ದಿನದ ಸುದ್ದಿ
ಆನ್ಲೈನ್ ಶಿಕ್ಷಣ ಬೇಕೋ..? ಬೇಡವೋ..?
- ಸಂಗಮೇಶ ಎನ್ ಜವಾದಿ
ಕರೋನಾ ಎಂಬ ಮಹಾಮಾರಿಯ ಹಾವಳಿಯಿಂದ ಲಕ್ಷಾಂತರ ಜನರು ಇನ್ನು ಆತಂಕ ಸ್ಥಿತಿಯಲ್ಲಿ ಇದ್ದಾರೆ. ಜೊತೆಗೆ ಹಲವಾರು ಸಮಸ್ಯೆಗಳು ಜನಸಾಮಾನ್ಯರು ದಿನನಿತ್ಯ ಅನುಭವಿಸುತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಮಕ್ಕಳ ಸ್ಥಿತಿಯಂತು ಹೇಳತೀರದು ಎನ್ನಬಹುದು. ಈಗ ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಅಂದರೆ ಅವರ ಶಿಕ್ಷಣದ ಉನ್ನತಿಗಾಗಿ ಶಿಕ್ಷಣ ಪಡೆಯುವುದು ಅನಿವಾರ್ಯವಾಗಿದೆ ಎನ್ನಬಹುದು.
ಆದರೆ ಈಗ ಸಧ್ಯ ಶಾಲೆಗಳಿಗೆ ಮಕ್ಕಳು ಹೋಗುವಂತಿಲ್ಲ.ಒಂದು ವೇಳೆ ಶಾಲೆಗಳಿಗೆ ತೆರಳಿ ಒಂದೇ ಕಡೆ ಮಕ್ಕಳು ಸೇರಿದರೇ, ಕೊರೋನಾ ಹಾವಳಿ ಹೆಚ್ಚಾಗುವದಂತು ಖಂಡಿತಾ ಹಾಗಾಗಿ ಕೊರೋನಾ ಹಾವಳಿ ಹೆಚ್ಚಾಗಬಹುದೆಂಬ ಭಯದ ಹಿನ್ನೆಲೆಯಲ್ಲಿ ಕೆಲ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ
ಆನ್ಲೈನ್ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ತಂದಿದ್ದಾರೆ.
ಆದರೆ ಈ ಆನ್ಲೈನ್ ಶಿಕ್ಷಣ ವ್ಯವಸ್ಥೆಯಿಂದ
ಮಕ್ಕಳ ಅಧ್ಯಯನದ ಮೇಲೆ ಎಷ್ಟು ಪರಿಣಾಮಕಾರಿಯಾಗಿ ಶಿಕ್ಷಣ(ಅಭ್ಯಾಸ)ದ ಪ್ರಭಾವ ಬೀರುತ್ತದೆ ಎಂಬುದು ಈಗಿರುವ ಮುಖ್ಯ ಪ್ರಶ್ನೆ ಜೊತೆಗೆ ಬಡ ಕುಟುಂಬದ ಮಕ್ಕಳ ಸ್ಥಿತಿಗತಿ, ಅವರ ಆರ್ಥಿಕ ಪರಿಸ್ಥಿತಿ ಹೇಗೆ ಎನ್ನುವುದು ಸೇರಿದಂತೆ ನೂರಾರು ಪ್ರಶ್ನೆಗಳು ಸಹಜವಾಗಿಯೇ ನಮ್ಮನ್ನು ಕಾಡುತ್ತಿವೆ ಮತ್ತು ಘಾಸಿಗೊಳಿಸುತ್ತಿವೆ.ಈ ನಿಟ್ಟಿನಲ್ಲಿ ಆನ್ಲೈನ್ ಶಿಕ್ಷಣ ಬೇಕೋ ಬೇಡವೋ ಎನ್ನುವ ಶೀರ್ಷಿಕೆ ಬಳಸಿಕೊಂಡು ಈ ಚಿಕ್ಕ ಲೇಖನ ಬರೆಯುವ ಕಾಯಕ ಮಾಡಿರುತ್ತೇನೆ.ಹಾಗಾಗಿ ತಮ್ಮ ಮುಂದೆ ಈ ಲೇಖನ ತರುವ ಪುಟ್ಟ ಪ್ರಯತ್ನ ನಮ್ಮದಾಗಿದೆ.
ಈ ಹಿನ್ನೆಲೆಯಲ್ಲಿ ಈಗ ಎಲ್ಲೆಡೆ ಆನ್ಲೈನ್ ಕ್ಲಾಸ್ ಗಳು ಪ್ರಾರಂಭವಾಗಿವೆ. ಆಯಾ ವಿಷಯಕ್ಕೆ ತಕ್ಕಂತೆ ದಿನಾಲೂ ಶಿಕ್ಷಕಿಯರು – ಶಿಕ್ಷಕರು ಪಾಠ ಮಾಡುತ್ತಿದ್ದಾರೆ.ಮಕ್ಕಳು ಆನ್ಲೈನ್ ಕ್ಲಾಸ್ನನಲ್ಲಿಯೇ
ಪಾಠಗಳನ್ನು ಕೇಳಿ ಮನೆಯಲ್ಲಿಯೇ ಅಭ್ಯಾಸ ಮಾಡಬೇಕು. ಶಾಲೆಯಲ್ಲಿ ಪಾಠ ಮಾಡುವಾಗ ಶಿಕ್ಷಕರು ಮಕ್ಕಳ ಮನಸ್ಸನ್ನು ಸೆರೆ ಹಿಡಿಯಲು ಪಾಠ ಬೋಧನೋಪಕರಣಗಳ ಜೊತೆಗೆ ನಾನಾ ತರಹದ ಸರ್ಕಸ್ಸುಗಳನ್ನು ಮಾಡುತ್ತಿರುತ್ತಾರೆ.
