Connect with us

ರಾಜಕೀಯ

ಡಾ.ರಾಜ್‍ಕುಮಾರ್ ನೆನಪಾಗುತ್ತಿದ್ದಾರೆ..!

Published

on

ಗೋಕಾಕ್ ಚಳವಳಿಯಲ್ಲಿ ಡಾ.ರಾಜ್ ಕುಮಾರ್

ಡಾ.ರಾಜ್‍ಕುಮಾರ್ ನೆನಪಾಗುತ್ತಿದ್ದಾರೆ. ಅಷ್ಟೇ ಅಲ್ಲ, ಸದ್ಯವನ್ನು ಪ್ರತಿನಿಧಿಸುತ್ತಿರುವ ನಾವು ಅವರು ಸಿನಿಮಾಗಳ ಮೂಲಕ ಕಟ್ಟಿಕೊಟ್ಟ ಆಕೃತಿಗಳೊಂದಿಗೆ ಸಂವಾದ ಏರ್ಪಡಿಸಿಕೊಳ್ಳುವ ಅನಿವಾರ್ಯತೆ ಮನಗಾಣಿಸುವ ಹಾಗೆ ನನ್ನ ಪ್ರಜ್ಞೆಯ ಆವರಣವನ್ನು ಮತ್ತೆ ಮತ್ತೆ ಪ್ರವೇಶಿಸುತ್ತಿದ್ದಾರೆ. ಹಿಂದಿನ ಮಾದರಿಗಳು ಹೀಗೆ ನೆನಪಾಗುತ್ತಲೇ ಇರಬೇಕು. ಇಂಥ ನೆನಪುಗಳೊಂದಿಗಿನ ಯಾನ ಅವುಗಳನ್ನು ಸಮಾಜದಲ್ಲಿ ಅಧಿಕೃತವಾಗಿ ನೆಲೆಗೊಳಿಸಬೇಕು. ಮರೆವಿನ ಕೂಪಕ್ಕೆ ಅವು ತಳ್ಳಲ್ಪಡದ ಹಾಗೆ ಎಲ್ಲ ಕಾಲದ ಪೀಳಿಗೆಗಳಿಗೆ ದಾಟಿಕೊಳ್ಳುತ್ತಿರಬೇಕು. ಕೆಟ್ಟದ್ದು ವಿಜೃಂಭಿಸುವಾಗೆಲ್ಲಾ ಮೌಲಿಕ ಮಾದರಿಗಳ ನೆನಪುಗಳು ಧುಮ್ಮಿಕ್ಕಬೇಕು.

ಆ ಮೂಲಕ ಜನಸಮೂಹ ಹೊಸದಾಗಿ ಆಲೋಚಿಸುವುದಕ್ಕೆ ಪ್ರೇರಣೆಯಾಗಬೇಕು.
ನನ್ನೊಳಗೆ ಈಗ ರೂಪುಗೊಳ್ಳುತ್ತಿರುವ ಈ ಬಗೆಯ ಚಿಂತನೆಯ ವ್ಯಕ್ತಿಗತ ಸಾಧ್ಯತೆಯು ಜನಸಮೂಹದ ಸಾಧ್ಯತೆಯೂ ಆಗಿ ಆದ್ಯತೆ ಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದೆನ್ನಿಸುತ್ತಿದೆ. ಹಾಗಾಗುತ್ತದಾ? ಉತ್ತರಗಳ ಬದಲು ಸಂಕೀರ್ಣ ಸವಾಲುಗಳೇ ಕಣ್ಣೆದುರು ಬಂದು ನಿಲ್ಲುತ್ತವೆ. ಚಿಂತಿಸುವಿಕೆಯ ವ್ಯಕ್ತಿಗತ ಸಾಮಥ್ರ್ಯ ಜನಸಮೂಹದೊಳಗೂ ಸಮ್ಮಿಳಿತಗೊಂಡು ರೂಪುಗೊಳ್ಳಬಹುದಾದ ವೈಚಾರಿಕ ಸೌಂದರ್ಯವು ದೇಶವನ್ನು ಉನ್ನತಿಯ ಕಡೆಗೆ ಕೊಂಡೊಯ್ಯುತ್ತದೆ. ಆದರೆ, ವಾಸ್ತವ ಹಾಗಿಲ್ಲ. ಇಂಥ ಸಾಧ್ಯತೆಗಳ ಕಡೆಗೆ ಗಮನಹರಿಸದ ಹಾಗೆ ಜನಸಮೂಹದ ಮನಸ್ಥಿತಿಯನ್ನು ಸಂಪೂರ್ಣವಾಗಿ ಜಡಗೊಳಿಸುವ ರೀತಿಯಲ್ಲಿ ನಮ್ಮ ಜನಪ್ರಿಯ ಸಂಸ್ಕøತಿಯ ವಿಕೃತಿಗಳು ದಟ್ಟವಾಗಿವೆ. ಇದರೊಂದಿಗೆ ಅವು ಪ್ರಜಾತಾಂತ್ರಿಕ ವ್ಯವಸ್ಥೆಯ ಜೀವಾಳವೇ ಆಗಿರುವ ಆಯ್ಕೆಯ ಸಂವೈಧಾನಿಕ ಹಕ್ಕಿನ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ಹಾಗೆ ತಡೆಯೊಡ್ಡುತ್ತಿವೆ.

ತಾರೆಯರ ಅಪಕ್ವ ನಿಲುವು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನಪ್ರಿಯ ಸಂಸ್ಕøತಿಯನ್ನು ಪ್ರತಿನಿಧಿಸುವ ಖ್ಯಾತನಾಮ ತಾರೆಯರ ನಡೆಯನ್ನು ತಾರ್ಕಿಕವಾಗಿ ವಿಶ್ಲೇಷಿಸಬೇಕಿದೆ. ಒಂದು ಪಕ್ಷದ ಅಥವಾ ಅಭ್ಯರ್ಥಿಯ ಪರ ನಿಂತುಕೊಳ್ಳುವ ಅಪಕ್ವ ನಿಲುವಿನೊಂದಿಗೆ ಕನ್ನಡದ ಜನಪ್ರಿಯ ಸಿನಿಮಾ ನಾಯಕ ನಟರ ನಿಲುವುಗಳು ಸುದ್ದಿಗೆ ಗ್ರಾಸ ಒದಗಿಸಿರುವಾಗ ಡಾ.ರಾಜ್‍ಕುಮಾರ್ ಎಂಬ ಹೆಸರಿನೊಂದಿಗಿನ ನೆನಪಿನ ಬಿಂಬಗಳು ಹೊಸ ಪೀಳಿಗೆಯನ್ನು ಆವರಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಇದು ಅಗತ್ಯ ಮಾತ್ರವಲ್ಲ, ಸಾಂದರ್ಭಿಕ ಅನಿವಾರ್ಯತೆಯೂ ಹೌದು. ಸಾರ್ವಕಾಲಿಕವಾಗಿ ನೆಲೆನಿಲ್ಲುವ ಆಲೋಚನಾಕ್ರಮಗಳನ್ನು ದಾಟಿಸುವುದಕ್ಕೆ ಬೇಕಾದ ಪೂರಕ ವಾತಾವರಣದ ವೇದಿಕೆ ನಿರ್ಮಿಸಿಕೊಳ್ಳುವ ಕಲೆ, ಪ್ರತಿಭೆ ಮತ್ತು ಸಾಮಾಜಿಕ ಅಸ್ಮಿತೆಯ ಅಪೂರ್ವ ಸಂಯೋಜನೆಯ ಪ್ರಯೋಜನ ಜನಸಮೂಹಕ್ಕೆ ದಕ್ಕಬೇಕು. ಇದಕ್ಕೆ ಸಂಬಂಧಿಸಿದಂತೆ ವಿಶಿಷ್ಠವಾದ ಮಾದರಿಗಳನ್ನು ಡಾ.ರಾಜ್‍ಕುಮಾರ್ ಅವರ ಸಾಂಸ್ಕøತಿಕ ನಾಯಕತ್ವದ ಮೂಲಕವೇ ಕಂಡುಕೊಳ್ಳಬೇಕು.

ಡಾ.ರಾಜ್ ಜನಪರ ಕಲಾತ್ಮಕತೆ

ರಾಜ್‍ಕುಮಾರ್ ಅವರು ಏಕೆ ಈ ಕ್ಷಣಕ್ಕೆ ನೆನಪಾಗಬೇಕು ಎಂಬ ಜಿಜ್ಞಾಸೆಗೆ ಪ್ರತಿಯಾಗಿ ಅವರ ಮೌಲಿಕ ಸಿನಿಮಾಗಳ ಪಾತ್ರವೈವಿಧ್ಯತೆ, ಭಾಷಿಕ ಚಳುವಳಿಯೊಂದಿಗೆ ಗುರುತಿಸಿಕೊಳ್ಳುವ ಬದ್ಧತೆ ಮತ್ತು ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಜನಸಮೂಹದ ನೆರವಿಗೆ ಧಾವಿಸಿದ ಅವರ ಕಾಳಜಿಯುತ ಮಾದರಿಗಳು ಕಣ್ಣಮುಂದೆ ಬಂದುನಿಲ್ಲುತ್ತವೆ. ಅವರು ಚುನಾವಣೆಗಳ ವೇಳೆ ರಾಜಕೀಯ ಪಕ್ಷಗಳ ಪರ ನಿಲ್ಲಲಿಲ್ಲ. ನಿರ್ದಿಷ್ಟ ಅಭ್ಯರ್ಥಿಯ ಪರ ಮತ ಹಾಕುವಂತೆ ಪ್ರಚಾರಗಳ ರ್ಯಾಲಿಗಳಿಗೆ ಹೋಗಲಿಲ್ಲ. ಸಮಸ್ತ ಕನ್ನಡಿಗರನ್ನು ಅಭಿಮಾನಿ ದೇವರುಗಳನ್ನಾಗಿ ಗ್ರಹಿಸಿದವರು ಅವರು. ಆ ಅಭಿಮಾನವನ್ನು ಅಧಿಕಾರ ರಾಜಕಾರಣಕ್ಕೆ ಗೆಲುವು ತಂದುಕೊಡುವ ಉದ್ದೇಶಕ್ಕೆ ಬಳಸಿಕೊಳ್ಳಲಿಲ್ಲ. ‘ಅವರು ಕರೆದರೆ ಜೊತೆಯಾಗಿ ನಿಲ್ಲುತ್ತೇನೆ’ ಎಂಬ ಆರಾಧನಾ ಭಾವವನ್ನು ಬಹಿರಂಗವಾಗಿ ಪ್ರದರ್ಶಿಸಲಿಲ್ಲ.

ಕನ್ನಡಿಗರ ಹೃದಯದ ಸಾಮ್ರಾಜ್ಯದಲ್ಲಿ ನೆಲೆಸುವ ಅಪ್ಪಟ ಕಲಾತ್ಮಕ ಹಂಬಲ ಅವರನ್ನು ಅಧಿಕಾರ ರಾಜಕಾರಣದ ಹತ್ತಿರ ಹೋಗಲು ಬಿಡಲಿಲ್ಲ. ಅತ್ಯುನ್ನತ ಸ್ಥಾನದ ಆಮಿಷವೊಡ್ಡಿದರೂ ಅದರಿಂದ ಎಚ್ಚರದ ದೂರವನ್ನು ಕಾಯ್ದುಕೊಂಡರು. ಭಾಷಿಕ ಚಳುವಳಿಗಳ ಜೊತಗೆ ಗುರುತಿಸಿಕೊಂಡರು. ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸುವ ಅವರ ನಡೆಯು ಕನ್ನಡ ಸಿನಿಮಾದ ಪ್ರಭಾವವನ್ನು ವಿಸ್ತರಿಸುವುದಕ್ಕೆ ನೆರವಾಗಿತ್ತು. ಅವರ ಅಭಿನಯದ ಸಿನಿಮಾಗಳು ಜನಪ್ರಿಯ ಸಂಸ್ಕøತಿ ಒಳಗೊಳ್ಳಬಹುದಾದ ಮೌಲಿಕ ಲಕ್ಷಣಗಳನ್ನು ದೃಢೀಕರಿಸಿದವು. ಈ ಹಿನ್ನೆಲೆಯ ಕಾರಣಕ್ಕಾಗಿಯೇ ರಾಜಕಾರಣಕ್ಕಿಂತಲೂ ಕನ್ನಡದ್ದೇ ಆದ ಸಾಮುದಾಯಿಕ ಕಲಾತ್ಮಕ ಪಾತ್ರನಿರ್ವಹಣೆಯ ಕಡೆಗೆ ಅವರು ಹೆಚ್ಚು ಆದ್ಯತೆ ನೀಡಿದರು.

Rajadharma a column by Dr.N k padmanabh

ರಾಜಕಾರಣದ ವಿಚ್ಛಿದ್ರಕಾರಕ ಪ್ರಾಬಲ್ಯ

ಭಾರತದ ಅಧಿಕಾರ ರಾಜಕಾರಣಕ್ಕೆ ವಿಚಿತ್ರ ಬಗೆಯ ವಿಚ್ಛಿದ್ರಕಾರಕ ಪ್ರಾಬಲ್ಯವಿದೆ. ಇದರ ಆಕರ್ಷಣೀಯ ಸ್ವರೂಪವು ಈ ಪ್ರಾಬಲ್ಯದ ಸುಳಿವನ್ನು ಬಿಟ್ಟುಕೊಡುವುದೇ ಇಲ್ಲ. ಇಂಥ ರಾಜಕಾರಣವು ಪ್ರಭಾವೀ ವ್ಯಕ್ತಿತ್ವಗಳಿಂದ ಹಿಡಿದು ಜನಸಾಮಾನ್ಯರನ್ನು ಸದಾ ಆಕರ್ಷಿಸುತ್ತಲೇ ಇರುತ್ತದೆ. ಅದರ ಆಕರ್ಷಣೀಯ ಗುಣದಲ್ಲಿಯೇ ಇರುವ ಮತ್ತೊಂದು ಅಪಾಯಕಾರಿ ಮುಖ ಗೋಚರಿಸದಂತೆ ಅದು ವಿಜೃಂಭಿಸುತ್ತಿರುತ್ತದೆ. ಅಭಿನಯದ ಮೂಲಕ ಜನಜನಿತರಾಗಿ ವ್ಯಾಪಕ ಪ್ರಭಾವ ದಕ್ಕಿಸಿಕೊಂಡವರನ್ನು ಹುಡುಕಿ ಇದು ತನ್ನ ಖೆಡ್ಡಾಕ್ಕೆ ಬೀಳಿಸಿಕೊಳ್ಳುತ್ತದೆ.

ಈ ದೇಶದ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರದ ಮಾರ್ಗ ಹೊಳೆಸುವ ವೈಚಾರಿಕ ಆಕೃತಿಗಳನ್ನು ಸೃಷ್ಟಿಸುವ ಚಿಂತಕರನ್ನು, ಅವರ ನಿಲುವುಗಳನ್ನು ಬಳಸಿಕೊಂಡು ಅಧಿಕಾರ ಹಿಡಿಯುವ ಅಜೆಂಡಾ ಕಾರ್ಯರೂಪಕ್ಕೆ ತರುವುದರ ಕಡೆಗೇ ಅದರ ಗಮನವಿರುತ್ತದೆ. ಇದಕ್ಕೆ ತದ್ವಿರುದ್ಧವಾಗಿರುವ ಯಥಾಸ್ಥಿತಿವಾದಿ ಜನಪ್ರಿಯ ತಾರೆಗಳನ್ನು, ಅವರ ಪ್ರಭಾವವನ್ನೂ ಮತಬೆಳೆಯ ಫಸಲು ತೆಗೆಯುವುದಕ್ಕಾಗಿಯೇ ಬಳಸಿಕೊಳ್ಳುತ್ತಿರುತ್ತದೆ. ಬದಲಾವಣೆಯ ಚಾಲಕ ಶಕ್ತಿಯಾಗಿ ಪ್ರಮುಖ ಪಾತ್ರವಹಿಸುವ ಕಲಾತ್ಮಕ ವಲಯದ ಅಗಾಧತೆಯನ್ನು ಒಡೆದು ತನ್ನ ಅಧಿಕಾರ ಲಾಭದ ಹವಣಿಕೆಗಳಿಗಾಗಿ ಬಳಸಿಕೊಳ್ಳುತ್ತದೆ. ಡಾ.ರಾಜ್‍ಕುಮಾರ್ ಕಲಾತ್ಮಕತೆಯ ಕುರಿತಾದ ಸ್ಪಷ್ಟ ನಿಲುವುಗಳೊಂದಿಗೆ ಇದ್ದುದರಿಂದ ಅಧಿಕಾರ ರಾಜಕಾರಣದ ಆಕರ್ಷಣೆ ಮತ್ತು ಆಮಿಷಗಳಿಗೆ ಒಳಗಾಗಲಿಲ್ಲ.

ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಜನಪ್ರಿಯ ನಟ-ನಟಿಯರು ಅಧಿಕಾರ ರಾಜಕಾರಣವನ್ನು ಪ್ರವೇಶಿಸಿ ಯಶಸ್ಸು ಕಂಡ ಉದಾಹರಣೆಗಳಿದ್ದರೂ ರಾಜ್‍ಕುಮಾರ್ ಆ ಹಾದಿ ಅನುಸರಿಸಲಿಲ್ಲ. ಪೌರಾಣಿಕ ಮತ್ತು ಸಾಮಾಜಿಕ ಪಾತ್ರಗಳ ಮುಖೇನ ತೆಲುಗು ಸಮುದಾಯವನ್ನು ಬಹುವಾಗಿ ಪ್ರಭಾವಿಸಿದ್ದ ಎನ್.ಟಿ.ರಾಮರಾವ್ ಅಲ್ಲಿ ಮುಖ್ಯಮಂತ್ರಿಯಾದರು. ಎಂ.ಜಿ.ಆರ್, ಜಯಲಲಿತಾ ತಮಿಳುನಾಡಿನಲ್ಲಿ ಅಧಿಕಾರದ ಉನ್ನತ ಹಂತ ತಲುಪಿದವರು. ಇದೀಗ ರಜನೀಕಾಂತ್ ರಾಜಕೀಯದ ಹಾದಿಗೆ ಆದ್ಯತೆ ನೀಡಿದ್ದಾರೆ. ಕುತೂಹಲದ ಸಂಗತಿ ಎಂದರೆ ಇಡೀ ಕರ್ನಾಟಕದಾದ್ಯಂತ ಪ್ರಭಾವೀಯಾಗಿದ್ದರೂ ಅದನ್ನು ರಾಜಕಾರಣಕ್ಕೆ ಬಳಸಿಕೊಳ್ಳುವ ಹಂಬಲ ರಾಜ್ ಅವರ ಹತ್ತಿರವೂ ಸುಳಿಯಲಿಲ್ಲ ಎಂಬುದು.

ಸಂಯಮಪೂರ್ಣ ಎಚ್ಚರದ ಪ್ರಜ್ಞೆ

ರಾಜ್ ಅವರೊಳಗಿದ್ದ ಅಂಥ ಸಂಯಮಪೂರ್ಣ ಎಚ್ಚರ ಈಗಿನ ನಟರಿಗೆ ಸಾಧ್ಯವಾಗುತ್ತಿಲ್ಲ. ಅಭಿನಯ ಕಲಾತ್ಮಕತೆಯ ಮೂಲಕವೇ ವಿವಿಧ ಬಗೆಗಳಲ್ಲಿ ಜನಸಮೂಹದ ಮೇಲೆ ಪ್ರಭಾವ ಬೀರುವ ಬದ್ಧತೆ ರೂಢಿಸಿಕೊಳ್ಳುವ ಅನಿವಾರ್ಯತೆಯನ್ನು ಕಾಡಿಸಿಕೊಳ್ಳುತ್ತಿಲ್ಲ. ‘ನನಗೆ ಇಂತಿಷ್ಟು ವರ್ಷ ಜನಪ್ರಿಯತೆ ಇರುತ್ತದೆ, ಈ ಅವಧಿಯಲ್ಲಿ ಹಣ ದುಡಿದುಕೊಳ್ಳಬೇಕು’ ಎಂಬ ಆಸೆಯೇ ಈಗಿನ ನಟರನ್ನು ನಿಯಂತ್ರಿಸುತ್ತಿದೆ. ಬೆಂಗಳೂರಿನ ಹೊರಗೆ ಜಿಲ್ಲಾಕೇಂದ್ರಗಳಲ್ಲಿ ಒಳ್ಳೆಯ ಉದ್ದೇಶದೊಂದಿಗೆ ಆಯೋಜಿತವಾಗುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕೆ ಅತಿಹೆಚ್ಚು ಸಂಭಾವನೆ ಬೇಡುವ ಮನಸ್ಥಿತಿ ಇವರೊಳಗಿನ ಕಲಾತ್ಮಕತೆಯನ್ನು ಕೊಲ್ಲುತ್ತಿದೆ.

ಸದಭಿರುಚಿ ಮೂಡಿಸುವ ನಿಜವಾದ ಕಾಳಜಿ ಇದ್ದಿದ್ದರೆ ಇವರು ‘ಒಳ್ಳೆಯ ಸಿನಿಮಾಗಳಿಗೆ ಮಾರ್ಕೆಟ್ ಇಲ್ಲ’ ಎಂಬ ಕೊರಗು ವ್ಯಕ್ತಪಡಿಸುವ ಬದಲು ರಾಜ್ಯದಾದ್ಯಂತ ಅರಿವಿನ ಆಂದೋಲನ ಕೈಗೊಳ್ಳುತ್ತಿದ್ದರು. ಕೆಟ್ಟದ್ದರ ಕಡೆಗೆ ವಾಲಿದ ಅಭಿಮಾನಿ ಸಂಸ್ಕøತಿಯ ಊನಗಳನ್ನು ಸರಿಪಡಿಸಿ ಸದಭಿರುಚಿಯ ಸಿನಿಮಾಗಳಿಗೆ ವ್ಯಾಪಕ ಬೆಂಬಲ ತಂದುಕೊಳ್ಳುವುದರ ಕಡೆಗೆ ಗಮನ ಹರಿಸುತ್ತಿದ್ದರು. ಬೇರೆ ರಾಜ್ಯಗಳಲ್ಲಿ ಕನ್ನಡದ ಸಿನಿಮಾ ನಿರ್ಮಾಣದ ಚಟುವಟಿಕೆಗಳು ನಡೆಯುತ್ತಿದ್ದ ಕಾಲದಲ್ಲಿ ಕನ್ನಡಿಗರಿಗೆ ಹತ್ತಿರವಾಗಿ ಇಲ್ಲಿಯ ಸಿನಿಮಾವನ್ನು ಜನಜನಿತವಾಗಿಸಿದ ರಾಜ್ ಮಾದರಿಯನ್ನು ಮುಂದುವರೆಸುವ ಕಾರ್ಯದಲ್ಲಿ ನಿರತರಾಗುತ್ತಿದ್ದರು.

ರಾಜಕೀಯ ಸಾಮಂಜಸ್ಯದ ಪ್ರಶ್ನೆ

ಹಾಗಾಗುವುದಕ್ಕೆ ಜನಪ್ರಿಯ ಸಂಸ್ಕøತಿಯ ಒಳಗೇ ಇರುವ ವಿಕಾರಗಳು ಅವರನ್ನು ಬಿಡುತ್ತಿಲ್ಲ. ಇದರ ಜೊತೆಗೆ ಅಧಿಕಾರ ರಾಜಕಾರಣದ ಯಥಾಸ್ಥಿತಿವಾದದೊಂದಿಗಿನ ಹುನ್ನಾರದ ಪ್ರಾಬಲ್ಯ ನಟರೊಳಗೂ ಆರಾಧನಾ ಭಾವವನ್ನು ಬಿತ್ತುವಲ್ಲಿ ಯಶಸ್ವಿಯಾಗಿದೆ. ನಟರೊಳಗಿನ ಕಲಾತ್ಮಕತೆಯನ್ನು ಸೋಲಿಸುವ ಅದರ ಕಾರ್ಯಸೂಚಿಗೆ ಹಿಂದೆಂದಿಗಿಂತಲೂ ಈಗ ಹೆಚ್ಚಿನ ಬಲ ಬಂದಿದೆ. ಈ ಕಾರಣಕ್ಕಾಗಿಯೇ ಜನಪ್ರಿಯ ಸಿನಿಮಾ ನಟರು ರಾಜಕೀಯ ರಂಗವನ್ನು ಪ್ರವೇಶಿಸಿ ಆರ್ಥಿಕವಾಗಿ ಬಲಾಢ್ಯರಾಗುವ ಕನಸುಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಒಂದು ಕ್ಷೇತ್ರ ಪ್ರತಿನಿಧಿಸುವವರೊಬ್ಬರು ರಾಜಕೀಯ ರಂಗವನ್ನು ಪ್ರವೇಶಿಸುವುದರ ಹಿಂದೆ ಪ್ರಾಮಾಣಿಕ ಕಳಕಳಿಗಳ ಆಧಾರವಿರಬೇಕಾಗುತ್ತದೆ. ಅದರ ಬದಲು ಯಥಾಸ್ಥಿತಿವಾದದ ಜೊತೆಗೇ ತಮ್ಮನ್ನು ತಾವು ಪ್ರತಿಷ್ಠಾಪಿಸಿಕೊಳ್ಳುವ ಮನುಷ್ಯಸಹಜ ದೌರ್ಬಲ್ಯ ಪ್ರದರ್ಶಿಸುವುದು ರಾಜಕೀಯ ಸಾಮಂಜಸ್ಯದ ( Politically Correct) ನಡೆ ಎನ್ನಿಸಿಕೊಳ್ಳುವುದಿಲ್ಲ.

ರಾಜಕೀಯ ಪ್ರಬುದ್ಧತೆಯನ್ನು ಅಳವಡಿಸಿಕೊಳ್ಳುವ ಹಂಬಲವೂ ಇಂಥವರೊಂದಿಗೆ ಇರುವುದಿಲ್ಲ.
ರಾಜಕೀಯ ಪ್ರಬುದ್ಧತೆ ಪ್ರದರ್ಶಿಸುವ ಸಾಮಥ್ರ್ಯ ಇದ್ದವರೂ ಸದ್ಯದ ಸುದ್ದಿವಾಹಿನಿಗಳ ಪ್ರಬಲರ ಪರವಾದ ಅಜೆಂಡಾಕ್ಕೆ ಅನುಗುಣವಾದ ವಿಧ್ವಂಸಕ ಪ್ರಯತ್ನಗಳ ಹೊಡೆತಕ್ಕೀಡಾಗಿ ಹಿನ್ನೆಲೆಗೆ ಸರಿದುಬಿಡುತ್ತಾರೆ. ಸುದ್ದಿವಾಹಿನಿಗಳ ಈ ಬಗೆಯ ಪ್ರಹಾರ ಕಲಾವಲಯದವರಲ್ಲಿ ಭಯ ಮೂಡಿಸಿಬಿಡುತ್ತದೆ. ಆಗ ತಮ್ಮ ಜನಪ್ರಿಯತೆಯನ್ನು ಅಧಿಕಾರ ರಾಜಕಾರಣದ ಪಾದಗಳಿಗೆ ಸಮರ್ಪಿಸುವ ಮನೋಧರ್ಮವನ್ನು ಮೂಡಿಸಿಬಿಡುತ್ತದೆ. ಇರುವಷ್ಟು ದಿನ ಚಾಲ್ತಿಯಲ್ಲಿರಬೇಕು ಎಂಬ ಆಸೆ ಚಿಗುರೊಡೆದು ಅವರೊಳಗಿನ ಕಲಾಶಕ್ತಿಯನ್ನು ನಲುಗಿಸಿಬಿಡುತ್ತದೆ.

ಜನಪ್ರಿಯ ಪ್ರತಿಭಾನ್ವಿತರು ಅಧಿಕಾರ ರಾಜಕಾರಣದ ಪ್ರಾಬಲ್ಯವನ್ನು ಅಧಿಕೃತವಾಗಿ ಪ್ರಶ್ನಿಸಬಹುದು ಎಂಬ ಭರವಸೆಯನ್ನು ಕಳೆದ ಸಲ ಲೋಕಸಭೆ ಚುನಾವಣೆಯ ಸಂದರ್ಭ ಮೂಡಿಸಿತ್ತು. ಈ ದೇಶಕ್ಕೆ ಪ್ರಶ್ನಾತೀತ ನಾಯಕ ಇರಬಾರದು, ಪ್ರಶ್ನೆಗಳನ್ನು ಆಲಿಸಿ ಬದಲಾವಣೆಯನ್ನು ನೆಲೆಗೊಳಿಸುವ ಚಿಂತಕ ನಾಯಕ ಬೇಕು ಎಂಬ ಸಂವಾದವನ್ನು ಅಧಿಕೃತವಾಗಿ ದೇಶಾದ್ಯಂತ ಹುಟ್ಟುಹಾಕುವ ಪ್ರಯತ್ನವನ್ನು ಪ್ರಕಾಶ್ ರೈ ನಿರ್ವಹಿಸಿದರು. ಆದರೆ, ಸುದ್ದಿವಾಹಿನಿಗಳ ಜನಪ್ರಿಯ ವರಸೆಗಳು ಈ ಸಂವಾದವನ್ನು ವಿಸ್ತರಿಸುವ ಬದಲು ಮೊಟಕುಗೊಳಿಸಿದವು. ಅದರೊಂದಿಗೆ ಅಧಿಕಾರ ರಾಜಕಾರಣದ ಎಲ್ಲ ಬಗೆಯ ವಿಕೃತಿಗಳ ದಾಳಿ ಹೊಸದಾಗಿ ಆಲೋಚಿಸುವ ಶಕ್ತಿಯನ್ನೇ ಕುಂದಿಸಿತು. ಜನಪ್ರಿಯ ಸುದ್ದಿಯ ಕೇಂದ್ರಗಳು ಮತ್ತು ರಾಜಕಾರಣದ ಸಂಕುಚಿತತೆಯ ಮನಸ್ಥಿತಿಗಳು ಒಟ್ಟಾಗಿ ಇಂಥದ್ದೊಂದು ಸಾಧ್ಯತೆಯನ್ನೇ ಇಲ್ಲವಾಗಿಸುವಲ್ಲಿ ಯಶಸ್ಸು ಕಂಡಿವೆ.

ಕಾಡುತ್ತಿರುವ ರಾಜ್ ಆಕೃತಿಗಳು

ಈ ಹಂತದಲ್ಲಿಯೇ ಮತ್ತೊಂದು ಲೋಕಸಭೆ ಚುನಾವಣೆ ಎದುರಾಗಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಕುಟುಂಬ ರಾಜಕಾರಣ ಪಕ್ಷಾತೀತವಾಗಿ ವಿವಿಧ ಹಂತಗಳಲ್ಲಿ ಚಾಲ್ತಿಯಲ್ಲಿದೆ. ಸಮಸ್ಯೆಗಳಿಂದ ಇಡೀ ದೇಶ ಜರ್ಝರಿತವಾಗುತ್ತಲೇ ಇದೆ. ಎಲ್ಲ ಕಾಲದಲ್ಲೂ ಸುಧಾರಣೆಯ ಹೆಜ್ಜೆಗಳು ಕಂಡರೂ ಅವುಗಳ ವೇಗವನ್ನು ಹೆಚ್ಚಿಸುವ ದಾರ್ಶನಿಕ ನಾಯಕತ್ವವನ್ನು ಕಂಡುಕೊಳ್ಳುವಲ್ಲಿ ಇಲ್ಲಿಯ ಪ್ರಜಾಸತ್ತಾತ್ಮಕ ಪ್ರಯೋಗಶಾಲೆ ಸೋತಿದೆ. ಭಾರೀ ಬದಲಾವಣೆಯಾಗುತ್ತಿದೆ ಎನ್ನುವ ಭಾವ ಬರುವ ಹಾಗೆ ಜನಪ್ರಿಯ ಮಾಧ್ಯಮಗಳು ಭ್ರಮೆಗಳನ್ನು ಹುಟ್ಟಿಸಿವೆ. ಜನಪ್ರಿಯ ನಟರು ಪಕ್ಷಗಳ ಮತಬೆಳೆ ತೆಗೆಯಲು ಬೇಕಾಗುವ ಸರಕಿನ ಗೊಂಬೆಗಳಾಗಿದ್ದಾರೆ. ಇದನ್ನು ದೃಢಪಡಿಸುವಂತೆ ಖ್ಯಾತ ನಟ ಅಂಬರೀಷ್ ಪತ್ನಿ ಸುಮಲತಾ ಅವರ ಗೆಲುವಿಗೆ ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ನಟರು ಬೆಂಬಲವಾಗಿ ನಿಂತಿದ್ದಾರೆ.

ಸ್ಪಷ್ಟವಾಗಿರುವ ಯಾವುದೇ ಬಗೆಯ ರಾಜಕೀಯ ನಿಲುವು ತಳೆಯದೇ ಪ್ರಚಾರದ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ನಟನೆಗೆ ಮನ್ನಣೆ ನೀಡಿದ ಕನ್ನಡಿಗರಿಗೆ ಪ್ರತಿಯಾಗಿ ಸಾಮಾಜಿಕ ನೆಲೆಯಲ್ಲಿ ಋಣ ತೀರಿಸುವ ಸಮಂಜಸ ರಾಜಕೀಯ ಪ್ರಜ್ಞೆ ನಿರೂಪಿಸುವ ಲಕ್ಷಣಗಳೇನೂ ಕಾಣಿಸುತ್ತಿಲ್ಲ. ಡಾ.ರಾಜ್‍ಕುಮಾರ್ ಸಾಧ್ಯವಾಗಿಸಿಕೊಂಡ ಸಾಂಸ್ಕøತಿಕ ನಾಯಕತ್ವದ ಗುಣಸ್ವಭಾವಗಳೂ ಗೋಚರಿಸುತ್ತಿಲ್ಲ. ಈ ಇಲ್ಲಗಳ ಮಧ್ಯೆಯೇ ‘ರಾಜ್ ಮನೋಧರ್ಮದ’ ಸೃಜನಶೀಲ ಆಕೃತಿಗಳು ಈಗ ಮತ್ತೆ ಮತ್ತೆ ಕಾಡುತ್ತಿವೆ. ಇವು ಕನ್ನಡದ ಜನಪ್ರಿಯ ಸಂಸ್ಕøತಿಯ ಆವರಣದೊಳಗೆ ಮತ್ತೆ ಪ್ರಾಶಸ್ತ್ಯ ಪಡೆಯುತ್ತವೆಯೇ? ಅಂಥದ್ದೊಂದು ಆಶಾವಾದಿ ನಿರೀಕ್ಷೆಯಲ್ಲಿ……

ಡಾ.ಎನ್.ಕೆ. ಪದ್ಮನಾಭ

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ

Published

on

ಸುದ್ದಿದಿನಡೆಸ್ಕ್:ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರು ಪರಿಶೀಲಿಸುತ್ತಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 1860, ಭಾರತೀಯ ಸಾಕ್ಷ್ಯ ಕಾಯ್ದೆ 1872 ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ 1973 ಅನ್ನು ಬದಲಿಸುವ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಅವರು ಹೇಳಿದ್ದಾರೆ. ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.

“ಐಪಿಸಿ, ಸಿಆರ್‌ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ಬದಲಾಗುತ್ತಿವೆ. ಸೂಕ್ತ ಸಮಾಲೋಚನೆ ಪ್ರಕ್ರಿಯೆ ಅನುಸರಣೆ ಹಾಗೂ ಕಾನೂನು ಆಯೋಗದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂರು ಕಾನೂನುಗಳನ್ನು ಬದಲಾಯಿಸಲಾಗಿದೆ” ಎಂದು ಮೇಘವಾಲ್ ತಿಳಿಸಿದರು.”

ಈ ಮೂರು ಕಾನೂನುಗಳನ್ನು ಜುಲೈ 1 ರಿಂದ ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗುವುದು. ಮೂರು ಹೊಸ ಕಾನೂನುಗಳ ತರಬೇತಿ ಸೌಲಭ್ಯಗಳನ್ನು ಎಲ್ಲಾ ರಾಜ್ಯಗಳಿಗೂ ಒದಗಿಸಲಾಗುತ್ತಿದೆ” ಎಂದು ಮೇಘವಾಲ್ ವಿವರಿಸಿದ್ದಾರೆ.”

ನಮ್ಮ ನ್ಯಾಯಾಂಗ ಅಕಾಡೆಮಿಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಸಹ ಈ ಬಗ್ಗೆ ತರಬೇತಿ ನೀಡುತ್ತಿವೆ. ಎಲ್ಲವೂ ಜೊತೆಜೊತೆಯಾಗಿ ಸಾಗುತ್ತಿದೆ ಮತ್ತು ಜುಲೈ 1 ರಿಂದ, ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ನಿರ್ಣಾಯಕವಾದ ಈ ಎಲ್ಲಾ ಮೂರು ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಲಾಗುವುದು” ಎಂದು ಅವರು ಸ್ಪಷ್ಟಪಡಿಸಿದರು.

ದೇಶದಲ್ಲಿ ಅಪರಾಧ ನ್ಯಾಯ ಸುಧಾರಣೆಯು ದೇಶದ ನ್ಯಾಯದಾನ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಇದು ಸೂಚಿಸುತ್ತದೆ. ಮಹಿಳೆಯರು, ಮಕ್ಕಳು ಮತ್ತು ರಾಷ್ಟ್ರದ ವಿರುದ್ಧದ ಅಪರಾಧಗಳನ್ನು ಇದು ಮುಂಚೂಣಿಯಲ್ಲಿರಿಸುತ್ತದೆ. ಅಲ್ಲದೆ ಇದು ವಸಾಹತುಶಾಹಿ ಯುಗದ ಕಾನೂನುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ; ವ್ಯಾಪಕ ಟೀಕೆ

Published

on

ಸುದ್ದಿದಿನಡೆಸ್ಕ್: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಟೀಕಿಸಿದ್ದಾರೆ.

ರಾಜ್ಯ ಸರ್ಕಾರ ಮೊನ್ನೆಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿದ ನಂತರ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 3 ರೂಪಾಯಿ ಹಾಗೂ ಡೀಸೆಲ್ 3.5 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಪ್ರತಿ ಕುಟುಂಬದ ಮಹಿಳೆಗೆ ತಿಂಗಳಿಗೆ 8 ಸಾವಿರದ 500 ರೂಪಾಯಿಗಳನ್ನು ವರ್ಗಾವಣೆ ಮಾಡುವ ಭರವಸೆಯನ್ನು ಈಡೇರಿಸುವ ಬದಲು, ಕಾಂಗ್ರೆಸ್ ಆಡಳಿತದ ಕರ್ನಾಟಕ ಸರ್ಕಾರವು, ರಾಜ್ಯದ ಜನರಿಗೆ ಹೊರೆಯಾಗಿದೆ ಎಂದು ಹರ್ದೀಪ್ ಸಿಂಗ್ ಪುರಿ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ. ಇಂತಹ ನಿರ್ಧಾರ ಹಣದುಬ್ಬರದ ಬಗ್ಗೆ ಮಾತನಾಡುವ ಕಾಂಗ್ರೆಸ್‌ನ ಬೂಟಾಟಿಕೆ ಬಹಿರಂಗಪಡಿಸುತ್ತದೆ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರತಿ ಲೀಟರ್‌ಗೆ ಸುಮಾರು 8 ರೂಪಾಯಿಗಳಿಂದ 12 ರೂಪಾಯಿಗಳಷ್ಟು ಹೆಚ್ಚುವರಿ ವ್ಯಾಟ್ ಅನ್ನು ವಿಧಿಸುತ್ತಿದೆ ಎಂದು ಸಚಿವರು ಆರೋಪಿಸಿದ್ದಾರೆ.

ಈ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸರ್ಕಾರ ಮುಂದಾಲೋಚನೆ ಇಲ್ಲದೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಈಗ ಆರ್ಥಿಕ ಹೊರೆ ತಡೆಯಲು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿದೆ ಎಂದು ಹುಬ್ಬಳ್ಳಿಯಲ್ಲಿ ಆರೋಪಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಬಸ್ ದರ, ಹಾಲಿನ ದರ, ಅಗತ್ಯ ವಸ್ತುಗಳ ದರ ಹೆಚ್ಚಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆಡಳಿತದ ವ್ಯವಸ್ಥೆ ಕುಸಿದುಹೋಗಿದೆ ಎಂದು ದೂರಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರಲ್ಹಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದೆಡೆ, ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ವ್ಯಾಟ್ ಹೆಚ್ಚಳ ಬಳಿಕ ದಕ್ಷಿಣ ಭಾರತದ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ದರ ಕಡಿಮೆ ಇದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರಕ್ಕಿಂತಲ್ಲೂ ಹಾಗೂ ಗುಜರಾತ್ ಮತ್ತು ಮಧ್ಯಪ್ರದೇಶಕ್ಕಿಂತಲ್ಲೂ ನಮ್ಮ ರಾಜ್ಯದಲ್ಲಿ ದರ ಕಡಿಮೆ ಇದೆ ಎಂದು ಹೇಳಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರ ತೆರಿಗೆ ಕಡಿಮೆ ಮಾಡಿದ್ದರೂ, ಕೇಂದ್ರ ಸರ್ಕಾರ ಪದೇ ಪದೆ ವ್ಯಾಟ್ ಹೆಚ್ಚಳ ಮಾಡಿತ್ತು ಎಂದು ಆರೋಪಿಸಿದ್ದಾರೆ. ರಾಜ್ಯದ ತೆರಿಗೆ ಹೆಚ್ಚಳದಿಂದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನೀಟ್ ಪರೀಕ್ಷೆಯಲ್ಲಿ ಕೃಪಾಂಕ ನೀಡಿಕೆ ನಿಲ್ಲಬೇಕು : ಸಿಎಂ ಸಿದ್ದರಾಮಯ್ಯ ಒತ್ತಾಯ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನಡೆಸ್ಕ್:ಈ ಬಾರಿ ನಡೆದ ನೀಟ್ ಪರೀಕ್ಷೆಯಲ್ಲಿ ಕೃಪಾಂಕಗಳನ್ನು ನೀಡುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಕೃಪಾಂಕ ನೀಡಿಕೆ ಪದ್ಧತಿಯನ್ನು ನಿಲ್ಲಿಸಿ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದರು. ರಾಜ್ಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಕಡಿಮೆಗೊಳಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ವೇದಿಕೆ ಸಜ್ಜಾಗಿದ್ದು, ಸದ್ಯದಲ್ಲೇ ಚುನಾವಣೆ ನಡೆಸಲಾಗುವುದೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ2 hours ago

ವಿಶ್ವ ಮೊಸಳೆಗಳ ದಿನ ; ಮೊಸಳೆ ಬಗ್ಗೆ ನಿಮಗಿಷ್ಟು ತಿಳಿದಿರಲಿ

ಸಂಜಯ್ ಹೊಯ್ಸಳ ಪ್ರತಿ ವರ್ಷದ ಜೂನ್ 17 ನ್ನು ವಿಶ್ವ ಮೊಸಳೆ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದಲ್ಲಿ ಪ್ರಮುಖವಾಗಿ 24 ಜಾತಿಯ ಮೊಸಳೆಗಳಿದ್ದು, ಭಾರತದಲ್ಲಿ ಸದ್ಯಕ್ಕೆ 3 ಪ್ರಬೇಧದ...

ದಿನದ ಸುದ್ದಿ5 hours ago

ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ

ಸುದ್ದಿದಿನಡೆಸ್ಕ್:ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರು ಪರಿಶೀಲಿಸುತ್ತಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್...

ದಿನದ ಸುದ್ದಿ5 hours ago

ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ; ವ್ಯಾಪಕ ಟೀಕೆ

ಸುದ್ದಿದಿನಡೆಸ್ಕ್: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಟೀಕಿಸಿದ್ದಾರೆ....

ದಿನದ ಸುದ್ದಿ20 hours ago

ವಿಷಹಾರ | ಹೋಟೆಲ್, ರೆಸ್ಟೋರೆಂಟ್ ತಪಾಸಣೆಗೆ ಕ್ರಮ

ಸುದ್ದಿದಿನಡೆಸ್ಕ್: ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಉತ್ತಮ ಗುಣಮಟ್ಟ, ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹೋಟೇಲ್, ರೆಸ್ಟೋರೆಂಟ್ ಹಾಗೂ ಲಘು ಉಪಹಾರ ಕೇಂದ್ರಗಳಲ್ಲಿ The Food Safety and...

ದಿನದ ಸುದ್ದಿ21 hours ago

ವೆಂಕಟೇಶ್ ಜಿ.ಎಂ. ಅವರಿಗೆ ಪಿಎಚ್‌.ಡಿ ಪದವಿ

ಸುದ್ದಿದಿನ,ಬೆಂಗಳೂರು:ಗುಜ್ಜನಹಳ್ಳಿ ಗ್ರಾಮದ ವೆಂಕಟೇಶ್ ಜಿ.ಎಂ. ಅವರು ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎಸ್. ಪುಟ್ಟಸ್ವಾಮಯ್ಯ ರವರ ಮಾರ್ಗದರ್ಶನದಲ್ಲಿ ಮಂಡಿಸಿರುವ “ಆನ್ ಎಕನಾಮಿಕ್ ಅನಾಲಿಸಿಸ್ ಆಫ್ ಆಗ್ರೋ-ಬೇಸ್ಡ್ ಇಂಡಸ್ಟ್ರೀಸ್...

ದಿನದ ಸುದ್ದಿ21 hours ago

ರೇಣುಕಸ್ವಾಮಿ ಕೊಲೆಗೈದ ಆರೋಪಿಗಳಿಗೆ ಶಿಕ್ಷೆಯಾಗಲಿ : ಜಂಗಮ ಸಮಾಜ ಪ್ರತಿಭಟನೆ

ಸುದ್ದಿದಿನ,ಮಸ್ಕಿ:ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಮಸ್ಕಿ ಜಂಗಮ ಸಮಾಜ ವತಿಯಿಂದ ನಮ್ಮ ಸಮುದಾಯದ ಚಿತ್ರದುರ್ಗದ ರೇಣುಕ ಸ್ವಾಮಿಯನ್ನು ಕೊಲೆಗೈದ ಕೊಲೆಗಡಕರಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಗಚ್ಚಿನ...

ದಿನದ ಸುದ್ದಿ1 day ago

ಜಗಳೂರು | ವ್ಯಕ್ತಿ ಮೇಲೆ ನಾಲ್ಕು ಕರಡಿದಾಳಿ

ಸುದ್ದಿದಿನ,ಜಗಳೂರು : ಜಮೀನಿಗೆ ಹೋಗಿದ್ದ ವ್ಯಕ್ತಿ ಮೇಲೆ ನಾಲ್ಕು ಕರಡಿಗಳ ದಾಳಿ‌ ಮಾಡಿ ಹಿಗ್ಗಾಮುಗ್ಗಾ ಕಡಿದು ಗಂಭೀರ ಗಾಯಗೊಳಿಸಿರುವ ಘಟನೆ ಜಗಳೂರು ತಾಲೂಕಿನ ಬೈರನಾಯಕನಹಳ್ಳಿ ಗ್ರಾಮದಲ್ಲಿ ಶನಿವಾರ...

ದಿನದ ಸುದ್ದಿ1 day ago

ಶ್ರೀ ಉಚ್ಚಂಗೆಮ್ಮದೇವಿ ಸದ್ಭಕ್ತರಿಗೊಂದು ವಿಸ್ಮಯಕಾರಿ ಸುದ್ದಿ : ಉಚ್ಚಂಗಿದುರ್ಗ ಬೆಟ್ಟದ ಕುರಿತು ಹೊಸ ಹೊಳಹು ನೀಡಿದ ದಾವಣಗೆರೆ ಅರ್ಜುನ್

ಗಂಗಾಧರ ಬಿ ಎಲ್ ನಿಟ್ಟೂರ್ ಭಾರತ ದೇಶ ಹಲವು ಅಚ್ಚರಿ, ವಿಚಿತ್ರ, ವಿಸ್ಮಯಗಳ ತಾಣ. ಪ್ರಕೃತಿಯಲ್ಲಿ ಉಂಟಾಗುತ್ತಿರುವ ಬದಲಾವಣೆಯಿಂದ ಹಿಡಿದು, ಸೃಷ್ಟಿಕರ್ತನ ಕೈಚಳಕದ ಕುಲುಮೆಯಲ್ಲಿ ಅರಳಿರುವ ಹಲವು...

ಅಂತರಂಗ1 day ago

ಆತ್ಮಕತೆ | ಅಪ್ಪನ ಮೈಸೂರು ಭೇಟಿ ಸಾವು – ನೋವು

ರುದ್ರಪ್ಪ ಹನಗವಾಡಿ  ನಾನು ಮೈಸೂರಿನಲ್ಲಿ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿರುವುದರ ಬಗ್ಗೆ ತಿಳಿದ ನಮ್ಮೂರಲ್ಲಿ ಎಲ್ಲರಿಗೂ ಸಂತೋಷವಾಗಿತ್ತು. ಅತ್ಯಂತ ಸಂತೋಷಗೊಂಡಿದ್ದ ಅಪ್ಪನನ್ನು ನಾನು ಮೈಸೂರಿಗೆ ಕರೆದುಕೊಂಡು ಬಂದು ಒಮ್ಮೆ...

ದಿನದ ಸುದ್ದಿ1 day ago

ಪಿಎಂ ಕಿಸಾನ್ ನಿಧಿ ಯೋಜನೆ | ರೈತರ ಖಾತೆಗಳಿಗೆ ಬರುವ ಮಂಗಳವಾರ ಹಣ ವರ್ಗಾವಣೆ

ಸುದ್ದಿದಿನಡೆಸ್ಕ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬರುವ ಮಂಗಳವಾರ 18 ರಂದು ’ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯಡಿ 9 ಕೋಟಿ 3 ಲಕ್ಷ ರೈತರ ಖಾತೆಗೆ 20...

Trending