ದಿನದ ಸುದ್ದಿ
ಮ.ರಾಮಮೂರ್ತಿಯವರ ಕೊಟ್ಟ ಕನ್ನಡದ ಬಾವುಟ ; ಹೋರಾಟದ ಜವಾಬ್ದಾರಿಯ ಹಸ್ತಾಂತರಕ್ಕೆ ಮೆರಗು
- ಸುಮನ್ ಜೆ.ಎಸ್,ಪ್ರಥಮ ವರ್ಷದ ಸ್ನಾತಕೋತ್ತರ ಪದವಿ, ವಿದ್ಯಾರ್ಥಿ,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಬೆಂಗಳೂರು ವಿಶ್ವವಿದ್ಯಾಲಯ
ಕನ್ನಡ ನಾಡಿನ ಅಭಿಮಾನ ಸ್ವಾಭಿಮಾನ ಮತ್ತು ಅಸ್ಮಿತೆಯಾಗಿ ಕನ್ನಡಿಗರ ಉಸಿರಲ್ಲಿ ಬೆರೆತು ಹೋಗಿರುವ ಕೆಂಪು-ಹಳದಿ ಬಾವುಟದ ನಿರ್ಮಾತೃ ಮ.ರಾಮಮೂರ್ತಿ ಎಂದು ಈ ಹೆಸರು ಕೇಳಿದ ತಕ್ಷಣವೇ ಕನ್ನಡಿಗರ ನರನಾಡಿಗಳಲ್ಲಿ ಸಂಚಲನ ಉಂಟಾಗುತ್ತದ್ದೆ ನಮ್ಮ ತಾಯಿನಾಡು ಅನುಭವಿಸುತ್ತಿರುವ ವೇದನೆಗಳಿಗೆ ತೀವ್ರವಾಗಿ ಪ್ರತಿರೋಧಿಸುವ ಪ್ರೇರಕ ಶಕ್ತಿಯೊಂದು ಇಡಿ ದೇಹದ ತುಂಬೆಲ್ಲಾ ವಿದ್ಯುತ್ತಿನಂತೆ ಸಂಚರಿಸುತ್ತದೆ ಅಂತಹ ಒಂದು ಪ್ರಚೋದಕ ಶಕ್ತಿಯಿಂದ ಕೂಡಿರುವ ವ್ಯಕ್ತಿತ್ವವಾಗಿತ್ತು.
ರಾಮಮೂರ್ತಿ ರವರು ಮಾರ್ಚ್ 11, -1918ರಂದು ನಂಜನಗೂಡಿನ ಗಾಂಧಿವಾದಿಯಾಗಿ ವೀರ ಕೇಸರಿ ಪತ್ರಿಕೆಯ ಸಂಪಾದರಾಗಿದ್ದ ಸೀತಾರಾಮ ಶಾಸ್ತ್ರಿ ಮತ್ತು ಸುಬ್ಬಮ್ಮ ಅವರ ಪುತ್ರನಾಗಿ ಹುಟ್ಟಿದ ರವರು ಶೈಕ್ಷಣಿಕ ಜೀವನವೂ ಹುಟ್ಟೂರಲ್ಲಿ ಸೇರಿದಂತೆ ಬೆಂಗಳೂರಿನ ಗಾಂಧಿನಗರದಲ್ಲಿರುವ ಆರ್ಯ ವಿದ್ಯಾಶಾಲೆಯಲ್ಲಿ ಮುಂದೊರೆಯಿತು. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾದ ಸುಬ್ರಮಣ್ಯ ಅಯ್ಯರ್ ಅವರಿಂದ ಮತ್ತು ಮಾಧ್ಯಮಿಕ ಶಾಲೆಯಿಂದ ಶಿಕ್ಷಕರಾದ ದೇವುಡು ಅವರಿಂದ ವಿಶೇಷ ಕಾಳಜಿಗೊಳಪಟ್ಟು ಅವರಿಂದ ಪ್ರಭಾವಿತರಾದರು.ಹುಟ್ಟಿನಿಂದ ಪ್ರತಿಭಾವಂತರಾಗಿದ್ದ ರಾಮಮೂರ್ತಿ ರವರಿಗೆ ಚಳವಳಿಗಳಿಗೆ ಧುಮುಕಲು ಮೊದಲ ಪ್ರೇರಣೆಯಾಗಿದ್ದು ಅವರ ತಂದೆಯವರಾದ ಸೀತಾರಾಮಶಾಸ್ತ್ರಿ,
ಗಾಂಧೀಜಿಯವರ ವಿಚಾರಗಳಿಂದ ಪ್ರಭಾವಿತರಾಗಿ ಚಳವಳಿಗಳತ್ತ ಮುಖ ಮಾಡಿದ ಶಾಸ್ತ್ರಿ ಅದರ ಪ್ರಚಾರಕ್ಕಾಗಿ ‘ವೀರ ಕೇಸರಿ’ ಎನ್ನುವ ಪತ್ರಿಕೆಯನ್ನು ಹೊರಡಿಸುತ್ತಿದ್ದರು. ಮುಂದೆ ರಾಮಮೂರ್ತಿ ಪತ್ರಕರ್ತರಾಗಿ ಹೊರಹೊಮ್ಮುವಲ್ಲಿ ಬಹಳ ದೊಡ್ಡ ಪಾತ್ರವಹಿಸಿದ್ದು ಇದೆ ವೀರಕೇಸರಿ ಪತ್ರಿಕೆ.
ತನ್ನ ತಂದೆಯವರು ಸ್ಥಾಪಿಸಿದ ಪತ್ರಿಕೆಯಲ್ಲಿ ಸ್ವತಃ ತಾನೂ ಕೂಡ ತಂದೆಯವರೊಂದಿಗೆ ತೊಡಗಿಸಿಕೊಂಡು ಮುಂದೆ ತಾವೇ ವೀರಕೇಸರಿ ಪತ್ರಿಕೆಯ ಸಂಪಾದಕರಾದರು. ಸ್ವತಂತ್ರ ಚಳವಳಿ ಉತ್ತುಂಗದಲ್ಲಿದ್ದ ಕಾಲದಲ್ಲಿದಲ್ಲಿ ಈ ಪತ್ರಿಕೆಯು ತನ್ನ ಓದುಗರನ್ನ ಚಳುವಳಿಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸುತ್ತಿತ್ತು ಆ ಪತ್ರಿಕೆಯು ಭಾರತ ಸ್ವತಂತ್ರವಾಗಿ ಭಾಷಾವಾರು ರಾಜ್ಯಗಳು ರಚನೆಯಾದ ಮೇಲೆ ಕರ್ನಾಟಕದ ಹಲವಾರು ಮೂಲಭೂತ ಸಮಸ್ಯೆಗಳನ್ನು ನಾಡಿನ ಜನತೆಯ ಎದುರು ತೆರೆದಿಡಲು ರಾಮಮೂರ್ತಿ ರವರ ಸಂಪಾದಕತ್ವದಲ್ಲಿ ಆರಂಭಿಸಿತು.
ಅನೇಕ ಕಾರಣಾಂತರಗಳಿಂದ ವೀರಕೇಸರಿ ಪತ್ರಿಕೆಯು ನಿಂತುಕೊಂಡ ಮೇಲೆ ಮಹತ್ವಾಕಾಂಕ್ಷೆಯ ವ್ಯಕ್ತಿತ್ವಯುಳ್ಳ ರಾಮಮೂರ್ತಿ ವಿನೋದಿನಿ, ಕಥಾವಾಣಿ, ವಿನೋದವಾಣಿ ಅಂತಹ ಪತ್ರಿಕೆಗಳನ್ನು ಹುಟ್ಟುಹಾಕಿ ತನ್ನ ಸಕ್ರಿಯತೆಯನ್ನು ಕಾಯ್ದುಕೊಂಡರು. ನಾಡಿನಲ್ಲಿ ಲೈಂಗಿಕ ವಿಜ್ಞಾನದ ಪತ್ರಿಕೆಯ ಕೊರತೆಯನ್ನು ಅರಿತು ರಾಮಮೂರ್ತಿ, ‘ಕಾಮಕಲಾ’ ಎನ್ನುವ ಪತ್ರಿಕೆ ಹೊರಡಿಸಿದರು. ಇಂತಹ ಹಲವಾರು ಸಮಸ್ಯೆಗಳು ಎದುರಾದಾಗ ಪತ್ರಿಕೆಯನ್ನು ಮುಚ್ಚಿದರು ಹೀಗೆ ಒಬ್ಬ ಸೃಜನಶೀಲ ಪತ್ರಕರ್ತರಾಗಿ ಕಾರ್ಯನಿರ್ವಹಿಸಿ ಅನೇಕ ಏಳು ಬೀಳುಗಳು ನಡುವೆ ಜಗ್ಗದೆ ಹೋರಾಟ ನಡೆಸಿದರು.
ರಾಮಮೂರ್ತಿ ಪ್ರಾಥಮಿಕ ಶಾಲಾ ಹಂತದಿಂದಲೇ ಸಾಹಿತ್ಯಾಸಕ್ತರಾಗಿದ್ದರು. ಆ ಆಸಕ್ತಿಯೇ ಮುಂದೆ ಅವರಿಗೆ ಬರಹಗಾರರಾಗಿ, ಪತ್ತೆದಾರಿ ಕಾದಂಬರಿಕಾರರಾಗಿ ರೂಪಗೊಳ್ಳುವಲ್ಲಿ ಪ್ರಚೋದಿಸಿದರ ಕಾರಣದಿಂದಾಗಿ 1950-60ರ ದಶಕದಲ್ಲಿ ವಿಪ್ಲವ, ಇಬ್ಬರು ರಾಣಿಯರು, ಚಿತ್ರಲೇಖ, ರಾಜದಂಡ, ವಿಷಕನ್ಯೆ ಮರೆಯಾಗಿದ್ದ ವಜ್ರಗಳು ಇಂತಹ ಪತ್ತೆದಾರಿ ಕಾದಂಬರಿಗಳಲ್ಲದೆ ಭಾಗ್ಯದ ಮದುವೆ, ಪ್ರೇಮಮಂದಿರ, ಹಿಪ್ಪರಗಿ ಇಂತಹ ಐತಿಹಾಸಿಕ ಕಾದಂಬರಿಗಳನ್ನ ಒಳಗೊಂಡು ಸುಮಾರು 150ಕ್ಕೂ ಹೆಚ್ಚು ಕಾದಂಬರಿಗಳು ಇವರ ವಿದ್ವತ್ತಿಗೆ ಸಾಕ್ಷಿಯಾಗಿವೇ. ಕನ್ನಡದ ಓದುಗರಿಗೆ ಸುಲಭವಾಗಿ ಎಟುಕುವ ದರದಲ್ಲಿ ತನ್ನ ಪುಸ್ತಕಗಳನ್ನು ಪ್ರಕಟಿಸುತ್ತಿದ್ದ ವಿಶಾಲ ಮನಸ್ಸು ಕೂಡ ರಾಮಮೂರ್ತಿಯವದಾಗಿತ್ತು.
ಇದಕೊಂದು ನಿದರ್ಶನ ಕೊಡುವುದಾದರೆ 120-130ರ ಪುಟಗಳ ಪುಸ್ತಕ ಅವರು ಬರವಣಿಗೆ ಮಾರಾಟದ ದರವನ್ನು ನಿಗದಿ ಪಡಿಸಿದ್ದು, ಇದು ಕನ್ನಡದ ಸಾಹಿತ್ಯದ ಬೆಳವಣಿಗೆಗಾಗಿ ಅವರು ಕೈಗೊಂಡ ಕೆಲಸಗಳಲ್ಲಿ ಒಂದು ಎಂದರು ಉತ್ಪ್ರೇಕ್ಷೆ ಅಲ್ಲ.
ಬಹುರೂಪಿಯಾಗಿದ್ದ ರಾಮಮೂರ್ತಿ ಸಾಹಿತಿಯಾಗಿ, ಪತ್ತೆದಾರಿ ಕಾದಂಬರಿಕಾರರಾಗಿ, ಪ್ರಖರ ಪತ್ರಕರ್ತರಾಗಿ, ಸ್ವತಂತ್ರ ಹೋರಾಟಗಾರರಾಗಿ, ಕನ್ನಡಪರ ಹೋರಾಟಗಾರರಾಗಿ ತನ್ನ ನಿರಂತರತೆಯನ್ನ ಸಮಾಜದೊಂದಿಗೆ ಸೆಣೆಸುತ್ತಲೆ ಬಂದವರು. ಈ ನಾಡು ಇಂದು ಪ್ರತಿಯೊಂದು ಕ್ಷಣದಲ್ಲು ಮ.ರಾಮಮೂರ್ತಿ ರವರನ್ನು ಸ್ಮರಿಸಲು ಹಲವಾರು ಕಾರಣಗಳಿವೆ. ಅವರು ಬದುಕಿ ಬಾಳಿದ ಕಾಲವೂ ಸ್ವತಂತ್ರ ಚಳುವಳಿ, ಸಾಮಾಜಿಕ ಚಳುವಳಿಗಳು ಸೇರಿದಂತೆ ಹಲವಾರು ಚಳುವಳಿಗಳು ಉತ್ತುಂಗದಲ್ಲಿ ಕಾಲವದು ಭಾರತವೂ 1947ರಲ್ಲಿ ಸ್ವಾತಂತ್ರ್ಯವನ್ನು ಪಡೆದ ನಂತರ ಆಂತರಿಕವಾಗಿ ಭಾರತವೂ ಹಲವಾರು ಹೋರಾಟಗಳು ತನ್ನೊಳಗಿನ ಅಸ್ತವ್ಯಸ್ತತೆಯನ್ನು ಸರಿ ಪಡಿಸಿಕೊಳ್ಳುವತ್ತ ಸಾಗಿತ್ತು.
ಇತ್ತ ಕರ್ನಾಟಕದಲ್ಲೂ ಸಹ ಹಲವಾರು ಹೋರಾಟಗಳು ಮುನ್ನೆಲೆಗೆ ಬಂದವು, ಭಾಷಾವಾರು ರಾಜ್ಯಗಳ ರಚನೆಗಳಾದಾಗ ಕರ್ನಾಟಕವೂ ತೀವ್ರ ತರದ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಈ ಸಮಸ್ಯೆಗಳನ್ನು ಪ್ರತಿನಿಧಿಸಲು ಬೇಕಾದ ಪ್ರತಿನಿಧಿಗಳು ಹಲವಾರಿದ್ದರು. ರಾಮಮೂರ್ತಿ ಮತ್ತವರ ಸಮಕಾಲಿನವರಾದ
ಕನ್ನಡ ಚಳವಳಿಗಳ ಹರಿಕಾರರು ಎಂದೆ ಪ್ರಸಿದ್ಧರಾಗಿರುವ ಕೊಣಂದೂರು ಲಿಂಗಪ್ಪ, ಅ.ನ.ಕೃ, ಮೈ.ಸು.ನಟರಾಜ್, ಮೈ.ಸು. ಶೇಷಗಿರಿರಾವ್, ನಾಡಿಗೇರ ಕೃಷ್ಣರಾವ್, ಕರ್ಲಮಂಗಲಂ ಶ್ರೀಕಂಠಯ್ಯ ಮೊದಲಾದವರುಗಳ ಜತೆಗೆ ಗುರುತಿಸಿಕೊಂಡವರು.
ಮ.ರಾಮಮೂರ್ತಿ ಕನ್ನಡ ಚಳವಳಿಗಳು ನಿರ್ಣಾಯಕ ಹಂತದಲ್ಲಿರುವ ಕಾಲಘಟ್ಟದಲ್ಲಿ ಹಲವಾರು ಹೋರಾಟಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.1956ರಲ್ಲಿ ಭಾಷಾವಾರು ರಾಜ್ಯಗಳ ರಚನೆ ಆದಾಗಾ ಕರ್ನಾಟಕವೂ ಸುತ್ತುಮುತ್ತಲಿನ ಅನ್ಯಭಾಷಿಕರಿಂದ ಹಲವು ಸಮಸ್ಯೆಗಳು ಎದುರಿಸುತ್ತಿತ್ತು. ವಿಶೇಷವಾಗಿ ಬೆಂಗಳೂರು ಅನ್ಯಭಾಷಿಕರಿಂದ ಸಮಸ್ಯೆಗಳನ್ನ ಎದುರಿಸುತ್ತಿತ್ತು. ಅಂತಹ ಕಾಲದಲ್ಲಿ ಇದರ ವಿರುದ್ಧವಾಗಿ ಕನ್ನಡ ನೆಲದ ಹಿತಾಸಕ್ತಿಯನ್ನು ಕಾಪಾಡಲು ಮುಂದಾದ ನೂರಾರು ಮಹನೀಯರಲ್ಲಿ ಮ.ರಾಮಮೂರ್ತಿ ಪ್ರಾತಃಸ್ಮರಣಿಯರು ಇಡಿ ಬದುಕೆ ಕನ್ನಡ ನಾಡಿನ ಹಿತಕ್ಕಾಗಿ ಸವೆಸಿದರು.
ಬೆಂಗಳೂರಲ್ಲಿನ ಹಲವಾರು ಬಡಾವಣೆಗಳಲ್ಲಿ ಕನ್ನಡಕ್ಕೆ ಗೌರವ ಕೊಡೊದಲ್ಲೆ ಇರಲಿ ಕನ್ನಡ ಎಂದರೆ ಎನ್ನಡ ಎನ್ನುವ ಸ್ಥಿತಿ ತಲುಪಿತ್ತು. ನಂತರ ದಿನದಲ್ಲಿ ಕನ್ನಡದ ಕುವರರಾದ ಕೋಣಂದೂರ ಲಿಂಗಪ್ಪಾ, ಬಂದಗದ್ದೆ ರಮೇಶ್ ಅನ್ನು ತರುಣ ವಿಧ್ಯಾರ್ಥಿಗಳು ‘ಕನ್ನಡ ಯುವಜನ ಸಭಾ’ ಎನ್ನುವ ಹೆಸರಲ್ಲಿ ಕನ್ನಡ ವಿರೋಧಿ ಶಕ್ತಿಗಳಿಗೆ ಪ್ರತಿರೋಧ ಒಡ್ಡಲು ಆರಂಭಿಸಿದರು.
ಅದು ಸ್ಪೋಟಗೊಂಡಿದ್ದು, ಮತ್ತೆ ಮ.ರಾಮಮೂರ್ತಿ ಮತ್ತೆ ಅ.ನ.ಕೃ ಅವರು 04.02.1962ರಲ್ಲಿ ಆಯೋಜಿಸಿದ್ದ ‘ಬೆಂಗಳೂರು ಕನ್ನಡಿಗರ ಸಮಾವೇಶ’ ನಡೆಸಿ ಅದರ ಪ್ರಚಾರಕ್ಕಾಗಿ ಮತ್ತು ಕನ್ನಡ ಪರ ಸಂಘಟನೆಗಳಲ್ಲಿ ಹೋರಾಟದ ಶಕ್ತಿ ತುಂಬಲು ‘ಕನ್ನಡ ಯುವಜನ’ ಎನ್ನುವ ಪಾಕ್ಷಿಕ ಪತ್ರಿಕೆ ಹೊರಡಿಸಿ ಚಳವಳಿಗೆ ಹೊಸ ಆಯಾಮ ನೀಡಿದರು.
ಪುನಃ 27.05.1963ರಂದು ಚಾಮರಾಜಪೇಟೆ ರಾಮಸೇವಾ ಮಂಡಳಿಯಲ್ಲಿ ಎಂ.ಎಸ್. ಸುಬ್ಬಲಕ್ಷ್ಮೀ ಅವರ ಸಂಗೀತ ಕಚೇರಿ ವ್ಯವಸ್ಥೆಯಾಗಿತ್ತು, ಕನ್ನಡಕ್ಕೆ ಅವಕಾಶವೆ ಇಲ್ಲದ ಕಾರ್ಯಕ್ರಮವನ್ನು ಮ.ರಾಮಮೂರ್ತಿ ಮತ್ತು ಅ.ನ.ಕೃ ಅವರು ತೀವ್ರವಾಗಿ ಖಂಡಿಸಿ ಪ್ರತಿಭಟನೆ ಮಾಡಿದ್ದರ ಫಲವಾಗಿ ಆ ಕಚೇರಿ ರದ್ದಾಯಿತು. ಕನ್ನಡ ಅಂತ ಬಂದಾಗ ಯಾವುದಕ್ಕೂ ಸಹ ರಾಜಿಯಾಗದ ವ್ಯಕ್ತಿತ್ವ ರಾಮಮೂರ್ತಿಯವರದಾಗಿತ್ತು. ಈ ಪ್ರತಿಭಟನೆಯು ಹೊಸ ಒಂದು ಹೆಜ್ಜೆಗೆ ನಾಂದಿ ಹಾಡಿತ್ತು.
ಅದೇನೆಂದರೆ ಸುಮಾರು 60ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಒಳಗೊಂಡ ‘ಕರ್ನಾಟಕ ಸಂಯುಕ್ತ ರಂಗ’ದ ಉದಯವಾಯಿತು. ಅ.ನ.ಕೃರವರು ಅಧ್ಯಕ್ಷರಾದರು. ರಾಮಮೂರ್ತಿ ಕಾರ್ಯದರ್ಶಿಯಾಗಿ ಹಲವಾರು ಐತಿಹಾಸಿಕ ನಿರ್ಧಾರಗಳು, ಹೋರಾಟಗಳು ಕೈಗೊಂಡರು.
ಅಜಾನುಬಾಹು ದೇಹ ನಿರ್ಭಿತ ಹೆಜ್ಜೆಗಳಿಂದ ಕೂಡಿದ ರಾಮಮೂರ್ತಿ ವ್ಯಕ್ತಿತ್ವಕ್ಕೆ “ಕನ್ನಡದ ವೀರ ಸೇನಾನಿ” ಎನ್ನುವ ಬಿರುದು ಬರಲು ಒಂದು ರೋಚಕ ಘಟನೆಯೇ ಇದೆ. ಇದು ರಾಮಮೂರ್ತಿರವರ ಎದೆಗಾರಿಕೆಗೆ ಸಾಕ್ಷಿಯಾಗಿದೆ.
ಅಂದಿನ ಕಾಲದಲ್ಲಿ ಚಿತ್ರದುರ್ಗದ ಹಿರಿಯೂರಲ್ಲಿ ನಿರ್ಮಾಣವಾಗಿದ್ದ ವಾಣಿ ವಿಲಾಸ ಸಾಗರ ಕಟ್ಟುವಾಗ ಕೂಲಿ ಕಾರ್ಮಿಕರಾಗಿ ತಮಿಳರೇ ಇದ್ದರು. ಇಡೀ ಹಿರಿಯೂರು ಪಟ್ಟಣವೇ ತಮಿಳರ ಕೈವಶ ಮಾಡಿಕೊಂಡು ಪಟ್ಟಣದಲ್ಲಿ ಡಿಎಂಕೆ ಪಕ್ಷದ ಬಾವುಟವನ್ನು ಹಾರಿಸಿದ್ದರು. ಇದು ಅಲ್ಲಿನ ಕನ್ನಡಪರ ಮನಸ್ಸುಗಳಲ್ಲಿ ತಳಮಳ ಉಂಟಾದರು ಏನೂ ಮಾಡದ ಸ್ಥಿತಿಯಲ್ಲಿದ್ದಾಗ ವಿಷಯ ರಾಮಮೂರ್ತಿ ಗಮನಕ್ಕೆ ಬಂದು ಬಾವುಟವನ್ನು ತೆಗೆಯುವಂತೆ ಮೌಖಿಕವಾಗಿ ಸೂಚಿಸಿದರು.
ನಂತರ ಅದನ್ನ ಕಡೆಗಣಿಸಿದ ತಮಿಳರು ಕನ್ನಡಿಗರ ತಾಳ್ಮೆ ಮತ್ತಷ್ಟು ಪರೀಕ್ಷೆ ಮಾಡಿದರು. ಇದನ್ನ ಸಹಿಸದ ರಾಮಮೂರ್ತಿ ಹಿರಿಯೂರ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಆವಾಗಲೂ ಕೂಡ ತಾವಾಗಿಯೇ ಬಾವುಟ ತೆಗೆಯಿರಿ ಇಲ್ಲಾ ನಾನು ಇದನ್ನ ತೆಗೆದು ಎಸೆಯುತ್ತೆನೆ ಎಂದು ಹೇಳಿದ್ದು, ಲಘುವಾಗಿ ತಗೊಂಡ ತಮಿಳರು ಇವರ ಮಾತನ್ನು ಕಡೆಗಣಿಸಿದಾಗ ರೊಚ್ಚಿಗೆದ್ದ ರಾಮಮೂರ್ತಿ ತಾನೇ ಆ ಡಿಎಂಕೆ ಬಾವುಟ ಕಿತ್ತೆಸೆಯಲು ಮುಂದಾದಾಗ ಒಬ್ಬ ತಮಿಳು ಯುವಕ ಅವರನ್ನ ತಡೆದು ತಾನೆ ಬಾವುಟ ತೆಗೆದ ತಮಿಳರು ಕ್ನನಡಿಗರಿಗೆ ಕ್ಷಮೆ ಯಾಚಿಸಿದರು. ಈ ಒಂದು ದಿಟ್ಟ ನಡೆಯಿಂದ ಅವರಿಗೆ ವೀರ ಸೇನಾನಿ ಎಂಬ ಬಿರುದು ಅಭಿಮಾನಪೂರ್ವಕವಾಗಿ ಅರ್ಪಿಸಲಾಯಿತು.
ರಾಮಮೂರ್ತಿ ಪ್ರತಿಯೊಂದು ಹೋರಾಟವೂ ಕನ್ನಡಿಗರ ಲಾಭಕ್ಕಾಗಿ, ಉದ್ದಾರಕ್ಕಾಗಿ ನಾಡಿನ ಸಮಗ್ರ ಹಿತಕ್ಕಾಗಿಯೇ ಇತ್ತು. ಎನ್ನುವುದಕ್ಕೆ ಬಹಳಷ್ಟು ಸಾಕ್ಷಿಗಳಿವೆ. ಡಬ್ಬಿಂಗ್ ಚಿತ್ರ ವಿರೋಧಿ ಹೋರಾಟ, ಸ್ಥಳಿಯ ಕೆಲಸಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ, ಕನ್ನಡ ಶಿಕ್ಷಣ ಮಾಧ್ಯಮ ಭಾಷೆ ಮಾಡಲು, ಕನ್ನಡ ಚಿತ್ರಗಳಿಗೆ ಥಿಯೇಟರ್ ಸಲುವಾಗಿ ಇಂತಹ ದೂರಾಲೋಚನೆಗಳು ಕನ್ನಡಿಗರ ಭವಿಷ್ಯದ ಹಿತಕ್ಕಾಗಿ ನಡೆದ ನಡೆಯಬೇಕಾದ ಹೋರಾಟಗಳಾದರೆ.
ಅನ್ಯಭಾಷಿಕರಿಂದ ಕನ್ನಡಕ್ಕಾಗುತ್ತಿರುವ ಅನ್ಯಾಯ, ಕಾರ್ಖನೆಗಳಲ್ಲಿ ದುಡಿಯುವ ಕನ್ನಡದ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ನಿರಂತರವಾಗಿ ಪ್ರತಿಭಟಿಸಿದರು. ಇದಕ್ಕೆ ಒಳ್ಳೆಯ ನಿದರ್ಶನ ಎಂದರೆ ಮೈಕೊ ಕಾರ್ಖನೆಯ ಕಾರ್ಮಿಕರ ಪರವಾಗಿ ಹೋರಾಟ ಮಾಡಿದ್ದು ಅವರಿಗೆ ಕನ್ನಡದ ದುಡಿಯುವ ಜನರ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ.
ಇಂತಹ ಒಂದು ಘನ ವ್ಯಕ್ತಿತ್ವದ ರಾಮಮೂರ್ತಿ ರವರ ಕನಕಪುರ ರಸ್ತೆ ಪಕ್ಕದ ತಲೆಘಟ್ಟಪೂರದಲ್ಲಿ ಡಿಸೆಂಬರ್ 27.1962ರಲ್ಲಿ ತಮ್ಮ ಜಮೀನಿನಲ್ಲಿ ಬಾವಿಗೆ ನೀರು ಬಂದಿದೆ ಎನ್ನುವ ಖುಷಿಯಲ್ಲಿ ಕೆಲಸಗಾರರೊಂದಿಗೆ ಬಾವಿಗಿಳಿದಾಗ ಮೇಲಿಂದ ಮಣ್ಣು ಕುಸಿದು ಇಬ್ಬರು ಕೆಲಸಗಾರರೊಂದಿಗೆ ದುರಂತವಾಗಿ ಸಾವಿಗಿಡಾದರು. ಕನ್ನಡ ಬಹುದೊಡ್ಡ ಶಕ್ತಿಯೊಂದು ವಿಧಿ ಕನ್ನಡಿಗರಿಂದ ಕಿತ್ತುಕೊಂಡು ಬಿಟ್ಟಿತ್ತು.
ಕನ್ನಡವು ಸುಮ್ಮನೆ ಯಾವುದು ಕೂಡ ಉಳಿಸಿಕೊಂಡಿಲ್ಲ ಪ್ರತಿಯೊಂದರ ಹಿಂದೆ ರೋಚಕ ಇತಿಹಾಸವಿದೆ ಆ ಇತಿಹಾಸ ರೂಪಿಸುವಲ್ಲಿ ಸಾಹಿತಿಗಳು, ಕವಿಗಳು, ಹೋರಾಟಗಾರರು, ಪತ್ರಕರ್ತರು, ಗೋಪಾಲಗೌಡರಂತಹ ಕನ್ನಡ ಪ್ರೇಮಿ ರಾಜಕಾರಣಿಗಳು ಸೇರಿದಂತೆ ಪ್ರತಿಯೊಬ್ಬರು ದುಡಿದಿದ್ದಾರೆ. ಇಂತಹ ಹಲವಾರು ಮಹನೀಯರ ಕನಸಿನ ಕನ್ನಡ ನಾಡು ಅಂದು ಅವರು ಎದುರುಗೊಂಡು ಹೋರಾಡಿದ ಸಮಸ್ಯೆಗಳು ಇಂದು ಮತ್ತೆ ಅದರ ಹತ್ತರಷ್ಟಾಗಿ ಕನ್ನಡಿಗರ ಎದುರಿಗೆ ಬೃಹದಾಕಾರದಲ್ಲಿ ನಿಂತಿದೆ.
ಮ.ರಾಮಮೂರ್ತಿ ಅವರಂತಹ ಕನ್ನಡದ ಕಲಿಗಳು ಹಾಕಿಕೊಟ್ಟ ದಾರಿಯಲ್ಲೇ ಮತ್ತೆ ನಾವೂ ಸಾಗಬೇಕಾಗಿದೆ. ನಮ್ಮ ನಾಡು ನುಡಿ ನೆಲ ಜಲ ಇಂದು ಅನುಭವಿಸುತ್ತಿರುವ ನೋವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ರಾಮಮೂರ್ತಿ ಅವರು ತನ್ನ ಹೋರಾಟವನ್ನ ಬಾವುಟವನ್ನು ನಿರ್ಮಿಸಿ ನಾಡಿಗೆ ಅರ್ಪಿಸುವ ಮೂಲಕ ನಾಡು ನುಡಿಗಾಗಿ ಹೋರಾಡುವ ಜವಾಬ್ದಾರಿಯನ್ನು ಕೂಡ ಕನ್ನಡಿಗರ ಹೆಗಲಿಗೆ ವಹಿಸಿದ್ದಾರೆ. “ಒಂದಲ್ಲಾ ಒಂದು ದಿನ ಈ ರಾಜ್ಯದಲ್ಲಿ ಕನ್ನಡ ಬಾವುಟ ಹಾರಿಸುತ್ತೇನೆ. ಎಲ್ಲೆಡೆ ಕನ್ನಡ ಕಾಣುವಂತೆ ಮಾಡುವವರೆಗೆ ವಿರಮಿಸಲಾರೆ” ಎನ್ನುವ ಅವರ ಕೆಚ್ಚೆದೆಯ ಘೋಷವಾಕ್ಯವೂ ನಮ್ಮ ಕನ್ನಡಿಗರ ಎದೆಬಡಿತವಾಗಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ
ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.
ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ5 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ5 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ5 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ1 day agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ


