ಲೈಫ್ ಸ್ಟೈಲ್
ಪವಿತ್ರ ರಂಜಾನ್ ತಿಂಗಳಲ್ಲಿ..!
ಹಿಂದು ಮುಸ್ಲಿಂ ಇಬ್ಬರೂ ಭಾಯಿ-ಭಾಯಿ ಎನ್ನುವ ಸಂಪ್ರದಾಯ ನಮ್ಮ ಭಾರತ ದೇಶದಲ್ಲಿ ಇದೆ. ಭಾರತದಲ್ಲಿ ಹಿಂದು ಮುಸ್ಲಿಂ ಎನ್ನುವ ಭೇಧವಿಲ್ಲ. ಹಿಂದುಗಳು ಸಹ ಈ ಹಬ್ಬವನ್ನು ಆಚರಿಸುತ್ತಾರೆ. ಹಿಂದುಗಳಿಗೆ ಹಿಂದು ಪಂಚಾಂಗದ ಪ್ರಕಾರ ಬರುವ ವರ್ಷದ ನಾಲ್ಕನೇ ತಿಂಗಳಾದ ಶ್ರಾವಣ ಮಾಸದ ಅತ್ಯಂತ ಪ್ರಮುಖವಾಗಿದೆ.
ಈ ಮಾಸದಲ್ಲಿ ಎಲ್ಲರೂ ದೇವರಿಗೆ ಉಪವಾಸ, ದೇವಸ್ಥಾನಗಳಲ್ಲಿ ವಿಶೇಷವಾದ ಪೂಜೆ ಹೋಮ ಹವನಗಳನ್ನು ಮಾಡುವುದು, ವ್ರತಗಳ ಆಚರಣೆ ಮಾಡುತ್ತಾರೆ. ಹೀಗೆ ಶ್ರಾವಣ ಮಾಸ ಮಹತ್ವ ಪಡೆದುಕೊಂಡರೆ, ಇನ್ನು ಮುಸ್ಲಿಂ ಧರ್ಮದಲ್ಲಿ ರಂಜಾನ್ ತಿಂಗಳಗೆ ವಿಶೇಷವಾದ ಮಹತ್ವವನ್ನು ನೀಡುತ್ತಾರೆ. ಈ ತಿಂಗಳಲ್ಲಿ ಮುಸ್ಲಿಂ ಬಾಂಧವರ ಮನೆ ಮನದಲ್ಲಿ ಕುರಾನ್ ಪಠಣ ಮಾಡುತ್ತಾರೆ.
ರಂಜಾನ್ ಮಾಸ ಆರಂಭವಾಗಿ ಈಗಾಗಲೇ 25 ದಿನ ಕಳೆದಿದೆ. ಉಪವಾಸ, ಪ್ರಾರ್ಥನೆ, ದುಡಿಮೆಯಲ್ಲಿ ಅಲ್ಲಾಹುನನ್ನು ಕಾಣುತ್ತಿರುವ ಮುಸ್ಲಿಮರು ಕೆಲವೇ ದಿನಗಳಲ್ಲಿ ಮತ್ತೆ ಮೂಡುವ ಚಂದ್ರನಿಗಾಗಿ ಕಾಯುತ್ತಿದ್ದಾರೆ.
ರಂಜಾನ್ ಹಬ್ಬದ ಮಹತ್ವ
ಮಸೀದಿಗಳ ಮಿನಾರುಗಳಿಂದ ಹೊರಡುವ ಪ್ರಾರ್ಥನೆಯ ಕರೆಗೆ ಈಗ ದಿವ್ಯಶಕ್ತಿ ಇದೆ. ಕರೆ ಕೇಳಿದ ಕೂಡಲೇ ವ್ರತನಿಷ್ಠ ಮುಸ್ಲಿಮರು ಕೆಲಸ ನಿಲ್ಲಿಸಿ, ಮಸೀದಿಗಳತ್ತ ಹೆಜ್ಜೆ ಹಾಕುತ್ತಾರೆ. ಇವರೊಂದಿಗೆ ಪುಟ್ಟ ಮಕ್ಕಳೂ ಅವರೊಡನೆ ಸಜ್ಜಾಗುತ್ತಾರೆ.
ದೊಡ್ಡವರಿಗೆ ಪ್ರಾರ್ಥನೆಯು ನಿಷ್ಠೆಯ ವಿಷಯ. ಪುರುಷರು ಮಸೀದಿಗಳ ಕಡೆಗೆ ಹೆಜ್ಜೆ ಹಾಕುವ ವೇಳೆಯಲ್ಲೇ ಮಹಿಳೆಯರು, ಬಾಲಕಿಯರು ಮನೆಯನ್ನೇ ಮಸೀದಿ ಎಂದು ಭಾವಿಸಿ ಪ್ರಾರ್ಥನೆಗೆ ಸಜ್ಜಾಗುತ್ತಾರೆ. ಹೀಗೆ ಮುಸ್ಲಿಮರ ಮನೆ ಮತ್ತು ಮಸೀದಿಗಳು ಪ್ರಾರ್ಥನೆಯ ಮೌನದಲ್ಲಿ ಅಲ್ಲಾನನ್ನು ನೆನೆಯುತ್ತಾರೆ.
ರಂಜಾನ್ ಮಾಸವೆಂದರೆ ಬಹುಪಾಲು ಮುಸ್ಲಿಂ ಮಹಿಳೆಯರಿಗೆ ಉಪವಾಸ, ಪ್ರಾರ್ಥನೆ ಅಷ್ಟೇ ಅಲ್ಲ. ನಿತ್ಯ ಕುರಾನ್ ಪಠಣ, ವಿಶ್ರಾಂತಿ ಇಲ್ಲದ ದುಡಿಮೆ. ಅವರ ದಿನಚರಿ ಆರಂಭವಾಗುವುದು ಬೆಳಗಿನ ಜಾವ. ಪತಿ, ಮನೆಯ ಹಿರಿಯರು, ಮಕ್ಕಳಿಗಾಗಿ ಇಡೀ ದಿನ ಮೀಸಲು.
ಉಪವಾಸದ ಜತೆಗೆ ಸತತ ಕೆಲಸ. ಆದರೂ ಭಕ್ತಿ ಕುಂದಿಲ್ಲ. ಕುರಾನ್ ಕೈ ಬಿಡುವುದಿಲ್ಲ, ನಮಾಜು ತಪ್ಪುವುದಿಲ್ಲ ಎಂದು ಕುರಾನ ಸಂದೇಶ ಸಾರುತ್ತದೆ. ರಂಜಾನ್ ಮಾಸದಲ್ಲಿ ದಿನಕ್ಕೆ 5 ಬಾರಿ ಪ್ರಾರ್ಥನೆ (ನಮಾಜ್) ಮಾಡುವುದು ಕಡ್ಡಾಯ. ಮಕ್ಕಳು- ಗಂಡಸರು ಐದು ಬಾರಿ ಪ್ರಾರ್ಥಿಸಿ ಸುಮ್ಮನಾದರೆ, ಮಹಿಳೆಯರು ಪ್ರಾರ್ಥನೆ ಜತೆ ಕುರಾನ್ ಓದುತ್ತಾರೆ. ಕೆಲವರು ಇಡೀ ಮಾಸದಲ್ಲಿ ಒಂದು ಬಾರಿ ಕುರಾನ್ ಓದಿದರೆ, ಮತ್ತೆ ಕೆಲವರು ಮೂರ್ನಾಲ್ಕು ಬಾರಿ ಕುರಾನ್ ಓದುತ್ತಾರೆ. ಮನೆಯಲ್ಲಿ ಕುರಾನ್ ಸಂದೇಶ ಪ್ರತಿಧ್ವನಿಸುತ್ತದೆ.
ರಂಜಾನ್ದ ತತ್ವಗಳು
ಕಲ್ಮಾ (ಮನಸ್ಸಿನಲ್ಲಿ ದೇವರ ಸ್ಮರಣೆ), ನಮಾಜ್ (ಪ್ರಾರ್ಥನೆ), ರೋಜಾ (ಉಪವಾಸ), ಜಕಾತ್ (ದಾನ) ಹಾಗೂ ಹಜ್ (ಮೆಕ್ಕಾ ಯಾತ್ರೆ) ಇವು ಇಸ್ಲಾಂ ಧರ್ಮದ ಪಂಚ ತತ್ವಗಳು. ಪ್ರತಿಯೊಬ್ಬರು ನಿತ್ಯ ಕಲ್ಮಾ ಆಚರಿಸಬೇಕು. ನಿತ್ಯವೂ ಐದು ಬಾರಿ ಮಸೀದಿಗೆ ತೆರಳಿ ಪಾರ್ಥನೆ ಸಲ್ಲಿಸಬೇಕು. ರಂಜಾನ್ ಮಾಸದಲ್ಲಿ ಉಪವಾಸ ಆಚರಿಸಬೇಕು, ತಮ್ಮ ಆದಾಯದಲ್ಲಿ ಶೇಕಡಾ 2.5ರಷ್ಟು?ಭಾಗವನ್ನು ಬಡವರಿಗೆ ದಾನ ಮಾಡಬೇಕು, ಪವಿತ್ರ ಮೆಕ್ಕಾಗೆ ಯಾತ್ರೆ ಹೋಗಬೇಕು ಎಂಬುದೇ ಈ ತತ್ವಗಳ ಸಾರಾಂಶ.
ವಿಜಯಪುರ ಜಿಲ್ಲೆ ಅಂದರೆ ತಟ್ಟನೆ ನೆನಪಾಗುವುದೆ ಇಲ್ಲಿನ ಐತಿಹಾಸಿಕ ಗುಮ್ಮಟ, ಇಬ್ರಾಹಿಂ ರೋಜಾ, ಹೀಗೆ ಹಲವು ಕಟ್ಟಡಗಳು. ಇವುಗಳ ಜೊತೆಗೆ ಇಲ್ಲಿನ ಸಂಸ್ಕøತಿಯು ಸಹ ಒಂದಾಗಿದೆ. ಜಿಲ್ಲೆಯಲ್ಲಿ ರಂಜಾನ್ ಹಬ್ಬ ಕಳೆಕಟ್ಟಿದೆ. ಇಲ್ಲಿನ ಗುಂಬಜಗಳು, ಮಿನಾರುಗಳು ಆಕರ್ಷಕವಾಗಿ ಮಸೀದಿಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ನಗರದ ಮಾರುಕಟ್ಟೆಗಳಲ್ಲಿ ರಂಗು ರಂಗಿನ ಹೊಸ ಬಟ್ಟೆ, ಸರ, ಒಲೆಗಳು, ವಿವಿದ ಬಗೆಯ ಚಿತ್ತಾರದಲ್ಲಿ ಮೆಹಂದಿ ಡಿಸೈನ್ಗಳು, ವಿಭಿನ್ನ ವಿನ್ಯಾಸದ ಚಪ್ಪಲಿಗಳು ಲಗ್ಗೆ ಇಟ್ಟಿವೆ. ಇವುಗಳ ಜೊತೆಗೆ ರಂಜಾನ್ ಹಬ್ಬದಲ್ಲಿ ಮಾಡುವ ವಿಶೇಷವಾಗಿ ಮಾಡುವ ಸುರಕುಂಬದ ಬೇಕಾದ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಪ್ರತಿವರ್ಷಕ್ಕಿಂತ ಈ ವರ್ಷವು ದುಪ್ಪಟಾಗಿದೆ.
ಹಬ್ಬಕ್ಕೆ ವಿಶೇಷವಾಗಿ ಸುರಕುಂಬ ಎನ್ನುವ ಸಿಹಿ ಮಾಡುತ್ತಾರೆ, ಇದರ ಜೊತೆಗೆ ಮಾಸದ ಬಾಡೂಟವನ್ನು ಮಾಡುತ್ತಾರೆ. ಸುರಕುಂಬ ಮಾಡಿ ಎಲ್ಲರಿಗೂ ಹಂಚಿ ಆನಂದ ಪಡುತ್ತಾರೆ. ಆದರೆ ಈ ಸುರಕುಂಬ ಹಾಗೂ ಬಾಡೂಟ ತಯಾರಿಕೆಗೆ ಬೇಕಾದ ಡ್ರೈ ಪ್ರೂಟ್ಸ್, ಮಸಾಲೆ ಪದಾರ್ಥಗಳ ಬೆಲೆಗಳು ಗಗನಕ್ಕೆ ಏರೀವೆ. ಪ್ರತಿ ವರ್ಷಕ್ಕಿಂತಲೂ ಈ ವರ್ಷವೂ ಎಲ್ಲಾ ಪದಾರ್ಥಗಳು 200 ರಿಂದ 300 ರೂ.ಗಳ ವರೆಗೆ ಏರೀಕೆಯಾಗಿವೆ. ಈ ಖಾದ್ಯಗಳ ತಯಾರಿಕೆಗೆ ಬೇಕಾದ ಕಾಜು, ಬದಾಮಿ, ಚಾರುಳ್ಳಿ, ಅಕ್ರೋಟ್, ಫಿಸ್ತಾ, ಕೇರಬೀಜ, ಒಣದ್ರಾಕ್ಷಿ, ಕಾರೀಕ, ಗಸಗಸೆ, ಜಾಜಿಕಾಯಿ, ಯಾಲಕ್ಕಿ, ಕಲ್ಲಗಡಿ ಬೀಜಹೀಗೆ ಅನೇಕ ವಸ್ತುಗಳು ದರದಲ್ಲಿ ವ್ಯತ್ಯಾಸವಾಗಿವೆ. ಆದರೆ ಚಕ್ಕೆ, ಲವಂಗ, ಮಸಾಲೆ ಎಲೆ, ಇವುಗಳ ದರದಲ್ಲಿ ವ್ಯತ್ಯಾಸವಿಲ್ಲ.
ಸಾಮಗ್ರಿಗಳ ಬೆಲೆ ಕೆ.ಜಿಗಳಲ್ಲಿ
ಕಾಜು-700ರೂ, ಬದಾಮಿ-700, ಚಾರುಳ್ಳಿ-870 ರಿಂದ 900ರೂ, ಅಕ್ರೋಟ್-800ರೂ, ಫಿಸ್ತಾ-1700ರೂ, ಕೇರಬೀಜ-500ರೂ, ಒಣದ್ರಾಕ್ಷಿ-200ರೂ, ಕಾರೀಕ-200ರೂ, ಗಸಗಸೆ-800ರೂ, ಜಾಜಿಕಾಯಿ-700ರೂ, ಯಾಲಕ್ಕಿ-2500 ರಿಂದ 3000ರೂ, ಕಲ್ಲಂಗಡಿ ಬೀಜ-200ರೂ. ಇದೆಲ್ಲವು ಪ್ರಸ್ತುತ ದಿನದ ಪದಾರ್ಥಗಳ ಬೆಲೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 200ರಿಂದ 300ರೂ ವರೆಗೆ ದರ ಹೆಚ್ಚಳವಾಗಿದೆ. ಎಲಕ್ಕಿ ಮಾತ್ರ ಕಳೆದ ವರ್ಷದಲ್ಲಿ 800 ರಿಂದ 1000ರೂ.ಗಳ ವರೆಗೆ ಇದ್ದ ಬೆಲೆ ಒಮ್ಮೆಲೆ 2500ರಿಂದ 3000ರೂ.ಗೆ ಏರಿಕೆಯಾಗಿದೆ. ಈ ವರ್ಷ ಎಲಕ್ಕಿ ಬೆಳೆಗಾರರು ಬಂಪರ್ ಜಾಕ್ಪಾಟ್ ಹೊಡೆಯಲ್ಲಿದ್ದಾರೆ.
ಗಾಂಧಿ ಬಜಾರದಲ್ಲಿ ಹಲವು ವರ್ಷಗಳಿಂದ ಕೇವಲ 10ದಿನ ಅಥವಾ ವಾರದ ಮಟ್ಟಿಗೆ ಅಂಗಡಿಗಳನ್ನು ಹಾಕಿ ವ್ಯಾಪಾರ ಮಾಡುವ ವ್ಯಾಪಾರಿಗಳನ್ನು ಮಾತನಾಡಿಸಿದಾಗ ಅವರ ಪ್ರಕಾರ ಈ ವರ್ಷವು ಪ್ರತಿ ವರ್ಷಗಿಂತಲೂ ಹಬ್ಬಕ್ಕೆ ಬೇಕಾದ ವಸ್ತುಗಳ ಬೆಲೆ ದ್ವೀಗುಣಗೊಂಡಿದೆ. ಆದರೂ ಸಹ ವ್ಯಾಪಾರದಲ್ಲಿ ಯಾವುದೇ ರೀತಿಯಲ್ಲಿ ತೊಂದರೆಗಳು ಇಲ್ಲ. ಗ್ರಾಹಕರು ಉತ್ಸಾಹದಿಂದಲೆ ಖರೀದಿಸುತ್ತಿದ್ದಾರೆ.
ಪ್ರತಿವರ್ಷವು ಅಂಗಡಿಗಳನ್ನು ಹಾಕಲು 15ದಿನಗಳ ಮುಂಚಿತವಾಗಿಯೇ ಅನುಮತಿ ನೀಡುತ್ತಿದ್ದರು, ಆದರೆ ಈ ವರ್ಷ 10ರಿಂದ 8ದಿನಗಳವರೆಗೆ ಮಾತ್ರ ಅನುಮತಿ ನೀಡಿದ್ದಾರೆ. ಸುಮಾರು 2.50 ಲಕ್ಷದವರೆಗೆ ಬಂಡವಾಳ ಹಾಕಿ ಎಲ್ಲಾ ಪದಾರ್ಥಗಳನ್ನು ಬಾಂಬೆ ಹಾಗೂ ವಿಜಯಪುರದಿಂದ ಖರೀದಿಸಿದ್ದಾರೆ. ಇದರಿಂದ ಸುಮಾರು 50 ರಿಂದ 60ಸಾವಿರ ರೂ.ಗಳ ಲಾಭ ಪಡೆಯುವ ನೀರಿಯಲ್ಲಿ ವ್ಯಾಪಾರಿಗಳು ಇದ್ದಾರೆ.
ಅಭಿಪ್ರಾಯ
- ನಾನು ಸಿಂದಗಿ ತಾಲ್ಲೂಕಿನ ಜಾಳವಾದ ಗ್ರಾಮದವರು. ನಾನು ಸುಮಾರು 30ವರ್ಷಗಳಿಂದ ನಗರದ ಗಾಂಧಿ ಬಜಾರದಲ್ಲಿ ರಂಜಾನ್ ಹಬ್ಬದ ಸಂದರ್ಭದಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ನಮಗೆ ಗ್ರಾಹಕರು ಉತ್ತಮ ರೀತಿಯಲ್ಲಿ ಸಹಕರಿಸುತ್ತಿದ್ದಾರೆ. ನನಗೆ ಸುಮಾರು ಜನರು ತುಂಬಾ ಆತ್ಮೀಯರು ಹಾಗೂ ಕಾಯಂ ಗ್ರಾಹಕರು ಆಗಿದ್ದಾರೆ. ಈ ವರ್ಷ 2ಲಕ್ಷ ಬಂಡವಾಳ ಹಾಕಿದ್ದೇನೆ. ಈವರ್ಷ ತಡವಾಗಿ ವ್ಯಾಪಾರ ಪ್ರಾರಂಭವಾಗಿದೆ. ಹಾಗಾಗಿ ಲಾಭದ ನಿರೀಕ್ಷೆವು ಕಡಿಮೆ ಪ್ರಮಾಣದಲ್ಲಿದೆ ಹಾಗಾಗಿ ವ್ಯಾಪಾರ ಯಾವ ರೀತಿಯಲ್ಲಿ ಆಗುವುದು ಅಂತ ಕಾದು ನೋಡಬೇಕಾಗಿದೆ. | ಸುರೇಶ. ಮಲ್ಲಪ್ಪ. ದೊಡ್ಡಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್
ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.
ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.
ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.
ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ದಾವಣಗೆರೆಯ ಪಾಪು ಗುರು ಆಯ್ಕೆ
ಸುದ್ದಿದಿನ,ದಾವಣಗೆರೆ: ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಹಾಗೂ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ, ಕಲಾ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕೊಪ್ಪಳ ವತಿಯಿಂದ ನೀಡಲಾಗುವ **”ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – 2026″**ಕ್ಕೆ ದಾವಣಗೆರೆಯ ಕವಿ ಹಾಗೂ ಪತ್ರಕರ್ತ ಪಾಪು ಗುರು ಅವರ “ಈ ಹೊತ್ತಿಗೆ ಇಷ್ಟು ಸಾಕು” ಕವನ ಹಸ್ತ ಪ್ರತಿ ಆಯ್ಕೆಯಾಗಿದೆ.
ಪ್ರಶಸ್ತಿಗೆ ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 53 ಕವನ ಹಸ್ತಪ್ರತಿಗಳು ಬಂದಿದ್ದು, ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಪಾಪು ಗುರು ಅವರ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ.
ಪ್ರಶಸ್ತಿಯು ₹5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನವೆಂಬರ್ ತಿಂಗಳಲ್ಲಿ ಕೊಪ್ಪಳದಲ್ಲಿ ನಡೆಯಲಿರುವ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ್ ಬಳ್ಳಾರಿ ತಿಳಿಸಿದ್ದಾರೆ.
ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾಪು ಗುರು ಅವರ ‘ಮುಳ್ಳೆಲೆಯ ಮದ್ದು’, ‘ಮಣ್ಣೇ ಮೊದಲು’ ಕವನ ಸಂಕಲನಗಳು ಹಾಗೂ ‘ಸೂಜಿ’ ಕಾದಂಬರಿ ಪ್ರಕಟವಾಗಿವೆ. ಅಲ್ಲದೆ ‘ಕೆಂಪು ಕಾಂಡದ ಹೂ’ ಮತ್ತು ‘ಹಸಿರು ಹಾದಿಯ ಹೆಜ್ಜೆಗಳು’ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅವರ ಸೂಳೆಕೆರೆಯ ಇತಿಹಾಸದ ಹಿನ್ನೆಲೆ ಇರುವ ‘ಶಾಂತದೇವಿ’ ಕಾದಂಬರಿ ಮುದ್ರಣ ಹಂತದಲ್ಲಿದೆ.
ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಪಾಪು ಗುರು ಅವರಿಗೆ ದೊರೆತಿರುವ ಈ ಪ್ರಶಸ್ತಿ ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಇವರಿಗೆ ಜಿಲ್ಲೆಯ ಅಭಿಮಾನಿಗಳು, ಪತ್ರಕರ್ತರು ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಹಾಗೂ ಹೆಚ್ ಬಿ. ಇಂದ್ರಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


