ದಿನದ ಸುದ್ದಿ
ಚೇಂಜ್ ಮೇಕರ್ಸ್ ಮ್ಯಾಟ್ರಿಮೋನಿ : ಧರ್ಮ, ಜಾತಿ ಮೀರಿದ ವಧು-ವರರ ಸಂಗಾತಿ ಆಯ್ಕೆಗೆ ಹೊಸ ವೇದಿಕೆ
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2020/09/matrimony_suddidina.jpg&description=ಚೇಂಜ್ ಮೇಕರ್ಸ್ ಮ್ಯಾಟ್ರಿಮೋನಿ : ಧರ್ಮ, ಜಾತಿ ಮೀರಿದ ವಧು-ವರರ ಸಂಗಾತಿ ಆಯ್ಕೆಗೆ ಹೊಸ ವೇದಿಕೆ', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2020/09/matrimony_suddidina.jpg&description=ಚೇಂಜ್ ಮೇಕರ್ಸ್ ಮ್ಯಾಟ್ರಿಮೋನಿ : ಧರ್ಮ, ಜಾತಿ ಮೀರಿದ ವಧು-ವರರ ಸಂಗಾತಿ ಆಯ್ಕೆಗೆ ಹೊಸ ವೇದಿಕೆ', 'pinterestShare', 'width=750,height=350'); return false;" title="Pin This Post">
ಭಾರತದಂತಹ ಬಹುಸಂಸ್ಕೃತಿಯ ದೇಶದಲ್ಲಿ ಮದುವೆ ಎನ್ನುವುದು ಕೇವಲ ಎರಡು ಕುಟುಂಬಗಳ ನಡುವಿನ ಸಂಬಂಧವನ್ನು ಬೆಸೆಯುವ ಕಾರ್ಯವಾಗಿಯಷ್ಟೇ ಉಳಿದುಕೊಳ್ಳದೇ ಅದರ ಆಳದಲ್ಲಿ ಜಾತೀಯತೆಯ ಪೋಷಣೆ, ಪುರುಷ ಪ್ರಧಾನ ಸಮಾಜ ನಿರ್ಮಾಣ, ಆಸ್ತಿಯ ಹಕ್ಕನ್ನು ಉಳ್ಳವರ ಬಳಿಯೇ ಉಳಿಸಿಕೊಳ್ಳುವ, ಸಾರ್ವಜನಿಕ ಪ್ರತಿಷ್ಠೆಯಂತಹ ಪೊಳ್ಳು ಆದರ್ಶಗಳನ್ನು ಸೇರಿದಂತೆ ಇನ್ನೂ ಅನೇಕ ಮನುಷ್ಯ ವಿರೋಧಿ ಗುಣಗಳನ್ನು ಪೋಷಿಸುವ ಪರೋಕ್ಷ ಕಾರ್ಯವಾಗಿಯೂ ಉಳಿದುಕೊಂಡಿದೆ.
ನಿಜವಾದ ಅರ್ಥದಲ್ಲಿ ಮದುವೆ ಎನ್ನುವ ಬಾಂಧವ್ಯ ಇರಬೇಕಾಗಿರುವುದೇ ಬೇರೆಯ ರೀತಿ. ಎಲ್ಲರನ್ನೂ ಬೆಸೆಯುವ ಮದುವೆ ಎನ್ನುವ ಕ್ರಿಯೆ ನಡೆಯಬೇಕಾಗಿರುವುದು ಎರಡು ಸಮಾನ ಮನಸ್ಕರ ನಡುವೆ. ಭಿನ್ನ ರುಚಿಗಳಲ್ಲಿದ್ದರೂ ಪರಸ್ಪರ ಗೌರವವನ್ನು ಹೊಂದಿರುವರ ವ್ಯಕ್ತಿತ್ವಗಳ ನಡುವೆ. ಹೀಗೆ ನಡೆಯಬೇಕಾಗಿದ್ದ ಮದುವೆ ಏಕೆ ಜಾತಿ ಹಾಗೂ ಅನಗತ್ಯ ಸಂಪ್ರಾದಯಗಳ ನಡುವೆ ಸಿಲುಕಿ ನಲುಗುತ್ತಿದೆ? ಇಂತಹ ಸೂಕ್ಷ್ಮ ವಿಚಾರಗಳು ಬಸವಣ್ಣವರಿಂದ ಆರಂಭವಾಗಿ ಕುವೆಂಪುವರಗೆ ಇನ್ನೂ ಅನೇಕರು ವಿವಿಧ ರೀತಿಯಲ್ಲಿ ಎಲ್ಲರನ್ನೂ ಎಚ್ಚರಿಸುತ್ತಲೇ ಬಂದಿದ್ದಾರೆ.
ಸಂವಿಧಾನವನ್ನು ಇಂದಿನ ಅಗತ್ಯಕ್ಕೆ ತಕ್ಕಂತೆ ತಿದ್ದಬೇಕು, ಆ ಮೂಲಕ ಭಾರತವನ್ನು ಆರೋಗ್ಯವಾಗಿ ರೂಪಿಸಬಹುದು ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಇದೇ ದಿನಗಳಲ್ಲಿ ಭಾರತದ ನೆಲದಲ್ಲೇ ಮೂಡಿರುವ ಸಂಸ್ಕೃತಿಗಳಲ್ಲೂ ಕೆಲವು ಅನಿವಾರ್ಯ ಬದಲಾವಣೆಯನ್ನು ರೂಪಿಸಬೇಕು.
ಹೀಗೆ ಆಚರಣೆಯ ರೂಪದಲ್ಲಿರುವ ಅನೇಕ ಸಂಸ್ಕೃತಿಗಳನ್ನು ಈ ಶತಮಾನದ ಮನುಷ್ಯ ಜೀವನಕ್ಕೆ ಅಗತ್ಯವಾಗಿ ತಿದ್ದುಪಡಿ ಮಾಡಿದರೆ ಆ ಮೂಲಕ ಭಾರತವನ್ನು ಬೌದ್ಧಿಕವಾಗಿ ಇನ್ನಷ್ಟು ಗಟ್ಟಿಯಾಗಿ ನಿರ್ಮಾಣ ಮಾಡಲು ಸಾಧ್ಯವಿದೆ ಎನ್ನುವುದು ನಾವು ಗೆಳೆಯರು ಕಾಲೇಜಿನ ದಿನಗಳಿಂದ ಆರಂಭಿಸಿ ಅನೇಕ ವರ್ಷಗಳಿಂದ ಚರ್ಚಿಸಿ, ಕಾದಾಡಿ ಕಂಡುಕೊಂಡಿರುವ ಈ ಕ್ಷಣದ ಸತ್ಯ. ಈ ಚರ್ಚೆಯ ಫಲಿತಾಂಶವಾಗಿಯೇ ಸದ್ಯ “The Change Makers Matrimony” ರೂಪುಗೊಂಡಿದೆ.
ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿದ್ದಾಗಲೇ ನಾವು ಒಂದಷ್ಟು ಗೆಳೆಯರು ಈ ಬಗ್ಗೆ ಸಾಕಷ್ಟು ಚರ್ಚಿಸುತ್ತಿದ್ದೆವು. ಕೇವಲ ಜಾತಿ ಆಧರಿತ ಮ್ಯಾಟ್ರಿಮೋನಿಯಲ್ ಸೈಟ್ಗಳಿಗೆ ಪರ್ಯಾಯವಾಗಿ ಯಾವುದೇ ಜಾತಿ, ಧರ್ಮ, ಕುಲಗಳ ಮನುಷ್ಯ ವಿರೋಧಿ ಬೇಲಿಗಳಿಂದ ಹೊರಗೆ ನಿಂತು ನಮ್ಮ ಜೀವನದೃಷ್ಠಿಗೆ ಹೊಂದುವ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವೇದಿಕೆಯನ್ನು ನಿರ್ಮಾಣ ಮಾಡಬೇಕು ಎನ್ನುವ ಆಲೋಚನೆಯಲ್ಲಿ ತೊಡಗಿದ್ದೆವು.
ನಮಗೆ ಶಿಕ್ಷಕರಾಗಿದ್ದ ಕ್ರಾಂತಿರಾಜ್ ಒಡೆಯರ್ ಕೂಡ ನಮ್ಮ ಆಲೋಚನೆಗಳಿಗೆ ಕೈ ಜೋಡಿಸಿದ್ದರು. ಆದರೆ, ಕಾಲೇಜು ಮುಗಿಯುತ್ತಿದ್ದಂತೆ ಚರ್ಚೆಯಲ್ಲಿ ಭಾಗವಹಿಸಿದ್ದ ಗೆಳೆಯರು ಹೆಚ್ಚಿನ ಓದಿಗೆ ಇಂಗ್ಲೆಂಡ್ಗೆ ಹೊರಟರೆ, ಕೆಲವುರ ಉದ್ಯೋಗದ ಕಾರಣಕ್ಕೆ ಬೆಂಗಳೂರಿಗೆ ಹೊರಟಿದ್ದರು. ಸದ್ಯ ಎಲ್ಲರೂ ಮರಳಿ ಮೈಸೂರಿಗೆ ಮರಳಿದ್ದೇವೆ. ಶಿಕ್ಷಕರಾದ ಕ್ರಾಂತಿರಾಜ್ ಒಡೆಯರ್ ಸೇರಿದಂತೆ ನಾವು ಎಲ್ಲಾ ಗೆಳೆಯರು ಮತ್ತೊಮ್ಮೆ ಚರ್ಚಿಸಿ ನಮ್ಮ ಹಳೆಯ ಕನಸಿಗೆ ಮರು ಚಾಲನೆ ನೀಡುತ್ತಿದ್ದೇವೆ.
ಮುಂದಿನ ದಿನಗಳಲ್ಲಿ ನಮ್ಮ “The Change Makers Matrimony”ಯ ವೆಬ್ಸೈಟ್ ಆರಂಭವಾಗಲಿದ್ದು ಇದರೊಂದಿಗೆ ಎಲ್ಲ ಬಗೆಯ ಸ್ಮಾರ್ಟ್ಫೋನ್ಗಳಿಗೂ ಹೊಂದುವಂತಹ ಅಪ್ಲಿಕೇಶನ್ ಸಹ ಬಿಡುಗಡೆಗೊಳಿಸಲಿದ್ದೇವೆ. ನಮ್ಮ ವೆಬ್ಸೈಟ್ ಬಿಡುಗಡೆ ಕಾರ್ಯಕ್ರಮವನ್ನು ಪ್ರತ್ಯೇಕವಾಗಿ ನಡೆಸಲು ತೀರ್ಮಾನಿಸಿದ್ದು ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುವ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ನಮ್ಮ ವೆಬ್ಸೈಟ್ನಲ್ಲಿ ನೋದಾಂಯಿಸುವ ಮೂಲಕ ಮದುವೆಯಾಗಲು ಇಚ್ಛಿಸುವವರು ಉಳಿದ ಮ್ಯಾಟ್ರಿಮೋನಿಯಲ್ ಸೈಟ್ಗಳಲ್ಲಿ ನೀಡುವಂತೆ ಜಾತಿ, ಧರ್ಮಗಳ ವಿವವರಣೆಯನ್ನು ನೀಡುವ ಅಗತ್ಯವಿಲ್ಲ. ನಿಮ್ಮ ಆಲೋಚನೆ, ಉದ್ಯೋಗ, ಹವ್ಯಾಸ, ಸಮಾಜಿಕ ಜವಾಬ್ದಾರಿ ಗುಣಗಳನ್ನು ವಿವವರಿಸಿದರೆ ಸಾಕು.
“The Change Makers Matrimony“ಯ ಉದ್ದೇಶ ಸ್ಪಷ್ಟ. ಗಂಡನ್ನು ಹೆಣ್ಣನ್ನು ಬೆಸೆಯುವ ಮದುವೆ ಎನ್ನುವ ಕ್ರಿಯೆಗೆ ಜಾತಿ, ಧರ್ಮದ ಅಗತ್ಯವಿಲ್ಲ. ಮದುವೆ ಸಫಲವಾಗುದಕ್ಕೆ ನಮ್ಮ ಬದುಕಿನ ಕುರಿತ ಅಭಿರುಚಿ, ಆಸಕ್ತಿಗಳು, ಆಯ್ಕೆ ಹಾಗೂ ಜೀವನ ಜೀವನದೃಷ್ಠಿ ಮುಖ್ಯ ಸಾಮಗ್ರಿಯೇ ಹೊರತು ನಮ್ಮ ಕಣ್ಣಿಗೆ ಕಾಣದ, ಸ್ಪರ್ಶಕ್ಕೆ ಸಿಗದ ಜಾತಿಯಲ್ಲ. ಈ ಕಾರಣದಿಂದ “The Change Makers Matrimony“ಯಲ್ಲಿ ಬಹುಮುಖ್ಯವಾಗಿ ಸಂಗಾತಿಯನ್ನು ನಿಮ್ಮ ಆಸಕ್ತಿ ಹಾಗೂ ಅಭಿರುಚಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತದೆ.
ಈಗಾಗಲೇ ಅನೇಕ ಮಹನೀಯರು ಜಾತಿ ವ್ಯವಸ್ಥೆಯ ಕರಾಳ ಮುಖವನ್ನು ಹಲವು ರೂಪಗಳಲ್ಲಿ, ಹಲವು ವೇದಿಕೆಗಳಲ್ಲಿ ಬಯಲು ಮಾಡುತ್ತಲೇ ಬಂದಿದ್ದಾರೆ. ಈಗಾಗಲೇ ಬಯಲಾಗಿರ ಜಾತೀಯತೆಯ ಕರಾಳ ಮುಖವನ್ನು ಇನ್ನಷ್ಟು ಬಯಲು ಮಾಡುತ್ತಲೇ ಸಮಯ ಕೊಲ್ಲುವ ಬದಲು, ಬದಲಾವಣೆಗೆ ಮುಂದಾಗಬೇಕಾದ ತುರ್ತು ಎದುರಾಗಿದೆ.
ಯಾವುದೇ ಜಾತಿ ಹಾಗೂ ಧರ್ಮದ ಸೋಂಕಿಲ್ಲದೆ ಸಮಾನ ಮನಸ್ಕರಷ್ಟೇ ಉತ್ತಮ ಗೆಳೆಯರಾಗಬಹುದು ಎನ್ನುವುದು ಹೇಗೆ ಸಾಮಾನ್ಯ ಜ್ಞಾನವೋ ಅದೇ ರೀತಿಯಲ್ಲಿ ನಮ್ಮ ಆಲೋಚನೆಗೆ ಹೊಂದಬಲ್ಲವರಷ್ಟೇ ಉತ್ತಮ ಜೀವನ ಸಂಗಾತಿಯಾಗಬಹದು ಎನ್ನುವುದು ಅಷ್ಟೇ ಸಾಮಾನ್ಯ ಜ್ಞಾನ.
