Connect with us

ದಿನದ ಸುದ್ದಿ

ಬುಡಕಟ್ಟು ಜನಾಂಗದ ಗಟ್ಟಿ ದನಿ : ಸಾಯಿ ಪಲ್ಲವಿ

Published

on

  • ಸಿದ್ದು ಸತ್ಯಣ್ಣನವರ್

ಆಕೆಬಡಗ‘ ಎಂಬ ತಮಿಳುನಾಡಿನ ಬುಡಕಟ್ಟು ಜನಾಂಗದ ಕುಡಿ. ದ್ರಾವಿಡತನ ರಕ್ತದಲ್ಲೇ ಇತ್ತು. ಸಿನಿ ರಂಗ ಸೃಷ್ಟಿಸಿದ್ದ ಹಲವು ಸಿದ್ಧ ಮಾದರಿಗಳನ್ನು ಮೀರಿದ ಅಗ್ಗಳಿಕೆ ಸಹ ಆಕೆಯದು. ಹೆಸರು ‘ಸಾಯಿ‌ ಪಲ್ಲವಿ’. ಸದ್ಯ ದಕ್ಷಿಣ ಭಾರತ ಚಿತ್ರರಂಗದ ಬೇಡಿಕೆಯ ನಟಿ. ಆ ಬೇಡಿಕೆಯನ್ನು ತನ್ನ ಪ್ರಬುದ್ಧತೆ,‌ ,ಪ್ರತಿಭೆ, ನಟನಾ ಕೌಶಲ್ಯತೆಯಿಂದ ಸೃಷ್ಟಿಸಿಕೊಂಡಿರುವಾಕೆ.

ಕೆಲ ದಿನಗಳ ಹಿಂದೆ ಆಕೆ ಕಾಸ್ಮೆಟಿಕ್ ಕಂಪನಿಯೊಂದರ ಎರಡು ಕೋಟಿ ರೂಪಾಯಿ ಜಾಹೀರಾತನ್ನು ತಿರಸ್ಕರಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಅದು ಅವಳನ್ನು ಬಲ್ಲ ಕುಟುಂಬ ವರ್ಗ ಮತ್ತು ಸ್ನೇಹಿತ ವಲಯಕ್ಕೆ ಆಶ್ಚರ್ಯಕರ‌ ಸಂಗತಿಯೇನಾಗಿರಲಿಲ್ಲ. ಯಾಕೆಂದರೆ ಸಾಯಿ ಪಲ್ಲವಿ‌ಯ ತಂಗಿ ಪೂಜಾ‌ ಮೈ ಬಣ್ಣ ಕಪ್ಪು. ಅವಳು ಸಹ ಹಲವು ಕಂಪೆನಿಯ ಕಾಸ್ಮೆಟಿಕ್ ಪ್ರೋಡಕ್ಟ್ಸ್ ಬಳಸಿದವಳೇ. ಆದರೆ ಫಲಿತಾಂಶ ಮಾತ್ರ ಶೂನ್ಯ. ಇದನ್ನೇ‌ ಮತ್ತೊಂದು ಬಗೆಯಲ್ಲಿ‌ ಅಂದರೆ‌ ಎರಡು ಕೋಟಿ‌ ಜಾಹೀರಾತು ಏಕೆ ತಿರಸ್ಕರಿಸಿದೀರಿ? ಎಂದು ಸಂದರ್ಶನವೊಂದರಲ್ಲಿ‌ ನಿರೂಪಕಿ ಕೇಳಿದ್ದಳು.

ಕಾಸ್ಮೆಟಿಕ್ಸ್ ಕಂಪನಿಗಳ ವಂಚನೆ ತನ್ನ ತಂಗಿಯ ಮೂಲಕವೇ ಸಾಯಿ‌ ಪಲ್ಲವಿಗೆ ಮನದಟ್ಟಾಗಿತ್ತು. ಆಗ ಅವಳು ಕೊಟ್ಟ ಉತ್ತರ ಹೀಗಿತ್ತು ‘ಬ್ರಿಟಿಷರು ಬೆಳ್ಳಗೆ, ಆಫ್ರಿಕನ್ನರು ಕಪ್ಪಗೆ, ಭಾರತೀಯರು ಕಂದು. ಆಫ್ರಿಕಾದಲ್ಲಿ ನಾವು ಅಲ್ಲಿನ‌ ಕಪ್ಪನೆ ಯುವತಿಯರನ್ನೇ ಸುಂದರಿಯರು ಎನ್ನಬೇಕಾಗುತ್ತದೆ. ಮೈ ಬಣ್ಣ ಎನ್ನುವುದು ಬರೀ ಒಂದು ಭಾವನೆಯಷ್ಟೇ. ನನ್ನ ತಂಗಿಯೇ ಇದ್ದಳಲ್ಲ, ಮನೆಯಲ್ಲಿ. ನಾನು ಹಾಗಾಗಿ ಆ ಜಾಹೀರಾತನ್ನು ಒಪ್ಪಿಕೊಳ್ಳಲಿಲ್ಲ. ದುಡ್ಡಿಗಾಗಿ ನಾನೇಕೆ‌ ಜನರನ್ನು ವಂಚಿಸಲಿ?’ ಎಂದಿದ್ದಳು. ಇದು ಪ್ರಶ್ನೆಯೊಂದಕ್ಕೆ ಸಾಯಿ ಪಲ್ಲವಿಯ ಉತ್ತರವಾದರೂ ಕಪ್ಪು ಬಣ್ಣದ ಬಗ್ಗೆ ತಮಿಳರ‌ ಪ್ರೇಮವನ್ನು ಹೇಳುತ್ತದೆ. (ಪಾ.ರಂಜಿತ್ ನಿರ್ದೇಶನದ ಕಾಲಾ ಸಿನಿಮಾ ಆ ಬಗ್ಗೆ ಖಚಿತವಾಗಿ ಮಾತನಾಡುತ್ತದೆ. ಈ ಪಟ್ಟಿ ಬೆಳೆಸಿದರೆ ಇನ್ನು ಬೆಳೆಯುತ್ತದೆ. ಅದಿಲ್ಲಿ ಅನಗತ್ಯ).

ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿ ವಾಸಿಸುವ ‘ಬಡಗ’ ಎಂಬ ಬುಡಕಟ್ಟು ಜನಾಂಗದ ಹೆಣ್ಣುಮಗಳು ಈ ಸಾಯಿ ಪಲ್ಲವಿ. ಮೆಡಿಕಲ್ ಓದಿದರೂ (ಹಾರ್ಟ್ ಸ್ಪೇಶಲಿಸ್ಟ್) ಪ್ರಾಕ್ಟೀಸಿಗಾಗಿ ಹೆಸರು ನೋಂದಾಯಿಸಿಕೊಂಡಿಲ್ಲ. ತಮಿಳುನಾಡಿನ ಸುಮಾರು 400 ಹಳ್ಳಿಗಳಲ್ಲಿ ಕಂಡು ಬರುವ ಬಡಗ ಜನಾಂಗ ನಮ್ಮಲ್ಲಿ ಕಾಡು ಕುರುಬ, ಜೇನು ಕುರುಬರು ವಾಸಿಸುವಂತೆಯೇ ಕಾಡಿನ ಏರಿಳಿತಗಳ ನಡುವೆ ಹಟ್ಟಿಗಳಲ್ಲಿ ವಾಸಿಸುವವರು. ‘ಬಡಗ’ ಎಂದರೆ ತಮಿಳು ಜನಪದದಲ್ಲಿ ದಕ್ಷಿಣ ಎಂಬರ್ಥವೂ ಉಂಟು.

ನಟಿಯರಲ್ಲಿ ದ್ರಾವಿಡತನದ ಢಾಳ ಛಾಯೆ ನನಗೆ ಎದ್ದು ಕಂಡದ್ದು ‘ಪ್ರೇಮಂ‘ ಎಂಬ ಸಿನೇಮಾದ ಮೂಲಕ‌‌ ಮೋಡಿ ಮಾಡಿದ‌ ಈ ‘ಮಲರ್‘ ಮೂಲಕ. ವೃತ್ತಿಪರ ನೃತ್ಯಪಟುವಲ್ಲದಿದ್ದರೂ, ಈಕೆ ಅದರಲ್ಲೂ ಯಶಸ್ಸು ಸಾಧಿಸಿದಾಕೆ. ಡ್ಯಾನ್ಸ್ ಬರುತ್ತಿದ್ದ ಕಾರಣಕ್ಕೆ ಮಲಯಾಳಂನ ಎವರ್ ಗ್ರೀನ್ ಹಿಟ್ ಸಿನೆಮಾ ‘ಪ್ರೇಮಂ’ ಚಿತ್ರದಲ್ಲಿ ‘ಮಲರ್’ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅಲ್ಲಿಂದಾಚೆಗೆ ಸಾಯಿ ಪಲ್ಲವಿ‌ ಹೊರಳಿ ನೋಡುವ ಪ್ರಮೇಯಗಳೇ ಎದುರಾಗಲಿಲ್ಲ.

ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದರೂ ಆಕೆಯ ಸ್ಪಷ್ಟ ನಿಲುವು ಸಿನಿಮಾ ರಂಗದ ಬಹುತೇಕರಿಗೆ ಅಪಥ್ಯವೂ ಸಹ. ಅದೇನೂ ಅಂತಹ ಗುಟ್ಟೂ ಅಲ್ಲ. ಹಾಗಂತ ಹಲವು ಒತ್ತಡಗಳ ನಡುವೆಯೂ ಸಾಯಿ ಪಲ್ಲವಿ ಪುರುಷ‌ ಪ್ರೌಢಿಮೆಯ ಸಿನೇಮಾ ಇಂಡಸ್ಟ್ರಿಗಳಲ್ಲಿ ತನ್ನ ನಿಲುವಿಗೆ ಬದ್ಧವಾಗಿರೋದು ಹಲವು ಬಾರಿ ಸುದ್ದಿಯೂ ಆಗಿರುವುದು ಹಳೇ ಸಮಾಚಾರ.

ನನ್ನ ತಂಗಿ ಪೂಜಾಳ ಮೈ ಬಣ್ಣ ಕಪ್ಪು. ನನ್ನದು ಬಿಳಿ. ಅದೆಲ್ಲ ಇಲ್ಲಿ ಅನಗತ್ಯ. ಮೈ ಬಣ್ಣ ನನಗೆಂದು ವಿಶೇಷ, ಆಕರ್ಷಕವೆನಿಸಿಲ್ಲ, ಅನಿಸುವುದೂ ಇಲ್ಲ. ಆಫ್ರಿಕನ್ನರ ಮೈ ಬಣ್ಣ ಸಹಜವಾಗಿಯೇ ಕಪ್ಪು. ಕಪ್ಪು ಹುಡುಗಿಯರನ್ನೇ ಅವರು ಸುಂದರಿ ಎಂದು ಕರೆಯಬೇಕು. ಭಾರತದಲ್ಲೂ ಅಷ್ಟೇ’ ಮೇಲೆ ಉಲ್ಲೇಖಿಸಿರುವ ಸಂದರ್ಶನ ಇದೆಯಲ್ಲ, ಅದರಲ್ಲೇ ಮುಂದುವರೆದು ಎರಡನೇ ಬಾರಿ ಇದೇ ಉತ್ತರ ಪುನರುಚ್ಚರಿಸಿದ್ದಳು ಸಾಯಿ ಪಲ್ಲವಿ.

ಬಹುಭಾಷಾ ನಟಿ ಪಾರ್ವತಿ ಮೆನನ್ ಬಿಟ್ಟರೆ ಇಂತಹ ವಿಚಾರಗಳಲ್ಲಿ ತೀರಾ ಇತ್ತೀಚೆಗೆ ಹೀಗೆ ಪುರುಷತ್ವದ ಕಪಾಳಕ್ಕೆ ಹೊಡೆದಂತೆ ನೇರವಾಗಿ ಮಾತನಾಡಿದ್ದು ಸಾಯಿ‌ಪಲ್ಲವಿ ಮಾತ್ರ. ಹದಿ ವಯದ ಯುವಕರಂತೂ ಸಾಯಿ ಪಲ್ಲವಿಯ ತೆಲುಗಿನ ‘ಫಿದಾ‘ ಮಲಯಾಳಂನ ‘ಕಾಳಿ‘ ಹಾಗೂ ‘ಅಧಿರನ್‘ ಸಿನಿಮಾಗಳಲ್ಲಿ ಅವಳ ಮುಗ್ಧ, ಮೋಹಕ ನಟನೆಯನ್ನು ಎಂದೂ ಮರೆಯಲಾರರು. ಅದೆಲ್ಲದರಾಚೆಗೆ ಅವಳ ವೈಚಾರಿಕ ನಿಲುವನ್ನು ಸಹ. ಇಂತಹ ಸಾಯಿ ಪಲ್ಲವಿಗೆ ಇಂದು (   ಮೇ 9 ನಿನ್ನೆ ) ಜನ್ಮದಿನ. ಇಂತಹ ನಟಿಯರ ಸಂಖ್ಯೆ ದುಪ್ಪಟ್ಟಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

Published

on

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ‌ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ. ಆಗ ಮಾತ್ರವೇ ಸದೃಢವಾದ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.

ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ‌ಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತ ಸಪ್ತಾಹದ ಅಡಿಯಲ್ಲಿ ‘ಭಾರತೀಯ ಸಮಾಜ ಹಾಗೂ ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪ್ರಾಮುಖ್ಯತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಗೆ ಎಲ್ಲಿಯವರೆಗೆ ಮುಕ್ತವಾದ ಪ್ರಾತಿನಿಧ್ಯ ಲಭಿಸುವುದಿಲ್ಲವೋ ಅಲ್ಲಿಯವರೆಗೆ ಎಷ್ಟೇ ಕಾಯ್ದೆ, ಕಾನೂನುಗಳು ಜಾರಿಯಾದರೂ ಮಹಿಳೆಯರ ಬದುಕಿನಲ್ಲಿ ಸಮಗ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಎಂ.ಆರ್. ಲೋಕೇಶ್ ಅವರು ಮಾತನಾಡಿ ಭಾರತೀಯ ಸಮಾಜದಲ್ಲಿ ಹೆಣ್ಣು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ ಎಂದರು.

ನೈತಿಕತೆ, ಸಂಸ್ಕಾರವು ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಶರಣರು ಗಂಡು-ಹೆಣ್ಣು ಎಂಬ ಬೇಧವನ್ನು ಮೆಟ್ಟಿ ನಿಂತು ‘ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡು ಅಲ್ಲ’ ಎಂಬ ತಾತ್ವಿಕತೆಯ ಮೂಲಕ ಸರ್ವರನ್ನು ಸಮಾನವಾಗಿ ಕಾಣುವಂತಹ ಸಮಾಜಕ್ಕಾಗಿ ಶ್ರಮಿಸಿದರು. ಭಾರತದ ನೆಲದಲ್ಲಿ ಶರಣರು, ದಾರ್ಶನಿಕರು ರೂಪಿಸಿಕೊಟ್ಟ ಮಾರ್ಗದಲ್ಲಿ ನಡೆದು ಇಂದಿನ ಮಹಿಳೆಯರು ಸಬಲರಾಗಬೇಕು ಎಂಬುದಾಗಿ ತಿಳಿಸಿದರು.

ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ.ಎ.ಡಿ.ಬಸವರಾಜ್ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬೋಧಕರಾದ ಹನುಮಂತಪ್ಪ, ಪ್ರಕಾಶ್, ಮಧುಸೂಧನ್, ರೆಹಮತ್ಬಿ, ಸಂದೀಪ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಗೋವಿಂದರೆಡ್ಡಿ ಅವರು ನಿರೂಪಿಸಿದರು. ವಿದ್ಯಾರ್ಥಿನಿ ಸೌಂದರ್ಯ ಸ್ವಾಗತಿಸಿದರು, ಯಶೋಧ, ಸಹನಾ ಪ್ರಾರ್ಥಿಸಿದರು, ರಕ್ಷಿತ ವಂದಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್

Published

on

ಸುದ್ದಿದಿನ,ದಾವಣಗೆರೆ : ಸಂವಿಧಾನ ಪೂರ್ವದ ಭಾರತದ ಸ್ಥಿತಿಗತಿ ಹಾಗೂ ಸಂವಿಧಾನದ ನಂತರ ಭಾರತದಲ್ಲಾದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೆಯೇ ಸಂವಿಧಾನ ರಚನೆ ಮಾಡುವ ಸಮಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮುಂದಿದ್ದ ಬಿಕ್ಕಟ್ಟುಗಳನ್ನು ಏಕಾಂತಗಿರಿ ಟ್ರಸ್ಟ್ ನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ತಿಳಿಸಿಕೊಟ್ಟರು.

ನಗರದ ಪ್ರೇರಣ ಮಕ್ಕಳ ಆರೈಕೆ ಕೇಂದ್ರದಲ್ಲಿ ವಿ.ಬಿ.ಪಿ ಫೌಂಡೇಷನ್ ಹಾಗೂ ಏಕಾಂತಗಿರಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ದೇವನಗರಿ ಸುದ್ಧಿದಿನ ಪತ್ರಿಕೆಯ ಸಂಪಾದಕರಾದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಕಳಶದಂತಿರುವ ಸಂವಿಧಾ‌ನ ಪೀಠಿಕೆಯ ಮಹತ್ವವನ್ನು ಪರಿಚಯಿಸುವ ಮೂಲಕ ಸಂವಿಧಾ‌ನ‌ ಪೀಠಿಕೆಯನ್ನು ಬೋಧಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಕೈ ಲೈನ್ ಸಂಸ್ಥೆಯ ಸಂಸ್ಥಾಪಕರಾದ ಬಾಲಚಂದ್ರ ಅವರು ಸಂವಿಧಾನ ಇರುವ ಕಾಲದಲ್ಲಿಯೇ ದಲಿತರು, ದಮನಿತರು ಹಾಗೂ ಮಹಿಳೆಯರ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಆದರೆ ಸಂವಿಧಾ‌ನವಿಲ್ಲದ ಭಾರತವನ್ನು ನಾವು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬುದಾಗಿ ತಿಳಿಸಿದರು.

ಪ್ರೇರಣ ಆರೈಕೆ ಕೇಂದ್ರದ ಶಿಕ್ಷಕರಾದ ಕುಮಾರ್ ಅವರು ಮಾತನಾಡಿ, ಸರ್ವರನ್ನು ಸಮಾನವಾಗಿ ಕಾಣುವ ಸಂವಿಧಾನವು ನಮ್ಮೆಲ್ಲರ ಪವಿತ್ರ ಗ್ರಂಥ ಎಂಬುದಾಗಿ ತಿಳಿಸಿದರು. ಕುಮಾರಿ ಪೂಜಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರೇರಣ ಸಂಸ್ಥೆಯ ಮಕ್ಕಳು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು

Published

on

  • ಪುರಂದರ್ ಲೋಕಿಕೆರೆ

ಸುದ್ದಿದಿನ, ದಾವಣಗೆರೆ : ಸರ್ಕಾರದ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಇಲಾಖೆಯ ಚಿತಾವಣೆಗೆ ಸೆಡ್ಡು ಹೊಡೆದು ಕೇವಲ 110-120 ದಿನಗಳ ಒಳಗಾಗಿಅಲ್ಪಾವಧಿ ತಳಿ ನಾಟಿ ಮಾಡಿ ಯಶಸ್ವಿಯಾಗಿ ಕಾಲುವೆ ನೀರು ಬಳಸಿಕೊಂಡು ಭತ್ತ ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ ದಾವಣಗೆರೆ ಭಾಗದ ರೈತರು.

ಬೇಸಿಗೆ ಕಾಲದಲ್ಲಿ ನಮಗೆ ತೋಟಗಳಿಗೆ ನೀರು ಹರಿಸಲು ಆನ್ ಆಪ್ ಪದ್ದತಿ ಮಾಡಿ ಎಂದು ಒತ್ತಡ ಹಾಕಿದ ಶಿವಮೊಗ್ಗ ಜಿಲ್ಲೆಯ ಅಡಿಕೆ ದಣಿಗಳಿಗೇ ಮುಖಕ್ಕೆ ಹೊಡೆದಂತೆ ಭತ್ತ ಬೆಳೆದು ತೋರಿಸಿರುವುದು ಶ್ಲಾಘನೀಯ.

100 ದಿನಗಳು ನೀರು ಹರಿಸಲು ಆದೇಶ ಹೊರಡಿಸಿ ರೈತರೆಲ್ಲ ನಾಟಿ ಮಾಡಿದ ಮೇಲೆ ಎಂದೂ ಗದ್ದೆ ನೀರು ಕಟ್ಟದ ಐಷಾರಾಮೀ ರಾಜಕಾರಣಿ ಪುತ್ರ ರತ್ನ ಸಚಿವ ಮಧು ಬಂಗಾರಪ್ಪ ಅಡಿಕೆ ತೋಟದ ರೈತರಿಗೆ ಮನ ಸೋತವರು.

ಕಲ್ಲು ಬಂಡೆ ಹೊಡೆದು ಭರ್ಜರಿ ಜೀವನ ಸಾಗಿಸುವ ಸಂಪನ್ಮೂಲ ಸಚಿವ, ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಬೇಸತ್ತ ರೈತ ರಸ್ತೆ ತಡೆದು ನೀರು ಕೊಡಿ ಎಂದು ಹೋರಾಟ ಮಾಡಿದರೂ ಕಿವಿ ಕೇಳೋಲ್ಲ ಎಂಬಂತೆ ವರ್ತಿಸಿದೆ ಆಡಳಿತ ಯಂತ್ರ.

ಆದರೆ ಈ ನಡುವೆ ಎರಡು ಭಾರಿ ಪ್ರಕೃತಿ ವರದಾನ ದಿಂದ ಭತ್ತ ಬೆಳೆಯುವ ಮೂಲಕ ಅನ್ನನೀಡುವ ರೈತ ಭತ್ತ ಬೆಳೆದು ಬಿಟ್ಟ. ಈ ಮೂರು ತಿಂಗಳ ಭತ್ತಕ್ಕೆ ನೀರು ಬಿಡುವುದು ಎಷ್ಟು ತ್ರಾಸದಾಯಕ. ಸರ್ಕಾರಗಳು ಯಾರು ಪರ ಎಂದು ಬೆತ್ತಲೆ ತೋರಿಸಿಕೊಂಡಿವೆ.

ಈಗಲಾದರೂ ಕಾಲ ಮಿಂಚಿಲ್ಲ ಕಟಾವು ಮಾಡಿದ ಭತ್ತ ಒಳ್ಳೆಯ ಗುಣಮಟ್ಟದ್ದು ಆಗಿದೆ.3000-3500 ರೂಂ ದರ ನಿಗದಿ ಮಾಡಿದರೆ ರೈತ ಸಾಲಶೂಲದಿಂದಮುಕ್ತಿ ಆಗಬಹುದು. ಭದ್ರಾ ನೀರು ಬೇಸಿಗೆ ಕಾಲದಲ್ಲಿ ಕೊಡುವುದೇ ಇಲ್ಲ ಎಂದು ಹೇಳಿರುವುದು ರೈತ ವಿರೋಧಿ ನೀತಿ.

ಗುಂಡುರಾವ್ ಕಾಲಾವಧಿಯಲ್ಲಿ 158ಅಡಿ ನೀರಿದ್ದರೂ ಭದ್ರಾ ನೀರು ಹರಿಸಲಾಗಿರುವ ದಾಖಲೆ ಇದೆ. ಕಡೆ ಪಕ್ಷ ಈ ಭಾರಿಯ ಭತ್ಖಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಇಲ್ಲವೇ ಯಾವ ರೈತರ ಬಳಿ ಭತ್ತ ಖರೀದಿ ನಿಲ್ಲಿಸಿ. ರೈತರೇ ಸ್ವಂತ ಮಾರುಕಟ್ಟೆ ಹುಡುಕಿಕೊಳ್ಳುವ ಪ್ರಯತ್ನ ಮಾಡಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending