Connect with us

ರಾಜಕೀಯ

ರಾಜಕೀಯ ವಿವಾದೋದ್ಯಮ: ಪ್ರತಿರೋಧದ ಹಾದಿ

Published

on

ರ್ಪಡುವ ಘಟನಾವಳಿಗಳು ಮತ್ತು ಅಭಿವ್ಯಕ್ತ ವಿಚಾರಗಳು ವಿವಾದದ ಸ್ವರೂಪ ಪಡೆದು ಪ್ರಚಲಿತ ವಿದ್ಯಮಾನಗಳ ಆವರಣ ಕಲುಷಿತಗೊಂಡಿರುವ ಸಂದರ್ಭ ಈಗಿನದು. ಒಬ್ಬೊಬ್ಬರು ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವುದಕ್ಕೆ ವಿವಾದಗಳನ್ನು ಬಳಸಿಕೊಳ್ಳುವುದರ ಕಡೆಗೇ ಗಮನ ಹರಿಸುತ್ತಿದ್ದಾರೆ. ಈ ಬಗೆಯ ಹಿತಾಸಕ್ತಿ ರಕ್ಷಣೆಯ ಸ್ವಾರ್ಥಪರ ನಡೆಗಳನ್ನು ರಾಷ್ಟ್ರ ರಾಜಕಾರಣ ಅತ್ಯಂತ ಚಾಣಾಕ್ಷಯುತವಾಗಿ ಪೋಷಿಸುತ್ತಿದೆ. ಪ್ರಾದೇಶಿಕ ವೈವಿಧ್ಯತೆ ಮತ್ತು ಸಾಂಸ್ಕøತಿಕ ಪರಂಪರೆಯ ಉದಾತ್ತತೆಯನ್ನು ಒಡೆದು ಆಕ್ರಾಮಕವೆನ್ನಿಸುವ ಸಮೂಹ ವರ್ತನಾ ಧಾಟಿಯನ್ನು ನಿರ್ದೇಶಿಸುತ್ತಿದೆ. ತನ್ನೊಳಗಿನ ಸಂಕುಚಿತತೆಯನ್ನು ಸಾಮಾಜಿಕವಾಗಿಸಿ ಜನಸಮೂಹದೊಳಗೆ ಬೆರೆಸಿಬಿಡುವ ಅದರ ಕಾರ್ಯಸೂಚಿ ಈಗಾಗಲೇ ಅಭೂತಪೂರ್ವ ಯಶಸ್ಸು ಪಡೆದಿದೆ. ಮತ್ತೆ ಮತ್ತೆ ಯಶಸ್ಸು ಪಡೆಯುವುದರ ಗಮ್ಯದ ಕಡೆಗೇ ಚಲಿಸುತ್ತಲೇ ಇದೆ. ಇದನ್ನು ದೃಢೀಕರಿಸುವಂತೆ ಜನವರ್ಗವು ಅಧಿಕಾರದಲ್ಲಿರುವವರನ್ನು ಆರಾಧಿಸುತ್ತಾ ತಮ್ಮ ಪ್ರಜ್ಞೆಯನ್ನು ಆಳ್ವಿಕೆಯ ಪಾದಕ್ಕರ್ಪಿಸಿಬಿಟ್ಟಿದೆ.

ದೇಶವೊಂದರ ರಾಜಕಾರಣವು ಜನಸಮೂಹವನ್ನು ಸರಿದಾರಿಯಲ್ಲಿರುವಂತೆ ನೋಡಿಕೊಳ್ಳುವ ನಾಯಕತ್ವವನ್ನು ಪೋಷಿಸಬೇಕು. ಹಾಗೆ ಪೋಷಿಸುತ್ತಲೇ ರಾಜಕೀಯಕ್ಕೆ ಉದಾತ್ತ ತಾತ್ವಿಕತೆಯ ಗುಣಲಕ್ಷಣದ ಸಂಸ್ಕಾರವನ್ನು ಒದಗಿಸಬೇಕು. ಆಡಳಿತಾರೂಢ ಸರ್ಕಾರವನ್ನು ಪ್ರತಿನಿಧಿಸುವ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಸಂವಾದಾತ್ಮಕ ನಂಟು ಜನರ ಪ್ರಜ್ಞೆಯನ್ನು ಎತ್ತರಿಸುವ ರೀತಿಯಲ್ಲಿ ರೂಪುಗೊಳ್ಳುತ್ತಿರಬೇಕು. ಈ ನಂಟು ಅಪವಿತ್ರವಾಗಿರದೇ ದೇಶದ ಬೆಳವಣಿಗೆಯ ಹೆಜ್ಜೆಗಳನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ನೆರವಾಗುವಂತಿರಬೇಕು. ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ತಾರ್ಕಿಕ ಪರಿಹಾರ ಕಂಡುಕೊಳ್ಳುವ ಉತ್ಸಾಹದೊಂದಿಗೆ ಮುಂದಡಿಯಿಡಬೇಕು. ಸಮಸ್ಯೆಗಳನ್ನು ಜೀವಂತವಾಗಿಟ್ಟು ಅವುಗಳ ಆಧಾರದಲ್ಲಿ ಅಧಿಕಾರದ ಬೆಳೆ ತೆಗೆಯುವ ಅಪೇಕ್ಷೆಗಳು ವಿವಾದಗಳನ್ನು ಸೃಷ್ಟಿಸುವುದಕ್ಕಷ್ಟೇ ಬಳಕೆಯಾಗುತ್ತವೆ. ದೇಶಕ್ಕೆ ಪ್ರಯೋಜನವಾಗುವುದಿಲ್ಲ. ಜನರ ಒಳಿತಿನ ದೃಷ್ಟಿಯಿಂದಲೂ ಅವು ಅಪಾಯಕಾರಿ. ಈ ಹಂತದಲ್ಲಿಯೇ ಅವು ವಾಣಿಜ್ಯಿಕ ಹಿತಾಸಕ್ತಿಗಳನ್ನು ಪೋಷಿಸುವಂಥ ಉದ್ಯಮಗಳ ನಿರೀಕ್ಷೆಗಳನ್ನು ಈಡೇರಿಸುವ ಮೂಲಗಳಾಗುತ್ತವೆ. ರಾಜಕಾರಣವನ್ನು ವಿವಾದೋದ್ಯಮವಾಗಿಸುತ್ತವೆ. ಸದ್ಯದ ವಿದ್ಯಮಾನಗಳು ಈ ವಿಲಕ್ಷಣತೆಯನ್ನು ದೃಢೀಕರಿಸುತ್ತಿವೆ.

ಇದನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಆಡಳಿತಾರೂಢ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡೆಗಳನ್ನು ನಿದರ್ಶನಗಳನ್ನಾಗಿ ಚರ್ಚಿಸಬಹುದು. ಭಾರತದಲ್ಲಿ ಕಾಂಗ್ರೆಸ್, ಭಾರತೀಯ ಜನತಾ ಪಕ್ಷ ಎಂಬ ಎರಡು ರಾಷ್ಟ್ರೀಯ ಪಕ್ಷಗಳಿವೆ. ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಸ್ತಿತ್ವದಲ್ಲಿವೆ. ಇತ್ತೀಚಿಗಿನ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ವ್ಯಾಪಕವಾಗಿ ಸಮ್ಮಿಶ್ರ ಸರ್ಕಾರದ ಪ್ರಯೋಗಗಳು ಮುಂಚೂಣಿಗೆ ಬಂದಿವೆ. ಮೈತ್ರಿ ಸರ್ಕಾರದ ಹೆಜ್ಜೆಗಳ ನಡಿಗೆಯ ದ್ವಂದ್ವಗಳೂ ಅರಿವಿಗೆ ಬಂದಿವೆ. ರಾಷ್ಟ್ರೀಯ ಪಕ್ಷಗಳೆರಡೂ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುವ ತಮ್ಮೊಳಗಿನ ಹಂಬಲಗಳನ್ನು ಹತ್ತಿಕ್ಕಿಕೊಂಡು ಅವುಗಳ ನೆರವಿನ ಹಸ್ತವನ್ನು ಜೊತೆಗಿಟ್ಟುಕೊಂಡೇ ಮುನ್ನಡೆಯಬೇಕಾದ ಅನಿವಾರ್ಯತೆಯನ್ನು ಮನಗಂಡಿವೆ. ಇದರ ಮಧ್ಯೆಯೇ ಭಾರತೀಯ ಜನತಾಪಕ್ಷವು ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಪಡೆದು ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರವೂ ಮಿತ್ರಪಕ್ಷಗಳನ್ನು ಜೊತೆಗಿರಿಸಿಕೊಂಡು ಎನ್‍ಡಿಎ (ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್) ಬಂಧವನ್ನು ಚಾಲ್ತಿಯಲ್ಲಿರಿಸಿಕೊಂಡಿದೆ. ಕಾಂಗ್ರೆಸ್ ಕೂಡಾ ಯುಪಿಎ (ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್) ಎಂಬ ಮೈತ್ರಿಕೂಟವನ್ನು ನೆಚ್ಚಿಕೊಂಡು ಚುನಾವಣಾ ಅಖಾಡಕ್ಕಿಳಿಯುತ್ತಿದೆ. ಇದೀಗ ಎಲ್ಲ ಪಕ್ಷಗಳೂ ಒಗ್ಗೂಡಿ ತೃತೀಯ ಶಕ್ತಿಯನ್ನು ರೂಪಿಸಿ ಎನ್.ಡಿ.ಎಯನ್ನು ಮಣಿಸುವ ಪ್ರಯತ್ನಗಳಲ್ಲಿ ನಿರತವಾಗಿವೆ.

ರಾಷ್ಟ್ರೀಯ ಪಕ್ಷಗಳನ್ನು ಅಲ್ಲಗಳೆದು ಅಸ್ತಿತ್ವಕ್ಕೆ ಬಂದ ಪ್ರಾದೇಶಿಕ ಪಕ್ಷಗಳು ಭಿನ್ನ ಹಾದಿಯನ್ನೇನೂ ತುಳಿಯಲಿಲ್ಲ. ಹಿಂದಿನ ರಾಜಕಾರಣದ ಸಾಂಪ್ರದಾಯಿಕ ಸಂಕುಚಿತತೆಯನ್ನೇ ಮತ್ತಷ್ಟು ವಿಸ್ತರಿಸಿದವು. ಅವುಗಳ ಹೆಸರುಗಳು ಉದಾತ್ತತೆಯ ಅರ್ಥವನ್ನು ಧ್ವನಿಸಿದರೂ ಮಾಡಿದ್ದೆಲ್ಲವೂ ಸಂಕುಚಿತ ರಾಜಕಾರಣ. ರಾಜ್ಯಗಳ ನಡುವಿನ ಸೌಹಾರ್ದದ ಬಂಧವನ್ನು ಒಡೆಯುವ ಹಾಗೆ ಭಾಷಿಕ ಮೂಲಭೂತವಾದಿತ್ವವನ್ನೇ ಬಂಡವಾಳವಾಗಿಸಿಕೊಂಡು ಮತಬೆಳೆ ದಕ್ಕಿಸಿಕೊಳ್ಳುವ ಪ್ರಯತ್ನಗಳಲ್ಲಿಯೇ ತಲ್ಲೀನವಾದವು. ಜಲವಿವಾದಗಳು ಈ ನೆಲೆಯಲ್ಲಿಯೇ ಹುಟ್ಟಿಕೊಂಡವು. ಬೇರೊಂದು ದೇಶದ ವಿರುದ್ಧದ ಯುದ್ಧಸನ್ನದ್ಧ ಮನಸ್ಥಿತಿ ರಾಷ್ಟ್ರರಾಜಕಾರಣದ ವಿಲಕ್ಷಣ ಗುಣವಾಗುವುದಕ್ಕೆ ಧಾರ್ಮಿಕ ಕೇಂದ್ರಿತ ಸಂಕುಚಿತತೆಯೇ ಕಾರಣ.
ತಮಿಳುನಾಡಿನಲ್ಲಿ ಜನಪ್ರಿಯತೆ ಗಳಿಸಿದ ನಟ-ನಟಿಯರು ತಮ್ಮ ಪ್ರಭಾವವನ್ನು ಅಧಿಕಾರಕೇಂದ್ರಿತ ದೃಷ್ಟಿಕೋನಕ್ಕಾಗಿ ಬಳಸಿಕೊಂಡರು. ಜನಪ್ರಿಯತೆಯ ಸರಕು ಕುಸಿಯುವ ಭೀತಿಯಲ್ಲಿ ವಿವಾದದ ವಿಷ ಹರಡುವ ಕೃಷಿಯಲ್ಲಿ ಖುಷಿ ಕಂಡರು. ಮಹಾರಾಷ್ಟ್ರದ ಪ್ರಾದೇಶಿಕ ರಾಜಕಾರಣವಂತೂ ಅಧಾರ್ಮಿಕ ಮದೋನ್ಮತ್ತ ಭಾವನೆಗಳು ಮತ್ತು ಭಾಷಿಕ ಅಂಧಾಭಿಮಾನದ ವರ್ತುಲದಲ್ಲಿ ಸಿಲುಕಿಕೊಂಡು ಅದೇ ಪರಮ ಮಾದರಿ ಎನ್ನುವಂತೆ ವೈಭವೀಕರಿಸಲ್ಪಟ್ಟಿತು. ಬಿಹಾರದಲ್ಲಂತೂ ಪರ್ಯಾಯ ಪ್ರಾದೇಶಿಕ ಪಕ್ಷದ ಅಸ್ತಿತ್ವ ಜನರ ಉದ್ಧಾರಕ್ಕೆ ಬಳಕೆಯಾಗುವ ಬದಲು ಪ್ರಭಾವೀ ನಾಯಕರೆನ್ನಿಸಿಕೊಂಡವರ ಸಮೃದ್ಧಿಗೆ ಪೂರಕ ವೇದಿಕೆಯನ್ನು ರೂಪಿಸಿಕೊಟ್ಟಿತು. ಆಂಧ್ರದ ಅಸ್ಮಿತೆಯ ಹೆಮ್ಮೆಯ ಭಾವಾವೇಶ ಅಲ್ಲಿಯ ಪ್ರಾದೇಶಿಕ ಪಕ್ಷಗಳು ಚಿಗುರೊಡೆದು ಅಧಿಕಾರ ಹಿಡಿಯುವುದಕ್ಕೆ ನೆರವಾಯಿತು. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳಲ್ಲೂ ಪ್ರಬಲ ತಾತ್ವಿಕತೆಯೊಂದಿಗಿನ ಪರ್ಯಾಯ ಪ್ರಾದೇಶಿಕ ರಾಜಕಾರಣ ರೂಪುಗೊಳ್ಳಲೇ ಇಲ್ಲ. ಮೇಲ್ನೋಟದಲ್ಲಿ ರೂಪುಗೊಂಡಿವೆ ಎಂಬ ಭಾವವನ್ನು ಮೂಡಿಸಿದ ಪಕ್ಷಗಳು ಮತ್ತೆ ರಾಷ್ಟ್ರೀಯ ಪಕ್ಷಗಳ ಆಲದ ಮರಗಳ ನೆರಳನ್ನೇ ನೆಚ್ಚಿಕೊಂಡುಬಿಟ್ಟವು.

ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅತ್ಯಂತ ಎಚ್ಚರದ ರಕ್ಷಣಾತ್ಮಕ ತಂತ್ರಗಾರಿಕೆಯನ್ನೇ ( Defense Mechanism) ನೆಚ್ಚಿಕೊಂಡು ತಮ್ಮೊಳಗಿನ ಅಧಿಕಾರದಾಹವನ್ನು ಕಾಯ್ದುಕೊಳ್ಳುವಂಥ ರಾಜಿಸ್ವಭಾವಕ್ಕೇ ಪಕ್ಕಾದವು. ಒಂದು ನಿರ್ದಿಷ್ಟ ಉದಾತ್ತ ಸೈದ್ಧಾಂತಿಕ ಆದರ್ಶವಾದಿ ಮಾದರಿಯನ್ನು ಸ್ಥಾಪಿಸಿಕೊಳ್ಳುವ ನಿಟ್ಟಿನಲ್ಲಿ ಅವುಗಳು ಆಲೋಚಿಸಲೇ ಇಲ್ಲ. ಇಬ್ಬರು ಬ್ಯಾಟ್ಸ್‍ಮನ್ ಅತ್ತ ಔಟ್ ಆಗದೆಯೇ, ಇತ್ತ ರನ್‍ಗಳನ್ನೂ ಗಳಿಸದೇ ಉಳಿದು ಇಡೀ ತಂಡಸ್ಫೂರ್ತಿಯನ್ನು ಅಂತ್ಯಗೊಳಿಸುವ ಹಾಗೆ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಅತ್ತ ನಿಜದ ಮೌಲಿಕ ರಾಜಕಾರಣವನ್ನೂ ಮಾಡದೇ, ಇತ್ತ ಪರ್ಯಾಯ ರಾಜಕಾರಣದ ವಿನೂತನ ಮಾದರಿಗಳನ್ನೂ ಹುಟ್ಟುಹಾಕದೇ ಮುಂದಡಿಯಿಟ್ಟವು. ಅವು ಭೌತಿಕವಾಗಿ ಜೀವಂತ. ಅಂತಃಸತ್ವದ ದೃಷ್ಟಿಯಿಂದ ಅವು ದುರ್ಬಲ. ಕಾರ್ಯಾನುಷ್ಠಾನದ ನೆಲೆಯಲ್ಲಿ ಅವುಗಳದ್ದು ಶೂನ್ಯಸಂಪಾದನೆ. ರಾಷ್ಟ್ರೀಯ ಪಕ್ಷಗಳಿಗೂ ಮತ್ತು ಪ್ರಾದೇಶಿಕ ಪಕ್ಷಗಳ ನಡುವೆ ಈ ಆಯಾಮದಲ್ಲಿಯೇ ಸಾಮ್ಯತೆಗಳನ್ನು ಗುರುತಿಸಬಹುದು.

ಭಾರತದಂಥ ವೈವಿಧ್ಯತೆಯ ರಾಷ್ಟ್ರದಲ್ಲಿ ರಾಜಕೀಯ ಪಕ್ಷಗಳು ಜನರ ನಾಡಿಮಿಡಿತವನ್ನು ಗ್ರಹಿಸಿಕೊಳ್ಳುವುದು ಅತ್ಯಂತ ಸವಾಲಿನ ಕ್ರಿಯೆ. ನಂಬಿಕೆಯ ಜಗತ್ತು ಒಂದು ಕಡೆ. ಅದೇ ನಂಬಿಕೆಯ ಬಲದಲ್ಲಿ ಮೌಢ್ಯ ಬಿತ್ತುವ ಹುನ್ನಾರಿಗಳೊಂದಿಗಿನ ಪ್ರಬಲ ಸಾಮಾಜಿಕ ವ್ಯವಸ್ಥೆ ಮತ್ತೊಂದು ಕಡೆ. ಇವೆರಡರ ನಡುವೆ ಪಕ್ಷಗಳು ಮತ್ತು ನಾಯಕರು ತಮ್ಮನ್ನು ಪ್ರತಿಷ್ಠಾಪಿಸಿಕೊಳ್ಳುವ ಅನಿವಾರ್ಯತೆಯ ಬಿಕ್ಕಟ್ಟು. ಈ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ವಿಫಲವಾಗಿದ್ದೇ ಸದ್ಯದ ಎಲ್ಲ ವಿಕೃತಿಗಳಿಗೆ ಕಾರಣ. ಶೈಕ್ಷಣಿಕ ಅರ್ಹತೆಗಳ ನೆರವಿನೊಂದಿಗೆ ಪ್ರತಿಯೊಬ್ಬ ಪ್ರಜೆಗಳ ವ್ಯಕ್ತಿಗತ ಸಾಮಥ್ರ್ಯವನ್ನು ವಿವೇಚನಾತ್ಮಕ ಬೌದ್ಧಿಕತೆಗೆ ತಿರುಗಿಸುವ ದಾರ್ಶನಿಕ ಹೊಣೆಗಾರಿಕೆ ನಿಭಾಯಿಸಬೇಕಿದ್ದ ನಾಯಕತ್ವವು ಸಮಾಜದ ಸಾಂಪ್ರದಾಯಿಕ ಜಾಡ್ಯಗಳ ಕೈಗೊಂಬೆಯಾಗಿದ್ದರಿಂದ ಪಕ್ಷಗಳ ಬಹುಮುಖೀ ಶಕ್ತಿ ಸಾಬೀತಾಗಲೇ ಇಲ್ಲ. ಸದ್ಯದ ಸ್ಥಿತಿ ಹೇಗಿದೆ ಎಂದರೆ ಅಧಿಕಾರದಲ್ಲಿರುವವರನ್ನು ಕೆಳಗಿಳಿಸಲು ಸಾಮಾಜಿಕ ಸಂಘರ್ಷಗಳನ್ನೇ ಪ್ರಬಲ ಅಸ್ತ್ರಗಳನ್ನಾಗಿಸಿಕೊಳ್ಳುವ ಪಕ್ಷಗಳ ರಹಸ್ಯ ಕಾರ್ಯಸೂಚಿ ನಡೆಗಳೇ ನಿರ್ಣಾಯಕವಾಗಿವೆ. ಇವುಗಳನ್ನೇ ಪರಿಹಾರೋಪಾಯ ಎಂದುಕೊಳ್ಳಬೇಕೇ, ಅಥವಾ ತಿರಸ್ಕರಿಸಬೇಕೇ ಎಂಬ ದ್ವಂದ್ವಗಳಲ್ಲಿ ಜನರು ಸಿಲುಕಿದ್ದಾರೆ.ಪ್ರತಿರೋಧವನ್ನೊಡ್ಡಿದವರ ತೇಜೋವಧೆಗೈದು ಕಾನೂನು ಬಲಪ್ರಯೋಗದೊಂದಿಗೆ ಧ್ವನಿ ಹತ್ತಿಕ್ಕುವ ಆಡಳಿತಾತ್ಮಕ ವರ್ತನೆಗಳು ಪ್ರಜಾಪ್ರಭುತ್ವದ ಸಾಧ್ಯತೆಗಳನ್ನೇ ಮೊಟಕುಗೊಳಿಸುತ್ತಿವೆ. ಈ ಹಂತದಲ್ಲಿ ಜನರೊಳಗಿಂದಲೇ ಸಕಾರಾತ್ಮಕ ಧ್ವನಿ ಹೊಮ್ಮಬೇಕಾಗುತ್ತದೆ. ಇದಕ್ಕೂ ಮುನ್ನ ಜನರಿಗೆ ಕೆಲವು ಸತ್ಯಗಳು ಗೊತ್ತಾಗಬೇಕು. ಗೊತ್ತಾಗುವಂತೆ ಪ್ರಾಜ್ಞವಲಯ ಹಿಂದೆಂದಿಗಿಂತಲೂ ಹೆಚ್ಚಿನ ಶ್ರದ್ಧೆಯೊಂದಿಗೆ ಶ್ರಮಿಸಬೇಕು. ವಿವಿಧ ಪಕ್ಷಗಳ ನಾಯಕರು ಅಧಿಕಾರದಲ್ಲಿರಲಿ, ಇಲ್ಲದಿರಲಿ, ತಮ್ಮದೇ ಆದ ಪ್ರಭಾವಳಿಯೊಂದಿಗೆ ಅಸ್ತಿತ್ವವನ್ನು ಕಾಯ್ದುಕೊಂಡಿರುತ್ತಾರೆ. ಭ್ರಷ್ಟಾಚಾರ ಮತ್ತಿತರ ಅಕ್ರಮದ ಹಾದಿಯಲ್ಲಿ ಸಮಾನಮಸ್ಕರಾಗಿರುತ್ತಾರೆ. ಸಂಘರ್ಷಗಳಿಗೆ ಜನರನ್ನೇ ದಾಳಗಳನ್ನಾಗಿಸುತ್ತಾರೆ. ಪರಸ್ಪರ ಕೆಸೆರೆರಚಾಟದೊಂದಿಗೆ ಧರ್ಮಾಂಧ ನಡೆಗಳೊಂದಿಗೆ ಗುರುತಿಸಿಕೊಳ್ಳುವ ಜಾಯಮಾನವನ್ನೇ ಶಾಶ್ವತ ಗುಣಲಕ್ಷಣವಾಗಿಸಿಕೊಳ್ಳುವ ಹಾದಿಹಿಡಿದಿರುತ್ತಾರೆ. ಒಂದು ಪಕ್ಷದವರು ಅಧಿಕಾರದಲ್ಲಿದ್ದಾಗ ಮತ್ತೊಬ್ಬರು ತಾರ್ಕಿಕ ಆಂದೋಲನವನ್ನು ಕಟ್ಟುವ ಬದಲು ಸಂಕುಚಿತತೆಯೊಂದಿಗಿನ ವಿತಂಡವಾದಿ ಹೇಳಿಕೆಗಳು ಮತ್ತು ಸಮಾಜವನ್ನು ಯಥಾಸ್ಥಿತಿಯಲ್ಲಿಡುವಂಥ ಹುನ್ನಾರದ ಹೆಜ್ಜೆಗಳೊಂದಿಗೆ ಗುರುತಿಸಿಕೊಂಡು ಯಾಂತ್ರಿಕ ವಿರೋಧದ ನಾಟಕವಾಡುತ್ತಾರೆ.
ಹಾಗೆ ನಾಟಕವಾಡುತ್ತ ಜನರಿಗೆ ಹತ್ತಿರ ಎಂದು ಬಿಂಬಿಸಿಕೊಳ್ಳುತ್ತಾ ಮುಂದೊಂದು ದಿನ ಅಧಿಕಾರಕ್ಕೆ ಬಂದು ಅವರೂ ಹಿಂದಿನವರಂತೆಯೇ ನಿರ್ಲಕ್ಷ್ಯ ಧೋರಣೆಗಳೊಂದಿಗೇ ಮುಂದಡಿಯಿಟ್ಟು ಇಡೀ ಸಮಾಜವನ್ನು ಸ್ಥಗಿತತೆಯ ಅಪಾಯಕ್ಕೆ ಸಿಲುಕಿಸಿಬಿಡುತ್ತಾರೆ. ಜನರು ಅವರ ಈ ನಡೆಗಳನ್ನು ಪ್ರಶ್ನಿಸುವಂತಾಗಬೇಕು. “ನೀವು ವಿತಂಡವಾದಿ ಸಂಕುಚಿತತೆಯೊಂದಿಗೆ ಇರಬೇಡಿ. ಸಂಘರ್ಷದ ಮಾತುಗಳನ್ನಾಡಬೇಡಿ. ಒಂದಾಗಿರುವ ನಮ್ಮ ನಡುವೆ ಗೋಡೆಗಳನ್ನು ಕಟ್ಟಬೇಡಿ. ಆ ಗೋಡೆಗಳ ಮೇಲೆ ರಾಜಕಾರಣದ ಅಟ್ಟಹಾಸ ಮೆರೆಯಬೇಡಿ.

ಧರ್ಮ, ಜಾತಿ ನೆಲೆಗಳಲ್ಲಿ ಅಮಾನವೀಯಗೊಳ್ಳುವ ವ್ಯಕ್ತಿಗತ ಮನಸ್ಥಿತಿಯನ್ನು ತಪ್ಪಿಸಿ ಮನುಷ್ಯತ್ವದ ಗಮ್ಯದ ಕಡೆಗೆ ಸಾಮಾಜಿಕ ಚಲನೆ ಇರುವಂತೆ ನೋಡಿಕೊಳ್ಳಿ. ಈ ದೇಶದಲ್ಲಿ ಮನುಷ್ಯಪರ ಮತ್ತು ಜೀವಪರ ಬೆಳವಣಿಗೆಯ ಹೆಜ್ಜೆಗಳನ್ನು ಪೋಷಿಸುವುದರ ಕಡೆಗೆ ಗಮನಹರಿಸಿ. ಸುಳ್ಳುಗಳನ್ನು ಹೇಳಿ ನಮ್ಮನ್ನು ಯಾಮಾರಿಸುವುದನ್ನು ನಿಲ್ಲಿಸಿ. ಮಾಧ್ಯಮಗಳನ್ನು ಸಾಕಿಕೊಂಡು ಅವುಗಳ ಮೂಲಕ ನಮ್ಮನ್ನು ದಾರಿತಪ್ಪಿಸಬೇಡಿ. ನಿಮ್ಮನ್ನು ಪ್ರಶ್ನಿಸುವವರ ಒಡಲಾಳದ ನೋವುಗಳನ್ನು ಅರ್ಥೈಸಿಕೊಳ್ಳುವ ಅಂತಃಕರಣ ಪ್ರದರ್ಶಿಸಿ. ಎಲ್ಲಕ್ಕಿಂತ ಹೆಚ್ಚಾಗಿ ನೀವೂ ಮನುಷ್ಯರಾಗಿ. ನಮ್ಮನ್ನೂ ಮನುಷ್ಯರಾಗಿಯೇ ಉಳಿಯುವುದಕ್ಕೆ ಅವಕಾಶ ಮಾಡಿಕೊಡಿ. ಇಡೀ ದೇಶದೊಳಗೆ ನಿಜವಾದ ದೇಶಪ್ರೇಮದ ಬೆಳೆ ತೆಗೆಯಿರಿ. ಅದರೊಂದಿಗೆ ಪ್ರತಿಯೊಬ್ಬರ ಬದುಕಿನ ಸಮೃದ್ಧಿಯ ಸಾಧ್ಯತೆಗಳನ್ನು ವಿಸ್ತರಿಸಿರಿ” ಎಂದು ನಾವೆಲ್ಲರೂ ಒಕ್ಕೊರಲ ಧ್ವನಿಯೊಂದಿಗೆ ಸ್ಪಷ್ಟ ಸಂದೇಶ ಸಾರಬೇಕಿದೆ. ಹುನ್ನಾರಗಳೊಂದಿಗಿನ ರಾಜಕಾರಣದ ವಿವಾದೋದ್ಯಮವನ್ನು ಹತ್ತಿಕ್ಕಬೇಕಿದೆ. ನಾಯಕರ ಅಧಿಕಾರದಾಹದೊಂದಿಗಿನ ವ್ಯಾವಹಾರಿಕ ಮನೋಧರ್ಮಗಳನ್ನು ಕೊನಗಾಣಿಸಬೇಕಿದೆ.

(-ಡಾ.ಎನ್.ಕೆ.ಪದ್ಮನಾಭ
ಸಹಾಯಕ ಪ್ರಾಧ್ಯಾಪಕರು
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ
ಉಜಿರೆ
ಇ-ಮೇಲ್ :nkpadmanabh@gmail.com)

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ

Published

on

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ್ಪ, ಹಿರಿಯ ಶಾಸಕ ಈ. ತುಕಾರಾಮ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್, ಮಹಿಳಾ ಆಯೋಗದ ಅದ್ಯಕ್ಷೆ ಡಾ. ನಾಗಲಕ್ಷ್ಮಿ ಸೇರಿ ಹಲವರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಂಡ್ಯದ ಡಿಸಿ ಪಾರ್ಕ್ ಎದುರು ಇರುವ ಜಗಜೀವನ್‌ರಾಮ್ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಸೇರಿದಂತೆ ಅಧಿಕಾರಿಗಳ ವರ್ಗ ಹಾಗೂ ಜಗಜೀವನ್‌ರಾಮ್ ಅನುಯಾಯಿಗಳು ಭಾಗವಹಿಸಿದ್ದರು.

ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಅವರ 117ನೇ ಜಯಂತಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಂದು ಚುನಾವಣಾ ಆಯೋಗ ಸಮಾವೇಶ

Published

on

ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಸಮಾವೇಶ ನಡೆಸಲಿದೆ.

ಈ ಸಮಾವೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮತದಾನದ ಸಮಸ್ಯೆಯನ್ನು ಪರಿಹರಿಸಲು ಉದ್ದೇಶಿತ ಮತ್ತು ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.

ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ, ಥಾಣೆ, ನಾಗ್ಪುರ, ಪಾಟ್ನಾ ಸಾಹಿಬ್, ಲಖನೌ ಮತ್ತು ಕಾನ್ಪುರ ನಗರ ಪಾಲಿಕೆಯ ಆಯುಕ್ತರು ಮತ್ತು ಬಿಹಾರ ಮತ್ತು ಉತ್ತರದ ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರುಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 day ago

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಡಿಕೇರಿಯಲ್ಲಿ...

ದಿನದ ಸುದ್ದಿ5 days ago

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ...

ದಿನದ ಸುದ್ದಿ1 week ago

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499...

ದಿನದ ಸುದ್ದಿ1 week ago

ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ...

ದಿನದ ಸುದ್ದಿ2 weeks ago

ಇಂದು ಚುನಾವಣಾ ಆಯೋಗ ಸಮಾವೇಶ

ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ...

ದಿನದ ಸುದ್ದಿ2 weeks ago

ತಂತ್ರಜ್ಞಾನ ಮೋಡಿ : ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ 90ರ ದಶಕದಿಂದೀಚೆಗೆ, ಎಲ್ಲೆಡೆ ಸದ್ದಿಲ್ಲದೇ ಕ್ರಮೇಣ ಒಕ್ಕರಿಸತೊಡಗಿದೆ ಆಧುನಿಕ ಯಾಂತ್ರಿಕೃತ ಬದುಕು....

ದಿನದ ಸುದ್ದಿ2 weeks ago

ಔಷಧಗಳ ದರ ಗಣನೀಯ ಏರಿಕೆ ಕುರಿತ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದ ಸಂಗತಿ ; ಕೇಂದ್ರ ಸರ್ಕಾರ ಸ್ಪಷ್ಟನೆ

ಸುದ್ದಿದಿನ ಡೆಸ್ಕ್ : ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ವಿವಿಧ ಔಷಧಿಗಳ ದರ ಗಣನೀಯವಾಗಿ ಏರಿಕೆ ಮಾಡಲಾಗಿದೆ ಎಂಬ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದ ಸಂಗತಿ ಮತ್ತು ಜನರನ್ನು...

ದಿನದ ಸುದ್ದಿ2 weeks ago

ರಾಜ್ಯದಲ್ಲಿ ಬಿಸಿಲ ತಾಪ ಇನ್ನೂ ಹೆಚ್ಚಾಗಲಿದೆ ; ಹವಾಮಾನ ಇಲಾಖೆ ಮುನ್ಸೂಚನೆ

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಮುಂದಿನ 7 ದಿನಗಳಲ್ಲಿ ಬಿಸಿಲ ತಾಪ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ಜನರುಕೆಲವು ಮುನ್ನೆಚ್ಚರಿಕೆ...

ದಿನದ ಸುದ್ದಿ2 weeks ago

ಜಿಲ್ಲೆಯ ರಾಜಕಾರಣದಲ್ಲಿ ನನಗೆ ಅನ್ಯಾಯ; ರಾಜಕೀಯ ಕುತಂತ್ರ ವ್ಯವಸ್ಥೆ ವಿರುದ್ಧ ನನ್ನ ಹೋರಾಟ : ವಿನಯ್ ಕುಮಾರ್

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ರಾಜಕಾರಣದಲ್ಲಿ ಚೆನ್ನಯ್ಯ ಒಡಿಯರ್ ಅವರಿಗೆ ಆದ ಅನ್ಯಾಯ ನನಗೂ ಆಗಿದೆ. ನನ್ನ ಹೋರಾಟ ನನ್ನ ಸ್ವಾಭಿಮಾನದ ಹೋರಾಟ ಒಬ್ಬ ವ್ಯಕ್ತಿ ಪಕ್ಷದ ವಿರುದ್ಧ...

ದಿನದ ಸುದ್ದಿ2 weeks ago

ಲೋಕಸಭೆ ಚುನಾವಣೆ; ರಾಜ್ಯದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನ

ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ, ದೇಶಾದ್ಯಂತ ಎರಡನೇ ಹಂತದ 89 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಮೊದಲ...

Trending