ದಿನದ ಸುದ್ದಿ
ಭರ್ಜರಿಯಾಗಿ ಮುಕ್ತಾಯಗೊಂಡ ಸೆಲಿಬ್ರಿಟಿ ಗ್ರೂಮಿಂಗ್ ಎಕ್ಸ್ಪರ್ಟ ಜ್ಯೊತ್ಸನಾ ವೆಂಕಟೇಶ್ ರ MR ಮತ್ತು Mrs ಪ್ರೊಫೆಷನಲ್ಸ್ ಸ್ಪರ್ಧೆ..!

ಸುದ್ದಿದಿನ ಡೆಸ್ಕ್ |ಜುಲೈ 14 ರಂದು ಸಿಲಿಕಾನ್ ಸಿಟಿಯ ಬೆಂಗಳೂರು ಸೆಂಟ್ರಲ್ ಸೆಲಿಬ್ರಿಟಿ ಗಳಿಂದ ಕಲೆ ಕಟ್ಟಿತ್ತು. ಸಿನಿ ತಾರೆಯರು, ರೇಡಿಯೋ ಜಾಕಿ ..ಜಿಮ್ ಮಾಸ್ಟರ್..ಹೀಗೆ ಹಲವಾರು ಸೆಲಿಬ್ರಿಟಿ ಗಳು ಹಾಗೇ ಇನ್ನೂರ ಐವತ್ತು ಪ್ರೇಕ್ಷಕರು ಕಣ್ಣು ತುಂಬಿಸಿ ಕೊಂಡರು. ಸೆಲಿಬ್ರಿಟಿ ಸಿನಿ ತಾರೆ ನೇಹಾ ಸಕ್ಸೇನಾ.. ರೇಡಿಯೋ ಜಾಕಿ ತುಹೀಮ್ , ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮುಖ್ಯ ಜಡ್ಜ್ ಗಳಾಗಿ ಶೃತಿ ಚೇತನ್, ಗಾಯತ್ರಿ ಸುರೇಶ್, ರೇಖಾ ರೆಡ್ಡಿ, ಸಂತೋಷ ರೆಡ್ಡಿ, ಪವನ್ ಶೆಟ್ಟಿ, ಸೇರಿದಂತೆ ಜೆ.ಜೆ.ಫಿಟ್ ನೆಸ್ ಮತ್ತು ಗ್ರೋಮಿಂಗ್ ವ್ಯವಸ್ಥಾಪಕರು ಜ್ಯೊತ್ಸನಾ ವೆಂಕಟೇಶ್ ಮತ್ತು ವೆಂಕಟೇಶ್ ನಾಯ್ಡು ಅವರು ಉಪಸ್ಥಿತರಿದ್ದರು.
ಇವರೆಲ್ಲರೂ ಬಂದಿದ್ದು ಸದಾ ಕೆಲಸ-ಕಚೇರಿ ಮನೆ ಅಂತ ಬಿಜಿಯಾಗಿರುವ ಸಾಫ್ಟವೇರ್ ಟೆಕ್ಕಿ , ಡಾಕ್ಟರು, ಲಾಯರ್, ಹೀಗೇ ಹಲವಾರು ರಂಗಗಳಿಂದ ಬಂದ ಸ್ಪರ್ಧಿಗಳು ಸಖತ್ ಆಗಿ ರಾಂಪ್ ವಾಕ್ ಮಾಡುವುದವನ್ನ ನೋಡೋಕೆ . ಏನು ಟೆಕ್ಕಿ-ಡಾಕ್ಟರ್ ರಾಂಪ್ ವಾಕ್ಯ ಅಂತ ಹುಬ್ಬೇರಿಸುತ್ತೀರಾ.. ಈ ಸ್ಟೋರಿ ಓದಿ.. ಈಗ ಎಲ್ಲಾ ಪ್ರೊಫೆಷನಲ್ಸ್ ಗಳನ್ನ ಗ್ರೂಮ್ ಮಾಡಿ ರಾಂಪ್ ಮೇಲೆ ನಡೆಸಿದ ಇವರಿಗೆ ತರಬೇತಿ ನೀಡಿದ ಕೀರ್ತಿ ಬೆಂಗಳೂರು ಚೆಲುವೆ ಜ್ಯೊತ್ಸನಾ ವೆಂಕಟೇಶ್ ಗೆ ಸೇರುತ್ತದೆ.
ಜ್ಯೊತ್ಸನಾ ವೆಂಕಟೇಶ್ ಫಿಟ್ ನೆಸ್ ಮತ್ತು ಗ್ರೂಮಿಂಗ್ ಎಕ್ಸ್ಪ್ರ್ಟ್ ಸಂಸ್ಥೆ ಆಯೋಜಿಸಿದ್ದ MR AND MRS PROFESSIONALS ಸ್ಪರ್ಧೆಯಲ್ಲಿ ಹಲವಾರು ರಂಗದ ಉದ್ಯೋಗಪತಿಗಳು, ಟೆಕ್ಕಿ, ಸಿಂಗರ್, ಡಾಕ್ಟರು, ಬಾಡಿಗೆ ಬಿಲ್ಡರ್ ಹೀಗೆ ಹಲವಾರು ಸ್ಪರ್ಧಿಗಳು ಸ್ಟೇಜ್ ಮೇಲೆ ಮಿಂಚಿದರು.ಬೆಂಗಳೂರು ಸೆಂಟ್ರಲ್ ಮತ್ತು ಪ್ರತಿಷ್ಠಿತ ಕುಬೇರನ್ ಸಂಸ್ಥೆ ಈ ಸ್ಪರ್ಧೆ ಯ ಪ್ರಾಯೋಜಕರಾಗಿದ್ದರು.2014ರಲ್ಲಿ ತನ್ನಂತೆಯೇ ಬ್ಯೂಟಿ ಪೆಜೆಂಟ್ ಗಳಲ್ಲಿ ಭಾಗವಹಿಸಲು ಇಚ್ಚಿಸುವ ಮಹಿಳೆಯರಿಗಾಗಿ “ಜ್ಯೊತ್ಸನಾ ವೆಂಕಟೇಶ್ ಫಿಟ್ ನೆಸ್ ಮತ್ತು ಗ್ರೂಮಿಂಗ್ ಸಂಸ್ಥೆಯನ್ನ ಪ್ರಾರಂಭಿಸಿದರು. ಹಲವಾರ ಸಾಧಕರಿಗೆಗುರುವಾಗಿ,ಮಾರ್ಗದರ್ಶಕಿಯಾಗಿ ಗೆಲುವಿನ ಹಾದಿ ಹಿಡಿಯಲು ಪ್ರೇರಣೆ ಯಾದರು. ಇವರಿಂದ ಗ್ರೂಮಿಂಗ್ ಪಡೆದು ಗೆಲುವಿನ ಶಿಖರವೇರಿದವರ ಪಟ್ಟಿ ಸಾಕಷ್ಟಿದೆ.
ಸ್ಪರ್ಧೆಯಲ್ಲಿ
ಸಾಫ್ಟ್ ವೇರ್ ಇಂಜಿನಿಯರ್ ರಮ್ಯಾ ಹಾಗೂ ಮನ್ಸೂರ್ Mr ಮತ್ತು Mrs ಪ್ರೊಫೆಷನಲ್ಸ್ ಸ್ಪರ್ಧೆ ಯ ಕಿರೀಟ ಮೂಡಿ ಗೇರಿಸಿಕೊಂಡರು.
ಶಿಲ್ಪ ಮತ್ತು ಕೃಷ್ಣ ಪ್ರಸಾದ್ ಮೊದಲನೇ ರನ್ನರ್ ಅಪ್ ಆಗಿ ಆಯ್ಕೆ ಆದರೆ, ಸಾಂಬಸಿವನ್ ಮತ್ತು ನಿಷಾ ಎರಡನೇ ರನ್ನರ್ ಅಪ್ ಆಗಿ ಆಯ್ಕೆ ಆದರು.
ಒಟ್ಟಾರೆ ಸಿಲಿಕಾನ್ ಸಿಟಿಯ ಮಂದಿ ಈ ವರ್ಣಮಯ ರಸಸಂಜೆಯಲ್ಲಿ ಸಖತ್ ಎಂಜಾಯ್ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986815401

ದಿನದ ಸುದ್ದಿ
ಶಿಷ್ಯವೇತನಕ್ಕೆ ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಪ್ರಸಕ್ತ ಸಾಲಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಪರಿಶಿಷ್ಟ ಜಾತಿ ಕಾನೂನು ಪದವೀಧರರಿಗೆ ಶಿಷ್ಯವೇತನ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜುಲೈ 15 ಕೊನೆಯದಿನವಾಗಿರುತ್ತದೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಂಬಂಧಿಸಿದ ತಾಲ್ಲೂಕುಗಳ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ www.sw.kar.nic.in ಅಥವಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿ ಸಂಪರ್ಕಿಸಲು ಉಪನಿರ್ದೇಶಕ ನಾಗರಾಜ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗೃಹಜ್ಯೋತಿ ಆಗಸ್ಟ್ 1 ರಂದು ಜಾರಿಗೆ ಸಿದ್ಧತೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಸುದ್ದಿದಿನ, ಬೆಂಗಳೂರು: ರಾಜ್ಯದಲ್ಲಿ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡುವ ’ಗೃಹಜ್ಯೋತಿ’ ಯೋಜನೆ ಆಗಸ್ಟ್ 1 ರಂದು ಹಾಗೂ ಮನೆ ಯಜಮಾನಿಗೆ 2ಸಾವಿರ ರೂಪಾಯಿ ಅವರ ಖಾತೆಗೆ ಹಾಕುವ ’ಗೃಹ ಲಕ್ಷ್ಮಿ’ ಯೋಜನೆಗೆ ಆಗಸ್ಟ್ 17 ಅಥವಾ 18 ರಂದು ಚಾಲನೆ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಗೃಹ ಜ್ಯೋತಿ ಯೋಜನೆ ಹಾಗೂ ಗೃಹ ಲಕ್ಷ್ಮಿ ಯೋಜನೆ ಕುರಿತು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅತ್ಯಂತ ಸರಳಗೊಳಿಸಬೇಕು. ಅನಗತ್ಯ ಮಾಹಿತಿ, ದಾಖಲೆಗಳನ್ನು ಕೇಳಬಾರದು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಜೊತೆಗೆ ಅರ್ಜಿಗಳನ್ನು ತಿರಸ್ಕರಿಸಿದಲ್ಲಿ, ಅದು ಸಕಾರಣವಾಗಿರಬೇಕು ಎಂದು ಅವರು ಹೇಳಿದರು. ಎಲ್ಲ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗುವ ಕಾರಣ, ಅಪಾರ ಪ್ರಮಾಣದ ದತ್ತಾಂಶ ಸಲ್ಲಿಕೆಗೆ ಅನುಗುಣವಾಗಿ ಸೇವಾ ಸಿಂಧು ಪೋರ್ಟಲ್ನ ಸಾಮರ್ಥ್ಯ ವೃದ್ಧಿಸುವಂತೆ ಇ-ಆಡಳಿತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಗೃಹಜ್ಯೋತಿ, ಉಚಿತ ವಿದ್ಯುತ್ ಯೋಜನೆ ಬಾಡಿಗೆದಾರರಿಗೂ ಅನ್ವಯಿಸುತ್ತಿದ್ದು, ಯೋಜನೆಯ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನಲ್ಲಿಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಗೃಹಲಕ್ಷ್ಮಿಯ ಯೋಜನೆಯ ಲಾಭ ಪಡೆಯಲು ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ತೆರಿಗೆ ಪಾವತಿಸುವವರು ಹಾಗೂ ಜಿಎಸ್ಟಿ ನೋಂದಣಿ ಮಾಡಿಕೊಂಡಿರುವವರು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ; ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಉಚಿತ ಪ್ರಯಾಣ

ಸುದ್ದಿದಿನ ಡೆಸ್ಕ್ : ಇದೇ 12 ರಿಂದ 19 ರವರೆಗೆ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. “ಪ್ರವೇಶ ಪತ್ರ” ತೋರಿಸಿ, ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್5 days ago
ರಣ ಬೇಟೆಗಾರ ‘ಕೆನ್ನಾಯಿ’ ವಿನಾಶವಾದ ಕತೆ..!
-
ದಿನದ ಸುದ್ದಿ7 days ago
ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಬಿತ್ತನೆ ಬೀಜ ಕೊರತೆಯಾಗದಂತೆ ರಾಜ್ಯಾದ್ಯಂತ ಕ್ರಮ
-
ದಿನದ ಸುದ್ದಿ7 days ago
ಡಿ.ಇ.ಎಲ್.ಇ.ಡಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ನಾಳೆ ದಾವಣಗೆರೆಗೆ ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ5 days ago
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರ
-
ದಿನದ ಸುದ್ದಿ5 days ago
ಜೂನ್ 8 ರಿಂದ ಕೋಳಿ ಸಾಕಾಣಿಕೆ ತರಬೇತಿ ಶಿಬಿರ
-
ದಿನದ ಸುದ್ದಿ7 days ago
ದಾವಣಗೆರೆ | ಶತಮಾನದ ಕೆ.ಆರ್.ಪೇಟೆ ಸರ್ಕಾರಿ ಶಾಲೆಗೆ ಡಿಸಿ ಶಿವಾನಂದ ಕಾಪಶಿ ಭೇಟಿ ; ಕಟ್ಟಡದ ಗುಣಮಟ್ಟದ ವರದಿ ನೀಡಲು ಇಂಜಿನಿಯರ್ಗೆ ಸೂಚನೆ
-
ದಿನದ ಸುದ್ದಿ5 days ago
ಒಡಿಶಾದಲ್ಲಿ ಸಿಲುಕಿರುವ ಕನ್ನಡಿಗರು ಇಂದು ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮನ