Connect with us

ದಿನದ ಸುದ್ದಿ

ಪ್ರಸಕ್ತ ಸಂದರ್ಭದಲ್ಲಿ ಬಡವಿಭಾಗಗಳಿಗೆ ಹಣ ವರ್ಗಾವಣೆ ಯೋಜನೆಗಳು

Published

on

ಈಗ ಪ್ರಸ್ತಾಪಿಸಲಾಗುತ್ತಿರುವ ನಗದು ವರ್ಗಾವಣೆಯು, ಮೋದಿ ಸರಕಾರದ ಪಿಎಂ-ಕಿಸಾನ್ ಆಗಲಿ,ಅಥವ ಕಾಂಗ್ರೆಸಿನ “ನ್ಯಾಯ್” ಅಗಲಿ, ನವ ಉದಾರ ಬಂಡವಾಳಶಾಹಿಯು ಬಿಕ್ಕಟ್ಟಿಗೆ ಒಳಗಾಗಿರುವ ಅಂಶವನ್ನು ಸೂಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನವ-ಉದಾರವಾದಿಬಂಡವಾಳಶಾಹಿಯ ಆಚೆಗೆ ನೋಡಲಾರದ ರಾಜಕೀಯ ಪಡೆಗಳಲ್ಲಿ ಒಂದು ಸನ್ನಿಗೆ ಒಳಗಾದ ರೀತಿಯಲ್ಲಿ ಕೋಮು ಭಾವನೆಗಳನ್ನು ಕೆಣಕಿ ವೋಟು ಬಾಚಿಕೊಳ್ಳುವ ಸನ್ನಾಹದಲ್ಲಿ ತೊಡಗಿದ್ದರೆ, ಇನ್ನೊಂದು, ಜಾತ್ಯಾತೀತ ಮನೋಭಾವ ಹೊಂದಿರುವ ರಾಜಕೀಯ ಪಡೆಯು ನವ ಉದಾರ ಬಂಡವಾಳಶಾಹಿಗೆ ಒಂದು “ಮಾನವೀಯ ಮುಖ” ತೊಡಿಸುವ ಆಶ್ವಾಸನೆ ಕೊಡುತ್ತಿದೆ.

ಇಂತಹನೆರವೇರಲಾರದಆಶ್ವಾಸನೆಗಳನ್ನುಎಡಪಂಥಿಯರುಬೆಂಬಲಿಸಬೇಕೇ? ಬಡವರಿಗೆ ಪರಿಹಾರ ದೊರಕಿಸುವ ಆಶ್ವಾಸನೆಯಿಂದ ಕೂಡಿದ ಕ್ರಮಗಳಿಗೆ ಈ ರಾಜಕೀಯ ಪಡೆಗಳು ಮುಂದಾದಾಗ ಎಡ ಪಂಥೀಯರು ಅದನ್ನು ಸ್ವಾಗತಿಸಬೇಕುಎನ್ನುತ್ತಾರೆಪ್ರೊ. ಪ್ರಭಾತ್ಪಟ್ನಾಯಕ್. . ಏಕೆಂದರೆ, ನವ ಉದಾರವಾದದ ತರ್ಕ ಮತ್ತು ಚಾಳಿಯಿಂದಾಗಿ ಒಂದೋ ಈ ಆಶ್ವಾಸನೆ ಕೊಟ್ಟವರು ಅದನ್ನು ಮುರಿಯುತ್ತಾರೆ, ಆಗ ಎಡ ಶಕ್ತಿಗಳು ಅದನ್ನು ಎತ್ತಿ ತೋರಿಸಿ ಅದರ ವಿರುದ್ಧ ಹೋರಾಡಬೇಕಾಗುತ್ತದೆ, ಇಲ್ಲವೇ ನವ ಉದಾರ ವ್ಯವಸ್ಥೆಯನ್ನೇ ಮೀರಲು ಆರಂಭಗೊಳ್ಳುವ ಒಂದು ಗತಿತಾರ್ಕಿಕ ಪ್ರಕ್ರಿಯೆಯನ್ನು ಎಡ ಶಕ್ತಿಗಳು ಉದ್ದೀಪಿಸಬಹುದು.

ಮೊದಲು ಮೋದಿ ಸರ್ಕಾರವು ತನ್ನ ಕೊನೆಯ ಬಜೆಟ್‌ನಲ್ಲಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸುವ ಒಂದು ಯೋಜನೆಯ ಘೋಷಣೆ ಮಾಡಿತು. ಈ ಯೋಜನೆಯ ಪ್ರಕಾರ, ಅತಿ ಸಣ್ಣ ರೈತ ಕುಟುಂಬವೊಂದಕ್ಕೆ ವಾರ್ಷಿಕ 12,000 ರೂಗಳನ್ನು ಅವರ ಬ್ಯಾಂಕ್ ಖಾತೆಗೆ ಸರ್ಕಾರವೇ ನೇರವಾಗಿ ವರ್ಗಾಯಿಸುತ್ತದೆ. ಈ ಯೋಜನೆಯು ಸುಮಾರು 12 ಕೋಟಿ ಮಂದಿಗೆ ಅನುಕೂಲ ಕಲ್ಪಿಸುತ್ತದೆ ಎಂದು ಅವರು ಹೇಳುವಾಗ ಚುನಾವಣೆಗಳಲ್ಲಿ ವೋಟು ಬಾಚಿಕೊಳ್ಳುವುದಷ್ಟೇ ಅವರ ಉದ್ದೇಶ. ಆದರೆ, ಅವರು ಘೋಷಣೆ ಮಾಡಿರುವ ಹಣದ ಮೊತ್ತವು ಅದೆಷ್ಟು ಜುಜುಬಿ ಎಂದರೆ, ಅದರ ಬಗ್ಗೆ ಮೋದಿ ಕೂಡ ತಮ್ಮ ಚುನಾವಣಾ ಭಾಷಣಗಳಲ್ಲಿ ತುತ್ತೂರಿ ಊದುವುದನ್ನೇ ನಿಲ್ಲಿಸಿದ್ದಾರೆ. ಬದಲಿಗೆ, ಬಿಜೆಪಿಯು ಪ್ರಜ್ಞಾ ಠಾಕುರ್ ಅಂತಹ ಭಯೋತ್ಪಾದನೆ ಆರೋಪಿಯನ್ನು ಕಣಕ್ಕಿಳಿಸಿ ಕೋಮು ಭಾವನೆಗಳನ್ನು ಕೆಣಕಿ ವೋಟು ಬಾಚಿಕೊಳ್ಳುವ ತನ್ನ ಹಳೆಯ ಚಾಳಿಗೆ ಮರಳಿದೆ.

ಈಗ ಕಾಂಗ್ರೆಸ್‌ನ ಸರದಿ. ಅದು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ “ನ್ಯಾಯ್” ಎಂಬ ಹೆಸರಿನ ಒಂದು ಹೆಚ್ಚು ಮಹತ್ವಾಕಾಂಕ್ಷೆಯ ಯೋಜನೆಯನ್ನು ಘೋಷಿಸಿದೆ. ಅದರ ಪ್ರಕಾರ, ಸುಮಾರು ಐದು ಕೋಟಿ ಅತ್ಯಂತ ಬಡ ಕುಟುಂಬಗಳಿಗೆ ತಿಂಗಳಿಗೆ 6000 ರೂಗಳನ್ನು ಅವರ ಖಾತೆಗೆ ವರ್ಗಾಯಿಸಲಾಗುವುದು.
ಈ ಯೋಜನೆಗೆ ವಾರ್ಷಿಕ 3.6 ಲಕ್ಷ ಕೋಟಿ ರೂ ವೆಚ್ಚ ತಗಲುತ್ತದೆ. (ಮೋದಿ ಸರ್ಕಾರದ ಯೋಜನೆಗೆ ತಗಲುವ ವೆಚ್ಚ ವಾರ್ಷಿಕ 72,000 ಕೋಟಿ ರೂಗಳು). ಕಾಂಗ್ರೆಸ್‌ನ ಈ ಯೋಜನೆಗೆ ಹಣ ಒದಗಿಸಿಕೊಳ್ಳುವ ಬಗ್ಗೆ ವಿವರಗಳು ಇನ್ನೂ ಲಭ್ಯವಿಲ್ಲವಾದರೂ ಈ ಯೋಜನೆ ಗಂಭೀರತೆಯಿಂದ ಕೂಡಿದೆ ಎಂಬ ಭಾವನೆ ಇದೆ.

ಬಡವರಿಗೆನೆರವಿನ “ಔದಾರ್ಯ”

ಬಡವರಿಗೆ ಈ ದೇಶದಲ್ಲಿ ದೊರೆಯುವ ಯಾವುದೇ ರೀತಿಯ ನೆರವು ಸ್ವಾಗತಾರ್ಹವೇ. “ನ್ಯಾಯ್”ಯೋಜನೆಯಲ್ಲಿ ಎರಡು ಸಮಸ್ಯೆಗಳು ಎದ್ದು ಕಾಣುತ್ತವೆ. ಮೊದಲನೆಯ ಸಮಸ್ಯೆ ಎಂದರೆ, ಇದೊಂದು ನಗದು ಹಣ ವರ್ಗಾವಣೆಯ ಯೋಜನೆ. ಹಾಲಿ ಇರುವ ಕಲ್ಯಾಣ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಅಧಿಕವಾಗಿ ಈ ಯೋಜನೆ ಸೇರಿಕೊಳ್ಳುತ್ತದೆ ಎಂದು ಭಾವಿಸಿಕೊಂಡರೂ ಸಹ, ಬಡವರಿಗೆ ಒಂದಿಷ್ಟು ಹಣ ಕೊಟ್ಟು ಸರ್ಕಾರ ಕೈ ತೊಳೆದುಕೊಳ್ಳುತ್ತದೆ, ಅಷ್ಟೆ. ಶಿಕ್ಷಣ ಮತ್ತು ಆರೋಗ್ಯ ಇಂತಹ ಸಾರ್ವತ್ರಿಕ ಅಗತ್ಯ ಸೇವೆಗಳನ್ನು ಒದಗಿಸುವ ತನ್ನ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳುತ್ತದೆ. ಹಾಗಾಗಿ, ಇಂತಹ ಅಗತ್ಯ ಸೇವೆಗಳನ್ನು ಖಾಸಗಿಯಾಗಿ ಒದಗಿಸುವವರು ತಮ್ಮ ಸೇವೆಗಳ ಬೆಲೆ ಏರಿಸಿ ಬಡವರಿಗೆ ವರ್ಗಾವಣೆಯಾದ ಈ ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಾರೆ.

ಎರಡನೆಯ ಸಮಸ್ಯೆ ಎಂದರೆ, ಈ ಯೋಜನೆಯು ಕೆಲವೇ ಮಂದಿಗೆ ಮಾತ್ರ ಫಲ ದೊರಕಿಸುವ ಗುರಿ ಹೊಂದಿದೆ. ಹಾಗಾಗಿ, ಅನೇಕ ಮಂದಿ ಈ ಯೋಜನೆಯಿಂದ ಹೊರಗುಳಿಯುತ್ತಾರೆ. ಮೇಲಾಗಿ, ಫಲಾನುಭವಿಗಳ ಆಯ್ಕೆ ಮನಸೋ ಇಚ್ಛೆಯಾಗಿರುತ್ತದೆ. ಉದಾಹರಣೆಗೆ, ಒಂದು ನಿಗದಿಪಡಿಸಿದ ವರಮಾನ ಮಿತಿಯೊಳಗಿರುವ ಒಂದು ಕುಟುಂಬಕ್ಕೆ ತಿಂಗಳಿಗೆ 6000 ರೂ ದೊರೆಯುವಾಗ, ಆ ಮಿತಿಗಿಂತ ಒಂದು ರೂ ಹೆಚ್ಚಿನ ವರಮಾನವಿರುವ ಕುಟುಂಬಕ್ಕೆ ಏನೂ ಸಿಗುವುದಿಲ್ಲ. ಇದು ಬಡ ಜನತೆಯ ನಡುವೆ ವಿರಸ ಸೃಷ್ಠಿಸುತ್ತದೆ.

ಯಾವುದೇ ಸೀಮಿತ ಫಲಾನುಭವಿ ಯೋಜನೆಯು ಸರ್ಕಾರದ ಔದಾರ್ಯಪೂರ್ಣ ಬಕ್ಷೀಸು ಎನಿಸುತ್ತದೆ. ಇದನ್ನು ಪಡೆಯಲು ಒಬ್ಬ ವ್ಯಕ್ತಿಯು ದೈನ್ಯತೆಯಿಂದ ಕೋರಿಕೆ ಸಲ್ಲಿಸಬೇಕಾಗುತ್ತದೆ. ಇದು, ಮೂಲಭೂತವಾಗಿ ಪ್ರಜಾಪ್ರಭುತ್ವ-ವಿರೋಧಿ ನಡೆಯಾಗುತ್ತದೆ.ಕೆಲವು ವಸ್ತುಗಳು ಮತ್ತು ಸೇವೆಗಳನ್ನುಒಂದು ಸಾರ್ವತ್ರಿಕವಾಗಿ ಹಕ್ಕು ಆಗಿ ಪ್ರತಿ ಪ್ರಜೆಗೂ ಒದಗಿಸಬೇಕಾದ ಸರ್ಕಾರವು, ಅದರ ಬದಲಿಗೆ ಅವನ್ನು ದಾನವೋ ಭಿಕ್ಷೆಯೋ ಎಂಬಂತೆ ಕೊಡುವಂತಾಗುತ್ತದೆ. ಆದ್ದರಿಂದ, ಕೆಲವು ಆರ್ಥಿಕ ಹಕ್ಕುಗಳು ಸಾರ್ವತ್ರಿಕವಾಗಿ ಜಾರಿಯಾದಾಗ ಮಾತ್ರ ಇಂತಹ ಸೀಮಿತ ಫಲಾನುಭವಿ ಯೋಜನೆಗಳು ಬಡ ಜನತೆಯ ನಡುವೆ ಸೃಷ್ಠಿಸುವ ವಿರಸ ನಿವಾರಣೆಯಾಗುತ್ತದೆ.

ವರ್ಗಾವಣೆಯ ವಿಷಯವನ್ನು ಈಗಏಕೆ ಎತ್ತಲಾಗಿದೆ?

ಇಂತಹ ಯೋಜನೆಗಳ ಬಗ್ಗೆ ಅನಿಸಿಕೆಗಳನ್ನು ಬದಿಗೆ ಸರಿಸಿ, ಒಂದು ಪ್ರಶ್ನೆ ಕೇಳಬೇಕಿದೆ: ಇದ್ದಕ್ಕಿದ್ದಂತೆಯೇ ಇಂತಹ ವರ್ಗಾವಣೆಯ ವಿಷಯವನ್ನು ಏಕೆ ಎತ್ತಲಾಗಿದೆ? ಅಭಿವೃದ್ಧಿಯ ಬಗ್ಗೆ ಮಾತನಾಡಿಯೇ ಮೋದಿ 2014ರ ಚುನಾವಣೆ ಗೆದ್ದರು. ಅದಕ್ಕೂ ಹಿಂದೆ, ಜಿಡಿಪಿಯ ಬೆಳವಣಿಗೆ ದರ, ಭಾರತ ಒಂದು ಬಲಿಷ್ಠ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಬಗ್ಗೆ, ಪ್ರಕಾಶಮಾನ ಭಾರತ ಮುಂತಾದ ವಿಷಯಗಳ ಬಗ್ಗೆ ಚರ್ಚೆಯಾಗುತ್ತಿತ್ತೇ ವಿನಃ, ಯಾವತ್ತೂ ಬಡವರಿಗೆ ಹಣ ವರ್ಗಾಯಿಸುವ ಚರ್ಚೆ ಇರಲೇ ಇಲ್ಲ. ಯುಪಿಎ-1 ಸರ್ಕಾರ ಜಾರಿಗೆ ತಂದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ 2014 ರ ಚುನಾವಣೆಯ ಸಂದರ್ಭದಲ್ಲಿಯೂ ಸಹ ಚರ್ಚೆಯಾಗಲಿಲ್ಲ. ಈ ಎಲ್ಲ ಅಂಶಗಳನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಜಿಡಿಪಿ ಉನ್ನತವಾಗಿ ಬೆಳೆಯುತ್ತದೆ ಮತ್ತು ಅದರಿಂದಾಗಿಯೇ ಎಲ್ಲರ ಏಳಿಗೆಯಾಗುತ್ತದೆ ಎಂಬುದಾಗಿ ಎಲ್ಲರೂ ನಂಬಿದ್ದರು. ಆದರೆ, ಈಗ ಇಂತಹ ಬೊಗಳೆಯ ಮಾತುಗಳಿಗೆ ಮತದಾರರು ಮರುಳಾಗುತ್ತಿಲ್ಲ.

ಈಗ ಪ್ರಸ್ತಾಪಿಸಲಾಗುತ್ತಿರುವ ನೇರ ವರ್ಗಾವಣೆಯು, ಸಂಕ್ಷಿಪ್ತವಾಗಿ ಹೇಳುವುದಾದರೆ, ನವ ಉದಾರ ಬಂಡವಾಳಶಾಹಿಯು ಬಿಕ್ಕಟ್ಟಿಗೆ ಒಳಗಾಗಿರುವ ಅಂಶವನ್ನು ಸೂಚಿಸುತ್ತದೆ. ನವ ಉದಾರ ಬಂಡವಾಳಶಾಹಿಯು ಉತ್ಪಾದಕ ಶಕ್ತಿಗಳನ್ನು ವೇಗವಾಗಿ ಬೆಳೆಸುವುದರಿಂದ ಜಿಡಿಪಿ ಉನ್ನತವಾಗಿ ಬೆಳೆಯುತ್ತದೆ. ಅದರಿಂದ ಎಲ್ಲರೂ ಪ್ರಯೋಜನ ಪಡೆಯುತ್ತಾರೆ ಎಂದು ಪ್ರಚುರಪಡಿಸುತ್ತಿದ್ದ ಅದರ ಸಿದ್ದಾಂತವು ಈಗ ವಿಶ್ವಾಸಾರ್ಹತೆ ಕಳೆದುಕೊಂಡಿದೆ.
ಈ ಸಂಗತಿ ಬಿಜೆಪಿಯು ಹುಚ್ಚು ಹಿಡಿದ ರೀತಿಯಲ್ಲಿ ಪ್ರಚೋದನಾಕಾರಿ ಕೋಮು ಪ್ರಚಾರಕ್ಕೆ ಮರಳಿರುವ ಅಂಶದಲ್ಲಿಯೂ ಕಾಣ ಬರುತ್ತದೆ. ಹಿಂದೆ ಅಭಿವೃದ್ಧಿಯ ಬಗ್ಗೆ ಅವರು ಕೊಟ್ಟ ಭರವಸೆಗಳು ಈಗ ಟೊಳ್ಳು ಶಬ್ದಗಳಾಗಿ ಕೇಳಿಸುತ್ತಿವೆ, ಅವುಗಳನ್ನು ಈಗ ಪುನರಾವರ್ತಿಸುವಂತಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ, ಅಂದರೆ, ಬಂಡವಾಳಶಾಹಿಯ ಬಿಕ್ಕಟ್ಟಿನ ಸಂರ್ಭದಲ್ಲಿ, “ಅಭಿವೃದ್ಧಿ” ಘೋಷಣೆಯ ಮೂಲಕ ಎಳ್ಳಷ್ಟೂ ಪರಿಹಾರ ಸಿಗುವುದಿಲ್ಲ ಎಂಬುದು ಜನತೆಗೆ ಅನುಭವದ ಮೂಲಕವೇ ತಿಳಿದಿದೆ.

ಈ ವಿದ್ಯಮಾನಗಳನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನವ ಉದಾರ ಬಂಡವಾಳಶಾಹಿಯು ಇಂದು ಬಿಕ್ಕಟ್ಟಿಗೆ ಒಳಗಾಗಿರುವ ಪರಿಸ್ಥಿತಿಯಲ್ಲಿ ಅದಕ್ಕೆ ಬದ್ಧವಾಗಿರುವ ಒಂದು ರಾಜಕೀಯ ಪಡೆ ಸನ್ನಿಗೆ ಒಳಗಾದ ರೀತಿಯಲ್ಲಿ ಕೋಮು ಭಾವನೆಗಳನ್ನು ಕೆಣಕಿ ವೋಟು ಬಾಚಿಕೊಳ್ಳುವ ಸನ್ನಾಹದಲ್ಲಿ ತೊಡಗಿದೆ. ಅದೇ ಸಮಯದಲ್ಲಿ, ಇನ್ನೊಂದು ರಾಜಕೀಯ ಪಡೆ ಇನ್ನೊಂದು ರೀತಿಯಲ್ಲಿ ಕಾರ್ಯಮಗ್ನವಾಗಿದೆ. ವಿಶಾಲ ಜಾತ್ಯಾತೀತ ಮನೋಭಾವ ಹೊಂದಿರುವ ಈ ಪಡೆಯು ನವ ಉದಾರ ಬಂಡವಾಳಶಾಹಿಗೆ ಒಂದು ಮಾನವೀಯ ಮುಖ ತೊಡಿಸಿ, ಸಮಾಜದ ತಳಸ್ತರದದಲ್ಲಿವ ಒಟ್ಟು ಜನಸಂಖ್ಯೆಯ ಐದನೇ ಒಂದು ಭಾಗದಷ್ಟು ಮಂದಿಗೆ ನೇರ ಹಣ ವರ್ಗಾವಣೆಯ ಮೂಲಕ ನವ ಉದಾರ ಬಂಡವಾಳಶಾಹಿಯ ದಿಕ್ಪಥವನ್ನು ಪರಿಷ್ಕರಿಸುವ ಆಶ್ವಾಸನೆ ಕೊಡುತ್ತಿದೆ.

ನಿಜ, ಇಂತಹ ನೇರ ಹಣ ವರ್ಗಾವಣೆ ಯೋಜನೆ ಕಾರ್ಯಸಾಧ್ಯ, ಅವಕ್ಕೆ ಹಣ ಹೊಂದಿಸಿಕೊಳ್ಳುವುದು ಸಾಧ್ಯವಿದೆ. ಅದಕ್ಕೆ ತಗಲುವ ವೆಚ್ಚವು ಜಿಡಿಪಿಯ ಸುಮಾರು ಶೇ.2 ರಷ್ಟಾಗುತ್ತದೆ. ಆದರೆ, ನವ ಉದಾರ ಬಂಡವಾಳಶಾಹಿಯ ಅಂತರ್ಗತ ತರ್ಕವೇ ಇಂತಹ ವರ್ಗಾವಣೆಗೆ ಅಡ್ಡಿಯಾಗುತ್ತದೆ. ಜಿಡಿಪಿಯ ಸುಮಾರು ಶೇ.2 ರಷ್ಟಾಗುವ ಈ ಮೊತ್ತವನ್ನು ಬಂಡವಾಳದಾರರ ಮೇಲೆ ತೆರಿಗೆ ಹಾಕಿಯೋ ಅಥವಾ ಸಮಾಜದ ಶ್ರೀಮಂತ ವಿಭಾಗಗಳ ಮೇಲೆ ತೆರಿಗೆ ಹಾಕುವ ಮೂಲಕವೋ ಹೊಂದಿಸಿಕೊಳ್ಳಬಹುದು. ಅಥವಾ, ವಿತ್ತೀಯ ಕೊರತೆಯ ಗಾತ್ರವನ್ನು ಹೆಚ್ಚಿಸಿಕೊಳ್ಳುವ ಮೂಲಕ, ಅಥವಾ ಈ ಎರಡೂ ವಿಧಾನಗಳ ಸಂಯೋಜನೆಯ ಮೂಲಕವೂ ಹೊಂದಿಸಿಕೊಳ್ಳಬಹುದು.

ಆದರೆ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವ ಈ ಎರಡೂ ವಿಧಾನಗಳನ್ನು ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಅನಿಷ್ಟವೆಂದೇ ಬಗೆಯುತ್ತದೆ. ಈ ಕಾರಣದಿಂದಾಗಿ, ನೇರ ಹಣ ವರ್ಗಾವಣೆಯ ಯೋಜನೆಯನ್ನು ಜಾರಿಗೊಳಿಸ ಬಯಸುವ ಯಾವುದೇ ಸರ್ಕಾರವು ನವ ಉದಾರವಾದದ ಏರ್ಪಾಡಿನಲ್ಲಿ ಕೆಲವು ಬದಲಾವಣೆ ಮಾಡಬೇಕಾಗುತ್ತದೆ (ಆಗ, ಈ ಬದಲಾವಣೆಯ ಕ್ರಿಯೆಯು ತನ್ನದೇ ಒಂದು ಗತಿ ತಾರ್ಕಿಕ ಚಲನೆಯನ್ನು ಹೊಮ್ಮಿಸುತ್ತದೆ). ಇದು ಸಾಧ್ಯವಾಗದಿದ್ದಲ್ಲಿ, ಹಾಲಿ ಕಲ್ಯಾಣ ಕಾರ್ಯಕ್ರಮಗಳನ್ನು ನಿಲ್ಲಿಸುವ ಮೂಲಕ ವರ್ಗಾವಣೆ ಯೋಜನೆಗೆ ಹಣ ಹೊಂದಿಸಿಕೊಳ್ಳಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ವರ್ಗಾವಣೆಯ ಉದ್ದೇಶವೇ ವಿಫಲವಾಗುತ್ತದೆ.

ಕಲ್ಯಾಣವೆಚ್ಚಗಳನ್ನುಸ್ವಾಗತಿಸುವುದುಪರಿಷ್ಕರಣವಾದವೇ?

ಬಂಡವಾಳಶಾಹಿ ವ್ಯವಸ್ಥೆಯು ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಸಲುವಾಗಿಯೇ ಸ್ವಲ್ಪ ಮಟ್ಟಿನ ನೆರವನ್ನು ಬಡವರಿಗೆ ಒದಗಿಸಬಲ್ಲದು, ಮತ್ತು ಒದಗಿಸುತ್ತದೆ, ಇಂತಹ ವರ್ಗಾವಣೆ ಯೋಜನೆಗಳನ್ನು, ಅಥವ ಒಟ್ಟಾರೆಯಾಗಿ ಕಲ್ಯಾಣ ವೆಚ್ಚಗಳನ್ನು ಸ್ವಾಗತಿಸುವುದು ಪರಿಷ್ಕರಣವಾದ ಆಗುತ್ತದಷ್ಟೇ ಎಂಬುದಾಗಿ ವಾದಿಸುವ ಪ್ರವೃತ್ತಿ ಕೆಲವು ಎಡ ಪಂಥೀಯ ವಲಯಗಳಲ್ಲಿದೆ. ನೇರ ಹಣ ವರ್ಗಾವಣೆ ಅಥವಾ ಕಲ್ಯಾಣ ಕಾರ್ಯಕ್ರಮಗಳು ವ್ಯವಸ್ಥೆಯಲ್ಲಿ ಕಾರ್ಯಸಾಧ್ಯವಾದ ಕೇವಲ ಸುಧಾರಣಾ ಕ್ರಮಗಳು. ಅದಕ್ಕೆ ಪ್ರಶಂಸೆಯ ಅಗತ್ಯವಿಲ್ಲ ಎನ್ನುತ್ತಾರೆ ಅವರು.

ವ್ಯಂಗ್ಯದ ಸಂಗತಿಯೆಂದರೆ ಬಡವರಿಗೆ ನೆರವು ಒದಗಿಸುವ ಬಗ್ಗೆ ನವ ಉದಾರ ಬಂಡವಾಳಶಾಹಿಯ ಸಮರ್ಥಕರು ಹೊಂದಿರುವ ಅಭಿಪ್ರಾಯವೂ ಇದೇ ರೀತಿಯಲ್ಲಿದೆ. ಬಡವರಿಗೆ ನೆರವು ಒದಗಿಸಬಹುದಾದಷ್ಟು ಹೊಂದಿಕೆಯನ್ನು ಅದು ಮಾಡಿಕೊಳ್ಳಬಲ್ಲದು, ಅದರ ಅಂತರ್ಗತ ತರ್ಕವು ಇಂತಹ ನೆರವಿಗೆ ಅಡ್ಡಿಯಾಗುವುದಿಲ್ಲ ಎಂದು ಅವರು ವಾದಿಸುತ್ತಾರೆ.

ಶ್ರೀಮಂತರಿಗೆ ಮತ್ತು ಕಾರ್ಪೊರೇಟ್‌ಗಳಿಗೆ ತೆರಿಗೆ ಕಡಿತ ಮಾಡಿದರೆ ಅದರ ಫಲವು ಕೆಳಕ್ಕೆ ಜಿನುಗಿ ತಳಸ್ತರಗಳಿಗೂ ಪ್ರಯೋಜನ ಸಿಗುತ್ತದೆ ಎಂಬ ಜಿನುಗು ಸಿದ್ಧಾಂತವು ಅಪಹಾಸ್ಯಗೊಳಗಾಗಿದ್ದ ಸಂದರ್ಭದಲ್ಲಿ ನವ ಉದಾರ ಬಂಡವಾಳಶಾಹಿಯ ಹೊಸ ಸಮರ್ಥನೆಯಾಗಿ, ಹನ್ನೊಂದನೇ ಪಂಚವಾರ್ಷಿಕ ಯೋಜನೆಯ ದಸ್ತಾವೇಜಿನಲ್ಲಿ, ಜಿಡಿಪಿ ಉನ್ನತವಾಗಿ ಬೆಳೆದಾಗ ಮಾತ್ರ ಸರ್ಕಾರದ ಆದಾಯವೂ ವೇಗವಾಗಿ ಬೆಳೆದು ಬಡತನ ತೊಡೆದು ಹಾಕುವ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚು ಹಣ ದೊರೆಯುತ್ತದೆ ಎಂಬುದಾಗಿ ಹೇಳಲಾಗಿತ್ತು. ಇದೊಂದು ಸೋಗು. ಬಡತನ ನಿವಾರಿಸುವ ಸಲುವಾಗಿ ಅಗತ್ಯ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ನವ ಉದಾರ ಆಳ್ವಿಕೆಯು ಅಡ್ಡಿಪಡಿಸುವುದಿಲ್ಲ ಎಂದು ತೋರಿಸಲು ಈ ರೀತಿಯ ಸೋಗು ಹಾಕಲಾಗಿತ್ತು.

ಸರ್ಕಾರದ ಈ ಅಭಿಪ್ರಾಯ ಸರಿಯೇ ಇದ್ದರೆ, ನವ ಉದಾರ ಆಳ್ವಿಕೆಯಲ್ಲಿ ಉನ್ನತವಾಗಿ ಜಿಡಿಪಿ ಬೆಳೆದದ್ದರ ಜೊತೆಯಲ್ಲೇ ಬಡತನವೂ ಅಗಾಧವಾಗಿ ಬೆಳೆಯುತ್ತಿರಲಿಲ್ಲ. ಹಸಿವೆಯ ಹಾಹಾಕಾರ ತೀವ್ರಗೊಳ್ಳುತ್ತಿರಲಿಲ್ಲ. ನಿರುದ್ಯೋಗ ಬೃಹದಾಕಾರವಾಗಿ ಬೆಳೆಯುತ್ತಿರಲಿಲ್ಲ. ದುಡಿಯುವ ಜನತೆಯ ತಲಾ ವರಮಾನವು ಉದಾರೀಕರಣ ಪೂರ್ವದಲ್ಲಿ ಇದ್ದುದಕ್ಕಿಂತಲೂ ಕೆಳಗೆ ಇಳಿಯುವ ಮಟ್ಟಿಗೆ ಅವರನ್ನು ಹಿಂಡುತ್ತಿರಲಿಲ್ಲ. ಇವೆಲ್ಲವೂ ಅಲ್ಲಗಳೆಯಲಾಗದ ವಾಸ್ತವ ಸಂಗತಿಗಳು.

ಸ್ವಲ್ಪವೂ ಜಗ್ಗದ ನವ ಉದಾರ ಬಂಡವಾಳಶಾಹಿಯ ವರ್ತನೆಯಿಂದಾಗಿಯೇ ಇವೆಲ್ಲವೂ ಘಟಿಸಿವೆ. ಜೊತೆಯಲ್ಲಿ, ಅದರ ಅಂತರ್ಗತ ತರ್ಕದ ಅಗತ್ಯವಾಗಿ ಒಂದು ಧೃವದಲ್ಲಿ ಬೆಳೆಯುತ್ತಲೇ ಹೋಗುವ ಐಶ್ವರ್ಯವನ್ನೂ, ಇನ್ನೊಂದು ಧೃವದಲ್ಲಿ ಹೆಚ್ಚುತ್ತಲೇ ಹೋಗುವ ಬಡತನವನ್ನೂ ಹುಟ್ಟಿಸಿದೆ. ಇಂತಹ ಒಂದು ವ್ಯವಸ್ಥೆಯೊಳಗೆ ಬಡತನ ನಿವಾರಣೆ ಸಾಧ್ಯವೇ ಇಲ್ಲ. ಬಡತನ ನಿವಾರಣೆ ಸಾಧ್ಯವಾಗಬೇಕು ಎಂದಾದರೆ ನವ ಉದಾರ ಆಳ್ವಿಕೆಯ ಏರ್ಪಾಡನ್ನು ಮೀರಲೇಬೇಕಾಗುತ್ತದೆ.

ಕರಾರುವಾಕ್ಕಾಗಿ ಇದೇ ಕಾರಣದಿಂದಾಗಿ, ಬಡವರಿಗೆ ಪರಿಹಾರ ದೊರಕಿಸುವ ಆಶ್ವಾಸನೆಯಿಂದ ಕೂಡಿದ ಕ್ರಮಗಳನ್ನು ಕೈಗೊಳ್ಳಲು ನವ ಉದಾರವಾದದಿಂದ ಆಚೆ ನೋಡಲಾಗದ ರಾಜಕೀಯ ಪಡೆಗಳು ಮುಂದಾದಾಗ ಎಡ ಪಂಥೀಯರು ಅದನ್ನು ಸ್ವಾಗತಿಸಬೇಕು. ಏಕೆಂದರೆ, ನವ ಉದಾರವಾದದ ತರ್ಕ ಮತ್ತು ಚಾಳಿಯಿಂದಾಗಿ ಒಂದೋ ಈ ಆಶ್ವಾಸನೆ ಕೊಟ್ಟವರು ಅದನ್ನು ಮುರಿಯುತ್ತಾರೆ, ಆಗ ಎಡ ಶಕ್ತಿಗಳು ಅದನ್ನು ಎತ್ತಿ ತೋರಿಸಿ ಅದರ ವಿರುದ್ಧ ಹೋರಾಡಬೇಕಾಗುತ್ತದೆ, ಇಲ್ಲವೇ ನವ ಉದಾರ ವ್ಯವಸ್ಥೆಯನ್ನು ಮೀರಲು ಆರಂಭಗೊಳ್ಳುವ ಒಂದು ಗತಿತಾರ್ಕಿಕ ಪ್ರಕ್ರಿಯೆಯನ್ನು ಎಡ ಶಕ್ತಿಗಳು ಉದ್ದೀಪಿಸಬಹುದು.

ನವ ಉದಾರವಾದಿ ಬಂಡವಾಳಶಾಹಿಯ ಬಿಕ್ಕಟ್ಟಿನ ಸಮಯದಲ್ಲಿ ಮತ್ತು ಅದರ ಪರಿಣಾಮವಾಗಿ ಜನತೆ ಜರ್ಜರಿತರಾಗಿದ್ದಾರೆ. ಅವರ ಆಕ್ರೋಶವನ್ನು ಬೇರೆಡೆಗೆ ತಿರುಗಿಸುವ ಉದ್ದೇಶದಿಂದ ಕಾರ್ಪೊರೇಟ್-ಹಣಕಾಸು ಕುಳಗಳು ಕೋಮುವಾದಿ ಮತ್ತು ಛಿದ್ರಕಾರಿ ಅಜೆಂಡಾ ಹೊಂದಿರುವ ಶಕ್ತಿಗಳನ್ನು ಪ್ರೋತ್ಸಾಹಿಸುವ ಪ್ರವೃತ್ತಿ ಬೆಳೆಸಿಕೊಂಡಿರುವ ಸನ್ನಿವೇಶದಲ್ಲಿ, ಜನ ಜೀವನದ ದೈಹಿಕ ಸ್ಥಿತಿ-ಗತಿಗಳ ಬಗ್ಗೆ ಗಮನವನ್ನು ಕೇಂದ್ರೀಕರಿಸಿ ಅವರ ಸ್ಥಿತಿ-ಗತಿಗಳನ್ನು ಸುಧಾರಿಸುವ ಯಾವುದೇ ಕಾರ್ಯಕ್ರಮವು ಆ ಕಾರಣದಿಂದಾಗಿಯೇ ಕಾರ್ಪೊರೇಟ್-ಕೋಮುವಾದಿ ಮೈತ್ರಿಗೆ ಎದುರಾಗುವ ಒಂದು ಪ್ರಗತಿಪರ ಪ್ರತಿ-ಶಕ್ತಿಯಾಗುತ್ತದೆ. ಜನರ ಜೀವನ, ಅವರ ಸ್ಥಿತಿ-ಗತಿಗಳನ್ನು ಸುಧಾರಿಸುವ ಕಾರ್ಯಕ್ರಮ ಮತ್ತು ನವ ಉದಾರವಾದಿ ಬಂಡವಾಳಶಾಹಿಯ ತರ್ಕ ಇವುಗಳ ನಡುವೆ ಇರುವ ವೈರುಧ್ಯದ ಅರಿವಿಲ್ಲದ ಬೂರ್ಜ್ವಾ ರಾಜಕೀಯ ಪಡೆಗಳು ಜನರ ಸ್ಥಿತಿ-ಗತಿಗಳು ಸುಧಾರಿಸಬೇಕೆಂದು ಸಮರ್ಥಿಸುವುದು ಅಷ್ಟರಮಟ್ಟಿಗೆ ಒಳ್ಳೆಯದೇ.

-ಪ್ರೊ. ಪ್ರಭಾತ್ಪಟ್ನಾಯಕ್
ಅನು: ಕೆ.ಎಂ.ನಾಗರಾಜ್

( ಈ ವಾರದ ಜನಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಜನಸಿರಿ ಫೌಂಡೇಶನ್ ವತಿಯಿಂದ ಕವಿಗಳ ಕಲರವ

Published

on

ಸುದ್ದಿದಿನ,ಬೆಂಗಳೂರು:ಫೆ 10 ರಂದು ಜನಸಿರಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ 21 ನಿಮಿಷಗಳಲ್ಲಿ ರೈತರ ಕುರಿತು ಕವನ ರಚಿಸುವ ಬೃಹತ್ ಕಾರ್ಯ ಕ್ರಮವನ್ನು ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಉದ್ಘಾಟಿಸಿದರು.

ರಾಜ್ಯದ ನಾನಾ ಭಾಗಗಳಿಂದ ಸುಮಾರು 650 ಕ್ಕಿಂತ ಹೆಚ್ಚು ಕವಿಗಳು ಆಗಮಿಸಿ 21 ನಿಮಿಷಗಳಲ್ಲಿ ರೈತರ ಕುರಿತು ಕವನ ರಚಿಸಿದರು,ಇದೇ ಸಂಧರ್ಭದಲ್ಲಿ ಅನೇಕ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಟ ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಮಾವಳ್ಳಿ ಶಂಕರ್,ಮಿಮಿಕ್ರಿ ಗೋಪಿ, ಜನಸಿರಿ ಫೌಂಡೇಶನ್ ಮುಖ್ಯಸ್ಥರಾದ ನಾಗಲೇಖ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ತುಂಬಿದ ಕೊಡ ತುಳುಕಿತಲೇ ಪರಾಕ್..!

Published

on

  • ಗಿರೀಶ್ ಕುಮಾರ್ ಗೌಡ, ಬಳ್ಳಾರಿ

ತುಂಬಿದ ಕೊಡ ತುಳುಕಿತಲೇ ಪರಾಕ್” ಎಂದು ಕಾರ್ಣಿಕ ನುಡಿದ ಗೊರವಯ್ಯ, ಅದು ಮೈಲಾರ ಕೋಟ್ಯಾಂತರ ಭಕ್ತರ ಆರಾಧ್ಯದೈವ ಮೈಲಾರ ಲಿಂಗನ ಪುಣ್ಯ ಕ್ಷೇತ್ರ. ಈ ಪುಣ್ಯ ಕ್ಷೇತ್ರ ಪ್ರತಿ ವರ್ಷ ಕಾರ್ಣಿಕ ನುಡಿಗೆ ರಾಜ್ಯಾದ್ಯಂತ ಫೇಮಸ್. ನುಡಿ ಆಲಿಸಲು ಲಕ್ಷಾಂತರ ಜನ್ರು ಅಲ್ಲಿಗೆ ಆಗಮಿಸ್ತಾರೆ. ಇನ್ನು 18 ಅಡಿ ಬಿಲ್ಲನ್ನ ಏರಿ ಕಾರ್ಣಿಕ ನುಡಿ ನುಡಿಯುವ ಗೊರವಯ್ಯನ ನುಡಿಯನ್ನ ಮಳೆ, ಬೆಳೆ, ರಾಜಕೀಯ ಹೀಗೆ ಆಗು ಹೋಗಗಳ ಬಗ್ಗೆ ವಿಮರ್ಶೆ ಮಾಡ್ತಾರೆ ಹಾಗಾದ್ರೆ ಈ ವರ್ಷ ನುಡಿದ ಕಾರ್ಣಿಕ ನುಡಿ ಏನು…? ಅಂತಿರಾ ಈ ಸ್ಟೋರಿ ಓದಿ

ತುಂಬಿದ ಕೊಡ ತುಳುಕಿತಲೇ ಪರಾಕ್ ಎಂದು ಭವಿಷ್ಯ ನುಡಿದ ಗೊರವಯ್ಯ ಸದ್ದಲೇ ಎಂದು ಭವಿಷ್ಯವಾಣಿ ನುಡಿದ ಕಾರ್ಣಿಕದ ಗೊರವಯ್ಯ ರಾಮಣ್ಣ , 18 ಅಡಿ ಬಿಲ್ಲನ್ನು ಏರಿ ಕಾರ್ಣಿಕ ನುಡಿದು ಕೆಳಗೆ ಬಿದ್ದ ಗೊರವಯ್ಯ.

ತುಂಬಿದ ಕೊಡ ತುಳುಕಿತಲೇ ಪರಾಕ್… ಹೌದು ಇದು ಈ ವರ್ಷದ ಶ್ರೀ ಕ್ಷೇತ್ರ ಮೈಲಾರದ ಕಾರ್ಣಿಕ ( 2025 ರ ವರ್ಷ ಭವಿಷ್ಯ) ಅದು ಜಿಲ್ಲೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ. ಮೈಲಾರದ ಮೈಲಾರ ಲೀಂಗೆಶ್ವರನ ಜಾತ್ರೆ ಪ್ರತಿ ವರ್ಷ ನಡೆಯುತ್ತದೆ. ಭರತ ಹುಣ್ಣಿಮೆಯ ಬಳಿಕ ಶ್ರೀ ಕ್ಷೇತ್ರ ಮೈಲಾರದ ಡಂಕನಮರಡಿಯಲ್ಲಿ ಕಾರ್ಣಿಕ ನುಡಿಯನ್ನ 11 ದಿನಗಳ ಕಾಲ ಉಪವಾಸ ವಿದ್ದು ಭಕ್ತಿ ಭಾವ ಮಡಿ, 18 ಅಡಿಯ ಬಿಲ್ಲನ್ನ ಏರಿ ಕಾರ್ಣಿಕ ನುಡಿ ಭವಿಷ್ಯ ನುಡಿದ ಗೊರವಯ್ಯ ರಾಮಣ್ಣ, ತುಂಬಿದ ಕೊಡ ತುಳುಕಿತಲೇ ಪರಾಕ್ ಎಂದು ಭವಿಷ್ಯವಾಣಿ ನುಡಿದಿದ್ದಾರೆ‌ ಸಂಪಾದೀತಲೇ ಪರಾಕ್.

|ವೆಂಕಪ್ಪಯ್ಯ ಒಡೆಯರ್, ಮೈಲಾರ ಕ್ಷೇತ್ರದ ಧರ್ಮದರ್ಶಿ

ಈ ಸಮಯದಲ್ಲಿ ಹೂವಿನಹಡಗಲಿ ಶಾಸಕ ಕೃಷ್ಣ ನಾಯಕ್
ಮಾತನಾಡಿದ ಅವರು ತುಂಬಿದ ಕೊಡಾ ತುಳುಕಿತಲೇ ಪರಾಕ್ ‌ಎಂಬ ಎರಡೇ ಶಬ್ದದಲ್ಲಿ ಈ ವರ್ಷದ ದೈವವಾಣಿ ಹೇಳಿದ ಗೊರವಯ್ಯ ರಾಮಣ್ಣ, ಗೊರವಯ್ಯನ ಹೇಳಿಕೆಯಿಂದ ನೆರೆದಿದ್ದ ಲಕ್ಷಾಂತರ ಜನರಿಂದ ವ್ಯಕ್ತವಾದ ಹರ್ಷಾದ್ಘೋರ ಮುಗಿಲು ಮುಟ್ಟಿತು.ಈ ಬಾರಿ ಉತ್ತಮ ಮಳೆ,ಬೆಳೆಯಾಗಲಿದೆ.‌ ದೇಶ ಸುಭಿಕ್ಷೆಯಾಗಿರಲಿದೆ ಎಂದು ಅರ್ಥೈಸಲಾಗುತ್ತಿದೆ.

ಇದಕ್ಕೂ ಮೊದಲು ಮೈಲಾರಲಿಂಗೇಶ್ವರನ ದೇವಸ್ಥಾನದಿಂದ ಶ್ರೀ ವೆಂಕಪ್ಪಯ್ಯ ಒಡೆಯರ್ ಕುದುರೆಯನ್ನೇರಿ ಡೆಂಕನಮರಡಿ ಪ್ರದೇಶದವರೆಗೆ ಮೆರವಣಿ ಮೂಲಕ ಸಾಗಿ ಬಂದು ಕಾರ್ಣಿಕ ನುಡಿಯುವ ಸ್ಥಳದ ಸುತ್ತ ಪ್ರದಕ್ಷಿಣೆ ಹಾಕಿ, ಭಕ್ತರಿಗೆ ಆಶೀರ್ವಾದ ನೀಡಿದರು. ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸೇರಿ ರಾಜ್ಯದ ಮೂಲೆ ಮೂಲೆಗಳಿಂದ ಬಂದ ಲಕ್ಷಾಂತ ಭಕ್ತರು ನೆರೆದಿದ್ದರು.

ಒಟ್ಟಾರೆ ಹೇಳುವುದಾದರೆ, ಈ ಬಾರಿಯ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವವು ದೇಶ ಸುಭಿಕ್ಷವಾಗಿರಲಿದೆ, ಮಳೆ ಬೆಳೆ ಚೆನ್ನಾಗಿ ಆಗಲಿದೆ.. ರೈತರು ಉತ್ತಮ ರೀತಿಯಲ್ಲಿ ಇರ್ತಾರೆ ಅನ್ನೋ ಸಂದೇಶ ನೀಡಿದಂತಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜಿಎಂ ಡಿಪ್ಲೋಮೋ ಕಾಲೇಜಿನ 44 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ

Published

on

ಸುದ್ದಿದಿನ,ದಾವಣಗೆರೆ:ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ವಿಭಾಗದಿಂದ ಇತ್ತೀಚಿಗೆ ನಡೆದ ಕ್ಯಾಂಪಸ್ ಸಂದರ್ಶನ ಪ್ರಕ್ರಿಯೆಯಲ್ಲಿ ಜಿಎಂ ಡಿಪ್ಲೋಮೋ ಕಾಲೇಜಿನ ವಿವಿಧ ವಿಭಾಗಗಳಿಂದ 44 ಅಂತಿಮ ವರ್ಷದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಒಟ್ಟು 44 ಅಂತಿಮ ವರ್ಷದ ವಿದ್ಯಾರ್ಥಿಗಳು ನ್ಯೂಜೈಸಾ ಟೆಕ್ನಾಲಜಿಸ್ ನಲ್ಲಿ ಉದ್ಯೋಗವಕಾಶಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ ತೇಜಸ್ವಿ ಕಟ್ಟಿಮನಿ ಟಿ.ಆರ್. ತಿಳಿಸಿದ್ದಾರೆ.

ಆಯ್ಕೆಯಾದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಜಿಎಂ ಕಾಲೇಜಿನ ಚೇರ್ಮನ್ ಆದ ಜಿ.ಎಂ. ಲಿಂಗರಾಜು, ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಂಬಿ, ಕಾಲೇಜಿನ ಆಡಳಿತ ಅಧಿಕಾರಿಗಳಾದ ವೈ.ಯು. ಸುಭಾಷ್ ಚಂದ್ರ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಬಿ.ಎನ್. ಶ್ರೀಧರ್ ಅಭಿನಂದನೆ ಸಲ್ಲಿಸಿದ್ದು, 44 ವಿದ್ಯಾರ್ಥಿಗಳು ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ ಎಂದು ಹರುಷ ವ್ಯಕ್ತಪಡಿಸಿದ್ದಾರೆ.

ಆಯ್ಕೆಯಾದ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದು, ಈ ಸಂಭ್ರಮದಲ್ಲಿ ಜಿಎಂ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರಾದ ಸಿ. ನಿಂಗರಾಜು, ಡಿಪ್ಲೋಮೋದ ತರಬೇತಿ ಮತ್ತು ಉದ್ಯೋಗ ವಿಭಾಗದ ಸಂಯೋಜಕರಾದ ಯಾಸ್ಮಿನ್ ಬೇಗಮ್, ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾದ ಕೆ.ಬಿ. ಜನಾರ್ಧನ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಸಿ.ಎನ್. ಸಂದೀಪ್, ಮೆಕಾನಿಕಲ್ ವಿಭಾಗದ ಮುಖ್ಯಸ್ಥರಾದ ಎಂ. ಪ್ರವೀಣ್ ಕುಮಾರ್, ಕೆ. ಗಿರಿಜಾ ಸೇರಿದಂತೆ ಇತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ7 hours ago

ಜನಸಿರಿ ಫೌಂಡೇಶನ್ ವತಿಯಿಂದ ಕವಿಗಳ ಕಲರವ

ಸುದ್ದಿದಿನ,ಬೆಂಗಳೂರು:ಫೆ 10 ರಂದು ಜನಸಿರಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ 21 ನಿಮಿಷಗಳಲ್ಲಿ ರೈತರ ಕುರಿತು ಕವನ ರಚಿಸುವ ಬೃಹತ್ ಕಾರ್ಯ ಕ್ರಮವನ್ನು ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ...

ದಿನದ ಸುದ್ದಿ1 day ago

ತುಂಬಿದ ಕೊಡ ತುಳುಕಿತಲೇ ಪರಾಕ್..!

ಗಿರೀಶ್ ಕುಮಾರ್ ಗೌಡ, ಬಳ್ಳಾರಿ “ತುಂಬಿದ ಕೊಡ ತುಳುಕಿತಲೇ ಪರಾಕ್” ಎಂದು ಕಾರ್ಣಿಕ ನುಡಿದ ಗೊರವಯ್ಯ, ಅದು ಮೈಲಾರ ಕೋಟ್ಯಾಂತರ ಭಕ್ತರ ಆರಾಧ್ಯದೈವ ಮೈಲಾರ ಲಿಂಗನ ಪುಣ್ಯ...

ದಿನದ ಸುದ್ದಿ2 days ago

ಜಿಎಂ ಡಿಪ್ಲೋಮೋ ಕಾಲೇಜಿನ 44 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ

ಸುದ್ದಿದಿನ,ದಾವಣಗೆರೆ:ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ವಿಭಾಗದಿಂದ ಇತ್ತೀಚಿಗೆ ನಡೆದ ಕ್ಯಾಂಪಸ್ ಸಂದರ್ಶನ ಪ್ರಕ್ರಿಯೆಯಲ್ಲಿ ಜಿಎಂ ಡಿಪ್ಲೋಮೋ ಕಾಲೇಜಿನ ವಿವಿಧ ವಿಭಾಗಗಳಿಂದ 44...

ದಿನದ ಸುದ್ದಿ4 days ago

ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

ಸುದ್ದಿದಿನ,ದಾವಣಗೆರೆ:ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಫೆಬ್ರವರಿ 14 ಮತ್ತು 15 ರಂದು ಆಯೋಜಿಸಲಾಗಿದೆ. ಆಸಕ್ತ ರೈತರು ಆಧಾರ್...

ದಿನದ ಸುದ್ದಿ5 days ago

ಫೆಬ್ರವರಿ 17 ಮತ್ತು 18ಕ್ಕೆ ಕಲಬುರಗಿಯಲ್ಲಿ ಮೀಡಿಯಾ ಫೆಸ್ಟ್-2025

ಸುದ್ದಿದಿನ,ಕಲಬುರಗಿ:ಕಲ್ಯಾಣ ಕರ್ನಾಟಕದ ಕೇಂದ್ರಸ್ಥಾನ ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದಿಂದ ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದಲ್ಲಿ ಫೆಬ್ರವರಿ 17 ಮತ್ತು 18 ರಂದು ಎರಡು ದಿನಗಳ ಕಾಲ ಭವಿಷ್ಯದಲ್ಲಿ...

ದಿನದ ಸುದ್ದಿ5 days ago

ಪತ್ರಕರ್ತರ ಮೇಲೆ ಕೆ.ಎಂ.ಎಫ್ ಅಧ್ಯಕ್ಷ ಭೀಮಾನಾಯ್ಕ್ ಹಲ್ಲೆ, ಕೊಲೆ ಬೆದರಿಕೆ

ವರದಿ : ಗಿರೀಶ್ ಕುಮಾರ್ ಗೌಡ, ಬಳ್ಳಾರಿ ಸುದ್ದಿದಿನ,ಹೊಸಪೇಟೆ:ಕಾರಿನ ಗ್ಲಾಸ್ ಮುಂದೆ ಎಂ.ಎಲ್.ಎ ಕಾರು ಪಾಸು ಇಟ್ಟುಕೊಂಡು ತನ್ನ ಬೆಂಬಲಿಗರು, ಗನ್ ಮ್ಯಾನ್ ನೊಂದಿಗೆ ತಹಶಿಲ್ದಾರರ ಹಾಗೂ...

ದಿನದ ಸುದ್ದಿ7 days ago

ಸರ್ಕಾರಿ, ಅನುದಾನಿತ, ಕಲ್ಯಾಣ ಕರ್ನಾಟಕದಲ್ಲಿನ ಖಾಲಿ ಇರುವ 25 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗಾಗಿ ಬಜೆಟ್‍ನಲ್ಲಿ ಅನುಮೋದನೆಗೆ ಪ್ರಸ್ತಾವನೆ : ಸಚಿವ ಎಸ್.ಮಧು ಬಂಗಾರಪ್ಪ

ಸುದ್ದಿದಿನ,ದಾವಣಗೆರೆ:ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಹುದ್ದೆಗಳ ಕೊರತೆ ಇದ್ದು 2025-26 ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ 25 ಸಾವಿರ ಶಿಕ್ಷಕರ ಹುದ್ದೆಗಳನ್ನು...

ದಿನದ ಸುದ್ದಿ1 week ago

ಹಿಂದುಳಿದ ಸಮಾಜಗಳು ಸರ್ಕಾರದ ಸೌಲಭ್ಯ ಸದುಪಯೋಗ ಪಡೆದು ಸಂಘಟಿತರಾಗಲಿ: ಶಾಸಕ ಕೆ.ಎಸ್.ಬಸವಂತಪ್ಪ

ಸುದ್ದಿದಿನ,ದಾವಣಗೆರೆ:ಸವಿತಾ ಸಮಾಜ ಹಿಂದುಳಿದ ಸಮಾಜವಾಗಿದ್ದು, ಸಮಾಜವು ಸಂಘಟನೆಯಿಂದ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯಬೇಕು ಎಂದು ಶಾಸಕರಾದ ಕೆ.ಎಸ್.ಬಸವಂತಪ್ಪ ತಿಳಿಸಿದರು. ಬುಧವಾರ(ಫೆ.5) ರಂದು...

ದಿನದ ಸುದ್ದಿ2 weeks ago

ನ್ಯಾಕ್ ಗ್ರೇಡ್ ನೀಡಲು ಲಂಚ ಸ್ವೀಕಾರ ; ದಾವಣಗೆರೆ ವಿವಿ ಪ್ರಾಧ್ಯಾಪಕಿ ಬಂಧನ

ಸುದ್ದಿದಿನ,ದಾವಣಗೆರೆ: ಆಂಧ್ರಪ್ರದೇಶದ ಗುಂಟೂರಿನಲ್ಲಿ ಕೆಎಲ್‌ಇಎಫ್‌ ವಿವಿಗೆ ನ್ಯಾಕ್ ಕಮಿಟಿಯಿಂದ ಎ++ ಗ್ರೇಡ್ ನೀಡುವಲ್ಲಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಸೇರಿದಂತೆ...

ದಿನದ ಸುದ್ದಿ2 weeks ago

ಅಂತಾರಾಷ್ಟ್ರೀಯ, ನವೋದಯ ಮಟ್ಟದ ಉತ್ಕೃಷ್ಟ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿಯೂ ಸಿಗಬೇಕು: ಜಿ. ಬಿ. ವಿನಯ್ ಕುಮಾರ್

ಸುದ್ದಿದಿನ,ದಾವಣಗೆರೆ:ಅಂತಾರಾಷ್ಟ್ರೀಯ, ನವೋದಯ ಶಾಲೆಗಳಲ್ಲಿ ಸಿಗುವಂಥ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿಯೂ ಸಿಗುವಂತಾಗಬೇಕು ಎಂಬ ದೊಡ್ಡ ಕನಸು ಹೊಂದಿದ್ದೇನೆ. ಇದಕ್ಕಾಗಿ ಸಾಕಷ್ಟು ಪ್ರಯತ್ನಪಡುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಬೇಕು ಎಂದು...

Trending