Connect with us

ಲೈಫ್ ಸ್ಟೈಲ್

ಪ್ರಾಣಿಗಳಲ್ಲಿ ಕೊರೋನಾ ವೈರಾಣು ಸತ್ಯ ಮತ್ತು ಮಿಥ್ಯ : ಮಿಸ್ ಮಾಡ್ದೆ ಓದಿ

Published

on

  • ಅನೇಕ ದಿನಗಳಿಂದ ವೈರಸ್ ಕೊರೋನಾ “ವೈರಲ್” ಆಗಿದೆ. ಸಾಮಾಜಿಕ ಜಾಲತಾಣಗಳು, ವ್ರತ್ತ ಪತ್ರಿಕೆಗಳು, ಬಾಯಿ ಸುದ್ದಿ, ಗಾಳಿ ಸುದ್ದಿ, ಫೋನ್ ಸುದ್ದಿ ಎಲ್ಲವೂ ಕರೋನಾಮಯ. ಇನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳ ಬಗ್ಗೆಯಂತೂ ಹೇಳುವುದೇ ಬೇಡ. ಇಡೀ ದಿನ ಕರೋನಾ ಬಿಟ್ಟರೆ ಬೇರೊಂದಿಲ್ಲ. ಎಲ್ಲರಿಗೂ ಸಿಕ್ಕಾಪಟ್ಟೆ ಬಿಡುವು ಇರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದಾರೆ. ಈ ಕರೋನಾ ಬಗ್ಗೆ ಬರೆಯೋದೇನಿದೆ ಎಂದು ಬೇರೆ ಕೆಲಸಗಳಲ್ಲಿ ಮಗ್ನನಾಗಿದ್ದೆ. ಈ ಮಧ್ಯೆ ಪ್ರಾಣಿಗಳಲ್ಲೂ ಕರೋನಾ ಎಂಬ ಸುದ್ಧಿ ಕೇಳಿ ಪ್ರತಿಕ್ರಿಯೆ ನೀಡಲಾರಂಭಿಸಿದೆ. ಆಗ ಅನಿಸಿದ್ದು ಪ್ರಾಣಿಗಳಲ್ಲೂ ಕರೋನಾದ ಬಗ್ಗೆ ಬರೆಯಬೇಕು ಎಂದು. ಕೆಲವು ಆಸಕ್ತಿದಾಯಕ ವಿಷಯಗಳಿವೆ. ಹಂಚಿಕೊಳ್ಳುವೆ. ಎಂದಿನಂತೆ ಓದಿ. ಪ್ರೋತ್ಸಾಹಿಸಿ.

-ಡಾ.ಎನ್.ಬಿ.ಶ್ರೀಧರ

ಇತ್ತೀಚೆಗಷ್ಟೇ ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌, ಇದೀಗ ವಿಶ್ವವನ್ನೇ ಗಡಗಡ ನಡುಗಿಸುತ್ತಿದೆ. ಕೊರೊನಾ ವೈರಸ್ ಹಾವಳಿ ದಿನೇದಿನೆ ಹೆಚ್ಚುತ್ತಿದ್ದು, ಜನಸಾಮಾನ್ಯರಲ್ಲಿ ತಲ್ಲಣ ಉಂಟುಮಾಡಿದೆ. ಕೊರೊನಾ ವೈರಸ್‌ನಿಂದಾಗಿ ವಿಶ್ವದಾದ್ಯಂತ ಈ ಕ್ಷಣದವರೆಗೆ ( 27-03-2020, 1.41 ಮಧ್ಯಾಹ್ನ) ಅಧೀಕೃತವಾಗಿ ಬಾಧಿತರ ಸಂಖ್ಯೆ 532,263 ಇದ್ದರೆ ಸಾವಿನ ಸಂಖ್ಯೆ 24,090. ಭಾರತದಲ್ಲಿ ಕೊರೋನಾ ಪೀಡಿತರ ಈ ಸಂಖ್ಯೆ  733ಕ್ಷಣದ ವರೆಗೆ ಇದ್ದರೆ ಮತ್ತು ಸಾವಿನ ಸಂಖ್ಯೆ 13 ಕ್ಕೆ ಏರಿದೆ. ಕರ್ನಾಟಕದಲ್ಲಿ ಭಾದೆಗೊಳಗಾದವರು 74 ಮೃತಪಟ್ಟವರ ಸಂಖ್ಯೆ6. ಇದು ಈ ಕ್ಷಣದ ವರೆಗಿನ ಸುದ್ಧಿ. ಇದು ಕ್ಷಣ ಕ್ಷಣಕ್ಕೂ ಜಾಸ್ತಿಯಾಗುತ್ತಲೇ ಇದೆ.

ಕೊರೊನಾ ಎಂಬುದು ಪ್ರಾಣಿಗಳಲ್ಲಿ ಅನಾರಾಗ್ಯವನ್ನು ಉಂಟುಮಾಡಬಲ್ಲ ವೈರಸ್‌ಗಳ ಬೃಹತ್‌ ಗುಂಪಾಗಿದೆ. ಈ ವೈರಸ್‌ಗಳು ಹೆಚ್ಚಾಗಿ ಉಸಿರಾಟದ ತೊಂದರೆ ಉಂಟುಮಾಡುತ್ತವೆ. ಸಾಮಾನ್ಯ ಶೀತವನ್ನು ಉಂಟುಮಾಡುವ ವೈರಸ್‌ನಿಂದ ಹಿಡಿದು, ಅತ್ಯಂತ ಅಪಾಯಕಾರಿಯಾದ ಮೆರ್ಸ್‌ (ಮಿಡಲ್‌ ಈಸ್ಟ್‌ ರೆಸ್ಪಿರೇಟರಿ ಸಿಂಡ್ರೋಂ), ಸಾರ್ಸ್‌ (ಸಿವಿಯರ್‌ ಅಕ್ಯೂಟ್‌ ರೆಸ್ಪಿರೇಟರಿ ಸಿಂಡ್ರೋಂ), ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ ಡಿಸೀಸ್‌ (COVID-19), ಈ ಎಲ್ಲ ವೈರಸ್‌ಗಳೂ ಒಂದೇ ಗುಂಪಿಗೆ ಸೇರುತ್ತವೆ.

COVID-19 ಎಂದರೆ, ಇದೂ ಕೂಡ ಸೋಂಕನ್ನು ಉಂಟುಮಾಡಬಲ್ಲ ವೈರಸ್‌. ಇದು ಕೊರೊನಾ ವೈರಸ್‌ಗಳ ಪೈಕಿ ಇತ್ತೀಚೆಗೆ ಚೀನಾದಲ್ಲಿ ಪತ್ತೆಯಾಗಿ, ವಿಶ್ವಾದ್ಯಂತ ಹರಡುತ್ತಿರುವ ವೈರಸ್‌ ಆಗಿದೆ. ಚೀನಾದ ವುಹಾನ್‌ನಲ್ಲಿ 2019ರ ಡಿಸೆಂಬರ್‌ನಲ್ಲಿ ಪತ್ತೆಯಾಗುವ ಮೊದಲು ಈ ವೈರಸ್ ಕುರಿತು ವಿಶ್ವಕ್ಕೆ ಪರಿಚಯ ಇರಲಿಲ್ಲ.

ಕೊರೊನಾ ಸೋಂಕಿನ ಲಕ್ಷಗಳು ಹಂತಹಂತವಾಗಿ ಕಾಣಿಸಿಕೊಳ್ಳುತ್ತೆ. ಇದರಲ್ಲಿ ರೋಗಲಕ್ಷಣ ರಹಿತ, ಸೌಮ್ಯ, ತೀವ್ರ ಮತ್ತು ಮಾರಣಾಂತಿಕ ಎಂಬ ಹಂತಗಳಿವೆ. ಸಾಮಾನ್ಯ ರೋಗಲಕ್ಷಣಗಳು ಜ್ವರ, ಕೆಮ್ಮು, ಏದುಸಿರು ಮತ್ತು ಉಸಿರಾಟ ಕಷ್ಟವಾಗುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೋಂಕು ತೀವ್ರವಾದ ಪ್ರಕರಣಗಳಲ್ಲಿ ನ್ಯುಮೋನಿಯಾ, ಮೂತ್ರಪಿಂಡ ವೈಫ‌ಲ್ಯ ಮತ್ತು ಬಹು ಅಂಗಾಂಗ ವೈಫ‌ಲ್ಯಕ್ಕೂ ಕಾರಣವಾಗಬಹುದು.

ವೈರಸ್ಸಿಗೆ ನೋವೆಲ್‌ ಕೊರೊನಾ ವೈರಸ್‌ ಎಂದು ಕರೆಯುವುದೇಕೆ?

ಈ ಹಿಂದೆ, ಪ್ರಾಣಿಗಳಲ್ಲಾಗಲಿ, ಮನುಷ್ಯರಲ್ಲಾಗಲಿ ಕಾಣಿಸಿಕೊಳ್ಳದೇ ಇದ್ದು, ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುವ ಕೊರೊನಾ ವೈರಸ್‌ಗೆ ನೋವೆಲ್‌ ಕೊರೊನಾ ವೈರಸ್‌ ಎಂದು ಕರೆಯುತ್ತಾರೆ.

ವೈರಸ್‌ನ ನೈಸರ್ಗಿಕ ಮೂಲ ಯಾವುದು?

ಕೊರೊನಾ ವೈರಸ್‌ಗಳ ನೈಸರ್ಗಿಕ ಮೂಲಗಳೆಂದರೆ ಪ್ರಾಣಿಗಳು. ಅದರಲ್ಲೂ ಸಸ್ತನಿಗಳು ಈ ವೈರಸ್ಸುಗಳಿಗೆ ಆವಾಸಸ್ಥಾನ ಎನ್ನಬಹುದು. ಬಾವಲಿಗಳು ಈ ವೈರಸ್‌ಗಳಿಗೆ ಆಶ್ರಯ ನೀಡುವ ಪ್ರಮುಖ ಜೀವಿಗಳು. ಪುನುಗು ಬೆಕ್ಕು ಅಥವಾ ಸಿವೆಟ್ ಕ್ಯಾಟ್ ಇದು SARS-CoV ಈ ಕಾಯಿಲೆ ಹಬ್ಬಿಸಿದರೆ, ಒಂಟೆ ಮತ್ತು ಬಾವಲಿಗಳು MERS-CoV ಅಥವಾ COVID 19 ನ್ನು ಹರಡುತ್ತವೆ. ಸಾಕು ಪ್ರಾಣಿಗಳೂ ಸೇರಿದಂತೆ ಹಲವು ಪ್ರಾಣಿಗಳಲ್ಲಿಯೂ ಕೊರೋನಾ ವರ್ಗದ ವೈರಸ್‌ಗಳು ಇರುತ್ತವೆ.

ಪುನುಗು ಬೆಕ್ಕು, ಒಂಟೆ ಮತ್ತು ಬಾವಲಿ ಇವು ಈ ವೈರಸ್ಸಿನ ಸಂಗ್ರಾಹಕಗಳಾಗಿರುತ್ತವೆ. ಆಕಳುಗಳು, ಹಂದಿ, ನಾಯಿ, ಬೆಕ್ಕು, ಕೋಳಿ ಇತ್ಯಾದಿ ಅನೇಕ ಪ್ರಾಣಿಗಳಲ್ಲಿ ಕರೋನಾ ವೈರಾಣು ರೋಗ ತಂದರೂ ಸಹ ಅವುಗಳಿಂದ ಮನುಷ್ಯರಿಗೆ ಬರುವ ಬಗ್ಗೆ ದಾಖಲೆಗಳಿಲ್ಲ.

ಪ್ರಾಣಿಗಳಲ್ಲಿ ಕರೋನಾ ವೈರಾಣು ರೋಗ

ಸಾಕು ಪ್ರಾಣಿಗಳಿಂದ ಕೊರೊನಾ ವೈರಸ್ ಹರಡಬಹುದು ಎನ್ನುವ ಭಯದಿಂದ ಕೆಲವರು ತಮ್ಮ ಮನೆಯಲ್ಲಿ ಇರುವ ನಾಯಿ, ಬೆಕ್ಕುಗಳನ್ನು ದೂರ ಮಾಡುತ್ತಿದ್ದಾರೆ. ಆದರೆ ಈ ಪ್ರಾಣಿಗಳಿಂದ ಕರೋನಾ ಕಾಯಿಲೆ ಬರುವ ಯಾವುದೇ ದಾಖಲೆ ಇಲ್ಲ. ಬಾಲಿವುಡ್ ನಟಿ ರಾಖಿ ಸಾವಂತ್ ಚೀನಾದ ಪಾಪಿ ಜನರು ಕಾಡು ಪ್ರಾಣಿಗಳನ್ನು ತಿಂದು ಕೊರೊನಾ ವೈರಸ್ ಹರಡಿಸಿದ್ದಾರೆ ಎಂದು ಹೇಳುವ ಮೂಲಕ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರೂ ಸಹ ಪ್ರಾಣಿಗಳ ಮಾಂಸ ತಿನ್ನುವುದರಿಂದ ಕರೋನಾ ಬರುತ್ತದೆ ಎಂಬುದರ ಬಗ್ಗೆ ಯಾವುದೇ ದಾಖಲೆ ಇಲ್ಲ.

ಕೋಳಿಗಳಿಂದ ಕರೋನಾ ಬರುತ್ತದೆ ಎಂದು ಸಹಸ್ರ ಸಂಖ್ಯೆಯಲ್ಲಿ ಕೋಳಿಗಳನ್ನು ನಾಶ ಮಾಡಿದ್ದು ಇದ್ದಕ್ಕಿದ್ದಂತೆ ಜನ ಕೋಳಿ ತಿನ್ನುವುದನ್ನು ನಿಲ್ಲಿ ಸುಖಾ ಸುಮ್ಮನೇ ಆ ಉಧ್ಯಮ ನೆಲ ಕಚ್ಚುವಂತೆ ಮಾಡಿದ್ದು ಈಗ ಇತಿಹಾಸ. ಕೇವಲ ಊಹಾಪೋಹಗಳನ್ನು ನಂಬಿ ವಿಜ್ಞಾನವನ್ನು ಮೂಲೆಗೊತ್ತಿದ್ದರ ಪರಿಣಾಮವೇ ಇದು.

ಸಾಕು ಪ್ರಾಣಿಗಳು ಕರೋನಾ ವಾಹಕಗಳೇ?

ಅಲ್ಲ. ನಾಯಿ ಮತ್ತು ಬೆಕ್ಕುಗಳಲ್ಲಿ ಈ ಕೊರೊನಾ ವೈರಸ್ ಸಾಮಾನ್ಯ. ಆದರೆ ಈಗ ಬಂದ COVID 19 ಕ್ಕೂ ಪ್ರಾಣಿಗಳಲ್ಲಿ ಬರುವ ಕರೋನಾ ವೈರಸ್ ರೋಗಕ್ಕೂ ಯಾವುದೇ ಸಂಬಂಧವಿಲ್ಲ. ಹುವಾನಾನ್ ಸಮುದ್ರಾಹಾರ ಮಾರುಕಟ್ಟೆಯಲ್ಲಿ ಈ ವೈರಸ್ ಮೊದಲು ಕಾಣಿಸಿಕೊಂಡಿದೆ. ಇಲ್ಲಿ ಅನೇಕ ಕಾಡು ಪ್ರಾಣಿಗಳು ಮತ್ತು ಸಮುದ್ರ ಪ್ರಾಣಿಗಳನ್ನು ಜೀವಂತವಾಗಿ ಮಾರಾಟ ಮಾಡಲಾಗುತ್ತಿತ್ತು. ಪುನುಗು ಬೆಕ್ಕು ಮತ್ತು ಬಾವಲಿಗಳನ್ನು ಸೇರಿಸಿಕೊಂಡು ಇಲ್ಲಿನ ಜನ ಹುರಿದು ಮುಕ್ಕಿದ್ದಕ್ಕೆ ಶಿಕ್ಷೆಯಾಗಿ ಇಡಿ ಪ್ರಪಂಚವನ್ನು ಕೊರೋನಾ ಮಾರಿ ಹುರಿದು ಮುಕ್ಕುತ್ತಿದೆ ಎಂಬುದು ದಾರ್ಶನಿಕರ ಕೊಂಕು ನುಡಿ. ಆದರೂ ಇಲ್ಲಿ ಕೊರೊನಾ ವೈರಸ್ ಸೋಂಕು ಹರಡಲು ನಿಖರ ಕಾರಣವೇನೆಂದು ಇನ್ನೂ ದೃಢಪಡಿಸಿಲ್ಲ. ಅಲ್ಲಿ ವೈರಸ್ ಪ್ರಥಮವಾಗಿ ಉಗಮವಾಗಿರಬಹುದೇ ಹೊರತು ಯಾವುದೇ ಪ್ರಾಣಿಗಳ ಮಾಂಸ ತಿಂದರೆ ಕರೋನಾ ಕಾಯಿಲೆ ಬರುವುದೆಂದು ದೃಢಪಟ್ಟಿಲ್ಲ.

ಬೆಕ್ಕು,ನಾಯಿ, ಹಂದಿ, ಜಾನುವಾರುಗಳು, ಕುದುರೆ, ಕೋಳಿ,ಇಲಿ ಮತ್ತು ಅಷ್ಟೇಕೆ ಮೀನಿನಲ್ಲಿಯೂ ಸಹ ಕರೋನಾ ವೈರಾಣು ಕಾಯಿಲೆ ಬರುತ್ತದೆ ಎಂಬ ಪ್ರತೀತಿ ಇದೆ. ಅನೇಕ ಪ್ರಾಣಿಗಳಲ್ಲಿ ಕರೋನಾ ವೈರಾಣುಗಳ ವಿವಿಧ ಪ್ರಬೇಧಗಳಿಂದ ಕಾಯಿಲೆ ಬರುತ್ತದೆ. ಸುಮಾರು ೧೬ ಕ್ಕಿಂತ ಜಾಸ್ತಿ ಕಾಯಿಲೆಗಳು ಈ ವೈರಾಣುವಿನಿಂದ ಬಂದರೂ ಸಹ ಪ್ರಾಣಿಗಳಿಗೆ ಬರುವ ಕರೋನಾ ವೈರಾಣು ಕಾಯಿಲೆ ಮನುಷ್ಯನಿಗೆ ಹರಡಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ.

ಈ ಕೆಳಗಿನ ಕೋಷ್ಟಕ ಗಮನಿಸಿದರೆ ಪ್ರಾಣಿಗಳಲ್ಲಿ ಕರೋನಾ ವೈರಾಣುವಿನ ಉಪಪ್ರಬೇಧದದಿಂದ ಬರುವ ಅನೇಕ ಕಾಯಿಲೆಗಳ ವಿವರ ಸಿಗುತ್ತದೆ.

ಉಪ ಕುಟುಂಬ: ಕರೋನಾ ವೈರಿನೇ,ಜೀನಸ್ : ಅಲ್ಫಾ ಕರೋನಾ ವೈರಸ್

  1. ಫಿಲೈನ್ ಕರೋನಾ ವೈರಸ್ (ಫಿಲೈನ್ ಎಂಟರಿಕ್ ಕರೋನಾ ವೈರಸ್, ಫಿಲೈನ್ ಇನ್ಫೆಕ್ಷಿಯಸ್ ಪೆರಿಟೋನೈಟಿಸ್ ವೈರಸ್) ಬೆಕ್ಕು, ಹುಲಿ, ಸಿಂಹ, ಚಿರತೆ ಬೆಕ್ಕು, ಹುಲಿ ಮತ್ತು ಈ ಪ್ರಬೇಧಕ್ಕೆ ಸೇರಿದ ಪ್ರಾಣಿಗಳಲ್ಲಿ ಅಲ್ಪ ಪ್ರಮಾಣದ ಭೇಧಿ ಮತ್ತು ವಾಂತಿ ಭೇಧಿ ಉಂಟು ಮಾಡುವುದು. ನೇರ ಸಂಪರ್ಕ, ಸೋಂಕಿತ ಮಲದ ಮೂಲಕ, ಬೇಧಿ ಸಂಪರ್ಕ,ರಕ್ತ, ಮೂತ್ರ ಇತ್ಯಾದಿ ಉತ್ತಮ ಗುಣಮಟ್ಟದ ಪ್ರತ್ಯೇಕಿಸುವಿಕೆ, ಹರಡುವಿಕೆಯ ಚಕ್ರದ ನಿಯಂತ್ರಣ.
  2. ಕೆನೈನ್ ಕರೋನಾ ವೈರಸ್ ನಾಯಿ, ತೋಳ, ನರಿ ವಾಂತಿಭೇಧಿ, ತೀವ್ರವಾದ ವಾಂತಿ, ಭೇಧಿ ಮತ್ತು ಬಿಳಿರಕ್ತ ಕಣಗಳ ಕಡಿಮೆಯಾಗುವಿಕೆ ಸೋಂಕಿತ ಮಲದ ಮೂಲಕ ನಿಷ್ಕ್ರಿಯೆಗೊಳಿಸಿದ ಲಸಿಕೆ.
  3. ಟ್ರಾನ್ಸ್ಮಿಸಿಬಲ್ ಗ್ಯಾಸ್ಟ್ರೋಎಂಟರೈಟಿಸ್ ಹಂದಿ ಸ್ವಲ್ಪ ಪ್ರಮಾಣದ ಭೇಧಿ ಆದರೆ ನೀರು ಭೇಧಿ ,ವಾಂತಿ,ನಿರ್ಜಲೀಕರಣ ಸೋಂಕಿತ ಮಲದ ಮೂಲಕ ಬಾಯಿಯ ಮೂಲಕ ನೀಡುವ ನಿಷ್ಕ್ರಿಯೆಗೊಳಿಸಿದ ಲಸಿಕೆ.
  4. ಪೋರ್ಸೈನ್ ರೆಸ್ಪಿರೇಟರಿ ಕರೋನಾ ವೈರಸ್ ಹಂದಿ ಮಂದ ಸ್ವರೂಪದ ಕಾಯಿಲೆ ಗಾಳಿಯ ಮೂಲಕ ಲಸಿಕೆ ಇಲ್ಲ.
  5. ಪೋರ್ಸೈನ್ ಎಪಿಡೆಮಿಕ್ ಡಯೇರಿಯಾ ಕರೋನಾ ವೈರಸ್ ಹಂದಿ ಭೇಧಿ, ನೀರು ಭೇಧಿ ,ವಾಂತಿ,ನಿರ್ಜಲೀಕರಣ ಸೋಂಕಿತ ಮಲದ ಮೂಲಕ ಗರ್ಭಿಣಿ ಹಂದಿಗಳಿಗೆ ನಿಷ್ಕ್ರಿಯಗೊಳಿಸಿದ ಲಸಿಕೆ ಮತ್ತು ನಿರ್ಜೀವ ವೈರಾಣು ಲಸಿವೈರಸ್, ಕುಟುಂಬ: ಕರೋನಾ ವೈರಿನೇ,ಜೀನಸ್ : ಬ್ಯಾಕ್ಟೊ ಕರೋನಾ ವೈರಸ್,ಗುಂಪು ಎ
  6. ಪೋರ್ಸೈನ್ ಹೀಮ್ ಅಗ್ಲುಟಿನೇಟಿಂಗ್ ಕರೋನಾ ವೈರಸ್ ಹಂದಿ ಭೇಧಿ, ಅಹಾರ ಸೇವಿಸದಿರುವಿಕೆ,ಮೆದುಳಿನ ಉರಿಯೂತ, ನಡುಕ,ಬಡಕಲಾಗುವಿಕೆ ನೇರಸಂಪರ್ಕ, ಮೂಗಿನ ಮೂಲಕ, ಸ್ರಾವಕಗಳು ಉತ್ತಮ ನಿರ್ವಹಣೆ.ಲಸಿಕೆ ಇಲ್ಲ.ಮೌಸ್ ಹೆಪಟೈಟಿಸ್ ವೈರಸ್.ರಾಟ್ ಕರೋನಾ ವೈರಸ್ ಚಿಕ್ಕಿಲಿ.
  7. ಇಲಿ ಭೇಧಿ, ಪಿತ್ತಜನಕಾಂಗದ ಉರಿಯೂತ, ಮೆದುಳಿನ ಉರಿಯೂತ, ಮೆದುಳಿನ ಉರಿಯೂತ, ನೇರಸಂಪರ್ಕ, ಮೂಗಿನ ಮೂಲಕ, ಸ್ರಾವಕಗಳು ಉತ್ತಮ ನಿರ್ವಹಣೆ.
    ಲಸಿಕೆ ಇಲ್ಲ.
  8. ಬೊವೈನ್ ಕರೋನಾ ವೈರಸ್ ಆಕಳು ಮತ್ತು ಜಾನುವಾರುಗಳು ತೀವ್ರ ರಕ್ತ ಬೇಧಿ, ನಿರ್ಜಲೀಕರಣ,ಹಾಲಿನ ತೀವ್ರ ಇಳಿಮುಖ, ಶ್ವಾಸದ ತೊಂದರೆ ಸಗಣಿ, ವಾಯುದ್ರವ ತಾಯಿಂದ ಬರುವ ರೋಗತಡೆಗಟ್ಟುವ ಶಕ್ತಿ
  9. ಇಕ್ವೈನ್ ಕರೋನಾ ವೈರಸ್
    ಕುದುರೆ, ಕತ್ತೆವಾಂತಿ ಬೇಧಿ, ಶ್ವಾಸದ ತೊಂದರೆ ಮಲ, ವಾಯುದ್ರವ ತಾಯಿಂದ ಮರಿಗಳಿಗೆ ಬರುವ ರೋಗತಡೆಗಟ್ಟುವ ಶಕ್ತಿ.ಗುಂಪು ಬಿ.
  10. ಸಿವಿಯರ್ ಅಕ್ಯುಟ್ ರೆಸ್ಪಿರೇಟರಿ ಸಿಂಡ್ರೋಮ್ (ಸಾರ್ಸ್) ಮನುಷ್ಯ ತೀವ್ರತರ ಶ್ವಾಸದ ತೊಂದರೆ
    (ಬಾವಲಿಗಳು ವೈರಾಣುಗಳ ಸಂಗ್ರಹಕಗಳು) ವಾಯುದ್ರವ.ಸಿಂಬಳ ಲಸಿಕೆ ಇಲ್ಲ.ಕ್ವಾರಂಟೈನ್ ಮಾತ್ರ.ಗುಂಪು ಸಿ.
  11. ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್
    (ಮೆರ್ಸ್)ಇದು ಈಗ ಇಡೀ ಪ್ರಪಂಚಕ್ಕೆ ಹಬ್ಬಿರುವುದು ಮನುಷ್ಯ ತೀವ್ರತರ ಶ್ವಾಸದ ತೊಂದರೆ(ಒಂಟೆ ಮತ್ತು ಬಾವಲಿಗಳು ವೈರಾಣುಗಳ ಸಂಗ್ರಹಕಗಳು) ವಾಯುದ್ರವ,ಸಿಂಬಳ ಲಸಿಕೆ ಇಲ್ಲ,ಚಿಕಿತ್ಸೆ ಇಲ್ಲ,
    ಕ್ವಾರಂಟೈನ್ ಮಾತ್ರ.ಉಪ ಕುಟುಂಬ: ಕರೋನಾ ವೈರಿನೇಜೀನಸ್ : ಗಾಮ್ಮಾ ಕರೋನಾ ವೈರಸ್
  12. ಏವಿಯನ್ ಇನ್ಫೆಕ್ಷಿಯಸ್ ಬ್ರೋಂಕೈಟಿಸ್ ವೈರಸ್ ಹಕ್ಕಿಗಳು ಶ್ವಾಸನಾಳದ ಉರಿಯೂತ, ಮೂತ್ರಜನಕಾಂಗದ ಉರಿಯೂತ ಶ್ವಾಸದ ತೊಂದರೆ ವಾಯುದ್ರವ.ಸಿಂಬಳ ಬಹು ವೈರಲ್ ಲಸಿಕೆ.
  13. ಟರ್ಕಿ ಕರೋನಾ ವೈರಸ್
  14. ಬ್ಲೂ ಕೋಂಬ್ ವೈರಸ್ ಟರ್ಕಿಗಳು ಬೇಧಿ, ಕಪ್ಪು ಚರ್ಮ, ಖಿನ್ನತೆ ಮಲ, ವಾಯುದ್ರವ ನಿಷ್ಕ್ರಿಯಗೊಳಿಸಿದ ಲಸಿಕೆ
    ಉಪ ಕುಟುಂಬ: ಕರೋನಾ ವೈರಿನೇ
    ಜೀನಸ್ : ಡೆಲ್ಟಾ ಕರೋನಾ ವೈರಸ್
  15. ಪೋರ್ಸೈನ್ ಡೆಲ್ಟಾ ಕರೋನಾ ವೈರಸ್ ಹಾಲು ನೀಡುತ್ತಿರುವ ಹಂದಿಗಳು ವಿಶೇಷ ಲಕ್ಷಣಗಳಿಲ್ಲ
    ಕಡಿಮೆ ಸಾವು ಮಲ ಲಸಿಕೆ ಇಲ್ಲ.
  16. ಉಪ ಕುಟುಂಬ: ಟೋರೋ ವೈರಿನೇ
    ಜೀನಸ್ : ಟೋರೋ ವೈರಸ್
  17. ಬ್ರೇಡಾ ವೈರಸ್ ಜಾನುವಾರುಗಳು ಬೇಧಿ, ನಿರ್ಜಲೀಕರಣ ಮಲ ಲಸಿಕೆ ಇಲ್ಲ
    ಉಪ ಕುಟುಂಬ: ಟೋರೋ ವೈರಿನೇ
    ಜೀನಸ್ : ಟೋರೋ ವೈರಸ್ವೈಟ್ ಬ್ರೀಮ್ ವೈರಸ್.
  18. ಫೆದರ್ಡ್ ಮಿನೋ ವೈರಸ್ ಮೀನು ಚರ್ಮ ಮತ್ತು ಕಣ್ಣುಗಳಲ್ಲಿ ರಕ್ತ ಸ್ರಾವ ಕಲುಷಿತ ನೀರು ಲಸಿಕೆ ಇಲ್ಲ

ಬಾವಲಿ ಮತ್ತು ಕರೋನಾ ವೈರಾಣು

ಬಾವಲಿಗಳು ಎಲ್ಲಾ ರೀತಿಯ ಕರೋನಾ ವೈರಾಣು ಹರಡುವಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸಿವೆ. ಸಿವಿಯರ್ ಅಕ್ಯುಟ್ ರೆಸ್ಪಿರೇಟರಿ ಸಿಂಡ್ರೋಮ್ (ಸಾರ್ಸ್) ಎಂದು ಕರೆಯುವ ಮನುಷ್ಯನ ಸಾವನ್ನು ಅಪೇಕ್ಷಿಸುವ ಕರೋನಾ ವೈರಾಣು ಕಾಯಿಲೆ ಸಹ ಬಾವಲಿಗಳಿಂದಲೇ ಹರಡಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹಂದಿಗಳಲ್ಲಿ ಕರೋನಾ ವೈರಾಣು ಕಾಯಿಲೆ ಹರಡಲು ಸಹ ಈ ಬಾವಲಿಗಳೇ ಕಾರಣ. ಆದರೆ ಈ ಬಾವಲಿಗಳಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ. ಕಾರಣ ಬಾವಲಿಗಳನ್ನು “ ಅತಿಥೇಯ ಸಂಗ್ರಾಹಕ” ಎನ್ನಬಹುದು. ಈಗ ಬರುತ್ತಿರುವ COVID-

ಇದಕ್ಕೆ ಒಂಟೆಗಳ ಮೂಲಕ ಮನುಷ್ಯರಿಗೆ ವೈರಸ್ ಹರಡಲು ಮೂಲಕಾರಣ ಬಾವಲಿಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಮಧ್ಯಪ್ರಾಚ್ಯ ದೇಶಗಳಲ್ಲಿಯೇ ಈ ಕೊರೊನಾ ಮಹಾಮಾರಿ ಜನನವಾಗಿರುವುದು. ಇದಕ್ಕೇ ಇರಬಹುದು COVID-19 ಇದಕ್ಕೆ “ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (ಮೆರ್ಸ್)” ಎಂದು ಕರೆಯುವುದು. ಬಹುಶ: ಬಾವಲಿಗಳಿಂದ ಒಂಟೆಗಳಿಗೆ ಸಾಗಿದ ಕರೋನಾ ವೈರಸ್ ಮಧ್ಯಪ್ರಾಚ್ಯದ ಜನರಿಗೆ ಹಬ್ಬಿರಬಹುದು ಎಂಬ ಪ್ರತೀತಿ ಇದೆ. ಕರ್ನಾಟಕದಲ್ಲಿಯೂ ಸಹ ಮಧ್ಯಪ್ರಾಚ್ಯ ದೇಶಗಳಿಗೆ ಹೋಗಿ ಬಂದವರಿಂದ ಹರಡಿದ ಕರೋನಾ ಜಾಸ್ತಿ ಇರುವುದಕ್ಕೆ ಇದೇ ಕಾರಣವಿರಬಹುದೇನೋ?

ಪುನುಗು ಬೆಕ್ಕು (ಹಿಮಾಲಯನ್ ಪಾಮ್ ಸಿವೆಟ್) ಮತ್ತು ಕರೋನಾ ವೈರಾಣು

ಪುನುಗು ಬೆಕ್ಕು (ಹಿಮಾಲಯನ್ ಪಾಮ್ ಸಿವೆಟ್ ಕ್ಯಾಟ್) ಇವು ಬೆಕ್ಕಿನ ಜಾತಿಗೆ ಸೇರಿಲ್ಲ. ಮುಂಗುಸಿ ಜಾತಿಗೆ ಸೇರಿದ ಇವು ಹಲ್ಲಿ, ಹಾವು, ಕಪ್ಪೆ, ಇಲಿ ಇತ್ಯಾದಿ ಹಿಡಿದು ತಿನ್ನುತ್ತವೆ. ಚೈನಾದ ಹುವಾನಿನಲ್ಲಿ ಇವುಗಳನ್ನು ಹಿಡಿದು ಹುರಿದು ಮುಕ್ಕಿದ್ದರಿಂದ ಕರೋನಾ ಕಾಯಿಲೆ ಬಂದಿರಬಹುದೆಂದು ಊಹಿಸಲಾಗಿದೆ. ಇವು ಮಹತ್ತರವಾದ ಕರೋನಾ ವಾಹಕಗಳು. ನಮ್ಮ ದೇಶದ ಈಶಾನ್ಯ ಪ್ರಾಂತ್ಯದಲ್ಲಿ ಇವು ಇದ್ದರೂ ಸಹ ಯಾರು ಇವನ್ನು ತಿನ್ನುವ ಗೊಡವೆಗೆ ಹೋಗುವುದಿಲ್ಲ. ಇವುಗಳಿಂದ ಹೊರಸೂಸುವ “ಪುನುಗು” ಎಂಬ ಸುಗಂಧ ದ್ರವ್ಯಕ್ಕೆ ಆಸೆ ಪಟ್ಟು ಬೇಟೆಯಾಡಿ ಇವು ವಿನಾಶದಂಚು ತಲುಪಿವೆ.

ಈ ಪ್ರಾಣಿಗಳು ಚೈನಾ, ಭಾರತ ಮತ್ತು ಮಲೇಶಿಯಾದಲ್ಲಿದ್ದರೂ ಚೀನಿಯರು ಹಾವು, ಹುಳ ಹುಪ್ಪಟೆ ಮತ್ತು ಈ ತರಹದ ಇಲ್ಲ ಸಲ್ಲದ ಪ್ರಾಣಿಗಳನ್ನು ಹಿಡಿದು ಮುಕ್ಕುವುದರಿಂದ ಕರೋನಾ ಕಾಯಿಲೆ ಬಂದಿದೆ ಎಂದು ಜಗತ್ತಿನ ಜನಕ್ಕೆ ಚೀನಿಯರ ಮೇಲೆ ಕೋಪ. ಗಲೀಜು ಚೀನಿಯರು ಗುವಾಂಗ್ ಎಂಬ ಸ್ಥಳದ ಹೊಟೇಲೊಂದರಲ್ಲಿ ಅತ್ಯಂತ ಕೊಳಕು ರೀತಿಯಲ್ಲಿ ಈ ಸಿವೆಟ್ ಬೆಕ್ಕುಗಳನ್ನು ಕಡಿದು ಗ್ರಾಹಕರಿಗೆ ಹುರಿದು ಉಣಬಡಿಸಿದ್ದಕ್ಕೆ ಸಾರ್ಸ್ ಮಹಾಮಾರಿಯೂ ಸಹ ನುಸುಳಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅದಕ್ಕೆ ಇಲ್ಲ ಸಲ್ಲದ ಪ್ರಾಣಿಗಳನ್ನೆಲ್ಲಾ ಕಡಿದು ತಿನ್ನಬಾರದು ಎನ್ನುವುದು.

ಒಂಟೆಗಳು ಮತ್ತು ಕರೋನಾ ವೈರಾಣು

ಒಂಟಿ ಡುಬ್ಬದ ಡ್ರೊಮೇಡರಿ ಒಂಟೆಗಳು ಕರೋನಾ ವೈರಾಣುಗಳ ವಾಹಕಗಳು ಎಂಬುದು ವಿವಾದಾತೀತವಾಗಿ ಸಬೂತಾಗಿದೆ. ಸಧ್ಯಕ್ಕೆ ವಿಶ್ವಕ್ಕೆ ಹೆಮ್ಮಾರಿಯಂತೆ ಅಂಟಿರುವ COVID-19 ಇದನ್ನು “ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್” (ಮೆರ್ಸ್) ಅಥವಾ “ಮಧ್ಯ ಪ್ರಾಚ್ಯ ಶ್ವಾಸಕೋಶದ ತೊಂದರೆ” ಎಂದೂ ಕರೆಯುತ್ತಾರೆ. ಇದು ಕರೋನಾ ವೈರಿನೇ ಉಪಕುಟುಂಬಕ್ಕೆ ಸೇರಿದ ಮತ್ತು ಜೀನಸ್ ಬ್ಯಾಕ್ಟೊ ಕರೋನಾ ವೈರಸ್ (ಗುಂಪು ಎ ) ಇದರಿಂದ ಬರುತ್ತದೆ. ಮಧ್ಯಪ್ರಾಚ್ಯ ದೇಶಗಳಾದ ಈಜಿಪ್ಟ್, ಓಮನ್, ಕ್ವತಾರ್ ಮತ್ತು ಸೌದಿ ಅರೇಬಿಯಾ ದೇಶಗಳಲ್ಲಿ ಇದು 2012 ನೇ ಸಾಲಿನಲ್ಲಿಯೇ ಕಾಣಿಸಿಕೊಂಡು ಮರಣ ಮ್ರದಂತಗ ಭಾರಿಸಿತ್ತು. ಅಲ್ಲಿ ಒಂಟೆಗಳ ಸಂಖ್ಯೆ ಜಾಸ್ತಿ ಇದ್ದು ಇವುಗಳಿಂದ ಮನುಷ್ಯರಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಹಾಗೆಂದು ಒಂಟೆಗಳಲ್ಲಿ ಯಾವುದೇ ರೋಗಲಕ್ಷಣ ಅಥವಾ ಕಂಡು ಬರದೇ ಇರುವುದರಿಂದ ಇವು ಈ ವೈರಾಣುಗಳ “ಸಂಗ್ರಾಹಕ” (Reservoir) ಗಳಾಗಿ ಕೆಲಸ ಮಾಡುತ್ತವೆ. ಈ ವೈರಾಣು ಒಂಟೆಗಳ ಹಾಲಿನಲ್ಲಿ ಹೇರಳವಾಗಿ ಸ್ರವಿಸಲ್ಪಡುತ್ತದೆ. ಈ ಮಧ್ಯಪ್ರಾಚ್ಯ ದೇಶಗಳಲ್ಲಿ ಒಂಟೆ ಹಾಲು ಔಷಧಿಯೆಂದು ಪರಿಗಣಿಸಲ್ಪಡುತ್ತದೆಯಂತೆ. ಕಾಯಿಸದೇ ಕುಡಿದ ಈ ಹಾಲಿನಿಂದ ಮನುಷ್ಯರಿಗೆ ಮೊದಲು ಬಂತು ಎಂಬುದು ಪ್ರತೀತಿ. ನಮ್ಮಲ್ಲಿಯೂ ಸಹ ಆಕಳಿಗೆ ಬೇಡದ ಶರೀರದ ತ್ಯಾಜ್ಯ ವಸ್ತುಗಳನ್ನು ಹೊರ ಚೆಲ್ಲಲು ಇರುವ ಗೋಮೂತ್ರವನ್ನು ಔಷಧಿಯೆಂದು ತಪ್ಪು ಗ್ರಹಿಕೆಯಿಂದ ಕುಡಿಯುವಂತೆ ಅಲ್ಲಿಯೂ ಸಹ ಒಂಟೆ ಮೂತ್ರವನ್ನು ಕುಡಿಯುತ್ತಾರಂತೆ.

ಇದೂ ಸಹ ವೈರಾಣು ಹರಡಲು ಕಾರಣ ಎನ್ನುತ್ತಾರೆ ವಿಜ್ಞಾನಿಗಳು. ಒಂಟೆಗಳಲ್ಲಿ ಹೇಗೆ ಈ ವೈರಾಣು ಬಂತು ಎನ್ನುವುದೂ ಸಹ ಕುತೂಹಲಕಾರಿ. 1950 ರಲ್ಲಿ ಕ್ವತಾರಿನ ಜನಸಂಖ್ಯೆ ಕೇವಲ 16,000 ಆದರೆ ತೈಲ ಸಂಪತ್ತು ಪತ್ತೆಯಾದ ನಂತರ ಅನೇಕ ದೇಶಗಳಿಂದ ವಲಸೆ ಬಂದು ಹೋದವರಿಂದ ಅದು ತುಂಬಿ ಹೋಗಿ 2016 ರ ಹೊತ್ತಿಗೆ ಇದು 2,617,634 ತಲುಪಿತು. ಅರಬ್ ದೇಶಗಳಲ್ಲಿ1983-2000 ರ ನಂತರ ತೈಲ ಕಂಪನಿಗಳು ಅಗಾದವಾದ ತೈಲ ಸಂಪತ್ತನ್ನು ಪತ್ತೆ ಹಚ್ಚಿದವು. ಇವುಗಳನ್ನು ಅವುಗಳ ಸ್ಥಾನದಿಂದ ಮಾರುಕಟ್ಟೆಗೆ ಒಯ್ಯಲು ಉತ್ತಮ ಕಡಿಮೆ ಖರ್ಚಿನ ಸಾಧನ ಬೇಕಿತ್ತು. ಆಗಿಂದ ಪ್ರಾರಂಭವಾಗಿದ್ದು ಈ ಒಂಟೆಗಳ ಸಾಕಣೆ ಮತ್ತು ಅವುಗಳ ಮೂಲಕ ತೈಲ ಸಾಗಣೆ.

ಸರ್ಕಾರವೂ ಸಹ ಒಂಟೆ ಸಾಕಣೆ ಪ್ರೋತ್ಸಾಹಿಸಿತು. ಪರಿಣಾಮವಾಗಿ ಒಂಟೆಗಳ ಸಂಖ್ಯೆಯಲ್ಲಿ ಅಗಾಧ ಏರಿಕೆಯಾಯಿತು. ಈ ಒಂಟೆಗಳನ್ನು ಸಾಕುವವರು ಒಂಟೆಗಳ ಸಂಖ್ಯೆಯೊಂದಿಗೇ ಜಾಸ್ತಿಯಾದರು. ಒಂಟೆಗಳ ಜೊತೆಯೇ ಇರುವ ಇವರಿಗೆ ಒಂಟೆಗಳನ್ನು ಭಾಧಿಸದ ಆದರೆ ಮನುಷ್ಯರನ್ನು ಕಾಡುವ ಕರೋನಾ ವೈರಾಣು ಭಾಧೆ ಜಾಸ್ತಿಯಾಯಿತು. ಇವರು ಪಟ್ಟಣಕ್ಕೆ ಬಂದು ಪಟ್ಟಣದ ಜನರಿಗೆ ಈ ವೈರಾಣು ಬಾಧೆ ತಗಲಿಸಿದರು. ಪೇಟೆಯ ಜನ ಇಡೀ ಪ್ರಪಂಚಕ್ಕೆ ಕರೋನಾ ವೈರಾಣುವನ್ನು ಬಳುವಳಿಯಾಗಿ ನೀಡಿದರು.

ಇದು ಸಾಕು ಪ್ರಾಣಿಗಳಿಗೆ ಬರುತ್ತದೆ ಎಂಬ ಬಗ್ಗೆ ದಾಖಲೆಗಳಿಲ್ಲ. ಉಳಿದಂತೆ ಕರೋನಾ ವೈರಾಣುವಿನ ವಿವಿಧ ಪ್ರಭೇಧಗಳು ಹಂದಿ, ನಾಯಿ, ಹಕ್ಕಿಗಳು, ಮೀನು ಇತ್ಯಾದಿಗಳನ್ನು ಬಾಧಿಸುತ್ತಿದ್ದರೂ ಸಹ ಇವು ಮನುಷ್ಯನನ್ನು ಬಾಧಿಸುವ ಬಗ್ಗೆ ಯಾವುದೇ ದಾಖಲೆಗಳು ಇಲ್ಲ.

ನಾಯಿಗಳಲ್ಲಿ ಕರೋನಾ ವೈರಾಣು ಬಾಧೆ

ಈ ವೈರಾಣು ಶ್ವಾನಗಳನ್ನು ಕಡಿಮೆ ಪ್ರಮಾಡದಲ್ಲಿ ಭಾಧಿಸುವುದು. ಇದು ನಾಯಿಗಳಲ್ಲಿ ವಾಂತಿಭೇಧಿ, ತೀವ್ರವಾದ ವಾಂತಿ, ಭೇಧಿ ಮತ್ತು ಬಿಳಿರಕ್ತ ಕಣಗಳ ಕಡಿಮೆಯಾಗುವಿಕೆ ಇತ್ಯಾದಿಗಳನ್ನು ಉಂಟು ಮಾಡುತ್ತದೆ. ಇದಕ್ಕೆ ಉತ್ತಮ ಚಿಕಿತ್ಸೆ ಇಲ್ಲ. ಆದರೆ ನಿಯಮಿತವಾಗಿ ಇದಕ್ಕೆಂದೇ ಇರುವ ಲಸಿಕೆಯನ್ನು ಬಳಸುವುದರಿಂದ ಈ ಕಾಯಿಲೆಯನ್ನು ತಡೆಯಬಹುದು. ಈ ವೈರಸ್ಸು ಮನುಷ್ಯನಿಗೆ ಯಾವುದೇ ರೋಗವನ್ನುಂಟು ಮಾಡುವುದಿಲ್ಲ.

ಬೆಕ್ಕುಗಳ ಕೊರೋನಾ ವೈರಾಣು ಪೀಡೆ

ಇದೂ ಸಹ ಕರೋನಾ ವೈರಾಣುಗಳ ಪೀಡೆಯಿಂದ ಬರಬಹುದಾದ ಕಾಯಿಲೆಯಾದರೂ ಸಹ ಇದು ಹೊಟ್ಟೆಯಯ ಪೆರಿಟೋನಿಯಂ ಪದರದ ಉರಿಯೂತವನ್ನುಂಟು ಮಾಡುತ್ತದೆ. ತೀವ್ರ ಸಾಂಕ್ರಾಮಿಕವಾದ ಈ ಕಾಯಿಲೆಗೆ ಅನೇಕ ಬೆಕ್ಕುಗಳು ಬಲಿಯಾಗುತ್ತವೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ ಬೆಕ್ಕುಗಳನ್ನು ಬಹಳ ಬೇಗ ಕಾಡುವ ಈ ಕಾಯಿಲೆ ಮರಿ ಬೆಕ್ಕುಗಳನ್ನು ಜಾಸ್ತಿ ಭಾಧಿಸುತ್ತದೆ. ಈ ಕಾಯಿಲೆಯನ್ನು ಅಷ್ಟು ಸುಲಭವಾಗಿ ಪತ್ತೆ ಸಾಧ್ಯವಿಲ್ಲ. ಈಗ ಇದಕ್ಕೆ ಲಸಿಕೆ ತಯಾರಿಸಲಾಗಿದ್ದು ಇದನ್ನು ಮೂಗಿನ ಮೂಲಕ ನೀಡಲಾಗುತ್ತದೆ. ಒಮ್ಮೆ ಈ ಕಾಯಿಲೆ ಬೆಕ್ಕಿಗೆ ಬಂದರೆ ಬೆಕ್ಕನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ಚಿಕ್ಕ ಬೆಕ್ಕಿನ ಮರಿಗಳಿಗೆ ಈ ಕಾಯಿಲೆ ಬಹಳ ಮಾರಕ.

ಹಂದಿಗಳಲ್ಲಿ ಕರೋನಾ ವೈರಾಣು ತೊಂದರೆ

ಸುಮಾರು ನಾಲ್ಕೈದು ವಿಧದ ಕೊರೋನಾ ವೈರಾಣುಗಳು ಹಂದಿಗಳನ್ನು ಭಾಧಿಸುತ್ತವೆ. ಇದರಲ್ಲಿ ಅನೇಕ ಕರೋನಾ ವೈರಾಣುಗಳ ಪಾತ್ರ ಇದೆ. ಇವುಗಳಲ್ಲಿ ಪೋರ್ಸೈನ್ ಎಪಿಡೆಮಿಕ್ ಡಯೇರಿಯಾ ಇದು ತೀವ್ರತರನಾಗಿದ್ದು ಒಂದು ಹಂದಿಯಿಂದ ಮತ್ತೊಂದು ಹಂದಿಗೆ ಅತಿ ಶೀಘ್ರದಲ್ಲಿ ಹಬ್ಬುತ್ತದೆ. ತೀವ್ರತರನಾದ ಬೇಧಿ, ವಾಂತಿ, ಶರೀರದ ತಾಪಮಾನ ಇಳಿಯುವುದು, ನಿರ್ಜಲೀಕರಣ ಇತ್ಯಾದಿ ಈ ರೋಗದ ಲಕ್ಷಣಗಳು. ಶೇ 80-100ರಷ್ಟು ಸಾವು ಈ ಕಾಯಿಲೆಯಲ್ಲಿ ಕಂಡು ಬರುತ್ತದೆ. ಲಸಿಕೆ ಹಾಕಿ ತಡೆಯುವುದೊಂದೇ ಇದಕ್ಕೆ ದಾರಿ.

ಪೋರ್ಸೈನ್ ಹೀಮ್ ಅಗ್ಲುಟಿನೇಟಿಂಗ್ ಕರೋನಾ ವೈರಸ್ ಸಹ ಹಂದಿಗಳಲ್ಲಿ ಅಷ್ಟೇ ತೀವ್ರವಾದ ಕಾಯಿಲೆ. ಇದರಲ್ಲಿಯೂ ಸಹ ಹಂದಿಮರಿಗಳು ಸಾವಿಗೀಡಾಗುತ್ತವೆ. ಮೆದುಳು ಜ್ವರದಲ್ಲಿನ ಲಕ್ಷಗಳು ಕಾಣಿಸಿಕೊಂಡು ತೀವ್ರವಾದ ವಾಂತಿ ಇರುತ್ತದೆ. ಇದಕ್ಕೂ ಸೂಕ್ತ ಚಿಕಿತ್ಸೆ ಇಲ್ಲ. ಲಸಿಕೆಯಿಂದ ಮಾತ್ರ ತಡಿಯಬಹುದು. ಒಮ್ಮೆ ಬಂದರೆ ಎಲ್ಲಾ ಭಾಧಿತ ಹಂದಿಗಳು ಸತ್ತು ತಾನೇ ನಿಯಂತ್ರಣಕ್ಕೆ ಬರಬೇಕು.

ಆಕಳು ಮತ್ತು ಜಾನುವಾರುಗಳಲ್ಲಿ ಕರೋನಾ ವೈರಾಣು ಬಾಧೆ

ಕರುಗಳಲ್ಲಿ ಬಹಳ ಸಾಮಾನ್ಯವಾದ ಈ ಕಾಯಿಲೆ ತೀವ್ರವಾದ ಬೇಧಿ, ನಿರ್ಜಲೀಕರಣಮತ್ತು ಹಸಿವಿಲ್ಲದಿರುವಿಕೆ ಇತ್ಯಾದಿ ಲಕ್ಷಣಗಳನ್ನು ಹೊಂದಿದೆ. ಶ್ವಾಸಕೋಶದ ಉರಿಯೂತವೂ ಸಹ ಇರುತ್ತದೆ. ಇದಕ್ಕೆ ಉತ್ತಮ ಲಸಿಕೆ ಇಲ್ಲ.

ಕುದುರೆಗಳ ಕರೋನಾ ವೈರಾಣು ಬಾಧೆ

ಕುದುರೆ, ಕತ್ತೆ ಮತ್ತು ಈ ಜಾತಿಯ ಪ್ರಾಣಿಗಳಲ್ಲಿ ಈ ಕಾಯಿಲೆ ಬಂದಾಗ ಬೇಧಿ ಮತ್ತು ಹೊಟ್ಟೆನೋವು ಅನುಕ್ರಮವಾಗಿ ಕಂಡು ಬರುತ್ತದೆ. ಚಿಕಿತ್ಸೆಯ ನಂತರ ಬಹುತೇಕ ಪ್ರಾಣಿಗಳು ಚೇತರಿಸಿಕೊಳ್ಳುತ್ತವೆ.
ಹಕ್ಕಿಗಳ ಕೊರೊನಾ ಬಾಧೆ
ಏವಿಯನ್ ಇನ್ಫೆಕ್ಷಿಯಸ್ ಬ್ರೋಂಕೈಟಿಸ್ ವೈರಸ್ ಎಂಬ ವೈರಾಣು ಈ ಕಾಯಿಲೆಯನ್ನುಂಟು ಮಾಡುತ್ತದೆ. ಹಕ್ಕಿಗಳಲ್ಲಿ ಗುರುತಿಸಲಾಗದ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯನ್ನುಂಟು ಮಾಡುತ್ತದೆ. ಅನೇಕ ಹಕ್ಕಿಗಳು ಸಾಯುತ್ತವೆ. ಮರಣೋತ್ತರ ಪರೀಕ್ಷೆಯಲ್ಲಿ ಮೂತ್ರಜನಕಾಂಗ ಹಾಳಾಗಿರುವುದು ಕಂಡು ಬರುತ್ತದೆ.  ಇಷ್ಟು ಕರೋನಾ ಪುರಾಣ ಸಾಕು.

ಆಕರ: ಕರೋನಾ ವೈರಾಣು ಬಾಧೆ Appeal et al., 1980 and Carmicheal and Binn, 1981: Animal Corona Virus.In Advances in Veterinary Medicine 1999.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ದಿನದ ಸುದ್ದಿ

ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ | ಭದ್ರಾ ನಾಲೆ ನೀರು ನಿರ್ವಹಣೆ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.

ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ನಾಲೆಯುದ್ದಕ್ಕೂ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಅನಧಿಕೃತವಾಗಿ ನೀರು ಎತ್ತುವವರ ಮೋಟಾರ್‌ಗಳನ್ನು ವಶಪಡಿಸಿಕೊಳ್ಳಲಾಗುವುದು.

ಪ್ರಿಪೇಯ್ಡ್ ಆಟೋಗಳನ್ನು ಚಾಲ್ತಿಗೊಳಿಸಿದ್ದು, ಇದಕ್ಕೆ ರೂ.38/-ಶುಲ್ಕ ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಹೆಚ್.ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

ಅಂಕಣ

Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?

Published

on

indian birthwort, Aristolochia tagala

‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.

ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:

ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.

ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ

‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?

ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್‌ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.

‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?

ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.

ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.

ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

Continue Reading

Trending