ರಾಜಕೀಯ
NRC ಮತ್ತು CAA ಯಾರಿಗೆ ಲಾಭ..?
- ಬಿಂದು ಗೌಡ ಕೆಪಿಸಿಸಿ,ಸಾಮಾಜಿಕ ಜಾಲತಾಣ ರಾಜ್ಯ ಕಾರ್ಯದರ್ಶಿ
ಒಂದು ಮನೆಯಲ್ಲಿ ನಾಲ್ಕು ಜನ ಇದ್ರು ಆದ್ರೆ ತಿನ್ನೋಕೆ ಇದ್ದಿದ್ದೇ ಎರಡು ರೊಟ್ಟಿ ಕಡೆಗೆ ಅರ್ಧ ಅರ್ಧ ತಗೊಂಡು ಹಂಚಿಕೊಂಡು ತಿನ್ನೋಣ ಅಂತ ಮಾತು ಕಥೆ ಆಯ್ತು ಇನ್ನೇನು ಎರಡು ರೊಟ್ಟಿ ಭಾಗ ಆಗಿ ನಾಲ್ಕು ಜನ ಹಂಚಿಕೊಳ್ಳಬೇಕು ಅಷ್ಟರಲ್ಲಿ ಹೊರಗಿಂದ ಯಾರೋ 3 ಜನ ಬಂದ್ರು ಈಗ ಇರುವ 2 ರೊಟ್ಟಿಯನ್ನು 4+3 ಅಂದ್ರೆ 7 ಜನ ಹಂಚಿಕೊಳ್ಳಬೇಕು , ಹೇಗೆ ಹಂಚಿಕೊಳ್ಳುತ್ತಾರೆ, ಇದರಿಂದ ಹೊಟ್ಟೆ ತುಂಬುತ್ತಾ ? ರೊಟ್ಟಿಯನ್ನು ಹಂಚಿಕೊಳ್ಳಬಹುದು ಭೂಮಿಯನ್ನು ಹಂಚಿಕೊಳ್ಳೋಕೆ ಸಾಧ್ಯವಾ ?
ಹೌದು ಈಗಿನ ಸಧ್ಯದ ಪರಿಸ್ಥಿತಿ ಹಾಗಿದೆ ದೇಶದಲ್ಲಿ ಈಗಾಗಲೇ ನಿರುದ್ಯೋಗ ಸಮಸ್ಯೆ ಕಳೆದ 45 ವರ್ಷದಲ್ಲೇ ಇದೆ ಮೊದಲ ಬಾರಿಗೆ ಇಷ್ಟರ ಮಟ್ಟಿಗೆ ನಿರುದ್ಯೋಗ ಸಮಸ್ಯೆ ಕಂಡು ಬಂದಿದೆ ಅಂತದರಲ್ಲಿ ಹೊರ ದೇಶಗಳಿಂದ ಬರುವವರಿಗೆ ಜಾಗ ಕೊಟ್ಟು ಪೌರತ್ವವನ್ನು ಕೊಡ್ತೀರಿ ಆಮೇಲೆ ಅವರಿಗೆ ಉದ್ಯೋಗ ಎಲ್ಲಿಂದ ಕೊಡ್ತೀರಿ ? ಬಂದವರು ಬಂದವರ ಹಾಗೆ ಇರ್ತಾರ ? ನೋ ಮದುವೆ ಮಕ್ಕಳು ಹೀಗೆ ಜನಸಂಖ್ಯೆ ಹೆಚ್ಚುತ್ತಲೇ ಹೋಗುತ್ತೆ ಅವರಿಗೆಲ್ಲ ಉದ್ಯೋಗ, ಆಹಾರ ಎಲ್ಲಿಂದ ಉತ್ಪತ್ತಿ ಆಗುತ್ತೆ ಈಗಾಗಲೇ ಅವೈಜ್ಞಾನಿಕ ಜಿ ಎಸ್ ಟಿ ಹೊರೆಯಾಗಿದೆ.
ನೋಟ್ ಬಂದಿಗಳ ಕಾರಣಕ್ಕೆ ಎಷ್ಟೋ ಕಾರ್ಖಾನೆ , ಉದ್ದಿಮೆ , ವ್ಯವಹಾರಗಳು ಮುಚ್ಚಿಹೋಗಿವೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ , ಇಲ್ಲಿರುವವರೇ ಕೆಲಸಗಳನ್ನ ಕಳೆದುಕೊಂಡು ಮನೆಯಲ್ಲಿ ಕೂತಿರುವಾಗ , ನಿರುದ್ಯೋಗ ಹಸಿವಿನ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ, ದೊಡ್ಡ ದೊಡ್ಡ ಉದ್ಯಮಿಗಳು ನಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ CAA ಅವಶ್ಯಕತೆ ಇದೆಯಾ ?
ಇನ್ನು NRC ಇದಿನ್ನೂ ಜಾರಿಯಾಗಿಲ್ಲ , ಆಗುತ್ತೆ ಅನ್ನುವ ಸುಳಿವು ಇದೆ 1990ರಲ್ಲಿ ಹುಟ್ಟಿರುವ ನನ್ನಲ್ಲೇ BIRTH CERTIFICATE ಇಲ್ಲ ಇನ್ನು ಹಳ್ಳಿಗಾಡುಗಳಲ್ಲಿ ಹುಟ್ಟಿದ , ಮನೆಯಲ್ಲಿಯೇ ಹೆರಿಗೆ ಆದವರ ಜನನ ಪ್ರಮಾಣ ಪತ್ರವನ್ನು ಎಲ್ಲಿಂದ ತರೋದು , ಆದಿವಾಸಿಗಳು , ಹಕ್ಕಿ ಪಿಕ್ಕಿಯವರು ಬುಡಕಟ್ಟಿನವರು ಇಂದಿಗೂ ಸೌಲಭ್ಯ ವಂಚಿತರಾಗಿ ಅರಣ್ಯಗಳಲ್ಲಿ ಇದ್ದಾರೆ ಅವರೆಲ್ಲ ಎಲ್ಲಿಂದ ತರ್ತಾರೆ ?? ನಮ್ಮ ದೇಶದಲ್ಲಿ ಏನಿಲ್ಲ ಅಂದ್ರು ಸಾವಿರಾರು ಅನಾಥ ಆಶ್ರಮ , ವೃದ್ಧಾಶ್ರಮಗಳು ಇವೆ ಅವರೆಲ್ಲ ಎಲ್ಲಿಂದ ತರ್ತಾರೆ ತಮ್ಮ ಜನನ ಪ್ರಮಾಣ ಪತ್ರಗಳನ್ನು ?
ಆಧಾರ್ ಕಾರ್ಡ್ , ಪ್ಯಾನ್ ಕಾರ್ಡ್ , ವೋಟರ್ ಐಡಿ , ಪಾಸ್ ಪೋರ್ಟ್ , ರೇಶನ್ ಕಾರ್ಡ್ , ಡ್ರೈವಿಂಗ್ ಲೈಸನ್ಸ್ ಇದ್ಯಾವುದೂ ಕೂಡ ದಾಖಲೆ ಅಲ್ಲ ಅನ್ನೋದೇ ಆದ್ರೆ ಇನ್ನೇನು ಕೊಟ್ಟು ಸಾಭೀತು ಪಡಿಸಬೇಕು ??
ಬಿಜೆಪಿ MEMBERSHIP CARD ತೋರಿಸಿ ಈ ದೇಶದ ಪ್ರಜೆ ಅಂತ ಸಾಬೀತು ಪಡಿಸಬೇಕಾ ???
ಆಧಾರ್ ಕಾರ್ಡ್ ಆಧಾರ ಅಲ್ಲ ಅಂದಾದರೆ ಯಾವ ಆಧಾರದ ಮೇಲೆ ಮಾಡಿದ್ದು ಅದನ್ನ ಯಾತಕ್ಕಾಗಿ ಮಾಡಿದ್ದು , ಜನಗಳ ಸಮಯ ಜೊತೆಗೆ ಹಣ ಎರಡು ಖರ್ಚಾಗಿದೆ ಇನ್ನು ಆಗುತ್ತಲೇ ಇದೆ ಒಂದು ಸಾರಿ ಅಪ್ಡೇಟ್ ಮಾಡಿಸೋಕೆ 50 ರೂಪಾಯಿ ಕೊಡಬೇಕು ಆಧಾರ್ ಆಧಾರ ಅಲ್ಲ ಅಂದಮೇಲೆ ಅಪ್ಡೇಟ್ ಯಾಕೆ ಮಾಡಿಸಬೇಕು ಬ್ಯಾನ್ ಮಾಡಿ ಜನರ ಸಮಯ ಮತ್ತು ದುಡ್ಡು ಆದ್ರೂ ಉಳಿಯುತ್ತೆ!
ಇದರಿಂದ ಮುಸಲ್ಮಾನರಿಗೆ ಮಾತ್ರ ತೊಂದರೆ ಅನ್ನೋದು ಮೂರ್ಖತನ , ಪಕ್ಕದ ಮನೆ ಅಹ್ಮದ್ ಭಾಯ್ ಅವರ ಹಿರೀಕರು ಜನನ ಪುರಾವೆ ಇಟ್ಕೊಂಡಿದ್ರೆ ಅವರಿಗೇನು ಸಮಸ್ಯೆ ಇಲ್ಲ ಇಲ್ಲಿನ ಪೌರತ್ವ ಪಡೀತಾರೆ ಅದೇ ಅಹ್ಮದ್ ಅಣ್ಣನ ಪಕ್ಕದ ಮನೆಯವ ಸುರೇಶ ಯಾವ ದಾಖಲೆ ಇಟ್ಕೊಂಡಿಲ್ಲ ಅಂದ್ರೆ ಅವನು ಈ ದೇಶದ ಪ್ರಜೆ ಅಲ್ಲ ಅಂತ ಡೈರೆಕ್ಟ್ ಆಗಿ ಡಿಟೆಂಶನ್ ಸೆಂಟರ್ ಗೆ ಹಾಕ್ತಾರೆ ಹಿಂದೂ ಅಂತ ಸುಮ್ಮನೆ ಬಿಡೋದಿಲ್ಲ .
ಆದ್ದರಿಂದ NRC ಮತ್ತು CAA ಇಂದ ಅನಾನುಕೂಲವೆ ಹೊರತು ಅನುಕೂಲವಾಗಲಿ , ಲಾಭವಾಗಲಿ ದೇಶದ ಜನತೆಗೆ ಇಲ್ಲ ಇದರಿಂದ ಅನುಕೂಲ ಬಹುಶಃ ಬಿಜೆಪಿಗರಿಗೆ ಆಗಬಹುದು (ವೋಟರ್ಸ್ ಮ್ಯಾಟರ್ಸ್ ) ಅಷ್ಟೇ ಬಿಟ್ರೆ ಬೇರೆ ಇಲ್ಲ , ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಕೆಲಸಕ್ಕೆ ಬಾರದ ಇಂತಹ ವಿಚಾರಗಳನ್ನು ಬಿಟ್ಟು ನಿಜವಾಗಿಯೂ ಗಮನ ಕೊಡಬೇಕಾದ ಆರ್ಥಿಕ ಸಮಸ್ಯೆ , ಶಿಕ್ಷಣ , ರಕ್ಷಣೆ , ಭದ್ರತೆ , ನಿರುದ್ಯೋಗ ಇವುಗಳ ಬಗ್ಗೆ ಗಮನ ಕೊಡಲಿ.
ಇನ್ನುಳಿದಂತೆ ಭಾವುಕವಾಗಿ ಯೋಚನೆ ಮಾಡೋದಾದರೆ ಹೌದು ನಮಗೆ ಬೇಕಿಲ್ಲ ನಾವು ಈ ಮಣ್ಣಿನ ಮಕ್ಕಳು ನಮ್ಮ ನೆಲದಲ್ಲಿ ನಾವು ಯಾರಿಗೂ ನಾವು ಇಲ್ಲಿಯವರು ಎಂದು ಸಾಬೀತು ಪಡಿಸುವ ಅವಶ್ಯಕತೆ ಇಲ್ಲ !
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ.
ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು… pic.twitter.com/UapeRxBcZP
— Siddaramaiah (@siddaramaiah) April 14, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ
ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ್ಪ, ಹಿರಿಯ ಶಾಸಕ ಈ. ತುಕಾರಾಮ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್, ಮಹಿಳಾ ಆಯೋಗದ ಅದ್ಯಕ್ಷೆ ಡಾ. ನಾಗಲಕ್ಷ್ಮಿ ಸೇರಿ ಹಲವರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಂಡ್ಯದ ಡಿಸಿ ಪಾರ್ಕ್ ಎದುರು ಇರುವ ಜಗಜೀವನ್ರಾಮ್ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಸೇರಿದಂತೆ ಅಧಿಕಾರಿಗಳ ವರ್ಗ ಹಾಗೂ ಜಗಜೀವನ್ರಾಮ್ ಅನುಯಾಯಿಗಳು ಭಾಗವಹಿಸಿದ್ದರು.
ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಅವರ 117ನೇ ಜಯಂತಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದು ಚುನಾವಣಾ ಆಯೋಗ ಸಮಾವೇಶ
ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಸಮಾವೇಶ ನಡೆಸಲಿದೆ.
ಈ ಸಮಾವೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮತದಾನದ ಸಮಸ್ಯೆಯನ್ನು ಪರಿಹರಿಸಲು ಉದ್ದೇಶಿತ ಮತ್ತು ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.
ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ, ಥಾಣೆ, ನಾಗ್ಪುರ, ಪಾಟ್ನಾ ಸಾಹಿಬ್, ಲಖನೌ ಮತ್ತು ಕಾನ್ಪುರ ನಗರ ಪಾಲಿಕೆಯ ಆಯುಕ್ತರು ಮತ್ತು ಬಿಹಾರ ಮತ್ತು ಉತ್ತರದ ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರುಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243