Connect with us

ದಿನದ ಸುದ್ದಿ

ನಿರುದ್ಯೋಗಿ ‘ಎಸ್‌.ಎಂ.ಕೆ’ ಗೆ ಕೆಲ್ಸ ಕೊಡಿ..!

Published

on

17 ಮಂದಿಬುದ್ಧಿವಂತ’ರಿಂದ ರಾಜಿನಾಮೆ ಕೊಡಿಸಿ ಮೈತ್ರಿ ಸರ್ಕಾರ ಕಿತ್ತುಹಾಕುವ ‘ಪುಣ್ಯ’ದ ಕೆಲಸದಲ್ಲಿ ಎಸ್ಸೆಂರವರು ತಮ್ಮ ಪಾತ್ರವನ್ನು ತಾವೇ ಕೊಂಡಾಡಿದ್ದಾರೆ.ಇವರಈ ಅನುಭವಕ್ಕೆ ಈಗ ಮಹಾರಾಷ್ಟ್ರದಲ್ಲಿ ಬಹಳ ಬೇಡಿಕೆ ಇರಬಹುದು.ಆದರೆಇಲ್ಲಿಕರ್ನಾಟಕದ 17 ಮತಕ್ಷೇತ್ರಗಳಲ್ಲಿ ಮತದಾನಮಾಡಲು ಸಜ್ಜಾಗುತ್ತಿರುವ ಪ್ರಜ್ಞಾವಂತ ಮತದಾರರು ಕೃಷ್ಣರವರ ಮಾತುಗಳಿಂದ ಪ್ರಜ್ಞಾಹೀನರಾಗದೆಜವಾಬ್ದಾರಿಯಿಂದ ಮತದಾನ ಮಾಡಬೇಕೆಂದು ಮನವಿ ಮಾಡುತ್ತೇವೆ.

ಕರ್ನಾಟಕದ 17 ಮಂದಿ ‘ಬುದ್ಧಿವಂತ ಶಾಸಕರ ರಾಜಿನಾಮೆ ಕೊಡಿಸುವುದರಲ್ಲಿ ನನ್ನ ಪಾತ್ರವೂ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣಹೇಳಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.ಇದು ನಿಜವೇ ಆಗಿದ್ದರೆ ಅವರನ್ನು ಬಿಜೆಪಿ ಪಕ್ಷದವರು ತುರ್ತಾಗಿ ಮಹಾರಾಷ್ಟ್ರಕ್ಕೆ ಕಳುಹಿಸುವುದುಒಳ್ಳೆಯದು. ಕಾಂಗ್ರೆಸ್‌ನಲ್ಲಿದ್ದು ಪಡೆಯ ಬಹುದಾದ ಎಲ್ಲ ಸ್ಥಾನಮಾನ, ಅಧಿಕಾರ ಅಂತಸ್ತು ಪಡೆದುಅವರು ಅವೆಲ್ಲವನ್ನು ಮತ್ತೆ ಎರಡನೇ ಬಾರಿಗೆ ಪಡೆಯಲು ಸಾಧ್ಯವೇ ಎಂದು ಪರೀಕ್ಷೆ ಮಾಡಲುಕಮಲದ ಪಾರ್ಟಿಗೆ ಬಂದಿರುವ ಹಿರಿಯ ರಾಜಕೀಯ ಮುತ್ಸದ್ಧಿಗೆ ಕಂಪೆನಿ ಮಾಲೀಕರಾದ ಮೋದಿಶಾ ರಿಂದ ಇನ್ನೂ ಏನೂ ಸಿಕ್ಕಂತೆ ಕಾಣುವುದಿಲ್ಲ. ಹಾಗಾಗಿ ಕೃಷ್ಣರವರು ಆ ಎರಡು ಹೆಡೆಯನಾಯಕತ್ವದ ಗಮನ ಸೆಳೆಯಲು ಆಗಾಗ ಹೀಗೆ ಅರಚುತ್ತಿರುತ್ತಾರೆ.

ಇತ್ತೀಚೆಗೆ ಕರ್ನಾಟಕದಲ್ಲಿ ಒಂದು ಪ್ರವೃತ್ತಿ ಆರಂಭವಾಗಿದೆ. ಹಗರಣಗಳಲ್ಲಿ ಹೆಸರು ಪಡೆದಬಿಜೆಪಿಯೇತರ ರಾಜಕಾರಣಿಗಳು ಏಕಾಏಕಿಯಾಗಿ ಬಿಜೆಪಿ ಸೇರುತ್ತಿದ್ದಾರೆ. ಐಟಿ, ಇಡಿ ಇಲಾಖಾದಾಳಿಗಳಿಗೆ ಹೆದರಿ ಅವರು ಹೀಗೆ ಮಾಡುತ್ತಿರಬಹುದೇ ಎಂದು ಜನ ಅನುಮಾನ ಪಡುತ್ತಿದ್ದಾರೆ.ಕೃಷ್ಣಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ಯಾಕಿರಬಹುದು ಎಂದು ಪ್ರಶ್ನಿಸುತ್ತಾರೆ.

2018 ರ ಕರ್ನಾಟಕದ ಪರಿಸ್ಥಿತಿ ಈಗ ಮಹಾರಾಷ್ಟ್ರದಲ್ಲಿದೆ. ಅಲ್ಲೊಂದು ಮೈತ್ರಿ ಸರ್ಕಾರಅಧಿಕಾರಕ್ಕೆ ಬಂದಿದೆ. ಎಸ್ಸೆಂ ಕೃಷ್ಣರವರ ವಿಶ್ಲೇಷಣೆ ಪ್ರಕಾರ ನೋಡುವುದಾದರೆ ಮಹಾರಾಷ್ಟ್ರದಲ್ಲೂಕರ್ನಾಟಕದಂತಹ ಅನಿಷ್ಟಪರಿಸ್ಥಿತಿ ನಿರ್ಮಾಣವಾಗಿದೆ. ಪರಸ್ಪರ ದೂಷಣೆ ಮಾಡಿಕೊಂಡಪಕ್ಷಗಳು ಸೇರಿಕೊಂಡು ಸರ್ಕಾರ ರಚಿಸಿವೆ. ದೊಡ್ಡ ಪಕ್ಷವಾಗಿ ಬಿಜೆಪಿಹೊರಹೊಮ್ಮುವಂತಾಗಿದ್ದರೂ ಬಿಜೆಪಿಗೆ ಅಧಿಕಾರ ದಕ್ಕಿಲ್ಲ. ಕೃಷ್ಣರವರ ಪ್ರಕಾರ ಇದೊಂದು ಅನಿಷ್ಟ ಪರಿಸ್ಥಿತಿ!.

ಕರ್ನಾಟಕದಲ್ಲಿ ಮೈತ್ರಿ ಸರ್ಕಾರವನ್ನು ಉರಳಿಸುವುದರಲ್ಲಿ ಬಿಜೆಪಿಯ ಪಾತ್ರ ಈಗಾಗಲೇಪ್ರಕಟಗೊಂಡಿದೆ,ಖಾತ್ರಿಯಾಗಿದೆ.ಎಸ್ಸೆಂರವರ ಹೇಳಿಕೆ ಇನ್ನೊಂದು ಬಲವಾದ ಸಾಕ್ಷಿಯನ್ನುಒದಗಿಸಿದೆ. 17 ಮಂದಿಬುದ್ಧಿವಂತರಿಂದ ರಾಜಿನಾಮೆ ಕೊಡಿಸಿ ಮೈತ್ರಿ ಸರ್ಕಾರ ಕಿತ್ತುಹಾಕುವ‘ಪುಣ್ಯ’ದ ಕೆಲಸದಲ್ಲಿ ಎಸ್ಸೆಂರವರು ತಮ್ಮ ಪಾತ್ರವನ್ನು ತಾವೇ ಕೊಂಡಾಡಿದ್ದಾರೆ. ಹೀಗೆ ಅಕ್ರಮವಾಗಿಸರ್ಕಾರಗಳನ್ನು ಉರುಳಿಸುವುದರಲ್ಲಿ ತಾವು ಪರಿಣಿತರು ಎಂದು ಎಸ್ಸೆಂ ಒಪ್ಪಿಕೊಂಡಿದ್ದಾರೆ. ಇವರಅನುಭವಕ್ಕೆ ಈಗ ಮಹಾರಾಷ್ಟ್ರದಲ್ಲಿ ಬಹಳ ಬೇಡಿಕೆ ಇರಬಹುದು. ಇವರನ್ನು ಬಿಜೆಪಿಯವರುಆದಷ್ಟುಬೇಗ ಮಹಾರಾಷ್ಟ್ರಕ್ಕೆ ರಫ್ತು ಮಾಡುವುದು ಅವರಿಗೂ ಕರ್ನಾಟಕಕ್ಕೂ ಶ್ರೇಯಸ್ಕರ! ಆನಂತರ ಅವರು ‘ಮಹಾರಾಷ್ಟ್ರಸಮ್ಮಿಶ್ರ ಸರ್ಕಾರವನ್ನು ಉರುಳಿಸುವುದರಲ್ಲಿ ನನ್ನ ಪಾತ್ರವೂ ಇತ್ತುಎಂದು ಹೆಮ್ಮೆಯಿಂದ ಅಂದುಕೊಳ್ಳಬಹುದು, ಅಲ್ಲವೆ?

ಸರ್ಕಾರಗಳು ಶಾಶ್ವತವಲ್ಲ. ಅವು ಬದಲಾಗುತ್ತವೆ. ಬದಲಾಗುತ್ತಿರಬೇಕು. ಒಂದು ದಮನಕಾರಿಸರ್ಕಾರವನ್ನು ಜನ ಕ್ರಾಂತಿಕಾರಿ ಜನಹೋರಾಟದ ಮೂಲಕ ಪದಚ್ಯುತಗೊಳಿಸುತ್ತವೆ. ಮತದಾನದಮೂಲಕ, ಮತಪತ್ರ ಚಲಾವಣೆಯ ಮೂಲಕ ಸಹ ಒಂದು ಅಧಿಕಾರರೂಢ ಸರ್ಕಾರವನ್ನು ಕೆಳಗಿಳಿಸಲುಸಾಧ್ಯವಿದೆ. ಆದರೆ ಅಕ್ರಮಗಳ ಮೂಲಕ, ಪಿತೂರಿಯ ಮೂಲಕ ಒಂದು ಸರ್ಕಾರ ಬಹುಮತಕಳೆದುಕೊಂಡಂತೆ ಮಾಡುವುದು ಆದರ್ಶವಲ್ಲ. ಎಸ್ಸೆಂರವರು ಮಾನ ಮರ್ಯಾದೆ ಎಲ್ಲವನ್ನು ಬಿಟ್ಟುತನ್ನನ್ನು ತಾನೇ ಈ ದುಷ್ಟಕಾರ್ಯದಲ್ಲಿ ತನ್ನ ಪಾತ್ರವೂ ಇದೆ ಎಂದು ಹೊಗಳಿಕೊಂಡಿದ್ದಾರೆ.

ಎಸ್ಸೆಂ ಕೃಷ್ಣರವರು ಸತ್ಯವನ್ನು ಬಾಯ್ಬಿಟ್ಟು ಹೇಳಿದ್ದನ್ನು ನಾವು ಸ್ವಾಗತಿಸಬಹುದು. ಆದರೆಅವರು ಪ್ರತಿಪಾದಿಸುತ್ತಿರುವ ವಿಚಾರ ಆಕ್ಷೇಪಾರ್ಹವಾಗಿದೆ. ಹಿರಿಯ ರಾಜಕಾರಣಿಯಾಗಿಕಿರಿಯರಿಗೆ ಅವರು ಈ ರೀತಿಯ ಭ್ರಷ್ಟರಾಜಕಾರಣದ ದೀಕ್ಷೆ ನೀಡಬಾರದು. ಬಿಜೆಪಿಯನ್ನು ಅಧಿಕಾರಕ್ಕೆತರಲು ಯಾವ ಅಕ್ರಮ ಮಾರ್ಗವನ್ನೂ ಅನುಸರಿಸಬಹುದೆಂಬ ವಾದವನ್ನು ಅವರು ಬಿಜೆಪಿಗೆಸೇರ್ಪಡೆಯಾದಂದಿನಿಂದ ಮೈಗೂಡಿಸಿಕೊಂಡಂತೆ ಕಾಣುತ್ತದೆ. ದೇಶದ ಸಂವಿಧಾನಕ್ಕೆ ಅವಮಾನಮಾಡುವ ಸರ್ಕಾರವನ್ನು, ದೇಶದಲ್ಲಿ ಕೋಮು ಗಲಭೆಗಳಿಗೆ ಕುಮ್ಮಕ್ಕು ನೀಡಿ ಪ್ರಜೆಗಳ ಐಕ್ಯತೆಯನ್ನುಧ್ವಂಸಗೊಳಿಸುವ ಸರ್ಕಾರವನ್ನು, ಮಹಿಳೆಯರಿಗೆ ರಕ್ಷಣೆ ನೀಡದ ಸರ್ಕಾರವನ್ನು, ದಲಿತರ ಹಕ್ಕುಗಳರಕ್ಷಣೆಗೆ ಗಮನ ನೀಡದ ಸರ್ಕಾರವನ್ನು, ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಪರಕೀಯ ಪ್ರಜ್ಞೆ, ಅವರವಿರುದ್ಧ ದ್ವೇಷವನ್ನು ಬೆಳೆಸುವ ಸರ್ಕಾರವನ್ನು ಕಿತ್ತುಹಾಕಲು ಪ್ರಜೆಗಳಿಗೆ ಹಕ್ಕಿದೆ. ಆದರೆ ‘ಆಪರೇಷನ್ ಕಮಲ’ ಎಂಬ ಹೆಸರಿನಲ್ಲಿ ಚುನಾಯಿತ ಸರಕಾರವನ್ನು ಉರಳಿಸಲು ಕರ್ನಾಟಕದಲ್ಲಿ ಆರಂಭಿಸಿರುವ ಪದ್ಧತಿ ಅತ್ಯಂತ ಅನಿಷ್ಟಪದ್ಧತಿ.

ಮಹಾರಾಷ್ಟ್ರದಲ್ಲಿ ಬಿಜೆಪಿಯ ಬಣ್ಣ ಬಯಲಾಗಿದೆ. ಮುಖವಾಡ ಕಳಚಿ ಬಿದ್ದಿದೆ. ಅದರಅಧಿಕಾರದಾಹಕ್ಕೆ ಎಲ್ಲೆ ಇಲ್ಲ ಎಂದು ಸಾಬೀತಾಗಿದೆ. ಅಧಿಕಾರಕ್ಕಾಗಿ ಬಿಜೆಪಿ ಏನು ಬೇಕಾದರೂಮಾಡಲು ಸಿದ್ಧ ಎನ್ನುವುದನ್ನು ಮಹಾರಾಷ್ಟ್ರದಲ್ಲಿ ಅದು ಎಳ್ಳಷ್ಟುಮಾನ ಮರ್ಯಾದೆ ಇಲ್ಲದೆವರ್ತಿಸಿ ಈಗ ಮುಖಭಂಗಕ್ಕೆ ಒಳಗಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ದೇಶವಾಸಿಗಳುದೇಶಾದ್ಯಂತ ತಿರಸ್ಕರಿಸುವುದು ದೂರವಿಲ್ಲ.

ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಸರ್ಕಾರ ಅದರ ಆಂತರಿಕ ವೈರುಧ್ಯಗಳಕಾರಣದಿಂದ ಬೇಗನೇ ಕುಸಿದು ಬೀಳಬಹುದು. ಆದರೆ ಅದು ಮುಖ್ಯವಲ್ಲ. ಬಿಜೆಪಿ ಎಂಬಕೋಮುವಾದಿ, ಸರ್ವಾಧಿಕಾರಿ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರುವುದನ್ನು ಎಲ್ಲ ಪ್ರತಿಪಕ್ಷಗಳು ಒಟ್ಟಾಗಿತಡೆದಿರುವುದು ಗಮನಾರ್ಹವಾಗಿದೆ. ಒಂದು ರಾಷ್ಟ್ರೀಯ ವಿಪತ್ತು ಹರಡುವುದನ್ನು ತಡೆಯಲುಸಾಧ್ಯವಾಗಿರುವುದು ಹೆಮ್ಮೆಯ ವಿಷಯ. ಅದೇ ರೀತಿಯ ಪ್ರಯೋಗ ಆಗಿದ್ದು ಜೆಡಿಎಸ್ ನಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗ. ಗಲಭೆಕೋರ ಬಿಜೆಪಿಯನ್ನು ಹೊರಗಿಡಲು ಸಾಧ್ಯವಾಗಿತ್ತು. ಮಹಾರಾಷ್ಟ್ರದಲ್ಲಿಯೂ ಅಂತಹ ಪ್ರಯೋಗ ನಡೆಯಲುಬಿಡಬೇಕು. ಕೃಷ್ಣರವರ ಇಂತಹ ಹೇಳಿಕೆಗಳಿಂದ ಅವರೊಬ್ಬ ಆದರ್ಶ ರಾಜಕಾರಣಿ ಎಂಬ ಹೆಸರುಅವರಿಗೆ ಪ್ರಾಪ್ತ ಆಗಲಾರರು. ಒಂದು ಸರ್ಕಾರವನ್ನು ಬುಡಮೇಲು ಮಾಡುವ ಉದ್ದೇಶದಿಂದಕೆಲವು ಮಂದಿ ಶಾಸಕರನ್ನು ರಾಜಿನಾಮೆ ಕೊಡಿಸಿ, ಜನರ ಮೇಲೆ ಅನಗತ್ಯ
ಉಪಚುನಾವಣೆಗಳನ್ನುಹೇರಿ, ಹಣ ಬಲ, ಜಾತಿ ಬಲ, ತೋಳ್ಬಲ ಬಳಸಿ ಅವರನ್ನು ಗೆಲ್ಲಿಸಿ, ಒಂದು ಪಕ್ಷದ ಸಂಖ್ಯಾಬಲವನ್ನು ಹೆಚ್ಚಿಸಿ, ಒಂದು ಸರ್ಕಾರವನ್ನು ಕೆಡವಿ ಇನ್ನೊಂದು ಸರ್ಕಾರವನ್ನು ಅಧಿಕಾರಕ್ಕೆ ತರುವಪ್ರಯತ್ನವನ್ನು ಯಾರೂ ಬೆಂಬಲಿಸಬಾರದು.

ಮಹಾರಾಷ್ಟ್ರದ ಬೆಳವಣಿಗೆಯಿಂದ ನಾವು ಕರ್ನಾಟಕದ 17 ಮತಕ್ಷೇತ್ರಗಳಲ್ಲಿ ಮತದಾನಮಾಡಲು ಸಜ್ಜಾಗುತ್ತಿರುವ ಪ್ರಜ್ಞಾವಂತ ಮತದಾರರು ಕೃಷ್ಣರವರ ಮಾತುಗಳಿಂದಪ್ರಜ್ಞಾಹೀನರಾಗದೆಜವಾಬ್ದಾರಿಯಿಂದ ಮತದಾನ ಮಾಡಬೇಕೆಂದು ಮನವಿ ಮಾಡುತ್ತೇವೆ.

(ಈ ವಾರದ ಜನಶಕ್ತಿ ಸಂಪಾದಕೀಯ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

Published

on

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.

ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.

ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.

ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು‌.”

  • ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
  • ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

Published

on

ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.

ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending