ಭಾವ ಭೈರಾಗಿ
ತಾಯಿಯ ತಾಳಿ ಕದ್ದು ಕುಡಿಯುತ್ತಿದ್ದವ, ‘ಸಮಾಜ ಸೇವಕ’ನಾದ ರೋಚಕ ಕತೆ..! ಮರೆಯದೆ ಓದಿ
“ಶಾಲೆಯಲ್ಲಿಯೇ ನಾನು ದಾದಾನಾಗಿ ಪ್ರಾರಂಭಿಸಿ ಬದ್ರತೆಗಾಗಿ ಹಣ ಸಂಗ್ರಹಿಸುತ್ತಿದೆ, ಮನೆಯಲ್ಲಿರುವ ಪ್ರತಿಯೊಂದನ್ನು ನನ್ನ ತಾಯಿಯ ಮಂಗಳಸೂತ್ರವನ್ನೂ ಒಳಗೊಂಡು ಕಳ್ಳತನ ಮಾಡುತ್ತಿದ್ದೆ. ”
ಆದರೆ ಸಿನಿಮಾ ನೋಡೊದಕ್ಕೂ ಮದ್ಯಪಾನ ಮಾಡೋದಕ್ಕೂ ಹಣವನ್ನು ಹೇಗೆ ಕದಿಯಬೇಕೆಂದು ಕಲಿಸಿದ ನನ್ನ ಸ್ನೇಹಿತರ ಕೆಟ್ಟ ಸಹವಾಸದಲ್ಲಿದ್ದೆ. ಶಾಲೆಯಲ್ಲಿ ನಾನು ದಾದಾ ಆಗಿ ಭದ್ರತಾ ಹಣ ಎಂದು ಒಬ್ಬೊಬ್ಬ ವಿದ್ಯಾರ್ಥಿಯ ಕಡೆಯಿಂದ 10 ಪೈಸೆ ಕೂಡಿಸುತ್ತಿದ್ದೆ. ಯಾರು ಕೊಡಲಿಲ್ಲವೋ ಅವರನ್ನು ಹೊಡೆಯುತ್ತಿದೆ. ಮನೆಯಲ್ಲಿರುವ ಪ್ರತಿಯೊಂದನ್ನೂ, ನನ್ನ ತಾಯಿಯ ಮಂಗಳಸೂತ್ರವನ್ನೂ ಒಳಗೊಂಡು ಕಳ್ಳತನ ಮಾಡುತ್ತಿದ್ದೆ.ತಾಯಿಯ ಮದುವೆ ಸೀರೆಯನ್ನು ಸಹ ಕದ್ದು ಒತ್ತೆಯಿಡುತ್ತಿದ್ದೆ. ನಾನು ಕುಟುಂಬಕ್ಕೆ ಅವಮಾನವೆಂದು ಹೇಳಿ ನನ್ನ ತಂದೆ ತಾಯಿಗಳೂ ಸಂಬಂಧಿಕರೂ ನನ್ನನ್ನು ಮನೆಯಿಂದ ಹೊರಗೆ ಹಾಕಿಬಿಟ್ಟರು.
ನಾನು ಚೆನೈಗೆ ಓಡಿ ಹೋಗಿ ಹೋಟೆಲುಗಳಲ್ಲಿ ಪಾತ್ರೆ ತೊಳೆಯುವ ಕೆಲಸಮಾಡುತ್ತಿದ್ದೆ. ಅಲ್ಲಿಯೂ ಕಳ್ಳತನ ಮಾಡಿದ್ದರಿಂದ ಅಲ್ಲಿಂದ ಹೊರಗೆ ಹಾಕಿಬಿಟ್ಟರು. ಕಸ ಹಾಕುವ ಸ್ಥಳಗಳಲ್ಲಿ ಗಜ್ಜಿ ನಾಯಿಗಳೊಂದಿಗೆ ಮಲಗಿ ನನಗೂ ರೋಗ ಬಂದು ಬೇಸತ್ತ ಬಾಳನ್ನು ಮಾಡುತ್ತಿದ್ದೆ . ಬೇಗನೇ ನಾನು ಸೆರೆ ಹಿಡಿದು ಜೇಯಿಲಿನಲ್ಲಿ 10 ದಿನಗಳು ಇದ್ದೆ. ಅಲ್ಲಿ ಶೌಚಾಲಯ ಉಪಯೋಗ ಮಾಡಲು ಅನುಮತಿಸದೆ ಅಸ್ವಸ್ಥನಾಗಿ ಸಾಯುವ ಹಾಗಿದ್ದೆ. ಒಂದು ವೇಳೆ ದೇವರು ಕೊನೆಯ ಸಾರಿ ನನ್ನನ್ನು ಹೊಸ ವ್ಯಕ್ತಿಯಾಗಿರಲು ಸಹಾಯ ಮಾಡಿದರೆ ಹಾಗೆ ಬಾಳುವುದಾಗಿ ಒಂದು ಒಪ್ಪಂದದ ತೀರ್ಮಾನ ದೇವರೊಂದಿಗೆ ಮಾಡಿದೆ. ನನ್ನ ತಂದೆ ತಾಯಿಗಳು ಬಂದು ನನ್ನನ್ನು ಬಿಡುಗಡೆ ಮಾಡಿದರು. ಆಗ ಯೇಸು ಕ್ರಿಸ್ತನು ನನ್ನ ಬಾಳನ್ನು ಬದಲಾಯಿಸಿದನು. ನನ್ನ ಒಪ್ಪಂದ ಆತನಿಗೆ ಬಹು ಶ್ರದ್ಧೆಯಿಂದ ಪಾಲಿಸಿದೆ. ಆತನು ನನ್ನ ಪಾಪವನ್ನೆಲ್ಲಾ ಕ್ಷಮಿಸಿ ಹೊಸ ಬಾಳನ್ನು ನೀಡಿ ನನ್ನನ್ನು ಬದಲಾಯಿಸಿದನು. ನನಗೆ ಮದುವೆಯಾಯಿತು. ನನಗೆ ಬಂದ 1000 ರೂಪಾಯಿಂದ ಒಂದು ಆಟೋ ಕೊಂಡುಕೊಂಡೆ. ನಾನು ಆಟೋ ಚಾಲಕನಾಗಿದ್ದ ಬಡವರು ಹಸಿವೆಯಿಂದ ರಸ್ತೆಯಲ್ಲಿ ನಿಸ್ಸಹಾಯಕರಾಗಿ ಬಿದ್ದುಕೊಂಡಿರುವುದನ್ನು ಕಂಡೆ.ಬಿನ್ನಿಪೇಟೆಯ ಕಸಹಾಕುವ ಸ್ಥಳದಲ್ಲಿ ಎಲುಬು ಚರ್ಮವಾಗಿ ಬಿದ್ದುಕೊಂಡಿದ್ದ ವ್ಯಕ್ತಿಯೇ ನಾನು ಕಾಪಾಡಿದ ಮೊದಲನೆಯ ವ್ಯಕ್ತಿ. ನನ್ನ ಕುಟುಂಬ ನೋಡಿಕೊಳ್ಳಲು ನನಗೆ ಕಷ್ಟವಾಯಿತ್ತು. ಅದರಲ್ಲಿ ಈ ವ್ಯಕ್ತಿಯನ್ನು ಸಹಾಯಮಾಡಲು ದೇವರಲ್ಲಿ ಪೂರ್ಣ ವಿಶ್ವಾಸವಿಟ್ಟೆ.
ಯಾರೂ ನನ್ನ ಈ ಸೇವೆಗೆ ಆಗ ಸಹಕಾರ ಮಾಡಲಿಲ್ಲ. ನಿಸ್ಸಹಾಯಕ ಗತಿಯಿಲ್ಲದವರನ್ನು ನನ್ನ ಮನೆಗೆ ಕರಕೊಂಡು ಬರುವುದನ್ನು ನನ್ನ ಅಕ್ಕ ಪಕ್ಕದ ಮನೆಯವರು ನಿಂದಿಸಿದರು. ಆರಂಭದಲ್ಲಿ ನಾನು ಎಷ್ಟೋ ತಿಂಗಳು ನನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಗತಿಯಿಲ್ಲದವರ ಸೇವೆಯಲ್ಲಿದ್ದು ನೋಡಿಕೊಳ್ಳುವುದು ಕಷ್ಟಕರವಾಗಿತ್ತು.
ಎಸ್.ಆರ್. ಮನೋಹರ್ ಎಂಬ ವ್ಯಕ್ತಿ ಅನಂತರ, ಇಂಡಿಯಾ ಕೆಂಪಸ್ ಕ್ರೂಸೆಡ್ ಫಾರ್ ಕ್ರೈಸ್ಟ್ ಸಂಸ್ಥೆಯವರು ನನಗೆ ಹಣ ಸಹಾಯ ಮಾಡಿದರು. ಮುಖ್ಯಮಂತ್ರಿ ಹೆಚ್.ಡಿ . ಕುಮಾರ ಸ್ವಾಮಿಯವರ ಹಾಗೆ ಕಾಣುತ್ತಿದ್ದೇನೆಂದು ತಮಾಷೆಯಾಗಿ ನನಗೆ ಹೇಳುತ್ತಿದ್ದರು. ಅವರು ಕರ್ನಾಟಕದ ಮುಖ್ಯ ಮಂತ್ರಿಗಳಾಗಿ ಇದ್ದಾಗ ನನ್ನ ಸೇವೆಗೆ ಜಮೀನು ಹಾಗೂ ಕಟ್ಟಡಗಳನ್ನು ಕಟ್ಟಿ ನನ್ನ ಸೇವೆಗೆ ಬಹಳವಾಗಿ ಸಹಾಯಮಾಡಿದರು. ಸ್ವಲ್ಪಕಾಲದ ನಂತರ ಮಾರವಾರಿ ಹಾಗೂ ಜೆನ್ ಸಮುದಾಯದವರು ಔಷಧ ಇತ್ಯಾದಿ ಅವಶ್ಯಕತೆಗಳನ್ನು ಕೊಟ್ಟು ಸಹಾಯಮಾಡಿದರು.
1997 ರಲ್ಲಿ ಕೆಲವು ಕ್ರಿಸ್ತ ಸೇವಕರ ಸಹಾಯದ ಮೂಲಕ ಭಾರತ ನವ ನಾವೆ ಸೇವೆಯನ್ನು ಸ್ಥಾಪಿಸಿದೆ. ಈಗ ಲಿಂಗರಾಜಪುರ ಹಾಗೂ ದೊಡ್ಡ ಗುಬ್ಬಿಯಲ್ಲಿರುವ ಮನೆಗಳಲ್ಲಿ ನಿರ್ಗತಿಕರಾಗಿರುವ 450 ಜನರಿದ್ದಾರೆ. ನಾವು ಕ್ಯಾನ್ ಸರ್, ಏಡ್ಸ್ ಮುಂತಾದ ಗಂಭೀರ ರೋಗಿಗಳೂ ಬುದ್ದಿ ಮಾಂದರಾಗಿರುವವರಿಗೂ ಆಶ್ರಯ ಕೊಡುತ್ತೇವೆ.ನಾನು ಬೀದಿಯಲ್ಲಿ ಬಿದ್ದಿರುವವರನ್ನು ನನ್ನ ಆಟೊದಲ್ಲಿ ನನ್ನ ಮನೆಗೆ ತರುತ್ತಾ ಇದ್ದುದರಿಂದ ನನಗೆ ಆಟೋ ರಾಜ ಎಂಬ ಹೆಸರು ಬಂತು. ಕಳೆದ 16 ವರ್ಷಗಳಿಂದ ನನ್ನ ಸೇವೆಯಲ್ಲಿ ಬೆಂಗಳೂರು ಬೀದಿಯಲ್ಲಿ ಬಿದ್ದಿದ್ದ 5000 ನಿರ್ಗತಿಕರನ್ನು ಸಂರಕ್ಷಿಸಿ ಸಹಾಯಮಾಡಲು ಸಾಧ್ಯವಾಯಿತು. ರಸ್ತೆಯಲ್ಲಿ ಬಿದ್ದಿದ್ದ 2500 ಶವಗಳಿಗೆ ಗೌರವವಾಗಿ ಸಂಸ್ಕಾರ ಮಾಡಲಾಯಿತು.
ಸಾಯುವವರ ಕೊನೆ ಆಶೆಯನ್ನು ಪೂರೈಸಲು ನಾನು ಯತ್ನಿಸುವೆ. ಸಾಮಾನ್ಯವಾಗಿ ಅದು ಅವರಿಗೆ ಇಷ್ಟವಾದ ಊಟ ತಿನ್ನಬೇಕೆಂಬ ಆಶೆಯಾಗಿರುತ್ತೆ. ನಾನು ಕೊತ್ತನೂರಲ್ಲಿದ್ದುಕೊಂಡು ನನ್ನ ಕುಟುಂಬ ಹಾಗೂ ನಿರ್ಗತಿಯರೊಂದಿಗೆ ಸಮಯ ಕಳೆಯುತ್ತಿದ್ದೇನೆ. ನಾವು ಒಂದು ದೊಡ್ಡ ಸಂತೋಷ ಕುಟುಂಬ.
NDTV ಯಲ್ಲಿ ನನ್ನನ್ನು ಸಂದರ್ಶನ ಮಾಡಿದ್ದರು CNN IBN ನಲ್ಲಿ ನಿಜ ಹೀರೋ ಪ್ರಶಸ್ತಿ ನೀಡಿದ್ದಾರೆ. ದಿನಪತ್ರಿಕೆಯಲ್ಲಿ ಸಹ ನನ್ನ ಕೆಲಸದ ಬಗ್ಗೆ ಬಂದಿವೆ.
ಸದ್ಯಕ್ಕೆ ಸರಕಾರದಿಂದ ಯಾವ ಸಹಾಯವಿಲ್ಲದೆ ನಾನು ನನ್ನ ಸೇವೆ ಮಾಡುತ್ತಿದ್ದೇನೆ. ನಾನು ದೇವರೊಂದಿಗೆ ಅಂದು ಮಾಡಿಕೊಂಡ ನನ್ನ ಕೊನೆ ಒಪ್ಪಂದವನ್ನು ಇದುವರೆಗೆ ಪಾಲಿಸುತ್ತಾ ಬಂದಿದ್ದೇನೆ. ಆತನೂ ತನ್ನ ಭಾಗವನ್ನು ಮಾಡುತ್ತಿದ್ದಾನೆ.
ನನ್ನ ಬಾಳೊಂದು ವಿಮಾನವಿದ್ದ ಹಾಗಿದೆ. ಹೇಗೆ ವಿಮಾನ ಪ್ರಾರಂಭದಲ್ಲಿ ವೇಗ ನಿಯಂತ್ರಿಸಲು ಹೋರಾಡಿ ಓಡಾಡುತ್ತದೋ ಹಾಗೆ ಪ್ರಾರಂಭದಲ್ಲಿ ಹೋರಾಡಿ ಓಡಾಡಬೇಕಿತ್ತು. ಇಂದು ಸಾಕಷ್ಟು ವೇಗ ಪಡಕೊಂಡು ಸರಿಯಾದ ರೀತಿಯಲ್ಲಿ ನಾನು ಹಾರಾಡುತ್ತಿರುವುದಾಗಿ ನನಗನಿಸುತ್ತೆ. ಯಾವಾಗ ಇಳಿಯಬೇಕೋ ಅದು ದೇವರ ಕೈಯಲ್ಲಿದೆ !
ವಿಡಿಯೋ ನೋಡಿ
https://m.facebook.com/story.php?story_fbid=792849841085857&id=352420091795503
ಸುದ್ದಿದಿನ.ಕಾಂ|ವಾಟ್ಸಾಪ್|99986715401
ದಿನದ ಸುದ್ದಿ
ಕವಿತೆ | ನೆನಪು
- ರುದ್ರಪ್ಪ ಹನಗವಾಡಿ
ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ
ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು
ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು
ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?
( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ಮಣ್ಣ ಮಕ್ಕಳು
- ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.
ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.
ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು
ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.
ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.
- ಬಸವರಾಜ ಹೂಗಾರ
ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.
ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.
- ಡಾ.ರಹಮತ್ ತರೀಕೆರೆ
ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.
- ಬಿ.ಶ್ರೀನಿವಾಸ,ಕೃತಿ ಲೇಖಕ
ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.
ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.
“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.
ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.
ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.
ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ
- ಡಾ.ರಾಮಚಂದ್ರ ಹಂಸನೂರು, ಬೆಟಗೇರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಆತ್ಮಕತೆ | ಕೋರಿನ ತೋಟ ಮತ್ತು ನಮ್ಮೂರ ದೇವರ ಗುಡಿಯಲ್ಲಿ ಪಂಚಾಯ್ತಿ
-
ದಿನದ ಸುದ್ದಿ3 days ago
ವಿಧಾನಪರಿಷತ್ ಚುನಾವಣೆ ; ಇಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನ
-
ದಿನದ ಸುದ್ದಿ3 days ago
ಪೌರತ್ವ ಪ್ರಮಾಣಪತ್ರ ಹಸ್ತಾಂತರ
-
ದಿನದ ಸುದ್ದಿ2 days ago
ಸಂಗೀತಗಾರರ ಹುದ್ದೆಗಳಿಗೆ ನೇಮಕಾತಿ
-
ದಿನದ ಸುದ್ದಿ3 days ago
ದಾವಣಗೆರೆ | ಶಿಕ್ಷಕರ ಹುದ್ದೆಗೆ ನೇರ ಸಂದರ್ಶನ
-
ದಿನದ ಸುದ್ದಿ4 days ago
ಅಂಧ ಹೆಣ್ಣು ಮತ್ತು ಗಂಡು ಮಕ್ಕಳಿಗೆ ದಾಖಲಾತಿ ಪ್ರಾರಂಭ
-
ದಿನದ ಸುದ್ದಿ3 days ago
ಮೊರಾರ್ಜಿ ದೇಸಾಯಿ ವಿಜ್ಞಾನ ಕಾಲೇಜು ; ಪಿಯುಸಿ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಪ್ರಜ್ವಲ್ ಪೆನ್ಡ್ರೈವ್ ಪ್ರಕರಣ | ಎಸ್ಐಟಿ ಸೂಕ್ತ ತನಿಖೆ ನಡೆಸುತ್ತಿಲ್ಲ : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