ಲೈಫ್ ಸ್ಟೈಲ್
ಇದು ‘ಸ್ಲೋಗನ್’ ಆಭರಣಗಳ ದರ್ಬಾರ್ ದುನಿಯಾ..!
ಟ್ರೆಂಡ್ಅನ್ನೊದು ಚಕ್ರದ ತರಹ ಯಾವಾಗ ಯಾವುದು ಬದಲಾಗುತ್ತದೆ. ಎನ್ನುವುದು ಯಾರಿಗೂ ಊಹೆ ಮಾಡಲು ಸಾಧ್ಯವಿಲ್ಲ ರಾತ್ರಿ ಕಳೆದು ಹಗಲು ಬರುವುದೊರಳಗೆ ಟ್ರೆಂಡ್ ಬದಲಾಗುತ್ತದೆ, ಇಷ್ಟು ದಿನ ತಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಫೇಸ್ ಬುಕ್ನಲ್ಲಿ ಪೋಸ್ಟ್ಗಳನ್ನು ಹಾಕುತ್ತಿದ್ದರು.
ಕಾಲ ಬದಲಾದಂತೆ ವಾಟ್ಸ್ಪ್ನ ಸ್ಟೇಟಸ್, ಡಿಪಿಗಳ ಮೂಲಕ ತಿಳಿಸುವುದು ನಾವು ನೋಡಿದ್ದೇವೆ ಆದರೆ ಟ್ರೆಂಡ್ ಮತ್ತೆ ಬದಲಾಗಿದೆ ಎಂದು ತೋರಿಸಲು ಸಜ್ಜಾಗಿ ನಿಂತಿದೆ ಅದುವೇ ಸ್ಲೋಗನ್ ಆಭರಣಗಳು ಹೌದು ನೀವು ಕೇಳುತ್ತಿರುವುದು ಸರಿಯಾಗಿ ಸ್ಲೋಗನ್ ಹೊಂದಿರುವ ಹೇರ್ಕ್ಲಿಪ್, ನೆಕಲೇಸ್, ಕಿವಿಯೋಲೆ, ಬ್ರೆಸಲೇಟ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಪ್ರಿಟಿಗರ್ಲ್, ಏಂಜಲ್, ಸ್ವಿಟ್ 16, ಬ್ರೆವ್, ಪ್ರಿನ್ಸೆಸ್ ಲವ್, ಕೇರಿಂಗ್, ಸ್ಮೆಲ್ ಆಲ್ವೇಸ್, ಹಲೋ, ಎಸ್, ಕ್ರೆಜೀ, ಲಕ್, ಡ್ರೀಮ್ ಗರ್ಲ್, ಕ್ಯೂಟ್ ಹೀಗೆ ಪದಗಳನ್ನು ಒಳಗೊಂಡ ನೆಕ್ ಲೇಸ್, ಕಿವಿಯೋಲೆ ಹಾಗೂ ಬ್ರೆಸ್ಲೆಟ್ ಹೆರ್ಕ್ಲಿಪ್ಗಳು ಮಾರುಕಟ್ಟೆಗೆ ಬಂದಿವೆ.
ಸ್ಲೋಗನ್ ಹೇರ್ ಕ್ಲಿಪ್
ಬಣ್ಣಗಳ ಹಾಗೂ ಮುತ್ತಿನ ಕ್ರಿಸ್ಟಲ್ ಅಂಟಿಸಿರುವ ಕ್ಲಿಪ್ಗಳನ್ನು ಹಿಂದೆ ಬಳಸಿದ್ದಿರಿ ಈಗ ಬಂದಿರುವ ಸೋಗನ್ ಕ್ಲಿಪ್ ಅತಿ ಹೆಚ್ಚು ಟ್ರೆಂಡ್ನಲ್ಲಿವೆ. ಪ್ಲಾಸ್ಟಿಕ್ ಕ್ಲಿಪ್ ಮೇಲೆ ಸ್ಲೋಗನ್ ಹೇಳಿಕೆ ಅಂಟಿಸಿರುವುದು ತಗಡಿನ ಕ್ಲಿಪ್ಗಳ ಜೊತೆಗೆ ಇನ್ನು ತರಹ ತರಹ ಕ್ಲಿಪ್ಗಳು ಮಹಿಳೆಯರನ್ನು ಆಕರ್ಷಿಸಿವೆ.
ಸ್ಲೋಗನ್ ನೆಕ್ಲೇಸ್
ಲಾಂಗ್ ಮತ್ತು ಶಾರ್ಟ್ ಚೈನ್, ಸಿಂಗಲ್, ಡಬಲ್ ಹಾಗೂ ಮಲ್ಟಿ ಲೇಯರ್ ಚೈನ್, ಸ್ಲೋಗನ್ ನೆಕ್ ಪೀಸ್ಗಳಲ್ಲಿ ಹಲವಾರು ವೆರೈಟಿಗಳನ್ನು ಕಾಣಬಹುದು. ಇವುಗಳಲ್ಲಿ ಸಿಲ್ವರ್, ಗೋಲ್ಡ್ ಮೆಟಲ್ನಲ್ಲಿ ಕೂಡ ಲಭ್ಯವಿವೆ. ಅಷ್ಟೇ ಅಲ್ಲದೇ ಸರ್ಕಲ್, ಹಾರ್ಟ್, ಓವೆಲ್, ಸ್ಕಯರ್, ರೌಂಡ್, ಶೇಪ್ನಲ್ಲಿರುವ ಸ್ಲೋಗನ್ ನೆಕ್ಲೇಸ್ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಸ್ಲೋಗನ್ ಕಿವಿಯೋಲೆ
ಶೋಲ್ಡರ್ ಲೆಂತ್ನಲ್ಲಿರುವ ಸ್ಲೋಗನ್ ಕಿವಿಯೋಲೆ ಆಕರ್ಷಕವಾಗಿವೆ, ಇಷ್ಟೇ ಅಲ್ಲದೇ ರೌಂಡ್, ಸ್ಕಯರ್, ಓವಲ್ ಶೇಪ್ನಲ್ಲಿ ಹಾಗೂ ಒಂದು ಅಥವಾ ಒಂದಕ್ಕಿಂತ ಹೆಚ್ಚು ಟೆಕ್ಸ ಸ್ಟೆಫ್ಸ್ ಇರುವ ಮೀನಿಂಗ್ ಫುಲ್ ಸ್ಲೋಗನ್ ಕಿವಿಯೋಲೆಗಳು ಮಹಿಳೆಯರನ್ನು ಹೆಚ್ಚು ಸೆಳೆಯುತ್ತಿವೆ. ಹಾಗೂ ಈ ಸ್ಲೋಗನ್ ಕಿವಿಯೋಲೆಗಳು ಸಿಲ್ವರ್, ಗೋಲ್ಡ್, ಪ್ಲಾಟಿನಂನಲ್ಲಿ ಕೂಡ ಲಭ್ಯವಿವೆ.
ಸ್ಲೋಗನ್ ಬ್ರೆಸ್ಲೆಟ್
ಸ್ಲೋಗನ್ ಹೊಂದಿರುವ ಚಾಮ್ರ್ಸ್ ಬ್ರೆಸ್ಲೆಟ್, ಹಾರ್ಟ್, ರೌಂಡ್ ಸ್ಲೋಗನ್ ಬೇಸ್ಲೆಟ್ಗಳು ಎಲ್ಲರ ಗಮನ ಸೆಳೆದಿವೆ.
–ನಿವೇದಿತಾ ಸುರೇಶ್ ಸೋಲಾಪುರ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.
ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಮತ್ತಿನ ಕುಣಿಕೆ

- ಗುರು ಸುಳ್ಯ
ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ
ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ
ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…
ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ
ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ
ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನಡೆಸ್ಕ್:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರಡ್ಸೆಟ್ ಸಂಸ್ಥೆ ವತಿಯಿಂದ ಮೊಬೈಲ್ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿ ಆಯೋಜಿಸಲಾಗಿದೆ, ಅರ್ಜಿ ಸಲ್ಲಿಸಲು ಮಾರ್ಚ್ 28 ಕೊನೆಯ ದಿನವಾಗಿದೆ.
ತರಬೇತಿ ಏಪ್ರಿಲ್ 17 ರಿಂದ ಪ್ರಾರಂಭವಾಗಲಿದ್ದು, ಆಸಕ್ತ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ. 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ತರಬೇತಿ ವಸತಿಯುತವಾಗಿದ್ದು, ಉಚಿತ ಊಟ, ವಸತಿ ನೀಡಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9740982585 ಗೆ ಸಂಪರ್ಕಿಸಬಹುದು ಎಂದು ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ರವಿಕುಮಾರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ನೆಲಮಂಗಲ ಸಮೀಪದ ದಾಸನಪುರದಲ್ಲಿ 306 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕೃಷಿ ಮಾರುಕಟ್ಟೆ ನಿರ್ಮಾಣ : ಸಚಿವ ಶಿವಾನಂದಪಾಟೀಲ್
-
ದಿನದ ಸುದ್ದಿ6 days ago
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ರಾಜ್ಯದ ಶಿಲಾ ಶಾಸನಗಳು ಸೇರ್ಪಡೆ
-
ದಿನದ ಸುದ್ದಿ6 days ago
ಕೆರೆಬಿಳಚಿ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ; 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ಮಾಸಾಶನ ಪಡೆಯುತ್ತಿರುವ ಕಲಾವಿದರು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ
-
ದಿನದ ಸುದ್ದಿ5 days ago
ಕ್ಯೂ-ಸ್ಪೈಡರ್ಸ್ ವತಿಯಿಂದ ಉಚಿತ ಉದ್ಯೋಗದರಿತ ಕೌಶಲ್ಯ ತರಬೇತಿ ಆಯ್ಕೆ ಪ್ರಕ್ರಿಯೆ
-
ದಿನದ ಸುದ್ದಿ6 days ago
ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ : ಹೊಸ ಸದಸ್ಯರ ನೊಂದಣಿ, ನೊಂದಣಿಯಾದ ಸದಸ್ಯರನ್ನು ನವೀಕರಿಸಲು ಸೂಚನೆ
-
ದಿನದ ಸುದ್ದಿ6 days ago
ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಮೆಗಾ ಡೈರಿ ಆರಂಭಿಸಿ : ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯ
-
ದಿನದ ಸುದ್ದಿ5 days ago
ಅಮಾನವೀಯ ಕೃತ್ಯ | ಹೆಣ್ಣು ಮಗು ಮಾರಾಟ ಮಾಡಿದ ಪೋಷಕರು