Connect with us

ಲೈಫ್ ಸ್ಟೈಲ್

ಕ್ರಿಸ್ ಮಸ್ ಗೆ ಮನೆಯಲ್ಲೇ ‘ಹನಿ ಕೇಕ್’ ಮಾಡಿ ನೋಡಿ

Published

on

ಸುದ್ದಿದಿನ ಡೆಸ್ಕ್ : ಮಾರುಕಟ್ಟೆಗಳಲ್ಲಿ ಕ್ರಿಸ್‍ಮಸ್ ಟ್ರೀಗಳ ಅಲಂಕಾರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ. ಹಬ್ಬ ಅಂದಮೇಲೆ ಮನೆಯಲ್ಲಿ ಸಿಹಿ ಇರಲೇಬೇಕು. ಕ್ರಿಸ್‍ಮಸ್ ಅಂದ್ರೆ ಕೇಕ್ ಬೇಕೇ ಬೇಕು.

ಇತ್ತೀಚಿನ ದಿನಗಳಲ್ಲಿ ಗ್ರಾಹಕರನ್ನು ಸೆಳೆಯಲು ಕೆಲ ವ್ಯಾಪಾರಿ ಅಪಾಯಕಾರಿ ಕೆಮಿಕಲ್ ಬಳಸಿ ನೋಡಲು ಚೆನ್ನಾಗಿ ಕಾಣುವ ಕೇಕ್ ತಯಾರಿಸಿ ಮಾರಟಕ್ಕೀಡುತ್ತಾರೆ. ಕೆಮಿಕಲ್ ಮಿಶ್ರಿತ ಕೇಕ್ ತಿನ್ನುವ ಬದಲು ಮನೆಯಲ್ಲಿಯೇ ತಯಾರಿಸಿ ಕ್ರಿಸ್‍ಮಸ್ ಆಚರಿಸಿ.

ಹನಿ ಕೇಕ್ ಮಾಡಲು ಬೇಕಾಗುವ ಸಾಮಾಗ್ರಿಗಳು

  • ಮೈದಾ ಹಿಟ್ಟು – 1 ಕಪ್
  • ಜೋಳದ ಹಿಟ್ಟು – 1.5 ಸ್ಪೂನ್
  • ಉಪ್ಪು – ಚಿಟಿಕೆ
  • ಬೇಕಿಂಗ್ ಪೌಡರ್, ಸೋಡಾ – 1 ಸ್ಪೂನ್
  • ಕಂಡೆನ್ಡ್ಸ್ ಮಿಲ್ಕ್ – 200 ಎಂಎಲ್
  • ಸಕ್ಕರೆ ಪುಡಿ – 3 ಸ್ಪೂನ್
  • ವೆನಿಲಾ ಎಸೆನ್ಸ್ – 1 ಸ್ಪೂನ್
  • ಅಡುಗೆ ಎಣ್ಣೆ – ಅರ್ಧ ಕಪ್
  • ಹಾಲು – ಅರ್ಧ ಕಪ್
  • ವೆನಿಗರ್ – ಅರ್ಧ ಸ್ಪೂನ್
  • ಸಕ್ಕರೆ – ಅರ್ಧ ಕಪ್
  • ಜೇನುತುಪ್ಪ – 2-3 ಸ್ಪೂನ್
  • ಜಾಮ್ – ಅರ್ಧ ಕಪ್
  • ಒಣಕೊಬ್ಬರಿ ಪೌಡರ್ – ಅರ್ಧ ಕಪ್

ಮಾಡುವ ವಿಧಾನ

  1. ಮೊದಲು ಒಂದು ಬೌಲ್‍ಗೆ ಮೈದಾ ಹಿಟ್ಟು, ಜೋಳದ ಹಿಟ್ಟು, ಚಿಟಿಕೆ ಉಪ್ಪು, ಬೇಕಿಂಗ್ ಪೌಡರ್, ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ.
  2. ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಕಂಡೆನ್ಡ್ಸ್ ಮಿಲ್ಕ್, 1 ಸ್ಪೂನ್ ಸಕ್ಕರೆ ಪುಡಿ, 1 ಸ್ಪೂನ್ ವೆನಿಲಾ ಎಸೆನ್ಸ್ ಸೇರಿಸಿ ಮಿಕ್ಸ್ ಮಾಡಿ.
  3. ಮಿಶ್ರಣಕ್ಕೆ ಅರ್ಧ ಕಪ್ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ. ಈಗ ಮೊದಲು ಮಿಶ್ರಣ ಮಾಡಿದ ಮೈದಾ, ಜೋಳದ ಹಿಟ್ಟು ಮಿಶ್ರಣವನ್ನು ಸೇರಿಸಿ ಹಾಲು ಸೇರಿಸಿ ಮಿಕ್ಸ್ ಮಾಡಿ.
  4. ಮಿಶ್ರಣದ ಬ್ಯಾಟರ್‍ನಲ್ಲಿ ಯಾವುದೇ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿ. ಮಿಶ್ರಣ ತೀರ ಗಟ್ಟಿಯಾಗಿ, ತೆಳ್ಳಗೂ ಇರಬಾರದು.
  5. ಈಗ ಅರ್ಧ ಸ್ಪೂನ್ ವೆನಿಗರ್ ಸೇರಿಸಿ ಮಿಕ್ಸ್ ಮಾಡಿಟ್ಟುಕೊಳ್ಳಿ.
  6. ಈಗ ಒಂದು ಕೇಕ್ ಪ್ಯಾನ್‍ಗೆ ಎಣ್ಣೆ ಸವರಿ ಕೇಕ್ ಪೇಪರ್ ಹಾಕಿ. ಅದರ ಮೇಲೆ ಮಿಶ್ರಣವನ್ನು ಸಮ ಪ್ರಮಾಣದಲ್ಲಿ ಹಾಕಿ.
  7. ಈಗ ಪ್ರಿಹೀಟ್ ಆಗಿರುವ ಓವನ್‍ನಲ್ಲಿ ಪ್ಯಾನ್ ಇಟ್ಟು 180 ಡಿಗ್ರಿಯಲ್ಲಿ 35 ನಿಮಿಷ ಬೇಯಿಸಿ.
  8. ಕೇಕ್ ಬೇಯುವಷ್ಟರಲ್ಲಿ ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟು ಅರ್ಧ ಕಪ್ ಸಕ್ಕರೆ, ಅರ್ಧ ಕಪ್ ನೀರು ಸೇರಿಸಿ. ಕರಗುವ ತನಕ ಕಾಯಿಸಿ. ದಪ್ಪ ಪಾಕ ಬೇಡ.
  9. ಸಕ್ಕರೆ ಕರಗಿದ ಮೇಲೆ ಕೆಳಗಿಳಿಸಿ. ಸ್ವಲ್ಪ ಆರಿದ ಮೇಲೆ 2-3 ಸ್ಪೂನ್ ಜೇನು ಸೇರಿಸಿ.
  10. ಬಳಿಕ ಒಂದು ನಾನ್‍ಸ್ಟಿಕ್ ಪ್ಯಾನ್‍ಗೆ ರೆಡಿ ಇರುವ ಜಾಮ್ ತೆಗೆದುಕೊಳ್ಳಿ. (ಕಿಸಾನ್ ಜಾಮ್, ಫ್ರೂಟ್ ಜಾಮ್ ಯಾವುದಾದರೂ ಬಳಸಬಹುದು.
  11. ಒಂದು ಕಪ್‍ನಷ್ಟು ಜಾಮ್‍ಗೆ 1 ಸ್ಪೂನ್ ಪುಡಿ ಸಕ್ಕರೆ ಸೇರಿಸಿ. 2 ನಿಮಿಷ ಬೇಯಿಸಿ. ಜಾಮ್ ಲಿಕ್ವಿಡ್ ರೂಪಕ್ಕೆ ಬಂದಾಗ ಕೆಳಗಿಳಿಸಿ.
  12. ಈಗ ಓವನ್‍ನಲ್ಲಿಟ್ಟ ಕೇಕ್ ಹೊರ ತೆಗೆದು ಒಂದು ಗಾರ್ನಿಷಿಂಗ್ ಪ್ಲೇಟ್‍ಗೆ ಹಾಕಿ.
  13. ಕೇಕ್‍ನ ಅಂಚುಗಳನ್ನು ಕಟ್ ಮಾಡಿ.
  14. ಕೇಕ್ ಮೇಲ್ಭಾಗದಲ್ಲಿ ಫೋರ್ಕ್‍ನಿಂದ ಸಣ್ಣ ಸಣ್ಣ ರಂಧ್ರಗಳನ್ನ ಮಾಡಿ.
  15. ಈಗ ಆ ರಂಧ್ರಗಳ ಮೂಲಕ ಕೇಕ್‍ಗೆ ಸಕ್ಕರೆ ಪಾಕವನ್ನು ಹಾಕಿರಿ.
  16. ಬಳಿಕ ಮೇಲ್ಭಾಗದಲ್ಲಿ ಕರಗಿಸಿಟ್ಟ ಜಾಮ್ ಅನ್ನು ಲೇಪಿಸಿ.
  17. ಈಗ ಚಿಕ್ಕ ಚಿಕ್ಕಿ ಭಾಗವಾಗಿ ಕೇಕ್ ಅನ್ನು ಕತ್ತರಿಸಿ, ಮಿಕ್ಕ ಸಕ್ಕರೆ ಪಾಕದಲ್ಲಿ ಕೇಕ್‍ಅನ್ನು ಡಿಪ್ ಮಾಡಿ.
  18. ಬಳಿಕ ಜಾಮ್ ಭಾಗವನ್ನು ಒಣಕೊಬ್ಬರಿ ಪೌಡರ್ ನಲ್ಲಿ ಡಿಪ್ ಮಾಡಿದ್ರೆ ಹನಿ ಕೇಕ್ ರೆಡಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

Photo Gallery | ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025

Published

on

Continue Reading

ದಿನದ ಸುದ್ದಿ

ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

Published

on

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.

ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.

ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಮತ್ತಿನ ಕುಣಿಕೆ

Published

on

  • ಗುರು ಸುಳ್ಯ

ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ

ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ

ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…

ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ

ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ

ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)

ಕವಿ : ಗುರು ಸುಳ್ಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending