ದಿನದ ಸುದ್ದಿ
ಲೋಕರೂಢಿಯ ಮೀರಿ, ನಿರಾಕರಣೆಯೊಳಗಿನ ಸೌಜನ್ಯದ ಧ್ವನಿ ಸೌಂದರ್ಯ
- ಡಾ.ಎನ್.ಕೆ.ಪದ್ಮನಾಭ
ಲೋಕದ ರೂಢಿಗಳ ಮೀರುವುದನ್ನು ಸಾಂಪ್ರದಾಯಿಕ ದೃಷ್ಟಿಕೋನವು ಅಕ್ಷಮ್ಯ ಎಂದು ಪರಿಗಣಿಸುತ್ತದೆ. ಅಷ್ಟೇ ಅಲ್ಲ, ಮೀರಿದರೆ ಆಗುವ ಅಪಾಯಗಳನ್ನೂ ನೆನಪಿಸುತ್ತಾ ಭಯ ಹುಟ್ಟಿಸುತ್ತಾ ಚೌಕಟ್ಟುಗಳ ವ್ಯಾಪ್ತಿಯನ್ನು ಹಿಗ್ಗಿಸುತ್ತದೆ.
ಸ್ಥಗಿತತೆ ಶಾಶ್ವತವಾಗಿರಬೇಕು ಎಂಬ ಹುಮ್ಮಸ್ಸಿನಲ್ಲಿ ಚಲನೆಯ ನಿಜದಜೀವಂತಿಕೆಯನ್ನುಇಲ್ಲವಾಗಿಸುವುದರಕಡೆಗೇಅತ್ಯುತ್ಸಾಹದಲ್ಲಿ ಮುನ್ನಡೆಯುತ್ತಿರುತ್ತದೆ. ಈಗ ಅದರದ್ದು ಕೇವಲ ಅತ್ಯುತ್ಸಾಹವಾಗಿಯಷ್ಟೇ ಉಳಿದಿಲ್ಲ. ಲೋಕರೂಢಿ ಮೀರುವವರನ್ನು ಬಲಿತೆಗೆದುಕೊಳ್ಳುವ ಮತ್ತು ನಿಶ್ಚಲ ಸ್ಥಿತಿಯನ್ನು ಹಿಂದೆಂದಿಗಿಂತಲೂದಟ್ಟವಾಗಿ ಪ್ರತಿಷ್ಠಾಪಿಸುವ ಕ್ರೌರ್ಯದರೂಪವನ್ನೂ ಪಡೆದುಕೊಂಡುಬಿಟ್ಟಿದೆ.
ಈ ಸಾಂಪ್ರದಾಯಿಕ ಜಾಡ್ಯವನ್ನು ಎದುರುಗೊಳ್ಳುವ, ಚಲನೆಯ ಜೀವಂತಿಕೆಗೆ ಜೀವತುಂಬುವ ದಾರಿಅತ್ಯಂತಕಠಿಣವಾದದ್ದು. ಈ ಹಂತದಲ್ಲಿ ಬಂಡಾಯದ ಆಕ್ರಾಮಕ ಆವೇಶಭರಿತಧ್ವನಿ ಮುಖ್ಯವೋಅಥವಾ ಸೌಜನ್ಯದ ಸಂಯಮಪೂರ್ಣ ಪ್ರಖರ ವೈಚಾರಿಕ ವಿವೇಚನೆಯ ಮಾದರಿ ಮಹತ್ವದ್ದೋಎಂಬುದನ್ನು ಸ್ಪಷ್ಟಪಡಿಸಿಕೊಳ್ಳಲೇಬೇಕಾಗುತ್ತದೆ.
ಇಲ್ಲದಿದ್ದರೆ ಸಾಂಪ್ರದಾಯಿಕತೆಯ ವಿಚಿತ್ರ ಹಠದತಕಧಿಮಿಗುಟ್ಟುವಿಕೆ ಮತ್ತಷ್ಟು ಹೆಚ್ಚಾಗುತ್ತದೆ. ಆಕ್ರಾಮಕ ಪರಿಭಾಷೆ ಮತ್ತುಆಕ್ರೋಶಭರಿತಆವೇಶಕ್ಕಿಂತ ಸೌಜನ್ಯದ ಧ್ವನಿಯೊಂದಿಗಿನ ಮನವರಿಕೆಯ ಮಾತೃತ್ವದ ಶೈಲಿಯು ಸಾಮಾಜಿಕ ಚಲನೆಗೆ ಬೇಕಾದ ಪೂರಕ ವಾತಾವರಣ ಸೃಷ್ಟಿಸುತ್ತದೆ.
ಚೇತನ ಸೋಮೇಶ್ವರಅವರ ‘ಲೋಕರೂಢಿಯ ಮೀರಿ’ ಕೃತಿಯೊಳಗೆ ಇಂಥದ್ದೊಂದು ಸದಾಶಯವಿದೆ. ಎ.ಎನ್.ಮೂರ್ತಿರಾವ್ ಎಂಬ ವೈಚಾರಿಕ ವ್ಯಕ್ತಿತ್ವ ಸಾಮಾಜಿಕ ಸಾಂಪ್ರದಾಯಿಕತೆಯನ್ನು ಎದುರುಗೊಂಡ ವಿವೇಚನಾತ್ಮಕ ವೈಚಾರಿಕ ಹೆಜ್ಜೆಗಳ ಕುರಿತಾದಪ್ರಸ್ತಾಪವು ಈ ಕೃತಿಯ ಸದಾಶಯವನ್ನು ಇನ್ನಷ್ಟು ಅಧಿಕೃತಗೊಳಿಸುವಲ್ಲಿ ಯಶಸ್ವಿಯಾಗಿದೆ. ಸದ್ಯದ ಕಾಲವು ಚಲನೆಗೆ ಹೊರಳಿಕೊಳ್ಳುವ ದಾರಿಯಾವುದಾಗಿರಬೇಕುಎಂಬುದನ್ನು ಮನಗಾಣಿಸುವಲ್ಲಿಯೂಗೆದ್ದಿದೆ.
ಈ ಕೃತಿಯೊಳಗೇ ಅಡಕವಾಗಿರುವ ‘ಲೋಕರೂಢಿ ಮೀರುವ’ ಸದಾಶಯಕ್ಕೆ ಸದ್ಯದ ವೈಚಾರಿಕ ಬಿಕ್ಕಟ್ಟುಗಳ ಸ್ವರೂಪವನ್ನು ಬದಲಿಸುವ ಶಕ್ತಿ ಇದೆ. ವಾಚಾಳಿತನದ ಗೀಳಿನ ಪರಿಭಾಷೆಯನ್ನೇ ಬಹುದೊಡ್ಡ ಬಂಡಾಯ ಎಂಬ ತಪ್ಪುಕಲ್ಪನೆಯನ್ನುಇಲ್ಲವಾಗಿಸುವಂಥಮಾರ್ಗದರ್ಶಿಸೂತ್ರ ಹೊಳೆಸುವ ಗುಣಲಕ್ಷಣವಿದೆ. ಬಂಡಾಯ ಕ್ಕಿಂತ ತಿಳಿವ ತಿಳಿಗೊಳಿಸುವ ಕಾಳಜಿಯುತ ತಿಳುವಳಿಕೆಯ ಅಗತ್ಯವನ್ನು ಪ್ರತಿಪಾದಿಸುವ ನೋಟಕ್ರಮವಿದೆ. ‘ದೇವರ’ ಅಸ್ತಿತ್ವ ಅಥವಾಧರ್ಮವಲ್ಲದ ‘ಧರ್ಮ’ – ಇವೆರಡರ ನಿರಾಕರಣೆಯೊಳಗೂ ಅಡಗಿರಬಹುದಾದ ಸೌಜನ್ಯದಧ್ವನಿಸೌಂದರ್ಯವನ್ನುಕಾಣಿಸುವ ನಿಜದ ಬೆಳಕಿದೆ.
ಲೋಕರೂಢಿಯನ್ನು ಮೀರುವುದುಅಗತ್ಯ ಮಾತ್ರವಲ್ಲ, ಅನಿವಾರ್ಯತೆಯೂ ಹೌದು ಎಂಬುದನ್ನುಚೇತನ ಸೋಮೇಶ್ವರ ಅವರು ಆಪ್ತವಾಗಿ ಸ್ಪಷ್ಟಪಡಿಸುತ್ತಾರೆ. ಎ.ಎನ್.ಮೂರ್ತಿರಾವ್ಅವರಂಥ ಪ್ರಖರ ವೈಚಾರಿಕ ಶಕ್ತಿಯನ್ನು ಪಿ.ಎಚ್.ಡಿ ಸಂಶೋಧನೆಯ ಕೇಂದ್ರವಾಗಿಸಿಕೊಳ್ಳುವುದೂ ಒಂದು ಬಗೆಯ ಮೀರುವಕ್ರಮವೇಆಗಿದೆ.
ಉನ್ನತ ಶಿಕ್ಷಣ ವ್ಯವಸ್ಥೆಯ ಒಳಗೇ ಇರುವಕ್ಲೀಷಾ ಚೌಕಟ್ಟುಗಳನ್ನು ಒಡೆಯುವ ಮತ್ತು ಆ ಮೂಲಕ ವಿಶ್ವವಿದ್ಯಾಲಯಗಳೊಳಗಿನ ಸವಕಲು ರೂಢಿಗಳನ್ನು ಮೀರುವದಾರಿಯನ್ನೂತಮ್ಮ ಸಂಶೋಧನಾ ಪ್ರಬಂಧದ ಮೂಲಕ ಅವರು ಕಾಣಿಸಿದ್ದಾರೆ. ಇದನ್ನುಕೃತಿರೂಪದಲ್ಲಿ ಹೊರತಂದು ಸಾಮಾಜಿಕ ಚಲನೆಯ ಹಾದಿಯನ್ನು ‘ಅವಧಿ’ಯಜಿ.ಎನ್.ಮೋಹನ್ಅವರು ಅಧಿಕೃತಗೊಳಿಸಿದ್ದಾರೆ. ಈ ಹೆಜ್ಜೆಯು ಸಾಮಾಜಿಕ ಚಲನೆಯ ‘ಅವಧಿ’ಯನ್ನು ವಿಸ್ತರಿಸಿದ್ದರ ಸಂಕೇತವೂ ಹೌದು.
ಎಲ್ಲಾ ಕಾಲಗಳಲ್ಲೂ ವಿಜೃಂಭಿಸುವ ಲೋಕರೂಢಿಗಳೊಳಗಿನ ಟೊಳ್ಳುತನವನ್ನು ಪ್ರಶ್ನಿಸಿ ಅವುಗಳಿಗೆ ಪರ್ಯಾಯವಾದ ಆಲೋಚನೆಗಳನ್ನು ಹೊಳೆಸುವ ಪ್ರಯತ್ನಗಳು ನಡೆಯುತ್ತಲೇಇರುತ್ತವೆ. ಅವುಗಳಿಗೆ ಸಿಗುವ ಪ್ರತಿಸ್ಪಂದನೆ ಯಾವುದೇ ರೀತಿಯದ್ದೇ ಇರಲಿ, ಅವುಗಳು ತದನಂತರದ ಕಾಲಘಟಕ್ಕೆ ಬೇಕಾಗುವ ಮಾದರಿಗಳನ್ನು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸಾಹಿತ್ಯ ಮತ್ತು ಕಲಾ ಮಾಧ್ಯಮಗಳು ಇಂಥ ಮಾದರಿಗಳನ್ನು ಮುನ್ನೆಲೆಗೆತರುತ್ತವೆ. ಇವುಗಳ ಅಭಿವ್ಯಕ್ತಿಯು ಲೋಕೋದ್ಧಾರದ ನಿಜದದಾರಿಯನ್ನುಕಾಣಿಸುವ ಹೊಣೆಗಾರಿಕೆಯನ್ನುಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದೆ.
ಅಧಿಕಾರ ವ್ಯವಸ್ಥೆ, ರಾಜಕೀಯ ವಲಯ ಮತ್ತುರಂಜನೀಯಉದ್ಯಮದೇವರು, ಧರ್ಮ ಮತ್ತು ಮನುಷ್ಯ ಸಂಕುಚಿತತೆಯನ್ನೇತನ್ನ ಲಾಭಕ್ಕೆ ಬಳಸಿಕೊಂಡಾಗಲೆಲ್ಲಾ ಸಾಹಿತ್ಯ ಮತ್ತು ಕಲೆ ವಿವೇಚನೆಯಕಡೆಗೆ ಸಮಾಜವನ್ನು ಮುನ್ನಡೆಸುವಂಥ ಕಾಣ್ಕೆಗಳನ್ನು ನೀಡಿವೆ.
ಎ.ಎನ್.ಮೂರ್ತಿರಾವ್ಅವರ ಬರಹಗಳ ಹಿಂದಿನ ಸ್ಫೂರ್ತಿ ಈ ತರಹದ ಕಾಣ್ಕೆಗಳೇ. ಇವುಗಳನ್ನು ಗ್ರಹಿಸಿ ಒಂದು ಸ್ಪಷ್ಟ ವಿವೇಚನಾತ್ಮಕ ನಿಲುವು ತಳೆಯುವುದಕ್ಕೆ ‘ಲೋಕರೂಢಿಯ ಮೀರಿ’ ಕೃತಿ ನೆರವಾಗುತ್ತದೆ. ಈ ಕಾಣ್ಕೆಗಳನ್ನು ಸದ್ಯದ ವೈರುಧ್ಯಗಳ ನಡುವೆ ನೋಡುವ, ಆ ಮೂಲಕ ವ್ಯಕ್ತಿಗತವಾಗಿ ಸ್ಪಷ್ಟಗೊಳ್ಳುವುದಕ್ಕೆ ಚೇತನ ಸೋಮೇಶ್ವರಅವರ ವಿಶ್ಲೇಷಣೆಯಕ್ರಮವುಓದುಗರನ್ನು ಸಿದ್ಧಪಡಿಸುತ್ತದೆ.
ಈಗ ಅಧಿಕಾರ ಕೇಂದ್ರಗಳು ಮತ್ತು ಅವುಗಳನ್ನು ಪ್ರತಿನಿಧಿಸುವವರು ‘ಅಜ್ಜ ನೆಟ್ಟಆಲದ ಮರ’ದಆಶ್ರಯ ಪಡೆದುಅದರ ನೆರಳಿನ ಕೆಳಗೆ ವಿಕೃತಿಯ ಬಿಂಬಗಳನ್ನು ಮೂಡಿಸುತ್ತಲೇಇದ್ದಾರೆ. ಒಂದು ಕಡೆಗೆ ದೇವರು, ಧರ್ಮದಕುರಿತ ನಂಬಿಕೆಯಜಗತ್ತು. ಇನ್ನೊಂದುಕಡೆಗೆ ಇವುಗಳನ್ನು ನಿರಾಕರಿಸುವ ವೈಚಾರಿಕ ಲೋಕ. ಇವೆರಡನ್ನೂ ಪರಸ್ಪರ ವಿರೋಧಾತ್ಮಕವಾಗಿ ನೋಡಬೇಕೇ ಅಥವಾ ಒಂದನ್ನೊಂದು ಅನುಸಂಧಾನಗೊಳಿಸಿಕೊಂಡು ವರ್ತಮಾನವನ್ನು ಸುಂದರವಾಗಿಸಿಕೊಳ್ಳುವುದರ ಕಡೆಗೆಗಮನಹರಿಸಬೇಕೇ ಎಂಬ ದ್ವಂದ್ವಕ್ಕೆ ಈ ಕೃತಿ ಪರಿಹಾರ ಹೇಳುತ್ತದೆ.
ನಂಬಿಕೆ ಮತ್ತು ವೈಚಾರಿಕತೆಇವೆರಡರ ನಡುವಿನ ಅನುಸಂಧಾನಾತ್ಮಕ ನಿಕಷವು ಸಮಾಜಕ್ಕೆ ಬೇಕಾದ ಒಳನೋಟಗಳನ್ನು ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ. ವಚನ, ದಾಸ ಮತ್ತುತತ್ವಪದ ಸಾಹಿತ್ಯ ಪ್ರತಿಪಾದಿಸಿದ್ದು ಈ ತರಹದ ಒಳನೋಟಗಳನ್ನೇ. ನಂಬಿಕೆ ಮೌಢ್ಯಕ್ಕೆತಿರಗುದ ಹಾಗೆ ನೋಡಿಕೊಂಡ ಒಳನೋಟಗಳಿವು. ಇವನ್ನು ಸರಿಯಾಗಿ ಅರ್ಥೈಸಿಕೊಂಡ ಕಾರಣಕ್ಕಾಗಿಯೇ ಈ ದೇಶವು ವೈವಿಧ್ಯತೆಯ ನೆಲೆಯಾಗಿದೆ. ಇದನ್ನು ಗೊತ್ತುಮಾಡಿಕೊಳ್ಳುವುದಕ್ಕೆ ಈ ಕೃತಿಒತ್ತಾಸೆ ಮೂಡಿಸುತ್ತದೆ.
ದೇವಾಲಯಗಳು, ಧರ್ಮಗಳನ್ನು ಆಧರಿಸಿಕೊಂಡು ಪ್ರತಿಷ್ಠಾಪಿತವಾಗುವ ಸಾಮಾಜಿಕ-ದೈವಿಕ ಸಂಸ್ಥೆಗಳು ನಿಜವಾದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಾಗ ಲೋಕರೂಢಿಗಳನ್ನೇ ಆಶ್ರಯಿಸುತ್ತವೆ. ಬಹುಹಿಂದಿನಿಂದಲೂ ನಡೆದುಕೊಂಡು ಬಂದ ಸಾಂಪ್ರದಾಯಿಕ ವಿಧಿವಿಧಾನಗಳನನ್ನು ವೈಭವೀಕರಿಸಿ ದೇವರ ಪರಿಕಲ್ಪನೆಯನ್ನು ಮೌಢ್ಯಕ್ಕೆತಿರುಗಿಸುತ್ತವೆ.
ನಿಷ್ಠುರ ವಿಚಾರವಾದಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತುಧರ್ಮನಿಷ್ಠ ಮಹಾತ್ಮಾಗಾಂಧೀಜಿ ಅವರ ನಡುವಿನ ಸಂವಾದ ನಂಬಿಕೆಯಜಗತ್ತನ್ನುಗ್ರಹಿಸುವ ಮಾದರಿಯನ್ನು ಸೃಷ್ಟಿಸಿದೆ. ನಂಬಿಕೆಯಜಗತ್ತಿನ ಬೆಂಬಲದಲ್ಲಿಜನರಉದ್ಧಾರದ ಆದರ್ಶೀಕೃತ ಆಲೋಚನೆ ಗಾಂಧೀಜಿಅವರದ್ದಾಗಿತ್ತು.
ವಾಸ್ತವವಾದಿ ಅಂಬೇಡ್ಕರ್ಅವರ ವೈಚಾರಿಕತೆಯು ನಂಬಿಕೆಯಜಗತ್ತು ಯಥಾಸ್ಥಿತಿವಾದವನ್ನು ಮುಂದುವರೆಸುವಂಥದ್ದು ಎಂಬುದನ್ನು ಪ್ರತಿಪಾದಿಸಿತ್ತು. ಈಗ ಅಂಬೇಡ್ಕರ್ ಅವರ ಗ್ರಹಿಕೆಯಂತೆಯೇ ನಂಬಿಕೆಯ ಜಗತ್ತು ಉಳ್ಳವರ ಸ್ವತ್ತಾಗಿದೆ. ಜಾತಿ ಪ್ರಾಬಲ್ಯದ ಬೇರುಗಳನ್ನು ಗಟ್ಟಿಗೊಳಿಸಿದೆ.
ಅಸಮಾನತೆಯನ್ನುಇನ್ನಷ್ಟು ವಿಸ್ತರಿಸುತ್ತಲೇ ಇದೆ. ಸಾಮಾಜಿಕ ಸ್ಥಗಿತತೆಯನ್ನು ಪೋಷಿಸುತ್ತಲೇಇದೆ. ಇಂಥ ಸಂದರ್ಭದಲ್ಲಿ ‘ಲೋಕರೂಢಿಯ ಮೀರಿ’ ಕನ್ನಡದ ದೃಷ್ಟಿಕೋನವನ್ನು ಎತ್ತರಿಸುವ ಪ್ರಜ್ಞೆಯಾಗುತ್ತದೆ. ಸಾಮಾಜಿಕ ಚಲನೆಗೆ ಬೇಕಾಗುವ ಮುನ್ನುಡಿಯಾಗುತ್ತದೆ.
ಮೂರ್ತಿರಾಯರಚಿಂತನೆಯನ್ನು ವಿಶ್ಲೇಷಿಸುತ್ತಾಚೇತನ ಸೋಮೇಶ್ವರಅವರುಅನನ್ಯ ಹೊಳಹುಗಳನ್ನು ಹೊಳೆಸುವ ಮಾದರಿಕೃತಿಯನ್ನು ರಚಿಸಿದ್ದಾರೆ. ‘ಲೋಕರೂಢಿಯ ಮೀರಿ’ ಶೀರ್ಷಿಕೆಯ ಅನನ್ಯಾರ್ಥಅನ್ವರ್ಥಕತೆಗೆ ಸಾಕ್ಷಿಯಾಗಿಇಲ್ಲಿಯ ವಿವಿಧ ಅಧ್ಯಾಯಗಳಿವೆ. ಬಹುತೇಕ ಸಂಶೋಧನಾ ಪ್ರಬಂಧಗಳಲ್ಲಿರುವಂತೆ ಇಲ್ಲಿಹಿಂದಿನ ಚಿಂತನೆಗಳ ಕುರಿತಾದ ರೆಫರೆನ್ಸ್ಗಳ ಹೊರೆಗಳಿಲ್ಲ.
ಮೂರ್ತಿರಾಯರು ಮತ್ತು ಹಿಂದಿನ ಚಿಂತನೆಯ ಕ್ರಮಗಳನ್ನು ತಮ್ಮನಿಲುವುಗಳ ಸಮರ್ಥನೆಗೆ ಎಷ್ಟು ಬೇಕೋ ಅಷ್ಟು ಬಳಸಿಕೊಂಡು ಓದುಗರು ಈ ಕ್ಷಣಕ್ಕೆ ಹೇಗೆ ಯೋಚಿಸಬೇಕುಎನ್ನುವುದರಕಡೆಗೇ ಗಮನ ಕೇಂದ್ರೀಕರಿಸುತ್ತಾರೆ. ಅಭಿಮಾನಪೂರ್ವಕಆರಾಧನಾ ಮನೋಭಾವದ ಬದಲು ಮೂರ್ತಿರಾಯರ ಜೀವಧ್ವನಿಯಾಗಿದ್ದ ಚಿಕಿತ್ಸಕ ದೃಷ್ಟಿಕೋನವನ್ನೇ ಆಧರಿಸಿಕೊಂಡು ಚೇತನ ಸೋಮೇಶ್ವರಕೃತಿಯ ಒಳನೋಟಗಳನ್ನು ಕಟ್ಟಿದ್ದಾರೆ.
ಅವರು ಸಂಸ್ಕೃತಿಯನ್ನುಇಲ್ಲಿ ಮೌಲ್ಯನಿಷ್ಠ ಪರಿಕಲ್ಪನೆಯನ್ನಾಗಿಇಲ್ಲಿ ಬಿಂಬಿಸಿದ್ದಾರೆ. ಒಳಿತಿನ ಪರವಾಗಿ ನಿಂತು ಜಾತ್ಯಾತೀತವಾಗುವ ದಾರಿಯಾವುದು ಎಂಬುದನ್ನು ಮನಗಾಣಿಸಿದ್ದಾರೆ. ಮತ-ಧರ್ಮಗಳು ಜೀವಪರ ವೈಶಿಷ್ಟ್ಯವನ್ನು ಹಿಡಿದಿಟ್ಟಿದ್ದಾರೆ. ಸ್ವಾತಂತ್ರ್ಯದ ಒಳಗೇ ಇರುವಜೀವಂತಿಕೆಯನ್ನುಕಾಣಿಸುತ್ತಾರೆ.
ಸಮಾನತೆಯಗಮ್ಯವೇ ನಿರ್ಣಾಯಕಎಂಬುದನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಇಡೀ ಶೈಕ್ಷಣಿಕ ವ್ಯವಸ್ಥೆಯುಜ್ಞಾನದ ಮಹಾಮಾರ್ಗವಾಗಿ ಪುನರುತ್ಥಾನಗೊಳ್ಳುವ ಬಗೆಯನ್ನು ಚಿತ್ರಿಸಿದ್ದಾರೆ. ಅಲ್ಲದೇ ಈ ಮಹಾಮಾರ್ಗ ಲೋಕರೂಢಿಯೊಳಗಿನ ಮಿತಿಗಳನ್ನು ಮೀರುವ ವಿವೇಚನಾತ್ಮ ವೈಚಾರಿಕತೆಯನ್ನು ತಂದುಕೊಳ್ಳುವ ಪ್ರೇರಣೆಯೂ ಹೌದುಎಂದುದೃಢೀಕರಿಸುತ್ತಾರೆ. ಇವೆಲ್ಲ ಆಶಯಗಳು ಎ.ಎನ್. ಮೂರ್ತಿರಾಯರಚಿಂತನೆಯನ್ನು ಹೊಸ ಕಾಲದಲ್ಲಿ ಹೇಗೆ ಅನ್ವಯಿಸಿಕೊಳ್ಳಬೇಕು ಎಂಬುದನ್ನು ಹೇಳಿಕೊಡುತ್ತವೆ.
ಈ ಕೃತಿಯನ್ನುಯಾಕೆಓದಬೇಕು? ಓದಲೇಬೇಕು.
ದೇವರು, ಧರ್ಮವನ್ನು ಸ್ವಯಂ ಲಾಭಕ್ಕೆ ಬಳಸಿಕೊಳ್ಳುವ ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ, ನಂಬಿಕೆಯಜಗತ್ತನ್ನು ಕೈಗೊಂಬೆಯಾಗಿಸಿಕೊಂಡ ನಾಯಕರೆನ್ನಿಸಿಕೊಂಡ ನಾಯಕರಲ್ಲದವರ ಇಮೇಜಿನೊಳಗಿನ ಬಾಲಿಶತನವನ್ನುಅರಿಯುವುದಕ್ಕೆ. ದೇವರು ಎಂಬ ಅಮೂರ್ತ ಪರಿಕಲ್ಪನೆಯನ್ನು ಮಾನವೀಯಗೊಳಿಸಿಕೊಂಡು ಅದಕ್ಕೆಜೀವಪರತೆಯಜೀವಂತಿಕೆಯನ್ನು ತಂದುಕೊಳ್ಳುವುದಕ್ಕೆ.
ಅಸಮಾನತೆಯ ಅಂಶಗಳನ್ನೇ ಆಧರಿಸಿಕೊಂಡು ಸಂಘರ್ಷವನ್ನುಖಾಯಂ ಆಗಿರಿಸಿದ ವಿಧ್ವಂಸಕ ಶಕ್ತಿಗಳ ಹೆಜ್ಜೆಗಳನ್ನು ಗುರುತಿಸುವುದಕ್ಕೆ. ಎಲ್ಲಕ್ಕಿಂತ ಹೆಚ್ಚಾಗಿ ತರಹೇವಾರಿ ಮಿತಿಗಳೊಂದಿಗಿನ ಹತ್ತುಹಲವು ಲೋಕರೂಢಿಗಳನ್ನು ಮೀರಿ ನಿರ್ದಿಗಂತವಾಗಿಏರುವುದಕ್ಕೆ. ಅನಿಕೇತನದ ಹಾದಿಯಲ್ಲಿ ಸುದೀರ್ಘ ಪ್ರಯಾಣ ಕೈಗೊಳ್ಳುವುದಕ್ಕಾಗಿ.
(ವಿಳಾಸ:
ಡಾ.ಎನ್.ಕೆ.ಪದ್ಮನಾಭ
ಸಹಾಯಕ ಪ್ರಾಧ್ಯಾಪಕರು
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರಕೇಂದ್ರ
ಉಜಿರೆ )
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?
ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.
ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಹಾದಿಬೀದಿಯಲ್ಲಿ ಕೊಲೆಗಳಾಗುತ್ತಿವೆ. ರಾಜ್ಯವು ಅತ್ಯಾಚಾರಿಗಳ ಆಡಂಬೋಲವಾಗಿದೆ. ಬೆಂಗಳೂರು ಮಹಾನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ. ಕೇವಲ 4 ತಿಂಗಳಲ್ಲಿ ಇಷ್ಟೆಲ್ಲಾ ನಡೆದಿದೆ!! 1/2#ಜನರಿಗಿಲ್ಲ_ನೆಮ್ಮದಿಯ_ಗ್ಯಾರಂಟಿ pic.twitter.com/iu3tqqEYZ3
— Janata Dal Secular (@JanataDal_S) May 18, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್
ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ
ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.
ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಆತ್ಮಕತೆ | ಕೋರಿನ ತೋಟ ಮತ್ತು ನಮ್ಮೂರ ದೇವರ ಗುಡಿಯಲ್ಲಿ ಪಂಚಾಯ್ತಿ
-
ದಿನದ ಸುದ್ದಿ3 days ago
ವಿಧಾನಪರಿಷತ್ ಚುನಾವಣೆ ; ಇಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನ
-
ದಿನದ ಸುದ್ದಿ3 days ago
ಪೌರತ್ವ ಪ್ರಮಾಣಪತ್ರ ಹಸ್ತಾಂತರ
-
ದಿನದ ಸುದ್ದಿ2 days ago
ಸಂಗೀತಗಾರರ ಹುದ್ದೆಗಳಿಗೆ ನೇಮಕಾತಿ
-
ದಿನದ ಸುದ್ದಿ3 days ago
ದಾವಣಗೆರೆ | ಶಿಕ್ಷಕರ ಹುದ್ದೆಗೆ ನೇರ ಸಂದರ್ಶನ
-
ದಿನದ ಸುದ್ದಿ3 days ago
ಮೊರಾರ್ಜಿ ದೇಸಾಯಿ ವಿಜ್ಞಾನ ಕಾಲೇಜು ; ಪಿಯುಸಿ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಪ್ರಜ್ವಲ್ ಪೆನ್ಡ್ರೈವ್ ಪ್ರಕರಣ | ಎಸ್ಐಟಿ ಸೂಕ್ತ ತನಿಖೆ ನಡೆಸುತ್ತಿಲ್ಲ : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ
-
ದಿನದ ಸುದ್ದಿ3 days ago
ಅಂಧ ಹೆಣ್ಣು ಮತ್ತು ಗಂಡು ಮಕ್ಕಳಿಗೆ ದಾಖಲಾತಿ ಪ್ರಾರಂಭ