ದಿನದ ಸುದ್ದಿ
ಮದ್ಯಾಹ್ನದ ಸುದ್ದಿ ಮುಖ್ಯಾಂಶಗಳು
![](https://suddidina.com/wp-content/uploads/2022/04/headlines_suddidina.jpg)
ಮದ್ಯಾಹ್ನದ ಸುದ್ದಿ ಮುಖ್ಯಾಂಶಗಳು
- ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಲ್ಲಿ ಹೊಸ ಪಠ್ಯ ಕ್ರಮ ಅಳವಡಿಸುವುದಿಲ್ಲ. ಆದರೆ ಪಠ್ಯದಲ್ಲಿ ಕೆಲವು ಬದಲಾವಣೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಮಾತನಾಡಿದ ಸಚಿವರು, ವಿದ್ಯಾರ್ಥಿಗಳಲ್ಲಿ ಉನ್ನತ ವ್ಯಕ್ತಿತ್ವ ರೂಪಿಸಲು ನೈತಿಕ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಇಲಾಖೆ ಪ್ರಾಮಾಣಿಕ ಕೆಲಸ ಮಾಡುತ್ತಿದ್ದು ಶಾಂತಿಗೆ ಭಂಗ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಬೆಳಗಾವಿಯಲ್ಲಿ ಹೇಳಿದ್ದಾರೆ.
- ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಬೆಂಗಳೂರಿನಲ್ಲಿ ನಾಳೆ ಪ್ರಮುಖ ಸ್ಟಾರ್ಟ್ ಅಪ್ ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
- ಆಜಾದಿ ಕಾ ಅಮೃತ ಮಹೋತ್ಸವ್ ಹಿನ್ನೆಲೆಯಲ್ಲಿ ಎರಡು ದಿನಗಳ ’ಅಮೃತ ಸಮಾಗಮ’ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ಇಂದು ಚಾಲನೆ ನೀಡಲಿದ್ದಾರೆ. ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ, ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ, ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತಿತರರು ಭಾಗವಹಿಸಲಿದ್ದಾರೆ.
- ಅಂತಾರಾಷ್ಟ್ರೀಯ ಮಾನವಸಹಿತ ಗಗನಯಾನ ದಿನವನ್ನು ಇಂದು ಆಚರಿಸಲಾಗುತ್ತಿದೆ. 1961ರ ಏಪ್ರಿಲ್12 ರಂದು ರಷ್ಯಾದ ಬಾಹ್ಯಾಕಾಶ ವಿಜ್ಞಾನಿ ಯೂರಿ ಗಗರಿನ್ ಅವರು ಗಗನಯಾನ ಕೈಗೊಂಡ ಸ್ಮರಣಾರ್ಥ ಪ್ರತಿ ವರ್ಷ ಈ ದಿನಾಂಕದಂದು ಗಗನಯಾನ ದಿನ ಆಚರಿಸಲಾಗುತ್ತಿದೆ.
- ಭುವನೇಶ್ವರದ ಕಳಿಂಗ ಹಾಕಿ ಕ್ರೀಡಾಂಗಣದಲ್ಲಿ ಇದೇ 14 ಗುರುವಾರದಿಂದ ಆರಂಭಗೊಳ್ಳಲಿರುವ ಪುರುಷರ ಹಾಕಿ ಪ್ರೊ ಲೀಗ್ ಪಂದ್ಯಾವಳಿಗೆ 22 ಪಟುಗಳನ್ನೊಳಗೊಂಡ ಭಾರತೀಯ ತಂಡವನ್ನು ಆಯ್ಕೆ ಮಾಡಲಾಗಿದೆ. ಅಮಿತ್ ರೋಹಿದಾಸ್ ನಾಯಕರಾಗಿದ್ದು, ಹರ್ಮನ್ ಪ್ರೀತ್ ಸಿಂಗ್ ಅವರನ್ನು ಉಪ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಪ್ರಥಮ ಪಂದ್ಯದಲ್ಲಿ ಭಾರತ ಜರ್ಮನಿ ವಿರುದ್ಧ ಸೆಣಸಲಿದೆ.
- ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿಂದು ರಾತ್ರಿ 7.30 ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೆಣಸಲಿವೆ.
- ರಾಜ್ಯದ ಕರಾವಳಿ ಭಾಗದಲ್ಲಿ ಬೀಚ್ ಟೂರಿಸಂ ಮತ್ತು ಟೆಂಪಲ್ ಟೂರಿಸಂ ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ’ಕರಾವಳಿ ನಿಯಂತ್ರಣ ವಲಯ – ಸಿಆರ್ಝೆಡ್’ ನಿಯಮಕ್ಕೆ ತಿದ್ದುಪಡಿ ತರುವ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಡುಪಿಯಲ್ಲಿ ನಿನ್ನೆ ತಿಳಿಸಿದ್ದಾರೆ.
- “ತ್ವರಿತವಾಗಿ ಡಿಜಿಟಲೀಕರಣಗೊಳ್ಳುತ್ತಿರುವ ಜಗತ್ತಿನಲ್ಲಿ, ಸೈಬರ್ ಭದ್ರತೆ, ಹೈಬ್ರಿಡ್ ಕ್ಲೌಡ್ ಮತ್ತು ಕೃತಕ ಬುದ್ದಿಮತ್ತೆಯಂತಹ ತಂತ್ರಜ್ಞಾನಗಳಲ್ಲಿ ಭಾರತಕ್ಕೆ ಅಗಾಧವಾದ ಅವಕಾಶವಿದೆ” ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
- ಉಕ್ರೇನ್ನಲ್ಲಿ ಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲಿ ಭಾರತ-ಅಮೆರಿಕ ನಡುವಿನ ಮಾತುಕತೆ ಮಹತ್ವದ್ದಾಗಿದ್ದು, ಉಕ್ರೇನ್ನ ನಾಗರಿಕರ ಸುರಕ್ಷತೆ ಹಾಗೂ ಅವರಿಗೆ ಔಷಧ ಸೇರಿದಂತೆ ಎಲ್ಲ ಮಾನವೀಯ ನೆರವಿನ ತಡೆರಹಿತ ಪೂರೈಕೆಗೆ ಭಾರತ ಹೆಚ್ಚಿನ ಒತ್ತು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
- ಪ್ರಧಾನಿ ನರೇಂದ್ರ ಮೋದಿ ಅವರು, ಗುಜರಾತ್ನ ಅಡಾಲಜ್ನಲ್ಲಿರುವ ಅನ್ನಪೂರ್ಣಧಾಮದ ಹಾಸ್ಟೆಲ್ ಮತ್ತು ಶೈಕ್ಷಣಿಕ ಸಂಕೀರ್ಣವನ್ನು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಅಲ್ಲದೆ ಜನಸಹಾಯಕ ಟ್ರಸ್ಟ್ನ ಹೀರಾಮಣಿ ಆರೋಗ್ಯಧಾಮಕ್ಕೂ ಪ್ರಧಾನಮಂತ್ರಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.
- ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಅವರು ನಾಳೆ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಖನಿಜಾನ್ವೇಷಣಾ ಟ್ರಸ್ಟ್-ಎನ್ಎಂಇಟಿ ೪ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್, ಗಣಿ ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಮತ್ತಿತರರು ಭಾಗವಹಿಸಲಿದ್ದಾರೆ.
- ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಬಠುವಾ ಗ್ರಾಮದಲ್ಲಿ ನಿನ್ನೆ ರಾತ್ರಿ ರೈಲಿಗೆ ಸಿಲುಕಿ ಐವರು ಮೃತಪಟ್ಟಿದ್ದಾರೆ. ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಪುಸ್ತಕ ಬಹುಮಾನ | ಲೇಖಕ ; ಪ್ರಕಾಶಕರಿಂದ ಅರ್ಜಿ ಆಹ್ವಾನ
![](https://suddidina.com/wp-content/uploads/2024/07/application_invitation_book_suddidina.jpg)
ಸುದ್ದಿದಿನ,ದಾವಣಗೆರೆ:ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗಾನ ಕಲಾಪ್ರಕಾರಗಳಾದ (ತೆಂಕು, ಬಡಗು ಬಡಾಬಡಗು, ಯಕ್ಷಗಾನ ಗೊಂಬೆಯಾಟ), ಮೂಡಲಪಾಯ ಯಕ್ಷಗಾನ, ಕೇಳಿಕೆ, ಘಟ್ಟದಕೋರೆ ಮತ್ತು ತಾಳಮದ್ದಲೆ, ಇತ್ಯಾದಿ ಕಲಾಪ್ರಕಾರಗಳಿಗೆ ಸಂಬಂಧಿಸಿದಂತೆ 2022 ಹಾಗೂ 2023ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ ಪ್ರಕಟಿಸಿರುವ ಪ್ರಥಮ ಆವೃತ್ತಿ ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರಿಂದ , ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆಯಾದ ಪುಸ್ತಕಕ್ಕೆ ರೂ.25,000/-ಗಳ ಬಹುಮಾನವನ್ನು ನೀಡಲಾಗುವುದು. ಯಕ್ಷಗಾನದ ವಿವಿಧ ಆಯಾಮಗಳಾದ ಸಂಗೀತ, ಅಭಿನಯ, ಸಂಶೋಧನೆ, ವಿಮರ್ಶೆ, ಜೀವನಚರಿತ್ರೆ, ಪ್ರಸಂಗ ಪುಸ್ತಕ ಇತ್ಯಾದಿ ಪ್ರಕಾರಗಳನ್ನು ಒಳಗೊಂಡ ಪುಸ್ತಕಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಿದೆ.
ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು 560 002, ಇವರಿಗೆ ಪುಸ್ತಕದ ನಾಲ್ಕು ಪ್ರತಿಗಳೊಂದಿಗೆ ಕಳುಹಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 080-22113146 ದೂರವಾಣಿಗೆ ಸಂಪರ್ಕಿಸಲು ರಿಜಿಸ್ಟ್ರಾರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಬ್ಯಾಕ್ ಲಾಗ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡದಿದ್ದರೆ ಕಠಿಣ ಕ್ರಮ : ಸಚಿವ ಡಾ.ಹೆಚ್.ಸಿ.ಮಹದೇವಪ್ಪ
![](https://suddidina.com/wp-content/uploads/2024/07/Hc_mahadevappa_suddidina.jpg)
ಸುದ್ದಿದಿನಡೆಸ್ಕ್:ನ್ಯಾಯಾಲಯದ ಆದೇಶದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬ್ಯಾಕ್ ಲಾಗ್ ಹುದ್ದೆಗಳನ್ನು ನಿಯಮಾನುಸಾರ ಭರ್ತಿ ಮಾಡುವಂತೆ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳು, ನಿಗಮಗಳು, ಮಂಡಳಿಗಳು, ಸಹಕಾರ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯದಲ್ಲಿ ಬಾಕಿ ಇರುವ ಹುದ್ದೆಗಳನ್ನು ಭರ್ತಿ ಮಾಡಿರುವ ಬಗ್ಗೆ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪ್ರಗತಿ ಪರಿಶೀಲಿಸುವಂತೆ ನಿರ್ದೇಶನ ನೀಡಿದರು.
ಸಂವಿಧಾನಾತ್ಮಕ ಹುದ್ದೆಗಳನ್ನು ಭರ್ತಿ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿಳಂಬ ಮತ್ತು ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಡಾ. ಮಹದೇವಪ್ಪ ಎಚ್ಚರಿಕೆ ನೀಡಿದರು.
https://x.com/CMahadevappa/status/1807981112821469317?t=hkrumLedUcPg92VQNpi4Ow&s=19
https://x.com/CMahadevappa/status/1807720400073249053?t=PM_8Q86VfkCqbKWHf5zoIQ&s=19
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಸ್ತ್ರೀಬಂಜೆತನಕ್ಕೆ ಕಾರಣಗಳು ಮತ್ತು ಲಕ್ಷಣಗಳು
![](https://suddidina.com/wp-content/uploads/2024/07/infertility_suddidina.jpg)
ಒಂದು ವರ್ಷಕ್ಕೂ ಹೆಚ್ಚು ಕಾಲ ಆಗಾಗ್ಗೆ ಪ್ರಯತ್ನಿಸಿದರೂ ಗರ್ಭಿಣಿಯಾಗಲು ಸಾಧ್ಯವಾಗದಿರುವುದು ಬಂಜೆತನ ಎಂದು ವ್ಯಾಖ್ಯಾನಿಸಲಾಗಿದೆ. ಪುರುಷ /ಮಹಿಳೆಯರಿಗೆ ಬಂಜೆತದ ಸಮಸ್ಯೆ ಕಾಡಬಹುದು. ಕೆಲವು ಸಂದರ್ಭಗಳಲ್ಲಿ ಬಂಜೆತನವನ್ನು ಸ್ವಯಂ ಕಂಡುಹಿಡಿಯಬಹುದು. ದಂಪತಿಗಳಿಗೆ ಕಾರಣ ತಿಳಿದಿಲ್ಲದಿದ್ದರೆ, ವೈದ್ಯರು ಅನೇಕ ಪರೀಕ್ಷೆಗಳನ್ನು ಮಾಡಿ, ಬಂಜೆತನಕ್ಕೆ ಕಾರಣವೇನು ಎಂಬುದನ್ನು ಕಂಡು ಹಿಡಿಯಲು ಸಹಾಯ ಮಾಡ ಬಹುದು.
ಬಂಜೆತನದ ಕಾರಣಗಳು:
ಮಹಿಳೆಯರಲ್ಲಿ ಬಂಜೆತನವು ಹೆಚ್ಚಾಗಿ ಅಂಡೋತ್ಪತ್ತಿ ಅಸ್ವಸ್ಥತೆಗಳಿಂದ ಉಂಟಾಗುತ್ತದೆ:
• ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS)
• ಪ್ರೈಮರಿ ಓವರಿಯನ್ ಇನ್ಸುಫಿಸೈನ್ಸಿ (POI)
• ಹೈಪರ್ಪ್ರೊಲ್ಯಾಕ್ಟಿನೆಮಿಯಾ
ಸ್ತ್ರೀ ಬಂಜೆತನವು ಗರ್ಭಾಶಯದ ಅಥವಾ ಗರ್ಭಕಂಠದ ಅಸಹಜತೆಗಳು, ಫಾಲೋಪಿಯನ್ ಟ್ಯೂಬ್ ಹಾನಿ, ಗರ್ಭಾಶಯದ ಫೈಬ್ರಾಯ್ಡ್ಗಳು, ಎಂಡೊಮೆಟ್ರಿಯೊಸಿಸ್, ತೀವ್ರ ಮಾನಸಿಕ ಯಾತನೆ ಇತ್ಯಾದಿಗಳಿಂದ ಕೂಡ ಉಂಟಾಗಬಹುದು.
ರೋಗಲಕ್ಷಣಗಳು:ಬಂಜೆತನದ ಮುಖ್ಯ ಲಕ್ಷಣವೆಂದರೆ ಗರ್ಭಿಣಿಯಾಗಲು ಅಸಮರ್ಥತೆ. ದೀರ್ಘಾವಧಿಯ ಮುಟ್ಟು (35 ದಿನಗಳು ಅಥವಾ ಹೆಚ್ಚು), ತುಂಬಾ ಕಡಿಮೆ ಅವಧಿಗೆ ಮುಟ್ಟಾ ಗುವುದು (21 ದಿನಗಳಿಗಿಂತ ಕಡಿಮೆ), ಅನಿಯಮಿತ ಮುಟ್ಟು ಅಥವಾ ಮುಟ್ಟಾಗದಿರುವುದು – ಇದಲ್ಲ ನೀವು ಅಂಡೋತ್ಪತ್ತಿ ಮಾಡುತ್ತಿಲ್ಲ ಎಂದು ಅರ್ಥೈಸಬಹುದು.
ಪರೀಕ್ಷೆಗಳು:ಮಹಿಳೆಯರ ಫಲವತ್ತತೆ ಆರೋಗ್ಯಕರ ಮೊಟ್ಟೆಗಳನ್ನು ಬಿಡುಗಡೆ ಮಾಡುವ ಅಂಡಾಶಯವನ್ನು ಅವಲಂಬಿಸಿರುತ್ತದೆ. ಸಂತಾನೋತ್ಪತ್ತಿ ಪ್ರದೇಶವು ಮೊಟ್ಟೆಯನ್ನು ಫಾಲೋಪಿಯನ್ ಟ್ಯೂಬ್ಗಳಿಗೆ ಹಾದುಹೋಗಲು ಅನುಮತಿಸಬೇಕು ಮತ್ತು ಫಲೀಕರಣಕ್ಕಾಗಿ ವೀರ್ಯದೊಂದಿಗೆ ಸೇರಿಕೊಳ್ಳಬೇಕು. ಫಲವತ್ತಾದ ಮೊಟ್ಟೆಯು ಗರ್ಭಾಶಯಕ್ಕೆ ಹೋಗಬೇಕು ಮತ್ತು ಒಳಪದರದಲ್ಲಿ ಸೇರ ಬೇಕು. ಸ್ತ್ರೀ ಬಂಜೆತನದ ಪರೀಕ್ಷೆಗಳು ಈ ಪ್ರಕ್ರಿಯೆಗಳಲ್ಲಿ ಯಾವುದಾದರೂ ದುರ್ಬಲಗೊಂಡಿವೆಯೇ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತವೆ.
ಅಂಡೋತ್ಪತ್ತಿ ಪರೀಕ್ಷೆ: ಹಾರ್ಮೋನ್ ಮಟ್ಟವನ್ನು ಅಳೆಯಲು ರಕ್ತ ಪರೀಕ್ಷೆಯನ್ನು ಮಾಡಲಾಗುತ್ತದೆ. ನೀವು ಅಂಡೋತ್ಪತ್ತಿ ಮಾಡುತ್ತಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.
ಹಿಸ್ಟರೊಸಾಲ್ಪಿಂಗೋಗ್ರಫಿ: ಇದು ಗರ್ಭಾಶಯ ಮತ್ತು ಫಾಲೋಪಿಯನ್ ಟ್ಯೂಬ್ಗಳ ಸ್ಥಿತಿಯನ್ನು ಪರೀಕ್ಷಿಸುತ್ತದೆ ಮತ್ತು ಅಡೆತಡೆಗಳು ಅಥವಾ ಇತರೆ ಸಮಸ್ಯೆಗಳನ್ನು ಸಹ ಪರೀಕ್ಷೆ ಮಾಡುತ್ತದೆ. ಎಕ್ಸ್-ರೇ ಕಾಂಟ್ರಾಸ್ಟ್ ಅನ್ನು ಗರ್ಭಾಶಯಕ್ಕೆ ಚುಚ್ಚಲಾಗುತ್ತದೆ, ನಂತರ ಕುಹರವು ಸಾಮಾನ್ಯವಾಗಿದೆಯೇ ಎಂದು ನಿರ್ಧರಿಸಲು ಮತ್ತು ಫಾಲೋಪಿಯನ್ ಟ್ಯೂಬ್ಗಳಿಂದ ದ್ರವವು ಹೊರಬರುತ್ತಿದೆಯೇ ಎಂದು ನೋಡಲು ಎಕ್ಸ್-ರೇ ತೆಗೆದುಕೊಳ್ಳಲಾಗುತ್ತದೆ.
ಓವರಿಯನ್ ರಿಸರ್ವೆ ಟೆಸ್ಟಿಂಗ್: ಈ ಪರೀಕ್ಷೆಯು ಅಂಡೋತ್ಪತ್ತಿಗೆ ಲಭ್ಯವಿರುವ ಮೊಟ್ಟೆಗಳ ಪ್ರಮಾಣವನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ಈ ಪರೀಕ್ಷೆಯು ಋತುಚಕ್ರದ ಆರಂಭದಲ್ಲಿ ಹಾರ್ಮೋನ್ ಪರೀಕ್ಷೆಯೊಂದಿಗೆ ಪ್ರಾರಂಭವಾಗುತ್ತದೆ.
ಇತರ ಹಾರ್ಮೋನ್ ಪರೀಕ್ಷೆಗಳು: ಇತರ ಹಾರ್ಮೋನ್ ಪರೀಕ್ಷೆಗಳು ಅಂಡೋತ್ಪತ್ತಿ ಹಾರ್ಮೋನುಗಳ ಮಟ್ಟವನ್ನು ಹಾಗೆಯೇ ಪಿಟ್ಯುಟರಿ ಹಾರ್ಮೋನುಗಳನು (ಸಂತಾನೋತ್ಪತ್ತಿ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ) ಪರಿಶೀಲಿಸಲು ಮಾಡಲಾಗುತ್ತದೆ.
ಇಮೇಜಿಂಗ್ ಪರೀಕ್ಷೆಗಳು: ಶ್ರೇಣಿಯ ಅಲ್ಟ್ರಾಸೌಂಡ್ ಗರ್ಭಾಶಯದ ಅಥವಾ ಅಂಡಾಶಯದ ರೋಗವನ್ನು ಹುಡುಕುತ್ತದೆ. ಕೆಲವೊಮ್ಮೆ ಸೋನೊಹಿಸ್ಟರೊಗ್ರಾಮ್ ಅನ್ನು (ಸಲೈನ್ ಇನ್ಫ್ಯೂಷನ್ ಸೋನೋಗ್ರಾಮ್ ಎಂದೂ ಕರೆಯುತ್ತಾರೆ) ಗರ್ಭಾಶಯದ ಒಳಗಿನ ವಿವರಗಳನ್ನು ನೋಡಲು ಬಳಸಲಾಗುತ್ತದೆ, ಏಕೆಂದರೆ ಇದು ಸಾಮಾನ್ಯ ಅಲ್ಟ್ರಾಸೌಂಡ್ ನಲ್ಲಿ ಕಾಣುವುದಿಲ್ಲ.ಪರಿಸ್ಥಿತಿಗೆ ಅನುಗುಣವಾಗಿ, ಅಪರೂಪದ ಪರೀಕ್ಷೆಯು ಸಹ ಒಳಗೊಂಡಿರಬಹುದು.
ಹಿಸ್ಟರೊಸ್ಕೋಪಿ: ರೋಗಲಕ್ಷಣಗಳನ್ನು ಅವಲಂಬಿಸಿ, ವೈದ್ಯರು ಗರ್ಭಾಶಯದ ರೋಗವನ್ನು ಪರೀಕ್ಷಿಸಲು ಹಿಸ್ಟರೊಸ್ಕೋಪಿಗೆ ಹೇಳಬಹುದು. ಕಾರ್ಯವಿಧಾನದ ಸಮಯದಲ್ಲಿ, ಯಾವುದೇ ಸಂಭಾವ್ಯ ಅಸಹಜತೆಗಳನ್ನು ಪರೀಕ್ಷಿಸಲು ವೈದ್ಯರು ಗರ್ಭಕಂಠದ ಮೂಲಕ ತೆಳುವಾದ ಸಾಧನವನ್ನು ಗರ್ಭಾಶಯದೊಳಗೆ ಸೇರಿಸುತ್ತಾರೆ.
ಲ್ಯಾಪರೊಸ್ಕೋಪಿ: ಈ ಶಸ್ತ್ರಚಿಕಿತ್ಸೆಯಲ್ಲಿ ಹೊಕ್ಕುಳದ ಕೆಳಗೆ ಸಣ್ಣ ಛೇದನವನ್ನು ಮಾಡಿ, ತೆಳುವಾದ ಸಾಧನವನ್ನು ಸೇರಿಸಿ, ಫಾಲೋಪಿಯನ್ ಟ್ಯೂಬ್ಗಳು, ಅಂಡಾಶಯಗಳು ಮತ್ತು ಗರ್ಭಾಶಯವನ್ನು ಪರೀಕ್ಷಿಸುತ್ತರೆ. ಲ್ಯಾಪರೊಸ್ಕೋಪಿಯಿಂದ ಎಂಡೊಮೆಟ್ರಿಯೊಸಿಸ್, ಗಾಯ, ತಡೆ ಅಥವಾ ಫಾಲೋಪಿಯನ್ ಟ್ಯೂಬ್ಗಳ ಇತರ ಸಮಸ್ಯೆಗಳನ್ನು ಕಂಡುಹಿಡಿಯಬಹುದು. ಅಲ್ಲದೆ ಅಂಡಾಶಯ ಮತ್ತು ಗರ್ಭಾಶಯದ ಸಮಸ್ಯೆಗಳಿದ್ದರು ಕಂಡುಹಿಡಿಯಬಹುದು.
ಮನೆಮದ್ದುಗಳು
1. ಒಮೆಗಾ-3 ಕೊಬ್ಬಿನಾಮ್ಲಗಳು ಮಹಿಳೆಯರಲ್ಲಿ ಉತ್ತಮ ಅಂಡೋತ್ಪತ್ತಿ ಮತ್ತು ಪುರುಷರಲ್ಲಿ ಉತ್ತಮ ವೀರ್ಯದ ಆರೋಗ್ಯಕ್ಕೆ ಬಹಳ ಅವಶ್ಯಕವಾಗಿದೆ. ನಮ್ಮ ದೇಹವು ಒಮೆಗಾ -3 ಕೊಬ್ಬಿನಾಮ್ಲಗಳನ್ನು ತಯಾರಿಸಲು ಸಾಧ್ಯವಿಲ್ಲ ಆದ್ದರಿಂದ ಅವುಗಳನ್ನು ಆಹಾರದ ಮೂಲಕ ಪಡೆಯಬೇಕು. ವಾಲ್ ನಟ್, ಅಗಸೆ ಬೀಜಗಳು, ಸಮುದ್ರ ಮೀನು, ಗಸಗಸೆ ಬೀಜಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲ ಸಮೃದ್ಧವಾಗಿದೆ. ಮಗುವಿಗೆ ಜನ್ಮ ನೀಡಲು ಬಯಸುವ ಮಹಿಳೆಯರಿಗೆ ಬಹಳ ಒಳ್ಳೆಯದು.
2. ಬಂಜೆತನದ ಪ್ರಮುಖ ಕಾರಣಗಳಲ್ಲಿ ಒಂದಾದ PCOS ಅನ್ನು ದಾಲ್ಚಿನ್ನಿ ಸೇವನೆಯಿಂದ ಸ್ವಲ್ಪ ಮಟ್ಟಿಗೆ ಸರಿಪಡಿಸಬಹುದು. ಇದು ಋತುಚಕ್ರವನ್ನು ಸುಧಾರಿಸುವ ಮೂಲಕ ಅಂಡಾಶಯದ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ದಾಲ್ಚಿನ್ನಿ ಸ್ತ್ರೀ ಬಂಜೆತನಕ್ಕೆ ಕಾರಣವಾಗುವ – ಅನಿಯಮಿತ ಮುಟ್ಟು, ಗರ್ಭಾಶಯದಲ್ಲಿನ ಫೈಬ್ರಾಯ್ಡ್ಗಳು ಅಥವಾ ಎಂಡೊಮೆಟ್ರಿಯೊಸಿಸ್ ಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಪ್ರತಿದಿನ ಸ್ವಲ್ಪ ಪ್ರಮಾಣದ ದಾಲ್ಚಿನ್ನಿ ಚಹಾವನ್ನು ಸೇವಿಸಿ.
3. ಫೋಲಿಕ್ ಆಮ್ಲ ಸಮೃದ್ಧವಾಗಿರುವ ಆಹಾರವು ಅಂಡೋತ್ಪತ್ತಿಗೆ ಸಹಾಯ ಮಾಡುತ್ತದೆ. ಹಸಿರು ಎಲೆಗಳ ತರಕಾರಿಗಳು, ಸೂರ್ಯಕಾಂತಿ ಬೀಜಗಳು, ತಾಜಾ ಹಣ್ಣುಗಳು, ಬೀನ್ಸ್, ಬ್ರೊಕೊಲಿ ಇತ್ಯಾದಿಗಳಲ್ಲಿ ಫೋಲಿಕ್ ಆಮ್ಲ ಸಮೃದ್ಧವಾಗಿದೆ.
ಉತ್ತಮ ಫಲಿತಾಂಶಕ್ಕಾಗಿ ಈ ಜೀವನಶೈಲಿ ಬದಲಾವಣೆಗಳನ್ನು ಮಾಡಿ:
• ಧ್ಯಾನವು ಒತ್ತಡದಿಂದ ಹೊರಬರಲು ಸಹಾಯ ಮಾಡುತ್ತದೆ.
• ಜಂಕ್ ಮತ್ತು ಕೊಬ್ಬಿನ ಆಹಾರವನ್ನು ಸೇವಿಸಬೇಡಿ.
• ಉತ್ತಮ ಮತ್ತು ಸಾಕಷ್ಟು ನಿದ್ರೆ ಪಡೆಯಲು ಪ್ರಯತ್ನಿಸಿ.
• ನಿಯಮಿತವಾಗಿ ವ್ಯಾಯಾಮ ಮಾಡಿ.
• ಸಂತೋಷವಾಗಿರಿ.
• ನಿಮ್ಮ ಸಂಗಾತಿಯೊಂದಿಗೆ ಯಾವಾಗಲೂ ಒಳ್ಳೆಯ ಸಮಯವನ್ನು ಕಳೆಯಲು ಪ್ರಯತ್ನಿಸಿ.
(ಬರಹ :ಡಾ. ರಮೇಶ್ ಬಿ.
ಆಲ್ಟಿಯಸ್ ಹಾಸ್ಪಿಟಲ್,# 6/63, 59ನೇ ಅಡ್ಡರಸ್ತೆ, 4ನೇ ಬ್ಲಾಕ್, ರಾಜಾಜಿನಗರ ಪ್ರವೇಶ ದ್ವಾರ, ಎಂಇಐ
ಪಾಲಿಟೆಕ್ನಿಕ್ ಎದುರು, ಬೆಂಗಳೂರು 560010
080-23151873, Ph 9900031842, 9844291777 – ಈ ಲೇಖನವು ಮಹಿಳೆಯರ ಬಂಜೆತನವನ್ನು ಕೇಂದ್ರೀಕರಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346343
![](https://suddidina.com/wp-content/uploads/2022/04/20210226_111406.jpg)
-
ದಿನದ ಸುದ್ದಿ7 days ago
ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ
-
ದಿನದ ಸುದ್ದಿ5 days ago
ಲೇಖಕಿ ಅರುಂಧತಿ ರಾಯ್ ಗೆ ‘PEN Pinter’ ಪ್ರಶಸ್ತಿ
-
ದಿನದ ಸುದ್ದಿ6 days ago
ಜುಲೈ 1 ರಿಂದ ಜಾರಿಗೆ ಬರಲಿರುವ ಮೂರು ಹೊಸ ಕ್ರಿಮಿನಲ್ ಕಾಯ್ದೆಗಳು ಯಾವು ಗೊತ್ತಾ..?
-
ದಿನದ ಸುದ್ದಿ6 days ago
ಏಳನೇ ವೇತನ ; ಸರ್ಕಾರಿ ನೌಕರರಿಗೆ ಸಿಎಂ ಸಿಹಿ ಸುದ್ದಿ
-
ದಿನದ ಸುದ್ದಿ5 days ago
ಭಾರತ ಹಿಂದೂ ರಾಷ್ಟ್ರವಲ್ಲ ; ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ3 days ago
ಕವಿತೆ | ಉಸಿರು
-
ದಿನದ ಸುದ್ದಿ4 days ago
ಮಲೇಬೆನ್ನೂರು | ನೂತನ ಪುರಸಭಾ ನಾಮಿನಿ ಸದಸ್ಯರಾಗಿ ಐದು ಜನ ಆಯ್ಕೆ
-
ದಿನದ ಸುದ್ದಿ4 days ago
ಲೋಕಸಭಾ ಚುನಾವಣೆ ; ಅಭ್ಯರ್ಥಿಗಳು ಖರ್ಚು ಮಾಡಿದ ಹಣದ ಬಗ್ಗೆ ಮಾಹಿತಿ ಕೇಳಿದ ಚುನಾವಣಾ ಆಯೋಗ