ದಿನದ ಸುದ್ದಿ
ವರಗುರು ಶ್ರೀ ಶಿವಕುಮಾರರ ಸ್ಮರಣಾಂಜಲಿಗೆ ಇಂದಿನಿಂದ ಚಾಲನೆ

ಸುದ್ದಿದಿನ ಡೆಸ್ಕ್ : ಜಗದೊಳಿತಿಗಾಗಿ ಜನಿಸಿದ ಜಗದ್ಗುರು ನಾಡಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗದ ಅದಮ್ಯ ಚೇತನ , ಭಕ್ತರ ಹೃದಯ ಸಿಂಹಾಸನಾಧೀಶ ಲಿಂಗೈಕ್ಯ ಶ್ರೀ ತರಳಬಾಳು ಜಗದ್ಗುರು 1108 ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 26 ನೇ ಶ್ರದ್ದಾಂಜಲಿ ಸಮಾರಂಭಕ್ಕೆ ಇಂದಿನಿಂದ ಚಾಲನೆ ಸಿಗಲಿದ್ದು ಸೆಪ್ಟಂಬರ್ 24ರವರೆಗೆ ವೈಚಾರಿಕ ವಿಷಯಮಂಡನೆಗಳ ಜೊತೆ ನಾಡಿನ ಅನ್ನದಾತರ ಕಾರ್ಪಣ್ಯಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಹೊಸ ಯೋಜನೆಗಳಿಗೆ ಆಶಯವನ್ನು ತರಳಬಾಳು ಶ್ರೀ ಜಗದ್ಗುರುವರ್ಯರು ವ್ಯಕ್ತಪಡಿಸಲಿದ್ದಾರೆ.
ಕನ್ನಡ ನಾಡಿನ ಸಾಂಸ್ಕೃತಿಕ ಸೊಬಗಿನ ದರ್ಶನವನ್ನು ಯಥಾವತ್ತಾಗಿ ತೆರೆಯ ಮೇಲೆ ಸೃಷ್ಟಿಸುವ ತರಳಬಾಳು ಜಾನಪದ ಸಿರಿಸಂಭ್ರಮದ 350 ಪ್ರತಿಭಾನ್ವಿತ ಮಕ್ಕಳ ಜಾನಪದ ನೃತ್ಯ ಪ್ರಕಾರಗಳ ಪ್ರದರ್ಶನ ಎಲ್ಲರ ಮನ ಸೆಳೆಯುವುದಂತೂ ನಿಶ್ಚಿತ. ಕಾರ್ಯಕ್ರಮದ ನಿಮಿತ್ತ ಶ್ರೀ ಜಗದ್ಗುರುವರ್ಯರ ಲೇಖನಿಯಿಂದ ಹೊರಹೊಮ್ಮಿದ ಅಪರಿಮಿತ ಓದುಗರನ್ನು ಸೃಷ್ಟಿಸಿದ ಜನಪ್ರಿಯ ಮತ್ತು ಸಾಂಧರ್ಭಿಕ ಸಮಸ್ಯೆಗಳಿಗೆ ಉತ್ತರದಂತಿರುವ ಬಿಸಿಲು ಬೆಳದಿಂಗಳು ಅಂಕಣಮಾಲೆಯ ನೂತನ ಪುಸ್ತಕಗಳು ಲೋಕಾರ್ಪಣೆಯಾಗಲಿವೆ.
ಪರಮಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿಶಿವಾಚಾರ್ಯ ಮಹಾಸ್ವಾಮಿಗಳವರ ಪವಿತ್ರ ದಿವ್ಯ ನೇತೃತ್ವದಿ ಎಲ್ಲಾ ಕಾರ್ಯಕ್ರಮಗಳು ಜರುಗಲಿದ್ದು. ತರಳಬಾಳು ಜಗದ್ಗುರು ಶಾಖಾ.ಶ್ರೀ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಲಿದ್ದಾರೆ.
ಆಗಮಿಸುವ ಲಕ್ಷಾಂತರ ಶರಣ ಬಂಧುಗಳು ಆತಿಥ್ಯಕ್ಕೆ ಸಿರಿಗೆರೆ ಸಜ್ಜಾಗಿದೆ. ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಸಭಾಂಗಣದ ಒಳಗೆ ಕೂತು ಕಾರ್ಯಕ್ರಮ ವೀಕ್ಷಿಸಲು ಆಕರ್ಷಕ ಸಭಾಂಗಣ ನಿರ್ಮಾಣ ಮಾಡಲಾಗಿದೆ. ಊರಿನಲ್ಲಿರುವ ಶ್ರೀ ಸಂಸ್ಥೆಯ ನೂರಾರು ಕಟ್ಟಡಗಳಿಗೆ ಎಲ್ಲಾ ರಸ್ತೆಗಳಿಗೆ ಜಗಮಗಿಸುವ ವಿದ್ಯುತ್ ದೀಪಗಳ ಅಲಂಕಾರ,ಅತ್ಯಾಕರ್ಷಕ ಸ್ವಾಗತ ಕಮಾನುಗಳ ನಿರ್ಮಾಣ, ತಳಿರು ತೋರಣದಿಂದ ಸಿಂಗರಿಸುವ ಕಾರ್ಯಗಳು ಭರದಿಂದ ಸಾಗಿವೆ.ಪ್ರತಿ ದಿನ ಮುಂಜಾನೆ ಶಿವಮಂತ್ರಲೇಖನ,ಸಾಮೂಹಿಕ ಪ್ರಾರ್ಥನೆ ಐಕ್ಯ ಮಂಟಪದ ಆವರಣದಲ್ಲಿ ಜರುಗಲಿವೆ.
ಪ್ರತಿ ದಿನ ಬೆಳಿಗ್ಗೆ 10 ಗಂಟೆಗೆ ಪ್ರಧಾನ ವೇದಿಕೆಯಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥಯೆಯ 14 ಜಿಲ್ಲೆಯಲ್ಲಿರುವ ಶಾಲಾ ಕಾಲೇಜಿನ ಮಕ್ಕಳಿಂದ ವಚನ,ಜಾನಪದ ನೃತ್ಯ, ಚಿತ್ರಕಲೆ, ನಾಟಕ ಸೇರಿದಂತೆ ಹತ್ತಾರು ಸಾಂಸ್ಕೃತಿಕ ಸ್ಪರ್ಧೆಗಳುನಡೆಯಲಿವೆ.
ನಾಡಿನ ಮುಖ್ಯ ಮಂತ್ರಿಗಳು,ಮಾಜಿ ಮುಖ್ಯ ಮಂತ್ರಿಗಳು, ಹಾಲಿ ಮತ್ತು ಮಾಜಿ ಸಚಿವರು,ಸಂಸದರು,ಶಾಸಕರು,ಜನಪ್ರತಿನಿಧಿಗಳು,ಸಾಹಿತಿಗಳು,ಚಿಂತಕರು ಸೇರಿದಂತೆ ಅನೇಕ ಗಣ್ಯರು ಸಮಾರಂಭದಿ ಭಾಗವಹಿಸಿ ಮಹಾಗುರುವಿಗೆ ಶ್ರದ್ಧಾಭಕ್ತಿಗಳನ್ನು ಸಮರ್ಪಿಸಲಿದ್ದಾರೆ. ಅಪರೂಪದ ಧಾರ್ಮಿಕ ,ಸಾಮಾಜಿಕ, ಸಾಂಸ್ಕೃತಿಕ ಸಂಗಮದ ಈ ಸಮಾರಂಭಕ್ಕೆ ತಾವೂ ಸಾಕ್ಷಿಯಾಗಬೇಕೆಂಬ ಪ್ರೀತಿಯ ಆಶಯ ನಮ್ಮದಾಗಿದೆ.
ದಿನಾಂಕ : 20-09-2018 ರ ಗುರುವಾರ ಇಂದಿನ ಸಂಜೆಯ ಕಾರ್ಯಕ್ರಮದಲ್ಲಿ
ದಿವ್ಯ ನೇತೃತ್ವ: ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು 1108 ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಸಮ್ಮುಖ ಸಾನ್ನಿಧ್ಯ : ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಪಟ್ಟಾಧ್ಯಕ್ಷರು ಶ್ರೀ ತರಳಬಾಳು ಶಾಖಾ ಮಠ ಸಾಣೇಹಳ್ಳಿ.
ಮುಖ್ಯ ಅತಿಥಿಗಳು : ಶರಣ ವೆಂಕಟರಮಣಪ್ಪ
ಕಾರ್ಮಿಕ ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು. ಕರ್ನಾಟಕ ಸರ್ಕಾರ ಬೆಂಗಳೂರು, ಶರಣ ಎಸ್ ರವೀಂದ್ರನಾಥ ಮಾಜಿ ಸಚಿವರು. ಶಾಸಕರು ದಾವಣಗೆರೆ, ಶರಣ ಮಾಡಾಳು ವಿರೂಪಾಕ್ಷಪ್ಪ ಶಾಸಕರು ಚನ್ನಗಿರಿ, ಶರಣ ಶ್ರೀನಾಥ್ ಎಂ ಜೋಶಿ
ಜಿಲ್ಲಾ ರಕ್ಷಣಾಧಿಕಾರಿಗಳು ಚಿತ್ರದುರ್ಗ,ಶರಣೆ ಜಯಶೀಲ ಕೆ .ಆರ್ ಅಧ್ಯಕ್ಷರು ಜಿಲ್ಲಾ ಪಂಚಾಯಿತಿ ದಾವಣಗೆರೆ. ಶರಣ ಶಶಾಂಕ್ ಚಲನಚಿತ್ರ ನಿರ್ದೇಶಕರು ಬೆಂಗಳೂರು.
ದಿನಾಂಕ : 21-09-2018 ರ ಶುಕ್ರವಾರ ಸಂಜೆಯ ಕಾರ್ಯಕ್ರಮದಲ್ಲಿ
ಶರಣ ಬಸವರಾಜ ಹೊರಟ್ಟಿ ಸಭಾಪತಿಗಳು ವಿಧಾನ ಪರಿಷತ್ ಬೆಂಗಳೂರು, ಶರಣ ಎಸ್. ಎಸ್ ಮಲ್ಲಿಕಾರ್ಜುನ್ ಮಾಜಿ ಸಚಿವರು ದಾವಣಗೆರೆ,ಶರಣೆ ಸೌಭಾಗ್ಯ ಬಸವರಾಜನ್ ಅಧ್ಯಕ್ಷರು ಜಿಲ್ಲಾ ಪಂಚಾಯಿತಿ ಚಿತ್ರದುರ್ಗ, ಶರಣ ತಿಪ್ಪಾರೆಡ್ಡಿ ಜೆ.ಹೆಚ್.ಶಾಸಕರು ಚಿತ್ರದುರ್ಗ, ಶರಣ ರಾಮಚಂದ್ರ ಎಸ್.ವಿ. ಶಾಸಕರು ಜಗಳೂರು,ಶರಣ ಬೆಳ್ಳಿ ಪ್ರಕಾಶ್ ಶಾಸಕರು ಕಡೂರು.
ದಿನಾಂಕ : 22-09-2018 ರ ಶನಿವಾರ ಸಂಜೆಯ ಕಾರ್ಯಕ್ರಮದಲ್ಲಿ
ಶರಣ ಶಂಕರ್ ಆರ್ ಅರಣ್ಯ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರು,ಶರಣ ಆಂಜನೇಯ ಹೆಚ್ ಮಾಜಿ ಸಚಿವರು,ಶರಣ ರುದ್ರೇಗೌಡರು ವಿಧಾನ ಪರಿಷತ್ ಸದಸ್ಯರು ಶಿವಮೊಗ್ಗ, ಶರಣ ಸುರೇಶ್ ಡಿ.ಎಸ್. ಶಾಸಕರು ತರೀಕೆರೆ, ಶರಣ ಶ್ರೀ ರಂಗಯ್ಯ ಎಂ.ಕೆ. ಜಿಲ್ಲಾಧಿಕಾರಿಗಳು ಚಿಕ್ಕಮಗಳೂರು, ಶರಣ ರಮೇಶ್ ಡಿ.ಎಸ್. ಜಿಲ್ಲಾಧಿಕಾರಿಗಳು ದಾವಣಗೆರೆ, ಶರಣ ಚೇತನ ಆರ್ ಜಿಲ್ಲಾ ರಕ್ಷಣಾಧಿಕಾರಿಗಳು ದಾವಣಗೆರೆ.
ದಿನಾಂಕ : 23-09-2018 ರ ಭಾನುವಾರ ಬೆಳಗ್ಗೆ 11ಗಂಟೆಗೆ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥಯೆ ಹಿರಿಯ ವಿದ್ಯಾರ್ಥಿಗಳ ಸಮಾವೇಶ.
ದಿವ್ಯ ನೇತೃತ್ವ : ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು 1108 ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಸಮ್ಮುಖ ಸಾನ್ನಿಧ್ಯ : ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಪಟ್ಟಾಧ್ಯಕ್ಷರು ಶ್ರೀ ತರಳಬಾಳು ಶಾಖಾ ಮಠ ಸಾಣೇಹಳ್ಳಿ
ಮುಖ್ಯಅತಿಥಿಗಳು : ಶರಣ ರವಿಕುಮಾರ.ವಿ. ಸಿವಿಲ್ ನ್ಯಾಯಾಧೀಶರು ಹೊಳಲ್ಕೆರೆ, ಡಾ.ವಿನೋದ್ ಕುಮಾರ್.ವಿ. ಐ ಎ ಎಸ್ ಆಂಧ್ರ ಪ್ರದೇಶ, ಶರಣ ಜಿ .ಎ.ಜಗದೀಶ್ ಎ ಎಸ್ ಪಿ ಹಾವೇರಿ, ಶರಣ ಡಾ.ಶರತ್ ಕುಮಾರ್ ಎನ್.ಎಂ,ವೆಲ್ಲೂರು ಆಂಧ್ರ ಪ್ರದೇಶ. ಶರಣ.ಡಾ.ಭಾಸ್ಕರ್. ಡಿ,ಮದುರೈ ತಮಿಳುನಾಡು.ಶರಣ ಡಾ.ಜಯವರ್ದನ ನರರೋಗ ತಜ್ಞರು ಮೈಸೂರು.ಶರಣ ಡಾ.ನಿರಂಜನ ಮೂರ್ತಿ ಕೆ.ಎಂ ವೈದ್ಯರು ಬೆಂಗಳೂರು. ಶರಣ ಡಾ.ರವಿಕುಮಾರ್ ಜಿ.ವಿ ವೈದ್ಯರು ಬೆಂಗಳೂರು.
ಶರಣ ಡಾ.ಉಮೇಶ್ ಡಿ.ವೈದ್ಯರು ದಾವಣಗೆರೆ.
ಶರಣ ಡಾ.ಅವಿನಾಶ್ ಸಿ.ಬಿ.ವೈದ್ಯರು ಬೆಂಗಳೂರು. ಶರಣ ಲಿಂಗರಾಜ್ ಹೆಚ್.ಕೆ. ಪ್ರಾಚಾರ್ಯರು, ಡಯಟ್, ದಾವಣಗೆರೆ.ಶರಣ ಶೇಖರಪ್ಪ ಹೆಚ್.ಕೆ. ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ದಾವಣಗೆರೆ. ಶರಣ ಪ್ರಸನ್ನ ಕುಮಾರ್. ಸಿ. ಉಪ ನಿರ್ದೇಶಕರು,ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕಮಗಳೂರು. ಶರಣ ವೀರಣ್ಣ ಜತ್ತಿ ಪ್ರಾಚಾರ್ಯರು ಸಿಟಿಇ ಜಮಖಂಡಿ. ಶರಣ ಮಲ್ಲಿಕಾರ್ಜುನ ಕಬ್ಬೂರು ಪತ್ರಕರ್ತರು ಚಿಕ್ಕಮಗಳೂರು.
ಸಾಂಸ್ಕೃತಿಕ ಕಾರ್ಯಕ್ರಮ
ಮಲ್ಲಿ ಹಗ್ಗ ಮತ್ತು ಮಲ್ಲಗಂಬ ಪ್ರದರ್ಶನ
ತರಳಬಾಳು ಜಾನಪದ ಸಿರಿ ಸಂಭ್ರಮ -2018
ದಿನಾಂಕ : 23-09-2018 ರ ಭಾನುವಾರ ಸಂಜೆ 6 ಗಂಟೆಗೆ.
ಮುಖ್ಯ ಅತಿಥಿಗಳು : ಶರಣ ಬಿ.ಎಸ್ ಯಡಿಯೂರಪ್ಪ ಮಾಜಿ ಮುಖ್ಯ ಮಂತ್ರಿಗಳು ಮತ್ತು ವಿರೋಧಪಕ್ಷದ ನಾಯಕರು ಬೆಂಗಳೂರು. ಶರಣ ಚಂದ್ರಪ್ಪ ಬಿ.ಎನ್
ಲೋಕಸಭಾ ಸದಸ್ಯರು ಚಿತ್ರದುರ್ಗ.ಶರಣ ಎಂ ಚಂದ್ರಪ್ಪ ಶಾಸಕರು ಹೊಳಲ್ಕೆರೆ.ಶರಣ ಎಂ ಲಿಂಗಪ್ಪ ಶಾಸಕರು ಮಾಯಕೊಂಡ. ಶರಣ ಪಾಟೀಲ ಬಿ.ಸಿ ಶಾಸಕರು ಹಿರೇಕೆರೂರ. ಶರಣ ಮೋಹನ್ ಕೊಂಡಜ್ಜಿ
ವಿಧಾನ ಪರಿಷತ್ ಸದಸ್ಯರು ಬೆಂಗಳೂರು. ಶರಣ ಶ್ರೀನಿವಾಸ್ ಜಿ ಕಪ್ಪಣ್ಣ ಸಾಂಸ್ಕೃತಿಕ ಸಂಘಟಕರು ಬೆಂಗಳೂರು. ಶರಣ ಡಾ.ವೇದಮೂರ್ತಿ ಸಿ.ಜಿ
ರಕ್ಷಣಾಧಿಕಾರಿಗಳು( ಡಿ ಸಿ ಆರ್ ಇ ) ಮಂಗಳೂರು.ಶರಣ ಅಣ್ಣಾಮಲೈ.ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಚಿಕ್ಕಮಗಳೂರು.
ಸಾಂಸ್ಕೃತಿಕ ಸಂಭ್ರಮ
ತರಳಬಾಳು ಜಾನಪದ ಸಿರಿ ಸಂಭ್ರಮ 2018
ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ 350 ಮಕ್ಕಳಿಂದ
24-09-2018 ಸೋಮವಾರ ಬೆಳಿಗ್ಗೆ 11 ಗಂಟೆಗೆ ಶ್ರದ್ದಾಂಜಲಿ ಸಮಾರಂಭ
ದಿವ್ಯ ಸಾನಿಧ್ಯ : ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಮುಖ್ಯ ಅತಿಥಿಗಳು : ಶರಣ ಹೆಚ್.ಡಿ ಕುಮಾರಸ್ವಾಮಿ ಮುಖ್ಯ ಮಂತ್ರಿಗಳುಕರ್ನಾಟಕ ಸರ್ಕಾರ. ಶರಣ ಶಾಮನೂರು ಶಿವಶಂಕರಪ್ಪ ಶಾಸಕರು ಮಾಜಿ ಸಚಿವರು ದಾವಣಗೆರೆ. ಶರಣ ಈಶ್ವರ ಖಂಡ್ರೆ ಮಾಜಿ ಸಚಿವರು ಕಾರ್ಯಾಧ್ಯಕ್ಷರು.ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ. ಶರಣ ಜಿ.ಎಂ ಸಿದ್ಧೇಶ್ವರ ಮಾಜಿ ಕೇಂದ್ರ ಸಚಿವರು ಮತ್ತು
ಲೋಕಸಭಾ ಸದಸ್ಯರು ದಾವಣಗೆರೆ. ಶರಣ ಬಸವರಾಜ ಬೊಮ್ಮಾಯಿ ಮಾಜಿ ಸಚಿವರು ಶಾಸಕರು ಶಿಗ್ಗಾಂವಿ. ಶರಣ ಆಯನೂರು ಮಂಜುನಾಥ್ ವಿಧಾನ ಪರಿಷತ್ ಸದಸ್ಯರು ಶಿವಮೊಗ್ಗ. ಶರಣ ಕೆ ಆರ್ ಜಯದೇವಪ್ಪ ಅಧ್ಯಕ್ಷರು ಸಾಧು ಸದ್ದರ್ಮ ಸಮಾಜ ದಾವಣಗೆರೆ. ಶರಣ ಹೆಚ್ .ವಿಶ್ವನಾಥ್ ಶಾಸಕರು ರಾಜ್ಯ ಅಧ್ಯಕ್ಷರು ಜಾತ್ಯಾತೀತ ಜನತಾದಳ ಬೆಂಗಳೂರು. ಶರಣ ಡಾ.ಶಂಕರ್ ಬಿ.ಎಲ್ ಮಾಜಿ ಸಭಾಪತಿ ವಿಧಾನ ಪರಿಷತ್ ಬೆಂಗಳೂರು. ಶರಣ ಭೋಜೇಗೌಡ ಎಸ್ . ಎಲ್. ವಿಧಾನ ಪರಿಷತ್ ಸದಸ್ಯರು
ಚಿಕ್ಕಮಗಳೂರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ; ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಉಚಿತ ಪ್ರಯಾಣ

ಸುದ್ದಿದಿನ ಡೆಸ್ಕ್ : ಇದೇ 12 ರಿಂದ 19 ರವರೆಗೆ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. “ಪ್ರವೇಶ ಪತ್ರ” ತೋರಿಸಿ, ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕನ್ನಡ ಸಾಹಿತ್ಯ ಪರಿಷತ್ | ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರಕಟ

ಸುದ್ದಿದಿನ, ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಲ್ಲಿ ಒಂದಾಗಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರಕಟವಾಗಿದೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು 2022ನೇ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಪ್ರಶಸ್ತಿಯು 51 ಸಾವಿರ ರೂಪಾಯಿ ನಗದು, ಸ್ಮರಣಿಕೆ ಹಾಗೂ ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮುಂಗಾರು ಹಂಗಾಮಿನ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ

ಸುದ್ದಿದಿನ ಡೆಸ್ಕ್ : 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಮಿತಿ ಅನುಮೋದಿಸಿದೆ.
ಸಾಮಾನ್ಯ ದರ್ಜೆ ಭತ್ತಕ್ಕೆ ಕ್ವಿಂಟಲ್ಗೆ 2 ಸಾವಿರದ 40 ರೂಪಾಯಿಯಿಂದ 2ಸಾವಿರದ 183 ರೂಪಾಯಿಗೆ ಹಾಗೂ ’ಎ’ ದರ್ಜೆ ಭತ್ತಕ್ಕೆ 2 ಸಾವಿರದ 60 ರಿಂದ 2 ಸಾವಿರದ 203 ರೂಪಾಯಿಗೆ ಹೆಚ್ಚಿಸಲಾಗಿದೆ.
ರಾಗಿಗೆ ಪ್ರತಿ ಕ್ವಿಂಟಲ್ಗೆ 3 ಸಾವಿರದ 578 ರೂಪಾಯಿಯಿಂದ 3 ಸಾವಿರದ 846 ರೂಪಾಯಿಗೆ ಹೆಚ್ಚಿಸಲಾಗಿದೆ. ತೊಗರಿಗೆ ಪ್ರತಿ ಕ್ವಿಂಟಲ್ಗೆ 6 ಸಾವಿರದ 600 ರಿಂದ 7 ಸಾವಿರ ರೂಪಾಯಿಗೆ, ಹೆಸರು ಕಾಳಿಗೆ ಪ್ರತಿ ಕ್ವಿಂಟಲ್ಗೆ 7 ಸಾವಿರದ 755 ರಿಂದ 8 ಸಾವಿರದ 558 ರೂಪಾಯಿಗೆ, ಪ್ರತಿ ಕ್ವಿಂಟಲ್ ಉದ್ದಿಗೆ 6 ಸಾವಿರದ 600 ರಿಂದ 6 ಸಾವಿರದ 950 ರೂಪಾಯಿಗೆ ಹೆಚ್ಚಿಸಲಾಗಿದೆ.
ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ 2022-23ನೇ ಸಾಲಿಗೆ 330.5 ದಶಲಕ್ಷ ಟನ್ನಷ್ಟು ಆಹಾರ ಧಾನ್ಯ ಉತ್ಪಾದನೆ ಅಂದಾಜಿಸಲಾಗದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಇಲ್ಲಿದೆ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕಂಪ್ಲೀಟ್ ಡೀಟೆಲ್ಸ್
-
ದಿನದ ಸುದ್ದಿ6 days ago
ಐದು ಗ್ಯಾರಂಟಿ | ಫಲಾನುಭವಿಗಳ ಆಯ್ಕೆ ಮಾನದಂಡ
-
ಲೈಫ್ ಸ್ಟೈಲ್4 days ago
ರಣ ಬೇಟೆಗಾರ ‘ಕೆನ್ನಾಯಿ’ ವಿನಾಶವಾದ ಕತೆ..!
-
ದಿನದ ಸುದ್ದಿ6 days ago
ಈ ವರ್ಷವೇ ಚಿತ್ರದುರ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಚಿಂತನೆ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
-
ದಿನದ ಸುದ್ದಿ6 days ago
ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಬಿತ್ತನೆ ಬೀಜ ಕೊರತೆಯಾಗದಂತೆ ರಾಜ್ಯಾದ್ಯಂತ ಕ್ರಮ
-
ದಿನದ ಸುದ್ದಿ6 days ago
ಡಿ.ಇ.ಎಲ್.ಇ.ಡಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ನಾಳೆ ದಾವಣಗೆರೆಗೆ ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ4 days ago
ಜೂನ್ 8 ರಿಂದ ಕೋಳಿ ಸಾಕಾಣಿಕೆ ತರಬೇತಿ ಶಿಬಿರ