಿಯಾಗುವ ಕನಸು ಇದೆ. ನಾನು ತಾಯಿಯಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಇದಕ್ಕಾಗಿ ತಡವಾಗಿದೆ ಎಂದು ಅವರು ಭಾವಿಸುವುದಿಲ್ಲ. ನಾನು ಜೀವನದಲ್ಲಿ ತುಂಬಾ ಖುಷಿಯಾಗಿದ್ದೇನೆ ಎಂದು ಸಮಂತಾ ಹೇಳಿದ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಸಮಂತಾ ಈ ಕಾಮೆಂಟ್ ಮಾಡಿದ ನಂತರ ಮತ್ತೊಮ್ಮೆ ಅವರ ಎರಡನೇ ಮದುವೆಯ ಸುದ್ದಿಗೆ ವೇಗ ಸಿಕ್ಕಿದೆ. ಈ ಹಿಂದೆ ರಾಜ್ ಹಾಗೂ ಡಿಕೆಶಿಯಲ್ಲಿ ರಾಜ್ ನನ್ನು ಪ್ರೀತಿಸುತ್ತಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಇದೀಗ ಸಮಂತಾ ಎರಡನೇ ಮದುವೆಯ ಸುದ್ದಿ ಮುನ್ನೆಲೆಗೆ ಬಂದಿದ್ದು, ಮತ್ತೆ ತಾಯಿಯಾಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ರಾಜ್ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗೆ ವೇಗ ಸಿಕ್ಕಿದೆ. ಈ ಸುದ್ದಿಯಲ್ಲಿನ ಸತ್ಯಗಳ ಹೊರತಾಗಿ, ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಸುದ್ದಿಗೆ ಸಮಂತಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಿಕ್ಕಾಬಟ್ಟೆ ಸಾಲ, ಸಾಲು ಸಾಲು ಚೆಕ್ಬೌನ್ಸ್ ಕೇಸ್ ; ನಿರ್ದೇಶಕ ಗುರುಪ್ರಸಾದ್ ಸಾವಿಗೆ ಕಾರಣವಾಯ್ತಾ..!?

ಸುದ್ದಿದಿನಡೆಸ್ಕ್:ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ʻಮಠʼ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.
ಗುರುಪ್ರಸಾದ್ ಮೇಲೆ ಸಾಲು ಸಾಲು ಚೆಕ್ಬೌನ್ಸ್ ಕೇಸ್ಗಳಿದ್ದವು. ಸಿಕ್ಕ ಸಿಕ್ಕವರ ಬಳಿ ಸಾಲ ಮಾಡಿಕೊಂಡಿದ್ದರು. ಶ್ರೀನಿವಾಸ್ ಗೌಡ ಎಂಬುವರ ಜೊತೆ ಹಣದ ವ್ಯವಹಾರಕ್ಕೆ ಕಿರಿಕ್ ಕೂಡ ಆಗಿತ್ತು. ಗುರುಪ್ರಸಾದ್ಗೆ ಅಭಿಮಾನಿಯಾಗಿದ್ದ ಶ್ರೀನಿವಾಸ್ ಗೌಡ 25 ಲಕ್ಷ ಹಣ ನೀಡಿದ್ದರು. ಗುರುಪ್ರಸಾದ್ ಬರವಣಿಗೆ ಮೆಚ್ಚಿ ಜೊತೆಯಲ್ಲೇ ಇದ್ದರು ಶ್ರೀನಿವಾಸ್ ಗೌಡ.
ಹಣ ವಾಪಸ್ ಕೊಡಲಾಗದೇ ಕಿರಿಕ್ ಮಾಡಿಕೊಂಡಿದ್ದರು ನಿರ್ದೇಶಕ ಗುರುಪ್ರಸಾದ್ ಅವರು. ಈ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದ, ಗುರುಪ್ರಸಾದ್ ವಿರುದ್ದ ಕಾನೂನು ಸಮರ ಸಾರಿದ್ದರು. ಅಕ್ಟೋಬರ್ 24ರಂದು ಇದ್ದ ಕೋರ್ಟ್ವಿಚಾರಣೆಗೂ ಹಾಜರಾಗಿರಲಿಲ್ಲ ಗುರುಪ್ರಸಾದ್. ಮೆಡಿಕಲ್ ರಿಪೋರ್ಟ್ ನೀಡಿ ವಿಚಾರಣೆ ಮುಂದೂಡಿಸಿಕೊಂಡಿದ್ದರು.
ನಿನ್ನೆ ಅಂದರೆ ನವೆಂಬರ್ 2ಕ್ಕೆ ಗುರುಪ್ರಸಾದ್ ಹುಟ್ಟುಹಬ್ಬ ಇತ್ತು. ಶುಭಾಶಯ ಕೋರಲು ಕರೆಮಾಡಿದವರಿಗೂ ನಾಟ್ ರೀಚಬಲ್ ಬಂದಿತ್ತು ಮೊಬೈಲ್.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ಮಠ’ ಸಿನೆಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ..!

ಸುದ್ದಿದಿನಡೆಸ್ಕ್:ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ʻಮಠʼ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.
52 ವರ್ಷದ ಕನಕಪುರ ಮೂಲದ ಗುರುಪ್ರಸಾದ್ ಇನ್ನಿಲ್ಲಾ.. ತುಮಕೂರು ರಸ್ತೆಯ ಅಪಾರ್ಟ್ಮೆಂಟ್ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲದ ಸುಳಿಗೆ ಸಿಲುಕಿದ್ದ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಠ ಸಿನಿಮಾ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು. ಮಠ, ಎದ್ದೇಳು ಮಂಜುನಾಥ್ ಚಿತ್ರದ ಮೂಲಕ ಮನೆಮಾತಾಗಿದ್ದರು.
ನಿರ್ದೇಶಕ ʻಮಠʼ ಗುರುಪ್ರಸಾದ್ ಅವರು ನವೆಂಬರ್ 02, 1972 ರಂದು ರಾಮನಗರದಲ್ಲಿ ಜನಿಸಿದ್ದರು, ಅಂದರೆ ನಿನ್ನೆ ನಿರ್ದೇಶಕ ಗುರುಪ್ರಸಾದ್ ಹುಟ್ಟುಹಬ್ಬ ಇತ್ತು, ನಿನ್ನೆ ಬರ್ತ್ ಡೇ ವಿಶ್ ಮಾಡಲು ಕರೆಮಾಡಿದವರಿಗೆ ನೋ ಆನ್ಸರ್ ಅಂತ ಬರುತ್ತಿತ್ತು, ನಿರ್ದೇಶಕ ಗುರುಪ್ರಸಾದ್ ಅವರ ಮೊಬೈಲ್ ನಾಟ್ ರೀಚಬಲ್ ಆಗಿತ್ತು, ಗುರುಪ್ರಸಾದ್ ತಮ್ಮ ಜನ್ಮದಿನಕ್ಕೆ ಮುನ್ನವೇ ಜೀವನಕ್ಕೆ ಅಂತ್ಯ ಹಾಡಿಕೊಂಡಿದ್ದಾರೆ. ಬರ್ತಡೇಗೂ ಮುನ್ನವೇ ಡೆತ್ ಡೇ ಮಾಡಿಕೊಂಡ ಗುರುಪ್ರಸಾದ್..!
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ; ಇಲ್ಲಿವೆ ಪ್ರಮುಖಾಂಶಗಳು
-
ದಿನದ ಸುದ್ದಿ5 days ago
ಮುಂದಿನ ನಾಯಕರಾಗಿ ತಯಾರಾಗಿ : ಪ್ರೊ ಇಗ್ನಿಸಿಯಸ್
-
ದಿನದ ಸುದ್ದಿ3 days ago
ಮಹಿಳಾ ಸಬಲೀಕರಣಕ್ಕೆ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಯೇ ಪೂರಕ : ಡಾ.ಬಾಬು
-
ದಿನದ ಸುದ್ದಿ3 days ago
ಸರ್ಕಾರಿ ವೈದ್ಯರು ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಕಾರ್ಯ ನಿರ್ವಹಿಸುವುದು ಕಡ್ಡಾಯ:ಸಚಿವ ಶರಣಪ್ರಕಾಶ್ ಪಾಟೀಲ್
-
ದಿನದ ಸುದ್ದಿ2 days ago
ಸೌಜನ್ಯ ಸಾವು ; ನಾಡಿನಾದ್ಯಂತ ಜನಾಂದೋಲನ : ಹಿರಿಯ ಪತ್ರಕರ್ತ ಪುರಂದರ್ ಲೋಕಿಕೆರೆ
-
ದಿನದ ಸುದ್ದಿ17 hours ago
ಮಾರ್ಚ್ 15 ರಂದು ಬೃಹತ್ ಉದ್ಯೋಗ ಮೇಳ ; ಸಂಜೆ ಬಿಐಇಟಿ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಗೀತ ಪ್ರಭ
-
ದಿನದ ಸುದ್ದಿ16 hours ago
ದಾವಣಗೆರೆಯಲ್ಲಿ ಉದ್ಯೋಗ ಮೇಳ | ಬನ್ನಿ ಭಾಗವಹಿಸಿ, ಉದ್ಯೋಗ ಪಡೆಯಿರಿ
-
ದಿನದ ಸುದ್ದಿ16 hours ago
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’