Connect with us

ರಾಜಕೀಯ

ದಿಲ್ಲಿ ‘ಆಪ್’ ಗೆಲುವಿನ ವ್ಯಾವಹಾರಿಕ ಅಪಾಯಗಳು..!

Published

on

  • ರಾಜಾರಾಮ್ ತಲ್ಲೂರ್

ಗೆಲ್ಲುವ ಕುದುರೆ”ಗಳನ್ನು ಗುರುತಿಸಿ ಖರೀದಿಸುವ ವ್ಯಾವಹಾರಿಕ ಚಾಣಾಕ್ಷತೆ ಭಾರತದ ರಾಜಕೀಯಕ್ಕೆ ತಟ್ಟಿರುವ ಹೊಸಪಿಡುಗು. ಸ್ವತಃ ಬಿಜೆಪಿ ತಂದ ಈ ಚಾಣಾಕ್ಷತೆಯ ಮುಳ್ಳನ್ನು ಆಪ್ ದಿಲ್ಲಿಯಲ್ಲಿ ಅದೇ ಮುಳ್ಳಿನಿಂದ ಎದುರಿಸಿದೆ ಮತ್ತು ಮುಳ್ಳನ್ನು ಮುಳ್ಳಿನಿಂದಲೇ ಕೀಳುವಲ್ಲಿ ಯಶಸ್ಸನ್ನೂ ಕಂಡಿದೆ.

ಒಂದು ರಾಜಕೀಯ ಪಕ್ಷ ತನಗೆ ಜನತೆ ಆಯ್ದುಕೊಟ್ಟ ತನ್ನ ಜನಪ್ರತಿನಿಧಿಯನ್ನು ಆತನ/ಆಕೆಯ ಕರ್ತವ್ಯ ನಿರ್ವಹಣಾ ಸಾಮರ್ಥ್ಯದ ಆಧಾರದಲ್ಲಿ ಚುನಾವಣೆಯ ನಿಕಷಕ್ಕೆ ಒಡ್ಡುವ ಮೊದಲೇ ಹಿಂತೆಗೆದುಕೊಂಡು ಚುನಾವಣೆಯ ಹೊತ್ತಿಗೆ ಹೊಸಮುಖವನ್ನು ಜನತೆಯ ಮುಂದೊಡ್ಡುವುದು ದೀರ್ಘಕಾಲಿಕ ರಾಜಕೀಯದ ಆರೋಗ್ಯದ ದ್ರಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ.

ಈ ಬಾರಿ ಚುನಾವಣೆಯಲ್ಲಿ ಆಪ್ ಪಕ್ಷ ತನ್ನ ಸಿಟ್ಟಿಂಗ್ ಎಮ್ಮೆಲ್ಲೆಗಳಲ್ಲಿ 15 ಮಂದಿಯನ್ನು ಬದಲಾಯಿಸಿ, ಹೊಸ ಮುಖಗಳನ್ನು ಚುನಾವಣೆಗಿಳಿಸಿತ್ತು. ಆ ಹದಿನೈದೂ ಮಂದಿ ಈಗ ಮರುಚುನಾಯಿತರಾಗಿದ್ದಾರೆ. ಸಹಜವಾಗಿಯೇ ಆ ಹದಿನೈದು ಸೀಟುಗಳು ಆಪ್ ಗೆ ಕಳೆದುಕೊಳ್ಳುವ ಭಯ ಇದ್ದ ಸೀಟುಗಳು.

ಆಪ್ ಬಿಟ್ಟು ಬಿಜೆಪಿ ಸೇರಿದ ಮೂವರಲ್ಲಿ ಒಬ್ಬರು (ದೇವೀಂದರ್ ಶೇರಾವತ್ – ಬಿಜ್ವಾಸಾನ್) ಮಾತ್ರ ಜಯಗಳಿಸಿದ್ದು, ಉಳಿದಿಬ್ಬರು (ಗಾಂಧೀನಗರ್, ಕಾರಾವಾಲ್ ನಗರ್) ಆಪ್ ಎದುರು ಸೋತಿದ್ದಾರೆ. ಆಪ್ ಬಿಟ್ಟ ಅಲ್ಕಾ ಲಾಂಬಾ (ಚಾಂದನಿ ಚೌಕ್), ಸಂದೀಪ್ ಸಿಂಗ್ (ಸುಲ್ತಾನ್ ಪುರ್ ಮಾಜ್ರಾ) ಕೂಡ ಸೋತಿದ್ದಾರೆ.

ಹಿಂದಿನ ಅಸೆಂಬ್ಲಿಯಲ್ಲಿ 3 ಸೀಟು ಹೊಂದಿದ್ದ ಬಿಜೆಪಿ ಎರಡು ಸೀಟುಗಳನ್ನು ಮಾತ್ರ ಉಳಿಸಿಕೊಂಡಿದ್ದು ಒಂದನ್ನು ಆಪ್ ಗೆ ಕಳೆದುಕೊಂಡಿದೆ. ಅಕಾಲಿ ದಳದ ಕೈಲಿದ್ದ ರಜೌರಿ ಗಾರ್ಡನ್ ಆಪ್ ಪಾಲಾಗಿದೆ. BJP ಹೊಸದಾಗಿ ಗೆದ್ದದ್ದು 5 ಸೀಟುಗಳನ್ನು ಮಾತ್ರ.

ಹೀಗೆ ಕೊಡುಕೊಳ್ಳುವ ವ್ಯವಹಾರಗಳ ರಾಜಕೀಯದಿಂದ ಸೋಲುವುದು ತಳಮಟ್ಟದಲ್ಲಿ ಕೆಲಸಮಾಡುವ ಪಕ್ಷ ಕಾರ್ಯಕರ್ತರು. ಪಕ್ಷ ಯಾವುದೇ ಇದ್ದರೂ ಇದು ಸತ್ಯ. ತಳಮಟ್ಟದ ಪ್ರಾಮಾಣಿಕತೆಗೆ ಬೆಲೆಕೊಡದ, ನೈತಿಕ ಬೇರು ಗಟ್ಟಿ ಇಲ್ಲದ “ವ್ಯಾವಹಾರಿಕ” ರಾಜಕೀಯ ದೇಶದ ಜನ ಸಾಮಾನ್ಯನ ಆಶೋತ್ತರಗಳನ್ನು ಶಾಸನಸಭೆಗಳಲ್ಲಿ ಪ್ರತಿನಿಧಿಸಲಾರವು; ಜನಹಿತಕ್ಕನುಸಾರವಾಗಿ ಈಡೇರಿಸಲಾರವು… ಇದೆಲ್ಲ ಏನಿದ್ದರೂ ಶಾರ್ಟ್ ಟರ್ಮ್ ಫಾಯಿದೆ ನೋಡುವ ರಾಜಕೀಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದಲ್ಲಿ ನಿಷೇಧ ; ತೆರವುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಪತ್ರ

Published

on

ಸುದ್ದಿದಿನಡೆಸ್ಕ್:ಕರ್ನಾಟಕದ ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಧಿಕಾರಿ ವಿಧಿಸಿರುವ ನಿಷೇಧ ಆದೇಶ ರದ್ದು ತೆರವುಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.

ಇದು ಮುಂದಿನ ದಿನಗಳಲ್ಲಿ ತರಕಾರಿಗಳು ಮತ್ತು ಇತರ ಕೃಷಿ ಸರಕುಗಳ ಅಂತಾರಾಜ್ಯ ಸಾಗಾಣೆಗೆ ಅಡ್ಡಿ ಉಂಟುಮಾಡುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಿರ್ಬಂಧವು ಸಾವಿರಾರು ರೈತರ ಜೀವನ ಉಪಾಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಐಎಎಸ್ – ಐಪಿಎಸ್ ಅಧಿಕಾರಿಗಳ ವರ್ಗಾವಣೆ ; ಆದೇಶ

Published

on

ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್‌ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಸುದ್ದಿದಿನಡೆಸ್ಕ್:ರಾಜ್ಯ ಸರ್ಕಾರ ಇಂದು ಕೆಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಅವರನ್ನು ಬೆಂಗಳೂರು ಮೆಟ್ರೋ ಪಾಲಿಟನ್ ಟಾಸ್ಕ್‌ಪೋರ್ಸ್ ಎಡಿಜಿಪಿ ಯಾಗಿ ವರ್ಗಾವಣೆ ಮಾಡಿದೆ.

ಕೆಎಸ್‌ಆರ್‌ಟಿಸಿ ಮಹಾನಿರ್ದೆಶಕರನ್ನಾಗಿ ಅಕ್ರಂ ಪಾಶಾ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್‌ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮನವಿ

Published

on

ಸುದ್ದಿದಿನಡೆಸ್ಕ್:ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಮಧ್ಯಸ್ಥಿಕೆ ವಹಿಸುವಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಸಂತ್ರಸ್ಥರು ಮತ್ತು ಅವರ ಕುಟುಂಬಗಳಿಗೆ ಪಾರದರ್ಶಕತೆ ನ್ಯಾಯ ದೊರಕುವಂತಾಗಲು ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಸಂತ್ರಸ್ಥರಿಗೆ ನ್ಯಾಯ ಒದಗಿಸುವುದು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಸಮಸ್ಯೆಗೆ ಒಳಗಾದ ಮಕ್ಕಳ ವಿವರವನ್ನು ಕೋರಿ ಸಿಐಡಿಗೆ ಮಕ್ಕಳ ಹಕ್ಕು ಆಯೋಗ ನೋಟಿಸ್ ಜಾರಿ ಮಾಡಿದೆ.

ಸಾರ್ವಜನಿಕ ದೂರು ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಆಯೋಗ ಈ ಬಗ್ಗೆ ಹೆಚ್ಚಿನ ನಿಖರ ಮಾಹಿತಿ ನೀಡುವಂತೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending