ಲೈಫ್ ಸ್ಟೈಲ್
EyeballTattoo, ScrelalTattoo ಎಲ್ಲಾ ಓಕೆ, ಕಣ್ಣು ಗುಡ್ಡೆಗೂ ಟಾಟೂ ಬೇಕೇ..!?

- ಚಿತ್ರಶ್ರೀ ಹರ್ಷ
ದಿನೇ ದಿನೇ ಯುವಪೀಳಿಗೆ ಯಲ್ಲಿ ಟಾಟು ಕ್ರೆಜ್ ಹೆಚ್ಚುತಿರುವುದು ಹೊಸದೆನಲ್ಲ. ಈಗಂತೂ ಯುವಕರ ಮೈಮೇಲೆ ಒಂದೆರಡಾದರೂ ಟಾಟು ಇರುವುದು ಮಾಮೂಲಾಗಿ ಬಿಟ್ಟಿದೆ. 24ರ ಹರೆಯದ ಆಸ್ಟ್ರೇಲಿಯಾ ದ ಅಂಬುರ್ ಲುಕ್ #AmburLuke , ಎಂಬ ಈಕೆ , ಸದ್ಯ ಸೋಶಿಯಲ್ ಮೀದಿಯದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಗುಥಿದ್ದಾರೆ. ವಿಶಿಷ್ಟತೆ ಇರುವುದು ಈಕೆಯ ಟಾಟೂ ಕ್ರೆಜ್ ನಲ್ಲೇ. ತನ್ನ 14 ನೇ ವಯಸ್ಸಿಗೇ,ಟಾಟೂ ಗೀಳು ಮೈ ಗಂಟಿಸಿಕೊಂಡಿದ ಈಕೆ ಮಾಡಿದ್ದು ಮಾತ್ರ ಯಾರೂ ಊಹಿಸಲಾಗದ ಕೆಲಸ.
https://www.instagram.com/p/B7s8cV-IVOx/?utm_source=ig_web_copy_link
ಕಳೆದ ಒಂದು ದಶಕದಲ್ಲಿ ತನ್ನ ಇಡೀ ದೇಹವನ್ನ ಟಾಟೂವಿನಿಂದ ಮುಚ್ಚಿರುವ ಈಕೆ , ನವೊಂಬರ್ 2019 ರಲ್ಲಿ ಮಥೊಂದು (ದುಸ್ಸಾಹಸಕ್ಕೆ ! )ದೊಡ್ಡ ಸಾಹಸಕ್ಕೆ ಕೈ ಹಾಕಿಯೇಬಿಟ್ಟಳು. ಇದನ್ನ ಸಾಹಸ ಅನ್ನಬೆಕೊ , ಹುಚ್ಛುತನ ಅನ್ನಬೇಕೋ ತಿಳಿಯುತ್ತಿಲ್ಲ. ಕೈ,ಕಾಲು, ಸೊಂಟ, ಕತ್ತು,ಬೆನ್ನು, ಒಕ್ಕಳು , ಬೆರಳುಗಳ ಮೇಲೆ ಟಾಟೂ ಹಾಕಿಸಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಮೈ ತುಂಬಾ ಬಣ್ಣದ ಟಾಟೂ ಗೀಚಿಸಿಕೊಳ್ಳುವ ಖಯಾಲಿಯನ್ನ ಬೇಕಾದರೂ ಫ್ಯಾಷನ್ ಎಂದು ಒಪ್ಪಬಹುದು. ಆದರೆ, “ಅತಿರೇಕಕ್ಕೆ ಮತಿ ಕೇಡು ” ಎಂಬ ನಾನ್ನುಡಿ ನೆನಪಿಸುವ ಹಾಗಿದೆ ಈಕೆಯ ಇತ್ತೀಚಿನ ಟಾಟೂ ಕ್ರೇಜ್!
https://www.instagram.com/p/B7e1MD_D0Jk/?utm_source=ig_web_copy_link
ನವೆಂಬರ್ 2019ರಲ್ಲಿ ಅಂಬರ್ ತನ್ನ ಕಣ್ಣು ಗುಡ್ಡೆಯ ಕಲರ್ ಟಾಟೂ ರಚಿಸುವ (ದು) ಸಾಹಸ ಮಾಡಿಯೇ ಬಿಟ್ಟಳು. ಕಣ್ಣು ಗುಡ್ಡೆ ಗೆ ನೀಲಿ ( turquoise) ಬಣ್ಣ ತುಂಬಿಸಿದ್ದು ತನ್ನನ್ನು ತಾನು #BlueEyeWhiteDragon “ಬ್ಲೂ ಐ ವೈಟ್ ಡ್ರಾಗನ್” ಎಂದು ತನ್ನ ಇಂಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾಳೆ ! ತನ್ನ ಇಡೀ ದೇಹವನ್ನು 200 ಟಾಟೂ ವಿನಿಂದ ಮುಚ್ಚಿ ಕೊಂಡಿರುವ ಈ ಹುಡುಗಿ, #bodymodification ಹುಚ್ಚಿಗೆ ಬಿದ್ದಿದ್ದು, ಸೀಳು ನಾಲಿಗೆ, ಕಿವಿ ತಿರುವಿಕೆ , ಮುಖದ ಟಾಟೂ, ಡರ್ಮಲ್ ಜಿವೆಲರಿ ಟ್ರೆಂಡ್ ಗಳನ್ನು ಮಾಡಿಸಿಕೊಂಡಿದ್ದಾಳೆ. ಇದ್ದೆಲ್ಲಕ್ಕೂ ಬರೋಬರ್ರಿ $26000 ಖರ್ಚು ಮಾಡಿದ್ಲಾಳೆ ಏ ಹುಡುಗಿ!
https://www.instagram.com/p/B6m7e2EDJfH/?utm_source=ig_web_copy_link
ಕಣ್ಣು ಗುಡ್ಡೆಯ ಬಿಳಿಯ ಭಾಗವನ್ನು ಟಾಟೂ ಇಂಕ್ ನಿಂದ ಕಲರ್ ಮಾಡುವ ಈ ಟ್ರೆಂಡ್ ಅಷ್ಟೇ ಅಪಾರಕಾರಿಯೂ ಹೌದು ! 40 ನಿಮಿಷಗಳ ಕಾಲ ನಡೆದ ಈ ಟಾಟೂ ಕಾಲರಿಂಗ್ ಸರಿ ಹೋಗದ ಕಾರಣ ಈಕೆ ಮೂರು ತಿಂಗಳು ಗಳ ಕಾಲ ಕಣ್ಣು ಕಳೆದು ಕೊಂಡು ಕುರುಡತ್ವಕ್ಕೆ ಕಾಲಿಡಬೇಕಾಯಿತು ! ಈಕೆ ಹೇಳಿದ್ದೇನೆಂದರೆ
” ನನಗೆ ಟಾಟೂ ರಚಿಸಿದಾತ ನಾಲ್ಕು ಬಾರಿ ನನ್ನ ಕಣ್ಣು ಗುಡ್ಡೆಯ ಪದರಕ್ಕೆ ಇಂಕ್ ಇಂಜೆಕ್ಟ್ ಮಾಡಿದ, ಇದರ ನೋವು ಒಂದೇ ಬಾರಿಗೆ ಒಡೆದ ಗಾಜನ್ನು ನನ್ನ ಕಣ್ಣಿಗೆ ತರುಕಿದಾಗ ಆಗುವಷ್ಟು ಉರಿ, ನೋವು ಉಂಟಾಯಿತು. ಆತ ತುಂಬಾ ಜೋರಾಗಿ ನನ್ನ ಗುಡ್ಡೆಗೆ ಇಂಜೆಕ್ಟ್ ಮಾಡಿದ್ದರಿಂದ ನಾನು ಮೂರು ತಿಂಗಳು ಕುರುಡತ್ವಕ್ಕೆ ಕಾಲಿಡಬೇಕಾಯಿತು . ಆದರೂ ನಾನು ಟಾಟೂ ರಚಿಸಿಕೊಂಡಿದ್ದಕ್ಕೆ ಯಾವುದೇ ಪಶ್ಚಾತ್ತಾಪ ಇಲ್ಲ. ಇದು ನನ್ನ ಜೀವನದ ದೊಡ್ಡ ಅನುಭವ. ನಾನು ಇದನ್ನು ಸಂಭ್ರಮಿಸುತ್ತಿದ್ದೇನೆ ” ಎಂದು ನುಡಿದಿದ್ದಾರೆ 24 ರ ಹರೆಯದ ಟಾಟೂ ಪ್ರಿಯೆ ಅಂಬೂರ್ .
|BlueEyeWhiteDragon ಅಂಬೂರ್ ಲೂಕ್
ScrelalTattoo ಕಣ್ಣು ಗುಡ್ಡೆಯ ಟಾಟೂ!
ಕಣ್ಣಲ್ಲಿ, ಕಣ್ಣು ಗುಡ್ಡೆಯ ಬಿಳಿಯ ಭಾಗವನ್ನು ಟಾಟೂ ಕಲರ್ ಮೂಲಕ ಬದಲಾಯಿಸುವ ಪರಿ ಹುಟ್ಟಿಕೊಂಡಿದ್ದು , ಸಿರಿಂಜ್ ನಲ್ಲಿ ಬಣ್ಣ ತುಂಬಿ, ಕಣ್ಣು ಗುಡ್ಡೆಯ ಮ್ಲ್ಪದರಕ್ಕೆ ಇಂಜೆಕ್ಟ್ ಮಾಡಲಾಗುತ್ತದೆ ! ಇದರಿಂದ ಬಿಳಿಯ ಕಣ್ಣು ಗುಡ್ಡೆಯ ಭಾಗಕ್ಕೆ ನಿಮಗಿಷ್ಟವಾದ ಬಣ್ಣ ತುಂಬ ಬಹುದಾಗಿದೆ. ಪಾಶ್ಚಾತ್ಯ ರಾಷ್ಟ್ರ ಗಳಲ್ಲಿ ಈ ರೀತಿಯ ಪ್ರಯೋಗಗಳಿಗೇನೂ ಕಡಿಮೆ ಇಲ್ಲ. ಕೆಂಪು, ನೀಲಿ,ಕಪ್ಪು, ಹಸಿರು, ನೇರಳೇ ಬಣ್ಣದ ಕಣ್ಣು ಗುಡ್ಡೆಯ ಟಾಟೂ ಮಾಡಿಸಿಕೊಂಡವರು ಬಹಳಷ್ಟು ಮಂದಿ ಇದ್ದಾರೆ.
https://www.instagram.com/p/B6QxNhLBFsi/?utm_source=ig_web_copy_link
#EyeballTattoo ಕಣ್ಣು ಗುಡ್ಡೆಯ ಒಳಗೆ ಟಾಟೂ ಡಿಸೈನಿಂಗ್ ಕ್ರೇಜ್ !
ಇತ್ತೀಚಿನ ಆಧುನಿಕ ಫ್ಯಾಷನ್ ಜಗತ್ತಿನಲ್ಲಿ ಚಿತ್ರ ವಿಚಿತ್ರ ಫ್ಯಾಷನ್ ನದ್ದೇ ಪರ್ವ ಕಾಲ.ಕಣ್ಣು ಗುಡ್ಡೆಯ ಬಿಳಿಯ ಭಾಗದಲ್ಲಿ ಸ್ಟಾರ್, ಹಾರ್ಟ್, ಲವ್ , ಹೆಸರು, ಕರೆಸಿಕೊಳ್ಳುವ ಟ್ರೆಂಡ್ ಒಂದು ಶುರುವಾಗಿದೆ. ಬಹಳ ಭಯಾನಕ ಹಾಗೂ ವೈದ್ಯಕೀಯ ಲೋಕದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆ ಗೆ ಸಾಕ್ಷಿ ಯಾಗಿದೆ.
ಕಣ್ಣು ದೇಹದಲ್ಲಿ ಬಹಳ ಸೂಕ್ಷ್ಮವಾದ ಭಾಗ. ಹೊರ ಜಗತ್ತಿನ ಬಣ್ಣ ವನ್ನು ನಾವು ನೋಡುವುದೇ ಕಣ್ಣುಗಳಿಂದ . ಕಣ್ಣು ಗುಡ್ಡೆಯ ಒಳಗೆ ಟಾಟೂ ಮಾಡಿಸುವುದು , ಟಾಟೂ ಇಂಕ್ ಇಂಜೆಕ್ಟ್ ಮಾಡುವುದು ಅದೆಷ್ಟರಮಟ್ಟಿಗೆ ವೈದ್ಯಕೀಯ ವಾಗಿ
ಸರಿ ಎಂಬ ಚರ್ಚೆ ಗಳು ನಡೆಯುತ್ತದೆ ಇದೆ. ಇದರ ನಡುವೆಯೇ #EyeballTattoo ಕ್ರೇಜ್ ಜನರಲ್ಲಿ ಹೆಚ್ಚುತ್ತಲೇ ಇದೆ!
https://www.instagram.com/p/Bz-lopNAqUh/?utm_source=ig_web_copy_link
ಭಾರತಕ್ಕೂ ಕಾಲಿಟ್ಟ ScrelalTattoo
https://www.instagram.com/p/BZpWPgQHmwY/?utm_source=ig_web_copy_link
ದಿಲ್ಲಿ ಯ ಟಾಟೂ ಆರ್ಟಿಸ್ಟ್ , ಕರಣ್ ಕಿಂಗ್ ,ತನ್ನ ಕಣ್ಣು ಗುಡ್ಡೆಗೆ ಕಪ್ಪು ಇಂಕ್ ಇಂಜೆಕ್ಟ್ ಮಾಡಿಸಿಕೊಂಡು 2017 ರಲ್ಲಿ ಭಾರೀ ಚರ್ಚೆ ಗೆ ಗ್ರಾಸವಾಗಿದ್ದರು .
ScrelalTattooFailures ವೈಫಲ್ಯಗಳನ್ನು ಕಂಡುಕೊಳ್ಳುವ ಕಣ್ಣು ಗುಡ್ಡೆಯ ಟಾಟೂ ಕ್ರೇಜ್!
https://www.instagram.com/p/BO2xlPlF_d1/?utm_source=ig_web_copy_link
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Photo Gallery | ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025
ದಿನದ ಸುದ್ದಿ
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.
ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಮತ್ತಿನ ಕುಣಿಕೆ

- ಗುರು ಸುಳ್ಯ
ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ
ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ
ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…
ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ
ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ
ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ಚೀಟಿ ವ್ಯವಹಾರದಲ್ಲಿ ಮೋಸ ; ಅತಿಆಸೆಗೆ ಬಲಿಯಾದ ಗಣಿನಾಡಿನ ಜನ
-
ದಿನದ ಸುದ್ದಿ5 days ago
ಚನ್ನಗಿರಿ | ‘ಕುವೆಂಪು ಓದು : ಕಮ್ಮಟ’ ; ಚರ್ಚೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು
-
ದಿನದ ಸುದ್ದಿ5 days ago
ದೇಶಾದ್ಯಂತ ಇಂದು ಮಹಾವೀರ ಜಯಂತಿ ಆಚರಣೆ ; ಗಣ್ಯರ ಶುಭಾಶಯ
-
ದಿನದ ಸುದ್ದಿ4 days ago
ದಾವಣಗೆರೆ | ಮಕ್ಕಳ ಬೇಸಿಗೆ ರಜೆಗೆ ಶುಭ ಕೋರಿದ ತಿಂಗಳ ಅಂಗಳ
-
ದಿನದ ಸುದ್ದಿ5 days ago
ರುದ್ರಪ್ಪ ಹನಗವಾಡಿ ಅವರಿಗೆ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ
-
ದಿನದ ಸುದ್ದಿ4 days ago
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ | ಕೇಂದ್ರ ಕೊಡದಿದ್ದರೂ ರಾಜ್ಯ ಸರ್ಕಾರ ನೀಡಲಿದೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್
-
ದಿನದ ಸುದ್ದಿ4 days ago
ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಶಂಕುಸ್ಥಾಪನೆ
-
ದಿನದ ಸುದ್ದಿ4 days ago
ದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ’