Connect with us

ರಾಜಕೀಯ

ಬಲಪಂಥೀಯ ದಾಳಿಯ ಕ್ರೋಡೀಕರಣಕ್ಕೆ ಎದುರಾಗಿ ವರ್ಗಪರ್ಯಾಯವನ್ನು ಆಧರಿಸಿದ ಎಡಪಂಥೀಯ ಪ್ರತಿಧಾಳಿ –ಇದೀಗ ದೇಶದಲ್ಲಿನ ಹೊಸಧ್ರುವೀಕರಣ : ಸೀತಾರಾಂಯೆಚುರಿ

Published

on

17ನೇ ಲೋಕಸಭಾ ಚುನಾವಣೆಗಳಲ್ಲಿ ಬಲಪಂಥೀಯರಿಗೆ ಒಂದು ದೊಡ್ಡ ವಿಜಯಸಿಕ್ಕಿದೆ, ಇದು ಕಳೆದ ಐದು ವರ್ಷಗಳಲ್ಲಿ ನಡೆಸಿದ ಬಲಪಂಥೀಯದಾಳಿಗಳ ಕ್ರೋಡೀಕರಣ, ಎಡಶಕ್ತಿಗಳು ದೊಡ್ಡ ಹಿನ್ನಡೆ ಅನುಭವಿಸಿವೆ, ಆದರೆ ಎಡಪಂಥೀಯರು, ಕೆಲವರು ಹೇಳುವ ಹಾಗೆ ನಿಶ್ಶಸ್ತ್ರರಾಗಿಲ್ಲ, ಅಥವ ನಿರ್ಮೂಲಗೊಂಡಿಲ್ಲ., ನೆನಪಿಟ್ಟುಕೊಳ್ಳಿ, ಬಲಪಂಥೀಯ ರಾಜಕೀಯ ದಾಳಿಯನ್ನು ಎಡಪಂಥೀಯ ರಾಜಕೀಯ ಪ್ರತಿಧಾಳಿ ಮಾತ್ರವೇ ಎದುರಿಸಬಲ್ಲದು. ಈ ಪ್ರತಿದಾಳಿ ಒಂದು ವರ್ಗ ಪರ್ಯಾಯವನ್ನು, ವರ್ಗರಾಜಕೀಯವನ್ನು ಆಧರಿಸಿದೆ. ಕೇಂದ್ರಸಮಿತಿಯಲ್ಲಿಸಿಪಿಐ(ಎಂ) ಈಗಇದನ್ನೇಮಾಡಲುನಿರ್ಧರಿಸಿದೆ” ಎಂದುಸೀತಾರಾಮ್‍ ಯೆಚುರಿ, ಸಿಪಿಐ(ಎಂ) ಪ್ರಧಾನಕಾರ್ಯದರ್ಶಿ ಹೇಳಿದ್ದಾರೆ.

ಅವರು ಜೂನ್‍ 7ರಿಂದ 9 ರವರೆಗೆ ನಡೆದ ಸಿಪಿಐ(ಎಂ)ನ ಕೇಂದ್ರ ಸಮಿತಿಯ ಚರ್ಚೆಗಳು, ನಿರ್ಧಾರಗಳ ಬಗ್ಗೆ ಪತ್ರಿಕಾ ಸಮ್ಮೇಳನವನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಎಡಶಕ್ತಿಗಳು ಹಿಮ್ಮೆಟ್ಟುತ್ತಿಲ್ಲ, ಪ್ರತಿದಾಳಿ ನಡೆಸುತ್ತವೆ. ಇದೀಗ ಎಡಶಕ್ತಿಗಳು ಸೆಟೆದುನಿಲ್ಲುವ ಸಮಯ, ಆಧುನಿಕ ಭಾರತದ ಮೌಲ್ಯಗಳನ್ನು ಎತ್ತಿಹಿಡಿಯಲು, ನಮ್ಮ ಸಂವಿಧಾನದ ಆಶ್ವಾಸನೆಗಳನ್ನು ರಕ್ಷಿಸಿಕೊಳ್ಳಲು ಮತ್ತು ಜನಗಳ ಪ್ರಜಾಪ್ರಭುತ್ವ ಹಕ್ಕುಗಳು ಹಾಗೂ ನಾಗರಿಕ ಸ್ವಾತಂತ್ರ್ಯಗಳನ್ನು ರಕ್ಷಿಸಿಕೊಳ್ಳಲು ಸೆಟೆದುನಿಲ್ಲುವ ಸಮಯ. ಬಲಪಂಥಬಲಗೊಂಡಾಗ, ಎಡಪಂಥವೂ ಶಕ್ತಿಶಾಲಿಯಾಗಬೇಕಾಗುತ್ತದೆ. ಇದೀಗ ದೇಶದಲ್ಲಿನ ಹೊಸಧ್ರುವೀಕರಣ, ಮೆದುಹಿಂದುತ್ವವು ಕಟ್ಟಾಹಿಂದುತ್ವಕ್ಕೆ ಉತ್ತರವಾಗದು, ಎಡಪಂಥಮಾತ್ರವೇ ಏಕೈಕ ಆಯ್ಕೆ ಎಂದು ಯೆಚುರಿ ಹೇಳಿದರು.

ಸಿಪಿಐ(ಎಂ) ಕೇಂದ್ರಸಮಿತಿ ಈ ಮೂರು ದಿನಗಳ ಸಭೆಯಲ್ಲಿ 17ನೇ ಲೋಕಸಭಾ ಚುನಾವಣೆಗಳ ಫಲಿತಾಂಶದ ಪ್ರಾಥಮಿಕ ವಿಮರ್ಶೆ ನಡೆಸಿದೆ. ಬಿಜೆಪಿ ಕಳೆದ ಐದುವರ್ಷಗಳಲ್ಲಿ ಹರಿಯಬಿಟ್ಟಿರುವ ಬಲಪಂಥೀಯ ದಾಳಿ ಈ ಜನಾದೇಶದೊಂದಿಗೆ ಕ್ರೋಡೀಕರಣಗೊಂಡಿದೆ ಎಂದು ವಿಶ್ಲೇಷಿಸಿರುವ ಕೇಂದ್ರಸಮಿತಿ, ಪ್ರತಿಪಕ್ಷಗಳ ವಿಫಲತೆ, ಎಡಶಕ್ತಿಗಳ ತೀವ್ರಪರಾಭವದ ಪ್ರಾಥಮಿಕ ವಿಮರ್ಶೆಯನ್ನು ನಡೆಸಿತು.

ಪಕ್ಷದ ಸ್ವತಂತ್ರಶಕ್ತಿ ಮತ್ತು ರಾಜಕೀಯ ಮಧ್ಯಪ್ರವೇಶದ ಸಾಮರ್ಥ್ಯಗಳು ದುರ್ಬಲಗೊಳ್ಳುತ್ತಲೇ ಇವೆ ಎಂದು ಗಮನಿಸಿದ ಸಿಪಿಐ(ಎಂ) ಕೇಂದ್ರಸಮಿತಿ ಇಂತಹ ಒಂದು ಪ್ರವೃತ್ತಿ ಆಳಗೊಳ್ಳಲು ಕಾರಣವಾಗಿರುವ ವಿವಿಧ ಅಂಶಗಳನ್ನು ಚರ್ಚಿಸಿತು. ಮತ್ತು ಈ ಅವನತಿಯನ್ನು ತಡೆಯಲು ಹಾಗೂ ತಿರುಗುಮುರುಗುಗೊಳಿಸಲು ಪಕ್ಷವು ಕೈಗೊಳ್ಳುವ ತಕ್ಷಣದ ಸಂಘಟನಾತ್ಮಕ ಮತ್ತು ರಾಜಕೀಯ ಕ್ರಮಗಳನ್ನು ರೂಪಿಸಿತು.

ಈ ನಿರ್ಣಾಯಕ ಬಿಜೆಪಿ ವಿಜಯವು ಖಂಡಿತವಾಗಿಯೂ ಒಡ್ಡಲಿರುವ ಸವಾಲುಗಳನ್ನು ಎದುರಿಸಲು ದೇಶ ಮತ್ತು ಜನತೆ ಸಿದ್ಧರಾಗಬೇಕಾಗಿದೆ ಎಂಬ ತೀರ್ಮಾನಕ್ಕೆ ಕೇಂದ್ರಸಮಿತಿ ಬಂದಿದೆ. ಅದು ಇಂತಹ ನಾಲ್ಕು ಮುಖ್ಯಸವಾಲುಗಳನ್ನು ಗಮನಿಸಿ, ಅವನ್ನು ಎದುರಿಸುವ ಬಗೆಗಳನ್ನೂ ಗುರುತಿಸಿದೆ.

ಪಕ್ಷಕ್ಕೆ ಆಗಿರುವ ಹಿನ್ನಡೆಯಿಂದಾಗಿ ಉಂಟಾಗಿರುವ ಗಂಭೀರ ಸನ್ನಿವೇಶವನ್ನು ಎದುರಿಸಲು ಕೇಂದ್ರಸಮಿತಿ, ಪಕ್ಷದ ಕೊಲ್ಕತಾಪ್ಲೀನಂನ ಮಹತ್ವದ ನಿರ್ಣಯಗಳ ಜಾರಿಯ ವಿಮರ್ಶೆಯೂ ಸೇರಿದಂತೆ ಹಲವಾರು ಕ್ರಮಗಳನ್ನು ಮತ್ತು ಕಾರ್ಯಭಾರಗಳನ್ನು ಅಂಗೀಕರಿಸಿದೆ.

ಕೇಂದ್ರಸಮಿತಿಯ ಸಭೆ ಚುನಾಣಾ ಸುಧಾರಣೆಗಳ, ಅದರಲ್ಲೂ ಚುನಾವಣಾ ಆಯೋಗದ ಸುಧಾರಣೆಗಳ ಅಗತ್ಯ ಮತ್ತು ಇಲೆಕ್ಟ್ರಾನಿಕ್ಮತಯಂತ್ರಗಳ ಬಗ್ಗೆ ಎದ್ದಿರುವ ಸಂದೇಹಗಳನ್ನೂ ಚರ್ಚಿಸಿತು.

ಚುನಾವಣೆಗಳ ನಂತರ ಮುಂಬಯಿಯಲ್ಲಿ ಖ್ಯಾತ ಜಾತ್ಯತೀತಚಿಂತಕ ಡಾ. ರಾಮ್‍ ಪುನಿಯಾನಿಯವರಿಗೆ ಬೆದರಿಕೆಗಳು ಬರುತ್ತಿರುವುದನ್ನು ಕೇಂದ್ರಸಮಿತಿ ಖಂಡಿಸಿದೆ, ಹಾಗೂ ಚುನಾವಣಾ ಫಲಿತಾಂಶಗಳು ಪ್ರಕಟವಾಗುವ ಹಿಂದಿನ ದಿನವೇ ಜಾತಿಕಿರುಕುಳ-ದ್ವೇ಼ಷ ಪ್ರಚಾರಕ್ಕೆ ಬಲಿಯಾದ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಪಾಯಲ್ ‍ ತಡ್ವಿ ಆತ್ಮಹತ್ಯೆಯ ಬಗ್ಗೆ ದುಃಖ ವ್ಯಕ್ತಪಡಿಸಿದೆ.

ಈ ಸಭೆಯನಂತರ ಪ್ರಕಟಿಸಿರುವ ಸಿಪಿಐ(ಎಂ) ಕೇಂದ್ರಸಮಿತಿಯ ಹೇಳಿಕೆಯ ಪೂರ್ಣಪಾಟವನ್ನು ಈ ಮುಂದೆಕೊಡಲಾಗಿದೆ.

ಲೋಕ ಸಭಾಚುನಾವಣೆಗಳ ಪ್ರಾಥಮಿಕ ಪರಾಮರ್ಶೆ

ಬಿಜೆಪಿ ವಿಜಯ

17ನೇ ಲೋಕಸಭಾಚುನಾವಣೆಗಳ ತೀರ್ಪು ಬಿಜೆಪಿ ನೇತೃತ್ವದ ಎನ್‍.ಡಿ.ಎ. ಗೆ 2014ರಲ್ಲಿ ಗೆದ್ದುದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಮತ್ತು ಹೆಚ್ಚಿನ ಮತಗಳಿಕೆಯನ್ನು ಕೊಟ್ಟಿದೆ. ಇದು ಅವರ ಪರವಾದ ಒಂದು ನಿರ್ಣಾಯಕ ಜನಾದೇಶವಾಗಿದೆ. ಬಿಜೆಪಿ ಕಳೆದ ಐದುವರ್ಷಗಳಲ್ಲಿ ಹರಿಯಬಿಟ್ಟಿರುವ ಬಲಪಂಥೀಯ ದಾಳಿ ಈ ಜನಾದೇಶದೊಂದಿಗೆ ಕ್ರೋಡೀಕರಣಗೊಂಡಿದೆ.

ಪುಲ್ವಾಮ ಮತ್ತು ಬಾಲಾಕೋಟ್‍ ನಂತರ ಜನಗಳ ನಡುವೆ ಕಥನವನ್ನು ಕಳೆದ ಐದುವರ್ಷಗಳಲ್ಲಿ ಎನ್.ಡಿ.ಎ. ಸರಕಾರ ಹೇರಿದ ಹತ್ತು-ಹಲವು ಜೀವನಾಧಾರದ ಪ್ರಶ್ನೆಗಳಿಂದ ಪಲ್ಲಟಗೊಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸಂಕುಚಿತ ಕೋಮುವಾದಿ ರಾಷ್ಟ್ರವಾದಿ ಅಬ್ಬರದ ಹೊಸ ಕಥನಕ್ಕೆ ಹಲವಾರು ಅಂಶಗಳ ಮೂಲಕ ಮೋದಿಯ ವ್ಯಕ್ತಿತ್ವವನ್ನು ಕಟ್ಟಿದ್ದು ಇದಕ್ಕೆ ನೆರವಾಯಿತು. ಮಾಧ್ಯಮಗಳ ವಿಭಾಗಗಳು ಈ ಪ್ರಾಜೆಕ್ಟಿನಲ್ಲಿ ಪಾಲುದಾರರಾದವು. ಹಿಂದೆಂದೂ ಕಾಣದಂತಹ ಹಣಬಲದ ಬಳಕೆ ಈ ಚುನಾವಣೆಗಳಲ್ಲಿ ಕಂಡುಬಂತು. ಚುನಾವಣಾ ಬಾಂಡುಗಳ ಮೂಲಕ ಅಗಾಧ ಮೊತ್ತಗಳು ಬಿಜೆಪಿಗೆ ವರ್ಗಾಯಿಸಲ್ಪಟ್ಟವು. ಚುನಾವಣಾಆಯೋಗದ ಪಾತ್ರವೂತನ್ನಕೊಡುಗೆನೀಡಿತು.

ಪ್ರತಿಪಕ್ಷಗಳು

ಹೆಚ್ಚಿನ ಪ್ರತಿಪಕ್ಷಗಳು, ತಮಿಳುನಾಡು, ಆಂಧ್ರಪ್ರದೇಶ, ಇನ್ನು ಕೆಲವು ರಾಜ್ಯಗಳನ್ನು ಬಿಟ್ಟರೆ ಬೇರೆಡೆಗಳಲ್ಲಿ ದೊಡ್ಡ ನಷ್ಟವನ್ನು ಕಂಡಿವೆ. ಪ್ರತಿಪಕ್ಷಗಳು, ನಿರ್ದಿಷ್ಟವಾಗಿ ಕಾಂಗ್ರೆಸ್‍, ಚುನಾವಣೆಗಳ ಮೊದಲು ಮುಂದಿಟ್ಟ ಜಾತ್ಯತೀತ ಪ್ರತಿಪಕ್ಷಗಳ ಐಕ್ಯತೆಯನ್ನು ಪ್ರಸ್ತುತ ಪಡಿಸುವಲ್ಲಿ ವಿಫಲವಾದವು. ಕೋಮುವಾದಿದಾಳಿಗೆ ಎದುರಾಗಿ ಜಾತ್ಯತೀತತೆಯನ್ನು ರಕ್ಷಿಸಿಕೊಳ್ಳುವ ಒಂದು ಪ್ರಚಾರಾಂದೋಲನವನ್ನು ನಡೆಸಲಿಲ್ಲ. ಕಟ್ಟಾಹಿಂದುತ್ವಕ್ಕೆ ಮೆದುಹಿಂದುತ್ವ ಉತ್ತರವಲ್ಲ. ಹಿಂದುತ್ವ ಮತ್ತು ಜಾತ್ಯತೀತತೆಯ ನಡುವಿನ ಸೈದ್ಧಾಂತಿಕ ಸಮರವನ್ನು ಶಕ್ತಿಯುತವಾಗಿ ನಡೆಸಲಿಲ್ಲ.

ಸಿಪಿಐ(ಎಂ) ಮತ್ತು ಎಡಶಕ್ತಿಗಳಿಗೆ ತೀವ್ರಪರಾಭವ

ಸಿಪಿಐ(ಎಂ) ಮತ್ತು ಎಡಶಕ್ತಿಗಳು ಒಂದು ತೀವ್ರ ಹಿನ್ನಡೆಯನ್ನು, ವಿಶೇಷವಾಗಿ ಕೇರಳ, ಪಶ್ಚಿಮಬಂಗಾಲ ಮತ್ತು ತ್ರಿಪುರಾದಲ್ಲಿನ ತಮ್ಮ ಬಲಿಷ್ಟನೆಲೆಗಳಲ್ಲಿ, ಅನುಭವಿಸಿವೆ.ಪಶ್ಚಿಮಬಂಗಾಲ ಮತ್ತು ತ್ರಿಪುರಾ ಈ ಎರಡರಲ್ಲೂ ಚುನಾವಣೆಗಳು ತೀವ್ರಭಯೋತ್ಪಾದನೆ ಮತ್ತು ಹಿಂಸಾಚಾರದ ವಾತಾವರಣದಲ್ಲಿ ನಡೆದವು. ಇಂತಹ ಹಿಂಸಾಚಾರದಲ್ಲಿ ಪಶ್ಚಿಮಬಂಗಾಲದಲ್ಲಿ ಐವರು ಮತ್ತು ತ್ರಿಪುರಾದಲ್ಲಿ ಒಬ್ಬರು ಸಿಪಿಐ(ಎಂ) ಕಾರ್ಯಕರ್ತರು ಜೀವ ಕಳಕೊಂಡಿದ್ದಾರೆ.

ತ್ರಿಪುರಾ ಪಶ್ಚಿಮಕ್ಷೇತ್ರ ಮತ್ತು ಪಶ್ಚಿಮಬಂಗಾಲದ ಡೈಮಂಡ್‍ ಹಾರ್ಬರ್‍ ಕ್ಷೇತ್ರದಲ್ಲಿ ಬಹುಪಾಲು ಮತಗಟ್ಟೆಗಳಲ್ಲಿ ಚುನಾವಣಾ ಮೋಸನಡೆದಿದೆ, ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ದೂಷಿತಗೊಂಡಿದೆ. ಚುನಾವಣಾ ಆಯೋಗಕ್ಕೆ “ಮುಕ್ತ ಮತ್ತು ನ್ಯಾಯಯುತ ಮತದಾನ”ಗಳನ್ನು ನಡೆಸುವ ತನ್ನ ಆಶ್ವಾಸನೆಯನ್ನು ಜಾರಿಗೊಳಿಸಲು ಆಗಲಿಲ್ಲ.

ಈ ಮೂರು ರಾಜ್ಯಸಮಿತಿಗಳು ನಡೆಸಿರುವ ಪ್ರಾಥಮಿಕ ವಿಮರ್ಶೆಗಳನ್ನು ಕೇಂದ್ರಸಮಿತಿ ಚರ್ಚಿಸಿತು. ಒಂದು ವಿವರವಾದ ಮತಗಟ್ಟೆವಾರು ವಿಮರ್ಶೆ ನಡೆಯುತ್ತಿದ್ದು, ಅದರ ಆಧಾರದಲ್ಲಿ ಅಂತಿಮ ಅನುಭವಗಳ ಮೌಲ್ಯಮಾಪನ ಮಾಡಲಾಗುವುದು.

ಈ ಚುನಾವಣೆಗಳಲ್ಲಿ, ಬಿಜೆಪಿ ಮತ್ತು ಅದರ ಮಿತ್ರರನ್ನು ಸೋಲಿಸಬೇಕು, ಸಂಸತ್ತಿನಲ್ಲಿ ಎಡಪಕ್ಷಗಳ ಬಲವನ್ನು ಹೆಚ್ಚಿಸಬೇಕು ಮತ್ತು ಕೇಂದ್ರದಲ್ಲಿ ಒಂದು ಪರ್ಯಾಯ ಜಾತ್ಯತಿತ ಸರಕಾರವನ್ನು ಸ್ಥಾಪಿಸಲು ಅನುವುಮಾಡಿಕೊಡಬೇಕು ಎಂದು ಸಿಪಿಐ(ಎಂ) ಕರೆನೀಡಿತ್ತು. ಈ ಧ್ಯೇಯೋದ್ದೇಶಗಳನ್ನು ಈ ಜನಾದೇಶ ನಿರಾಕರಿಸಿದೆ.

ಕೇರಳದಲ್ಲಿ ಮತದಾರರು ಒಂದು ಪರ್ಯಾಯ ಜಾತ್ಯತೀತ ಸರಕಾರವನ್ನು ರಚಿಸುವಲ್ಲಿ ಕಾಂಗ್ರೆಸ್‍ ಗೇ ಸಾಧ್ಯತೆ ಹೆಚ್ಚು ಎಂದು ಭಾವಿಸಿದರು. ಇದರ ಫಲಿತಾಂಶವಾಗಿ ಜಾತ್ಯತೀತ ಒಲವಿನ ಜನಗಳು ಮತ್ತು ಅಲ್ಪಸಂಖ್ಯಾತರು ಅವರಿಗೆ ಮತ ನೀಡುವಂತಾಯಿತು. ಶಬರಿಮಲೆ ಕುರಿತ ಸುಪ್ರಿಂಕೋರ್ಟ್‍ ತೀರ್ಪನ್ನು ಜಾರಿಗೊಳಿಸಲು ಬದ್ಧವಾಗಿದ್ದ ಎಲ್‍.ಡಿ. ಎಫ್‍. ಸರಕಾರದ ಸರಿಯಾದ ನಿಲುವನ್ನು ಕುರಿತಂತೆ ಬಿಜೆಪಿ ಮತ್ತು ಯುಡಿಎಫ್ ಆಸ್ತಿಕ ಜನ ವಿಭಾಗಗಳಲ್ಲಿ ಹಲವರಲ್ಲಿ ತಪ್ಪುಕಲ್ಪನೆಗಳನ್ನು ಸೃಷ್ಟಿಸಿದವು. ಈ ವಿಭಾಗಗಳನ್ನು ಮತ್ತೆ ನಮ್ಮತೆಕ್ಕೆಗೆ ತರಲು ಪಕ್ಷವು ಸರ್ವಪ್ರಯತ್ನಗಳನ್ನು ನಡೆಸುತ್ತದೆ.

ಪಶ್ಚಿಮಬಂಗಾಲದಲ್ಲಿ ಚುನಾವಣೆಗಳು ಅತ್ಯಂತ ಧ್ರುವೀಕೃತ ವಾತಾವರಣದಲ್ಲಿ ನಡೆದಿವೆ. ಮಾಧ್ಯಮ ಒಂದು ಅವಳಿಕಥನವನ್ನು ಕಟ್ಟಿ ಟಿಎಂಸಿ ಮತ್ತು ಬಿಜೆಪಿ ನಡುವೆ ಇಂತಹ ಧ್ರುವೀಕರಣದಲ್ಲಿ ನೆರವಾಗುವಲ್ಲಿ ಒಂದು ದೊಡ್ಡಪಾತ್ರವನ್ನು ವಹಿಸಿತು. ಕೋಮುವಾದ ಪ್ರೇರಿತ ಪ್ರಚಾರವು ಮತದಾರರನ್ನು ಮತ್ತಷ್ಟು ಧ್ರುವೀಕರಿಸಿತು. ಟಿಎಂಸಿ ವಿರುದ್ಧ ಅಧಿಕಾರ ಸ್ಥ-ವಿರೋಧಿ ಭಾವನೆ ಬಹಳಗಟ್ಟಿಯಾಗಿತ್ತು. ಅದಕ್ಕೆ ಸಿಪಿಐ(ಎಂ) ಮತ್ತು ಎಡಶಕ್ತಿಗಳು ಪರ್ಯಾಯ ಎಂದು ಮತದಾರರು ಕಾಣಲಿಲ್ಲ, ಇದರಿಂದಾಗಿ ನಮ್ಮ ಪಾರಂಪರಿಕ ಬೆಂಬಲಿಗರಲ್ಲಿ ಒಂದು ವಿಭಾಗ ಪಲ್ಲಟಗೊಳ್ಳುವಂತಾಯಿತು. ಬಜೆಪಿ-ವಿರೋಧಿ, ಟಿಎಂಸಿ-ವಿರೋಧಿ ಮತಗಳನ್ನು ಗರಿಷ್ಟ ಪ್ರಮಾಣದಲ್ಲಿ ಕ್ರೋಡೀಕರಿಸುವ ಎಡಪಕ್ಷಗಳ ಪ್ರಸ್ತಾವವನ್ನು ಸ್ವೀಕರಿಸಲು ಕಾಂಗ್ರೆಸ್‍ ನಿರಾಕರಿಸಿದ್ದು ಈ ಅವಳಿ ಕಥನವನ್ನು ಗಟ್ಟಿಗೊಳಿಸಿತು.

ತ್ರಿಪುರಾದಲ್ಲಿ ಎರಡರಲ್ಲಿ ಒಂದು ಸ್ಥಾನದಲ್ಲಿ ಸುಮಾರಾಗಿ ಚುನಾವಣಾ ಮೋಸವೇ ನಡೆದಿದೆ. ಮೀಸಲು ಎಸ್‍.ಟಿ. ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ, ಕಾಂಗ್ರೆಸ್‍ ಎರಡನೇ ಸ್ಥಾನಪಡೆದಿದೆ.

ಈ ಎರಡೂ ರಾಜ್ಯಗಳಲ್ಲಿ ಪಕ್ಷದಸಮಿತಿಗಳು ನಮ್ಮ ಪಾರಂಪರಿಕ ಬೆಂಬಲ ನೆಲೆಕುಗ್ಗುತ್ತಿರುವ ಬಗ್ಗೆ ಪ್ರಾಮಾಣಿಕ ಮೌಲ್ಯಮಾಪನ ನಡೆಸುತ್ತಿವೆ ಮತ್ತು ಈ ವಿಭಾಗಗಳನ್ನು ಮತ್ತೆ ನಮ್ಮತೆಕ್ಕೆಗೆ ತರಲು ತುರ್ತುಕ್ರಮಗಳನ್ನು ರೂಪಿಸಲಾಗುವುದು.

ಈ ಬಲಿಷ್ಟ ನೆಲೆಗಳ ಹೊರಗೆ, ಸಿಪಿಐ(ಎಂ) ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಚುನಾವಣಾ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿದ್ದ ಎರಡೂಸ್ಥಾನಗಳನ್ನು ಗೆದ್ದುಕೊಂಡಿದೆ. ಬೇರೆಲ್ಲ ರಾಜ್ಯಗಳಲ್ಲಿ ಸಿಪಿಐ(ಎಂ) ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಈ ಸ್ಥಾನಗಳಲ್ಲಿ, ಮಹಾರಾಷ್ಟ್ರದ ದಿಂಡೋರಿ ಕ್ಷೇತ್ರದಲ್ಲಿ ಅತಿಹೆಚ್ಚು ಅಂದರೆ 1,09,570 ಮತಗಳನ್ನು ಪಡೆದಿದೆ. ಒಡಿಶಾ ವಿಧಾನಸಭೆಯ ಚುನಾವಣೆಗಳಲ್ಲಿ ಸಿಪಿಐ(ಎಂ) ತನ್ನ ಬೊನೈ ಕ್ಷೇತ್ರವನ್ನು, ಕಳೆದ ಬಾರಿಗಿಂತ 20,000 ಹೆಚ್ಚುಮತಗಳನ್ನು (34.67%) ಗಳಿಸಿ ಉಳಿಸಿಕೊಂಡಿದೆ.

ಪಕ್ಷದ ಸ್ವತಂತ್ರ ಶಕ್ತಿ ಮತ್ತು ರಾಜಕೀಯ ಮಧ್ಯಪ್ರವೇಶದ ಸಾಮರ್ಥ್ಯಗಳು ದುರ್ಬಲಗೊಳ್ಳುತ್ತಲೇ ಇವೆ ಎಂದು ಕೇಂದ್ರಸಮಿತಿ ಗಮನಿಸಿತು. ಇಂತಹ ಒಂದು ಪ್ರವೃತ್ತಿ ಆಳಗೊಳ್ಳಲು ಕಾರಣವಾಗಿರುವ ವಿವಿಧ ಅಂಶಗಳನ್ನು ಕೇಂದ್ರ ಸಮಿತಿ ಚರ್ಚಿಸಿತು. ಮತ್ತು ಈ ಅವನತಿಯನ್ನು ತಡೆಯಲು ಹಾಗೂ ತಿರುಗುಮುರುಗುಗೊಳಿಸಲು ಪಕ್ಷವುಕೈಗೊಳ್ಳುವ ತಕ್ಷಣದ ಸಂಘಟನಾತ್ಮಕ ಮತ್ತು ರಾಜಕೀಯ ಕ್ರಮಗಳನ್ನು ರೂಪಿಸಿತು.

ಚುನಾವಣೆಗಳ ನಂತರದ ಸವಾಲುಗಳು

ಈ ನಿರ್ಣಾಯಕ ಬಿಜೆಪಿ ವಿಜಯವು ಖಂಡಿತವಾಗಿಯೂ ಒಡ್ಡಲಿರುವ ಸವಾಲುಗಳನ್ನು ಎದುರಿಸಲು ದೇಶ ಮತ್ತು ಜನತೆ ಸಿದ್ಧರಾಗಬೇಕಾಗಿದೆ ಎಂಬ ತೀರ್ಮಾನಕ್ಕೆ ಕೇಂದ್ರಸಮಿತಿ ಬಂದಿದೆ. ಕೇಂದ್ರಸಮಿತಿ ಇಂತಹ ನಾಲ್ಕು ಸವಾಲುಗಳನ್ನು ಗಮನಿಸಿದೆ.

  1. ಬಿಜೆಪಿ ಈ ನಿರ್ಣಾಯಕ ವಿಜಯವನ್ನು ಅಭೂತಪೂರ್ವ ಹಣಬಲ ಮತ್ತು ಅಂತರ್ರಾಷ್ಟ್ರೀಯ ಹಾಗೂ ದೇಶೀಕಾರ್ಪೊರೇಟ್ಗಳ ಸಂಪೂರ್ಣ ಬೆಂಬಲದಿಂದ ಗೆದ್ದಿದೆ. ದೊಡ್ಡವ್ಯವಹಾರಸ್ಥರು ಮತ್ತು ಶ್ರೀಮಂತರಿಗೆ ಅನುಕೂಲಕರವಾದ ಜನ-ವಿರೋಧಿ ಆರ್ಥಿಕ ಸುಧಾರಣೆಗಳ ದಿಕ್ಪಥವನ್ನು ಅದು ಇನ್ನಷ್ಟು ತೀವ್ರಗೊಳಿಸಲು ಬಹುಪಾಲು ಜನತೆಯ ಮೇಲೆ ಮತ್ತಷ್ಟು ಹೆಚ್ಚಿನ ಸಂಕಟಗಳನ್ನು ಖಂಡಿತವಾಗಿಯೂ ಹೇರುತ್ತದೆ. ಇಂತಹ ಆರ್ಥಿಕ ಹೊಡೆತಗಳ ವಿರುದ್ಧ ಹೋರಾಟಗಳಲ್ಲಿ ಗರಿಷ್ಟ ಜನವಿಭಾಗಗಳನ್ನು ಅಣಿನೆರೆಸುವಲ್ಲಿ ಪಕ್ಷವು ನೇತೃತ್ವ ನೀಡುತ್ತದೆ.
  2. ಹಿಂದುತ್ವ ಕೋಮುವಾದಿ ಧ್ರುವೀಕರಣದ ಕ್ರೋಡೀಕರಣದಿಂದಾಗಿ ಧಾರ್ಮಿಕ ಮತ್ತು ಭಾಷಿಕ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಹೆಚ್ಚೆಚ್ಚು ಹಲ್ಲೆಗಳು ನಡೆಯಲಿವೆ, ಇದರಿಂದಾಗಿ, ಈ ಜನ ವಿಭಾಗಗಳ ಭದ್ರತೆ ಮತ್ತು ಜೀವನಾಧಾರ ಕುರಿತ ಆತಂಕಗಳು ಇನ್ನಷ್ಟು ಹದಗೆಡಲಿವೆ. ನಮ್ಮ ಸಂವಿಧಾನದಲ್ಲಿ ಪ್ರತಿಷ್ಟಾಪಿಸಿರುವ ಜಾತ್ಯತೀತತೆಯನ್ನು ರಕ್ಷಿಸುವ ಮತ್ತು ಬಲಪಡಿಸುವ ಕೆಲಸವನ್ನು ಪಕ್ಷವು ಈ ಹೋರಾಟಗಳಲ್ಲಿ ಸಾಕಷ್ಟು ವಿಶಾಲ ಪ್ರಮಾಣದಲ್ಲಿ ಜನವಿಭಾಗಗಳನ್ನು ಸೆಳೆದುಕೊಂಡು ಕೈಗೆತ್ತಿಕೊಳ್ಳುತ್ತದೆ.
  3. ಕಳೆದ ಐದುವರ್ಷಗಳಲ್ಲಿ ಎಲ್ಲಸಂವಿಧಾನಿಕ ಅಧಿಕಾರ ಪಡೆದಿರುವ ಸಂಸ್ಥೆಗಳಲ್ಲಿ ನಡೆದಿರುವ ಆರೆಸ್ಸೆಸ್‍ ನ ನುಸುಳಿಕೆ ಇನ್ನಷ್ಟು ತೀವ್ರಗೊಳ್ಳುವುದು ಖಂಡಿತ. ಇದು, ಸಂವಿಧಾನಿಕ ಗಣತಂತ್ರವನ್ನು ಆರೆಸ್ಸೆಸ್‍ ನ ಸೈದ್ಧಾಂತಿಕ ಯೋಜನೆಯಾದ ‘ಹಿಂದೂರಾಷ್ಟ್ರ’ವಾಗಿ ಪರಿವರ್ತಿಸಲು ಅನುವುಮಾಡಿಕೊಳ್ಳುವುದಕ್ಕಾಗಿ, ಇಂತಹ ಸಂವಿಧಾನಿಕ ಪ್ರಾಧಿಕಾರಗಳನ್ನು ಶಿಥಿಲಗೊಳಿಸುವ ದಿಕ್ಕಿನಲ್ಲಿ ಸಾಗಲಿದೆ. ಎಲ್ಲ ಸಂವಿಧಾನಿಕ ಪ್ರಾಧಿಕಾರಗಳನ್ನು ರಕ್ಷಿಸುವ ಮತ್ತು ಬಲಪಡಿಸುವ ಕೆಲಸವನ್ನು ಸಿಪಿಐ(ಎಂ) ಈ ಹೋರಾಟಗಳಲ್ಲಿ ಜತೆಗೂಡಲು ಸಿದ್ಧವಿರುವ ಇತರ ಎಲ್ಲ ಶಕ್ತಿಗಳೊಂದಿಗೆ ಪ್ರತಿಪಾದಿಸುತ್ತದೆ.
  4. ಬಿಜೆಪಿಯ ವಿಜಯವು ಭಾರತದಲ್ಲಿ ಒಂದು “ಭದ್ರತಾ’ ಪ್ರಭುತ್ವವನ್ನು ಸ್ಥಾಪಿಸುವ ಅಗತ್ಯವಿದೆಯೆಂಬುದರತ್ತ ಗಮನ ಕೇಂದ್ರೀಕರಿಸಿತ್ತು. ಇದರಿಂದಾಗಿ ವ್ಯಕ್ತಿಗಳ ಹಕ್ಕುಗಳನ್ನು, ನಿರ್ದಿಷ್ಟವಾಗಿ ಭಿನ್ನಾಭಿಪ್ರಾಯದ ಹಕ್ಕನ್ನುತೀವ್ರವಾಗಿ ಮೊಟಕುಗೊಳಿಸಲಾಗುತ್ತದೆ. ಈಗಾಗಲೇ ಅನಿಷ್ಟಕಾರಿ ಸಂಕೇತಗಳು ಕಾಣುತ್ತಿವೆ. ಒಂದಿಲ್ಲೊಂದುನೆ ಪದಲ್ಲಿ ದಲಿತರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಖಾಸಗಿಪಡೆಗಳ ಹಲ್ಲೆಗಳು ತೀವ್ರಗೊಳ್ಳಲಿವೆ. ದುಡಿಯುವ ಜನಗಳ ಮತ್ತು ಧಾರ್ಮಿಕ, ಭಾಷಿಕ ಅಲ್ಪಸಂಖ್ಯಾತರ ಹಕ್ಕುಗಳು ದಾಳಿಗೆ ಒಳಗಾಗಲಿವೆ, ಅವರ ಬೇಟೆ ನಡೆಯಲಿದೆ.

ಈ ಸವಾಲುಗಳನ್ನುನೇರವಾಗಿ ಎದುರಿಸಲು, ಪ್ರಜಾಪ್ರಭುತ್ವ ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ನೆಚ್ಚಿಕೊಂಡಿರುವ ಸಾಧ್ಯವಾದಷ್ಟು ವಿಶಾಲವಾದ ಜನವಿಭಾಗಗಳನ್ನು ಅಣಿ ನೆರೆಸುವಲ್ಲಿ ಸಿಪಿಐ(ಎಂ) ನೇತೃತ್ವವಹಿಸುತ್ತದೆ.

ಕಾರ್ಯಭಾರಗಳು

ಪಕ್ಷಕ್ಕೆ ಈ ಹಿನ್ನಡೆಯಿಂದಾಗಿ ಉಂಟಾಗಿರುವ ಗಂಭೀರ ಸನ್ನಿವೇಶವನ್ನು ಎದುರಿಸಲು ಕೇಂದ್ರಸಮಿತಿ ಹಲವಾರು ಕ್ರಮಗಳನ್ನು ಮತ್ತು ಕಾರ್ಯಭಾರಗಳನ್ನು ಅಂಗೀಕರಿಸಿದೆ.

  1. ಜನಗಳೊಂದಿಗೆ ಸಂಪರ್ಕವನ್ನು ಆಳಗೊಳಿಸಲು ಮತ್ತು ವಿವಿಧರಂಗಗಳ ಚಟುವಟಿಕೆಗಳನ್ನು ಬಲಪಡಿಸಲು ನಿರ್ದಿಷ್ಟಕ್ರಮಗಳನ್ನು ನಿರ್ಧರಿಸಲಾಗಿದೆ. ಜೀವನಾಧಾರದ ಪ್ರಶ್ನೆಗಳನ್ನು ಕುರಿತ ಹೋರಾಟಗಳನ್ನು, ಪರಿಶಿಷ್ಟಜಾತಿಗಳು, ಪರಿಶಿಷ್ಟ ಬುಡಕಟ್ಟುಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಸಾಮಾಜಿಕ ದಮನದ ವಿರುದ್ಧ ಹೋರಾಟಗಳೊಂದಿಗೆ ಸಮಗ್ರೀಕರಿಸಲು ನಿರ್ದಿಷ್ಟ ಗಮನವನ್ನು ಕೊಡಲಾಗುವುದು.
  2. ಪಕ್ಷವು 2015ರಲ್ಲಿ ಕೊಲ್ಕತಾಪ್ಲೀನಂನಲ್ಲಿ ಅಂಗೀಕರಿಸಿದ ಪಕ್ಷದ ಸಂಘಟನೆ ಮತ್ತು ಅದರ ಕಾರ್ಯವೈಖರಿ ಕುರಿತ ಮಹತ್ವದ ನಿರ್ಣಯಗಳ ಜಾರಿಯ ಒಂದು ಪರಾಮರ್ಶೆಯನ್ನು ನಡೆಸುತ್ತದೆ. ಆಗಸ್ಟ್ಕೊನೆಯ ವೇಳೆಗೆ ರಾಜ್ಯಗಳು ಈ ಪರಾಮರ್ಶೆಯನ್ನು ಪೂರ್ಣಗೊಳಿಸಲಿದ್ದು, ಇದರ ಆಧಾರದಲ್ಲಿ ಪಕ್ಷವನ್ನು ಬಲಿಷ್ಟಗೊಳಿಸುವ ಮತ್ತು ನಮ್ಮ ಕಾರ್ಯಕರ್ತರಲ್ಲಿ ಹುರುಪು ತುಂಬುವ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
  3. ಈ ಚುನಾವಣೆಗಳ ಅನುಭವವು ವ್ಯಾಪಕವಾದ ಚುನಾವಣಾ ಸುಧಾರಣೆಗಳ ಅಗತ್ಯವನ್ನು, ಚುನಾವಣಾ ಆಯೋಗವನ್ನು ಸುಧಾರಿಸಬೇಕಾದ ತುರ್ತನ್ನು ತೋರಿದೆ. ಚುನಾವಣಾ ಆಯುಕ್ತರುಗಳನ್ನು ತತ್ಕಾಲೀನ ಸರಕಾರ ನೇಮಿಸುವ ಬದಲು ಭಾರತದ ರಾಷ್ಟ್ರಪತಿಗಳ ನೇತೃತ್ವದ ಒಂದು ವ್ಯವಸ್ಥೆಯ ಮೂಲಕ ನೇಮಿಸುವಂತೆ ಮಾಡಲು, ಇದನ್ನು ಒಪ್ಪುವ ಎಲ್ಲ ರಾಜಕಿಯ ಅಭಿಪ್ರಾಯದವರನ್ನು ಸಿಪಿಐ(ಎಂ) ಅಣಿನೆರೆಸುತ್ತದೆ.
  4. ಇಲೆಕ್ಟ್ರಾನಿಕ್ಮತಯಂತ್ರ(ಇವಿಎಂ)ಗಳ ತಟಸ್ಥತೆಯ ಕುರಿತಂತೆ ಇರುವ ವಿವಿಧ ದೂರುಗಳು ಮತ್ತು ಈ ಯಂತ್ರಗಳಲ್ಲಿ ಕೈಯಾಡಿಸುವ ಸಾಧ್ಯತೆಯ ಬಗ್ಗೆ ಎದ್ದಿರುವ ಸಂದೇಹಗಳನ್ನು ಕುರಿತ ವರದಿಗಳ ಒಂದು ಅಧ್ಯಯನವನ್ನು ಸಿಪಿಐ(ಎಂ) ನಡೆಸುತ್ತದೆ ಮತ್ತು ಇತರ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮಗಳನ್ನು ನಿರ್ಧರಿಸುತ್ತದೆ.

ಜಾತ್ಯತೀತ ಚಿಂತಕ ಡಾ. ರಾಮ್‍ ಪುನಿಯಾನಿಯವರಿಗೆ ಚುನಾವಣೆಗಳ ನಂತರ ಬೆದರಿಕೆಯ ಕರೆಗಳನ್ನು ಮಾಡಿರುವುದನ್ನು ಕೇಂದ್ರ ಸಮಿತಿ ಖಂಡಿಸಿದೆ.ಒಬ್ಬ ಯುವಪರಿಶಿಷ್ಟ ಬುಡಕಟ್ಟಿನ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಡಾ. ಪಾಯಲ್‍ ತಡ್ವಿಯ ಆತ್ಮಹತ್ಯೆಯ ಬಗ್ಗೆ ಕೇಂದ್ರ ಸಮಿತಿ ತನ್ನ ದುಃಖವನ್ನು ವ್ಯಕ್ತಪಡಿಸಿದೆ. ಜಾತಿ ಕಿರುಕುಳಗಳು ಆಕೆಯನ್ನು ಆತ್ಮಹತ್ಯೆಯ ತ್ತತಳ್ಳಿದವು. ಮಹಾರಾಷ್ಟ್ರ ರಾಜ್ಯ ಸರಕಾರ ಅಪರಾಧಿಗಳ ವಿರುದ್ಧ ಮತ್ತು ಇಂತಹ ದ್ವೇಷಪ್ರಚಾರಗಳನ್ನು ಹುಟ್ಟಿಹಾಕುವವರ ವಿರುದ್ಧ ದೃಢವಾದ ಕ್ರಮವನ್ನು ಕೈಗೊಳ್ಳಬೇಕು.

ಕೃಪೆ : ಜನಶಕ್ತಿ

ಸುದ್ದಿದಿನ.ಕಾಂ|ವಾಟ್ಸಾಪ್| 9980346243

ದಿನದ ಸುದ್ದಿ

ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!

Published

on

ಆಗಸ್ಟ್ 2023 ರಿಂದ ಜುಲೈ 2026 ರವರೆಗೆ ₹28,759 ಕೋಟಿ ಸಬ್ಸಿಡಿ ಬಿಡುಗಡೆ; ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್‌ನಿಂದ ಕೋಟ್ಯಂತರ ಕುಟುಂಬಗಳ ಆರ್ಥಿಕ ಸಬಲೀಕರಣ

ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.

ಹೌದು! 2023ರ ಆಗಸ್ಟ್‌ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.

http://Visit : www.suddidina.com

ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ: 

ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.

ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.

ಕುಟುಂಬದ ಬಜೆಟ್‌ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:

ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.

ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

Continue Reading

ದಿನದ ಸುದ್ದಿ

ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!

Published

on

ಕರ್ನಾಟಕದ ವೈಟ್‌ಫೀಲ್ಡ್-ಬಂಗಾರಪೇಟೆ, ಹೊಸೂರು-ಓಮಲೂರು ಮಾರ್ಗ ಸೇರಿ 9 ರಾಜ್ಯಗಳ 1200 ಕಿ.ಮೀ ರೈಲು ಜಾಲ ವಿಸ್ತರಣೆಗೆ ಪ್ರಧಾನಿ ಮೋದಿ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಅನುಮೋದನೆ

ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು ಜಿಲ್ಲೆಗಳನ್ನು ಸಂಪರ್ಕಿಸುವ 20,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ 8 ಬಹು ಟ್ರ್ಯಾಕಿಂಗ್ (Multi-Tracking) ರೈಲು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ (ಸೆ.09) ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಯೋಜನೆಗಳು ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅನುಷ್ಠಾನಗೊಳ್ಳಲಿವೆ.

http://Visit : www.suddidina.com

ಈ ಯೋಜನೆಗಳಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವು ಬರೋಬ್ಬರಿ 1,200 ಕಿಲೋಮೀಟರ್‌ಗಳಷ್ಟು ವಿಸ್ತರಣೆಯಾಗಲಿದೆ. ಇದರಿಂದ 6,900ಕ್ಕೂ ಹೆಚ್ಚು ಗ್ರಾಮಗಳಿಗೆ ಸುಧಾರಿತ ಸಂಪರ್ಕ ಸಿಗಲಿದ್ದು, ರೈಲುಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಗಣನೀಯವಾಗಿ ಹೆಚ್ಚಾಗಲಿದೆ.

ಯಾವೆಲ್ಲ ಯೋಜನೆಗಳಿಗೆ ಅನುಮೋದನೆ?
ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಪ್ರಮುಖ ಯೋಜನೆಗಳು ಹೀಗಿವೆ:

1. ಅರಾಕೋಣಂ-ರೇಣಿಗುಂಟಾ ಮತ್ತು ವೈಟ್‌ಫೀಲ್ಡ್-ಬಂಗಾರಪೇಟೆ ನಡುವೆ 3 ಮತ್ತು 4ನೇ ಮಾರ್ಗ: ಇದು ಕರ್ನಾಟಕ ಮತ್ತು ತಮಿಳುನಾಡು, ಆಂಧ್ರಪ್ರದೇಶಕ್ಕೆ ಅತ್ಯಂತ ಮಹತ್ವದ ಯೋಜನೆಯಾಗಿದೆ.

2. ಸಿಕಂದರಾಬಾದ್-ಕಾಜಿಪೇಟೆ ನಡುವೆ ಮಲ್ಟಿ ಟ್ರ್ಯಾಕಿಂಗ್: ತೆಲಂಗಾಣದ ಪ್ರಮುಖ ಮಾರ್ಗದ ದಟ್ಟಣೆ ಕಡಿಮೆ ಮಾಡಲಿದೆ.

3. ಹೊಸೂರು-ಓಮಲೂರು, ಸೇಲಂ-ಕರೂರ್-ದಿಂಡಿಗಲ್ ಜೋಡಿ ಹಳಿ ಯೋಜನೆ: ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದ ಸಂಪರ್ಕವನ್ನು ಬಲಪಡಿಸಲಿದೆ.

4. ಖರಗ್‌ಪುರ-ಝಾರ್ಸುಗುಡ ಮತ್ತು ಕತ್ನಿ-ಪೆಂದ್ರ ರಸ್ತೆ ನಡುವೆ 4ನೇ ಮಾರ್ಗ ಮತ್ತು ಬಿಲಾಸ್‌ಪುರ್-ಪೆಂದ್ರ ರಸ್ತೆ ನಡುವೆ 3ನೇ ಮಾರ್ಗ: ಛತ್ತೀಸ್‌ಗಢ, ಒಡಿಶಾ, ಮಧ್ಯಪ್ರದೇಶದ ಕಲ್ಲಿದ್ದಲು ಮತ್ತು ಖನಿಜ ಸಾಗಣೆಗೆ ಸಹಕಾರಿಯಾಗಲಿದೆ.

ಈ ಎಲ್ಲಾ ಯೋಜನೆಗಳು ಕರ್ನಾಟಕ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಛತ್ತೀಸ್‌ಗಢ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಳ್ಳಲಿವೆ.

ಕರ್ನಾಟಕಕ್ಕೆ ಏನು ಲಾಭ?

ಈ ಬಹು ಟ್ರ್ಯಾಕಿಂಗ್ ಯೋಜನೆಗಳಿಂದ ಕರ್ನಾಟಕಕ್ಕೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ.ಕೈಗಾರಿಕೆಗಳಿಗೆ ಅನುಕೂಲ: ರಾಜ್ಯದ ಉಕ್ಕು ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳಾದ ಖನಿಜ ಸಾಗಿಸಲು ವಾಡಿ-ತಂದೂರು, ಮೋಟುಮಾರಿ-ವಿಷ್ಣುಪುರಂ ಮಾರ್ಗದಲ್ಲಿನ ಅಭಿವೃದ್ಧಿಯಿಂದ ಹೆಚ್ಚಿನ ಅನುಕೂಲವಾಗಲಿದೆ. ಹೂಟಗಿ, ಕೂಡಗಿ, ಯಾದ್ಲಾಪುರ, ಬಳ್ಳಾರಿ ಮತ್ತು ಯರಮರಸ್‌ನಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಣೆ ಇನ್ನಷ್ಟು ವೇಗ ಮತ್ತು ಸುಲಭವಾಗಲಿದೆ.

ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ದಟ್ಟಣೆ ಕಡಿಮೆ: ವೈಟ್‌ಫೀಲ್ಡ್-ಬಂಗಾರಪೇಟೆ ನಡುವಿನ 47 ಕಿ.ಮೀ ಉದ್ದದ 3 ಮತ್ತು 4ನೇ ಮಾರ್ಗವು ಅತ್ಯಂತ ದಟ್ಟಣೆಯ ಮನ್ಮಾಡ-ಹುಬ್ಬಳ್ಳಿ-ಬೆಂಗಳೂರು-ಜೋಳರಪೇಟೆ ವಿಭಾಗದಡಿ ಬರುತ್ತದೆ. ಇದು ಬೆಂಗಳೂರು-ಚೆನ್ನೈ ನಡುವಿನ ರೈಲು ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಿ, ಹೆಚ್ಚಿನ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ.

ಪ್ರವಾಸೋದ್ಯಮ ಮತ್ತು ಸರಕು ಸಾಗಣೆಗೆ ಉತ್ತೇಜನ: ಹೊಸೂರು-ಓಮಲೂರು ಜೋಡಿ ಹಳಿ ಮಾರ್ಗದಿಂದ ಕನ್ಯಾಕುಮಾರಿ, ರಾಮೇಶ್ವರಂನಂತಹ ಪುಣ್ಯಕ್ಷೇತ್ರಗಳಿಗೆ ತೆರಳುವ ಲಕ್ಷಾಂತರ ಯಾತ್ರಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಸರಕು ಸಾಗಣೆಯೂ ವೇಗವಾಗಲಿದೆ.ಒಟ್ಟಾರೆಯಾಗಿ, ಈ ಯೋಜನೆಗಳು ಕೇವಲ ರೈಲು ಮಾರ್ಗಗಳ ವಿಸ್ತರಣೆಯಷ್ಟೇ ಅಲ್ಲ, ದೇಶದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಪ್ರಾದೇಶಿಕ ಸಂಪರ್ಕಕ್ಕೆ ಹೊಸ ಶಕ್ತಿ ತುಂಬಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Continue Reading

ದಿನದ ಸುದ್ದಿ

ಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು

Published

on

ಸೆ.10 ರಂದು ವಿಧಾನಸೌಧದಲ್ಲಿ ಶತದಿನೋತ್ಸವ ಸಮಾರಂಭ; ಮಾಜಿ ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ, ಗ್ಯಾರಂಟಿ ಫಲಾನುಭವಿಗಳೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಸಂವಾದ

ಸುದ್ದಿದಿನ, ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಶತಕದ ಸಂಭ್ರಮವನ್ನು ಆಚರಿಸಲು ರಾಜ್ಯ ಸರ್ಕಾರವು `ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ, ಪ್ರಗತಿಯ ರಥ’ ಎಂಬ ವಿಶೇಷ ಮತ್ತು ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

 

ಈ ಕಾರ್ಯಕ್ರಮವು ನಾಳೆ ಅಂದರೆ 2026ನೇ ಸೆಪ್ಟೆಂಬರ್ 10ರ ಗುರುವಾರ ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಪ್ರತಿಷ್ಠಿತ ಬ್ಯಾಂಕ್ವೇಟ್ ಸಭಾಂಗಣದಲ್ಲಿ ನಡೆಯಲಿದೆ. ಸರ್ಕಾರದ ನೂರು ದಿನಗಳ ಸಾಧನೆ, ಜನಪರ ಯೋಜನೆಗಳ ಅನುಷ್ಠಾನ ಮತ್ತು ಮುಂದಿನ ಅಭಿವೃದ್ಧಿಯ ದೂರದೃಷ್ಟಿಯನ್ನು ಜನರ ಮುಂದಿಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಗಣ್ಯರ ದಂಡು, ಸಿದ್ದರಾಮಯ್ಯರಿಂದ ಉದ್ಘಾಟನೆ:

ಈ ಶತದಿನೋತ್ಸವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿನ ಒಗ್ಗಟ್ಟು ಮತ್ತು ನಾಯಕತ್ವದ ನಿರಂತರತೆಯನ್ನು ಸಂಕೇತಿಸುತ್ತದೆ.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಜಿ. ಪರಮೇಶ್ವರ್, ರಾಜ್ಯ ಸಂಪುಟದ ಎಲ್ಲಾ ಸಚಿವರು, ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಭಾಗವಹಿಸಲಿದ್ದಾರೆ. ಇದರ ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

http://Visit : www.suddidina.com

ಫಲಾನುಭವಿಗಳೊಂದಿಗೆ ನೇರ ಸಂವಾದ – ಕಾರ್ಯಕ್ರಮದ ಪ್ರಮುಖ ಆಕರ್ಷಣೆ

ಈ ಕಾರ್ಯಕ್ರಮದ ಅತ್ಯಂತ ಪ್ರಮುಖ ಆಕರ್ಷಣೆ ಎಂದರೆ ಮುಖ್ಯಮಂತ್ರಿಗಳೊಂದಿಗೆ ಫಲಾನುಭವಿಗಳ ನೇರ ಸಂವಾದ. ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳು ಈ ವೇದಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಕೇವಲ ಗ್ಯಾರಂಟಿ ಯೋಜನೆಗಳಷ್ಟೇ ಅಲ್ಲದೆ, ಸಮಾಜದ ವಿವಿಧ ವರ್ಗಗಳ ಶ್ರಮಿಕರು ಮತ್ತು ಕಾರ್ಮಿಕರು ಕೂಡ ಈ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೃಷಿಕರು, ಆಟೋ ಚಾಲಕರು, ಹಮಾಲಿಗಳು, ಗಿಗ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೌರಕಾರ್ಮಿಕರು ತಮ್ಮ ಬದುಕಿನಲ್ಲಿ ಸರ್ಕಾರದ ಯೋಜನೆಗಳಿಂದ ಆಗಿರುವ ಬದಲಾವಣೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಮುಕ್ತವಾಗಿ ಮಾತನಾಡಲಿದ್ದಾರೆ.

100 ದಿನಗಳಲ್ಲಿ ಸರ್ಕಾರವು ಕೈಗೊಂಡಿರುವ ಜನಪರ ನಿರ್ಧಾರಗಳು, ಅಭಿವೃದ್ಧಿ ಕಾಮಗಾರಿಗಳು ಮತ್ತು ಆಡಳಿತದಲ್ಲಿ ತಂದಿರುವ ಪಾರದರ್ಶಕತೆಯ ಬಗ್ಗೆ ಈ ವೇದಿಕೆಯಲ್ಲಿ ಚರ್ಚೆ ನಡೆಯಲಿದೆ. ಸರ್ಕಾರದ ಸಾಧನೆಗಳನ್ನು ಕೇವಲ ಭಾಷಣದ ಮೂಲಕವಲ್ಲ, ಬದಲಾಗಿ ಫಲಾನುಭವಿಗಳ ಬಾಯಿಂದಲೇ ಜನರಿಗೆ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ದಿನಗಳಲ್ಲಿ ದೃಢ ಕರ್ನಾಟಕ’ ನಿರ್ಮಾಣದ ನಿಟ್ಟಿನಲ್ಲಿ ಸರ್ಕಾರದ ಮುಂದಿನ 5 ವರ್ಷಗಳ ಕಾರ್ಯಯೋಜನೆ ಮತ್ತು ರೂಪುರೇಷೆಗಳನ್ನು ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

Continue Reading
Advertisement

Title

ದಿನದ ಸುದ್ದಿ3 days ago

ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!

ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ...

ದಿನದ ಸುದ್ದಿ3 days ago

ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!

ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು...

ದಿನದ ಸುದ್ದಿ3 days ago

ಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು

ಸುದ್ದಿದಿನ, ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ....

ದಿನದ ಸುದ್ದಿ3 days ago

ಇಂದಿನ ರಾಶಿ ಭವಿಷ್ಯ: ಯಾವ ರಾಶಿಗೆ ಶುಭ? ಯಾವ ರಾಶಿಗೆ ಎಚ್ಚರಿಕೆ? ಇಲ್ಲಿದೆ 12 ರಾಶಿಗಳ ಸಂಪೂರ್ಣ ಭವಿಷ್ಯ!

ಸುದ್ದಿದಿನ,ನಿತ್ಯಭವಿಷ್ಯ: ಸೆಪ್ಟೆಂಬರ್ 10, 2026 ರ ನಿಮ್ಮ ಜಾತಕವನ್ನು ಅನ್ವೇಷಿಸಿ. ವೃತ್ತಿ, ಹಣ, ಪ್ರೀತಿ ಮತ್ತು ಆರೋಗ್ಯದ ಸಂಪೂರ್ಣ ಭವಿಷ್ಯವಾಣಿಗಳನ್ನು ಓದಿ. http://Visit : www.suddidina.com ಮೇಷ:...

ದಿನದ ಸುದ್ದಿ3 days ago

ದೇಶದಲ್ಲಿ ಏಕರೂಪ ರಾಷ್ಟ್ರೀಕೃತ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು: ಡಾ.ಮೂಡ್ನಾಕೂಡು ಚಿನ್ನಸ್ವಾಮಿ

ಕೆಪಿಸಿಎಲ್ ಹಾಗೂ ಕೆಪಿಸಿಎಲ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಸಂಘದಿಂದ ಅಂಬೇಡ್ಕರ್ ಜಯಂತಿ ಆಚರಣೆ ಎಸ್ಎಸ್ಎಲ್ ಸಿ, ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ...

ದಿನದ ಸುದ್ದಿ3 days ago

5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!

ಸುದ್ದಿದಿನ, ಬೆಂಗಳೂರು: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರಲ್ಲಿ ಬಹುದಿನಗಳಿಂದ ಒಂದು ದೊಡ್ಡ ಗೊಂದಲವಿದೆ. ನಾನು ಕೆಲಸ ಬಿಟ್ಟಿದ್ದೇನೆ, ಕಳೆದ 5 ವರ್ಷಗಳಿಂದ ಪಿಎಫ್ ಖಾತೆಗೆ...

ದಿನದ ಸುದ್ದಿ3 days ago

ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್‌ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!

ಸುದ್ದಿದಿನ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಕ್ಷಾಂತರ ಬಿಎಂಟಿಸಿ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಬಸ್‌ಗಾಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ...

ದಿನದ ಸುದ್ದಿ3 days ago

ಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ

ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ಎದುರಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಮತ್ತು ಪರಿಹಾರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಕುರಿತು ವಿಧಾನಸೌಧದಲ್ಲಿ ಇಂದು ಸಚಿವ ಸಂಪುಟ ಉಪಸಮಿತಿ...

ನಿವೃತ್ತ ನೌಕರರ ಸಂಘದಿಂದ ತೀಕ್ಷ್ಣ ಅಂಧ ಮಕ್ಕಳ ಶಾಲೆಗೆ ಸಂಗೀತ ವಾದ್ಯಗಳ ಕೊಡುಗೆ; ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಸಮಾಜದ ಕರ್ತವ್ಯ ನಿವೃತ್ತ ನೌಕರರ ಸಂಘದಿಂದ ತೀಕ್ಷ್ಣ ಅಂಧ ಮಕ್ಕಳ ಶಾಲೆಗೆ ಸಂಗೀತ ವಾದ್ಯಗಳ ಕೊಡುಗೆ; ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಸಮಾಜದ ಕರ್ತವ್ಯ
ದಿನದ ಸುದ್ದಿ3 days ago

ವಿಶೇಷ ಚೇತನ ಮಕ್ಕಳು ದೇವರ ಮಕ್ಕಳು – ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್

ಸುದ್ದಿದಿನ,ಚಿತ್ರದುರ್ಗ: ದೈವಿಕ ಕೊರತೆ ಹಾಗೂ ವಿಕಲಚೇತನ ಹೊಂದಿರುವ ಮಕ್ಕಳು ದೇವರ ಮಕ್ಕಳೆಂದೇ ಪರಿಗಣಿಸಲ್ಪಡುತ್ತಾರೆ. ಅಂತಹ ಮಕ್ಕಳಿಗೆ ಪ್ರೀತಿ, ವಾತ್ಸಲ್ಯ ನೀಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಿ, ಸ್ವಾವಲಂಬಿ...

ದಿನದ ಸುದ್ದಿ3 days ago

ಭದ್ರೆ ಆಗಮನದಿಂದ ರೈತರಲ್ಲಿ ಹೊಸ ಭರವಸೆ – ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ

ಸುದ್ದಿದಿನ,ಚಿತ್ರದುರ್ಗ: ಜಿಲ್ಲೆಯ ಬಹುದಿನಗಳ ನೀರಾವರಿ ಕನಸಾಗಿರುವ ಭದ್ರಾ ಮೇಲ್ದಂಡೆ ಯೋಜನೆಯ ನೀರು ಚಿತ್ರದುರ್ಗ ಜಿಲ್ಲೆಗೆ ಹರಿದುಬಂದಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ನೀರಾವರಿ...

Trending