Connect with us

ಬಹಿರಂಗ

ಭೂಮಿ ತಾಯಿಯ ಚೊಚ್ಚಲ ಮಗ

Published

on

ದಿದ್ದು ಕಂಗ್ಲೀಷ್ ಮೀಡಿಯಂ,ಸೇರಿದ್ದು ಇಂಜಿನಿಯರಿಂಗ್, ಇವಾಗ ಮಾಡ್ತಿರೋ ಕೆಲಸ ಮಾತ್ರ ಜರ್ನಲಿಸಂ…

ಲೈಫು ಆದ್ರೆ still ವೈಟ್ & ಬ್ಲಾಕ್ screen…

ಅವತ್ ರಾತ್ರಿ…
ಏನ್ ಗುಡುಗು, ಸಿಡಿಲು ಅಂತೀರಾ..!!!
ಯಪ್ಪ ಮಿಂಚು ಪಣಾರ್!!! ಅಂತಾ ಕಿಟಕಿ ಪಕ್ದಲ್ಲೆ ಬರದು.. ನಾನ್ ಅಂತೂ ಕಿಟಕಿ ಅತ್ರಕ್ಕೂ ಹೋಗ್ಲಿಲ್ಲ…ಜೊತೆಗೆ ಸುಯ್ ಸುಯ್ ಅನ್ನೋ ಜೊರು ಗಾಳಿ .ತೆಂಗಿನ ಮರ , ಅಡಿಕೆ ಮರಗಳು 45° ಆಂಗಲ್ ಗೆ ಬಾಗಿದ್ವು ಅನ್ನಿ ಅಷ್ಟೊಂದು ರಭಸವಾದ ಗಾಳಿ..ಉಧೋ ಉಧೋ ಅಂತಾ ಮಳೆ ಬರಕ್ಕೆ ಶುರು ಆಯ್ತು..ಗಾಳಿ ಜೊತೆ ಮಳೆ ಬಂದ್ರೆ ಕೇಳ್ಬೇಕ??
ಅದೇ time ಗೆ ಕರೇಂಟ್ ಹೋಯ್ತು , ಅಕ್ಕಿ ಬೇರೆ ಕಾಲಿ ಆಗಿತ್ತು, , time ಬೇರೆ 10 ಆಗಿತ್ತು , ಸುತ್ತಲೂ ಕತ್ತಲೆ ಆವರಿಸಿತ್ತು, ಜೊತೆಗೆ ಮಳೆ ಬೇರೆ ಬರ್ತಿತ್ತು… ಏನ್ ಮಾಡ್ಲಿ ಸ್ಬಾಮಿ.. ಮಳೆಲಿ ಹೋಗಿ ತರಕ್ಕೆ ಆಗಲ್ಲ ಯಾಕಂದ್ರೆ ನಂಗೆ ಸಿಡಿಲು ಮಿಂಚು ಅಂದ್ರೆ ಭಯ..
ನಾನ್ ಬಾಗ್ಲಲ್ಲೇ ನಿಂತ್ಕೊಂಡು ಹೊದ್ದಾಡ್ತಿದ್ದೆ… ಅವಾಗ ಪಕ್ಕದ ಮನೆ ಅವರ್ಗೆ ನನ್ ಕಷ್ಟ ಗೊತ್ತಾಯ್ತು ಅನ್ಸುತ್ತೆ ಊಟ ಮಾಡು ಬಾರಪ್ಪ ಅಂತ ಬಲವಂತ್ ಮಾಡುದ್ರು , ನಾನು ಇಲ್ಲವ್ವೋ ..ಅಂತ ಹೇಳಿ.‌‌ ಒಂದ್ ಕಪ್ ಅಕ್ಕಿ ಸಾಲ ಕೊಡಿ ಅಂತಾ ಕೇಳ್ದೆ. ಅದಿಕ್ಕೆ ಅವರು ನೋಡಪ್ಪ ನಾವು ಬೆಳೆದಿರೋ ಅಕ್ಕಿ ತಿನ್ನದು , ನೀವೆಲ್ಲಾ ಪ್ಯಾಟೆ ಮಂದಿ ನಿಮ್ ಥರ ಬಾಸುಮತಿ ,ಸೋನಾಮಸುರಿ ಎಲ್ಲಾ ತಿನ್ನಲ್ಲ ಅಂದ್ರೂ .. ಅಯ್ಯೋ ತಾಯಿ ನಾನು ಮಣ್ಣಿನ್ ಮಗ , ನಾನ್ ಇಲ್ಲಿ ತನ್ಕ ತಿಂದಿದ್ದು ಸಿದ್ದರಾಮಯ್ಯ ಕೊಟ್ಟಿದ್ ಒಂದು ರುಪಾಯಿ ಸೋಸೈಟಿ ಅಕ್ಕೀನೆ ಅಂತಾ ಹೇಳಿ ಒಂದು ಕಪ್ಪ ಅಕ್ಕಿ ತಂದೆ..

ಎರಡು ಈರುಳ್ಳಿ, ಎರಡು ಮೆಣಸಿನ ಕಾಯಿ , ಒಂದ್ ಟೊಮೋಟೊ ಹಾಕಿ ಚಿತ್ರನ್ನ ಮಾಡಿದೆ, ಘಮ್ ಅನ್ಲಿ ಅಂತಾ ಚಿಕನ್ ಬಿರಿಯಾನೆ ಪೌಡರ್ ಬೇರೆ ಹಾಕಿದ್ದೆ..
ಜೊತೆಗೆ ಇರ್ಲಿ ಅಂತಾ ಎರಡು ಕೋಳಿ ಮೊಟ್ಟೆ ಬೇಯಿಸ್ಕೊಂಡು ಫುಲ್ ಮೀಲ್ಸ್ ರೇಡಿ ಮಾಡ್ಕೊಂಡು ಕೂತ್ಕೊಂಡೆ.. ಏನ್ ಘಮಲು ಅಂತಿರಾ…. ಆಹಾ.. !!
ಪಕ್ಕದ್ ಮನೆ ಆಂಟಿ ಕೂಡ ಏನಪ್ಪ ಸೋಮವಾರ ಅಂತನೂ ನೊಡ್ದಲೆ, ಬಿರಿಯಾನಿ ಮಾಡಿದ್ದೀಯ ಅಂದ್ರೂ… ಆ ರೇಂಜ್ಗೆ ನಾನು ಕೂಡ ನಳ ಮಹಾರಾಜ ಆದ್ನಲ್ಲ ಅಂನ್ಕೊಂಡು ಕನ್ನಡಿಲ್ಲಿ ನನ್ನ ನಾನೆ ನೋಡ್ಕೊಂಡೆ…ಬೆಳಗ್ಗೆ 8ಆಗಿತ್ತು ಇನ್ನು ಹಾಸಿಗೆ ಮೇಲೆ ಹೊದ್ದಾಡ್ತಿದ್ದೆ… ಅವಾಗ ಇದ್ದಕ್ಕಿದಂತೆ ಪಕ್ಕದ್ ಮನೆಲೆ ಅಳ್ತಿರೋ ದನಿ ಕೇಳಿಸ್ತು… ಏನು ಆಯ್ತಪ್ಪ ಅಂತಾ ಎದ್ದಂಗೆನೆ ಹೋದೆ…

ಒಂದ್‌‌ ಕಡೆ ಯಜಮಾನ ತಲೆಮೇಲೆ ಬಟ್ಟೆ ಹಾಕೊಂಡು ಸರ ಸರ ಅಂತಾ ಆಚೆಗಡೆ ಹೊರಟ, ಇನ್ನೊಂದ್ ಕಡೆ ಆ ತಾಯಿ ದೇವರಿಗೆ ಇಡಿ ಶಾಪ ಹಾಕೊಂಡು , ಬರ್ತೀರೋ ಕಣ್ಣೀರನ್ನ ತಡಿಲಾರ್ದೆ ತನ್ನ ಸೆರಗಲ್ಲಿ ಹೊರೆಸ್ಕೊಂಡು ಅಡುಗೆ ಮನೆ ಕಡೆ ಹೋದ್ರು.. ನಾನು ಇಂತ timeನಲ್ಲಿ ಯಾರನ್ನ ಏನಂತ ಕೇಳನ‌‌ ಅನ್ಕೊಂಟು , ಆ ತಾಯಿನ‌ ಕೇಳ್ದೆ, ಯಾಕಮ್ಮ ಏನಾಯ್ತು ಹೇಳಿ ನಾವ್ ಇದೀವಿ ಅಂತಾ… ಅದಕ್ಕೆ ಅವರು ಹೇಳುದ್ರು ರಾತ್ರಿ ಇಡೀ ಸುರಿದಿದ್ದ ಬಾರಿ ಗಾಳಿ ಮಳೆಗೆ 500 ಅಡಿಕೆ ಮರ, 15 ಎಕ್ಕರೆ ಭತ್ತದ ಬೆಳೆ, 5 ತೆಂಗಿನ ಮರ ಎಲ್ಲಾ ನೆಲಕ್ಕೆ ಉರುಳಿ ನಾಶ ಆಯ್ತಂತೆ ಅಂದ್ರೂ..
Just ಒಂದ್ ಕ್ಷಣ ನೀವು imagine ಮಾಡ್ಕೊಳಿ .. ನೀವು ಇಷ್ಟ ಪಟ್ಟಿರೋ Dairy Milk ಚಾಕೊಲೇಟ್ ನ cover ತೆಗೆದು ಇನ್ನೇನು ತಿನ್ಬೇಕು ಅನ್ನೋ time ನಲ್ಲಿ ಕೆಳಗಡೆ ಬಿದ್ದಾಗ ನಮ್ reactions ಹೆಂಗ್ ಇರ್ಬೇಡ…
ಕೈಗೆ ಬಂದಿರೋ ತುತ್ತು ಬಾಯಿಗೆ ಬರ್ಲಿಲ್ಲ ಅಂದಾಗ ಆ‌ ಅನ್ನದಾತರ ಸ್ಥಿತಿ ಎಂತಾ ಶೋಚನೀಯ ಅಂತಾ…

