ದಿನದ ಸುದ್ದಿ
ಮೇ 26 | ಈ ದಿನದ ಅಡಿಕೆ ರೇಟು
ಇಂದು, ಮೇ 26, 2025 ರಂದು ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಅಡಿಕೆ ದರಗಳು ಹೀಗಿವೆ (ಪ್ರತಿ ಕ್ವಿಂಟಾಲ್ಗೆ):
ತೀರ್ಥಹಳ್ಳಿ ಮಾರುಕಟ್ಟೆ (ಮೇ 24, 2025 ರಂತೆ)
ಸರಕು: ಗರಿಷ್ಠ ₹95,570, ಮಾದರಿ ₹72,410
ಬೆಟ್ಟೆ: ಗರಿಷ್ಠ ₹59,011, ಮಾದರಿ ₹57,657
ಗೋರಾಬಳು: ಗರಿಷ್ಠ ₹30,399, ಮಾದರಿ ₹27,223
ರಾಶಿ: ಗರಿಷ್ಠ ₹59,319, ಮಾದರಿ ₹52,599
ಕೊಪ್ಪ ಮಾರುಕಟ್ಟೆ (ಮೇ 24, 2025 ರಂತೆ)
ಸರಕು: ಗರಿಷ್ಠ ₹78,629, ಮಾದರಿ ₹66,529
ಚಿತ್ರದುರ್ಗ ಭೀಮಸಮುದ್ರ (ಮೇ 16, 2025 ರಂತೆ)
ರಾಶಿ: ₹56,856 – ₹58,800
ಅಪಿ: ₹46,779 – ₹46,959
ಚನ್ನಗಿರಿ ಮಾರುಕಟ್ಟೆ (ಮೇ 22, 2025 ರಂತೆ)
ರಾಶಿ: ಕನಿಷ್ಠ ₹41,199, ಮಾದರಿ ₹57,767, ಗರಿಷ್ಠ ₹59,312
ಶಿವಮೊಗ್ಗ ಮಾರುಕಟ್ಟೆ (ಮೇ 23, 2025 ರಂತೆ)
ಗೊರಬಲು: ₹22,196 – ₹35,669 (ಮೇ 24, 2025 ರಂತೆ)
ಬೆಟ್ಟೆ: ₹53,669 – ₹63,389 (ಮೇ 24, 2025 ರಂತೆ)
ರಾಶಿ: ₹48,016 – ₹60,589 (ಮೇ 24, 2025 ರಂತೆ), ₹47,009 – ₹58,199 (ಮೇ 23, 2025 ರಂತೆ)
ಸರಕು: ₹67,240 – ₹96,340 (ಮೇ 24, 2025 ರಂತೆ), ₹61,009 – ₹91,240 (ಮೇ 23, 2025 ರಂತೆ)
ಸಾಗರ ಮಾರುಕಟ್ಟೆ (ಮೇ 22, 2025 ರಂತೆ)
ಕೆಂಪುಗೋಟು: ₹17,989 – ₹31,309 (ಮೇ 24, 2025 ರಂತೆ)
ಚಾಲಿ: ₹24,699 – ₹39,166 (ಮೇ 24, 2025 ರಂತೆ)
ಬಿಳೆ ಗೋಟು: ₹10,261 – ₹27,199 (ಮೇ 24, 2025 ರಂತೆ)
ರಾಶಿ: ₹32,999 – ₹60,099 (ಮೇ 24, 2025 ರಂತೆ)
ಸಿಪ್ಪೆಗೋಟು: ₹8,699 – ₹20,309 (ಮೇ 24, 2025 ರಂತೆ)
ಇತರೆ ಮಾರುಕಟ್ಟೆಗಳಲ್ಲಿ ಮೇ 23, 2025 ರಂತೆ ಕೆಲವು ದರಗಳು
ಯಲ್ಲಾಪುರ: ಬಿಳೆ ಗೊಟು ₹17,099 – ₹31,900, ರಾಶಿ ₹42,009 – ₹53,899, ಚಾಲಿ ₹32,698 – ₹42,499, ಕೋಕಾ ₹9,699 – ₹18,099, ತಟ್ಟಿ ಬೆಟ್ಟೆ ₹28,769 – ₹38,199.
ಕುಮಟಾ: ಚಾಲಿ ₹41,499 – ₹42,699, ಚಿಪ್ಪು ₹12,099 – ₹30,279, ಕೋಕಾ ₹7,099 – ₹14,189, ಹಣ್ಣು ₹33,089 – ₹42,529.
ಶಿರಸಿ: ಬಿಳೆ ಗೊಟು ₹20,899 – ₹32,199, ಕೆಂಪು ಗೋಟು ₹23,499 – ₹19,624, ಚಾಲಿ ₹36,099 – ₹43,311, ರಾಶಿ ₹42,190 – ₹47,911, ಬೆಟ್ಟೆ ₹23,199 – ₹45,001.
ಪಿರಿಯಾಪಟ್ಟಣ: ಸಿಪ್ಪೆಗೋಟು ₹12,100.
ಬಂಟ್ವಾಳ: ಹೊಸ ವೆರೈಟಿ ₹0 – ₹44,000.
ತುಮಕೂರು: ರಾಶಿ ₹51,000 – ₹53,100.
ಹೊಸನಗರ: ಚಾಲಿ ₹26,900 – ₹33,100.
ಬೆಳ್ತಂಗಡಿ: ಕೋಕಾ ₹17,000 – ₹30,500.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವದಾಸಿ ಪುನರ್ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಗದ ರಹಿತ ನೋಂದಣಿ ವ್ಯವಸ್ಥೆಯ ತರಬೇತಿ
ಸುದ್ದಿದಿನ,ದಾವಣಗೆರೆ:ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ದಾವಣಗೆರೆ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಸಿಬ್ಬಂದಿ ವರ್ಗದವರಿಗೆ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಜ.30 ರಂದು ಹೊನ್ನಾಳಿ ಉಪ ನೋಂದಣಿ ಕಚೇರಿ ಆವರಣ, ಜ.31 ರಂದು ಚನ್ನಗಿರಿ ಉಪ ನೋಂದಣಿ ಕಚೇರಿ ಆವರಣ, ಫೆ.2 ರಂದು ಹರಿಹರ ಉಪ ನೋದಣಿ ಕಚೇರಿ ಆವರಣ, ಫೆ.3 ರಂದು ದಾವಣಗೆರೆ ಉಪ ನೋಂದಣಿ ಕಚೇರಿ, ಫೆ.4 ರಂದು ಜಗಳೂರು ಉಪ ನೋಂದಣಿ ಕಚೇರಿ ಆವರಣಗಳಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.


