Connect with us

ದಿನದ ಸುದ್ದಿ

ಇ-ಕಾಮರ್ಸ್ ಡ್ರೋಣ್ ಬಳಕೆಗೆ ಅನುಮತಿ; ಇಂಗ್ಲಿಷ್ ಗೊತ್ತಿದ್ರೆ ಮಾತ್ರ ಪರ್ಮಿಷನ್

Published

on

ಸುದ್ದಿದಿನ ಡೆಸ್ಕ್: ಆನ್‌ಲೈನ್‌ನಲ್ಲಿ ಏನಾದ್ರು ಆರ್ಡರ್ ಮಾಡಿದರೆ ಇದನ್ನು ನಿಮಗೆ ತಲುಪಿಸಲು ಇನ್ಮುಂದೆ ನೀವು ಮನೆ ಬಾಗಿಲಿನಲ್ಲಿ ಡೆಲಿವರಿ ಬಾಯ್ ಬದಲು

ಡ್ರೋಣ್.ಗಾಗಿ ಕಾಯಬೇಕಾಗುತ್ತದೆ. ನಾಗರಿಕ ವಿಮಾನಯಾನ ಇಲಾಖೆಯು ಡ್ರೋಣ್ ನೀತಿ ಜಾರಿಗೆ ತಂದಿದ್ದು, ಕಮರ್ಷಿಯಲ್ ಬಳಕೆಗಾಗಿ ಅವಕಾಶ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳುವ ಇ- ಕಾಮರ್ಸ್ ಕಂಪನಿಗಳು ಡ್ರೋಣ್ ಬಳಸಿಕೊಂಡು ತಮ್ಮ ಉತ್ಪನ್ನ ಮಾರಾಟ ಮಾಡುವ ಸಾಧಗಯತೆ ಹೆಚ್ಚಾಗಿದೆ. ಇದರೊಂದಿಗೆ ಶೀಘ್ರ ಗ್ರಾಹಕರ ತಲುಪಿ ತಮ್ಮ ವಹಿವಾಟು ಹೆಚ್ಚಿಸಿಕೊಳ್ಳಲಿವೆ.

ಕೇಂದ್ರ ಸರ್ಕಾರ ವಿಮಾನಯಾನ ಇಲಾಖೆ ಇ- ಕಾಮರ್ಸ್ ಕಂಪನಿಗಳು ಡ್ರೋಣ್ ಬಳಕೆಯ ಯೋಜನೆಗೆ ಸಹಿ ಹಾಕಿದ್ದು, ಡಿಸೆಂಬರ್ ನಂತರ ಕಂಪನಿಗಳು ಇದರ ಪಡರದುಕೊಳ್ಳಲಿವೆ.

ಇಂಗ್ಲಿಷ್ ಗೊತ್ತಿದ್ರೆ ಮಾತ್ರ ಪರ್ಮಿಷನ್

ಸರ್ಕಾರ ರಚಿಸಿರುವ ಡ್ರೋಣ್ ನೀತಿಯಲ್ಲಿ ಡ್ರೋಣ್ ಗಳನ್ನು ಐದು ಕ್ಯಾಟಗರಿಗಳಾಗಿ ವಿಂಗಡಿಸಿವೆ. ನ್ಯಾನೋ ಕ್ಯಾಟಗರಿಯಲ್ಲಿ 250ಗ್ರಾಂರಿಂದ 150 ಕೆಜಿ ತೂಕದವರೆಗಿನ ಡ್ರೋಣ್, ಮಕ್ಕಳು ಆಟಿಕೆಯಾಗಿ ಬಳಸುತ್ತಿರುವ 250ರಿಂದ 2 ಕೆಜಿ ತೂಕದ ಮೈಕ್ರೋ ಡ್ರೋಣ್ ಗಳನ್ನು ಬಳಸಿಕೊಳ್ಳಲು ಅವಕಾಶ ನೀಡಿದೆ. ಎಲ್ಲ ಡ್ರೋಣ್ ಬಳಕೆದಾರರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಯುನಿಕ್ ಐಡೆಂಟಿಫಿಕೇಷನ್ ನಂಬರ್ (UIN) ನೀಡಲಿದೆ. ಡ್ರೋಣ್ ಬಳಕೆದಾರರಿಗೆ 18 ವರ್ಷ ವಯಸ್ಸಾಗಿರಬೇಕು. ಎಸ್ಸೆಸ್ಸೆಲ್ಸಿ ಪಾಸ್ ಆಗಿದ್ದು, ಇಂಗ್ಲಿಷ್ ಜ್ಞಾನ ಹೊಂದಿರಬೇಕು.

ನ್ಯಾನೋ, ಮೈಕ್ರೋ ವಿಧದಲ್ಲಿ ಐದು ಕ್ಯಾಟಗರಿ

ರಿಮೋಟ್ ಪೈಲೆಟೆಡ್ ಏರ್‌ಕ್ರಾಫ್ಟ್ ಸಿಸ್ಟಮ್ (RPAS) ಚಾಲಿತ ನ್ಯಾನೋ ಡ್ರೋಣ್.ಗಳಿಗೆ ಅನ್ ಮ್ಯಾನ್ಡ್ ಏರ್‌ಕ್ರಾಫ್ಟ್ ಆಪರೇಟರ್ ಪರ್ಮಿಟ್ (UAOP) ಪರವಾನಿಗೆ ಅಗತ್ಯವಿಲ್ಲ. 50 ಅಡಿ ಎತ್ತರದಲ್ಲಿ ಹಾರಾಟ ಮಾಡುವಂಥವು. 200 ಅಡಿ ಎತ್ತರದಲ್ಲಿ ಕಣ್ಣಿಗೆ ಕಾಣುವ ಅಂತರದಲ್ಲಿ ಹಗಲು ವೇಳೆ ಹಾರಾಟ ಮಾಡುವ ಡ್ರೋಣ್ ಗಳಿಗೆ ಸೆಕ್ಯುರಿಟಿ ಮತ್ತು ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯ ಪರವಾನಗಿ ಅಗತ್ಯವಿದೆ. 400ಅಡಿ ಎತ್ತರದವರೆಗೆ ಮಾತ್ರ ಹಾರಾಟ ಮಾಡಬಹುದಾಗಿದೆ.

ನೋ ಫ್ಲೈಯಿಂಗ್ ಜೋನ್ ಹಾರಾಡುವಂತಿಲ್ಲ

ದೇಶದಲ್ಲಿ ಕೆಲವೊಂದು ಪ್ರದೇಶಗಳನ್ನು ‘ನೋ ಫ್ಲೈಯಿಂಗ್ ಜೋನ್’ ಎಂದು ಗುರುತಿಸಿರುವ ಕಡೆ ಹಾರಾಟ ಮಾಡುವಂತಿಲ್ಲ. ಅವುಗಳೆಂದರೆ, ಏರ್ಪೋರ್ಟ್, ಅಂತಾರಾಷ್ಟ್ರೀಯ ಗಡಿಭಾಗ, ದೆಹಲಿಯ ವಿಜಯ್ ಚೌಕ್, ಎಲ್ಲಾ ರಾಜ್ಯಗಳ ರಾಜ್ಯ ಕಾರ್ಯದರ್ಶಿಗಳ ಕಚೇರಿ, ಸ್ಟ್ರಟೆಜಿಕ್ ಲೋಕೇಷನ್, ಮಿಲಿಟರಿ ಸ್ಥಳಗಳಲ್ಲಿ ಹಾರಾಟ ಮಾಡುವಂತಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಶಿಷ್ಯವೇತನಕ್ಕೆ ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಪ್ರಸಕ್ತ ಸಾಲಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಪರಿಶಿಷ್ಟ ಜಾತಿ ಕಾನೂನು ಪದವೀಧರರಿಗೆ ಶಿಷ್ಯವೇತನ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಜುಲೈ 15 ಕೊನೆಯದಿನವಾಗಿರುತ್ತದೆ. ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಂಬಂಧಿಸಿದ ತಾಲ್ಲೂಕುಗಳ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ www.sw.kar.nic.in ಅಥವಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿ ಸಂಪರ್ಕಿಸಲು ಉಪನಿರ್ದೇಶಕ ನಾಗರಾಜ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗೃಹಜ್ಯೋತಿ ಆಗಸ್ಟ್ 1 ರಂದು ಜಾರಿಗೆ ಸಿದ್ಧತೆ : ಮುಖ್ಯಮಂತ್ರಿ ಸಿದ್ದರಾಮಯ್ಯ

Published

on

ಸುದ್ದಿದಿನ, ಬೆಂಗಳೂರು: ರಾಜ್ಯದಲ್ಲಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ’ಗೃಹಜ್ಯೋತಿ’ ಯೋಜನೆ ಆಗಸ್ಟ್ 1 ರಂದು ಹಾಗೂ ಮನೆ ಯಜಮಾನಿಗೆ 2ಸಾವಿರ ರೂಪಾಯಿ ಅವರ ಖಾತೆಗೆ ಹಾಕುವ ’ಗೃಹ ಲಕ್ಷ್ಮಿ’ ಯೋಜನೆಗೆ ಆಗಸ್ಟ್ 17 ಅಥವಾ 18 ರಂದು ಚಾಲನೆ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಗೃಹ ಜ್ಯೋತಿ ಯೋಜನೆ ಹಾಗೂ ಗೃಹ ಲಕ್ಷ್ಮಿ ಯೋಜನೆ ಕುರಿತು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅತ್ಯಂತ ಸರಳಗೊಳಿಸಬೇಕು. ಅನಗತ್ಯ ಮಾಹಿತಿ, ದಾಖಲೆಗಳನ್ನು ಕೇಳಬಾರದು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಜೊತೆಗೆ ಅರ್ಜಿಗಳನ್ನು ತಿರಸ್ಕರಿಸಿದಲ್ಲಿ, ಅದು ಸಕಾರಣವಾಗಿರಬೇಕು ಎಂದು ಅವರು ಹೇಳಿದರು. ಎಲ್ಲ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗುವ ಕಾರಣ, ಅಪಾರ ಪ್ರಮಾಣದ ದತ್ತಾಂಶ ಸಲ್ಲಿಕೆಗೆ ಅನುಗುಣವಾಗಿ ಸೇವಾ ಸಿಂಧು ಪೋರ್ಟಲ್‌ನ ಸಾಮರ್ಥ್ಯ ವೃದ್ಧಿಸುವಂತೆ ಇ-ಆಡಳಿತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಗೃಹಜ್ಯೋತಿ, ಉಚಿತ ವಿದ್ಯುತ್ ಯೋಜನೆ ಬಾಡಿಗೆದಾರರಿಗೂ ಅನ್ವಯಿಸುತ್ತಿದ್ದು, ಯೋಜನೆಯ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನಲ್ಲಿಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಗೃಹಲಕ್ಷ್ಮಿಯ ಯೋಜನೆಯ ಲಾಭ ಪಡೆಯಲು ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ತೆರಿಗೆ ಪಾವತಿಸುವವರು ಹಾಗೂ ಜಿಎಸ್‌ಟಿ ನೋಂದಣಿ ಮಾಡಿಕೊಂಡಿರುವವರು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ; ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಉಚಿತ ಪ್ರಯಾಣ

Published

on

ಸುದ್ದಿದಿನ ಡೆಸ್ಕ್ : ಇದೇ 12 ರಿಂದ 19 ರವರೆಗೆ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. “ಪ್ರವೇಶ ಪತ್ರ” ತೋರಿಸಿ, ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending