ಸಿನಿ ಸುದ್ದಿ
ಆತ 38 ವರ್ಷದ ಬಾಲಕ; ಹೆಸರು ‘ಪಾಆ ಪಾಆ’..!
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2020/05/Osita-Iheme_Nigerian-actor_Suddidina.jpg&description=ಆತ 38 ವರ್ಷದ ಬಾಲಕ; ಹೆಸರು ‘ಪಾಆ ಪಾಆ’..!', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2020/05/Osita-Iheme_Nigerian-actor_Suddidina.jpg&description=ಆತ 38 ವರ್ಷದ ಬಾಲಕ; ಹೆಸರು ‘ಪಾಆ ಪಾಆ’..!', 'pinterestShare', 'width=750,height=350'); return false;" title="Pin This Post">
- ಸಿದ್ದು ಸತ್ಯಣ್ಣನವರ್
ಆತನ ಎತ್ತರ ತೀರಾ ಕಡಿಮೆ. ಎಷ್ಟು ಕಡಿಮೆಯೆಂದರೆ ಹೆಂಡತಿ ಪಕ್ಕ ನಿಂತರೆ, ಆಕೆಯ ಸೊಂಟಕ್ಕೆ ಬರುವಷ್ಟು. ಮುಖದಲ್ಲಿನ ವಯಸ್ಸೋ ಅದು ಎದ್ದು ಕಾಣುವುದಿಲ್ಲ. ಪಚಡಿ ಮೂಗು, ಕುಬ್ಜ ದೇಹ, ಗುಂಗುರು ಕೂದಲು, ಬಟ್ಟಲು ಕಣ್ಣು. ಅಗಲವಾದ ಮುಖದ ಈತನನ್ನ ಕಂಡರೆ ಜನ ಈಗಲೂ ಮಗು ಅಂತಲೇ ತಿಳೀತಾರೆ. ಆತ ನೈಜೀರಿಯಾದ ನಟ. ಆಫ್ರಿಕಾ ಖಂಡದ ಜನ ಆತ ನಿರ್ವಹಿಸಿದ ಪಾತ್ರವೊಂದನ್ನು ಎಷ್ಟು ಪ್ರೀತಿಸುತ್ತಾರೆಂದರೆ, ಆತನ ನಿಜನಾಮವೇ ಮರೆತು ಹೋಗುವಷ್ಟು. ಆತ ನಿರ್ವಹಿಸಿದ ಅಂತಹ ಪಾತ್ರದ ಹೆಸರು ‘ಪಾಆ ಪಾಆ‘ (Paw Paw). 2003 ರಲ್ಲಿ ಬಂದಿದ್ದ ಸಿನಿಮಾ ಅದು.
ಮೆಮೆ ಪ್ರಿಯರಿಗೆ ನಿಮಗೆ ‘ಒಶೀತಾ ಇಹೇಮಿ‘ ಗೊತ್ತಾ? ಎಂದು ಕೇಳಿ ನೋಡಿ. ಅವರು ಖಂಡಿತ ಇಲ್ಲ ಅಂತಲೇ ಉತ್ತರಿಸುತ್ತಾರೆ. ಅದೇ ಆ ಹೆಸರಿನ ವ್ಯಕ್ತಿ ಫೋಟೋ ತೋರಿಸಿದರೆ ಸಾಕು. ಖಂಡಿತ ಆಶ್ಚರ್ಯಚಕಿತರಾಗುತ್ತಾರೆ. ಆತನ ಹೆಸರು ಅದಾ!? ಎಂದು ಅಚ್ಚರಿಯಿಂದ ಮರುಕ್ಷಣದಲ್ಲೇ ಥಟ್ಟನೇ ನಗುತ್ತಾ ಮರುಪ್ರಶ್ನಿಸುತ್ತಾರೆ. ವಿಶ್ವದಾದ್ಯಂತ ಮೆಮೆ ಮೇಕರ್ಸ್ ಗೆ ಮತ್ತು ಮೆಮೇಸ್ ಪ್ರಿಯರಿಗೆ ಅಷ್ಟು ಹತ್ತಿರವಾದ ಹಿರಿಮೆ ‘ಒಶೀತಾ ಇಹೇಮಿ’ಯದ್ದು.
ಮತ್ತೊಂದು ಮಜವೆಂದರೆ ಈತ ಇದುವರೆಗೆ 160ಕ್ಕಿಂತ ಹೆಚ್ಚು ನೈಜಿರೀಯಾ, ಆಫ್ರಿಕಾ ಸಿನೇಮಾಗಳಲ್ಲಿ ನಟಿಸಿದ್ದಾನೆ. ಈತ ಅಭಿನಯಿಸಿದ ದೃಶ್ಯಗಳು ಒಂದಲ್ಲಾ ಒಂದು ಬಗೆಯಲ್ಲಿ ಜಗತ್ತಿನ ಮೆಮೆ ಮೇಕರ್ಸ್ ಗೆ ದೊಡ್ಡ ಸರಕು. ಟ್ವೀಟ್ಟರ್ ಮತ್ತು ಫೇಸ್ಬುಕ್ ನಲ್ಲಿ ಅಶ್ಲೀಲವಲ್ಲದ, ನಗು ಉಕ್ಕಿಸುವಂತಹ 10 ಅಂತರಾಷ್ಟ್ರೀಯ ಮೆಮೇಸ್ ಗಳನ್ನು ನೀವು ಗಂಭೀರವಾಗಿ ಗಮನಿಸಿ ನೋಡಿ. ಅದರಲ್ಲಿ ಅರ್ಧಕ್ಕಿಂತ ಹೆಚ್ಚಿನದರಲ್ಲಿ ‘ಪಾಆ ಪಾಆ’ ಇರ್ತಾನೆ. ಜೊತೆಗೆ ನೈಜೀರಿಯಾದ ಅತೀ ಶ್ರೀಮಂತ ನಟರಲ್ಲಿ ಈತನ ಹೆಸರೂ ಇದೆ ಎಂದರೆ ನಂಬಲೇಬೇಕು.
21 ವಯಸ್ಸಿನವನಿದ್ದಾಗ ಈತ ನಿರ್ವಹಿಸಿದ್ದು ಸಣ್ಣ ಮಕ್ಕಳ ಪಾತ್ರಗಳನ್ನು. ಕುಳ್ಳ. ಮುಖದ ಮೇಲೆ ವಯಸ್ಸಿನ ಗೆರೆ ಕಾಣದ್ದೇ ಈತನಿಗೆ ದೊಡ್ಡ ವರವಾಯಿತು. ‘Aki na Ukwa’ ಸಿನೇಮಾ ಅನಂತರವೂ ಈತ ಅದೆಷ್ಟೋ ಸಿನಿಮಾಗಳಲ್ಲಿ ಬಾಲಕನ ಪಾತ್ರಗಳಲ್ಲೇ ನಟಿಸಿದ್ದು ಉಂಟು. ಆನಂತರ ತಿರುಗಿ ನೋಡಲಿಲ್ಲ.
ಒಶೀತಾ ಈಗ ಬರೀ ನೈಜೀರಿಯಾ ಅಲ್ಲ, ಆಫ್ರಿಕಾದ ಜೋಹಾನ್ಸಬರ್ಗ್, ಕೇಪ್ ಟೌನ್ ನಂತಹ ನಗರಗಳಲ್ಲದೆ, ನೈಜೀರಿಯಾ, ಉಗಾಂಡ, ಕೀನ್ಯಾ, ಬರ್ಮುಡಾ ದೇಶಗಳ ಯಾವುದೇ ಮಹಾನಗರಗಳಿಗೆ ಹೋದರೂ ಸಾಕು, ಈತನನ್ನು ಸಾವಿರಾರು ಜನ ಮುತ್ತಿಕೊಳ್ಳುತ್ತಾರೆ. ಅಭಿಮಾನ ತೋರುತ್ತಾರೆ. ತನ್ನದೇ ಪಯಣದ ಕುರಿತು ಈತ ಬರೆದ ‘ಇನ್ ಸ್ಪೈರ್ಡ್ 101’ ಎಂಬ ಕೃತಿ ಸಹ ಬಲು ಪ್ರಸಿದ್ಧ.
ಕೇವಲ ವಯಸ್ಸು ಮುಖದ ಮೇಲೆ ಕಾಣಿಸಲ್ಲ ಎಂಬ ಕಾರಣಕ್ಕೆ ಅವಕಾಶ ಈತನಿಗೆ ಸಿಕ್ಕಿತ್ತು. ಸಿಕ್ಕ ಅವಕಾಶವನ್ನು ಈತ ಬಳಸಿಕೊಂಡ ರೀತಿ ಅರಿವಾಗಬೇಕೆಂದರೆ ಒಂದು ಸಲ ಈತನಿರುವ ಮೆಮೆಗಳ ಮೇಲೆ ಕಣ್ಣು ಹಾಯಿಸಿ. ಯೂಟೂಬಿನಲ್ಲಿ ‘Aki na Ukwa’ ಎಂದು ಟೈಪ್ ಮಾಡಿದರೂ ಸಾಕು ಈತನ ಹಲವಾರು ವಿಡಿಯೋ ತೆರೆದುಕೊಳ್ಳುತ್ತವೆ. ನೈಜೀರಿಯಾ ಬಡರಾಷ್ಟ್ರವಿರಬಹುದು. ಆದರೆ, ಅಂತಹ ರಾಷ್ಟ್ರದಲ್ಲಿ ಈತನಿಗಿರುವ ಫ್ಯಾನ್ ಫಾಲೋವಿಂಗ್ ನಿಜಕ್ಕೂ ದಿಗಿಲುಗೊಳಿಸುವಂಥದ್ದು.
ಮೆಮೇಸ್ ಮೇಕಿಂಗ್. ಸೋಶಿಯಲ್ ಮೀಡಿಯಾಗಳು ಬೆಳೆದಂತೆ ಅದೂ ಒಂದು ಬಗೆಯ ಪ್ರತಿಭೆಯೆಂದೇ ಪರಿಗಣನೆಗೊಳಪಟ್ಟದ್ದು ಹಳೇ ಸಂಗತಿ. ನಮ್ಮಲ್ಲಿ ಅದು ಬೇರೆಯದೇ ಮಾತು. ಆದರೆ ಅಂತಹ ಮೆಮೆಗಳಿಂದಲೇ ಈ ‘ಪಾಆ ಪಾಆ’ ವಿಶ್ವ ಪ್ರಸಿದ್ಧನಾಗಿರುವುದು ಒಂದು ಬಗೆಯ ಮಾತಾದರೆ, ಈತನ ಸಂದರ್ಭೋಚಿತ ನಟನೆಯನ್ನೇ ಬಳಸಿಕೊಂಡು ಎಷ್ಟೋ ಮೆಮೆ ಮೇಕರ್ಸ್ ಪೇಜ್ ವಿಶ್ವದಾದ್ಯಂತ ಹೆಸರುವಾಸಿಯಾದವು ಎಂದರೆ ಅತಿಶಯೋಕ್ತಿ ಎನಿಸಲಾರದು.
‘ಪಾಆ ಪಾಆ’ ನಟಿಸಿದ ಯಾವುದೋ ಸೀನ್ ಯಾವುದೋ ಮೆಮೆಗೆ ಹೊಂದಿಕೆಯಾಗೇ ಆಗುತ್ತದೆ ಎಂಬಷ್ಟು ನಿಖರತೆ ಇರುವಂತಹ ದೃಶ್ಯಗಳಲ್ಲಿ ಈತ ಅಭಿನಯಿಸಿದ್ದಾನೆ. ಅದೂ ಆತನ ಅದೃಷ್ಟವೂ ಇರಬಹುದು. ಹಾಗಂತ ಆತನ ನಟನಾ ಕೌಶಲ್ಯ ಅಲ್ಲಗಳೆಯಲಾಗದಂಥದ್ದು. ತನ್ನ ಎತ್ತರವನ್ನು ಎಂದೂ ಹಿನ್ನಡೆ ಅಂದುಕೊಳ್ಳದ ಇಹೇಮಿ ಇಂದು ಕೋಟ್ಯಾಂತರ ಆಫ್ರಿಕಾ ಖಂಡದ ಯುವಕರ ಆಶಾಕಿರಣ.
2003ರಲ್ಲಿ ಈತ ನಟಿಸಿದ ‘Aki na Ukwa’ ಎಂಬ ಸಿನಿಮಾದಿಂದ ಈತನ ದೆಸೆಯೇ ಬದಲಾಯಿತು. ಈ ಸಿನೇಮಾದ ಜನಪ್ರಿಯತೆ ಈತನನ್ನ 2007ರಲ್ಲಿ ಆಫ್ರಿಕಾ ಮತ್ತು ನೈಜೀರಿಯಾದ ಯುವಕರ ಸಾಂಸ್ಕೃತಿಕ ಏಳಿಗೆಗಾಗಿ ‘Inspired movement africa’ ಎಂಬ ಸಂಘಟನೆ ಸ್ಥಾಪಿಸುವಂತೆ ಮಾಡಿತು. 2011 ರಲ್ಲಿ ನೈಜೀರಿಯಾ ಸರ್ಕಾರ ಈತನಿಗೆ ತನ್ನ ಅತ್ಯುನ್ನತ ಗೌರವ ‘ಆರ್ಡರ್ ಆಫ್ ದಿ ಫೆಡರಲ್ ರಿಪಬ್ಲಿಕ್’ ಎಂಬ ಗೌರವವನ್ನು ಸಹ ನೀಡಿತು.
ಕಂಫ್ಯೂಟರ್ ಸೈನ್ಸ್ ಜೊತೆಗೆ ಈತ ರಂಗಭೂಮಿ ಪದವೀಧರನೂ ಹೌದು. ಆದರೆ, ಅದನ್ನು ಆತ ಬಹಿರಂಗವಾಗಿ ಹೇಳಿಕೊಂಡರೂ ಎಷ್ಟೋ ವರದಿಗಳಲ್ಲಿ ಅದು ಕಂಡು ಬರುವುದೇ ಇಲ್ಲ. ನಿಮ್ಮ ಯಾವುದೇ ತೊಂದರೆ; ಟೆನ್ಷನ್ ಇರಲಿ. ನೀವೊಮ್ಮೆ ಕುತೂಹಲಿಗಳಾದರೆ ‘ಪಾಆ ಪಾಆ’ ನಿಮ್ಮನ್ನು ಸಾಕಷ್ಟು ನಗಿಸಬಲ್ಲ, ಕುಣಿಸಬಲ್ಲ. ಯಾವಾಗಲಾದರೂ ಆತನ ಮೆಮೆ ಕಂಡರೆ ಗಂಭೀರವಾಗಿ ಆತನ ಆಂಗಿಕ ಅಭಿನಯ ಹಾಗೂ ಮಾತನಾಡುವ ಶೈಲಿ ಗಮನಿಸಿ. ಖಂಡಿತ ಖುಷಿಯಾಗುತ್ತಿರಿ! ಅಷ್ಟನ್ನಂತೂ ಹೇಳಬಲ್ಲೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
5. ಕತಾರ್ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.
6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಚಿತ್ರ ವಿಮರ್ಶೆ | ಸೂಲಗಿತ್ತಿ ತಾಯವ್ವ
~ಡಾ. ಪುಷ್ಪಲತ ಸಿ ಭದ್ರಾವತಿ
ಚಿತ್ರ – ತಾಯವ್ವ ,ನಿರ್ಮಾಣ – ಅಮರ ಫಿಲಂಸ್, ನಿರ್ದೇಶನ- ಸಾತ್ವಿಕ ಪವನ ಕುಮಾರ್,ತಾರಾಗಣ – ಗೀತಪ್ರಿಯ. ಬೇಬಿ ಯಶಿಕಾ, ಮತ್ತಿತರರು
ನಾವು ಎಷ್ಟೇ ಆಧುನಿಕತೆ, ಸಮಾನತೆ, ಸ್ವಾತಂತ್ರ್ಯ ಎಂದು ಹೆಣ್ಣು ಮಾತನಾಡಿದರೂ, ಈ ಸಮಾಜದ ಸಂಕೋಲೆಯಲ್ಲಿ ಇವತ್ತಿಗೂ ನಾವು ಕಂಡು ಕಾಣದಂತೆ ಬಂಧಿಯಾಗಿದ್ದೇವೆ. ಈ ಪುರುಷ ನಿರ್ಮಿತ ಸಮಾಜದಲ್ಲಿ ಹೆಣ್ಣನ್ನು ತನ್ನ ಸಂಕೂಲೆಯಲ್ಲಿಯೇ ಬಂಧಿಸಿಟ್ಟಿರುವನು. ಅದೊಂದು ಸ್ವೇಚ್ಛಾಚಾರದ, ಸಮಾನತೆಯ, ಹೆಸರಿನ ಮುಖವಾಡ ತೊಟ್ಟಿದೆ ಅಷ್ಟೇ. ಈ ಮುಖವಾಡಗಳ ನಡುವಿನ ಪುರುಷ ನಿಯಂತ್ರಿತ ಬದುಕಿನಲ್ಲಿ ಹೋರಾಟವೆಂಬುದು ಹೆಣ್ಣಿಗೆ ನಿತ್ಯವಾಗಿದೆ.
ಸ್ತ್ರೀ ಅವಳು ಪ್ರಕೃತಿ, ಪ್ರಕೃತಿ ಇಲ್ಲವಾದರೆ ಇನ್ನೂ ನಾವೆಲ್ಲ ತೃಣಮೂಲ. ಇಂತಹ ಸತ್ಯ ಅರಿವಿದ್ದರೂ ನಾವು ಪದೇ ಪದೇ ಈ ಪ್ರಕೃತಿಯನ್ನು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಹಾಗೆಯೇ ಪ್ರಕೃತಿಯ ಇನ್ನೊಂದು ರೂಪವಾದ ‘ಹೆಣ್ಣನ್ನು’ ನಾವು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಇದರ ಪರಿಣಾಮವಾಗಿಯೇ ಹೆಣ್ಣಿನ ಸರಾಸರಿ ಗಂಡಿಗಿಂತ ಗಣನೀಯವಾಗಿ ಕಡಿಮೆಯಾಗುತ್ತಿರುವುದು. ” ಹೆಣ್ಣು ಭ್ರೂಣಹತ್ಯೆ” ಎಂಬುದು ಸಮಾಜದ ಅದು ಹಾಗೂ ವಿಶ್ವಕ್ಕೂ ಮಾರಕ. ಇಂತಹ ಒಂದು ವಿಷಯ ವಸ್ತುವನ್ನು ಕೇಂದ್ರಿಕರಿಸಿಕೊಂಡು ಸಮಾಜಕ್ಕೆ ಜಾಗೃತಿ ಮೂಡಿಸುವ ಸಲುವಾಗಿ, ಎಚ್ಚರಿಕೆಯ ಕರೆಘಂಟೆಯೆಂಬಂತೆ “ತಾಯವ್ವ” ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆಗೊಂಡಿದೆ.
ಕಳೆದ ವರ್ಷಗಳಲ್ಲಿಯೇ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಹಿಂದೆ ಸುಮಾರು 500ಕ್ಕೂ ಹೆಚ್ಚಿನ ಭ್ರೂಣಗಳು ಸಿಕ್ಕವು. ವಿಚಾರ ಪ್ರಚಾರವೂ ಆಯಿತು. ಆದರೆ ಕೇವಲ ಸುದ್ದಿಯಾಗಿ ಕಣ್ಮರೆಯಾಗುತ್ತವೆ. ಇಂದಿನ ಸಮಾಜಕ್ಕೆ ಇಂತಹ ಸೂಕ್ಷ್ಮ ವಿಷಯಗಳನ್ನು ಮುನ್ನೆಲೆಗೆ ತಂದು ಯುವಕರಿಗೆ ಹಾಗೂ ಸಮಾಜಕ್ಕೆ ಜಾಗೃತಿಮೂಡಿಸಬೇಕಾಗಿದೆ. ಇಂತಹ ಕಾರ್ಯದಲ್ಲಿ
” ತಾಯವ್ವ” ಸಿನಿಮಾ ಗೆದ್ದಿದೆ ಎಂದರೆ ಅತಿಶಯೋಕ್ತಿಯೆನಲ್ಲಾ. ಈ ಗೆಲುವು ಚಿತ್ರದ ನಾಯಕಿ ” ಗೀತ ಪ್ರಿಯಾ” ಅವರ ಶ್ರಮ, ಹಾಗೂ ಅವರ ಪೂರ್ಣ ಪ್ರಮಾಣದ ಪಾತ್ರದ ತಲ್ಲೀನತೆಯು ಸಿನಿಮಾದುದ್ದಕ್ಕೂ ಕಾಣುತ್ತದೆ.
ಮೂಲತಃ ” ಗೀತ ಪ್ರಿಯಾ” ಅವರು ಕಳೆದ 35 ವರ್ಷಗಳ ಅಧಿಕವಾಗಿ ತಮ್ಮನ್ನು ತಾವು ಶೈಕ್ಷಣಿಕ ರಂಗದಲ್ಲಿ ತೊಡಗಿಸಿಕೊಂಡು ವಿಧ್ಯಾಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ್ದಾರೆ. ಇವರ ತಾಯಿ ನೆರಳಲ್ಲಿ ಹುಟ್ಟಿದ ಮಗುವೇ ” ಕೃಪಾನಿಧಿ ಗ್ರೂಪ್ ಸಂಸ್ಥೆ”. ಸದಾ ಮಿಡಿವ ತಾಯಿ ಹೃದಯ ಇವರದ್ದಾಗಿದ್ದರಿಂದಲೇ ತಮ್ಮ ಪ್ರಥಮ ಚಿತ್ರದಲ್ಲಿಯೇ ಗಂಭೀರ ವಿಷಯ ವಸ್ತುವಿನ ಆಯ್ಕೆ, ಗಂಭೀರವಾದ ಅಭಿನಯ, ಸಮಾಜಮುಖಿ ಕಾಳಜಿಯಿರುವುದರಿಂದಲೇ ಇದರೆಲ್ಲರ ಫಲಿತಗಳೆಂಬಂತೆೇ “ತಾಯವ್ವ” ರೂಪುಗೊಂಡಿದೆ.
ಸಿನಿಮಾ ಕಲಾಪ್ರಿಯರಿಗೆ ಒಂದೊಳ್ಳೆ ಸುಗ್ಗಿ, ಕುಟುಂಬದ ಸಮೇತ ಸಿನಿಮಾ ವೀಕ್ಷಿಸಬಹುದು. ಗೀತ ಪ್ರಿಯಾ ಅವರು ಈ ಸಿನಿಮಾದಲ್ಲಿ ಅಭಿನಯಿಸಿ, ಹಾಗೂ ಸಂಗೀತಕ್ಕೆ ತಮ್ಮ ಧ್ವನಿಯನ್ನು ನೀಡಿರುವುದು ಇನ್ನೂ ವಿಶೇಷ. ಬೇಬಿ ಯಶೀಕಾ ಮುಂದಿನ ಭವಿಷ್ಯ ಇನ್ನಷ್ಟು ಸಿನಿಮಾರಂಗದಲ್ಲಿ ಉಜ್ವಲವಾಗಿರಲಿ. ನಿರ್ದೇಶಕರ ಪ್ರಯತ್ನ. ಚಿತ್ರಕಥೆಯ ಹಿಡಿತ ಹಾಗೂ ಎಲ್ಲೂ ಸಡಿಲವಿರದೇ ಸಾಗಿರುವುದು ನಮ್ಮ ಕನ್ನಡ ಚಿತ್ರರಂಗಕ್ಕೆ ಪ್ರಸ್ತುತ ಕೊಡುಗೆಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮತ್ತೆ ತಾಯಿಯಾಗಬೇಕು : ನಟಿ ಸಮಂತಾ
ಸುದ್ದಿದಿನಡೆಸ್ಕ್:ಇತ್ತೀಚೆಗೆ ನಟಿ ಸಮಂತಾ ಅವರ ಕಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆ ಹೇಳಿಕೆಗಳ ಮೇಲೆ ನಾನಾ ರೀತಿಯ ಅನುಮಾನಗಳೂ ವ್ಯಕ್ತವಾಗಿವೆ.
ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸದ್ಯ ಸಮಂತಾ ಸತತ ಚಿತ್ರಗಳಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಇತ್ತೀಚಿಗೆ ಸಮಂತಾ ಅವರ ವೆಬ್ ಸಿರೀಸ್ ವಿಚಾರಕ್ಕೆ ಸುದ್ದಿಯಾಗಿದ್ದರು. ನಟಿಯ ಇತ್ತೀಚಿನ ವೆಬ್ ಸಿರೀಸ್ ಸಿಟಾಡೆಲ್ ಸಖತ್ ಸುದ್ದಿಯಾಗಿದೆ. ಸದ್ಯ ಈ ವೆಬ್ ಸೀರೀಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ ಎಂದು ತಿಳಿದುಬಂದಿದೆ. ಈ ವೆಬ್ ಸರಣಿಯ ಪ್ರಚಾರದ ವೇಳೆ ಮಾಡಿದ ಕಾಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದರ ಭಾಗವಾಗಿ ಸಮಂತಾ ರಾಜ್ ಮತ್ತು ಡಿಕೆ ಸಂದರ್ಶನವೊಂದರಲ್ಲಿ ಹೇಳಿದ್ದು ದಿ ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣದ ವೇಳೆ ನಾನು ಹಲವು ಭಾವನೆಗಳಿಗೆ ಒಳಗಾಗಿದ್ದೆ ಎಂದು ಸಮಂತಾ ಹೇಳಿದ್ದಾರೆ. ಅಲ್ಲದೇ ಅವರ ನಿರ್ದೇಶನದಲ್ಲಿ ನಟಿಸುವುದು ಕಷ್ಟ ಎಂದಿದ್ದಾರೆ. ನಂತರ ಅದೇ ಸಂದರ್ಶನದಲ್ಲಿ ನಟಿ ಬೇರೆ ವಿಚಾರವನ್ನೂ ಹೇಳಿದ್ದಾರೆ.
ಹನಿ ಬನ್ನಿ ವೆಬ್ ಸರಣಿಯಲ್ಲಿ ತಾಯಿ ಪಾತ್ರದ ಬಗ್ಗೆ ಮಾತನಾಡುತ್ತಾ, ಅವರು ಸಂವೇದನಾಶೀಲ ಕಾಮೆಂಟ್ಗಳನ್ನು ಮಾಡಿದ್ದಾರೆ. ನನಗೆ ತಾಯಿಯಾಗುವ ಕನಸು ಇದೆ. ನಾನು ತಾಯಿಯಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಇದಕ್ಕಾಗಿ ತಡವಾಗಿದೆ ಎಂದು ಅವರು ಭಾವಿಸುವುದಿಲ್ಲ. ನಾನು ಜೀವನದಲ್ಲಿ ತುಂಬಾ ಖುಷಿಯಾಗಿದ್ದೇನೆ ಎಂದು ಸಮಂತಾ ಹೇಳಿದ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಸಮಂತಾ ಈ ಕಾಮೆಂಟ್ ಮಾಡಿದ ನಂತರ ಮತ್ತೊಮ್ಮೆ ಅವರ ಎರಡನೇ ಮದುವೆಯ ಸುದ್ದಿಗೆ ವೇಗ ಸಿಕ್ಕಿದೆ. ಈ ಹಿಂದೆ ರಾಜ್ ಹಾಗೂ ಡಿಕೆಶಿಯಲ್ಲಿ ರಾಜ್ ನನ್ನು ಪ್ರೀತಿಸುತ್ತಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಇದೀಗ ಸಮಂತಾ ಎರಡನೇ ಮದುವೆಯ ಸುದ್ದಿ ಮುನ್ನೆಲೆಗೆ ಬಂದಿದ್ದು, ಮತ್ತೆ ತಾಯಿಯಾಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ರಾಜ್ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗೆ ವೇಗ ಸಿಕ್ಕಿದೆ. ಈ ಸುದ್ದಿಯಲ್ಲಿನ ಸತ್ಯಗಳ ಹೊರತಾಗಿ, ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಸುದ್ದಿಗೆ ಸಮಂತಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ
-
ದಿನದ ಸುದ್ದಿ6 days agoದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ
-
ದಿನದ ಸುದ್ದಿ5 days agoಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ಪ್ರಶ್ನಿಸಿಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ
-
ಅಂಕಣ2 days agoಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
-
ದಿನದ ಸುದ್ದಿ3 days agoಚಿಕ್ಕಮಗಳೂರು | ನೂತನ ಭದ್ರಾ ಸೇತುವೆ ಲೋಕಾರ್ಪಣೆಗೊಳಿಸಿ
-
ದಿನದ ಸುದ್ದಿ3 days agoನಾಳೆ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ
-
ದಿನದ ಸುದ್ದಿ3 days agoಅಂಧ ಮಕ್ಕಳ ವಸತಿ ಶಾಲೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoಸಮಾನತೆಯ ಸಮಾಜ ನಿರ್ಮಾಣಕ್ಕೆ ಸಂವಿಧಾನವೇ ಭದ್ರ ಬುನಾದಿ: ಗಂಗಾಧರಸ್ವಾಮಿ ಜಿ.ಎಂ