ಆದರೂ ಕೂಡ ಕೆಲವು ವಿದ್ಯಾರ್ಥಿಗಳು ಪಾಠಗಳನ್ನು ಕೇಳುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ ಹಾಗೂ ಮತ್ತೊಂದು ಕಡೆ ಬಡತನದ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಬಡವರ ಹತ್ತಿರ ಮೊಬೈಲ್ ಇಲ್ಲದೇ ಇರಬಹುದು. ಇದ್ದರೂ ಹಳ್ಳಿಗಳಲ್ಲಿ ನೆಟ್ವರ್ಕ್ ಸಮಸ್ಯೆ. ಇದರಿಂದ ಆನ್ಲೈನ್ ಶಿಕ್ಷಣ ಎಲ್ಲರಿಗೂ ತಲುಪುವುದು ಕಷ್ಟವಾಗಬಹುದೆಂಬ ಅನುಮಾನ ಕೆಲ ಪೂಷಕರಲ್ಲಿ ಕಾಣುತ್ತವೆ.ಆದ್ದರಿಂದ ಹಿಗಿದ್ದ ಮೇಲೂ ಮಕ್ಕಳ ಮೇಲೆ ಈ ಶಿಕ್ಷಣ ಯಾವ ರೀತಿ ಪ್ರಭಾವ ಬೀರುತ್ತದೆಯೇ ಎಂಬುದು ಬರುವ ದಿನಮಾನಗಳಲ್ಲಿ ಕಾಣಬಹುದು.
ಇನ್ನೂ ನನ್ನ ಪ್ರಕಾರ ಹೇಳುವುದಾದರೆ ಆನ್ಲೈನ್ ಕ್ಲಾಸ್ ತೆಗೆದುಕೊಳ್ಳುವುದು ಸೂಕ್ತವಲ್ಲ. ಏಕೆಂದರೆ ಕೆಲವು ವಿದ್ಯಾರ್ಥಿಗಳು ಶಾಲೆಯಲ್ಲಿಯೇ ಅಷ್ಟು ಚೆನ್ನಾಗಿ ಶಿಕ್ಷಕರು ಪಾಠ ಮಾಡಿದರು ಸಹ ಮಕ್ಕಳಿಗೆ ಆ ಪಾಠವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಕರವಾಗುವಾಗ,ಇಂತಹ ಸಮಯದಲ್ಲಿ ಈಗ ಆನ್ಲೈನ್ ಪಾಠ ತಿಳಿದುಕೊಳ್ಳುತ್ತಾರೆಯೇ ಎನ್ನುವುದು ನಮ್ಮ ದೊಡ್ಡ ಯಕ್ಷ ಪ್ರಶ್ನೆ ? ಇದು ಒಂದು ಕಡೆಯಾದರೆ ಆನ್ಲೈನ್ ಕ್ಲಾಸ್ ಕೇಳಲು ಫೋನ್ ಮತ್ತು ಲ್ಯಾಪ್ಟಾಪ್ ಗಳ ಅವಶ್ಯಕತೆ ಇದೆ ಎನ್ನುವುದು ಸುಳ್ಳಲ್ಲ.
ಆದರೆ ಎಲ್ಲ ಪೋಷಕರು ಶ್ರೀಮಂತರಾಗಿರುವುದಿಲ್ಲ ಎನ್ನುವುದಂತು ನೂರಕ್ಕೆ ನೂರರಷ್ಟು ನಿಜ. ನಿಜವಾದರೆ ಅಂತಹ ಬಡ ವಿದ್ಯಾರ್ಥಿಗಳಿಗೆ ಫೋನ್ ಮತ್ತು ಲ್ಯಾಪ್ಟಾಪ್ ಗಳನ್ನು ಖರೀದಿಸಲು ಸಾಧ್ಯವಿಲ್ಲ ಅಂದ ಮೇಲೆ ಅಂತಹವರಿಗೆ ಆನ್ಲೈನ್ ಕ್ಲಾಸ್ ನಿಂದ ಅವರಿಗೇನು ಪ್ರಯೋಜನ ಎಂಬುದು ಇನ್ನು ಅರ್ಥವಾಗದೆ ಇರುವ ಮಾತು. ಅಂದರೆ ಇದು ಕೇವಲ ಉಳ್ಳುವವರಿಗೆ ಮಾತ್ರ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.ಹಿಗಾದಾಗ ಶ್ರೀಮಂತರು ಮಾತ್ರ ಪಾಠ ಕೇಳಬೇಕೆ? ಎನ್ನುವ ಪ್ರಶ್ನೆ ಕೆಲ ಬಡವರಲ್ಲಿ
ಮೂಡುತ್ತದೆ.
ಇದಲ್ಲದೆ ಚಿಕ್ಕಮಕ್ಕಳಂತೂ ಮನೆಯಲ್ಲಿ ಮೊಬೈಲ್ ದಾಸರಾಗಿಬಿಟ್ಟಿದ್ದಾರೆ. ಆನ್ಲೈನ್ ಕ್ಲಾಸ್ ಇದೆಯಂತ ಹೇಳಿ ವಿಡಿಯೋ ಗೇಮ್ ಗಳನ್ನು ಆಡುವುದೇ ಜಾಸ್ತಿ.ಒಂದಿಬ್ಬರು ಸೇರಿದರೆ ಇಡೀ ದಿನ ಆಟಆಡುವುದರಲ್ಲೆ ಮಗ್ನನಾಗಿರುತ್ತಾರೆ.ಒಂದೆಡೆ ಕೂತು ಆನ್ಲೈನ್ ಕ್ಲಾಸ್ ಕೇಳುವುದು ಇವರಿಗೆ ಕಷ್ಟವಾಗಬಹುದು. ಹಾಗೂ ಹೋಮ್ ವರ್ಕ್ ಮಾಡಲು ಕಿರಿಕಿರಿ ಮಾಡುತ್ತಾರೆ. ಅದರಿಂದ ಮಕ್ಕಳ ಪಾಲಕರಿಗೆ ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆಯಾಗುವುದು ಸುಳ್ಳಲ್ಲ.
ಅಲ್ಲದೆ ಹಳ್ಳಿಗಳಲ್ಲಿ ಇರುವ ಮಕ್ಕಳು ಹೊಲ ಮನೆ ಕೆಲಸ, ಕೂಲಿ ಕೆಲಸ ಇನ್ನೂ ಅನೇಕ ಕೆಲಸಗಳನ್ನು ಮಾಡುವುದರಿಂದ ಪೂಷಕರೂಂದಿಗೆ ದುಡಿಯಲು ಹೋಗುತ್ತಾರೆ. ಇದರಿಂದ ಇವರ ಶಿಕ್ಷಣ ಕಡಿತ ಗೊಳ್ಳುವ ಸಂಬಂಧ ಎದುರಾಗಬಹುದು.
ಆದ್ದರಿಂದ ಹಳ್ಳಿಗಳಲ್ಲಿ ದುಡಿಮೆಯೇ ದೇವರು ಎಂದುಕೊಂಡವರು ಶಾಲೆಗಳ ಕಡೆಗೆ ಅಷ್ಟಾಗಿ ಒತ್ತು ಕೊಡುವುದಿಲ್ಲ. ಕರೋನಾದಿಂದ ಕೆಲಸ ಹುಡುಕಿ ಹೊಟ್ಟೆ ತುಂಬಿಸಿಕೊಳ್ಳುವುದೇ ಅನಿವಾರ್ಯವಾಗಿದೆ. ಇನ್ನು ಅವರ ಹತ್ತಿರ ಎಲ್ಲಿಂದ ಬರಬೇಕು ಸ್ಮಾರ್ಟ್ ಫೋನ್ ಗಳು? ಸ್ಮಾರ್ಟ್ ಫೋನ್ ಗಳು ಇದ್ದರೂ ಕೂಡ ಅತಿಯಾಗಿ ಮೊಬೈಲ್ ನೋಡುವುದರಿಂದ ಮಕ್ಕಳ ಕಣ್ಣಿನ ದೃಷ್ಟಿಯ ಮೇಲೆ ಹೆಚ್ಚು ಹಾನಿಯಾಗುತ್ತದೆ. ಶಿಕ್ಷಕರು ನೋಟ್ಸ ಕಳಿಸಿದ್ದರೆ ಅವುಗಳನ್ನು ಪ್ರತಿ ಶಬ್ದಕ್ಕೂ ಝೂಮ್ ಮಾಡಿ ನೋಡುವುದು ಕಷ್ಟದ ಕೆಲಸ.
ಇದರಿಂದ ಬರೆದುಕೊಳ್ಳಲು ಕೂಡ ಬೇಸರವಾಗುತ್ತದೆ. ಶಿಕ್ಷಕರು ಪಾಠವನ್ನು ವಿವರಿಸುತ್ತಾ ಹೋಗುತ್ತಾರೆ.ತಿಳಿಯದಿದ್ದರೆ ಮರಳಿ ಕೇಳಿ ತಿಳಿದುಕೊಳ್ಳುವ ಹಾಗಿಲ್ಲ. ಅದೇರೀತಿ ಗಣಿತವು ಕೂಡ ಲೆಕ್ಕಗಳನ್ನು ಬಿಡಿಸುವುದರಿಂದ ಅರ್ಥವಾಗುತ್ತದೆ. ತಿಳಿಯದಿದ್ದರೆ ವಾಪಸ್ ಕೇಳುವ ಹಾಗಿಲ್ಲ ಅಂದ ಮೇಲೆ ಈ ಆನ್ಲೈನ್ ಶಿಕ್ಷಣದಿಂದ ಏನು ಪ್ರಯೋಜನ ಅಲ್ಲವೇ ?
ಒಟ್ಟಾರೆಯಾಗಿ ಕರೋನ ಬಂದ ಕಾರಣ ಕಡ್ಡಾಯವಾಗಿ ಆನ್ಲೈನ್ ಕ್ಲಾಸ್ ಬೇಕೆ ಬೇಕು ಎಂತೇನಿಲ್ಲ. ಸ್ವಲ್ಪ ದಿನ ವಿದ್ಯಾಭ್ಯಾಸವನ್ನು ಮುಂದುಡಿದರೆ ನಷ್ಟವೇನಿಲ್ಲ.ಆನ್ಲೈನ್ ಶಿಕ್ಷಣದಿಂದ ಎಷ್ಟು ದುಷ್ಪರಿಣಾಮವೆಂದರೆ ಮಕ್ಕಳಿಗೆ ಮೊಬೈಲ್ ಚಟವನ್ನು ಹಿಡಿಸಿ ಬಿಡುತ್ತದೆ. ಹಾಗಂತ ನಾನು ಆನ್ಲೈನ್ ಶಿಕ್ಷಣವನ್ನು ತೆಗೆಳುತ್ತಿಲ್ಲ. ಶಿಕ್ಷಣವು ಮಕ್ಕಳ ಜೀವನದಲ್ಲಿ ಅತ್ಯಂತ ಮುಖ್ಯಪಾತ್ರವನ್ನು ವಹಿಸುತ್ತದೆ. ಆದರೆ ಆನ್ಲೈನ್ ಶಿಕ್ಷಣದಿಂದ ಮಕ್ಕಳ ಬುದ್ಧಿಯಂತು ಚುರುಕು ಮಾಡುವುದಿಲ್ಲ.
ಮಕ್ಕಳನ್ನು ಮಬ್ಬಾಗಿಸಿ ಬಿಡುತ್ತದೆ ಮತ್ತು ಕಣ್ಣಿಗೆ ಹಾನಿಯನ್ನುಂಟು ಮಾಡುವುದರಲ್ಲಿ ಸಂಶಯವಿಲ್ಲ. ಇನ್ನು ಕೆಲವೊಂದು ವಿಷಯಗಳನ್ನು ನೋಟ್ಸ್ ಮಾಡಿ ಹೇಗೋ ಓದಿ ಕಂಟಪಾಠ ಮಾಡಬಹುದು. ಆದರೆ ಗಣಿತವನ್ನು ಕಂಟಪಾಠ ಮಾಡಲಾಗುವುದಿಲ್ಲ. ಆನ್ಲೈನ್ ಕ್ಲಾಸಿನಲ್ಲಿ ಅರ್ಥ ಆಗುವುದಿಲ್ಲ. ತರಗತಿಯಲ್ಲಾದರೆ ಎಲ್ಲಾ ವಿದ್ಯಾರ್ಥಿಗಳ ಗಮನ ಪಾಠದ ಮೇಲಿರುತ್ತದೆ ಮತ್ತು ಅವರೆಲ್ಲರ ಉದ್ದೇಶ ಪಾಠ ಕೇಳುವುದಾಗಿರುತ್ತದೆ.
ಆದರೆ ಮನೆಯಲ್ಲಿ ಹಾಗಲ್ಲ ಎಲ್ಲರೂ ಬೇರೆ ಬೇರೆ ಕೆಲಸದಲ್ಲಿ ತೊಡಗಿರುವಾಗ ಆನ್ಲೈನ್ ಕ್ಲಾಸ್ ಮೇಲೆ ವಿದ್ಯಾರ್ಥಿಗಳಿಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ.ಇನ್ನೊಂದು ಇಲ್ಲಿ ಅತಿ ದೊಡ್ಡ ನಷ್ಟ ಏನು ಗೊತ್ತೆ? ಕೆಲವೊಂದು ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯವಿರುತ್ತದೆ, ಫೋನ್ ಇರುತ್ತೆ, ಇಂಟರ್ನೆಟ್ ಇರುತ್ತೆ ಆನ್ಲೈನ್ ಪಾಠ ಕೇಳಲು ಎಲ್ಲಾ ಸೌಲಭ್ಯವಿರುತ್ತದೆ ಆದರೆ ಅವರು ಅದನ್ನು ಬೇರೆ ಕಾರ್ಯಕ್ಕೆ ಬಳಸಲುಬಹುದು.
ಇದರ ಬಗ್ಗೆ ಸಹ ಎಚ್ಚರ ವಹಿಸುವುದು ಅನಿವಾರ್ಯವಾಗುತ್ತದೆ ಜೊತೆಗೆ ಮೊಬೈಲಿನ ಚಟವನ್ನು ಹತ್ತಿಕೊಂಡು ಬಿಡುತ್ತದೆ ಮತ್ತು ಅದನ್ನು ನೋಡಿ ನೋಡಿ ಮಾನಸಿಕವಾಗಿ ಬಳಲುತ್ತಿರುವ ವಿದ್ಯಾರ್ಥಿಗಳನ್ನು ನಾವು ಸಾಮಾನ್ಯವಾಗಿ ನೋಡಿದ್ದೇವೆ ಅಲ್ಲವೇ ? ಹಾಗಾಗಿ
ಮಕ್ಕಳಿಗೆ ಆನ್ಲೈನ್ ಶಿಕ್ಷಣ ಅಷ್ಟು ಪರಿಣಾಮಕಾರಿಯಲ್ಲ ಎಂಬುದು ನನ್ನ ಅನಿಸಿಕೆ ಜೊತೆಗೆ ಈ ಆನ್ಲೈನ್ ಶಿಕ್ಷಣದಿಂದ ಮಕ್ಕಳಿಗೆ ಶಿಕ್ಷಕರ ಬಗ್ಗೆ ಗೌರವ ಕಡಿಮೆಯಾಗಬಹುದು ಭಾವನೆಯೊಂದಿಗೆ ಹೀಗೆ ಹತ್ತು ಹಲವು ಸಮಸ್ಯೆಗಳು ಆನ್ಲೈನ್ ಶಿಕ್ಷಣದಲ್ಲಿ ಕಾಣಬಹುದಾಗಿದೆ.
ಆದ್ದರಿಂದ ಇಂತಹ ಆನ್ಲೈನ್ ಶಿಕ್ಷಣದ ವ್ಯವಸ್ಥೆಯಿಂದ ಮಕ್ಕಳ ಭವಿಷ್ಯ ಹೇಗೆ ಬೆಳಗಬಹುದು ಎಂಬುದು ಯೋಚಿಸಬೇಕಾಗಿದೆ. ಹಾಗಾಗಿ ಈಗ ಈ ವ್ಯವಸ್ಥೆಯಿಂದ ಉಪಯುಕ್ತವಾಗದೇ ಅನಾನೂಕುಲ ಹೆಚ್ಚು ವಾಗಬಹುದು.ಇದರಿಂದ ಯಾರಿಗೂ ನೆಮ್ಮದಿ ಖಂಡಿತಾ ಸೀಗುವುದಿಲ್ಲ. ಶಾಲೆಗಳಲ್ಲಿ ಶಿಸ್ತು ಕ್ರಮ ತೆಗೆದುಕೊಂಡು ಎಲ್ಲರನ್ನೂ ಒಂದು ಕಡೆ ಸೇರಿಸಿ ಪಾಠ ಮಾಡುವರು.ಮಾಡುವ ಮೂಲಕ ಮಕ್ಕಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬಹುದಾಗಿದೆ.
ಆದ್ದರಿಂದ ಆನ್ಲೈನ್ ಶಿಕ್ಷಣ ಬೇಕೂ,ಬೇಡವೂ ಎಂಬುದು ಯೋಚನೆ ಮಾಡುವ ಸಂಧರ್ಭ ಸಧ್ಯ ಇಂದು ಎದುರಾಗಿದೆ. ಸಂಬಂಧ ಪಟ್ಟವರು ಈ ಕುರಿತು ಒಳ್ಳೆಯ ನಿರ್ಧಾರ ಕೈಗೊಳ್ಳುವುದು ಅವಶ್ಯಕತೆ ಇದೆ. ಸಧ್ಯದ ಪರಿಸ್ಥಿತಿಯ ಬಗ್ಗೆ ಮಾತ್ರ ಯೋಚಿಸದೇ ವಿದ್ಯಾರ್ಥಿಗಳ ಮುಂದಿನ ಜೀವನದ ಬಗ್ಗೆ ಯೋಚಿಸಬೇಕಾಗುತ್ತದೆ ಎಂಬುದು ಸರ್ವರೂ ಅರಿತುಕೊಳ್ಳುವುದು ಅತ್ಯುತ್ತಮ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಶಿವರಾಮ ಕಾರಂತ ಬಡಾವಣೆಗೆ ಮುಹೂರ್ತ: ಆ.31ಕ್ಕೆ 18 ಸಾವಿರ ನಿವೇಶನ ಹಂಚಿಕೆ?
ಸುದ್ದಿದಿನ,ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ನಿವೇಶನ ಹಂಚಿಕೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ದೀರ್ಘಕಾಲದ ಕಾನೂನು ವಿವಾದಗಳ ಬಳಿಕ ಹೈಕೋರ್ಟ್ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ, ಆ.31ರಂದು ಭೂಮಿ ನೀಡಿದ ರೈತರು ಹಾಗೂ ಭೂಮಾಲೀಕರಿಗೆ 18 ಸಾವಿರ ನಿವೇಶನ ಹಂಚಿಕೆ ಮಾಡುವ ಮೂಲಕ ಪ್ರಕ್ರಿಯೆಗೆ ಸಾಂಕೇತಿಕ ಚಾಲನೆ ನೀಡುವ ಸಾಧ್ಯತೆ ಇದೆ.
ಹೈಲೈಟ್ಸ್: |
|
ಕಾನೂನು ತೊಡಕು ನಿವಾರಣೆ
ಉತ್ತರ ಬೆಂಗಳೂರಿನಲ್ಲಿ ರೂಪುಗೊಂಡಿರುವ ಡಾ. ಕೆ. ಶಿವರಾಮ ಕಾರಂತ ಬಡಾವಣೆ ಹಲವು ವರ್ಷಗಳಿಂದ ಕಾನೂನು ವಿವಾದಗಳಿಂದಾಗಿ ಸ್ಥಗಿತಗೊಂಡಿತ್ತು. ಇದೀಗ ಹೈಕೋರ್ಟ್ ನಿವೇಶನ ಹಂಚಿಕೆ ಹಾಗೂ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿಸಿರುವ ಹಿನ್ನೆಲೆಯಲ್ಲಿ ಬಡಾವಣೆಗೆ ಹೊಸ ಚೈತನ್ಯ ಬಂದಿದೆ.
ಸುಮಾರು 3,069 ಎಕರೆ ಪ್ರದೇಶದಲ್ಲಿ, ಆವಲಹಳ್ಳಿ, ರಾಮಗೊಂಡನಹಳ್ಳಿ, ಜಾರಕಬಂಡೆ ಕಾವಲ್ ಸೇರಿದಂತೆ 17 ಹಳ್ಳಿಗಳನ್ನು ಒಳಗೊಂಡಿರುವ ಈ ಬಡಾವಣೆ ದಶಕಕ್ಕೂ ಹೆಚ್ಚು ಕಾಲ ವಿವಿಧ ಕಾನೂನು ತೊಡಕುಗಳನ್ನು ಎದುರಿಸಿತ್ತು. ಸಮಸ್ಯೆ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್ ವಿಶೇಷ ಮೂವರು ಸದಸ್ಯರ ಸಮಿತಿಯನ್ನೂ ರಚಿಸಿತ್ತು.
http://Visit : www.suddidina.com
3,200 ಭೂಮಾಲೀಕರಿಗೆ 18 ಸಾವಿರ ಸೈಟ್
ಬಡಾವಣೆ ನಿರ್ಮಾಣಕ್ಕಾಗಿ ಸುಮಾರು 3,200 ರೈತರು ಮತ್ತು ಭೂಮಾಲೀಕರು ತಮ್ಮ ಜಮೀನು ನೀಡಿದ್ದಾರೆ. ಅವರ ತ್ಯಾಗಕ್ಕೆ ಪ್ರತಿಫಲವಾಗಿ ಸುಮಾರು 18 ಸಾವಿರ ನಿವೇಶನಗಳನ್ನು ಮೀಸಲಿಡಲಾಗಿದೆ. ಒಟ್ಟಾರೆ ಬಡಾವಣೆಯಲ್ಲಿ ವಿವಿಧ ಅಳತೆಯ 34,992 ನಿವೇಶನಗಳನ್ನು ರಚಿಸಲಾಗಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.
ಆ.31ರಂದು ನಡೆಯುವ ಸಾಧ್ಯತೆಯಿರುವ ಕಾರ್ಯಕ್ರಮದಲ್ಲಿ 600ರಿಂದ 1,000 ಮಂದಿ ಭೂಮಾಲೀಕರಿಗೆ ಮುಖ್ಯಮಂತ್ರಿಗಳಿಂದ ಸಾಂಕೇತಿಕವಾಗಿ ನಿವೇಶನ ಹಂಚಿಕೆ ಮಾಡುವ ನಿರೀಕ್ಷೆಯಿದೆ. ಉಳಿದ ಫಲಾನುಭವಿಗಳಿಗೆ ಪ್ರತ್ಯೇಕ ಕೌಂಟರ್ಗಳ ಮೂಲಕ ಹಂಚಿಕೆ ಮಾಡುವ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ.
ಸಾರ್ವಜನಿಕರಿಗೂ ಅರ್ಜಿ ಸಲ್ಲಿಕೆಗೆ ಅವಕಾಶ
ಭೂಮಾಲೀಕರಿಗೆ ನಿವೇಶನ ಹಂಚಿಕೆಯ ಜೊತೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸುವ ಪ್ರಕ್ರಿಯೆಗೂ ಚಾಲನೆ ನೀಡಲು ಬಿಡಿಎ ಮುಂದಾಗಿದೆ. ಇದರಿಂದ ಹಲವು ವರ್ಷಗಳಿಂದ ಕಾರಂತ ಬಡಾವಣೆಯಲ್ಲಿ ನಿವೇಶನ ಪಡೆಯುವ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರಿಗೂ ಅವಕಾಶ ದೊರೆಯಲಿದೆ.
ಚದರ ಅಡಿಗೆ ₹6,000 ದರ
ಕಾರಂತ ಬಡಾವಣೆಯ ವಸತಿ ನಿವೇಶನಗಳ ಬೆಲೆಯನ್ನು ಚದರ ಅಡಿಗೆ ₹6,000 ಎಂದು ನಿಗದಿಪಡಿಸಲಾಗಿದೆ. ಮೂರು ವರ್ಷಗಳ ಹಿಂದೆ ಚದರ ಅಡಿಗೆ ₹5,000 ದರ ಪ್ರಸ್ತಾಪಿಸಲಾಗಿತ್ತು. ಇದೀಗ ₹1,000 ಹೆಚ್ಚಳ ಮಾಡಲಾಗಿದೆ.
ಪರಿಷ್ಕೃತ ದರದಂತೆ 30×40 ಅಡಿ, ಅಂದರೆ 1,200 ಚದರ ಅಡಿ ನಿವೇಶನಕ್ಕೆ ಸುಮಾರು ₹72 ಲಕ್ಷ ವೆಚ್ಚವಾಗಲಿದೆ.
ಹಲವು ವರ್ಷಗಳ ನಿರೀಕ್ಷೆಗೆ ತೆರೆ?
ನ್ಯಾಯಾಲಯದ ತೀರ್ಪು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳು ವೇಗ ಪಡೆದಿರುವ ಹಿನ್ನೆಲೆಯಲ್ಲಿ ಕಾರಂತ ಬಡಾವಣೆಯ ನಿವೇಶನ ಹಂಚಿಕೆ ಇದೀಗ ನಿರ್ಣಾಯಕ ಹಂತ ತಲುಪಿದೆ. ಆ.31ರ ಕಾರ್ಯಕ್ರಮ ಯಶಸ್ವಿಯಾಗಿ ನಡೆದರೆ, ಭೂಮಿ ನೀಡಿದ ಸಾವಿರಾರು ಕುಟುಂಬಗಳ ಹಲವು ವರ್ಷಗಳ ನಿರೀಕ್ಷೆಗೆ ತೆರೆ ಬೀಳುವುದರ ಜೊತೆಗೆ ಸಾರ್ವಜನಿಕರಿಗೂ ನಿವೇಶನ ಪಡೆಯುವ ದಾರಿ ಮತ್ತಷ್ಟು ಸ್ಪಷ್ಟವಾಗಲಿದೆ.

ದಿನದ ಸುದ್ದಿ
ಗೃಹಜ್ಯೋತಿ ಮರುಸಮೀಕ್ಷೆಗೆ ಕೌಂಟ್ಡೌನ್: 1.17 ಲಕ್ಷ ಫಲಾನುಭವಿಗಳಿಗೆ ಇನ್ನೂ 5 ದಿನ ಮಾತ್ರ!
ಸುದ್ದಿದಿನ, ಮೈಸೂರು: ನೈಜ ಫಲಾನುಭವಿಗಳಿಗೆ ಮಾತ್ರ ಗೃಹಜ್ಯೋತಿ ಯೋಜನೆಯ ಸಬ್ಸಿಡಿ ತಲುಪಿಸುವ ಉದ್ದೇಶದಿಂದ ರಾಜ್ಯಾದ್ಯಂತ ನಡೆಯುತ್ತಿರುವ ಮರುಸಮೀಕ್ಷೆ ಅಂತಿಮ ಹಂತಕ್ಕೆ ಬಂದಿದೆ. ಮೈಸೂರು ಜಿಲ್ಲೆಯಲ್ಲಿ ಶೇ.84ರಷ್ಟು ಪರಿಶೀಲನೆ ಪೂರ್ಣಗೊಂಡಿದ್ದು, ಇನ್ನೂ 1.17 ಲಕ್ಷ ಫಲಾನುಭವಿಗಳು ದಾಖಲೆಗಳೊಂದಿಗೆ ಪರಿಶೀಲನೆಗೆ ಒಳಪಡಬೇಕಿದೆ.
ಗೃಹಜ್ಯೋತಿ ಮರುಸಮೀಕ್ಷೆಗೆ ಅಂತಿಮ ಗಡುವು ಸಮೀಪ
200 ಯೂನಿಟ್ಗಿಂತ ಕಡಿಮೆ ವಿದ್ಯುತ್ ಬಳಸುವ ಅರ್ಹ ಗೃಹ ಬಳಕೆದಾರರಿಗೆ ವಿದ್ಯುತ್ ಬಿಲ್ ಭಾರ ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ ಜಾರಿಗೊಳಿಸಿದೆ. ಆದರೆ, ಯೋಜನೆಗೆ ಅನರ್ಹರಾಗಿದ್ದರೂ ಸೌಲಭ್ಯ ಪಡೆಯುತ್ತಿರುವವರು ಅಥವಾ ತಪ್ಪಾಗಿ ನೋಂದಣಿಯಾಗಿರುವ ಸಂಪರ್ಕಗಳನ್ನು ಪತ್ತೆಹಚ್ಚಲು ಸರ್ಕಾರ ಮರುಸಮೀಕ್ಷೆ ಕೈಗೊಂಡಿದೆ.
2026ರ ಜುಲೈ 1ರಿಂದ ಮನೆ-ಮನೆಗೆ ತೆರಳಿ ಪರಿಶೀಲನೆ ಆರಂಭಿಸಲಾಗಿದ್ದು, ಎರಡು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಅದರಂತೆ ಆಗಸ್ಟ್ 31ಕ್ಕೆ ಮರುಸಮೀಕ್ಷೆಯ ಗಡುವು ಮುಕ್ತಾಯಗೊಳ್ಳಲಿದೆ.
ಮೈಸೂರಿನಲ್ಲಿ ಶೇ.84ರಷ್ಟು ಪರಿಶೀಲನೆ ಪೂರ್ಣ
ಮೈಸೂರು ಜಿಲ್ಲೆಯಲ್ಲಿ ಒಟ್ಟು 7.65 ಲಕ್ಷ ಗೃಹಜ್ಯೋತಿ ಫಲಾನುಭವಿಗಳಿದ್ದು, ಆಗಸ್ಟ್ 24ರ ಅಂತ್ಯದ ವೇಳೆಗೆ 6.48 ಲಕ್ಷ ಮಂದಿಯ ಮರುಪರಿಶೀಲನೆ ಪೂರ್ಣಗೊಂಡಿದೆ. ಅಂದರೆ ಶೇ.84ರಷ್ಟು ಪ್ರಕ್ರಿಯೆ ಮುಗಿದಿದೆ.
ಆದರೆ ಇನ್ನೂ 1.17 ಲಕ್ಷ ಫಲಾನುಭವಿಗಳು ತಮ್ಮ ದಾಖಲೆಗಳನ್ನು ಸಲ್ಲಿಸಿ ಪರಿಶೀಲನೆಗೆ ಒಳಪಡಬೇಕಿದೆ. ನಿಗದಿತ ಅವಧಿಯಲ್ಲಿ ಪರಿಶೀಲನೆ ಮಾಡಿಸಿಕೊಳ್ಳದಿದ್ದರೆ, ಇಂತಹ ಫಲಾನುಭವಿಗಳು ಯೋಜನೆಯ ಸೌಲಭ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ.
ಮನೆಗೆ ನೋಟಿಸ್ ಅಂಟಿಸುವ ಕಾರ್ಯ
ಕೆಲ ವಾರಗಳಿಂದ ಪರಿಶೀಲನೆಗೆ ಲಭ್ಯವಾಗದ ಬಳಕೆದಾರರ ಮನೆಗಳಿಗೆ ಸೆಸ್ಕ್ ಸಿಬ್ಬಂದಿ ನೋಟಿಸ್ ಅಂಟಿಸುತ್ತಿದ್ದಾರೆ. ನೋಟಿಸ್ ಪಡೆದವರು ತಮ್ಮ ವ್ಯಾಪ್ತಿಯ ಸೆಸ್ಕ್ ಕಚೇರಿಗೆ ತೆರಳಿ ಅಗತ್ಯ ದಾಖಲೆಗಳನ್ನು ನೀಡಿ ಪರಿಶೀಲನೆ ಮಾಡಿಸಿಕೊಳ್ಳಬೇಕಾಗಿದೆ.
ಉಳಿದ 1.17 ಲಕ್ಷ ಫಲಾನುಭವಿಗಳ ಪರಿಶೀಲನೆ ಕೆಲವೇ ದಿನಗಳಲ್ಲಿ ಪೂರ್ಣಗೊಳಿಸುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಈ ಅವಧಿಯಲ್ಲಿ ಸಾಧ್ಯವಾಗದಿದ್ದರೆ ಸರ್ಕಾರ ಗಡುವು ವಿಸ್ತರಿಸುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಕೆ ನಡೆಯುತ್ತಿದೆ ಮರುಸಮೀಕ್ಷೆ?
ಮರುಪರಿಶೀಲನೆಯ ಪ್ರಮುಖ ಉದ್ದೇಶಗಳು:
- ತಪ್ಪಾದ ನೋಂದಣಿಗಳನ್ನು ಪತ್ತೆಹಚ್ಚುವುದು
- ಅನರ್ಹ ವಿದ್ಯುತ್ ಸಂಪರ್ಕಗಳನ್ನು ಗುರುತಿಸುವುದು
- ದಾಖಲೆಗಳ ಹೊಂದಾಣಿಕೆ ಪರಿಶೀಲಿಸುವುದು
- ಸಬ್ಸಿಡಿಯ ದುರ್ಬಳಕೆ ತಡೆಯುವುದು
- ಅರ್ಹ ಕುಟುಂಬಗಳಿಗೆ ಮಾತ್ರ ಯೋಜನೆಯ ಲಾಭ ಖಚಿತಪಡಿಸುವುದು
ಫಲಾನುಭವಿಗಳು ಯಾವ ದಾಖಲೆ ನೀಡಬೇಕು?
ಪರಿಶೀಲನೆ ವೇಳೆ ಫಲಾನುಭವಿಗಳು ವಿದ್ಯುತ್ ಬಿಲ್, ಖಾತೆ ಸಂಖ್ಯೆ, ಆಧಾರ್ ಸಂಬಂಧಿತ ವಿವರ, ಗುರುತಿನ ದಾಖಲೆ ಹಾಗೂ ವಿಳಾಸದ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಅಗತ್ಯವಿದ್ದರೆ ಇತರೆ ದಾಖಲೆಗಳನ್ನೂ ಅಧಿಕಾರಿಗಳು ಕೇಳಬಹುದು.
ಯಾರಿಗೆ ಗೃಹಜ್ಯೋತಿ ಸೌಲಭ್ಯ?
ವಸತಿ ಉದ್ದೇಶದ ವಿದ್ಯುತ್ ಸಂಪರ್ಕ ಹೊಂದಿರುವ, ನಿಗದಿತ ಬಳಕೆ ಮಿತಿಯೊಳಗಿರುವ ಮತ್ತು ವಿದ್ಯುತ್ ಖಾತೆಗೆ ಆಧಾರ್ ಲಿಂಕ್ ಮಾಡಿರುವ ರಾಜ್ಯದ ಕುಟುಂಬಗಳಿಗೆ ಯೋಜನೆ ಅನ್ವಯಿಸುತ್ತದೆ. 2022-23ರ ಸರಾಸರಿ ಮಾಸಿಕ ವಿದ್ಯುತ್ ಬಳಕೆಯನ್ನು ಆಧಾರವಾಗಿಟ್ಟುಕೊಂಡು ಶೇ.10ರಷ್ಟು ಹೆಚ್ಚುವರಿ ಬಳಕೆಗೆ ಅವಕಾಶ ನೀಡಲಾಗಿದೆ. ಈ ಲೆಕ್ಕಾಚಾರದಲ್ಲಿ ಬಳಕೆ ಮಿತಿ 200 ಯೂನಿಟ್ಗಿಂತ ಕಡಿಮೆ ಇರಬೇಕು.