ಅವರ ತೋಟದ ಬಳಿ ಸುದ್ದಿ ಮಾಡನ‌ ಅಂತಾ ನಾನು ನಮ್ ಕ್ಯಾಮೆರಾ ಮ್ಯಾನ್ ಜೊತೆಲೆ ಹೊರಟ್ವಿ… ದಾರಿ ಉದ್ದಕ್ಕೂ ಭತ್ತದ ಘಮಲು ಆಹಾ.. ಏನ್ ಸುವಾಸನೆ ಅಂತಿರಾ ಒಂದ್‌ಕ್ಷಣ ನಮ್‌ ಮಂಡ್ಯ ಸೀಮೆ ನೆನೆಪಾಗೋಯ್ತು… ಅಂತಾ ಅದ್ಭುತ ಹಸಿರು ಸಾಲು ಎಲ್ಲಿ ನೋಡಿದ್ರು ಅಲ್ಲಿ ತನಕವೂ ಭತ್ತದ ಗದ್ದೆಗಳು.. ಒಂಥರಾ ಮಲೆನಾಡ ಅನುಭವ .


ಇನ್ನೇನು ಸಮೀಪ ಅವರ ತೋಟಕ್ಕೆ ಹೋಗ್ಬೇಕು , ಅನ್ನೋವಾಗ್ಲೆ ಕಂಡಿದ್ದು …. ನೆಲಕ್ಕೆ ಬಿದ್ದಿರೋ ವಿದ್ಯುತ್ ಕಂಬಗಳು.. ದನ ಕರುಗಳಿಗೆ ಅಂತಾ ಕಟ್ಸಿದ್ದ ಮನೆಗೆ ರೋಡ್ ಸೈಡಲ್ಲಿ ಬಿದ್ದಿದ್ದ ಚಾವಣಿ ಗಳು ‌,
ರಸ್ತೆ ಬದಿಲಿ ಸೀಳಾಗಿ ಬಿದ್ದಿರೋ ಮರಗಿಡಗಳು… ಒಂದು ಕಡೆ ಬೇರು ಸಮೇತ ಬಿದ್ದಿರುವ ತೆಂಗಿನಮರಗಳು… ಅರ್ಧಕ್ಕೆ ಮುರ್ಕೊಂಡು ಬಿದ್ದಿರುವ ತ್ಯಾಗದ ಮರಗಳು ,
ಇನ್ನೊಂದ್ ಕಡೆ ಒಂದ್ ಅಷ್ಟು ಅರ್ಧಕ್ಕೆ ಮುರಿದಿದ್ದ ಅಡಿಕೆ ಮರಗಳು, ಇನ್ನ‌ ಸ್ವಲ್ಪ ಬೇರು ಸಮೇತ ನೆಲ ಕಚ್ಚಿದ ಗಿಡಗಳು. ಹಸಿರಾಗಿ, ಕೇಸರಿ ಬಣ್ಣಕ್ಕೆ ತಿರುಗಿ ಇನ್ನೇನು ಫಲಕ್ಕೆ ಬಂದಿರುವ ಅಡಿಕೆ ಕಾಯಿಗಳು..
ಎಲ್ಲಂದ್ರೆ ಅಲ್ಲಿ ಚೆಲ್ಲಾಪಿಲ್ಲಿಯಾಗಿ ಇಟ್ಟಾಟ್ಟ…. ಎಲ್ಲೆ ನೋಟುದ್ರು ಮುರಿದು ಬಿದ್ದಿರೋ ಅಡಿಕೆ ಮರಗಳೆ‌‌‌ ಕಾಣಿಸ್ತಿದ್ವು…

ಮತ್ತೊಂದು ಕಡೆ ನೋಡ್ಬೇಕು ನೀವು‌‌‌ ..!!!

ನಿಮಗೆ ಈ ಗದ್ದೆ ತೋಟ ಅಂದ್ಮೇಲೆ ಒಂದು imagination ಇರುತ್ತೆ ಎಲ್ಲೆಲ್ಲೂ ಹಸಿರು ಹಸಿರಾಗಿರೋ ಭತ್ತದ ಗಿಡ , ಜುಳು ಜುಳು ಹರಿಯೊ ನೀರು …. ತಂಪನೆ ವಾತವರಣ, ನೋಡಿದಷ್ಟು ಹಸಿರಿನ ತೋರಣ‌‌.. ಆದ್ರೆ ಅವತ್ ಏನಾದ್ರು ನೋಡಿದಿದ್ರೆ ನಿಮ್ ಕಣ್ಣಲ್ಲಿ ಅಕ್ಷರಶಃ ನೀರು ಬರದು.‌ ಹತ್ತಾರು ಎಕ್ಕರೆ ಭತ್ತ , ಇನ್ನೇನು ಕುಯ್ಯಲಿಗೆ ಬರುತ್ತೆ .. ಈ ಬಾರಿ ದಾಖಲೆ ಪ್ರಮಾಣದಲ್ಲಿ ಭತ್ತ ಬೆಳೆಯಬೇಕು ಅಂತಾ ಕನಸನ್ನ ಅವರ ಕಣ್ಣಲ್ಲಿ ನಾವು ಕಾಣಬಹುದಿತ್ತು.. ನಿಮ್ಗೆ ಗೊತ್ತಾ ಆ ಕನಸಿನ ಹಿಂದೆ ಎಷ್ಟೊಂದು ಆಸೆಗಳು ಇರ್ತಾವೆ ಅಂತಾ ..????
ಮಕ್ಕಳ higher education ಗೆ ದುಡ್ಡು ಹೊಂದಿಸದು ಇರುತ್ತೋ…?
ಇಲ್ಲಾ ಮಗಳ ಮದ್ವೆ ಇರುತ್ತೋ..?
ಇಲ್ಲಾ ಆಸ್ಪತ್ರೆನಲ್ಲಿ ಯಾರದ್ರು ಚಿಕಿತ್ಸಾ ಪಡಿತಿದ್ರೋ… ??
ಇಷ್ಟು ಬೆಳೆ ಬೆಳೆಯೊಕ್ಕೇ ಯಾರತ್ರ ಎಷ್ಟು ಸಾಲ ಮಾಡಿದ್ರೋ ??
ಎಲ್ಲಾ ಅವರಿಗೆ ಮಾತ್ರ ಗೊತ್ತಿರುತ್ತೆ.‌‌‌…
ನಿಮಗೆ ಇನ್ನೊಂದು ಗೊತ್ತಿರಲಿ ಒಂದು KG ಅಕ್ಕಿ ಬೆಳೆದು ನಾವು ಅನ್ನ ತಿನ್ನಬೇಕು ಅಂದರೆ ಸತತ ಐದಾರು ತಿಂಗಳಾದ್ರು ಬೇಕು… ಒಂದು ಎಕ್ಕರೆ ಗದ್ದೆ ಅಚ್ಚುಕಟ್ಟು ಮಾಡಬೇಕು ಅಂದ್ರೆ ಏನೆಲ್ಲಾ ಪರಿಶ್ರಮ ಅಂದ್ರು 25ಸಾವಿರ ದುಡ್ಡು ಖರ್ಚು ಮಾಡಬೇಕು…
ಮೊದಲು ಗದ್ದೆ ಉಳುಮೆ ಮಾಡ್ಸಿ… ನೀರ್ ಕಟ್ಟಿ ಹದ ಮಾಡಿ… ಭತ್ತದ ಸಸಿಗಳನ್ನ ನಾಟಿ ಮಾಡಿ… ವಾರ ವಾರಕ್ಕೂ ನೀರು ಕಟ್ಬೇಕು‌‌…. ಅವನು ಟೈಮಿಗೆ ಸರಿಯಾಗಿ ಊಟ ನೀರು ಕುಡಿತಾನೋ ಗೊತ್ತಿಲ್ಲ ಆದ್ರೆ ಬೆಳೆಗೆ ಮಾತ್ರ ಇನ್‌ಟೈಮ್ನಲ್ಲಿ ಮಾಡ್ಬೇಕು.. ನೀರಿಗಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬೋರ್ ವೆಲ್ ಹಾಕ್ಸಿರ್ಬೇಕು ..

ಅದೃಷ್ಟ ಚೆನ್ನಾಗಿದ್ರೆ ನೀರು ಬರುತ್ತೆ , ಇಲ್ಲಾ ಅಂದ್ರೆ ಅದೂ ಕೂಡ ಮಣ್ಣಪಾಲು‌.. 15ದಿನಕೊಮ್ಮೆಯಂತೆ ಗೊಬ್ಬರ ಹಾಕಿ… ಕಳೆ ಗಿಡಗಳು ಬರಬಾರದು ಅಂತಾ ದಿನ ಎಲ್ಲಾ ಔಷಧಿ ಹೊಡೆದು… ತಾಯಿ 9ತಿಂಗಳು ನಮ್ಮನ‌ ಹೇಗೆ ಕಾಪಾಡಿದ್ಲೋ ಹಂಗೆ ಬೆಳೆನು ಕೂಡ ಕಾಯಬೇಕು.‌.
ಫಸಲು ಬಿಟ್ಟಗಾ ಕುಯ್ಸಿ ಭತ್ತ ತೆಗೆದು ಅಕ್ಕಿ ಮಾಡ್ಸೋ ಅಷ್ಟ್ರಲ್ಲಿ ಒಂದ್ ರೌಂಡ್ ನರಕ ದರ್ಶನ ಆಗಿರುತ್ತೆ…ಆದ್ರೆ ಅವತ್ ಬಂದಿದ್ದ ಒಂದು‌ಮಳೆ ಯಿಂದಾಗಿ ಇರೋ ಬರೋ ಗದ್ದೆ ಎಲ್ಲಾ ನೆಲ ಕಚ್ಚಿ ಭತ್ತದ ಕಾಳುಗಳು ಕೆಸರಲ್ಲಿ ಹೊರಳಾಡ್ತಿದ್ದೋ… ಕಷ್ಟ ಪಟ್ಟು 5 ತಿಂಗಳು ಮಗು ಥರ ಕಾಪಾಡ್ಕೊಂಡು ಬಂದಿದ್ದ ಫಸಲು ಅವತ್ತು ಮಣ್ಣು ಪಾಲಾಗಿದ್ದು ಮಾತ್ರ ಘೋರ ಕೃತ್ಯ…‌ಸೊಂಟದ ಎತ್ತರಕ್ಕೆ ‌ಬೆಳೆದಿದ್ದ ಭತ್ತದ ಗಿಡಗಳು ನೆಲಸಮ ಆಗಿದ್ವು… ಇಷ್ಟು , ಕೇವಲ‌ 15 ಎಕ್ರೆ ಮಾತಲ್ಲ !! ಅಲ್ಲಿ ಸುತ್ತಾ ಮುತ್ತಾ ಇರೋ 150ಕ್ಕೂ ಹೆಚ್ಚಿನ ರೈತರ ಪಾಡು ಕೂಡ ಇದೆ ಆಗಿತ್ತು..‌ ಸುದ್ದಿ ಮಾಡ್ತೀನಿ ಅಂತಾ ಹೋಗಿ ಸೈಲೆಂಟ್ ಹಾಗಿ ಬಂದೆ… ಎಲ್ಲಾ ಭತ್ತದ ಗದ್ದೆಗಳು ಕೂಡ ಇನ್ನೇನು ಎರಡೇ ದಿನದಲ್ಲಿ ಫಸಲು ಕಟಾವಿಗೆ ಬರಬೇಕು, ಅನ್ನೋ ಅಷ್ಟ್ರಲ್ಲಿ ಪ್ರಕೃತಿ ವಿಕೋಪಕ್ಕೆ ಮುಗ್ದ ರೈತ ಬಲಿಯಾಗಿದ್ದ….ಯಜಮಾನ‌ ತಲೆ ಮೇಲೆ ಟವಲ್ ಸುತ್ಕೊಂಡು.. ಗಣೇಶ ಬೀಡಿ ಸೇದ್ಕೊಂಡು ಯೋಚನೆ ಮಾಡ್ಕೊಂಡು ಕುಂತಿದ್ರು…ಇದೇನಪ್ಪ ಮಳೆ ಇಂಗು ಬರುತ್ತಾ ಅಂತಾ ಅವತ್ತೆ ಗೊತ್ತಾಗಿದ್ದು…‌ಇದು ಕೇವಲ ಭತ್ತದ ಮಾತದ್ರೆ… ಇನ್ನು 500 ಅಡಿಕೆ ಮರಗಳ ಶ್ರಮ ಎಷ್ಟು ಅಂತಾ ಗೊತ್ತ.. ಫಸ್ಟ್ 4‌ವರ್ಷ school ಮಕ್ಕಳು ಥರ ಕಾಪಾಡ್ಬೇಕು‌..ನಾವೇ ಊಟ ಮಾಡ್ಸಿ time to time ನೀರು ಕುಡಿಸ್ಬೇಕು…ಅದಾದ್ಮೇಲೆನೆ ಪರಿಶ್ರಮಕ್ಕೆ ತಕ್ಕ ಫಲ‌ಸಿಗದು.. ಏನಿಲ್ಲಾ ಅಂದ್ರು 500ಅಡಿಕೆ ಮರದ ಬೆಳೆಗೆ 5-6 ಲಕ್ಷ ಸಂಪಾದನೆ ಆಗ್ತಿತ್ತು ಪ್ರತಿ ವರ್ಷಕ್ಕೇ ಹಾಗೆನೆ ಲಕ್ಷಾಂತರ ರುಪಾಯಿ ಖರ್ಚು ಕೂಡ ಮಾಡ್ಬೇಕಿತ್ತು… ಆದ್ರೆ ಅವತ್ತಿನ ವಿಧಿ ಆಟನೇ ಬೇರೆ ಆಗಿತ್ತು…

ಇವಿಷ್ಟು ನಮ್ ರೈತ ಪಡೋ ಪಾಡು ಇನ್ನೂ ಇಷ್ಟೆಲ್ಲಾ ಬೆಳೆಗಾಗಿ ಕೆಲವರು ಬೇರೆ ಕಡೆಯಿಂದ ಬ್ಯಾಂಕುಗಳಲ್ಲಿ ಸಾವಿರಾರು ರುಪಾಯಿ ಸಾಲ ಮಾಡಿರ್ತಾರೆ… ಆದ್ರೆ ಅವರು ಬೆಳೆಯೋ ಬೆಳೆಗೆ ಸರಿಯಾದ ಬೆಂಬಲ ಬೆಲೆನೇ ಸಿಕ್ಕಿರಲ್ಲ…ಇಷ್ಟೆಲ್ಲಾ‌ ತಾಪತ್ರಾಯ ಇದ್ರು ಮನೆ , ಮಕ್ಕಳು, ಸಂಸಾರದ ದೊಡ್ಡ ಜವಾಬ್ದಾರಿ ಹೆಗಲ ಮೇಲಿರುತ್ತೆ‌‌‌.. ಕೊನೆಗೊಮ್ಮೆ ಬ್ಯಾಂಕ್ ಅಧಿಕಾರಿಗಳು, ಸಾಲ ಕೊಟ್ಟವರ ಹಣ ತೀರಿಸಕ್ಕೇ ಆಗ್ದೆ ಅವರ ಕಿರುಕೊಳದಿಂದ ಸಾವೇ ಗತಿ ಅಂತಾ ಹೊಲದಲ್ಲೇ ವಿಷ ತಗೊಂಡೋ , ಮರಕ್ಕೆ‌ ನೇಣು ಬಿಗಿದುಕೊಂಡೋ ತನ್ನ ಪ್ರಾಣಾನ ಬಿಟ್ಟೀರ್ತಾನೆ…ನಾನ್ ಇಷ್ಟಲ್ಲಾ ನಿಮ್ಗೆ ಯಾಕೆ‌ ಹೇಳ್ತಿದ್ದೀನಿ ಗೊತ್ತಾ… ???ಈ ದೊಡ್ಡ ದೊಡ್ಡ ಸಿಟಿ ಗಳ ಕಡೆ ಕೆಲವರು ಒಪ್ಪತ್ತಿನಾ ಊಟಕ್ಕೂ ಪಡಬಾರದ ಕಷ್ಟನೇ ಪಡ್ತಾರೆ…ಆದ್ರೆ ಇವಾಗಿನ forward people’s ಇದಾರಲ್ಲ ಹಾಳಾದ ಹೋಟೇಲ್ಗೆ ಊಟಕ್ಕೆ ಅಂತಾ ಹೋಗ್ತಾರೆ..ಅಲ್ಲು ಕೂಡ ತಿರ್ಕೆ ಶೋಕಿ ಮಾಡ್ತಾರೆ‌.. ಚಾಲುಕ್ಯ ಹೋಟೆಲ್ಗೆ ಕಾಫಿ ಕುಡಿಯಕ್ ಹೋದ್ವಿ , ಪಕ್ಕದ್ table ನಲ್ಲಿ ಎರಡು ಜೋಡಿ ಬಂದ್ರು ಕೂತ್ರು.. ಸೌತ್ ಇಂಡಿಯನ್ ಮಿಲ್ಸ್ ನ order ಮಾಡಿ ಹರಟೆ ಹೊಡಿತಿದ್ರು.. ಊಟ ಬಂದ್ಮೇಲೆ ಅರ್ಧಂಬರ್ದ ತಿಂದು ಊಟದ್ ಮೇಲೆನೆ ಕೈ ತೊಳೆದು ಕೊಂಡು ಹೋದ್ರು.. ಅವರಿಗೆ ಅನ್ನದ ಬೆಲೆ ಗೊತ್ತಾಗಿಲ್ಲ , ಯಾರೋ ದುಡ್ಡು ಕೊಡ್ತಾರೆ , ಇನ್ಯಾರೋ ತಿಂದು ಶೋಕಿ ಮಾಡ್ತಾರೆ…

