Connect with us

ದಿನದ ಸುದ್ದಿ

ಭೈರಪ್ಪನವರೇ, ನಿಮ್ಮ ‘ಧರ್ಮಶಾಸ್ತ್ರ’ ಅಂದರೆ ಯಾವುದು..?

Published

on

ಕನ್ನಡದ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರು ಸಂವಿಧಾನದ ಬಗ್ಗೆ, ತಮ್ಮ ‘ಧರ್ಮಶಾಸ್ತ್ರ’ದ ಬಗ್ಗೆ ತಮ್ಮ ಸಹಜ ಅಭಿಪ್ರಾಯಗಳನ್ನು ಹೇಳುತ್ತಾ ಹಿಂದೂಗಳಲ್ಲಿನ ಗಂಡುಹೆಣ್ಣಿನ ಸಂಭಂದದ ಬಗ್ಗೆ, ನಮ್ಮ ನ್ಯಾಯಾಲಯ, ನ್ಯಾಯಾಲಯದ ತೀರ್ಪುಗಳ ಬಗ್ಗೆಯೂ ಕೀಟಲೆಯ ದ್ವನಿಯಲ್ಲಿ ಮಾತನಾಡಿದ್ದಾರೆ!

ಪ್ರಗತಿಪರರು ಸಾಮಾಜಿಕ ಜಾಲತಾಣಗಳಲ್ಲಿ
ಭೈರಪ್ಪನವರ ಮಾತುಗಳನ್ನು ಉಗ್ರವಾಗಿ ವಿರೋಧಿಸುತ್ತಾ ಎಸ್.ಎಲ್.ಭೈರಪ್ಪನವರನ್ನು ವೈಯಕ್ತಿಕ ನಿಂದೆಗೆ ಇಳಿದಿದ್ದಾರೆ.!

ಭೈರಪ್ಪನವರು ಇದನ್ನು ಬಿಟ್ಟು ಮತ್ತೇನು ಮಾತಾಡಲು ಸಾದ್ಯ..? ಅವರು ನಂಬಿದ ಸಿದ್ದಾಂತಕ್ಕೆ ಅವರು ತೋರುವ ಕಾಳಜಿ, ಬದ್ದತೆಗಳು ನಿಜಕ್ಕೂ ಶ್ಲಾಘನೀಯ! ಅವರು ಮಾತಾಡಿರುವುದಾದರೂ ಎಲ್ಲಿ? ಅವರ ಜಾತಿಯವರೇ ಆದವರೊಬ್ಬರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ, ಅವರದೇ ಪರಿಸರದಲ್ಲಿ, ಅವರ ಅನುಯಾಯಿಗಳ ನಡುವೆ. ಅದರಲ್ಲೂ ಅವರು ಅವರದೇ ‘ಧರ್ಮಗ್ರಂಥ’ಗಳನ್ನು ಬೇರೆ ಸಮರ್ಥಿಸಿಕೊಂಡಿದ್ದಾರೆ! ಇದೂ ನನಗೆ ಆಶ್ಚರ್ಯ ಎನಿಸಲಿಲ್ಲ!? ಅವರು, ಅವರ ಯಥಾಸ್ಥಿತಿವಾದದ, ಅವರಿಗೆ ಶ್ರೇಯಕರವಾದ ಧರ್ಮಗ್ರಂಥವನ್ನು ಸಮರ್ಥಿಸದೆ ನಿಮ್ಮ ಧರ್ಮಗ್ರಂಥವಾದ ಸಂವಿಧಾನವನ್ನು ಏಕೆ ಸಮರ್ಥಿಸಬೇಕು? ಅವರ ಧರ್ಮಗ್ರಂಥಗಳಿಗೆ ‘ಹಿಂದೂ’. ‘ಭಾರತೀಯ’ ‘ಪ್ರಾಚೀನ’ ‘ಪುರಾತನ’ ‘ಸನಾತನ’ ಎಂದು ಏನೇ ನಾಮಕರಣ ಮಾಡಿ, ಹೆಸರಿಟ್ಟು ಕರೆದರೂ ಅದು ಬ್ರಾಹ್ಮಣ ಶ್ರೇಷ್ಟತೆಯನ್ನು ಪ್ರತಿಪಾದಿಸುವ ಧರ್ಮಗ್ರಂಥವಾಗಿರುತ್ತದೆ! ಬ್ರಾಹ್ಮಣರಾದ ಭೈರಪ್ಪನವರಿಗೆ, ಅವರ ಕುಲಭಾಂಧವರಿಗೆ ಅದರಿಂದ ಲಾಭವಿದೆ! ಪರಂಪರಾನುಗತವಾಗಿ ಅವರು ಅದರ ಹಣ್ಣುಗಳನ್ನು ಸವಿದಿದ್ದಾರೆ!

‘ಭಾರತೀಯತೆ’ ಅಂದರೆ ಅವರ ಅರ್ಥದಲ್ಲಿ ಅದು ‘ವೈದಿಕೇಯತೆ’ಯೇ ಅಲ್ಲವೆ? ಭಾರತೀಯತೆ ಅರ್ಥಾತ್ ಬ್ರಾಹ್ಮಣೀಯತೆಯನ್ನು ಯಥಾಸ್ಥಿತಿಗೊಳಿಸುವುದು, ಸ್ಥಾವರಗೊಳಿಸುವುದೇ ಅವರ ಮೂಲ ಉದ್ದೇಶವೆಂಬುದನ್ನು ನಾವೇಕೆ ಗ್ರಹಿಸುತ್ತಿಲ್ಲ.? ಇದನ್ನು ಕೇವಲ ಎಸ್.ಎಲ್.ಭೈರಪ್ಪನವರು ಹೇಳುತ್ತಿರುವುದಲ್ಲ, ಇವರ ಪೂರ್ವಿಕರಾದ ಸಂಘಪರಿವಾರದ ಸ್ಥಾಪಕರೆಲ್ಲಾ ಹಿಂದಿನಿಂದಲೂ ಹೇಳುತ್ತಾ ಬಂದಿರುವುದೇ ಇದೇ ಆಗಿದೆ!? ಉದಾಹರಣೆಗೆ ಇಂದು ಎಸ್.ಎಲ್.ಬೈರಪ್ಪನವರು ನಮ್ಮ ಮದುವೆಗಳ, ವಿಚ್ಚೇದನಗಳ, ಗಂಡು ಹೆಣ್ಣು ಸಂಭಂದಗಳ ಪರಿಸ್ಥಿತಿ ಯನ್ನು ಕಂಡು ವ್ಯಂಗ್ಯವಾಡಿದ್ದಾರಲ್ಲ, ಅದನ್ನೇ ಇಂದಿಗೆ ಸರಿಯಾಗಿ ಎಪ್ಪತ್ತು ವರ್ಷಗಳ ಹಿಂದೆ ಭೈರಪ್ಪನವರ ಪೂರ್ವಿಕರಾದ ಗೋಳ್ವಾಲ್ಕರ್ ರವರೂ ಹೇಳಿದ್ದನ್ನು ನಮ್ಮ ಇತಿಹಾಸಕಾರ ರಾಮಚಂದ್ರ ಗುಹ ಕೋಟ್ ಮಾಡಿದ್ದನ್ನೇ ನಾನೂ ಕೋಟ್ ಮಾಡಿದ್ದೇನೆ ಗಮನಿಸಿ….

The RSS sarsanghchalak, M.S. Golwalkar, complained in a speech of August 1949 that the reforms piloted by Ambedkar “has nothing Bharatiya about it. The questions like those of marriage and divorce cannot be settled on the American or British model in this country. Marriage, according to Hindu culture and law is a sanskar which cannot be changed even after death and not a ‘contract’ which can be broken any time”. Golwalkar continued: “Of course some lower castes in Hindu Society in some parts of the country recognise and practise divorce by custom. But their practice cannot be treated as an ideal to be followed by all”. (Organiser, September 6, 1949).

ಯಥಾಸ್ಥಿತಿವಾದ ಅಂದರೆ ಇದೇ.. ಅದಕ್ಕೆ ಕಾಲಮಾನಗಳ ಅಂತರವಿರಲ್ಲ, ಬಾಷೆ ಮತ್ತು ಚಿಂತನೆಯಲ್ಲಿ ವ್ಯತ್ಯಾಸ ಇರಲ್ಲ, ವ್ಯಕ್ತಿ ವ್ಯಕ್ತಿಗಳ ನಡುವೆ ಗೊಂದಲವಿರಲ್ಲ..! ಇದನ್ನೇ ನಮ್ಮವರು ಪ್ಯಾಸಿಸಂ ಎಂದು ಕರೆದರು. ಅಂದು ಅವರು ಪ್ರತಿಪಾದಿಸಿದ್ದು, ಅದು ಮುಂದುವರೆದಿದ್ದೂ, ಇಂದು ಪ್ರತಿಪಾದಿಸುತ್ತಿರುವುದು ಒಂದೇ.‌.!? ಭಾರತೀಯತೆಯ ಹೆಸರಲ್ಲಿ ಬ್ರಾಹ್ಮಣೀಯತೆಯನ್ನು, ಇದರಿಂದ ಭಾರತೀಯರಾದ ಇತರ ಬ್ರಾಹಮಣೇತರರಿಗೆ ಏನೇ ನಷ್ಟವಾದರೂ ಚಿಂತೆಯಿಲ್ಲ ಅವರಿಗೆ ಮಾತ್ರ ಲಾಭವಾಗಬೇಕಷ್ಟೆ ಅವರ ಸವರ್ಣಕುಲದ ಶ್ರೇಷ್ಠತೆ ಉಳಿಯಬೇಕಷ್ಟೆ!

ಇಲ್ಲಿ ಭಾರತೀಯರು, ಅದರಲ್ಲೂ ಬ್ರಾಹ್ಮಣ ಹೆಣ್ಣುಮಕ್ಕಳನ್ನೂ ಸೇರಿಸಿದಂತೆ ಇಡೀ ಸ್ತ್ರೀಕುಲಕ್ಕೆ ಇವರ ‘ಸಿದ್ದಾಂತ’ ಅದೆಷ್ಟು ಅಪಾಯಕಾರಿಯಾಗಿದೆ ಗಮನಿಸಿ? ಭೈರಪ್ಪನವರು ಹೆಣ್ಣಿನ ಮುಟ್ಟಿನ ಬಗ್ಗೆ, ಶಬರಿಮಲೆ ದೇವಾಲಯದ ಪ್ರವೇಶದ ಬಗ್ಗೆ ಅಸಹನೆ ಬೆರೆತ ವ್ಯಂಗ್ಯದಲ್ಲಿ ಮಾತನಾಡಿದ್ದಾರೆ. ಇದರಲ್ಲಿ ಅವರ ‘ಧ್ವನಿ’ಯನ್ನು ಗಮನಿಸಿ..? ಅದೇ ಏಳು ದಶಕಗಳ ಹಿಂದೆ ಅಪ್ಪನ ಆಸ್ತಿಯಲ್ಲಿ(ಪಿತ್ರಾರ್ಜಿತ ಆಸ್ತಿ) ಹೆಣ್ಣು ಮಕ್ಕಳಿಗೆ ಸಮಪಾಲು ನೀಡಬೇಕೆಂದು ಬಾಬಾಸಾಹೇಬರು ‘ಹಿಂದು ಕೋಡ್ ಬಿಲ್’ ತಂದಾಗ, ಅಂದೂ ಬೈರಪ್ಪನವರ ತಲೆಮಾರಿನವರು ಮಾತಾಡಿದ್ದು ಇಲ್ಲಿದೆ ಗಮನಿಸಿ…

An article in the Organiser, dated November 2, 1949, characterised the Hindu Code Bill “as a direct invasion on the faith of the Hindus”, remarking that “its provisions empowering women to divorce is revolting to the Hindu ideology”. An editorial published a month later (“The Hindu Code Bill”, the Organiser, December 7, 1949) led with this paragraph: “We oppose the Hindu Code Bill. We oppose it because it is a derogatory measure based on alien and immoral principles. It is not a Hindu Code Bill. It is anything but Hindu. We condemn it because it is a cruel and ignorant libel on Hindu laws, Hindu culture and Hindu dharma”.

ಮಾತೆತ್ತಿದರೆ ಭಾರತಮಾತೆಯನ್ನು ಉದ್ಗರಿಸುವ ಇವರ ಉದರದಲ್ಲಿರುವ ಸ್ತ್ರೀದ್ವೇಶವನ್ನು ಗಮನಿಸಿ..? ಅಂದಿಗೂ ಇಂದಿಗೂ ಬೈರಪ್ಪನವರ ಮತ್ತವರ ಪೂರ್ವಿಕರ ಚಿಂತನೆ ಮತ್ತು ಉದ್ದೇಶದಲ್ಲಿ ಏನಾದರೂ ಎಳ್ಳಷ್ಟು ವ್ಯತ್ಯಾಸವಿದೆಯೇ..? ಇಂತದ್ದೇ ಸ್ಪಷ್ಟತೆ ಅಂದು ಹಿಟ್ಲರ್ ನಲ್ಲೂ ಇತ್ತು ಇಂದು ಇವರಲ್ಲೂ ಇದೆ!

ನಾವು ಭೈರಪ್ಪನಂತವರನ್ನು ಬೈಯುವುದನ್ನು ನಿಲ್ಲಿಸಬೇಕು ಇಂದಾದರೂ ಒಂದಾಗಿ ಪರ್ಯಾಯಗಳನ್ನು ಹುಡುಕಬೇಕು.. ಈ ದೇಶವನ್ನು ಇವರಿಂದ ಉಳಿಸಬೇಕಾದರೆ ಇವರ ಮಾತುಗಳನ್ನು, ಇವರ ನುಡಿಕಟ್ಟನ್ನು ಅದರ ಹಿಂದಿನ ದುರುದ್ದೇಶಗಳನ್ನು ಮುಂದಿನ ತಲೆಮಾರಿಗಾದರೂ ಅರ್ಥಮಾಡಿಸಬೇಕು..

ಸಿ.ಎಸ್.ದ್ವಾರಕಾನಾಥ್

ನಮ್ಮ ಸಂವಿಧಾನದಲ್ಲಿ ಪರಂಪರೆ’ ಇಲ್ಲ ಎಂದು ಹೇಳಿದ ಎಸ್.ಎಲ್.ಭೈರಪ್ಪ ಅವರ ಸುದ್ದಿ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.prajavani.net/stories/stateregional/shreevasta-smruti-632572.html

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಅವಕಾಶ : ಅರ್ಜಿ ಆಹ್ವಾನ

Published

on

ಸುದ್ದಿದಿನ,ಬಳ್ಳಾರಿ:ಕರ್ನಾಟಕ ಮಾಧ್ಯಮ ಅಕಾಡೆಮಿಯು ಮಹಿಳಾ ಆಯವ್ಯಯ ಹಾಗೂ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳಡಿ ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಸ್ನಾತಕೋತ್ತರ ಪದವೀಧರರಿಗೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಅವಕಾಶ ಕಲ್ಪಿಸಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ಬರವಣಿಗೆಯಲ್ಲಿ ಪರಿಣತಿ ಹೊಂದಿರುವ, ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

2022-23 ಹಾಗೂ 2023-24 ನೇ ಶೈಕ್ಷಣಿಕ ವರ್ಷದಲ್ಲಿ ಯಾವುದೇ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪ್ರವೇಶ ಪರೀಕ್ಷೆಯ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ವಿವರ

ಮಹಿಳಾ ಆಯವ್ಯಯದಡಿ 10 ಮಹಿಳೆಯರು, ಪರಿಶಿಷ್ಟ ಜಾತಿ ಉಪಯೋಜನೆಯಡಿ 10 ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ 4 ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಇಂಟರ್ನ್ಶಿಪ್ ಗೆ ಅವಕಾಶ ಕಲ್ಪಿಸಲಾಗುವುದು. ಒಟ್ಟು 24 ಅಭ್ಯರ್ಥಿಗಳಿಗೆ ಇಂಟರ್ನ್ಶಿಪ್ ಅವಕಾಶ ಒದಗಿಸಲಾಗುವುದು.

ಆಯ್ಕೆಯಾದ ಅಭ್ಯರ್ಥಿಗಳಿಗೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಎರಡು ತಂಡಗಳಲ್ಲಿ ಎರಡು ತಿಂಗಳ ಇಂಟರ್ನ್ಶಿಪ್ ಗೆ ಅವಕಾಶ ಕಲ್ಪಿಸಲಾಗುವುದು. ಇಂಟರ್ನ್ಶಿಪ್ ಗೆ ಸಂಸ್ಥೆ ಹಾಗೂ ಸ್ಥಳವನ್ನು ಅಕಾಡೆಮಿಯೇ ನಿಗದಿ ಪಡಿಸುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅಕಾಡೆಮಿ ವತಿಯಿಂದ ಮಾಸಿಕ 20,000/- ರೂ. ಸ್ಟೆöÊಫಂಡ್ ನೀಡಲಾಗುವುದು.

ಅಭ್ಯರ್ಥಿಗಳು ತಮ್ಮ ಸ್ವವಿವರ (Curriculum Vitae) ದೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಪೂರಕ ದಾಖಲೆಗಳೊಂದಿಗೆ ಗೂಗಲ್ ಫಾರ್ಮ್ https://forms.gle/UgNqDcFs1v6akyAD9 ರಲ್ಲಿ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳ ಆಯ್ಕೆಯ ಅಂತಿಮ ತೀರ್ಮಾನ ಅಕಾಡೆಮಿಯ ಸಮಿತಿಯದ್ದೇ ಅಗಿರುತ್ತದೆ.

ಅರ್ಜಿ ಸಲ್ಲಿಸಲು ಜುಲೈ 25 ಕೊನೆಯ ದಿನವಾಗಿದ್ದು, ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕ್ರೀಡಾ ಸಾಮಾಗ್ರಿಗಳ ಸರಬರಾಜಿಗೆ ಯುವ ಸಂಘಗಳಿಂದ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಯುವ ಚೈತನ್ಯ ಕಾರ್ಯಕ್ರಮದಡಿ ಕ್ರೀಡಾ ಕಿಟ್‍ಗಳನ್ನು ಸರಬರಾಜು ಮಾಡಲು ಯುವಕ, ಯುವತಿಯರ ಸಂಘಗಳಿಂದ ಸೇವಾ ಸಿಂಧೂ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 22 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ ದಾವಣಗೆರೆ ದೂ.ಸಂ: 08192-237480 ನ್ನು ಸಂಪರ್ಕಿಸಲು ಸಹಾಯಕ ನಿರ್ದೇಶಕ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಂಪೈರ್ ಟ್ರೇಡಿಂಗ್ ಕಂಪನಿಯಲ್ಲಿ ಹಣವನ್ನು ತೊಡಗಿಸಿ ಮೋಸ : ದೂರು ದಾಖಲು

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ನಗರದ ಡಿಸಿಎಂ ಲೇಔಟಿನ ಎಂಎಸ್‍ಎಂ ಪ್ಲಾಜಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆನ್‍ಲೈನ್ ರಿಂಗ್ ವ್ಯವಹಾರ ನಡೆಸಲು ತೆರೆದಿರುವ ಎಂಪೈರ್ ಟ್ರೇಡಿಂಗ್ ಕಂಪನಿ ತೆರೆದುಕೊಂಡು ಸಾರ್ವಜನಿಕರಿಂದ ಹಣವನ್ನು ಆರೋಪಿತರಾದ ಗಜಾನನ ತಂದೆ ರಾಮಪೂಜಾರಪ್ಪ ಇವರು ತಮ್ಮ ಸ್ನೇಹಿತರೊಂದಿಗೆ ಪಡೆದುಕೊಂಡು ಪ್ರತಿ ತಿಂಗಳು ಶೇಕಡಾ 5 ರಷ್ಟು ಲಾಭಾಂಶವನ್ನು ಕೊಡುವುದಾಗಿ ಹೇಳಿ ಕೆಲವು ತಿಂಗಳು ಕೊಟ್ಟು ನಂತರದ ದಿನಗಳಲ್ಲಿ ಲಾಭಾಂಶವನ್ನು ಮತ್ತು ಅಸಲಿನ ಹಣವನ್ನು ಕೊಡದೇ ಒಟ್ಟು ಸಾರ್ವಜನಿಕರಿಂದ 31.50,000/- ರೂಗಳನ್ನು ಕಟ್ಟಿಸಿಕೊಂಡು 61.62.800/- ರೂ ಲಾಭಾಂಶದ ಹಣವನ್ನು ಜಮಾ ಮಾಡಿದ್ದು ರೂ.37,33,500ಗಳನ್ನು 6 ತಿಂಗಳ ಲಾಭಾಂಶದ ಹಣವನ್ನು ಮತ್ತು ಅಸಲಿನ ಹಣವನ್ನು ಕೊಡದೇ ಮೋಸ ಮಾಡಿರುತ್ತಾರೆ ಎಂದು ಹರೀಶ.ಕೆ ತಂದೆ ಉಮೇಶಪ್ಪ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುತ್ತಾರೆ.

ಠೇವಣಿದಾರರು ಎಂಪೈರ್ ಟ್ರೇಡಿಂಗ್ ಕಂಪನಿಯಲ್ಲಿ ಹಣವನ್ನು ತೊಡಗಿಸಿ ಮೋಸ ಹೋಗಿದ್ದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ದಾವಣಗೆರೆ ನಗರದ ಸಿಇಎನ್ ಪೊಲೀಸ್ ಠಾಣೆ, ಮೊದಲನೇ ಮಹಡಿ ವಿದ್ಯಾನಗರ ಪೊಲೀಸ್ ಇನ್ಸ್‍ಪೆಕ್ಟರ್ ರವರ ಬಳಿ ಹೋಗಿ ಮಾಹಿತಿ ನೀಡಬೇಕು. ದೂ.ಸಂ:08192-225119 ನ್ನು ಸಂಪರ್ಕಿಸಲು ಪೊಲೀಸ್ ನಿರೀಕ್ಷಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ2 days ago

ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಅವಕಾಶ : ಅರ್ಜಿ ಆಹ್ವಾನ

ಸುದ್ದಿದಿನ,ಬಳ್ಳಾರಿ:ಕರ್ನಾಟಕ ಮಾಧ್ಯಮ ಅಕಾಡೆಮಿಯು ಮಹಿಳಾ ಆಯವ್ಯಯ ಹಾಗೂ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳಡಿ ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಸ್ನಾತಕೋತ್ತರ ಪದವೀಧರರಿಗೆ...

ದಿನದ ಸುದ್ದಿ5 days ago

ಕ್ರೀಡಾ ಸಾಮಾಗ್ರಿಗಳ ಸರಬರಾಜಿಗೆ ಯುವ ಸಂಘಗಳಿಂದ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಯುವ ಚೈತನ್ಯ ಕಾರ್ಯಕ್ರಮದಡಿ ಕ್ರೀಡಾ ಕಿಟ್‍ಗಳನ್ನು ಸರಬರಾಜು ಮಾಡಲು ಯುವಕ, ಯುವತಿಯರ ಸಂಘಗಳಿಂದ ಸೇವಾ ಸಿಂಧೂ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ ಲೈನ್...

ದಿನದ ಸುದ್ದಿ1 week ago

ಎಂಪೈರ್ ಟ್ರೇಡಿಂಗ್ ಕಂಪನಿಯಲ್ಲಿ ಹಣವನ್ನು ತೊಡಗಿಸಿ ಮೋಸ : ದೂರು ದಾಖಲು

ಸುದ್ದಿದಿನ,ದಾವಣಗೆರೆ:ದಾವಣಗೆರೆ ನಗರದ ಡಿಸಿಎಂ ಲೇಔಟಿನ ಎಂಎಸ್‍ಎಂ ಪ್ಲಾಜಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆನ್‍ಲೈನ್ ರಿಂಗ್ ವ್ಯವಹಾರ ನಡೆಸಲು ತೆರೆದಿರುವ ಎಂಪೈರ್ ಟ್ರೇಡಿಂಗ್ ಕಂಪನಿ ತೆರೆದುಕೊಂಡು ಸಾರ್ವಜನಿಕರಿಂದ ಹಣವನ್ನು ಆರೋಪಿತರಾದ...

ದಿನದ ಸುದ್ದಿ2 weeks ago

ಡ್ರಗ್ಸ್ ಕತ್ತಲೆ ಪ್ರಪಂಚ, ಈಗಿನ ಯುವ ಸಮೂಹ ಅರಿತು ದೂರವಿರಬೇಕು : ಐಜಿ ಡಾ: ರವಿಕಾಂತೇಗೌಡ

ಸುದ್ದಿದಿನ,ದಾವಣಗೆರೆ:ಡಗ್ಸ್ ಕತ್ತಲ ಪ್ರಪಂಚ, ಈ ಜಾಲದ ಬಗ್ಗೆ ಅರಿತು ಯುವ ಸಮೂಹ ದೂರವಿರಬೇಕೆಂದು ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರಾದ ಡಾ.ಬಿ.ಆರ್ ರವಿಕಾಂತೇಗೌಡ ವಿದ್ಯಾರ್ಥಿಗಳಿಗೆ ತಿಳಿಸಿದರು. ಗುರುವಾರ(ಜೂನ್.26) ರಂದು...

ದಿನದ ಸುದ್ದಿ2 weeks ago

ಮಾದಕ ವಸ್ತುಗಳ ಸಾಗಣೆ ತಡೆಗೆ ಸ್ಕ್ಯಾನರ್ ಅಳವಡಿಕೆಗೆ ಚಿಂತನೆ : ನ್ಯಾಯಾಧೀಶೆ ವೇಲಾ ಡಿ.ಕೆ

ಸುದ್ದಿದಿನ,ದಾವಣಗೆರೆ:ಜಾಗತಿಕವಾಗಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ನಮ್ಮದಾಗಿದ್ದು ಯುವ ಸಂಪತ್ತನ್ನು ಕಾಪಾಡಿಕೊಳ್ಳಲು ಮಾದಕ ವಸ್ತುಗಳಿಂದ ದೂರವಿರಲು ಇದರ ಸಾಗಾಟ ಮತ್ತು ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮ...

ದಿನದ ಸುದ್ದಿ2 weeks ago

ಪೋನ್ – ಇನ್ ಕಾರ್ಯಕ್ರಮದಲ್ಲಿ‌ ಎಸ್ ಪಿ ಉಮಾ‌ ಪ್ರಶಾಂತ್ ; ನೇರ ಸಂವಾದಲ್ಲಿ ನೀವೂ ಪಾಲ್ಗೊಳ್ಳಿ

ಸುದ್ದಿದಿನ,ದಾವಣಗೆರೆ:ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಅವರು ನಾಳೆ ಪೋನ್ –ಇನ್ ಕಾರ್ಯಕ್ರಮದ ಮೂಲಕ ನೇರಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ದಾವಣಗೆರೆ ಜಿಲ್ಲೆಯನ್ನು...

ದಿನದ ಸುದ್ದಿ2 weeks ago

ಎಸ್.ಎಸ್.ಜನರಲ್ ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆಗೆ ಡಾ|| ಶಾಮನೂರು ಶಿವಶಂಕರಪ್ಪ ಚಾಲನೆ

ಸುದ್ದಿದಿನ,ದಾವಣಗೆರೆ:ದಾವಣಗೆರೆಯ ಕೆ.ಆರ್. ರಸ್ತೆಯಲ್ಲಿರುವ ಎಸ್.ಎಸ್. ಜನರಲ್ ಆಸ್ಪತ್ರೆ, ದಾವಣಗೆರೆ ದಕ್ಷಿಣದ ಜನರಿಗೆ, ವಿಶೇಷವಾಗಿ ನಗರದ ಕೊಳೆಗೇರಿಗಳಲ್ಲಿ ವಾಸಿಸುವ ಜನರಿಗೆ ಕೈಗೆಟುಕುವ, ಸುಲಭವಾಗಿ ಸಿಗುವ ಆರೋಗ್ಯ ಸೇವೆಯನ್ನು ಒದಗಿಸಲು...

ಕ್ರೀಡೆ2 weeks ago

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು 1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು...

ದಿನದ ಸುದ್ದಿ2 weeks ago

ಶೀಘ್ರದಲ್ಲೇ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ : ಗೃಹ ಸಚಿವ ಜಿ. ಪರಮೇಶ್ವರ್

ಸುದ್ದಿದಿನಡೆಸ್ಕ್:ಪಿಎಸ್‌ಐ ಹಗರಣ ನಂತರ ಐದು ವರ್ಷಗಳಿಂದ ಇಲ್ಲಿವರೆಗೂ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿರಲಿಲ್ಲ. ಈಗ ಶೀಘ್ರದಲ್ಲಿಯೇ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಗೃಹ...

ದಿನದ ಸುದ್ದಿ2 weeks ago

ನಮ್ಮ ಆರೋಗ್ಯ, ನಮ್ಮ ಕೈಲಿ ; ಗ್ರಾಮ ಪಂಚಾಯಿತಿ ಸಿಬ್ಬಂದಿ‌ ಬಂದು ಚರಂಡಿ ಸ್ವಚ್ಚಗೊಳಿಸುತ್ತಾರೆಂದು ಕಾಯಬಾರದು : ಡಿಸಿ ಗಂಗಾಧರಸ್ವಾಮಿ ಜಿ.ಎಂ

ಸುದ್ದಿದಿನ,ದಾವಣಗೆರೆ:ಅತಿಸಾರ ಭೇದಿ ಸಾಮಾನ್ಯ ಖಾಯಿಲೆ ಅಲ್ಲ, ಇದು ತುಂಬಾ ಗಂಭೀರವಾದ ಖಾಯಿಲೆ. ಆದ್ದರಿಂದ ಅತಿಸಾರ ಭೇದಿ ತಡೆಯುವಲ್ಲಿ ಪ್ರತಿಯೊಬ್ಬರಲ್ಲಿ ಅರಿವು ಅಗತ್ಯ. ಅತಿಸಾರ ಭೇದಿಯ ನಿಯಂತ್ರಣ ಮತ್ತು...

Trending