ಉದಾಹರಣೆಗೆ, ಒಂದು ಮನೆಯ ಸರಾಸರಿ ಬಳಕೆ 100 ಯೂನಿಟ್ ಆಗಿದ್ದರೆ, ಶೇ.10 ಹೆಚ್ಚುವರಿ ಅವಕಾಶದೊಂದಿಗೆ ಸುಮಾರು 110 ಯೂನಿಟ್ವರೆಗೆ ಸಬ್ಸಿಡಿ ಮಿತಿ ಅನ್ವಯಿಸಬಹುದು. 200 ಯೂನಿಟ್ ಮೀರಿದ ಬಳಕೆಗೆ ಸಂಪೂರ್ಣ ಬಿಲ್ ಉಚಿತವಾಗುವುದಿಲ್ಲ.
ಅರ್ಹ ಫಲಾನುಭವಿಗಳಿಗೆ ಹಿಂದಿನ ನಿಯಮದಂತೆ ಸಬ್ಸಿಡಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಪರಿಶೀಲನೆ ಬಾಕಿ ಇರುವ ಫಲಾನುಭವಿಗಳು ಕೊನೆಯ ದಿನದವರೆಗೆ ಕಾಯದೆ, ಅಗತ್ಯ ದಾಖಲೆಗಳೊಂದಿಗೆ ಸೆಸ್ಕ್ ಕಚೇರಿಗೆ ತೆರಳಿ ಪ್ರಕ್ರಿಯೆ ಪೂರ್ಣಗೊಳಿಸುವುದು ಮುಖ್ಯವಾಗಿದೆ.

ದಿನದ ಸುದ್ದಿ
ವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: 2023-24 ಮತ್ತು 2024-25ನೇ ಸಾಲಿನಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ 4215 ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ಮತ್ತು ನಕಲಿ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 6 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ತೋರಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿನ ಪ್ರಭಾರ ಕಾರ್ಯಪಾಲಕ ಅಭಿಯಂತರರಾದ ಟಿ. ಸೋಮ್ಲನಾಯ್ಕ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ 2023-24 ಮತ್ತು 2024-25ನೇ ಸಾಲಿನ ತುರ್ತು ಕುಡಿಯುವ ನೀರಿನ ಯೋಜನೆಗೆ ಸಂಬAಧಿಸಿದ ಕಾಮಗಾರಿಗಳಿಗೆ ಸಂಬAಧಿಸಿದAತೆ ಹೊನ್ನಾಳಿ ಉಪವಿಭಾಗದ ಅಡಿಯಲ್ಲಿ ನಡೆದಿರುವ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳಲ್ಲಿ ನಾಲ್ಕು ಹಂತದ ತುರ್ತು ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳ ಸಂಪೂರ್ಣ ಕಡತವನ್ನು ಪಡೆದು ಪರಿಶೀಲನೆ ಮಾಡಿದಾಗ, ಇಲ್ಲಿ ಸಾಕಷ್ಟು ಅವ್ಯವಹಾರ ಹಾಗೂ ಲೋಪಗಳು ಕಂಡುಬAದಿರುತ್ತವೆ. ಅಂತಹ ಪ್ರಮುಖ ಲೋಪಗಳನ್ನು ಉಲ್ಲೇಖಿಸಿ ಸೂಕ್ತ ತನಿಖೆಗೆ ಒಳಪಡಿಸುವಂತೆ ದಿನಾಂಕ: 01-12-2025 ರಂದು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇವರಿಗೆ ದೂರು ನೀಡಲಾಗಿತ್ತು.
ಈ ದೂರು ಅರ್ಜಿಗೆ ಸಂಬಂಧಿಸಿದಂತೆ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇವರು 2 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ದಿನಾಂಕ: 27-01-2026 ರಂದು ಜ್ಞಾಪನವನ್ನು ನೀಡಲಾಗಿರುತ್ತದೆ. ಆದರೆ ಜ್ಞಾಪನ ನೀಡಿ 6 ತಿಂಗಳು ಕಳೆಯುತ್ತ ಬಂದರೂ ಈ ದೂರು ಅರ್ಜಿಗೆ ಸಂಬAಧಿಸಿದAತೆ ಕಾರ್ಯಪಾಲಕ ಅಭಿಯಂತರರು (ಪ್ರಭಾರ), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇವರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ತೋರಿರುತ್ತಾರೆ.
ಈ ದೂರು ಅರ್ಜಿಯನ್ನು ತನಿಖೆಗೆ ಒಳಪಡಿಸುವಲ್ಲಿ ತೋರಿದ ನಿರ್ಲಕ್ಷö್ಯಕ್ಕೆ ಪ್ರಮುಖ ಕಾರಣವೆಂದರೆ, ಹೊನ್ನಾಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರೇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿನ ಪ್ರಭಾರ ಕಾರ್ಯಪಾಲಕ ಅಭಿಯಂತರರಾಗಿ ಕಾರ್ಯನಿರ್ವಹಿಸಿರುತ್ತಾರೆ. ಈ ಕಾರಣಕ್ಕಾಗಿ ತನ್ನ ಮೇಲಿನ ಆರೋಪವನ್ನು ತನಿಖೆಗೆ ಒಳಪಡಿಸುವಲ್ಲಿ ನಿರ್ಲಕ್ಷö್ಯ ತೋರಿ, ಈ ದೂರು ಅರ್ಜಿಯನ್ನು ಮೂಲೆ ಗುಂಪಾಗಿಸಿರುತ್ತಾರೆ. ಆದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಭಾರ ಕಾರ್ಯಪಾಲಕ ಅಭಿಯಂತರರಾದ ಸೋಮ್ಲನಾಯ್ಕ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ4 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ5 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ದಿನದ ಸುದ್ದಿ2 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ2 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ22 hours agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ2 days agoಉದ್ದಿಮೆದಾರರಿಗೆ ನೆರವು ಯೋಜನೆ; ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoತುಂಗಭದ್ರಾದಲ್ಲಿ ನೀರಿನ ಹರಿವು ಕುಸಿತ: ಹರಿಹರದ 24×7 ‘ಜಲಸಿರಿ’ಗೆ ಬ್ರೇಕ್, ನೀರು ಪೂರೈಕೆ ಸಮಯ ಕಡಿತ


