ದಿನದ ಸುದ್ದಿ
ಸನಾತನಿಗಳಿಗೇಕೆ ಭೀಮ ಭಯ
- ಡಾ.ಕೆ.ಎ.ಓಬಳೇಶ್,ದಾವಣಗೆರೆ
ಭಾರತದ ನೆಲದಲ್ಲಿ ಸಾವಿರಾರು ವರ್ಷಗಳ ಕಾಲ ಅಸಮಾನತೆಯನ್ನು ಪಾಲಿಸಿಕೊಂಡು ಬಂದ ವೈದಿಕತೆಯ ಕಟ್ಟುಪಾಡುಗಳನ್ನು ಮೀರಿ ನಿಂತ ಹಲವಾರು ದಾರ್ಶನಿಕರು ನಮ್ಮ ನಡುವೆ ಅಜರಾಮರವಾಗಿ ಉಳಿದಿದ್ದಾರೆ.
ಇವರು ವೈಚಾರಿಕ ತಳಹದಿಯ ಮೇಲೆ ಸಮಾನತೆಯನ್ನು ಪ್ರತಿಪಾದಿಸಿ, ಮಾನವ ಮಾನವನ ನಡುವಿನ ಸಾಮಾಜಿಕ ಅಂತರದ ಕಂದಕವನ್ನು ಮೆಟ್ಟಿನಿಂತು ಜೀವಪರವಾದ ಚಿಂತನೆಗಳನ್ನು ಬಿತ್ತಿದ್ದಾರೆ. ಇಂತಹ ಮಹಾನ್ ದಾರ್ಶನಿಕರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರಮುಖರಾಗಿದ್ದಾರೆ. ವೈದಿಕರು ತಮ್ಮ ಅಸ್ತಿತ್ವಕ್ಕಾಗಿ ರೂಪಿಸಿಕೊಂಡು ಬಂದ ಅಸಮಾನತೆಯ ವರ್ಣವೃಕ್ಷವನ್ನು ಬೇರು ಸಹಿತ ಕಿತ್ತು ಹಾಕಿ ಸಮಾನತೆಯನ್ನು ಹಂಚಿದ ಶ್ರೇಷ್ಟ ದಾರ್ಶನಿಕರಲ್ಲಿ ಅಂಬೇಡ್ಕರ್ ಅವರ ಪಾತ್ರ ಮಹತ್ವದ್ದು.
ಹೀಗಾಗಿ ಇವರು ಕೇವಲ ವ್ಯಕ್ತಿ ಮಾತ್ರವಲ್ಲ, ಭಾರತದ ಶೂದ್ರರ ಪಾಲಿನ ಭೀಮಬಲ. ಪ್ರಸ್ತುತದಲ್ಲಿ ಬಾಬಾಸಾಹೇಬರ ೧೩೧ನೇ ಜನ್ಮದಿನವನ್ನು ಆಚರಿಸುತ್ತಿರುವ ಸುಸಂದರ್ಭದಲ್ಲಿ ನಾವು ಅವರ ಮೂರ್ತಿ ಆರಾಧನೆಗಿಂತ ಅವರ ಸಾಮಾಜಿಕ ಕಳಕಳಿ, ತುಡಿತ-ಮಿಡಿತ, ಭಾರತಕ್ಕೆ ನೀಡಿದ ಕೊಡುಗೆ ಹಾಗೂ ಶೂದ್ರ ಸಮುದಾಯಗಳ ಮೇಲೆ ಅವರಿಗಿದ್ದ ಬದ್ಧತೆಯನ್ನು ಅರಿಯುವುದು ಸೂಕ್ತವೆಂದು ಭಾವಿಸಲಾಗಿದೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರೆ ನಾವು ಇಂದು ಸ್ಮರಣೆ ಮಾಡುವ ಅಗತ್ಯವೇ ಇರಲಿಲ್ಲ. ಹಾಗೆಯೇ ಇವರು ಸಾರ್ವತ್ರಿಕ ನೆಲೆಯಲ್ಲಿ ಭಾರತೀಯರ ಸ್ಮರಣೆಯಲ್ಲಿಯೂ ಉಳಿಯುತ್ತಿರಲಿಲ್ಲ. ಆದರೆ ಭಾರತದ ಪ್ರತಿಯೊಬ್ಬ ಪ್ರಜೆಯು ಇಂದು ಬಾಬಾಸಾಹೇಬರನ್ನು ಸ್ಮರಣೆ ಮಾಡಿಕೊಳ್ಳಬೇಕಾದ ಅನಿವಾರ್ಯದೆ ಇದೆ ಎಂದಾದರೆ ಅದಕ್ಕೆ ಕಾರಣ ಈ ನಿಸ್ವಾರ್ಥ ವ್ಯಕ್ತಿತ್ವದ ಹಿರಿಮೆಯ ಪ್ರತೀಕವೇ ಸರಿ.
ಭಾರತೀಯರಾದ ನಾವು ಎಪ್ಪತ್ತು-ಎಂಬತ್ತು ವರ್ಷಗಳ ಹಿಂದಿನ ಭಾರತವನ್ನು ಒಂದು ಕ್ಷಣ ಕಣ್ಣು ಮುಚಿ ಸ್ಮರಿಸಿಕೊಂಡರೆ ನಮಗೆ ಬಾಬಾಸಾಹೇಬ್ ಅಂಬೇಡ್ಕರ್ ಎಂಬ ಭೀಮಶಕ್ತಿಯ ಸಾಹಸಮಯ ಹೋರಾಟದ ಬದುಕು ಅರ್ಥವಾಗುತ್ತದೆ. ಇಂದು ಹಿಂದುತ್ವದ ಹೆಸರಿನಲ್ಲಿ ಕೋಮುವಾದಿಗಳ ಕೈಗೊಂಬೆಯಾಗಿ ಕುಣಿಯುತ್ತ, ಈ ನೆಲದ ಸಾಮರಸ್ಯವನ್ನು ತಮ್ಮ ಕೈಯಾರೆ ಕೆಡಿಸುತ್ತಿರುವ ಶೂದ್ರ ಸಮುದಾಯದ ಯುವ ಸಮುದಾಯವು ಒಂದು ಕ್ಷಣ ಎಂಬತ್ತು ವರ್ಷಗಳ ಹಿಂದಿನ ತಮ್ಮ ಪೂರ್ವಜರ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಂಡರೆ ಬ್ರಾಹ್ಮಣ್ಯದ ತಾಳಕ್ಕೆ ಕುಣಿಯುತ್ತಿರಲಿಲ್ಲ.
ಬಾಬಾಸಾಹೇಬ್ ಅಂಬೇಡ್ಕರ್ ಅವರ ‘ಚರಿತ್ರೆ ಇಲ್ಲದ ಜನಾಂಗ ಚರಿತ್ರೆಯನ್ನು ನಿರ್ಮಿಸಲು ಸಾಧ್ಯವಿಲ್ಲ. ಚರಿತ್ರೆ ಮರೆತವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ’ ಎಂಬ ಮಾತು ಸತ್ಯದಿಂದ ಕೂಡಿದೆ. ಇಂದು ಬ್ರಾಹ್ಮಣ್ಯದ ತಾಳಕ್ಕೆ ತಕ್ಕಂತೆ ಕುಣಿದು ‘ಹಿಂದುತ್ವ’ದ ಅಮಲೇರಿಸಿಕೊಂಡ ಶೂದ್ರ ಸಮುದಾಯಗಳಿಗೆ ತಮ್ಮ ಚರಿತ್ರೆಯ ಅರಿವಿಲ್ಲ. ಈ ಕಾರಣಕ್ಕೆ ಇವರು ಸಾವಿರಾರು ವರ್ಷಗಳಿಂದ ತಮ್ಮನ್ನು ದಾಸ್ಯಕ್ಕೆ ಒಳಪಡಿಸಿದ ಧರ್ಮದ ರಕ್ಷಣೆಗೆ ಮುಂದಾಗಿದ್ದಾರೆ.
ಬಾಬಾಸಾಹೇಬರ ಈ ಮಾತು ಶೂದ್ರರಿಗೆ ಅರ್ಥವಾಗಿ ತಮ್ಮ ವಾಸ್ತವ ಚರಿತ್ರೆಯನ್ನು ಅರಿತರೆ ಸನಾತನವಾದಿಗಳಿಗೆ ಉಳಿಗಾಲವಿಲ್ಲ. ಇಂತಹ ಸೂಕ್ಷö್ಮತೆಯನ್ನು ಅರಿತ ಸನಾತನವಾದಿಗಳು ಒಂದಿಲ್ಲೊAದು ವಿವಾದ ಸೃಷ್ಟಿಸುವ ಮೂಲಕ ಶೂದ್ರ ಸಮುದಾಯದ ಯುವಶಕ್ತಿಯನ್ನು ಮುಸ್ಲಿಮರು, ಕ್ರೈಸ್ತರ ವಿರುದ್ಧ ಎತ್ತಿಕಟ್ಟುವ ಮೂಲಕ ದೇಶದ ಶಾಂತಿಯನ್ನು ಕದಡುವ ಮೂಲಕ ತಮ್ಮ ಪಟ್ಟಾಭದ್ರ ಹಿತಾಸಕ್ತಿಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ.
ಸನಾತನಿಗಳಿಗೇಕೆ ಭೀಮ ಭಯ
ಸಾವಿರಾರು ವರ್ಷಗಳಿಂದಲೂ ಭಾರತದ ಸೌಹಾರ್ದ ನೆಲದಲ್ಲಿ ಅಸಮಾನತೆಯ ವಿಷಬೀಜವನ್ನು ಬಿತ್ತುತ್ತಲೇ ಬಂದವರು ವೈದಿಕರು. ವೈದಿಕರು ಬಿತ್ತಿದ ಈ ವಿಷಬೀಜ ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ, ಮರವಾಗಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ವೈದಿಕರು ಬಿತ್ತಿದ ಈ ವಿಷಬೀಜದ ಫಲವನ್ನು ಈ ನೆಲದ ಹಲವಾರು ಜೀವಪರ ದಾರ್ಶನಿಕರು ಕಿತ್ತುಹಾಕುವ ಪ್ರಯತ್ನ ಮಾಡಿದ್ದಾರೆ. ಆದರೆ ಸನಾತನವಾದಿಗಳು ಅವರ ಕಾರ್ಯವನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದು ಬುದ್ಧ ಗುರುವಿನಿಂದ ಆರಂಭಗೊಂಡು ಸಮಕಾಲೀನ ಸಂದರ್ಭದ ಅನುಭಾವಿಕ ಚಿಂತಕರವರೆಗೂ ಮುಂದುವರೆದಿದೆ. ಆದರೆ ಈ ಎಲ್ಲಾ ದಾರ್ಶನಿಕರ ಜೀವಪರವಾದ ಸಮಾನತೆಯ ತತ್ವ-ಚಿಂತನೆಗಳನ್ನು ಮೂಲಭೂತವಾದಿಗಳು ಜೀರ್ಣಿಸಿಕೊಂಡು ವೈದಿಕೀಕರಣಗೊಳಿಸಿದ್ದಾರೆ. ಆದರೆ ಬಾಬಾಸಾಹೇಬರು, ಮತ್ತವರ ತತ್ವ-ಚಿಂತನೆಗಳನ್ನು ಮಾತ್ರ ತಿಂದು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂಬೇಡ್ಕರ್ ಅವರು ವೈದಿಕರ ದಾಹಕ್ಕೆ ಆಹಾರವಾಗದೆ ಶೂದ್ರರ ನೋವಿಗೆ ಆಸರೆಯಾಗಿ ನಿಂತ ಹೆಬ್ಬಂಡೆಯಾದರು.
ಈ ಹೆಬ್ಬಂಡೆಯನ್ನು ಮಾತ್ರ ವೈದಿಕರು ಮಣಿಸಲು ಸಾಧ್ಯವಾಗಲೇ ಇಲ್ಲ. ಅಂಬೇಡ್ಕರ್ ಅವರು ಸಾವಿರಾರು ವರ್ಷಗಳಿಂದ ಭಾರತದ ನೆಲದಲ್ಲಿ ಅಸಮಾನತೆಯನ್ನು ಬಿತ್ತಿ ಬೆಳೆದುಕೊಂಡು ಬಂದಿದ್ದ ಬ್ರಾಹ್ಮಣ್ಯದ ಕಸದಲ್ಲಿ ಕೃಷಿ ಮಾಡಿ ಹಸನು ಮಾಡಿದರು. ಹಿಂದುತ್ವದ ಕಳೆಯ ಮಧ್ಯೆ ನೆನೆಗುದಿಗೆ ಬಿದ್ದಿದ್ದ ‘ಬುದ್ಧತ್ವ’ಕ್ಕೆ ಜೀವ ತುಂಬಿದರು. ಬುದ್ಧಗುರುವಿನ ಜೀವಪರವಾದ ಆಶಯಗಳನ್ನು ಕೇಂದ್ರವಾಗಿಟ್ಟುಕೊಂಡು ಸರ್ವರನ್ನು ಸಮಾನವಾಗಿ ಕಾಣುವಂತಹ ಸಂವಿಧಾನವನ್ನು ರಚಿಸಿ ಹಿಂದುತ್ವದಲ್ಲಿ ದಾಸ್ಯಕ್ಕೆ ಒಳಗಾಗಿದ್ದ ಶೂದ್ರರು, ಮಹಿಳೆಯರಿಗೆ ಸ್ವಾಭಿಮಾನವನ್ನು ಕಲ್ಪಿಸಿದರು.
ಪ್ರಜಾಪ್ರಭುತ್ವದ ಮಾದರಿಯನ್ನು ಸಂವಿಧಾನಿಕ ನೆಲೆಯಲ್ಲಿ ಜಾರಿಗೆ ತಂದು ಸಾವಿರಾರು ವರ್ಷಗಳ ಕಾಲ ಗುಲಾಮಗಿರಿಯಿಂದ ಬಳಲುತ್ತಿದ್ದ ಪ್ರಜೆಗಳನ್ನೇ ಪ್ರಭುಗಳಾಗಿ ರೂಪಿಸಿದರು. ಇದು ಭಾರತದ ನೆಲದಲ್ಲಿ ಅಂಬೇಡ್ಕರ್ ಎಂಬ ಮಹಾನ್ ಚೇತನದಿಂದ ಮಾತ್ರವೇ ಸಾಧ್ಯವಾಯಿತು.
ಬಾಬಾಸಾಹೇಬರು ಜೀವಪರ ಆಶಯಗಳ ಬೆನ್ನೇರಿ ರೂಪಿಸಿದ ಈ ಸಂವಿಧಾನವು ಸನಾತನವಾದಿಗಳಿಗೆ ಸಹಿಸದ ತುತ್ತಾಗಿತ್ತು. ಭೀಮರಾವ್ ಎಂಬ ಬಲವೇ ಇವರಿಗೆ ಸಿಂಹಸ್ವಪ್ನವಾಯಿತು.
ಬುದ್ಧರನ್ನು ನುಂಗಿದಂತೆ, ಬಸವಣ್ಣರನ್ನು ನುಂಗಿದAತೆ, ಸ್ವಾಮಿ ವಿವೇಕಾಂದರನ್ನು ನುಂಗಿದಂತೆ ಬಾಬಾಸಾಹೇಬರನ್ನು ನುಂಗಲು ಸಾಧ್ಯವಾಗದೆ ಇರುವುದಕ್ಕೆ ಕಾರಣ ಅವರಿಗಿದ್ದ ಶೂದ್ರ, ಅತೀಶೂದ್ರ ಹಾಗೂ ಮಹಿಳೆಯರ ಮೇಲೆ ಇದ್ದಂತಹ ಬದ್ಧತೆ. ಹಾಗೆಯೇ ಇವರು ರೂಪಿಸಿದ ಸರ್ವಸಮಾನತೆಯ ಲಿಖಿತ ಮಾದರಿಯ ಸಂವಿಧಾನ. ಅಂಬೇಡ್ಕರ್ ಅವರು ರೂಪಿಸಿದ ಈ ಸಂವಿಧಾನ ಭಾರತದ ಶೂದ್ರರು ಹಾಗೂ ಮಹಿಳೆಯರ ಪಾಲಿಗೆ ಕೇವಲ ಹೊತ್ತಿಗೆ ಮಾತ್ರವಲ್ಲ. ಸ್ವಾಭಿಮಾನದ ಪ್ರತಿರೂಪ.
ಭಾರತೀಯರೆಲ್ಲರ ಪಾಲಿನ ಶ್ರೇಷ್ಟ ಧರ್ಮಗ್ರಂಥ. ‘ಭಾರತೀಯರಾದ ನಾವು’ ಎಂಬ ಘೋಷವಾಕ್ಯದ ಮೂಲಕ ಆರಂಭವಾದ ಈ ಗ್ರಂಥವು ವೈದಿಕರ ಕಟ್ಟುಪಾಡುಗಳನ್ನು ಬುಡಮೇಲು ಮಾಡಿತು. ಸಾವಿರಾರು ವರ್ಷಗಳ ಕಾಲ ಶ್ರಮರಹಿತವಾಗಿ ಜೀವಿಸುತ್ತಿದ್ದ ಬ್ರಾಹ್ಮಣಶಾಹಿಗಳ ಬದುಕಿಗೆ ಪ್ರಬಲವಾದ ಪೆಟ್ಟು ನೀಡಿತು. ಭಾರತದ ನೆಲದಲ್ಲಿ ವೈದಿಕತೆಯ ಎಲ್ಲಾ ಕುತಂತ್ರಗಳನ್ನು ನೆಲಸಮಗೊಳಿಸಿದವರು ಭೀಮರಾವ್ ಅಂಬೇಡ್ಕರ್. ಹೀಗಾಗಿ ಸನಾತನವಾದಿಗಳಿಗೆ ಇಂದಿಗೂ ಭೀಮಭಯ ಕಾಡುತ್ತಲೇ ಇದೆ.
ಈ ಕಾರಣಕ್ಕಾಗಿಯೇ ಅವರು ಸಂವಿಧಾನವನ್ನು ಬದಲಾಯಿಸುವ ಹುನ್ನಾರಗಳನ್ನು ನಿರಂತರವಾಗಿ ರೂಪಿಸುತ್ತಿದ್ದಾರೆ. ಶೂದ್ರರನ್ನು ಬಳಸಿಕೊಂಡು ಕೋಮುಗಲಭೆ ಸೃಷ್ಟಿಸುತ್ತಿದ್ದಾರೆ. ಕೋಮುವಾದಿ ನೆಲೆಯಲ್ಲಿ ರೂಪಿಸುತ್ತಿರುವ ಎಲ್ಲಾ ತಂತ್ರಗಳು ಅನ್ಯಧರ್ಮಿಯರ ಮೇಲಿನ ದ್ವೇಷದಿಂದಲ್ಲ. ಅವುಗಳೆಲ್ಲ ಭಾರತದ ಮಣ್ಣಿನ ಮಕ್ಕಳಾದ ಶೂದ್ರರು ಹಾಗೂ ಅತೀಶೂದ್ರರನ್ನು ಹತ್ತಿಕ್ಕುವಲ್ಲಿ ರೂಪಿಸಿದ ತಂತ್ರಗಳು. ಸನಾತನವಾದಿಗಳಿಗೆ ಮುಸ್ಲಿಮರ ಮೇಲೆ ದ್ವೇಷವಿಲ್ಲ.
ಚರಿತ್ರೆಯ ವಾಸ್ತವತೆಯತ್ತ ಕಣ್ಣಾಯಿಸಿದರೆ ವಿದೇಶಿ ಆಕ್ರಮಣಕಾರರಾದ ಮುಸಲ್ಮಾನರು, ಫ್ರೆಂಚರು, ಡಚ್ಚರು, ಪೋರ್ಚಗೀಸರು, ಬ್ರಿಟಿಷರನ್ನೆಲ್ಲ ಸ್ವಾಗತಿಸಿ ದೇಶಿಯ ದೊರೆಗಳ ವಿರುದ್ಧ ಎತ್ತಿಕಟ್ಟಿದವರು ಇದೇ ಸನಾತನವಾದಿಗಳು. ಭಾರತದ ಚರಿತ್ರೆಯ ಪುಟಗಳಲ್ಲಿ ಯಾವುದೇ ಒಬ್ಬ ದೇಶಿಯ ರಾಜ ಸೋಲನ್ನು ಅನುಭವಿಸಿದ್ದಾನೆ ಎಂದಾದರೆ ಅದರಲ್ಲಿ ಬ್ರಾಹ್ಮಣ್ಯದ ತಂತ್ರಗಾರಿಗೆ ಅಡಗಿಯೇ ಇರುತ್ತದೆ.
ಇಂದು ವಿದೇಶಗಳಿಗೆ ಗುಪ್ತಚರ ಮಾಹಿತಿಗಳನ್ನು ಸೋರಿಕೆ ಮಾಡುತ್ತಿರುವವರಲ್ಲಿ ಇವರದು ಮೇಲುಗೈ. ಹೀಗಾಗಿ ಇವರಿಗೆ ಮುಸಲ್ಮಾನರು ಹಾಗೂ ಇತರೆ ಅನ್ಯಧರ್ಮಿಯರ ಮೇಲೆ ದ್ವೇಷವಿಲ್ಲ. ಇವರ ಮೇಲಿನ ದ್ವೇಷಕ್ಕೆ ಕಾರಣ ಈ ನೆಲದ ಶೂದ್ರರನ್ನು ಹತ್ತಿಕ್ಕುವುದೇ ಆಗಿದೆ. ಆದರೆ ಸನಾತನವಾದಿಗಳಿಗೆ ಇರುವ ಭೀಮ ಭಯದಿಂದ ಶೂದ್ರರು ಹಾಗೂ ಅತೀಶೂದ್ರರನ್ನು ನೇರವಾಗಿ ಎದುರು ಹಾಕಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ಕೋಮುದ್ವೇಷವನ್ನು ಬಿತ್ತುವ ಮೂಲಕ ಶೂದ್ರರನ್ನು ಹತ್ತಿಕ್ಕುವ ಹುನ್ನಾರಗಳನ್ನು ನಿರಂತರವಾಗಿ ಮುನ್ನೆಡೆಸಿಕೊಂಡು ಬಂದಿದ್ದಾರೆ.
ಭೀಮ ಬಲ ಶೂದ್ರರಿಗೆಷ್ಟು ಗೊತ್ತು
ಯಾವುದೇ ಒಬ್ಬ ಮುಂದುವರೆದ ಜಾತಿಯ ಶೂದ್ರನನ್ನು ಅಂಬೇಡ್ಕರ್ ಯಾರು ಎಂದು ಕೇಳಿದರೆ ಅವನ ಬಾಯಿಯಿಂದ ಸಹಜವಾಗಿಯೇ ಹೊರಹೊಮ್ಮುವ ಮಾತು ಅವರೊಬ್ಬ ‘ಹೊಲೆಯ ಮಾದಿಗ’ ಸಮುದಾಯದ ನಾಯಕ ಎಂಬುದೇ ಆಗಿರುತ್ತದೆ. ಆದರೆ ಈ ಭೀಮ ಶಕ್ತಿ ನನಗೆಷ್ಟು ಸ್ವಾಭಿಮಾನ, ಸ್ವಾವಲಂಬನೆಯನ್ನು ಕಲ್ಪಿಸಿಕೊಟ್ಟಿದೆ ಎಂಬ ಅರಿವು ಶೂದ್ರರಿಗೆ ಇಲ್ಲವಾಗಿದೆ. ಇದು ಆ ವ್ಯಕ್ತಿ ಅಥವಾ ಸಮುದಾಯದ ತಪ್ಪಲ್ಲ.
ಅವರ ತಲೆಯೊಳಗೆ ಅಂಬೇಡ್ಕರ್ ಎಂಬ ಶಕ್ತಿಯ ಬಗ್ಗೆ ಮೂಲಭೂತವಾದಿಗಳು ತುಂಬಿರುವ ಹುಸಿ ಹುನ್ನಾರಗಳಿವು. ಅಂಬೇಡ್ಕರ್ ಎಂಬ ಈ ವ್ಯಕ್ತಿತ್ವ ಭಾರತದ ನೆಲದಲ್ಲಿ ಜನ್ಮತಳೆಯದೆ ಹೋಗಿದ್ದರೆ ನಾವೆಲ್ಲ ಶಿಕ್ಷಣ, ರಾಜಕೀಯ, ಅಧಿಕಾರದಿಂದ ಹೊರಗುಳಿದು ಜೀತ ಮಾಡಬೇಕಾದ ಪರಿಸ್ಥಿತಿ ಇನ್ನೂ ಜೀವಂತವಾಗಿರುತ್ತಿತ್ತು ಎಂಬುದು ಶೂದ್ರ ಸಮುದಾಯಗಳಿಗೆ ಅರ್ಥವಾಗಿಯೇ ಇಲ್ಲ.
ಶೂದ್ರರಿಗೆ ಸಾವಿರಾರು ವರ್ಷಗಳಿಂದಲೂ ನಮ್ಮ ಪೂರ್ವಜರನ್ನು ಶೋಷಣೆಗೆ ಒಳಪಡಿಸಿದ ‘ಹಿಂದುತ್ವ’ವನ್ನು ಕಾಪಾಡಿಕೊಳ್ಳಲು ಇರುವ ತವಕ, ನಮಗಾಗಿ ಹಗಲಿರುಳು ದುಡಿದು, ದಣಿದ ಅಂಬೇಡ್ಕರ್ ಎಂಬ ಮಹಾತಾಯಿಯ ಬಗ್ಗೆ ಕಿಂಚಿತ್ತೂ ಅಭಿಮಾನವಿಲ್ಲ. ಈ ದೇಶದಲ್ಲಿ ಶೇ ೩% ಇರುವ ಬ್ರಾಹ್ಮಣರು ಸಂವಿಧಾನವನ್ನು ಬದಲಾಯಿಸುವುದೇ ನಮ್ಮ ಗುರಿ ಎಂದರೆ ಅದಕ್ಕೆ ಚಪ್ಪಾಳೆ ತಟ್ಟುವವರು ಈ ಶೂದ್ರ ಹಾಗೂ ಅತೀಶೂದ್ರ ಸಮುದಾಯದ ಮೂರ್ಖರೆ ಆಗಿದ್ದಾರೆ.
ಜೈ ಶ್ರೀರಾಮ್ ಎಂದು ಗಂಟಲು ಕಿತ್ತೊಗುವಂತೆ ಕೂಗುವ ಶೂದ್ರನಿಗೆ ‘ಜೈಭೀಮ್’ ಎಂಬ ಸ್ವಾಭಿಮಾನದ ಘೋಷ ತಾಗುತ್ತಲೇ ಇಲ್ಲ. ತಾನಗಾಗಿ ದುಡಿದು ನೆಮ್ಮದಿಯ ಬದುಕನ್ನು ಕಟ್ಟಿಕೊಟ್ಟ ತಾಯಿಯನ್ನು ಮರೆತು, ಅಳಸಿದ ಅನ್ನವನ್ನು ವೈಯಾರದಿಂದ ತಿನ್ನಿಸುವ ಆಂಟಿಯನ್ನು ಹೊಗಳುವ ಮಟ್ಟಕ್ಕೆ ಶೂದ್ರ ಸಮುದಾಯ ಇಳಿದು ನಿಂತಿದೆ. ಹೀಗಾಗಿ ಅಂಬೇಡ್ಕರ್ ಎಂಬ ವಿಶ್ವಜ್ಞಾನ ಜಗತ್ತಿಗೆ ಅರಿವಾದರೂ ಭಾರತೀಯ ಶೂದ್ರರಿಗೆ ಮಾತ್ರ ಅಂಬೇಡ್ಕರ್ ಇನ್ನೂ ಅರ್ಥವಾಗಿಲ್ಲ. ಅದು ಅರ್ಥವಾಗಿದ್ದರೆ ಕೇವಲ ‘ಹೊಲೆಯ ಮಾದಿಗ’ ಎಂಬುದಾಗಿಯೇ ಮಾತ್ರ.
ದುರಂತವೆಂದರೆ ಹಲವಾರು ವೈಯಕ್ತಿಕ ಕಾರಣಗಳಿಂದಾಗಿ ಈ ಒಳಪಂಗಡಗಳು ಕೂಡ ಅಂಬೇಡ್ಕರ್ ಅವರಿಂದ ದೂರ ಸರಿದು ಪರ್ಯಾಯ ನಾಯಕನನ್ನು ಎತ್ತಿಕಟ್ಟುವ ಅಪಾಯಕಾರಿ ಸನ್ನಿವೇಶವನ್ನು ನಿರ್ಮಿಸಿಕೊಳ್ಳುತ್ತಿವೆ.
ಶೂದ್ರ ಭಾರತಕ್ಕೆ ಭೀಮ ಬಲವೇ ಅಂತಿಮ
ಭಾರತದೊಳಗೆ ಎರಡು ಬಗೆಯ ಭಾರತಗಳಿವೆ. ಒಂದು ಶೂದ್ರ ಭಾರತ. ಮತ್ತೊಂದು ಬ್ರಾಹ್ಮಣ್ಯ ಭಾರತ. ಶೂದ್ರ ಭಾರತವು ಮೂಲನಿವಾಸಿಗಳದ್ದು. ಬ್ರಾಹ್ಮಣ್ಯ ಭಾರತವು ವಲಸಿಗರದ್ದು. ಹೀಗಾಗಿ ವಲಸಿಗರು ಮೂಲನಿವಾಸಿಗಳ ಮೇಲೆ ನಿರಂತರವಾದ ಆಕ್ರಮಣವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಮೂಲನಿವಾಸಿಗಳ ಭ್ರಾತೃತ್ವ, ಸಮಾನತೆ, ಸೋದರತ್ವ ತತ್ವಕ್ಕೆ ವಿರುದ್ಧವಾಗಿ ವಲಸಿಗರು ವರ್ಣಾಧಾರಿತ ಶ್ರೇಣೀಕೃತ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಈ ಶ್ರೇಣೀಕೃತ ಸೌಧವನ್ನು ಕೆಡವಿ ಸಮಾನತೆಯ ಸಮಾಜದ ನಿರ್ಮಾಣಕ್ಕೆ ಮುಂದಾದವರು ಬಾಬಾಸಾಹೇಬ್ ಅಂಬೇಡ್ಕರ್ ಅವರು. ಹೀಗಾಗಿ ಇಂದು ಶೂದ್ರಾತೀಶೂದ್ರ ಸಮುದಾಯಗಳು ನೆಮ್ಮದಿಯಿಂದ ಬದುಕುವುದಕ್ಕೆ ಕಾರಣ ಭೀಮಶಕ್ತಿ. ಈ ಭೀಮಶಕ್ತಿಯನ್ನು ಅರಿತು ನಡೆದರೆ ನಮ್ಮ ಮುಂದಿರುವ ಇಕ್ಕಟ್ಟು-ಬಿಕ್ಕಟ್ಟುಗಳಿಗೆ ಪರಿಹಾರವಿದೆ. ಈ ಭೀಮ ಬಲದ ಅರಿವು ಶೂದ್ರರೊಳಗೆ ಮೂಡದೇ ಹೋಗಿರುವ ಕಾರಣಕ್ಕೆ ಸನಾತನವಾದಿಗಳು ತಮ್ಮ ವಿಕೃತತೆಯನ್ನು ಮೆರೆಯುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಭಾರತವನ್ನು ಛಿದ್ರಗೊಳಿಸುತ್ತಿದ್ದಾರೆ.
ದಲಿತ, ದಮನಿತ, ಮಹಿಳೆಯರ ಹಕ್ಕುಗಳ ಹರಣಕ್ಕೆ ಮುಂದಾಗಿದ್ದಾರೆ. ಈ ವಿಷಧರ್ಮವು ರಾಜಕೀಯದೊಳಗೆ ಬೆರೆತು ಇಂದು ಭಾರತವನ್ನೇ ಮಾರಾಟ ಮಾಡುವ ಹಂತಕ್ಕೆ ತೆಗೆದುಕೊಂಡು ಹೋಗಿದೆ. ಈ ಕಾರಣಕ್ಕಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಶೂದ್ರಾತೀಶೂದ್ರ ಸಮುದಾಯಗಳು ಕನಿಷ್ಠ ಜೀವನ ನಡೆಸುವುದು ಕೂಡ ಕಷ್ಟಕರವಾಗಿದೆ.
ಶೂದ್ರರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ಸಮುದಾಯಗಳ ಮಹಿಳೆಯರು ನೆಮ್ಮದಿಯ ಮತ್ತು ಸ್ವಾಭಿಮಾನದ ಜೀವನ ನಡೆಸಬೇಕಾದರೆ ಭೀಮ ಬಲವನ್ನು ಅರಿಯಬೇಕು. ಅದನ್ನು ಅರಿತರೆ ಮಾತ್ರವೇ ಸಾಲದು. ಭೀಮರ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಪ್ರಬುದ್ಧ ಭಾರತದ ನಿರ್ಮಾಣದತ್ತ ಸಾಗಬೇಕಾಗಿದೆ. ಇಂದು ಬಾಬಾಸಾಹೇಬರ 131ನೇ ಜನ್ಮದಿನದ ಸಂಭ್ರಮದಲ್ಲಿರುವ ನಾವುಗಳೆಲ್ಲ ನಮ್ಮ ನಮ್ಮ ಕಾರ್ಯವೈಖರಿಗಳನ್ನು ಆತ್ಮವಿಮರ್ಶೆಗೆ ಒಳಪಡಿಸಿಕೊಳ್ಳಬೇಕಿದೆ.
ಆ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬದುಕು, ಅವರ ತತ್ವ-ಚಿಂತನೆಗಳನ್ನು ಅರಿತು ಸ್ವಾಭಿಮಾನದ ಬದುಕಿನತ್ತ ಮುಖ ಮಾಡಬೇಕಾದ ತುರ್ತು ನಮ್ಮ ಮುಂದಿದೆ. ಹೀಗಾಗಿ ಶೂದ್ರ ಭಾರತಕ್ಕೆ ಭೀಮಬಲವೊಂದೆ ಅಂತಿಮ ಎಂಬ ಸತ್ಯ ಶೂದ್ರರ ಮನೆ ಮನಗಳನ್ನು ಪ್ರವೇಶಿಸಬೇಕಾಗಿದೆ. ಈ ನೆಲೆಯಲ್ಲಿ ಬಾಬಾಸಾಹೇಬರ ಜನ್ಮದಿನ ನಮ್ಮೆಲ್ಲರ ಅರಿವಿನ ದಿನವಾಗಲಿ. ಜೈಭೀಮ್.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೊಹಮ್ಮದ್ ಮುಕ್ತಿಯಾರ್ ಬಿನ್ ಎಸ್. ಆರ್ ಸಮೀವುಲ್ಲ ಇವರ ಮಗ ಮೊಹಮ್ಮದ್ ಮುಬಾರಕ್ @ ಮುಬಾರಕ್ ಈತ ಮತ್ತು ನಿಸಾರ್ ಅಹಮದ್ ಬಿನ್ ಮಹಮ್ಮದ್ ಅಬಿದ್ ಮತ್ತು ಇನ್ನೊಬ್ಬರು, ಬೇತೂರು ರೋಡ್, ಸಿದ್ಧರಾಮೇಶ್ವರ ಬಡಾವಣೆ ಇವರು ತಮ್ಮ ಮಗ ತಾಜು @ ತಾಜುದ್ದೀನ್ ಇವರು ಸ್ವಿಮ್ಮಿಂಗ್ ಪೂಲ್ನಲ್ಲಿ ಈಜಾಡುವ ಸಂಧರ್ಭದಲ್ಲಿ ಮರಣ ಹೊಂದಿರುತ್ತಾರೆ.
ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 4ನೇ ಎದುರುದಾರರಾದ ಸದಾನಂದ ವಗಲೆ ಹಾಗೂ 1 ರಿಂದ 3ನೇ ಎದುರುದಾರರ ವಿರುದ್ಧ, ತಮ್ಮ ಸೇವೆಯಲ್ಲಿನ ನಿರ್ಲಕ್ಷತೆಯಿಂದ ಘಟನೆ ಸಂಭವಿಸಿದ್ದು ಎಂಬ ತೀರ್ಮಾನಕ್ಕೆ ಆಯೋಗವು ಬಂದಿದ್ದು, ಈಗಾಗಲೇ, 1 ರಿಂದ 3ನೇ ಎದುರುದಾರರು, ದೂರುದಾರರಿಗೆ ರೂ.500,000/- ಲಕ್ಷವನ್ನು ಪರಿಹಾರವಾಗಿ ಈಗಾಗಲೆ ಕೊಟ್ಟಿದ್ದು, ಆದ್ದರಿಂದ 1 ರಿಂದ 3ನೇ ಎದುರುದಾರರ ವಿರುದ್ಧ ಪ್ರಕರಣವನ್ನು ವಜಾ ಮಾಡಿದೆ.
4ನೇ ಎದುರುದಾರರಾದ ಸದಾನಂದ ವಗಲೆ, ಕಾಂಟ್ರಕ್ಟರ್, ಇವರು ಈ ಎರಡು ಪ್ರಕರಣದ ದೂರುದಾರರಿಗೆ ಆದೇಶಿಸಿದ ದಿನದಿಂದ ಒಂದು ತಿಂಗಳೊಳಗೆ ಆದೇಶದ ಪ್ರಕಾರ ಪಾವತಿಸುವಂತೆ ಮೇ.19 ರಂದು ಆದೇಶಿಸಿ ರೂ. 5 ಲಕ್ಷಗಳನ್ನು ಶೇಕಡಾ 6 ವಾರ್ಷಿಕ ಬಡ್ಡಿಯೊಂದಿಗೆ ಹಾಗೂ ದೂರು ಖರ್ಚು ಹಾಗೂ ಮಾನಸಿಕ ಯಾತನೆಗೆ ತಲಾ ರೂ.5 ಸಾವಿರದಂತೆ, ಒಟ್ಟು ರೂ.10,000/-ಗಳನ್ನು ಪರಿಹಾರ ರೂಪವಾಗಿ ದೂರುದಾರರಿಗೆ ನೀಡುವಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಹೆಚ್.ಎನ್.ಮೀನಾ ಮತ್ತು ಸದಸ್ಯರಾದ ಸಿ.ಎಸ್. ತ್ಯಾಗರಾಜನ್ ಆದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಯುವಜನತೆಗೆ ಪ್ರೇರಣೆ ; ವಿಶ್ವನಾಥ.ಡಿ. ಅರ್
ಸುದ್ದಿದಿನ,ಬನ್ನಿಕೋಡು:ಮಾ.ಸ.ಬ. ಕಾಲೇಜ್, ದಾವಣಗೆರೆ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ರಂಗಸ್ವಾಮಿ ಟಿ.ಆರ್. ವಹಿಸಿ, ವಿದ್ಯಾರ್ಥಿಗಳಿಗೆ ಲಭ್ಯವಾಗಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಶೇಷ ಉಪನ್ಯಾಸದಲ್ಲಿ ಶ್ರೀ ವಿಶ್ವನಾಥ್ ಡಿ.ಆರ್., ಉಪನ್ಯಾಸಕರು ಹಾಗೂ ಪತ್ರಿಕಾ ವರದಿಗಾರರು, ಕೆ. ಬೇವಿನಹಳ್ಳಿ ಅವರು “ಸ್ವಾಮಿ ವಿವೇಕಾನಂದ ಮತ್ತು ಯುವಜನತೆ” ವಿಷಯದ ಕುರಿತು ಪ್ರೇರಣಾದಾಯಕ ಉಪನ್ಯಾಸ ನೀಡಿದರು. ಸ್ವಾಮಿ ವಿವೇಕಾನಂದರ ಜೀವನ ಸಾಧನೆ, ವ್ಯಕ್ತಿತ್ವ ಹಾಗೂ ದೇಶಭಕ್ತಿ ಕುರಿತು ವಿವರಿಸಿ, ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಅನುಸರಿಸಿ ಉತ್ತಮ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಯುವಜನತೆ ತಮ್ಮ ಶಕ್ತಿಯನ್ನು ಸಮಾಜಸೇವೆ ಹಾಗೂ ದೇಶದ ಅಭಿವೃದ್ಧಿಗೆ ಬಳಸಬೇಕು ಎಂದು ಕರೆ ನೀಡಿದರು.
“ಎದ್ದು ನಿಲ್ಲಿ, ಜಾಗ್ರತವಾಗಿರಿ, ಗುರಿ ಸಾಧಿಸುವ ತನಕ ನಿಲ್ಲಬೇಡಿ” ಎಂಬ ಸ್ವಾಮಿ ವಿವೇಕಾನಂದರ ಅಮೂಲ್ಯ ವಾಕ್ಯವನ್ನು ಉಲ್ಲೇಖಿಸಿ, ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಗುರಿನಿಷ್ಠೆ ಬೆಳೆಸುವಂತೆ ಪ್ರೇರೇಪಿಸಿದರು.
ಶ್ರೀ ಎ. ಜಯಪ್ಪ ಅವರು ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳು ಸಮಾಜಸೇವೆ ಹಾಗೂ ಸಾಮಾಜಿಕ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಶ್ರೀ ಪಿ.ವಿ. ಸತೀಶ್ ಅವರು ಹಳ್ಳಿ ಜೀವನದ ಮಹತ್ವ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.
ಉಪನ್ಯಾಸಕಿ ಕಾವ್ಯ ಶ್ರೀ ಅವರು ಮಹಿಳಾ ಸಬಲೀಕರಣದ ಕುರಿತು ಮಾತನಾಡಿ, ಮಹಿಳೆಯರು ಶಿಕ್ಷಣ ಹಾಗೂ ಆತ್ಮವಿಶ್ವಾಸದಿಂದ ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನವನ್ನು ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಹಾಗೂ ಮುಖಂಡರಾದ ವಾಗೀಶ್ ಸುದರ್ಶನ ಎಸ್.ಸಿ., ವಿಜಯ, ಹನುಮಂತಪ್ಪ ಯು., ಕೆ.ಎಸ್. ಬಸವರಾಜು, ಕೆ. ರೇವಣಸಿದ್ಧಪ್ಪ ಮುಂತಾದವರು ಭಾಗವಹಿಸಿದ್ದರು.
ಶಿಬಿರಾಧಿಕಾರಿಗಳಾದ ಡಾ. ರಾಘವೇಂದ್ರ ಹಾಗೂ ಡಾ. ಪ್ರವೀಣಕುಮಾರ್, ದೈಹಿಕ ನಿರ್ದೇಶಕರಾದ ಧನಂಜಯ್ ಹಾಗೂ ಉಪನ್ಯಾಸಕರಾದ ಶ್ರೀ ಶಾಂತಕುಮಾರ್ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಎರಡನೇ ದಿನದ ಶಿಬಿರವು ಮುಕ್ತಾಯಗೊಂಡಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಲೋಕಾಯುಕ್ತ ಪೋಲಿಸ್ ಇನ್ಸ್ಪೆಕ್ಟರ್ ಪ್ರಭು ಬಿ. ಸೂರಿನ ಅವರಿಂದ ಕಾನೂನು ಅರಿವು
ಸುದ್ದಿದಿನ,ಬನ್ನಿಕೋಡು: ಮಾ.ಸ.ಬ. ಕಾಲೇಜು, ದಾವಣಗೆರೆ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಅಧ್ಯಕ್ಷತೆಯನ್ನು ಮಾ.ಸ.ಬ. ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಕುಮಾರ್ ಎ.ಬಿ. ವಹಿಸಿದ್ದರು.
ಮುಖ್ಯ ಉಪನ್ಯಾಸಕರಾಗಿ ಕರ್ನಾಟಕ ಲೋಕಾಯುಕ್ತ, ದಾವಣಗೆರೆ ಇವರ ಪೋಲಿಸ್ ಇನ್ಸ್ಪೆಕ್ಟರ್ ಶ್ರೀ ಪ್ರಭು ಬಿ. ಸೂರಿನ ಭಾಗವಹಿಸಿ “ಕರ್ನಾಟಕ ಲೋಕಾಯುಕ್ತ ಕಾಯ್ದೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆ” ಕುರಿತು ಸಮಗ್ರ ಮಾಹಿತಿ ನೀಡಿದರು. ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಮತ್ತು ಹಿನ್ನೆಲೆ, ಸಂಸ್ಥೆಯ ವ್ಯಾಪ್ತಿ, ದೂರು ಸಲ್ಲಿಸುವ ವಿಧಾನ, ವಿಚಾರಣೆ ಕ್ರಮ, ಭ್ರಷ್ಟಾಚಾರ ತಡೆ ಕಾಯ್ದೆಯ ಪ್ರಮುಖ ಅಂಶಗಳು, ಲೋಕಾಯುಕ್ತ ಸಂಸ್ಥೆಯ ವೈಶಿಷ್ಟ್ಯತೆಗಳು, ಹಗರಣಗಳ ತನಿಖಾ ವಿಧಾನ ಹಾಗೂ ಸರ್ಕಾರಿ ಹಣದ ದುರುಪಯೋಗ ತಡೆ ಕ್ರಮಗಳ ಬಗ್ಗೆ ವಿವರಿಸಿದರು. ಉಪನ್ಯಾಸದ ಅಂತ್ಯದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ. ಹೆಚ್.ಆರ್. ತಿಪ್ಪೇಸ್ವಾಮಿ ಅವರು ಯುವಜನತೆ ಹಾಗೂ ಸಾಮಾಜಿಕ ಸಾಮರಸ್ಯ ಕುರಿತು ಪ್ರೇರಣಾದಾಯಕ ಸಂದೇಶ ನೀಡಿದರು.
ಶಿಬಿರಾಧಿಕಾರಿಗಳಾದ ಡಾ. ರಾಘವೇಂದ್ರ ಮತ್ತು ಡಾ. ಪ್ರವೀಣಕುಮಾರ್, ದೈಹಿಕ ನಿರ್ದೇಶಕರಾದ ಧನಂಜಯ್, ಗ್ರಾಮದವರಾದ ಬಸವರಾಜ್, ಹಾಲಪ್ಪ, ಮಹದೇವಪ್ಪ, ಕುರಿಯರ್ ದುರುಗಪ್ಪ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕಾನೂನು ಜಾಗೃತಿ ಹಾಗೂ ಭ್ರಷ್ಟಾಚಾರ ವಿರೋಧಿ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoನಕಲಿ ಬಿಲ್ಲುಗಳ ಮೂಲಕ ಲಕ್ಷಾಂತರ ರೂಪಾಯಿ ಅವ್ಯವಹಾರ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ನಾಗರಾಜ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ7 days agoಬ್ಯಾಕ್ಲಾಗ್ ನಿಯಮಾವಳಿ ಉಲ್ಲಂಘನೆ ; ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಕರಿಚಣ್ಣನವರ್ ವಿರುದ್ಧ ಲೋಕಾಗೆ ದೂರು
-
ಅಂಕಣ5 days agoನೀಟ್ ಸೃಷ್ಟಿಸಿದ ಅವಾಂತರಗಳು ಮತ್ತು ಅದರ ಬಹುಮುಖಿ ಬಿಕ್ಕಟ್ಟುಗಳು: ಒಂದು ವಿಮರ್ಶಾತ್ಮಕ ನೋಟ
-
ದಿನದ ಸುದ್ದಿ4 days agoಲಾರಿ, ಟ್ರಾಕ್ಟರ್ ಗಳಿಗೆ ಟ್ರಿಪ್ ಚೀಟಿ ಇಲ್ಲದೆ ಅಕ್ರಮ ಸಾಗಾಣಿಕೆ ; ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲು..!?
-
ದಿನದ ಸುದ್ದಿ7 days ago‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು
-
ದಿನದ ಸುದ್ದಿ5 days agoಕೆ. ಶಿವರಾಜಕುಮಾರ್ ಅವರಿಗೆ ಪಿಎಚ್ ಡಿ ಪದವಿ
-
ದಿನದ ಸುದ್ದಿ3 days agoಶಿಕ್ಷಕರು, ವಾರ್ಡನ್ಗಳಿಗೆ ಪೋಕ್ಸೊ ಕಾಯ್ದೆ ತರಬೇತಿ ನೀಡಿ
-
ದಿನದ ಸುದ್ದಿ2 days agoಲೋಕಾಯುಕ್ತ ಪೋಲಿಸ್ ಇನ್ಸ್ಪೆಕ್ಟರ್ ಪ್ರಭು ಬಿ. ಸೂರಿನ ಅವರಿಂದ ಕಾನೂನು ಅರಿವು