ಕಷ್ಟ ಪಟ್ಟು ದುಡಿದು ತಿನ್ನೋವರ್ಗು ಅವರಿಗೆ ತುತ್ತಿನ ಬೆಲೆ ತಿಳಿಯಲ್ಲ ..
ಅದು ರಾತ್ರಿ 11ಹಾಗಿತ್ತು ಬುಲ್ ಟೆಂಪಲ್ ರೋಡ್ ಹೋಟೆಲ್ ಎಲ್ಲಾ close ಹಾಗಿತ್ತು ಇನ್ನೇನ್ ಮಾಡದು ಅಂತಾ ಅಲ್ಲೆ ಇದ್ದ Domino’s pizza ಸೆಂಟರ್ ಗೆ ಹೋದೆ ಅಲ್ಲೂ ಅಷ್ಟೇ ರೀ ಬೇಕಾ ಬಿಟ್ಟಿ ತಿಂದು ಮಿಕ್ಕಿದ್ನೆಲ್ಲಾ plate ನಲ್ಲೇ ಬಿಡ್ತಿದ್ರು … ಪಾಪ ಅಲ್ಲೆ ಆಚೆಕಡೆ ಒಬ್ಬ ಅನಾಥ ಹುಡ್ಗ ಅದನ್ನೆ ನೋಡ್ಕೊಂಡು ನಿಂತಿದ್ದ .. ಆ ಸರ್ವರ್ ಬಂದು ಮಿಕ್ಕಿರದ್ನೆ ಪಾಕೇಟ್ ಕಟ್ಟಿ ಆ ಹುಡುಗನಿಗೆ ಕೊಟ್ಟ‌‌‌… ನಾನ್ ಕೇಳ್ದಾಗ daily ಇದೇ ಸಾರ್ ಇವರ್ಗಳು ಬರ್ತಾರೆ, ಮಿಕ್ಕಿದ್ನೆ ತಿನ್ಕೊಂಡು ಖುಷಿ ಪಡ್ತಾರೆ ಅಂದ…
ಎಷ್ಟೋ ಜನ ಇವತ್ತಿಗೂ ಕೂಡ, ವಾಸ ಮಾಡಕ್ಕೆ ಮನೆ ಇಲ್ದಲೆ, ತಿನ್ನಕ್ಕೆ ಅನ್ನಾ ಇಲ್ದಲನೆ ಸಾಯ್ತಿದ್ದಾರೆ…
ಇಷ್ಟೇ ನೋಡಿ ಬದುಕು ಹಲ್ಲು ಇದ್ದೋನ್ಗೆ ಕಡ್ಲೆ ಇಲ್ಲಾ‌, ಕಡ್ಲೆ ಇದ್ದೋನ್ಗೆ ಹಲ್ಲೆ ಇಲ್ಲಾ‌‌..
ದುಡ್ಡು ಇದ್ದೋನು ಪೂರ್ತಿ ತಿನ್ನಲ್ಲ..
ದುಡ್ ಇಲ್ದೋನು ಸಿಕ್ಕಿದ್ನೆ ಬಿಡಲ್ಲ‌..
ಇನ್ನು ಕೆಲ ಜನ ಮಕ್ಕಳ ಮದುವೇನ ಧಾಮ್ ಧೂಮ್ ಅಂತಾ ಜೋರಾಗ ಮಾಡ್ತಾರೆ ಹತ್ತಾರು variety ಊಟ ಮಾಡ್ಸಿರ್ತಾರೆ… ಮಿಕ್ಕಿದ್ ಊಟನ corporation ಗಾಡೀಲಿ ಕಸದ ರಾಶಿಲಿ ಹಾಕಿ ಕೈ ಸೀಟ್ಕೋತಾರೆ..
ಅದೇ ಕಸದಲ್ಲಿ ಹಾಕೋ ಬದ್ಲು ಯಾವುದಾದ್ರು ಅನಾಥ ಆಶ್ರಮಕ್ಕೋ ಇಲ್ಲಾ ಹಸಿದು ಬೀದಿನಲ್ಲಿ ಬಂದೋರ್ಗೆ ಕೊಟ್ರೆ ಅನ್ನದಾನಕ್ಕಿಂತ ಶ್ರೇಷ್ಠದಾನ ಮತ್ತೊಂದು ಇಲ್ಲಾ ಅನ್ನೋ ಭಾವನೆ ನಂದು…

ಇನ್ನೂ ಕೆಲವರು ರಾತ್ರಿ ಮಾಡಿದ್ದ ಅನ್ನ ಮಿಕ್ಕಿದ್ರೆ ಬೆಳಗ್ಗೆ ತಿನ್ನದೆ ಬಿಸಾಕ್ತಾರೆ , ನಾನ್ ತಂಗಳು ತಿನ್ನಲ್ಲ ಅಂತ ಧಿಮಾಕ್ ತೋರುಸ್ತಾರೆ…. ಕೆಲವರು ಮನೆ ಮುಂದೆ ಭಿಕ್ಷುಕ ಬಂದ್ರೆ ಅವನ ಪಾತ್ರೆಗೆ ಹಾಕ್ತರೆ , ಕೆಲವರು ಬೀದಿ ಹಸುಗಳು ತಿನ್ತವೆ ಅಂತಾ ಮುಸರೆಗೆ ಹಾಕ್ತಾರೆ..
ಇಲ್ಲಾ ಅಂದ್ರೆ ನಮ್ ಥರ ಮೋಸ್ಟ್ ವಾಂಟೆಡ್ ಬ್ಯಾಚುಲರ್ಸ್ ಆದ್ರೆ ಬೆಳಗ್ಗೆಗೆ ಅದೇ ಒಗ್ಗರಣೆ ರೈಸ್ …ಇವತ್ತು ರೈತ ಒಂದು ತುತ್ತು ಅನ್ನ ಬೆಳೆದು ನಮಗೆ ನೀಡಬೇಕು ಅಂದ್ರೆ ಅವನು ಪಡುವ ಕಷ್ಟ ಅಷ್ಟಿಷ್ಟಲ್ಲ..so ಎಲ್ಲರೂ ದಯಮಾಡಿ ತಿನ್ನುವ ಅಗಳನ್ನು waste ಮಾಡ್ಬೇಡಿ… ಒಂದೊಂದು ಕಾಳಿನಲ್ಲೂ ನೂರಾರು ಮಣ್ಣಿನ ಮಕ್ಕಳ‌ ಬೆವರು ಹನಿ ಇರುತ್ತೆ…

ಹಾಗಾಗಿ ರೈತನ ಪರಿಶ್ರಮ ಕ್ಕೆ ಬೆಲೆ ನೀಡಿ .. ಇವತ್ತು ಕಾವೇರಿ ಇರ್ಬೋದು , ಮಹದಾಯಿ ಇರ್ಬೋದು … ಆ ತಾಯಿನ‌ ನೆಚ್ಕೊಂಡು ಎಷ್ಟೋ ಕುಟುಂಬ ಗಳು ಜೀವನ ಸಾಗಿಸ್ತಿವೆ , ಕೃಷಿನೇ ಜೀವನ ಅನ್ಕೊಂಡು ಹೊದ್ದಾಡ್ತಿವೆ.‌ ನೀವೇನು ಇವತ್ IT BT ನಲ್ಲಿ ಟೈಮ್ – ಟೈಮ್ ಗೆ ತಿನ್ಕೊಂಡು , ಕುಡ್ಕೊನಮಡು ಲೈಪ್ ಲೀಡ್ ಮಾಡ್ತಿದ್ದೀರ ಇದ್ಕೆಲ್ಲಾ ನಮ್ ರೈತರೆ ಕಾರಣ..
ಹಾಗಾಗಿ ತಾವೆಲ್ಲ
ಅನ್ನದಾತನ ಬೆಂಬಲಕ್ಕೆ ಸದಾ ಮುನ್ನುಗ್ಗಿ ಬನ್ನಿ‌‌‌…
ಅವನ ಸಂಕಷ್ಟಕ್ಕೆ ಸದಾ ಕೈ ಜೋಡಿಸಿ .

ಜೈ ಜವಾನ್ ಜೈ ಕಿಸಾನ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಭಾರತದ ಜನಸಂಖ್ಯೆ ವರವೋ..? ಶಾಪವೋ..?

Published

on

ಸಾಂದರ್ಭಿಕ ಚಿತ್ರ

 

  • ಅಂಬಿಕಾ. ಕೆ
    ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
    ಬೆಂಗಳೂರು ವಿಶ್ವವಿದ್ಯಾಲಯ

 

ವಿಶ್ವ ಸಂಸ್ಥೆಯು ಪಾಪುಲೇಷನ್ ಫಂಡ್ ಮಾಡಿರುವ ಅಂದಾಜಿನ ಪ್ರಕಾರ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.

ದೇಶದ ಒಟ್ಟು ಜನಸಂಖ್ಯೆಯು 142.86 ಕೋಟಿಗೆ ಏರಿಕೆಯಾಗಿದ್ದು, ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ, ಇಂತಹದೊಂದು ಹಿರಿಮೆಗೆ ಭಾರತವು ಪಾತ್ರವಾಗಲಿದೆ ಎಂಬುದರ ಅರಿವು ಹಿಂದೆಯೇ ಇತ್ತು. ಹೊಸ ಭಾರತದ ಜನಸಂಖ್ಯೆಯ ಸ್ವರೂಪವೇನು ಮತ್ತು ಯಾವ ವಯೋ ಮಾನದವರು ಎಷ್ಟಿದ್ದಾರೆ. ಆದಾಯ ಮಟ್ಟ ಹೇಗಿದೆ, ಆದಾಯ ಹಂಚಿಕೆ ಹೇಗಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಒಟ್ಟು ಜನಸಂಖ್ಯೆಯ ಜತೆಗೆ ಈ ಎಲ್ಲಾ ಅಂಶಗಳು ಕೂಡ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವಿಕೆ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷಗಳು ಮತ್ತು ಗುಂಪುಗಳು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಗಳನ್ನು ನಿರ್ಧರಿಸುವಲ್ಲಿಯೂ ಈ ಅಂಶಗಳು ಪಾತ್ರವಹಿಸುತ್ತವೆ ಭಾರತದಲ್ಲಿ ಗರಿಷ್ಠ ಸಂಖ್ಯೆಯು ಯುವ ಜನರಿದ್ದಾರೆ.

ಹಾಗೆಯೇ ಮುಂದುವರೆಯಲಿದೆ 15 ರಿಂದ 24 ವರ್ಷದೊಳಗಿನವರ ಸಂಖ್ಯೆಯು 25.4 ಕೋಟಿ ಎಂದು ಅಂದಾಜಿಸಲಾಗಿದೆ ಇನ್ನು ದೀರ್ಘಕಾಲ ಭಾರತವು ಈ ಸ್ಥಿತಿ ಕಾಯ್ದುಕೊಳ್ಳಲಿದೆ ಎಂಬುದರಲ್ಲಿಯೂ ಅನುಮಾನ ಇಲ್ಲ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಏರುವುದು, ಗೌರವ ಏನು ಅಲ್ಲ ಬದಲಿಗೆ ಇದು ದೇಶಕ್ಕೆ ಹಲವು ಸವಾಲುಗಳನ್ನು ಹುಟ್ಟುತ್ತದೆ ಜತೆಗೆ ಅವಕಾಶಗಳ ಬಾಗಿಗಳನ್ನು ತೆರೆಯುತ್ತದೆ ಆದರೆ, ಜನರನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಲಿಸಿಕೊಳ್ಳದೆ ಇದ್ದರೆ ಜನಸಂಖ್ಯೆಯೇ ಶಾಪವಾಗಿ ದೊಡ್ಡ ಸವಾಲಾಗಿ ಪರಿಣಮಿಸಬಹುದು. ದೇಶ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಜನರಿಗೆ ಆಹಾರ ಬಟ್ಟೆ ಶಿಕ್ಷಣ ಆರೋಗ್ಯ ಸೇವೆ ಉದ್ಯೋಗಾವಕಾಶಗಳನ್ನು ಒದಗಿಸಬೇಕಾಗುತ್ತದೆ.

ಅಂಬಿಕಾ. ಕೆ

ಹೀಗೆ ಮುಂದುವರೆದರೆ ಉದ್ಯೋಗಾವಕಾಶಗಳು ದೊರೆಯದೆ ಜನರ ಜೀವನ ಮಟ್ಟ ಸುಧಾರಿಸಿಕೊಳ್ಳುವುದು ಕಷ್ಟವೇ ಸರಿ ಕೆಲಸ ಮಾಡುವ ವಯೋಮಾನದ ಜನರನ್ನು ಸಮಂಜಸವಾಗಿ ಬಳಸಿಕೊಂಡರೇ ಮಾತ್ರ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುತ್ತದೆ. ದೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಈಗಲೂ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರ ಗಳಿಗೆ ಸಂಬಂಧಿಸಿದ ಪ್ರಯತ್ನಗಳನ್ನು ನಡೆಸದೇ ಇದ್ದರೆ ಜನಸಂಖ್ಯೆ ಹೆಚ್ಚಳದ ಲಾಭವು ದೊರೆಯದೆ ಹೋಗಬಹುದು ಇದರ ಪರಿಣಾಮವಾಗಿ ಲಾಭದ ಹೆಸರಿನಲ್ಲಿ ನಷ್ಟವೇ ಹೆಚ್ಚು ಅದುವೇ ಒಂದು ಹೊರೆಯುವಾಗಬಹುದು.

ಯುವ ಜನರಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೆಚ್ಚುತ್ತಲೇ ಇರುವ ಹಿರಿಯ ನಾಗರಿಕರ ಹಾರೈಕೆಯು ವ್ಯವಸ್ಥೆ ಮಾಡಬೇಕಿದೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಮತ್ತು ಸವಾಲುಗಳನ್ನು ಎದುರಿಸುವುದು ಭಾರತೀಯರ ಹೊರೆಗಾರಿಕೆ ದೇಶದ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾದರೆ, ಸಾಮಾಜಿಕ ಸಂಘರ್ಷ ಮತ್ತು ರಾಜಕೀಯ ದೃಷ್ಟಿ ಉಂಟಾಗಿ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮುಂದೆ ಜನಸಂಖ್ಯಾ ಸ್ಫೋಟವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಈಗಿನ ಸನ್ನಿವೇಶದಲ್ಲಿ ದೊರಕುತ್ತಿರುವ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಪರಿಣಾಮಕಾರಿ ಬಳಕೆ ಬಹಳ ಮಹತ್ವವಾಗಿದೆ.

ಮೀಸಲಾತಿ, ವಲಸೆ , ರಾಜಕೀಯ ಪ್ರಾತಿನಿಧ್ಯ ಸಂಪನ್ಮೂಲಗಳ ಹಂಚಿಕೆ ಮತ್ತು ಇದರ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ ಸಮಾಜದ ಎಲ್ಲಾ ವರ್ಗಗಳನ್ನು ಸಮಾನವಾಗಿ ಒಳಗೊಳ್ಳುವ ಆರ್ಥಿಕ ಪ್ರಗತಿಯು ಸಾಧ್ಯವಾದರೆ ಜನಸಂಖ್ಯೆ ಏರಿಕೆ ಸವಾಲಾಗಿ ಪರಿಣಮಿಸಬಹುದು ಮಾನವ ಅಭಿವೃದ್ಧಿಯೇ ಅತ್ಯುತ್ತಮ ಕುಟುಂಬ ಕಲ್ಯಾಣ ಯೋಜನೆ ಇದರಿಂದ ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಜನಸಂಖ್ಯೆ ಹೆಚ್ಚಳ ಯಾವುದೋ ಒಂದು ಸಮುದಾಯ ಕಾರಣ ಎಂದು ದೂಷಿಸುವ ಪ್ರವೃತ್ತಿಗೆ ಜ್ಞಾನದಾದ ಆಧಾರ ಇಲ್ಲದ ಪೂರ್ವಗ್ರಹ ಕಾರಣದಿಂದ ಮತ್ತು ಇದು ತಪ್ಪು ನಡವಳಿಕೆಯ ಜನಸಂಖ್ಯೆಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಿದರೆ ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದೆ ಇದೆ ಜನರೇ ನಮ್ಮ ದೇಶದ ಸಂಪನ್ಮೂಲವನ್ನಾಗಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನಮ್ಮ ನಿಮ್ಮೆಲ್ಲರ ಮೇಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಾಬಾ ಸಾಹೇಬ ಅಂಬೇಡ್ಕರರ ‘ಧ್ಯಾನ’ ಗಾಯನ ; ವಿನೂತನ

Published

on

 

  • ವೆನ್ನೆಲಾ ಕೆ.
    ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ,
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
    ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು

ತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದ 132ನೇ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಜನುಮ ನಿಮಿತ್ತವಾಗಿ “ಧಾನ್ಯ” ‘ಗಾಯನವು’ ವಿನೂತನವಾದ ಈ ಕಾರ್ಯಕ್ರಮವು 5 ಘಂಟೆ, 1ನಿಮಿಷ, 14 ಸೆಕೆಂಡ್ ಗೆ ಆರಂಭವಾಗಿದ್ದು ಅವಿಸ್ಮರಣೀಯವಾದ ದಿನ, ಇದೊಂದು ಭಾರತ ಇತಿಹಾಸದ ಪುಟದ ಚರಿತ್ರೆಯಲ್ಲೇ ಹೊಸ ದಾಖಲೆಯೂ ಅಂತ ಹೇಳಬಹುದು.

ಈ ಕಾರ್ಯಕ್ರಮವನ್ನು ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ವು ಇಡೀ ಭಾರತದಲ್ಲೇ ಯಾರು ಮಾಡಿರದ ಈ ವಿನೂತವಾದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿರುವ ಗಾಂಧಿ ಭವನದ ಆವರಣದಲ್ಲಿ ‘ಅನನ್ಯ ಸಂಸ್ಥೆ’ ವತಿಯಿಂದ 132 ನೇ ‘ವಿಶ್ವದ ವೀರ ವಿದ್ಯಾರ್ಥಿ ಹುಟ್ಟಿದ ದಿನ’ ಹಾಗೂ ‘ರಾಷ್ಟ್ರದ ಸ್ಫೂರ್ತಿಯ ದಿನ’ ‘ಸರ್ವ ಸಮುದಾಯದ ಶಕ್ತಿಯ ದಿನ’ ಇದೊಂದು ನಮ್ಮೆಲ್ಲರ ಹಬ್ಬದ ದಿನ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಇಂತಹ ಮೇರು ಶಿಖರ ಟ್ಯಾಗ್ ಲೈನ್ ಗಳಿಂದ ಅದ್ಭುತವಾಗಿ
ಆಯೋಜಿಸಿದ ಕಾರ್ಯಕ್ರಮಕ್ಕೆ ರಾಜ್ಯ ಕಂಡ ಪ್ರಸಿದ್ಧ ಐಪಿಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಸಿನಿಮಾ ಸೆಲೆಬ್ರಿಟಿಗಳು, ಸಮಸ್ತ ವಿದ್ಯಾರ್ಥಿ ಸಮೂಹ, ಸಾಮಾಜಿಕ ನ್ಯಾಯದ ವಿಚಾರಶೀಲರು, ಬರಹಗಾರರು, ಪತ್ರಕರ್ತರು ಇನ್ನೂ ಅನೇಕ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದಕ್ಕೆ ಮುಖ್ಯ ಕಾರಣಕರ್ತರಾದ ಅನನ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಂಪುರ ರಾಜೇಶ್ ರವರ ನಿರ್ದೇಶನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ವಿಷಯ.

ಇದರ ಹಿನ್ನೆಲೆ: ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ದಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ತುಂಬಾ ಮನಸ್ಸಿನಿಂದಲ್ಲೇ ವಿಶೇಷವಾದ ಆಸಕ್ತಿಯನ್ನು ಅಂಬೇಡ್ಕರ್ ರವರು ಸಂಗೀತ ಪ್ರಿಯರು ಹಾಗೂ ಅಂಬೇಡ್ಕರ್ ರವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು. ಹಾಗೇಯೆ ಇವರಿಗೆ ಚಿತ್ರಕಲೆಯೂ ಸಹ ಒಲಿದಿತ್ತು ಎಂಬುದು ಗಮನಾರ್ಹ ಸಂಗತಿ. ಇಂತಹ ವಿಷಯವನ್ನು ಯಾರು ಸಹ ಬೆಳಕು ಚೆಲ್ಲುವ ಸಾಹಸಕ್ಕೆ ಕೈ ಹಾಕಿ ಇರಲಿಲ್ಲ. ಇದೊಂದು ಅನನ್ಯ ಸಂಸ್ಥೆ ವತಿಯಿಂದ ಇಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಐತಿಹಾಸಿಕ ಚರಿತ್ರೆಗೆ ಮುನ್ನುಡಿವಾಗಿದೆ.

ಅಂಬೇಡ್ಕರ್ ರವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಅದ್ಭುತವಾದ ಒಬ್ಬ ಸಂಗೀತ ಪ್ರಿಯರಾಗಿದ್ದರು. ಇವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು ಹಾಗೂ ವಿಶೇಷವಾಗಿ ಚಿತ್ರಕಲೆ ಸಹ ಸರಳವಾಗಿ ಮಾಡುವ ಮೂಲಕ ತಮ್ಮ ಮನದಲ್ಲಿ ಆಸಕ್ತಿ ಹೊಂದಿದ್ದರು. ಇನ್ನು ಹಲವಾರು ವಿಷಯದಲ್ಲಿ ಅಂದರೆ ಅಂಬೇಡ್ಕರ್ ರವರಿಗೆ ವಿಶೇಷವಾದ ಇವುಗಳಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿದ್ದರು ಎಂಬುದನ್ನು ಮನಗಂಡ ಅನನ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬಂದಿದೆ.

ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಚಿತ್ರ ಸಾಹಿತ್ಯಗಳು, ಅಂಬೇಡ್ಕರ್ ವಾದಿಗಳು ಮತ್ತು ಚಿತ್ರರಂಗದ ಬಹುಮುಖ ಪ್ರತಿಭೆ, ಮಹಾಗುರುಗಳಾದ ಡಾ. ಹಂಸಲೇಖ ರವರು ಹೊಸದಾಗಿ ಹಾಡನ್ನು ಬರೆದದ್ದು ತುಂಬಾ ಅವಿಸ್ಮರಣೀಯ ಅಂತ ಹೇಳಬಹುದು. ಇವರು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೊತ್ಸಾಹ ನೀಡಿದ್ದು, ಸರ್ವ ಸಮುದಾಯದಕ್ಕೆ ಹೊಸ ಶಕ್ತಿ ತುಂಬಿದ್ದು ಮೇರು ವ್ಯಕ್ತಿಯಾಗಿದ್ದಾರೆ.

ವೆನ್ನೆಲಾ ಕೆ.

ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ಮುಖ್ಯವಾದ ಅಂಶವೆಂದರೆ ಇದರಲ್ಲಿ ಒಟ್ಟು ನಾಲ್ಕು ಭಗವಾನ್ ಬುದ್ಧ, ಅಂಬೇಡ್ಕರ್, ಬಸವೇಶ್ವರ ಮುಂತಾದರವರನ್ನು ವಿಷಯಗಳನ್ನು ಪರಿಗಣಿಸಿ ಅಂಬೇಡ್ಕರ್ ಧ್ಯಾನ ಹಾಡುಗಳ ರಚಿಸಿವುದರಲ್ಲಿ ಪ್ರಮುಖವಾಗಿ ರಾಜ್ಯದ ಹೆಸರಾಂತ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಮಾಜಿ ಅಧ್ಯಕ್ಷರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ
‘ಧೀ ಶಕ್ತಿಯೇ … ಜ್ಞಾನ ಪರ್ವತದ … ಧೀಮಂತ ಧೀಶಕ್ತಿಯೇ …
ಇಂತಹ ಸಾಲುಗಳನ್ನು, ಡಾ. ಕೈ.ವೈ.ನಾರಾಯಣಸ್ವಾಮಿರವರ ದೀಪಾ …. ಎಲ್ಲರೆದೆಯಲಿ … ಹಚ್ಚಿದ ದೀಪಾ .. ಭೂಪಾ … ಭೂಪಾ … ಭೀಮಾ ಭೂಪಾ .. ಬಾಬಾ .. ಸಾಹೇಬ್.. ಜೀವಸ್ವರವೇ … ಬಾಬಾ.. ಹಾಗೂ ರವಿ ಮರಿಯಪ್ಪರವರ ಹತ್ತು ಸಾವಿರ ವಯಲಿನನ್ನು … ವೀಣೆಗಳು ನೂರೆಂಟು … ಕೋಟಿ ಕೋಟಿ ಎದೆ ಸದ್ದಿನ ಡೊಳ್ಳು … ಸಂಯೋಜಿಸಿದರೇ .. ಸಂವಿಧಾನಾ … ಮತ್ತು ಚಿತ್ರ ಸಾಹಿತಿ, ಹೆಸರಾಂತ ಸಂಗೀತ ನಿರ್ದೇಶಕರು ಡಾ. ಹಂಸಲೇಖ ರವರು ನಿನ್ನ ಮೌನಾ … ದೀನ ಗಾನಾ… ನಿನ್ನ ಧ್ಯಾನಾ .. ಸಂವಿಧಾನಾ … ಈ ನಾಲ್ಕು ಅಂಬೇಡ್ಕರ್ ಧ್ಯಾನ ರಚನೆಗೆ ಇವರುಗಳ ಬರೆದಿರುವ ಅದ್ಭುತವಾದ ಅಂಬೇಡ್ಕರ್ ರವರ ಧ್ಯಾನ ಹಾಡುಗಳನ್ನು ನಮ್ಮ ಹಿಂದುಸ್ತಾನಿ ಸಂಗೀತ ಹಾಡುಗಳ ಮೂಲಕ ಕನ್ವರ್ಟ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತು.

ಹಾಗೆಯೇ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಬೇಕಾದರೆ ಈ ಮೊದಲು ಪುಟ್ಟರಾಜ ಗವಾಯಿಗಳ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ಶ್ರೀ ಡಿ. ಕುಮಾರ್ ದಾಸ್ ಅವರ ವಿದ್ವತ್ ಶರೀರದಲ್ಲಿ ‘ಧ್ಯಾನ ಗಾಯನ’ ಹಾಗೂ ಇವರ ತಂಡದ ವತಿಯಿಂದ ನಡೆಸಿಕೊಟ್ಟ ಅದ್ಭತವಾದ ಅಂಬೇಡ್ಕರ್ ರವರ ಧ್ಯಾನವು ಹಿಂದುಸ್ತಾನಿ ಸಂಗೀತದ ಕನ್ವರ್ಟ್ ಮಾಡುವ ಮುಖಾಂತರ ಈ ಹಾಡುಗಳನ್ನು ಬಹಳ ಸೊಗಸಾಗಿ ಮೂಡಿಬಂದಿದ್ದು ಹೊಸ ದಾಖಲೆಗೆ ಸೇರ್ಪಡೆಯಾಗಿದೆ.

ಇನ್ನು ಮುಂಬರುವ ದಿನಗಳಲ್ಲಿ ಅದಷ್ಟು ಹಲವಾರು ವಿನೂತನವಾದ ಭಗವಾನ್ ಬುದ್ಧರ, ಬಸವೇಶ್ವರರ ಹಾಗೂ ವಿಶ್ವದ ವೀರ ವಿದ್ಯಾರ್ಥಿಯಾದ ಮೇರು ರಾಷ್ಟ್ರದ
ನಾಯಕರಾದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಹಲವಾರು ಹಾಡುಗಳನ್ನು
ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದರೆ ಇನ್ನುಷ್ಟು ಭಾರತದ ಇತಿಹಾಸದ ಪುಟಗಳಲ್ಲಿ ಮರೆತು ಹೋಗಿರುವ ಹಲವು ಬಗ್ಗೆ ದಾಖಲೆ ಇಲ್ಲದ ನೈಜ ಸಂಗತಿಗಳನ್ನು ಪುನಃ ಹೊಸ ದಾಖಲೆಗೆ ಉಪಯುಕ್ತವಾದ ವಿಶಿಷ್ಟವಾದ ಮೇರು ನಾಯಕನ
ಅಂಬೇಡ್ಕರ್ ರವರ ವಿಚಾರ ಧಾರೆಗಳು ತಾವು ಅನುಭವಿಸಿದ ನೋವು, ನಲಿವು, ಭಾರತದ ರಾಜ್ಯಾಂಗದ ಶಿಲ್ಪಿಯನ್ನು ಮುಂಬರುವ ದಿನಗಳಲ್ಲಿ ಹೊಸ ಪೀಳಿಗೆಯ ಪರಿಚಯಿಸುವ ಕೀರ್ತಿದಾಯಿಕವಾಗಲಿ ಮತ್ತು ಅದಷ್ಟು ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ರವರ ಆಸಕ್ತಿದಾಯಕ ವಿಚಾರಗಳು ಹಾಗೂ ಸಂಗೀತದ ಬಗ್ಗೆ ಹಲವಾರು ಮಾಹಿತಿಗಳು ಸಮಸಮಸಮಾಜಕ್ಕೆ ತಲುಪುವ ವ್ಯವಸ್ಥೆಗೆ ಸಾಕ್ಷಿಯಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ರಷ್ಯಾದಲ್ಲಿ ಓಂ – ಭರತಾಸ್- ರಾಮ – ರಾವಣ ಲಂಕೇಶ – ಮಾರೀಚ – ಸೀತ ನದಿಗಳು..!

Published

on

  • ಲಕ್ಷ್ಮೀಪತಿ ಕೋಲಾರ, ಸಂಶೋಧಕರು, ಸಂಸ್ಕೃತಿ‌ ಚಿಂತಕರು, ಬೆಂಗಳೂರು

ಸ್ಲಾವ್ ಸಮುದಾಯದ ಲಿತುವೇನಿಯ, ಲಾತ್ವಿಯ, ಬೆಲಾರಸ್,ಉಕ್ರೇನ್ ಮತ್ತು ರಷಿಯಾದಂತಹ ದೇಶಗಳ ನದಿ,ನಗರಗಳು ಸಂಸ್ಕೃತ ಮೂಲದ ಹೆಸರುಗಳನ್ನೆ ಇಂದಿಗು ಉಳಿಸಿಕೊಂಡಿರುವುದು ಆ ಭಾಷೆ ಮತ್ತು ಸಂಬಂಧಿತ ಸಂಸ್ಕೃತಿಯೊಂದಿಗೆ ಅವು ಹಿಂದೊಮ್ಮೆ ಹೊಂದಿದ್ದ ಬಲವಾದ ನಂಟಿಗೆ ಸಾಕ್ಷಿಯಾಗಬಲ್ಲವು.

ಇದರೊಂದಿಗೆ ಉತ್ತರ ಭಾರತದ ಆರ್ಯ ವೈದಿಕರ ಭಾಷೆ ಸಂಸ್ಕೃತಿಯೊಂದಿಗೆ ಸ್ಲಾವ್ ಸಮುದಾಯಕ್ಕೆ ಎಷ್ಟು ನಿಕಟ ಸಂಬಂಧವಿತ್ತೆಂಬುದನ್ನು ಮತ್ತು ನಾಲ್ಕೈದು ಸಾವಿರ ವರ್ಷಗಳ ಹಿಂದೆ ಈ ಎಲ್ಲ ಆರ್ಯ ಸಮುದಾಯಗಳು ಒಟ್ಟಿಗೆ ಒಂದೆಡೆಯೇ ಕಳ್ಳುಬಳ್ಳಿಗಳಾಗಿ ಜೀವಿಸಿದ್ದರೆಂಬುದನ್ನ ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಬಹುದಾಗಿದೆ.

ಅದರಲ್ಲು ವಿಶೇಷವಾಗಿ ಲಿತುವೇನಿಯ ಮತ್ತು ರಷಿಯಾದ ನದಿಗಳ ಹೆಸರುಗಳು ಎಷ್ಟು ಸಂಸ್ಕೃತಮಯವು (ಇಂಡೋ – ಯುರೋಪಿಯನ್ ಭಾಷಾಮೂಲದ) ಮತ್ತು ವೈದಿಕರ ಪುರಾಣ ಮೂಲದವು ಆಗಿವೆ ಎಂದರೆ, ನಂಬಲಿಕ್ಕು ಅಸಾಧ್ಯ ಎಂಬಂತಿವೆ. ಇದರರ್ಥ ಸ್ಲಾವ್ ಜನರು ವೈದಿಕರ ಪುರಾಣಗಳಿಂದ ಪ್ರೇರಿತಗೊಂಡಿದ್ದಾರೆ ಎಂಬುದಲ್ಲ.

ಬದಲಿಗೆ ವೈದಿಕರ ಇಂದಿನ ಪುರಾಣ – ಸಂಸ್ಕೃತಿ – ಭಾಷೆಗಳು ವೈದಿಕರಿಗೆ ಎಷ್ಟು ಸಂಬಂಧಿಸಿದ್ದೋ ಅದಕ್ಕು ಹೆಚ್ಚಿನದಾಗಿ ಸ್ಲಾವ್ ಸಮುದಾಯಕ್ಕೂ ಸಂಬಂಧಿಸಿದ್ದಾಗಿದ್ದವು. ಹಾಗೆ ನೋಡಿದರೆ ಬ್ರಹ್ಮ – ವೇದ ಮೂಲವು ಕೂಡ ಸ್ಲಾವ್ ಸಮುದಾಯದ ಉತ್ತರ ಧ್ರುವ ಪ್ರದೇಶಕ್ಕೆ ಹೋಗಿ ನಿಲ್ಲುತ್ತದೆ ಎಂಬುದು ಸೋಜಿಗವಾದರು ನಿರ್ವಿವಾದವಾಗಿ ಚಾರಿತ್ರಿಕ ಸತ್ಯವಾಗಿದೆ. 12 – 13 ನೇ ಶತಮಾನಗಳಲ್ಲಿ ಸ್ಲಾವ್ ಜನರು ಕ್ರೈಸ್ತರಾಗಿ ಪರಿವರ್ತಿತರಾಗುವವರೆಗು ಅವರು ಶತಾಂಶ ಮತ್ತು ಥೇಟ್ ಶ್ರೇಷ್ಟ ಆರ್ಯ ವೈದಿಕರೆ ಆಗಿದ್ದರು.

ರಷ್ಯ ಮತ್ತು ಲಿತುವೇನಿಯಾಗಳಲ್ಲಿ ಭರತಾಸ್, ಓಂ, ರಾಮ, ಸೀತ, ಲಂಕೇಶ, ರಾವಣ, ಮಾರೀಚ, ನೆಮುನ (ಯಮುನ), ಕಾಮ, ಯಂತ್ರ, ಶ್ವೇತೆ, ದ್ರವ, ಮೋಕ್ಷ, ಋಗ್ವೇದದ ದಾನವ ಮಾತೆ ದನು ನೆನಪಿನ ದನುಬೆ ಮುಂತಾದ ನದಿಗಳು ಮತ್ತು ನಾರದ (ಈಗ ನರೋದ್ನಯ ಎಂದಿದ್ದರು ಸ್ಥಳೀಯರು ನಾರದ ಬೆಟ್ಟ ಎಂದೇ ಕರೆಯುತ್ತಾರೆ) ಹೆಸರಿನ ಬೆಟ್ಟವು ಇವೆ ಎಂದರೆ ಯಾರೂ ಅಚ್ಚರಿಪಡುವಂತದ್ದೆ.

ಯಾರಿಗಾದರು ಈ ಸಂಗತಿಗಳಲ್ಲಿ ಅನುಮಾನ ಹುಟ್ಟುವುದು ಸಹಜವೆ. ಯಾಕೆಂದರೆ ಸ್ಲಾವ್ – ವೈದಿಕ ಆರ್ಯರ ಮೂಲ ಪ್ರದೇಶವೆ ಉತ್ತರ ದ್ರುವ ಪ್ರದೇಶವಾಗಿತ್ತು ಎಂಬ ಚರಿತ್ರೆಯನ್ನೇ ನಮ್ಮಿಂದ ಮರೆಮಾಚಲಾಗಿತ್ತು ಮತ್ತು ಅದು ಬಹುದೊಡ್ಡ ಸಾಂಸ್ಕೃತಿಕ ರಾಜಕಾರಣವೂ ಆಗಿತ್ತು. ಆದರೆ ತಿಲಕರು ತಮ್ಮ “Arctic Home In the Vedas” ಎಂಬ ಪುಸ್ತಕದಲ್ಲಿ ಉತ್ತರ ಭಾರತದ ವೈದಿಕ ಆರ್ಯರ ತವರು ನೆಲ ಉತ್ತರ ದ್ರುವ ಪ್ರದೇಶವೆ, ಅಂದರೆ ಇಂದಿನ ಲಿತುವೇನಿಯ, ಲಾತ್ವಿಯ, ಬೆಲಾರಸ್ ಪ್ರದೇಶಗಳೇ ಆಗಿದ್ದವು ಎಂದು ಸಮರ್ಥ ಸಾಕ್ಷಾಧಾರಗಳೊಂದಿಗೆ ನಿರೂಪಿಸಿದ್ದಾರೆ.

ರಷ್ಯಾದಲ್ಲಿ ಸಂಸ್ಕೃತ ಭಾಷಾಮೂಲದ ನೂರಾರು ನದಿಗಳಿವೆ. ಭಾರತದಲ್ಲಿ ಕೆಲವು ನದಿಗಳನ್ನ ಹೊರತುಪಡಿಸಿದರೆ ಆ ಪ್ರಮಾಣದ ವೈದಿಕ ಪುರಾಣ ಮೂಲದ ನದಿ ಹೆಸರುಗಳು ಈ ನೆಲದಲ್ಲಿ ಇಲ್ಲವೆಂಬುದು ಪ್ರಾಚೀನ ಕಾಲದಿಂದಲು ಆರ್ಯ ವೈದಿಕರು ಇಲ್ಲಿರಲಿಲ್ಲವೆಂಬುದನ್ನೇ ಸೂಚಿಸುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ11 hours ago

ಒಡಿಶಾ ರೈಲು ದುರಂತ; 80ಕ್ಕೂ ಹೆಚ್ಚು ಕನ್ನಡಿಗರು ಬೆಂಗಳೂರಿಗೆ ಆಗಮನ

ಸುದ್ದಿದಿನ, ಬೆಂಗಳೂರು: ಒಡಿಶಾದ ರೈಲು ದುರಂತದಲ್ಲಿ ಪಾರಾದ 80ಕ್ಕೂ ಹೆಚ್ಚು ಕನ್ನಡಿಗರು ವಿಮಾನದ ಮೂಲಕ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಕಾರ್ಮಿಕ ಸಚಿವ...

ದಿನದ ಸುದ್ದಿ11 hours ago

ರೈತರಿಂದ ಖರೀದಿಸುವ ಹಾಲಿನ ದರ ಕಡಿಮೆ ಮಾಡುವಂತಿಲ್ಲ : ಸಿಎಂ ಸಿದ್ದರಾಮಯ್ಯ ಸೂಚನೆ

ಸುದ್ದಿದಿನ, ಬೆಂಗಳೂರು: ರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರದಲ್ಲಿ ಯಾವುದೇ ಕಡಿತ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹಾಲು ಉತ್ಪಾದನೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಅಮೂಲ್...

ಲೈಫ್ ಸ್ಟೈಲ್20 hours ago

ರಣ ಬೇಟೆಗಾರ ‘ಕೆನ್ನಾಯಿ’ ವಿನಾಶವಾದ ಕತೆ..!

ಸಂಜಯ್ ಹೊಯ್ಸಳ ಕೆನ್ನಾಯಿಗಳು ಕಾಡಿನ ಬೇಟೆಗಾರ ಪ್ರಾಣಿಗಳಲ್ಲಿ ಅತ್ಯಂತ ನಿಷ್ಣಾತ, ಅತ್ಯಂತ ಯಶಸ್ವಿ ಬೇಟೆಗಾರ ಪ್ರಾಣಿಗಳು. ಅತ್ಯಂತ ಬಲಶಾಲಿ ಪ್ರಾಣಿಯಾದ ಹುಲಿಗಳ ಬೇಟೆಯ ಯಶಸ್ಸಿನ ಸರಾಸರಿಯೆ ಕೇವಲ...

ದಿನದ ಸುದ್ದಿ20 hours ago

ಒಡಿಶಾದಲ್ಲಿ ಸಿಲುಕಿರುವ ಕನ್ನಡಿಗರು ಇಂದು ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮನ

ಸುದ್ದಿದಿನ ಡೆಸ್ಕ್ : ಕೋಲ್ಕತಾದ ಹೌರಾದಲ್ಲಿ ಸಿಲುಕಿರುವ ಕನ್ನಡಿಗರನ್ನು ವಿಶೇಷ ವಿಮಾನದಲ್ಲಿ ಕರ್ನಾಟಕಕ್ಕೆ ಕರೆ ತರಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಇಂದು ಬೆಳಗ್ಗೆ ವಿಶೇಷ...

ದಿನದ ಸುದ್ದಿ23 hours ago

ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾವಳಿಗೆ ಕ್ರೀಡಾಪಟುಗಳ ಆಯ್ಕೆ

ಸುದ್ದಿದಿನ,ದಾವಣಗೆರೆ: ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾವಳಿಗೆ ದಾವಣಗೆರೆ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ಆಯ್ಕೆಯಾಗಿರುವರು. ಜೂನ್.6 ರಿಂದ 12ರ ವರೆಗೆ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಎಸ್.ಜಿ.ಎಫ್.ಐ. 19 ವರ್ಷದೊಳಗಿನ...

ದಿನದ ಸುದ್ದಿ23 hours ago

ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರ

ಸುದ್ದಿದಿನ,ದಾವಣಗೆರೆ : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ನಗರದ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಜೂನ್ 5 ಮತ್ತು 6 ರಂದು...

ದಿನದ ಸುದ್ದಿ23 hours ago

ಜೂನ್ 8 ರಿಂದ ಕೋಳಿ ಸಾಕಾಣಿಕೆ ತರಬೇತಿ ಶಿಬಿರ

ಸುದ್ದಿದಿನ,ದಾವಣಗೆರೆ : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ನಗರದ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಜೂನ್ 8 ಮತ್ತು 9 ರಂದು 25...

ದಿನದ ಸುದ್ದಿ23 hours ago

ನಾಳೆ ದಾವಣಗೆರೆಗೆ ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ದಾವಣಗೆರೆ : ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ಜೂನ್ 5 ರಂದು ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಜೂನ್ 5 ರಂದು ಮಧ್ಯಾಹ್ನ 12.15 ಕ್ಕೆ ಹೆಲಿಕ್ಯಾಪ್ಟರ್ ಮೂಲಕ...

ದಿನದ ಸುದ್ದಿ2 days ago

ಡಿ.ಇ.ಎಲ್.ಇ.ಡಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : 2023-24ನೇ ಸಾಲಿನ 2 ವರ್ಷದ ಡಿ.ಇ.ಎಲ್.ಇ.ಡಿ ಕೋರ್ಸ್ ಪ್ರವೇಶಕ್ಕಾಗಿ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಗಳನ್ನು www.schooleducation.kar.nic.in ನಲ್ಲಿ ಡೌನ್‍ಲೋಡ್ ಮಾಡಿಕೊಂಡು ನಿಗದಿತ...

ದಿನದ ಸುದ್ದಿ2 days ago

ದಾವಣಗೆರೆ | ಶತಮಾನದ ಕೆ.ಆರ್.ಪೇಟೆ ಸರ್ಕಾರಿ ಶಾಲೆಗೆ ಡಿಸಿ ಶಿವಾನಂದ ಕಾಪಶಿ ಭೇಟಿ ; ಕಟ್ಟಡದ ಗುಣಮಟ್ಟದ ವರದಿ ನೀಡಲು ಇಂಜಿನಿಯರ್‍ಗೆ ಸೂಚನೆ

ಸುದ್ದಿದಿನ,ದಾವಣಗೆರೆ : ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಲಾದ ದಾವಣಗೆರೆ ಕೆ.ಆರ್.ಪೇಟೆ ಸರ್ಕಾರಿ ಮಾಧ್ಯಮಿಕ ಶಾಲೆಗೆ ಶುಕ್ರವಾರ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಭೇಟಿ ನೀಡಿ ಪರಿಶೀಲಿಸಿದರು. ಈ ಶಾಲೆಯನ್ನು ನಿರ್ಮಿಸಿ...

Trending