ಮದುವೆಯಾಗುವ ಇಚ್ಛೆಯನ್ನು ಹೊಂದುವ ಮೂಲಕ ನೋಂದಾಯಿಸಿದವರಿಗೆ ನಮ್ಮ ವೆಬ್ಸೈಟ್ನಲ್ಲಿ ಯಾವುದಾದರೂ ಹುಡುಗ/ಗಿ ಒಪ್ಪಿಗೆಯಾದರೆ ಅವರನ್ನು ಮಾತನಾಡಿಸುವ, ಅವರೊಂದಿಗೆ ಮದುವೆಯ ಕುರಿತ ಇಂಗಿತವನ್ನು ವ್ಯಕ್ತಪಡಿಸುವ ಅವಕಾಶವನ್ನು ಒದಗಿಸಲಾಗುತ್ತದೆ. ಒಂದೊಮ್ಮೆ ನೀವು ಇಬ್ಬರು ಪರಸ್ಪರ ಒಪ್ಪಿಕೊಂಡು ಮದುವೆಯಾಗಲು ನಿರ್ಧರಿಸಿದರೆ ಮದುವೆಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಮನೆಯವರೊಂದಿಗೆ ನೀವೇ ಮಾತನಾಡಬೇಕು.
ಅದು ಸಂಪೂರ್ಣವಾಗಿ ನಿಮ್ಮದೇ ವಯಕ್ತಿಕ ವಿಷಯವಾಗಿರುತ್ತದೆ. “The Change Makers matrimony” ಸಂಸ್ಥೆಗೂ ಸಂಬಂಧವಿರುವುದಿಲ್ಲ. ಮದುವೆಗೆ ಎರಡೂ ಮನೆಯವರ ಒಪ್ಪಿಗೆ ದೊರೆತ ನಂತರ ಮದುವೆಗೆ ಬೇಕಾದ ಪೂರಕ ಕೆಲಸಗಳನ್ನು “The Change Makers Matrimony” ಸಂಸ್ಥೆಯೇ ಮಾಡಿಕೊಡುತ್ತದೆ.
“The Change Makers Matrimony” ವೆಬ್ಸೈಟ್ನಲ್ಲಿ ಮದುವೆಯಾಗಲು ತಮ್ಮ ಹೆಸರನ್ನು ನೋಂದಾಯಿಸಲು ಇಚ್ಛಿಸುವವರು ಒಂದು ಸಾವಿರ ರೂಪಾಯಿಗಳನ್ನು ಶುಲ್ಕವಾಗಿ ನೀಡಬೇಕಾಗಿದೆ. “The Change Makers Matrimony” ಸಂಸ್ಥೆಯು ಈ ಹಣವನ್ನು ಸಂಸ್ಥೆಯ ನಿರ್ವಹಣೆಯ ಸೇರಿದಂತೆ ಹಲವು ಅಗತ್ಯ ಕೆಲಸಗಳಿಗೆ ವಿನಿಯೋಗಿಸುತ್ತದೆ. ಸಂಸ್ಥೆ ಕಾರ್ಯವನ್ನು ಆರಂಭಿಸಲು ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಕಾರ್ಯಾರಂಭಗೊಳ್ಳಲಿದೆ.
– ದೀ ಚೇಂಜ್ ಮೇಕರ್ಸ್ ಮ್ಯಾಟ್ರಿಮೋನಿ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಸತ್ಯಕೀರ್ತಿ. ಜೆ
ಸಂಸ್ಥಾಪಕ, ಸಿಇಎ
ಚೇಂಜ್ ಮೇಕರ್ ಮ್ಯಾಟ್ರಿಮೋನಿ
+918867701357
ರವಿ ಕುಮಾರ್. ಜೆ
ಸಹ ಸಂಸ್ಥಾಪಕ,
+917899980515
ಕ್ರಾಂತಿರಾಜ್ ಒಡೆಯರ್
ಮುಖ್ಯ ಸಲಹೆಗಾರರು
+919164061662
ಸಂದೀಪ್ ಈಶಾನ್ಯ
ಕಾರ್ಯದರ್ಶಿ
+919741705944
ಸುದ್ದಿದಿನ.ಕಾ|ವಾಟ್ಸಾಪ್|9980346243

ದಿನದ ಸುದ್ದಿ
ಅಂಧ ಮಕ್ಕಳ ವಸತಿ ಶಾಲೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿಗೆ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆ 1 ನೇ ತರಗತಿ (6ವರ್ಷ) ಯಿಂದ 10ನೇ ತರಗತಿ (16ವರ್ಷ) ವರೆಗೆ ಅಂಧ ಹೆಣ್ಣು ಮತ್ತು ಗಂಡು ಮಕ್ಕಳಿಗೆ ದಾಖಲಾತಿಯು ಪ್ರಾರಂಭವಾಗಿದೆ.
ಈ ಶಾಲೆಯಲ್ಲಿ ಅಂಧ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ವಸತಿಯುತ ಶಾಲೆಯಾಗಿರುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆಯವರು ನಿಗದಿಪಡಿಸಿರುವ ಸಾಮಾನ್ಯ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣವನ್ನೇ ಇಲ್ಲಿಯೂ ಭೋದಿಸುವುದರ ಜೊತೆಗೆ ಬೈಲ್ ಲಿಪಿಯನ್ನು ಅಳವಡಿಸಿಲಾಗಿದೆ.
ಶೈಕ್ಷಣಿಕ ಅವಧಿಯಲ್ಲಿ ಅಂಧ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಾದ Daily Living Skills(DLS), ಯೋಗ, ದೈಹಿಕ ಶಿಕ್ಷಣ, ಸಂಗೀತ, ಡ್ಯಾನ್ಸ್ ಚಲನ-ವಲನ ತರಬೇತಿ, ಕಂಪ್ಯೂಟರ್ ತರಬೇತಿ, ಒಳಾಂಗಣ ಹಾಗೂ ಹೊರಾಂಗಣ ಆಟಗಳು, ಬ್ರೈಲ್ ಪುಸ್ತಕಗಳು, ಶಾಲಾ ಸಮವಸ್ತ್ರ, ಕಲಿಕಾ ಉಪಕರಣಗಳು, ವೈದ್ಯಕೀಯ ತಪಾಸಣೆಗಳು, ಕರಕುಶಲ ಕಾರ್ಯ ಚಟುವಟಿಕೆಗಳನ್ನು ಕಳಿಸಲಾಗುವುದು.
ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿರುವ ದೃಷ್ಟಿ ವಿಕಲಚೇತನ ಮಕ್ಕಳು ಕಂಡು ಬಂದಲ್ಲಿ ಅವರ ಪೋಷಕರಿಗೆ ನಮ್ಮ ಶಾಲೆಯ ಬಗ್ಗೆ ಮಾಹಿತಿ ನೀಡಿ ಶೇ.40 ಕ್ಕಿಂತ ಹೆಚ್ಚಿನ ದೃಷ್ಟಿದೋಷ ಹೊಂದಿರುವ ಮಕ್ಕಳು ನಮ್ಮ ಸರ್ಕಾರಿ ಶಾಲೆಗೆ ದಾಖಲಾಗುವಂತೆ ಮಾಡಿ ವಿಕಲಚೇತನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಾಲೆಯ ಮುಖ್ಯೋಪಾಧ್ಯಾಯರು, ಅಧೀಕ್ಷರಾದ ಗಂಗಾಧರಪ್ಪ.ಹೆಚ್.ಎನ್ ಮೊ.ಸಂ: 9984534883, 08182-250442 ಸಂಪರ್ಕಿಸಬಹುದೆAದು ಇಲಾಖೆಯ ಅಧೀಕ್ಷಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಈ ವರ್ಷದ ಡಾ|| ಬಿ.ಆರ್. ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆಯನ್ನು ಅತ್ಯಂತ ಸರಳವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಎಪ್ರಿಲ್ 14 ರಂದು ಮಂಗಳವಾರ ಬೆಳಿಗ್ಗೆ 9:00 ಗಂಟೆಗೆ ಡಾ|| ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ನಂತರ ಬೆಳಿಗ್ಗೆ 11:00 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯ “ತುಂಗಭದ್ರಾ” ಸಭಾಂಗಣದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮೆರವಣಿಗೆ ಮಾರ್ಗ
ಬೆಳಿಗ್ಗೆ 9:00 ಗಂಟೆಗೆ ಅಂಬೇಡ್ಕರ್ ವೃತ್ತದಿಂದ ಭಾವಚಿತ್ರದ ಮೆರವಣಿಗೆ ಆರಂಭವಾಗಲಿದ್ದು, ಹೈಸ್ಕೂಲ್ ಮೈದಾನ ಮಾರ್ಗವಾಗಿ ಮಹಾನಗರ ಪಾಲಿಕೆ, ಗಾಂಧಿ ವೃತ್ತ ಹಾಗೂ ಜಯದೇವ ವೃತ್ತದ ಮೂಲಕ ಸಾಗಿ ಪುನಃ ಅಂಬೇಡ್ಕರ್ ವೃತ್ತಕ್ಕೆ ತಲುಪಲಿದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ದಾವಣಗೆರೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ದಲಿತಪರ ಸಂಘಟನೆಯ ಮುಖಂಡರು, ಪ್ರಗತಿಪರ ಚಿಂತಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ರವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿಕ್ಕಮಗಳೂರು | ನೂತನ ಭದ್ರಾ ಸೇತುವೆ ಲೋಕಾರ್ಪಣೆಗೊಳಿಸಿ
ಸುದ್ದಿದಿನ,ಚಿಕ್ಕಮಗಳೂರು:ಜಿಲ್ಲೆಯ ಎನ್ಆರ್ ಪುರದಲ್ಲಿ ಇಂದುಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಹಂದೂರು ಗ್ರಾಮದಿಂದ ಎನ್.ಆರ್.ಪುರಕ್ಕೆ ಸಂಪರ್ಕಿಸುವ ನೂತನ ಭದ್ರಾ ಸೇತುವೆಯನ್ನು ಲೋಕಾರ್ಪಣೆಗೊಳಿಸಿ, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ವಿತರಿಸಿದೆ.
ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಜೆ.ಜಾರ್ಜ್, ಶೃಂಗೇರಿ ಶಾಸಕರಾದ ಟಿ.ಡಿ.ರಾಜೇಗೌಡ, ಕಡೂರು ಶಾಸಕರಾದ ಆನಂದ್, ತರೀಕೆರೆ ಶಾಸಕರಾದ ಶ್ರೀನಿವಾಸ್, ಮಾಗಡಿ ಶಾಸಕ ಬಾಲಕೃಷ್ಣ ಸೇರಿ ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು, ಮುಖಂಡರು ಹಾಗೂ ಸಂಪಾದಕರಾದ ವಿಶ್ವೇಶ್ವರ ಭಟ್, ಕೆಎಸ್ಟಿಡಿಸಿ ಅಧ್ಯಕ್ಷರಾದ ಸರೋವರ್ ಶ್ರೀನಿವಾಸ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ6 days agoಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
-
ದಿನದ ಸುದ್ದಿ4 days agoಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ
-
ದಿನದ ಸುದ್ದಿ6 days agoಸುಸೂತ್ರ ಮತದಾನಕ್ಕೆ ಜಿಲ್ಲಾಡಳಿತದ ಸಕಲ ಸಿದ್ಧತೆ
-
ದಿನದ ಸುದ್ದಿ3 days agoದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ
-
ದಿನದ ಸುದ್ದಿ5 days agoಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ
-
ದಿನದ ಸುದ್ದಿ5 days agoಪರಿಶಿಷ್ಟ ಪಂಗಡದ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ: ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ಪ್ರಶ್ನಿಸಿಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ

