Connect with us

ದಿನದ ಸುದ್ದಿ

ಚುನಾವಣೆ | ದಾವಣಗೆರೆ ಜಿಲ್ಲೆಯ ಕ್ಷೇತ್ರವಾರು ಕಂಪ್ಲೀಟ್ ಡೀಟೆಲ್ಸ್

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯ7 ಕ್ಷೇತ್ರಗಳಿಂದ 6 ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹಾಗೂ ಒಬ್ಬರು ಬಿಜೆಪಿಯಿಂದ ಜಯ ಗಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

ಜಯಗಳಿಸಿದವರಲ್ಲಿ ಜಗಳೂರು ಕ್ಷೇತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ದೇವೇಂದ್ರಪ್ಪ, ಹರಿಹರ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ಪಿ.ಹರೀಶ್, ದಾವಣಗೆರೆ ಉತ್ತರ ಕಾಂಗ್ರೆಸ್ ಪಕ್ಷದ ಎಸ್.ಎಸ್.ಮಲ್ಲಿಕಾರ್ಜುನ್, ದಾವಣಗೆರೆ ದಕ್ಷಿಣ ಕಾಂಗ್ರೆಸ್ ಪಕ್ಷದ ಶಾಮನೂರು ಶಿವಶಂಕರಪ್ಪ, ಮಾಯಕೊಂಡ ಕಾಂಗ್ರೆಸ್ ಪಕ್ಷದ ಕೆ.ಎಸ್.ಬಸವಂತಪ್ಪ, ಚನ್ನಗಿರಿ ಕಾಂಗ್ರೆಸ್ ಪಕ್ಷದ ಬಸವರಾಜು ವಿ.ಶಿವಗಂಗ, ಹೊನ್ನಾಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಡಿ.ಜಿ.ಶಾಂತನಗೌಡ ಇವರು ಜಯಗಳಿಸಿದ್ದಾರೆ.

ಕ್ಷೇತ್ರವಾರು ವಿವರ ; ಜಗಳೂರು

ಮಲ್ಲಾಪುರ ದೇವರಾಜ ಜೆಡಿಎಸ್1972, ಬಿ.ದೇವೇಂದ್ರಪ್ಪ ಕಾಂಗ್ರೆಸ್50765, ಎಸ್.ವಿ.ರಾಮಚಂದ್ರ ಬಿಜೆಪಿ 49891, ಜಿ.ಸ್ವಾಮಿ ಸಮಾಜವಾದಿ ಪಾರ್ಟಿ 367, ಪಕ್ಷೇತರರಾದ ಪಿ.ಅಜ್ಜಯ್ಯ 149, ಡಿ.ತಿಪ್ಪೇಸ್ವಾಮಿ114, ದಿವಾಕರ ಓ 93, ನಾಗರಾಜ.ಎಂ 140, ಭೀಮಪ್ಪ ಜಿ.ಎನ್ 869, ರಾಘವೇಂದ್ರ ಕೆ.ಆರ್685ಹಾಗೂ ಹೆಚ್.ಪಿ.ರಾಜೇಶ್ 49442ಮತಗಳನ್ನು ಪಡೆದಿದ್ದು ಕಾಂಗ್ರೆಸ್ ಪಕ್ಷದ ಬಿ.ದೇವೇಂದ್ರಪ್ಪ ಜಯಗಳಿಸಿದ್ದು ಸಮೀಪದ ಸ್ಪರ್ಧಿ ಬಿ.ಜೆ.ಪಿ.ಯ ಎಸ್.ವಿ.ರಾಮಚಂದ್ರಗಿಂತ 874 ಮತಗಳನ್ನು ಹೆಚ್ಚಿಗೆ ಪಡೆದಿದ್ದಾರೆ.

ಹರಿಹರ

ಬಿ.ಪಿ.ಹರೀಶ್ ಬಿಜೆಪಿ 63924, ಶ್ರೀನಿವಾಸ್ ಎನ್.ಹೆಚ್. (ನಂದಿಗಾವಿ) ಕಾಂಗ್ರೆಸ್59620, ಹೆಚ್.ಎಸ್.ಶಿವಶಂಕರ್ ಜೆಡಿಎಸ್ 40580, ಗಣೇಶಪ್ಪ ಕೆ.ದುರ್ಗದ ಆಮ್ ಅದ್ಮಿ ಪಾರ್ಟಿ 1488, ಕೃಷ್ಣ.ಎಂ ಉತ್ತಮ ಪ್ರಜಾಕೀಯ ಪಾರ್ಟಿ 697 , ಡಿ.ಹನುಮಂತಪ್ಪ ಬಹುಜನ ಸಮಾಜ ಪಾರ್ಟಿ592 , ಪಕ್ಷೇತರರಾದ ಮೂರ್ತಿ ಹೆಚ್.ಕೆ. 360, ಪರಶುರಾಮ ಎಂ. 226, ಜಯಕುಮಾರ ಟಿ.ಹೆಚ್.191, ಬಿ.ಎಸ್. ಉಜ್ಜನಪ್ಪ 140, ಸಂಕೇತ್‌ರಾಜ್ ಎಸ್ 98 ಮತಗಳನ್ನು ಪಡೆದಿದ್ದಾರೆ. ಇದರಲ್ಲಿ ಬಿಜೆಪಿ ಬಿ.ಪಿ.ಹರೀಶ್ ಇವರು ಜಯಗಳಿಸಿದ್ದು ಸಮೀಪದ ಸ್ಪರ್ಧಿ ಕಾಂಗ್ರೆಸ್‌ನ ಶ್ರೀನಿವಾಸ್ ಎನ್.ಹೆಚ್. ಇವರಿಗಿಂತ 4304 ಮತಗಳ ಅಂತರದಲ್ಲಿ ಜಯಗಳಿಸಿರುವರು.

ದಾವಣಗೆರೆ ಉತ್ತರ

ಲೋಕಿಕೆರೆ ನಾಗರಾಜ್ ಬಿಜೆಪಿ 69547, ಎಸ್.ಎಸ್.ಮಲ್ಲಿಕಾರ್ಜುನ್ ಕಾಂಗ್ರೆಸ್ 94019, ಬಾತಿ ಶಂಕರ್ ಜೆಡಿಎಸ್ 935 , ಶೀಧರ್ ಪಾಟೀಲ್.ಸಿ ಆಮ್ ಆದ್ಮಿ ಪಾರ್ಟಿ 391,ಚಂದ್ರಶೇಖರ.ಬಿ ಉತ್ತಮ ಪ್ರಜಾಕೀಯ ಪಾರ್ಟಿ1143, ಕೆ.ಮಲ್ಲಣ್ಣ ಕರ್ನಾಟಕ ರಾಷ್ಟç ಸಮಿತಿ 139, ಸುರ್ಜಿತ್.ಜಿ ಸಂಯುಕ್ತ ವಿಕಾಸ್ ಪಾರ್ಟಿ49, ಪಕ್ಷೇತರರಾದ ಕೀರ್ತಿಕುಮಾರ್.ಕೆ.ಎಸ್68, ಮಲ್ಲಿಕಾರ್ಜುನಪ್ಪ.ಕೆ.ಎಂ 108, ಮಹಮ್ಮದ್ ಹಯಾತ್.ಎಮ್ 80, ಇಡ್ಲಿ ಮಂಜು125 , ರುದ್ರೇಶ್ ಗೌಡ 87, ಎಂ.ಜಿ.ಶ್ರೀಕಾಂತ್ 281 ಮತಗಳನ್ನು ಪಡೆದಿರುವರು. ಕಾಂಗ್ರೆಸ್ ಪಕ್ಷದ ಎಸ್.ಎಸ್.ಮಲ್ಲಿಕಾರ್ಜುನ್ ಇವರು ಸಮೀಪದ ಸ್ಪರ್ಧಿ ಬಿಜೆಪಿಯ ಲೋಕಿಕೆರೆ ನಾಗರಾಜ್‌ಗಿಂತ 24472ಮತಗಳನ್ನು ಹೆಚ್ಚಿಗೆ ಪಡೆದು ಜಯಗಳಿಸಿದ್ದಾರೆ.

ದಾವಣಗೆರೆ ದಕ್ಷಿಣ

ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ 84298, ಅಜಯ್ ಕುಮಾರ್ ಬಿ.ಜಿ. ಭಾರತೀಯ ಜನತಾ ಪಾರ್ಟಿ56410 , ಇಸ್ಮಾಯಿಲ್ ಜಬೀವುಲ್ಲಾ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ 1311, ಅಮಾನುಲ್ಲಾಖಾನ್. ಜೆ ಜೆಡಿಎಸ್ 1296, ಸಾಜಿದ್ ಆಮ್ ಆದ್ಮಿ ಪಾರ್ಟಿ 562, ಈಶ್ವರ ಉತ್ತಮ ಪ್ರಜಾಕೀಯ ಪಾರ್ಟಿ522 , ಮಹಮದ್ ಖಲೀಮ್ ಬಿಎಸ್‌ಪಿ 293, ಗೌಸ್‌ಪೀರ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 221, ಭಾರತಿ.ಕೆ ಸೋಷಿಯಲಿಸ್ ಯುನಿಟಿ ಸೆಂಟರ್ ಆಫ್ ಇಂಡಿಯಾ 121, ಹೆಚ್.ಕೆ.ದಾವಲ್ ಸಾಬ್ ಕರ್ನಾಟಕ ರಾಷ್ಟ್ರ ಸಮಿತಿ 57, ಪಕ್ಷೇತರರಾದ ಬಿ.ರಾಜಶೇಖರ್233 , ಶೇಕ್ ಅಹಮದ್ 164, ನೌಶಿನ್‌ತಾಜ್ 101, ಜಿ.ಆರ್.ಶಿವಕುಮಾರ ಸ್ವಾಮಿ 72, ಈರಣ್ಣ 66 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಮನೂರು ಶಿವಶಂಕರಪ್ಪ ಇವರು ಸಮೀಪದ ಸ್ಪರ್ಧಿ ಬಿಜೆಪಿಯ ಅಜಯ್ ಕುಮಾರ್ ಬಿಜಿ ಇವರಿಗಿಂತ 27888 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಮಾಯಕೊಂಡ

ಆನಂದಪ್ಪ.ಹೆಚ್ ಜೆಡಿಎಸ್12857, ಪ್ರೊ.ಧರ್ಮಾನಾಯ್ಕ ಎಸ್. ಆಮ್ ಆದ್ಮಿ ಪಾರ್ಟಿ 512, ಕೆ.ಎಸ್.ಬಸವಂತಪ್ಪ ಕಾಂಗ್ರೆಸ್ 70346 , ಎಂ.ಬಸವರಾಜ ನಾಯ್ಕ ಬಿಜೆಪಿ 34248, ಅಜ್ಜಪ್ಪ.ಎನ್ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ 445, ಚೇತನ್‌ಕುಮಾರ್ ನಾಯ್ಕ.ಕೆ ಉತ್ತಮ ರಾಜಕೀಯ ಪಕ್ಷ 1226, ಎನ್.ಶಾಂತಬಾಯಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 223, ಸೋಮಶೇಖರ.ಬಿ ಅಡ್ವಕೇಟ್ ಕರ್ನಾಟಕ ರಾಷ್ಟ್ರ ಸಮಿತಿ 210, ಪಕ್ಷೇತರರಾದ ಎ.ಕೆ. ಗಣೇಶ್ 609, ಬಿ.ಎಂ.ಪುಷ್ಪ. ವಾಗೀಶಸ್ವಾಮಿ37431, ಮಂಜು ಮಾದಿಗ 192, ಲೋಕೇಶ್.ಪಿ.ಡಿ 586 , ಪಿ.ಆರ್.ಶ್ರೀನಿವಾಸ್ 438, ಸವಿತಾಬಾಯಿ ಮಲ್ಲೇಶನಾಯ್ಕ 532 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಕೆ.ಎಸ್.ಬಸವಂತಪ್ಪ ಇವರು ಸಮೀಪ ಸ್ಪರ್ಧಿ ಪಕ್ಷೇತರರಾದ ಬಿ.ಎಂ.ಪುಷ್ಪ ವಾಗೀಶಸ್ವಾಮಿ ಇವರಿಗಿಂತ 32915 ಹೆಚ್ಚಿನ ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಚನ್ನಗಿರಿ

ಆದಿಲ್ ಖಾನ್ ಎಸ್.ಕೆ. ಆಮ್ ಆದ್ಮಿ ಪಾರ್ಟಿ245 , ತೇಜಸ್ವಿ ವಿ.ಪಟೇಲ್ ಜೆಡಿಎಸ್ 1216, ಪ್ರವೀಣ.ಹೆಚ್ ಬಿಎಸ್‌ಪಿ 523, ಬಸವರಾಜು ವಿ.ಶಿವಗಂಗ ಕಾಂಗ್ರೆಸ್ 78263, ಹೆಚ್. ಎಸ್.ಶಿವಕುಮಾರ್ ಬಿಜೆಪಿ 21467, ಚಂದ್ರಶೇಖರ ಚನ್ನಗಿರಿ ಉತ್ತಮ ಪ್ರಜಾಕೀಯ ಪಾರ್ಟಿ1017 , ದೋಣಿಹಳ್ಳಿ ಮಂಜುನಾಥಗೌಡ್ರು ಕರ್ನಾಟಕ ರಾಷ್ಟç ಸಮಿತಿ 197, ಎಂ.ರೂಪ ಕಗತೂರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 183, ಪಕ್ಷೇತರರಾದ ಕುಬೇಂದ್ರಸ್ವಾಮಿ.ಟಿ 437, ಮಾಡಾಳು ಮಲ್ಲಿಕಾರ್ಜುನ 61828, ಹರೀಶ್ ಹಳ್ಳಿ 470 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಬಸವರಾಜು ವಿ.ಶಿವಗಂಗ ಇವರು ಸಮೀಪದ ಪಕ್ಷೇತರ ಅಭ್ಯರ್ಥಿ ಮಾಡಾಳು ಮಲ್ಲಿಕಾರ್ಜುನ್ ಇವರಿಗಿಂತ 16435 ಹೆಚ್ಚಿನ ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಹೊನ್ನಾಳಿ

ಡಿ.ಜಿ.ಶಾಂತನಗೌಡ ಕಾಂಗ್ರೆಸ್ 92392, ಎಂ.ಪಿ.ರೇಣುಕಾಚಾರ್ಯ ಬಿಜೆಪಿ 75832, ಗಣೇಶ ಬಿ.ಎ. ಉತ್ತಮ ಪ್ರಜಾಕೀಯ ಪಾರ್ಟಿ 945, ಕುಂಕೋವ ಕೃಷ್ಣಪ್ಪ ಬಿಎಸ್‌ಪಿ 349, ನರಸಿಂಹಪ್ಪ. ಕೆ ಆಮ್ ಆದ್ಮಿ 234, ಹನುಮಂತಪ್ಪ ಸೊರಟೂರು ಕರ್ನಾಟಕ ರಾಷ್ಟ್ರ ಸಮಿತಿ 146, ಪಕ್ಷೇತರರಾದ ವಾಸಪ್ಪ.ಎಂ 254, ದೊಡ್ಡೆತ್ತಿನಹಳ್ಳಿ ಚಂದ್ರಶೇಖರಪ್ಪ 236, ಲಕ್ಷ್ಮೀಕಾಂತ ಹೆಚ್.ಟಿ 176 ಮತಗಳನ್ನು ಪಡೆದಿರುವರು. ಕಾಂಗ್ರೆಸ್ ಪಕ್ಷದ ಡಿ.ಜಿ.ಶಾಂತನಗೌಡ ಇವರು ಸಮೀಪದ ಸ್ಪರ್ಧಿ ಬಿಜೆಪಿಯ ರೇಣುಕಾಚಾರ್ಯ ಇವರಿಗಿಂತ 17560 ಮತಗಳನ್ನು ಹೆಚ್ಚಿಗೆ ಪಡೆದು ಜಯಗಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

Published

on

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್‌ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.

ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending