ದಿನದ ಸುದ್ದಿ
ಲೋಕರೂಢಿಯ ಮೀರಿ, ನಿರಾಕರಣೆಯೊಳಗಿನ ಸೌಜನ್ಯದ ಧ್ವನಿ ಸೌಂದರ್ಯ

- ಡಾ.ಎನ್.ಕೆ.ಪದ್ಮನಾಭ
ಲೋಕದ ರೂಢಿಗಳ ಮೀರುವುದನ್ನು ಸಾಂಪ್ರದಾಯಿಕ ದೃಷ್ಟಿಕೋನವು ಅಕ್ಷಮ್ಯ ಎಂದು ಪರಿಗಣಿಸುತ್ತದೆ. ಅಷ್ಟೇ ಅಲ್ಲ, ಮೀರಿದರೆ ಆಗುವ ಅಪಾಯಗಳನ್ನೂ ನೆನಪಿಸುತ್ತಾ ಭಯ ಹುಟ್ಟಿಸುತ್ತಾ ಚೌಕಟ್ಟುಗಳ ವ್ಯಾಪ್ತಿಯನ್ನು ಹಿಗ್ಗಿಸುತ್ತದೆ.
ಸ್ಥಗಿತತೆ ಶಾಶ್ವತವಾಗಿರಬೇಕು ಎಂಬ ಹುಮ್ಮಸ್ಸಿನಲ್ಲಿ ಚಲನೆಯ ನಿಜದಜೀವಂತಿಕೆಯನ್ನುಇಲ್ಲವಾಗಿಸುವುದರಕಡೆಗೇಅತ್ಯುತ್ಸಾಹದಲ್ಲಿ ಮುನ್ನಡೆಯುತ್ತಿರುತ್ತದೆ. ಈಗ ಅದರದ್ದು ಕೇವಲ ಅತ್ಯುತ್ಸಾಹವಾಗಿಯಷ್ಟೇ ಉಳಿದಿಲ್ಲ. ಲೋಕರೂಢಿ ಮೀರುವವರನ್ನು ಬಲಿತೆಗೆದುಕೊಳ್ಳುವ ಮತ್ತು ನಿಶ್ಚಲ ಸ್ಥಿತಿಯನ್ನು ಹಿಂದೆಂದಿಗಿಂತಲೂದಟ್ಟವಾಗಿ ಪ್ರತಿಷ್ಠಾಪಿಸುವ ಕ್ರೌರ್ಯದರೂಪವನ್ನೂ ಪಡೆದುಕೊಂಡುಬಿಟ್ಟಿದೆ.
ಈ ಸಾಂಪ್ರದಾಯಿಕ ಜಾಡ್ಯವನ್ನು ಎದುರುಗೊಳ್ಳುವ, ಚಲನೆಯ ಜೀವಂತಿಕೆಗೆ ಜೀವತುಂಬುವ ದಾರಿಅತ್ಯಂತಕಠಿಣವಾದದ್ದು. ಈ ಹಂತದಲ್ಲಿ ಬಂಡಾಯದ ಆಕ್ರಾಮಕ ಆವೇಶಭರಿತಧ್ವನಿ ಮುಖ್ಯವೋಅಥವಾ ಸೌಜನ್ಯದ ಸಂಯಮಪೂರ್ಣ ಪ್ರಖರ ವೈಚಾರಿಕ ವಿವೇಚನೆಯ ಮಾದರಿ ಮಹತ್ವದ್ದೋಎಂಬುದನ್ನು ಸ್ಪಷ್ಟಪಡಿಸಿಕೊಳ್ಳಲೇಬೇಕಾಗುತ್ತದೆ.
ಇಲ್ಲದಿದ್ದರೆ ಸಾಂಪ್ರದಾಯಿಕತೆಯ ವಿಚಿತ್ರ ಹಠದತಕಧಿಮಿಗುಟ್ಟುವಿಕೆ ಮತ್ತಷ್ಟು ಹೆಚ್ಚಾಗುತ್ತದೆ. ಆಕ್ರಾಮಕ ಪರಿಭಾಷೆ ಮತ್ತುಆಕ್ರೋಶಭರಿತಆವೇಶಕ್ಕಿಂತ ಸೌಜನ್ಯದ ಧ್ವನಿಯೊಂದಿಗಿನ ಮನವರಿಕೆಯ ಮಾತೃತ್ವದ ಶೈಲಿಯು ಸಾಮಾಜಿಕ ಚಲನೆಗೆ ಬೇಕಾದ ಪೂರಕ ವಾತಾವರಣ ಸೃಷ್ಟಿಸುತ್ತದೆ.
ಚೇತನ ಸೋಮೇಶ್ವರಅವರ ‘ಲೋಕರೂಢಿಯ ಮೀರಿ’ ಕೃತಿಯೊಳಗೆ ಇಂಥದ್ದೊಂದು ಸದಾಶಯವಿದೆ. ಎ.ಎನ್.ಮೂರ್ತಿರಾವ್ ಎಂಬ ವೈಚಾರಿಕ ವ್ಯಕ್ತಿತ್ವ ಸಾಮಾಜಿಕ ಸಾಂಪ್ರದಾಯಿಕತೆಯನ್ನು ಎದುರುಗೊಂಡ ವಿವೇಚನಾತ್ಮಕ ವೈಚಾರಿಕ ಹೆಜ್ಜೆಗಳ ಕುರಿತಾದಪ್ರಸ್ತಾಪವು ಈ ಕೃತಿಯ ಸದಾಶಯವನ್ನು ಇನ್ನಷ್ಟು ಅಧಿಕೃತಗೊಳಿಸುವಲ್ಲಿ ಯಶಸ್ವಿಯಾಗಿದೆ. ಸದ್ಯದ ಕಾಲವು ಚಲನೆಗೆ ಹೊರಳಿಕೊಳ್ಳುವ ದಾರಿಯಾವುದಾಗಿರಬೇಕುಎಂಬುದನ್ನು ಮನಗಾಣಿಸುವಲ್ಲಿಯೂಗೆದ್ದಿದೆ.
ಈ ಕೃತಿಯೊಳಗೇ ಅಡಕವಾಗಿರುವ ‘ಲೋಕರೂಢಿ ಮೀರುವ’ ಸದಾಶಯಕ್ಕೆ ಸದ್ಯದ ವೈಚಾರಿಕ ಬಿಕ್ಕಟ್ಟುಗಳ ಸ್ವರೂಪವನ್ನು ಬದಲಿಸುವ ಶಕ್ತಿ ಇದೆ. ವಾಚಾಳಿತನದ ಗೀಳಿನ ಪರಿಭಾಷೆಯನ್ನೇ ಬಹುದೊಡ್ಡ ಬಂಡಾಯ ಎಂಬ ತಪ್ಪುಕಲ್ಪನೆಯನ್ನುಇಲ್ಲವಾಗಿಸುವಂಥಮಾರ್ಗದರ್ಶಿಸೂತ್ರ ಹೊಳೆಸುವ ಗುಣಲಕ್ಷಣವಿದೆ. ಬಂಡಾಯ ಕ್ಕಿಂತ ತಿಳಿವ ತಿಳಿಗೊಳಿಸುವ ಕಾಳಜಿಯುತ ತಿಳುವಳಿಕೆಯ ಅಗತ್ಯವನ್ನು ಪ್ರತಿಪಾದಿಸುವ ನೋಟಕ್ರಮವಿದೆ. ‘ದೇವರ’ ಅಸ್ತಿತ್ವ ಅಥವಾಧರ್ಮವಲ್ಲದ ‘ಧರ್ಮ’ – ಇವೆರಡರ ನಿರಾಕರಣೆಯೊಳಗೂ ಅಡಗಿರಬಹುದಾದ ಸೌಜನ್ಯದಧ್ವನಿಸೌಂದರ್ಯವನ್ನುಕಾಣಿಸುವ ನಿಜದ ಬೆಳಕಿದೆ.
ಲೋಕರೂಢಿಯನ್ನು ಮೀರುವುದುಅಗತ್ಯ ಮಾತ್ರವಲ್ಲ, ಅನಿವಾರ್ಯತೆಯೂ ಹೌದು ಎಂಬುದನ್ನುಚೇತನ ಸೋಮೇಶ್ವರ ಅವರು ಆಪ್ತವಾಗಿ ಸ್ಪಷ್ಟಪಡಿಸುತ್ತಾರೆ. ಎ.ಎನ್.ಮೂರ್ತಿರಾವ್ಅವರಂಥ ಪ್ರಖರ ವೈಚಾರಿಕ ಶಕ್ತಿಯನ್ನು ಪಿ.ಎಚ್.ಡಿ ಸಂಶೋಧನೆಯ ಕೇಂದ್ರವಾಗಿಸಿಕೊಳ್ಳುವುದೂ ಒಂದು ಬಗೆಯ ಮೀರುವಕ್ರಮವೇಆಗಿದೆ.
ಉನ್ನತ ಶಿಕ್ಷಣ ವ್ಯವಸ್ಥೆಯ ಒಳಗೇ ಇರುವಕ್ಲೀಷಾ ಚೌಕಟ್ಟುಗಳನ್ನು ಒಡೆಯುವ ಮತ್ತು ಆ ಮೂಲಕ ವಿಶ್ವವಿದ್ಯಾಲಯಗಳೊಳಗಿನ ಸವಕಲು ರೂಢಿಗಳನ್ನು ಮೀರುವದಾರಿಯನ್ನೂತಮ್ಮ ಸಂಶೋಧನಾ ಪ್ರಬಂಧದ ಮೂಲಕ ಅವರು ಕಾಣಿಸಿದ್ದಾರೆ. ಇದನ್ನುಕೃತಿರೂಪದಲ್ಲಿ ಹೊರತಂದು ಸಾಮಾಜಿಕ ಚಲನೆಯ ಹಾದಿಯನ್ನು ‘ಅವಧಿ’ಯಜಿ.ಎನ್.ಮೋಹನ್ಅವರು ಅಧಿಕೃತಗೊಳಿಸಿದ್ದಾರೆ. ಈ ಹೆಜ್ಜೆಯು ಸಾಮಾಜಿಕ ಚಲನೆಯ ‘ಅವಧಿ’ಯನ್ನು ವಿಸ್ತರಿಸಿದ್ದರ ಸಂಕೇತವೂ ಹೌದು.
ಎಲ್ಲಾ ಕಾಲಗಳಲ್ಲೂ ವಿಜೃಂಭಿಸುವ ಲೋಕರೂಢಿಗಳೊಳಗಿನ ಟೊಳ್ಳುತನವನ್ನು ಪ್ರಶ್ನಿಸಿ ಅವುಗಳಿಗೆ ಪರ್ಯಾಯವಾದ ಆಲೋಚನೆಗಳನ್ನು ಹೊಳೆಸುವ ಪ್ರಯತ್ನಗಳು ನಡೆಯುತ್ತಲೇಇರುತ್ತವೆ. ಅವುಗಳಿಗೆ ಸಿಗುವ ಪ್ರತಿಸ್ಪಂದನೆ ಯಾವುದೇ ರೀತಿಯದ್ದೇ ಇರಲಿ, ಅವುಗಳು ತದನಂತರದ ಕಾಲಘಟಕ್ಕೆ ಬೇಕಾಗುವ ಮಾದರಿಗಳನ್ನು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸಾಹಿತ್ಯ ಮತ್ತು ಕಲಾ ಮಾಧ್ಯಮಗಳು ಇಂಥ ಮಾದರಿಗಳನ್ನು ಮುನ್ನೆಲೆಗೆತರುತ್ತವೆ. ಇವುಗಳ ಅಭಿವ್ಯಕ್ತಿಯು ಲೋಕೋದ್ಧಾರದ ನಿಜದದಾರಿಯನ್ನುಕಾಣಿಸುವ ಹೊಣೆಗಾರಿಕೆಯನ್ನುಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದೆ.
ಅಧಿಕಾರ ವ್ಯವಸ್ಥೆ, ರಾಜಕೀಯ ವಲಯ ಮತ್ತುರಂಜನೀಯಉದ್ಯಮದೇವರು, ಧರ್ಮ ಮತ್ತು ಮನುಷ್ಯ ಸಂಕುಚಿತತೆಯನ್ನೇತನ್ನ ಲಾಭಕ್ಕೆ ಬಳಸಿಕೊಂಡಾಗಲೆಲ್ಲಾ ಸಾಹಿತ್ಯ ಮತ್ತು ಕಲೆ ವಿವೇಚನೆಯಕಡೆಗೆ ಸಮಾಜವನ್ನು ಮುನ್ನಡೆಸುವಂಥ ಕಾಣ್ಕೆಗಳನ್ನು ನೀಡಿವೆ.
ಎ.ಎನ್.ಮೂರ್ತಿರಾವ್ಅವರ ಬರಹಗಳ ಹಿಂದಿನ ಸ್ಫೂರ್ತಿ ಈ ತರಹದ ಕಾಣ್ಕೆಗಳೇ. ಇವುಗಳನ್ನು ಗ್ರಹಿಸಿ ಒಂದು ಸ್ಪಷ್ಟ ವಿವೇಚನಾತ್ಮಕ ನಿಲುವು ತಳೆಯುವುದಕ್ಕೆ ‘ಲೋಕರೂಢಿಯ ಮೀರಿ’ ಕೃತಿ ನೆರವಾಗುತ್ತದೆ. ಈ ಕಾಣ್ಕೆಗಳನ್ನು ಸದ್ಯದ ವೈರುಧ್ಯಗಳ ನಡುವೆ ನೋಡುವ, ಆ ಮೂಲಕ ವ್ಯಕ್ತಿಗತವಾಗಿ ಸ್ಪಷ್ಟಗೊಳ್ಳುವುದಕ್ಕೆ ಚೇತನ ಸೋಮೇಶ್ವರಅವರ ವಿಶ್ಲೇಷಣೆಯಕ್ರಮವುಓದುಗರನ್ನು ಸಿದ್ಧಪಡಿಸುತ್ತದೆ.
ಈಗ ಅಧಿಕಾರ ಕೇಂದ್ರಗಳು ಮತ್ತು ಅವುಗಳನ್ನು ಪ್ರತಿನಿಧಿಸುವವರು ‘ಅಜ್ಜ ನೆಟ್ಟಆಲದ ಮರ’ದಆಶ್ರಯ ಪಡೆದುಅದರ ನೆರಳಿನ ಕೆಳಗೆ ವಿಕೃತಿಯ ಬಿಂಬಗಳನ್ನು ಮೂಡಿಸುತ್ತಲೇಇದ್ದಾರೆ. ಒಂದು ಕಡೆಗೆ ದೇವರು, ಧರ್ಮದಕುರಿತ ನಂಬಿಕೆಯಜಗತ್ತು. ಇನ್ನೊಂದುಕಡೆಗೆ ಇವುಗಳನ್ನು ನಿರಾಕರಿಸುವ ವೈಚಾರಿಕ ಲೋಕ. ಇವೆರಡನ್ನೂ ಪರಸ್ಪರ ವಿರೋಧಾತ್ಮಕವಾಗಿ ನೋಡಬೇಕೇ ಅಥವಾ ಒಂದನ್ನೊಂದು ಅನುಸಂಧಾನಗೊಳಿಸಿಕೊಂಡು ವರ್ತಮಾನವನ್ನು ಸುಂದರವಾಗಿಸಿಕೊಳ್ಳುವುದರ ಕಡೆಗೆಗಮನಹರಿಸಬೇಕೇ ಎಂಬ ದ್ವಂದ್ವಕ್ಕೆ ಈ ಕೃತಿ ಪರಿಹಾರ ಹೇಳುತ್ತದೆ.
ನಂಬಿಕೆ ಮತ್ತು ವೈಚಾರಿಕತೆಇವೆರಡರ ನಡುವಿನ ಅನುಸಂಧಾನಾತ್ಮಕ ನಿಕಷವು ಸಮಾಜಕ್ಕೆ ಬೇಕಾದ ಒಳನೋಟಗಳನ್ನು ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ. ವಚನ, ದಾಸ ಮತ್ತುತತ್ವಪದ ಸಾಹಿತ್ಯ ಪ್ರತಿಪಾದಿಸಿದ್ದು ಈ ತರಹದ ಒಳನೋಟಗಳನ್ನೇ. ನಂಬಿಕೆ ಮೌಢ್ಯಕ್ಕೆತಿರಗುದ ಹಾಗೆ ನೋಡಿಕೊಂಡ ಒಳನೋಟಗಳಿವು. ಇವನ್ನು ಸರಿಯಾಗಿ ಅರ್ಥೈಸಿಕೊಂಡ ಕಾರಣಕ್ಕಾಗಿಯೇ ಈ ದೇಶವು ವೈವಿಧ್ಯತೆಯ ನೆಲೆಯಾಗಿದೆ. ಇದನ್ನು ಗೊತ್ತುಮಾಡಿಕೊಳ್ಳುವುದಕ್ಕೆ ಈ ಕೃತಿಒತ್ತಾಸೆ ಮೂಡಿಸುತ್ತದೆ.
ದೇವಾಲಯಗಳು, ಧರ್ಮಗಳನ್ನು ಆಧರಿಸಿಕೊಂಡು ಪ್ರತಿಷ್ಠಾಪಿತವಾಗುವ ಸಾಮಾಜಿಕ-ದೈವಿಕ ಸಂಸ್ಥೆಗಳು ನಿಜವಾದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಾಗ ಲೋಕರೂಢಿಗಳನ್ನೇ ಆಶ್ರಯಿಸುತ್ತವೆ. ಬಹುಹಿಂದಿನಿಂದಲೂ ನಡೆದುಕೊಂಡು ಬಂದ ಸಾಂಪ್ರದಾಯಿಕ ವಿಧಿವಿಧಾನಗಳನನ್ನು ವೈಭವೀಕರಿಸಿ ದೇವರ ಪರಿಕಲ್ಪನೆಯನ್ನು ಮೌಢ್ಯಕ್ಕೆತಿರುಗಿಸುತ್ತವೆ.
ನಿಷ್ಠುರ ವಿಚಾರವಾದಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತುಧರ್ಮನಿಷ್ಠ ಮಹಾತ್ಮಾಗಾಂಧೀಜಿ ಅವರ ನಡುವಿನ ಸಂವಾದ ನಂಬಿಕೆಯಜಗತ್ತನ್ನುಗ್ರಹಿಸುವ ಮಾದರಿಯನ್ನು ಸೃಷ್ಟಿಸಿದೆ. ನಂಬಿಕೆಯಜಗತ್ತಿನ ಬೆಂಬಲದಲ್ಲಿಜನರಉದ್ಧಾರದ ಆದರ್ಶೀಕೃತ ಆಲೋಚನೆ ಗಾಂಧೀಜಿಅವರದ್ದಾಗಿತ್ತು.
ವಾಸ್ತವವಾದಿ ಅಂಬೇಡ್ಕರ್ಅವರ ವೈಚಾರಿಕತೆಯು ನಂಬಿಕೆಯಜಗತ್ತು ಯಥಾಸ್ಥಿತಿವಾದವನ್ನು ಮುಂದುವರೆಸುವಂಥದ್ದು ಎಂಬುದನ್ನು ಪ್ರತಿಪಾದಿಸಿತ್ತು. ಈಗ ಅಂಬೇಡ್ಕರ್ ಅವರ ಗ್ರಹಿಕೆಯಂತೆಯೇ ನಂಬಿಕೆಯ ಜಗತ್ತು ಉಳ್ಳವರ ಸ್ವತ್ತಾಗಿದೆ. ಜಾತಿ ಪ್ರಾಬಲ್ಯದ ಬೇರುಗಳನ್ನು ಗಟ್ಟಿಗೊಳಿಸಿದೆ.
ಅಸಮಾನತೆಯನ್ನುಇನ್ನಷ್ಟು ವಿಸ್ತರಿಸುತ್ತಲೇ ಇದೆ. ಸಾಮಾಜಿಕ ಸ್ಥಗಿತತೆಯನ್ನು ಪೋಷಿಸುತ್ತಲೇಇದೆ. ಇಂಥ ಸಂದರ್ಭದಲ್ಲಿ ‘ಲೋಕರೂಢಿಯ ಮೀರಿ’ ಕನ್ನಡದ ದೃಷ್ಟಿಕೋನವನ್ನು ಎತ್ತರಿಸುವ ಪ್ರಜ್ಞೆಯಾಗುತ್ತದೆ. ಸಾಮಾಜಿಕ ಚಲನೆಗೆ ಬೇಕಾಗುವ ಮುನ್ನುಡಿಯಾಗುತ್ತದೆ.
ಮೂರ್ತಿರಾಯರಚಿಂತನೆಯನ್ನು ವಿಶ್ಲೇಷಿಸುತ್ತಾಚೇತನ ಸೋಮೇಶ್ವರಅವರುಅನನ್ಯ ಹೊಳಹುಗಳನ್ನು ಹೊಳೆಸುವ ಮಾದರಿಕೃತಿಯನ್ನು ರಚಿಸಿದ್ದಾರೆ. ‘ಲೋಕರೂಢಿಯ ಮೀರಿ’ ಶೀರ್ಷಿಕೆಯ ಅನನ್ಯಾರ್ಥಅನ್ವರ್ಥಕತೆಗೆ ಸಾಕ್ಷಿಯಾಗಿಇಲ್ಲಿಯ ವಿವಿಧ ಅಧ್ಯಾಯಗಳಿವೆ. ಬಹುತೇಕ ಸಂಶೋಧನಾ ಪ್ರಬಂಧಗಳಲ್ಲಿರುವಂತೆ ಇಲ್ಲಿಹಿಂದಿನ ಚಿಂತನೆಗಳ ಕುರಿತಾದ ರೆಫರೆನ್ಸ್ಗಳ ಹೊರೆಗಳಿಲ್ಲ.
ಮೂರ್ತಿರಾಯರು ಮತ್ತು ಹಿಂದಿನ ಚಿಂತನೆಯ ಕ್ರಮಗಳನ್ನು ತಮ್ಮನಿಲುವುಗಳ ಸಮರ್ಥನೆಗೆ ಎಷ್ಟು ಬೇಕೋ ಅಷ್ಟು ಬಳಸಿಕೊಂಡು ಓದುಗರು ಈ ಕ್ಷಣಕ್ಕೆ ಹೇಗೆ ಯೋಚಿಸಬೇಕುಎನ್ನುವುದರಕಡೆಗೇ ಗಮನ ಕೇಂದ್ರೀಕರಿಸುತ್ತಾರೆ. ಅಭಿಮಾನಪೂರ್ವಕಆರಾಧನಾ ಮನೋಭಾವದ ಬದಲು ಮೂರ್ತಿರಾಯರ ಜೀವಧ್ವನಿಯಾಗಿದ್ದ ಚಿಕಿತ್ಸಕ ದೃಷ್ಟಿಕೋನವನ್ನೇ ಆಧರಿಸಿಕೊಂಡು ಚೇತನ ಸೋಮೇಶ್ವರಕೃತಿಯ ಒಳನೋಟಗಳನ್ನು ಕಟ್ಟಿದ್ದಾರೆ.
ಅವರು ಸಂಸ್ಕೃತಿಯನ್ನುಇಲ್ಲಿ ಮೌಲ್ಯನಿಷ್ಠ ಪರಿಕಲ್ಪನೆಯನ್ನಾಗಿಇಲ್ಲಿ ಬಿಂಬಿಸಿದ್ದಾರೆ. ಒಳಿತಿನ ಪರವಾಗಿ ನಿಂತು ಜಾತ್ಯಾತೀತವಾಗುವ ದಾರಿಯಾವುದು ಎಂಬುದನ್ನು ಮನಗಾಣಿಸಿದ್ದಾರೆ. ಮತ-ಧರ್ಮಗಳು ಜೀವಪರ ವೈಶಿಷ್ಟ್ಯವನ್ನು ಹಿಡಿದಿಟ್ಟಿದ್ದಾರೆ. ಸ್ವಾತಂತ್ರ್ಯದ ಒಳಗೇ ಇರುವಜೀವಂತಿಕೆಯನ್ನುಕಾಣಿಸುತ್ತಾರೆ.
ಸಮಾನತೆಯಗಮ್ಯವೇ ನಿರ್ಣಾಯಕಎಂಬುದನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಇಡೀ ಶೈಕ್ಷಣಿಕ ವ್ಯವಸ್ಥೆಯುಜ್ಞಾನದ ಮಹಾಮಾರ್ಗವಾಗಿ ಪುನರುತ್ಥಾನಗೊಳ್ಳುವ ಬಗೆಯನ್ನು ಚಿತ್ರಿಸಿದ್ದಾರೆ. ಅಲ್ಲದೇ ಈ ಮಹಾಮಾರ್ಗ ಲೋಕರೂಢಿಯೊಳಗಿನ ಮಿತಿಗಳನ್ನು ಮೀರುವ ವಿವೇಚನಾತ್ಮ ವೈಚಾರಿಕತೆಯನ್ನು ತಂದುಕೊಳ್ಳುವ ಪ್ರೇರಣೆಯೂ ಹೌದುಎಂದುದೃಢೀಕರಿಸುತ್ತಾರೆ. ಇವೆಲ್ಲ ಆಶಯಗಳು ಎ.ಎನ್. ಮೂರ್ತಿರಾಯರಚಿಂತನೆಯನ್ನು ಹೊಸ ಕಾಲದಲ್ಲಿ ಹೇಗೆ ಅನ್ವಯಿಸಿಕೊಳ್ಳಬೇಕು ಎಂಬುದನ್ನು ಹೇಳಿಕೊಡುತ್ತವೆ.
ಈ ಕೃತಿಯನ್ನುಯಾಕೆಓದಬೇಕು? ಓದಲೇಬೇಕು.
ದೇವರು, ಧರ್ಮವನ್ನು ಸ್ವಯಂ ಲಾಭಕ್ಕೆ ಬಳಸಿಕೊಳ್ಳುವ ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ, ನಂಬಿಕೆಯಜಗತ್ತನ್ನು ಕೈಗೊಂಬೆಯಾಗಿಸಿಕೊಂಡ ನಾಯಕರೆನ್ನಿಸಿಕೊಂಡ ನಾಯಕರಲ್ಲದವರ ಇಮೇಜಿನೊಳಗಿನ ಬಾಲಿಶತನವನ್ನುಅರಿಯುವುದಕ್ಕೆ. ದೇವರು ಎಂಬ ಅಮೂರ್ತ ಪರಿಕಲ್ಪನೆಯನ್ನು ಮಾನವೀಯಗೊಳಿಸಿಕೊಂಡು ಅದಕ್ಕೆಜೀವಪರತೆಯಜೀವಂತಿಕೆಯನ್ನು ತಂದುಕೊಳ್ಳುವುದಕ್ಕೆ.
ಅಸಮಾನತೆಯ ಅಂಶಗಳನ್ನೇ ಆಧರಿಸಿಕೊಂಡು ಸಂಘರ್ಷವನ್ನುಖಾಯಂ ಆಗಿರಿಸಿದ ವಿಧ್ವಂಸಕ ಶಕ್ತಿಗಳ ಹೆಜ್ಜೆಗಳನ್ನು ಗುರುತಿಸುವುದಕ್ಕೆ. ಎಲ್ಲಕ್ಕಿಂತ ಹೆಚ್ಚಾಗಿ ತರಹೇವಾರಿ ಮಿತಿಗಳೊಂದಿಗಿನ ಹತ್ತುಹಲವು ಲೋಕರೂಢಿಗಳನ್ನು ಮೀರಿ ನಿರ್ದಿಗಂತವಾಗಿಏರುವುದಕ್ಕೆ. ಅನಿಕೇತನದ ಹಾದಿಯಲ್ಲಿ ಸುದೀರ್ಘ ಪ್ರಯಾಣ ಕೈಗೊಳ್ಳುವುದಕ್ಕಾಗಿ.
(ವಿಳಾಸ:
ಡಾ.ಎನ್.ಕೆ.ಪದ್ಮನಾಭ
ಸಹಾಯಕ ಪ್ರಾಧ್ಯಾಪಕರು
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರಕೇಂದ್ರ
ಉಜಿರೆ )
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತುಂಬಿದ ಕೊಡ ತುಳುಕಿತಲೇ ಪರಾಕ್..!

- ಗಿರೀಶ್ ಕುಮಾರ್ ಗೌಡ, ಬಳ್ಳಾರಿ
“ತುಂಬಿದ ಕೊಡ ತುಳುಕಿತಲೇ ಪರಾಕ್” ಎಂದು ಕಾರ್ಣಿಕ ನುಡಿದ ಗೊರವಯ್ಯ, ಅದು ಮೈಲಾರ ಕೋಟ್ಯಾಂತರ ಭಕ್ತರ ಆರಾಧ್ಯದೈವ ಮೈಲಾರ ಲಿಂಗನ ಪುಣ್ಯ ಕ್ಷೇತ್ರ. ಈ ಪುಣ್ಯ ಕ್ಷೇತ್ರ ಪ್ರತಿ ವರ್ಷ ಕಾರ್ಣಿಕ ನುಡಿಗೆ ರಾಜ್ಯಾದ್ಯಂತ ಫೇಮಸ್. ನುಡಿ ಆಲಿಸಲು ಲಕ್ಷಾಂತರ ಜನ್ರು ಅಲ್ಲಿಗೆ ಆಗಮಿಸ್ತಾರೆ. ಇನ್ನು 18 ಅಡಿ ಬಿಲ್ಲನ್ನ ಏರಿ ಕಾರ್ಣಿಕ ನುಡಿ ನುಡಿಯುವ ಗೊರವಯ್ಯನ ನುಡಿಯನ್ನ ಮಳೆ, ಬೆಳೆ, ರಾಜಕೀಯ ಹೀಗೆ ಆಗು ಹೋಗಗಳ ಬಗ್ಗೆ ವಿಮರ್ಶೆ ಮಾಡ್ತಾರೆ ಹಾಗಾದ್ರೆ ಈ ವರ್ಷ ನುಡಿದ ಕಾರ್ಣಿಕ ನುಡಿ ಏನು…? ಅಂತಿರಾ ಈ ಸ್ಟೋರಿ ಓದಿ
ತುಂಬಿದ ಕೊಡ ತುಳುಕಿತಲೇ ಪರಾಕ್ ಎಂದು ಭವಿಷ್ಯ ನುಡಿದ ಗೊರವಯ್ಯ ಸದ್ದಲೇ ಎಂದು ಭವಿಷ್ಯವಾಣಿ ನುಡಿದ ಕಾರ್ಣಿಕದ ಗೊರವಯ್ಯ ರಾಮಣ್ಣ , 18 ಅಡಿ ಬಿಲ್ಲನ್ನು ಏರಿ ಕಾರ್ಣಿಕ ನುಡಿದು ಕೆಳಗೆ ಬಿದ್ದ ಗೊರವಯ್ಯ.
ತುಂಬಿದ ಕೊಡ ತುಳುಕಿತಲೇ ಪರಾಕ್… ಹೌದು ಇದು ಈ ವರ್ಷದ ಶ್ರೀ ಕ್ಷೇತ್ರ ಮೈಲಾರದ ಕಾರ್ಣಿಕ ( 2025 ರ ವರ್ಷ ಭವಿಷ್ಯ) ಅದು ಜಿಲ್ಲೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ. ಮೈಲಾರದ ಮೈಲಾರ ಲೀಂಗೆಶ್ವರನ ಜಾತ್ರೆ ಪ್ರತಿ ವರ್ಷ ನಡೆಯುತ್ತದೆ. ಭರತ ಹುಣ್ಣಿಮೆಯ ಬಳಿಕ ಶ್ರೀ ಕ್ಷೇತ್ರ ಮೈಲಾರದ ಡಂಕನಮರಡಿಯಲ್ಲಿ ಕಾರ್ಣಿಕ ನುಡಿಯನ್ನ 11 ದಿನಗಳ ಕಾಲ ಉಪವಾಸ ವಿದ್ದು ಭಕ್ತಿ ಭಾವ ಮಡಿ, 18 ಅಡಿಯ ಬಿಲ್ಲನ್ನ ಏರಿ ಕಾರ್ಣಿಕ ನುಡಿ ಭವಿಷ್ಯ ನುಡಿದ ಗೊರವಯ್ಯ ರಾಮಣ್ಣ, ತುಂಬಿದ ಕೊಡ ತುಳುಕಿತಲೇ ಪರಾಕ್ ಎಂದು ಭವಿಷ್ಯವಾಣಿ ನುಡಿದಿದ್ದಾರೆ ಸಂಪಾದೀತಲೇ ಪರಾಕ್.
|ವೆಂಕಪ್ಪಯ್ಯ ಒಡೆಯರ್, ಮೈಲಾರ ಕ್ಷೇತ್ರದ ಧರ್ಮದರ್ಶಿ
ಈ ಸಮಯದಲ್ಲಿ ಹೂವಿನಹಡಗಲಿ ಶಾಸಕ ಕೃಷ್ಣ ನಾಯಕ್
ಮಾತನಾಡಿದ ಅವರು ತುಂಬಿದ ಕೊಡಾ ತುಳುಕಿತಲೇ ಪರಾಕ್ ಎಂಬ ಎರಡೇ ಶಬ್ದದಲ್ಲಿ ಈ ವರ್ಷದ ದೈವವಾಣಿ ಹೇಳಿದ ಗೊರವಯ್ಯ ರಾಮಣ್ಣ, ಗೊರವಯ್ಯನ ಹೇಳಿಕೆಯಿಂದ ನೆರೆದಿದ್ದ ಲಕ್ಷಾಂತರ ಜನರಿಂದ ವ್ಯಕ್ತವಾದ ಹರ್ಷಾದ್ಘೋರ ಮುಗಿಲು ಮುಟ್ಟಿತು.ಈ ಬಾರಿ ಉತ್ತಮ ಮಳೆ,ಬೆಳೆಯಾಗಲಿದೆ. ದೇಶ ಸುಭಿಕ್ಷೆಯಾಗಿರಲಿದೆ ಎಂದು ಅರ್ಥೈಸಲಾಗುತ್ತಿದೆ.
ಇದಕ್ಕೂ ಮೊದಲು ಮೈಲಾರಲಿಂಗೇಶ್ವರನ ದೇವಸ್ಥಾನದಿಂದ ಶ್ರೀ ವೆಂಕಪ್ಪಯ್ಯ ಒಡೆಯರ್ ಕುದುರೆಯನ್ನೇರಿ ಡೆಂಕನಮರಡಿ ಪ್ರದೇಶದವರೆಗೆ ಮೆರವಣಿ ಮೂಲಕ ಸಾಗಿ ಬಂದು ಕಾರ್ಣಿಕ ನುಡಿಯುವ ಸ್ಥಳದ ಸುತ್ತ ಪ್ರದಕ್ಷಿಣೆ ಹಾಕಿ, ಭಕ್ತರಿಗೆ ಆಶೀರ್ವಾದ ನೀಡಿದರು. ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸೇರಿ ರಾಜ್ಯದ ಮೂಲೆ ಮೂಲೆಗಳಿಂದ ಬಂದ ಲಕ್ಷಾಂತ ಭಕ್ತರು ನೆರೆದಿದ್ದರು.
ಒಟ್ಟಾರೆ ಹೇಳುವುದಾದರೆ, ಈ ಬಾರಿಯ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವವು ದೇಶ ಸುಭಿಕ್ಷವಾಗಿರಲಿದೆ, ಮಳೆ ಬೆಳೆ ಚೆನ್ನಾಗಿ ಆಗಲಿದೆ.. ರೈತರು ಉತ್ತಮ ರೀತಿಯಲ್ಲಿ ಇರ್ತಾರೆ ಅನ್ನೋ ಸಂದೇಶ ನೀಡಿದಂತಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಜಿಎಂ ಡಿಪ್ಲೋಮೋ ಕಾಲೇಜಿನ 44 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ

ಸುದ್ದಿದಿನ,ದಾವಣಗೆರೆ:ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ವಿಭಾಗದಿಂದ ಇತ್ತೀಚಿಗೆ ನಡೆದ ಕ್ಯಾಂಪಸ್ ಸಂದರ್ಶನ ಪ್ರಕ್ರಿಯೆಯಲ್ಲಿ ಜಿಎಂ ಡಿಪ್ಲೋಮೋ ಕಾಲೇಜಿನ ವಿವಿಧ ವಿಭಾಗಗಳಿಂದ 44 ಅಂತಿಮ ವರ್ಷದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಒಟ್ಟು 44 ಅಂತಿಮ ವರ್ಷದ ವಿದ್ಯಾರ್ಥಿಗಳು ನ್ಯೂಜೈಸಾ ಟೆಕ್ನಾಲಜಿಸ್ ನಲ್ಲಿ ಉದ್ಯೋಗವಕಾಶಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ ತೇಜಸ್ವಿ ಕಟ್ಟಿಮನಿ ಟಿ.ಆರ್. ತಿಳಿಸಿದ್ದಾರೆ.
ಆಯ್ಕೆಯಾದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಜಿಎಂ ಕಾಲೇಜಿನ ಚೇರ್ಮನ್ ಆದ ಜಿ.ಎಂ. ಲಿಂಗರಾಜು, ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಂಬಿ, ಕಾಲೇಜಿನ ಆಡಳಿತ ಅಧಿಕಾರಿಗಳಾದ ವೈ.ಯು. ಸುಭಾಷ್ ಚಂದ್ರ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಬಿ.ಎನ್. ಶ್ರೀಧರ್ ಅಭಿನಂದನೆ ಸಲ್ಲಿಸಿದ್ದು, 44 ವಿದ್ಯಾರ್ಥಿಗಳು ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ ಎಂದು ಹರುಷ ವ್ಯಕ್ತಪಡಿಸಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದು, ಈ ಸಂಭ್ರಮದಲ್ಲಿ ಜಿಎಂ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರಾದ ಸಿ. ನಿಂಗರಾಜು, ಡಿಪ್ಲೋಮೋದ ತರಬೇತಿ ಮತ್ತು ಉದ್ಯೋಗ ವಿಭಾಗದ ಸಂಯೋಜಕರಾದ ಯಾಸ್ಮಿನ್ ಬೇಗಮ್, ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾದ ಕೆ.ಬಿ. ಜನಾರ್ಧನ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಸಿ.ಎನ್. ಸಂದೀಪ್, ಮೆಕಾನಿಕಲ್ ವಿಭಾಗದ ಮುಖ್ಯಸ್ಥರಾದ ಎಂ. ಪ್ರವೀಣ್ ಕುಮಾರ್, ಕೆ. ಗಿರಿಜಾ ಸೇರಿದಂತೆ ಇತರರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

ಸುದ್ದಿದಿನ,ದಾವಣಗೆರೆ:ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಫೆಬ್ರವರಿ 14 ಮತ್ತು 15 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days ago
ಫೆಬ್ರವರಿ 17 ಮತ್ತು 18ಕ್ಕೆ ಕಲಬುರಗಿಯಲ್ಲಿ ಮೀಡಿಯಾ ಫೆಸ್ಟ್-2025
-
ದಿನದ ಸುದ್ದಿ3 days ago
ಪತ್ರಕರ್ತರ ಮೇಲೆ ಕೆ.ಎಂ.ಎಫ್ ಅಧ್ಯಕ್ಷ ಭೀಮಾನಾಯ್ಕ್ ಹಲ್ಲೆ, ಕೊಲೆ ಬೆದರಿಕೆ
-
ದಿನದ ಸುದ್ದಿ3 days ago
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
-
ದಿನದ ಸುದ್ದಿ6 days ago
ಸರ್ಕಾರಿ, ಅನುದಾನಿತ, ಕಲ್ಯಾಣ ಕರ್ನಾಟಕದಲ್ಲಿನ ಖಾಲಿ ಇರುವ 25 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗಾಗಿ ಬಜೆಟ್ನಲ್ಲಿ ಅನುಮೋದನೆಗೆ ಪ್ರಸ್ತಾವನೆ : ಸಚಿವ ಎಸ್.ಮಧು ಬಂಗಾರಪ್ಪ
-
ದಿನದ ಸುದ್ದಿ1 day ago
ಜಿಎಂ ಡಿಪ್ಲೋಮೋ ಕಾಲೇಜಿನ 44 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ
-
ದಿನದ ಸುದ್ದಿ34 minutes ago
ತುಂಬಿದ ಕೊಡ ತುಳುಕಿತಲೇ ಪರಾಕ್..!