ದಿನದ ಸುದ್ದಿ
‘ಶರಾವತಿ ಉಳಿಸಿ’ ಸಮಾಲೋಚನಾ ಸಭೆಯ ಮುಖ್ಯಾಂಶಗಳು ಹಾಗೂ ನಿರ್ಣಯಗಳು
ಸುದ್ದಿದಿನ, ಸಾಗರ : ಜೂನ್ 22 ರಂದು ಸಾಗರದ ನೌಕರರ ಭವನದಲ್ಲಿ ನಡೆದ “ಶರಾವತಿ ಉಳಿಸಿ” ಸಮಾಲೋಚನಾ ಸಭೆಯಲ್ಲಿ ಹಿರಿಯ ಸಾಹಿತಿಗಳಾದ ನಾ ಡಿಸೋಜಾ, ಹಿರಿಯ ಚಿಂತಕ ಪ್ರಸನ್ನ ಹೆಗ್ಗೋಡು, ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ, ಲೇಖಕ ವಿಲಿಂ, ಕಲಾವಿದ ಪರಿಸರವಾದಿ ಅರುಣ್ ಕುಮಾರ್ ಸಾರಾ, ಕೆ ಜಿ ಕೃಷ್ಣ ಮೂರ್ತಿ, ತುಮರಿ, ರಾಜಕೀಯ ಮುಖಂಡರಾದ ಬಿ ಆರ್ ಜಯಂತ್, ಕಲಗೋಡು ರತ್ನಾಕರ, ಮೇಘರಾಜ್ ಟಿಡಿ, ಮಲ್ಲಿಕಾರ್ಜುನ ಹಕ್ರೆ, ರವಿ ಕುಗ್ವೆ, ಪ್ರಭಾವತಿ ಚಂದ್ರಕಾಂತ್, ಸಾಮಾಜಿಕ ಕಾರ್ಯಕರ್ತರಾದ ಶಿವಾನಂದ ಕುಗ್ವೆ, ಬಿ ಎಚ್ ರಾಘವೇಂದ್ರ, ವಾಮದೇವ ಗೌಡ್ರು, ಹುಚ್ರಾಯಪ್ಪ ಶಿಕಾರಿಪುರ ಸೇರಿದಂತೆ ಸುಮಾರು 150 ಪ್ರತಿನಿಧಿಗಳು ಭಾಗವಹಿಸಿದ್ದರು.
ಕರೂರು ಗ್ರಾಮ ಪಂಚಾಯತಿ ಸತ್ಯನಾರಾಯಣ ಜಿ ಟಿ ಎಲ್ಲರನ್ನೂ ಸ್ವಾಗತಿಸಿದರು.ಪ್ರಾಸ್ತಸವಿಕವಾಗಿ ಮಾತನಾಡಿದ ಎಚ್ ಬಿ ರಾಘವೇಂದ್ರ ಸಭೆಯ ಉದ್ದೇಶವನ್ನು ಸಂಕ್ಷಿಪ್ತವಾಗಿ ತಿಳಿಸಿದರು.
ಶರಾವತಿ ನದಿಯಿಂದ ಬೆಂಗಳೂರಿಗೆ ನೀರೆತ್ತುವ ಯೋಜನೆಯ ಹಿನ್ನೆಲೆ, ಸಮಸ್ಯೆ ಗಳನ್ನು ಪತ್ರಕರ್ತ ಶಶಿ ಸಂಪಳ್ಳಿ ವಿವರಿಸಿದರು. ಈ ಯೋಜನೆಯ ಪರಿಸರದ ಆಯಾಮವನ್ನು ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಳಿ ತಿಳಿಸಿದರು. ಕೈಗೊಳ್ಳಬೇಕಾದ ಹೋರಾಟದ ಸ್ವರೂಪ, ಎಲ್ಲರನ್ನೂ ಒಳಗೊಂಡು ಜನಾಂದೋಲನ ನಡೆಸಬೇಕಾಗಿರುವ ಕುರಿತು ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಹರ್ಷಕುಮಾರ್ ಕುಗ್ವೆ ವಿವರಿಸಿದರು.
ಸಾಹಿತಿ ನಾ ಡಿಸೋಜಾ ಅವರು ಮಾತನಾಡಿ, ಬೆಂಗಳೂರಿಗೆ ಲಿಂಗನಮಕ್ಕಿಯಿಂದ ನೀರನ್ನ ಸಾಗಿಸಲು ಏನೆಲ್ಲಾ ಕೆಲಸ ಆಗಬೇಕು, ಎಷ್ಟೊಂದು ಖರ್ಚು ತಗುಲುತ್ತೆ, ಆ ಹಣ ನಮ್ಮೆಲ್ಲರ ಮೇಲೂ ಹೊರೆ, ನೀರನ್ನ ಸಾಗಿಸಲು ಇಲ್ಲಿ ಎಷ್ಟು ನೀರಿದೆ ಎಂಬುದನ್ನು ನಾವು ಪರಿಶೀಲನೆ ಮಾಡಬೇಕು, ಲಿಂಗನಮಕ್ಕೆ ಜಲಾಶಯದಲ್ಲಿ ಶೇ.೪೦ರಷ್ಟು ಹೂಳೇ ತುಂಬಿದೆ, ಇದರ ಬಗ್ಗೆ ಸರ್ಕಾರಕ್ಕೆ ಆಲೋಚನೆಯೇ ಇಲ್ಲ, ಈ ಸಣ್ಣ ನದಿಗೆ ಚಿಕ್ಕಪುಟ್ಟ ಹತ್ತು ಅಣೆಕಟ್ಟುಗಳಿವೆ. ನ್ಯಾಯಾಲಯಗಳು ಕುಡಿಯುವ ನೀರಿನ ಪರವಾಗಿ ಇರುತ್ವೆ, ಇಲ್ಲಿಂದ ಬೆಂಗಳೂರಿಗೆ ನೀರು ಸರಬರಾಜಾಗಲು ಇರುವ ಆಘಾತಗಳ ಬಗ್ಗೆ ನಿಮ್ಮ ಕಳಕಳಿಗೆ ಧನ್ಯವಾದಗಳು. ಎಲ್ಲರೂ ಸೇರಿ ಈ ಯೋಜನೆ ತಡೆಯಲು ಮುಂದಾಗೋಣ ಎಂದರು.
ಚಿಂತಕ ಪ್ರಸನ್ನ ಅವರು ವಿಶ್ವದ ಎಲ್ಲಾ ರಾಷ್ಟ್ರ ಗಳು ನಗರವನ್ನ ಮಿತಿಗೊಳಿಸುವ ಕೆಲಸ ಮಾಡುತ್ತವೆ ಆದರೆ ನಮ್ಮಲ್ಲಿ ಇಲ್ಲ, ಬೆಂಗಳೂರಿನ ದಾಹಕ್ಕೆ ಕಾವೇರಿ ಹೇಮಾವತಿ ಆಯ್ತು ಈಗ ಶರಾವತಿ, ಐವತ್ತು ವರ್ಷ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವುದೇ ಆದರೆ ಬೆಂಗಳೂರನ್ನ ಮಿತಿಗೊಳಿಸಿ. ಉತ್ತರದ ಭಾರತದಲ್ಲಿ ತಿಂಗಳಿಗೊಮ್ಮೆ ನೀರು ಬಿಡಲಾಗುತ್ತಿದೆ, ಈ ಮಾತನ್ನ ನಾವು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕಿದೆ. ಬೆಂಗಳೂರು ಎಷ್ಟು ಎತ್ತರವಿದೆ, ಗುಡ್ಡಕ್ಕೆ ನೀರು ಹೊಡೆಯುತ್ತೇವೆ ಎಂಬುದನ್ನ ಯಾವ ನ್ಯಾಯಾಲಯವೂ ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಆರ್ ಜಯಂತ್ ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆ ಅತ್ಯಂತ ಮೂರ್ಖ ಯೋಜನೆ. ಇದಕ್ಕೆ ನಮ್ಮೆಲ್ಲರ ವಿರೋಧವಿದೆ. ಇದನ್ನು ತಡೆಯಲೇಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್ ಅವರು ಮಾತನಾಡಿ, ಶರಾವತಿ ನದಿ ನೀರನ್ನ ತೆಗೆದುಕೊಂಡು ಹೋಗುವ ಹುನ್ನಾರ ಮೊದಲಿಂದಲೂ ಇತ್ತು..ಈಗ ಮುನ್ನೆಲೆಗೆ ಬಂದಿದೆ. ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ನಮ್ಮ ಭಾಗದ ಜನರಿಗೆ ಕುಡಿಯುವ ನೀರಿನ ಅವಶ್ಯಕತೆ ಇದೆ. ಮೊದಲು ಇಲ್ಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಗಾಗಿ ಒತ್ತಾಯಿಸಬೇಕು ಎಂದರು. ಈ ವ್ಯಾಪ್ತಿಯ ಎಲ್ಲಾ ಗ್ರಾಮಪಂಚಾಯಿತಿಗಳನ್ನ ಕರೆದು ಸಭೆ ಮಾಡೋಣ, ಇಡೀ ಶಿವಮೊಗ್ಗ ಬಂದ್ ಮಾಡಿಸೋಣ ಎಂದರು.
ಶಂಕರಶರ್ಮಾ ಅವರು ಮಾತನಾಡಿ, ತಾಂತ್ರಿಕವಾಗಿ ಯೋಜನೆಯ ಬಗ್ಗೆ ಚರ್ಚೆ ಮಾಡಿ, ಮೂರು ಸಾವಿರ ಮೆಗಾವ್ಯಾಟ್ ಅಂದರೆ ಈ ನೀರೆತ್ತಲು ಇಲ್ಲಿ ತಯಾರಾಗುವ ಅರ್ಧದಷ್ಟು ವಿದ್ಯುತ್ ಬೇಕು, ಈ ಕುರಿತು ನಾವು ವರದಿ ತಯಾರು ಮಾಡೋಣ, ಯಾವ ಭಾಗದಲ್ಲೂ ನಾಲ್ಕು ನೂರು ಕಿಲೋಮೀಟರ್ ಉದ್ದ ಸಾವಿರ ಅಡಿ ಎತ್ತರಕ್ಕೆ ನೀರು ತೆಗೆದುಕೊಂಡು ಹೋಗುವ ಯೋಜನೆ ಇಲ್ಲ. ನಾವು ಬರೀ ಬೆಂಗಳೂರಿನ ಬೆಳವಣಿಗೆ ನೋಡಿ ಕೂರಬೇಕಾ, ಕಾಳಿ ನದಿ ಪಾತ್ರದ ಜನರು ಹಾಗೂ ಹೊಸಪೇಟೆ ಭಾಗದ ಜನರನ್ನೂ ಹೋರಾಟಕ್ಕೆ ಸೇರಿಸಿಕೊಳ್ಳಬೇಕು. ಬೆಂಗಳೂರಿನಲ್ಲಿ ಶೇ ನಲವತ್ತರಷ್ಟು ನೀರು ಪೋಲಾಗುತ್ತೆ ಇದು ಅಧಿಕೃತ ಮಾಹಿತಿ. ಬೆಂಗಳೂರಿಗೆ ಹದಿನೆಂಟು ಟಿಎಂಸಿಯಷ್ಟೇ ಸಾಕು ಮೂವತ್ತು ಟಿಎಂಸಿ ಯಾಕೆ.. ಎಂದು ಕೇಳಿದರು.
ಪರಿಸರವಾದಿ ಅಜಯ್ ಶರ್ಮಾ ಮಾತನಾಡಿ, ಮಲೆನಾಡಿಗೆ ಮೊದಲು ನೀರು ಕೊಡಿ ನಮಗಾಗಿ ಉಳಿದರೆ ಅದನ್ನ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಎಂಬುದನ್ನ ನಾವು ವಿವರಿಸುವ ಅಗತ್ಯ ಇದೆ ಎಂದರು.
ಬಿಜೆಪಿ ಮುಖಂಡ ಮೇಘರಾಜ್ ಟಿ ಡಿ ಅವರು ಮಾತನಾಡಿ, ಈ ವಿಷಯದಲ್ಲಿ ಸರ್ಕಾರ ಹೊಣೆಗೇಡಿಯಾಗಿ ವರ್ತಿಸುತ್ತಿದೆ, ಬೃಹತ್ ಹೋರಾಟವನ್ನು ಎಲ್ಲರೂ ಸೇರಿ ನಡೆಸೋಣ ಎಂದರು.
ಹುಚ್ರಾಯಪ್ಪ ಅವರು ಮಾತನಾಡಿ, ನಾವು ಶಿಕಾರಿಪುರದವರು ಸಾಗರದ ನೀರು ಬಳಸುತ್ತೇವೆ, ಉದಾಹರಣೆಗೆ ಡ್ಯಾಂ ಹೊಸೂರ್, ನಮಗೂ ಇಲ್ಲಿನ ಋಣ ಬಹಳಷ್ಟು ಇದೆ, ಈಗ ಕುಡಿಯಲೂ ನೀರಿಲ್ಲ. ನಾವೂ ಹೋರಾಟಕ್ಕೆ ಸಿದ್ದ ಎಂದರು.
ನಮ್ಮ ನಾಡನ್ನ ಪ್ರತ್ಯೇಕ ರಾಜ್ಯ ಮಾಡಿ ಎಂದಾಗ ಮಾತ್ರ ನಮಗೆ ನ್ಯಾಯ ಸಿಗುತ್ತೆ ಅಂತಹ ಹೋರಾಟ ಆಗಬೇಕು, ಎಚ್ಚರವಿಡಿ ನಾವು ಇಂತಹ ಹೋರಾಟವೇ ಸರ್ಕಾರಕ್ಕೆ ಚಾಟಿ
ನಿತಿನ್ ಹಿರಳೆ ಮಾತನಾಡಿ, ಶರಾವತಿಯನ್ನ ಉಳಿಸಲು, ನಾವು ವರದಿ ಸಿದ್ಧಪಡಿಸಬೇಕು, ಈ ಮೂಲಕ ಇಲ್ಲಿನ ಸಮಸ್ಯೆಗಳನ್ನ ಮನವರಿಕೆ ಮಾಡಿಕೊಡಬೇಕು
ದಂಡಾವತಿ ಹೋರಾಟದ ವಾಮದೇವ ಗೌಡ ಅವರು ಈ ಹೋರಾಟದಲ್ಲಿ ರಾಜಕೀಯ ಮುಖಂಡರ ನಾಯಕತ್ವ ಕೊಡದೇ ಅವರ ಬೆಂಬಲ ಮಾತ್ರ ಪಡೆದು ಎಲ್ಲರ ಹೋರಾಟವಾಗಿ ನಡೆಸಬೇಕು ಎಂದರು.
ಸಾಕಷ್ಟು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನೂ ಹಲವರು ಮಾತಾಡುವುದಿದ್ದರೂ ಸಮಯದ ಅಭಾವದಿಂದ ಅವಕಾಶ ಆಗಲಿಲ್ಲ.
ನಿರ್ಣಯಗಳು
- ‘ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ’ ವನ್ನು ಸಭೆ ಅಸ್ತಿತ್ವಕ್ಕೆ ತಂದಿತು.
- ಒಕ್ಕೂಟದ ಹೋರಾಟ ಗೌರವಾಧ್ಯಕ್ಷರಾಗಿ ಕನ್ನಡದ ನಾಡಿ ಎಂದೇ ಖ್ಯಾತರಾದ ಲೇಖಕರು ನಾ ಡಿಸೋಜ ಅವರನ್ನು ಆಯ್ಕೆ ಮಾಡಲಾಯಿತು.
- 30 ಜನರ ಸಂಘಟನಾ ಸಮಿತಿ ರಚಿಸಿಲಾಯಿತು.
– ಶಂಕರ್ ಶರ್ಮಾ ಅವರನ್ನೊಳಗೊಂಡ ತಜ್ಞರ ಸಮಿತಿಯಲ್ಲಿ ರಾಜ್ಯ ಮಟ್ಟದ ನೀರಾವರಿ ತಜ್ಞರು, ಪರಿಸರ ತಜ್ಞರನ್ನೊಳಗೊಂಡ ಈ ಸಮಿತಿ ಶೀಘ್ರದಲ್ಲೇ ಸರ್ಕಾರದ ಯೋಜನೆಯ ಅನಾಹುತಗಳ ಕುರಿತು ಒಂದು ವರದಿ ಸಲ್ಲಿಸಬೇಕು. - ಕಾನೂನು ಸಮಿತಿ- ಈ ವಿಷಯದಲ್ಲಿ ಕಾನೂನು ಹೋರಾಟ ನಡೆಸುವ ಕುರಿತು ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳಲು ವಕೀಲ ಪ್ರವೀಣ್ ಕೆ ವಿ ನೇತೃತ್ವದಲ್ಲಿ ಕಾನೂನು ಸಮಿತಿ ರಚಿಸಲಾಯಿತು
- ಮಾಧ್ಯಮ/ ಸಾಮಾಜಿಕ ಮಾಧ್ಯಮ ಸಮಿತಿ
- ಶರಾವತಿ ಉಳಿಸುವ ಈ ಹೋರಾಟವನ್ನು ಮಾಧ್ಯಮಗಳ ಮೂಲ ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಹರ್ಷಕುಮಾರ್ ಕುಗ್ವೆ ಉಸ್ತುವಾರಿಯ ತಂಡವೊಂದನ್ನು ರಚಿಸಲಾಯಿತು.
- ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯ ಗಂಭೀರತೆ ಕುರಿತು ವರದಿಯೊಂದನ್ನು ಸಿದ್ಧಪಡಿಸುವ ಅಗತ್ಯವಿದ್ದು ಈ ಹೊಣೆಯನ್ನು ಮಲ್ಲಿಕಾರ್ಜುನ ಹಕ್ರೆ ಅವರಿಗೆ ವಹಿಸಲಾಯಿತು.
- ವಾಮದೇವ ಗೌಡ ಅವರ ನೇತೃತ್ವದಲ್ಲಿ ಹಣಕಾಸು ಸಮಿತಿ ರಚಿಸಲಾಯಿತು. ಯಾವುದೇ ರಾಜಕೀಯ ಪಕ್ಷದಿಂದ ಹಣ ತೆಗೆದುಕೊಳ್ಳುವಂತಿಲ್ಲ ಹಾಗೂ 5000 ರೂಪಾಯಿಗಿಂತ ಹೆಚ್ಚಿನ ದೇಣಿಗೆ ಪಡೆಯುವಂತಿಲ್ಲ ಎಂಬ ತೀರ್ಮಾನ ತೆಗೆದುಕೊಳ್ಳಲಾಯಿತು. ಜನರಿಂದಲೇ ಹಣ ಸಂಗ್ರಹಿಸಿ ಹೋರಾಟ ರೂಪಿಸಲು ನಿರ್ಧರಿಸಲಾಯಿತು.
- ಜುಲೈ 10 ನೇ ತಾರೀಖಿನಂದು ಶಿವಮೊಗ್ಗ ಜಿಲ್ಲೆ ಬಂದ್ ಕರೆ ನೀಡುವುದು ಎಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು.
- ಕೂಡಲೇ ಶಿವಮೊಗ್ಗದಲ್ಲಿ ಒಂದು ಪತ್ರಿಕಾ ಗೋಷ್ಟಿ ನಡೆಸುವುದು,
ಹೊಸನಗರ, ನಗರ, ಶಿವಮೊಗ್ಗ, ತೀರ್ಥಹಳ್ಳಿ, ಸೊರಬಗಳಲ್ಲಿ ಪೂರಕ ಸಭೆಗಳನ್ನು ಶೀಘ್ರದಲ್ಲೇ ಆಯೋಜಿಸಲು ತೀರ್ಮಾನ ಮಾಡಲಾಯಿತು. - ಶರಾವತಿ ನದಿ ಉಳಿಸಿಕೊಳ್ಳುವ ಹೋರಾಟಕ್ಕೆ ನಾಡಿನಾದ್ಯಂತ ಬೆಂಬಲ ಕೋರಲು ನಿರ್ಧರಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್ಪಿಯನ್ನು ಕ್ವಿಂಟಲ್ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.
ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್ಆರ್ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.
ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ ವಸತಿ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು 15 ಜನವರಿ 2026 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ4 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ4 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
-
ದಿನದ ಸುದ್ದಿ2 days agoಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
-
ದಿನದ ಸುದ್ದಿ2 days agoಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
-
ದಿನದ ಸುದ್ದಿ1 day ago2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

