ದಿನದ ಸುದ್ದಿ
ಯಾದಗಿರಿ | ಮಹಾರಾಷ್ಟ್ರದಿಂದ ಆಗಮಿಸಿದ 72 ಜನಕ್ಕೆ ಕೊರೊನಾ ಸೋಂಕು
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2020/05/corona_virus_updates_Suddidina_news.jpg&description=ಯಾದಗಿರಿ | ಮಹಾರಾಷ್ಟ್ರದಿಂದ ಆಗಮಿಸಿದ 72 ಜನಕ್ಕೆ ಕೊರೊನಾ ಸೋಂಕು', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2020/05/corona_virus_updates_Suddidina_news.jpg&description=ಯಾದಗಿರಿ | ಮಹಾರಾಷ್ಟ್ರದಿಂದ ಆಗಮಿಸಿದ 72 ಜನಕ್ಕೆ ಕೊರೊನಾ ಸೋಂಕು', 'pinterestShare', 'width=750,height=350'); return false;" title="Pin This Post">
ಸುದ್ದಿದಿನ,ಯಾದಗಿರಿ : ಜಿಲ್ಲೆಯಲ್ಲಿ ಮೇ 23ರಂದು ಕೊರೊನಾ ಪಾಸಿಟಿವ್ ಪತ್ತೆಯಾದ 72 ಜನ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರ ರಾಜ್ಯದಿಂದ ಯಾದಗಿರಿ ಜಿಲ್ಲೆಗೆ ಮೇ 16ರಂದು ಆಗಮಿಸಿದ್ದರು ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಯಾದಗಿರಿ ತಾಲ್ಲೂಕಿನ ಮುದ್ನಾಳ ದೊಡ್ಡ ತಾಂಡಾದ 32 ವರ್ಷದ ಮಹಿಳೆ (ಪ್ರಕರಣ ಸಂಖ್ಯೆ ಪಿ-1749), ಮುದ್ನಾಳ ತಾಂಡಾದ 8 ವರ್ಷದ ಗಂಡುಮಗು (ಪಿ-1750), ಮುದ್ನಾಳ ತಾಂಡಾದ 10 ವರ್ಷದ ಹೆಣ್ಣುಮಗು (ಪಿ-1751), ಮುದ್ನಾಳ ದೊಡ್ಡ ತಾಂಡಾದ 28 ವರ್ಷದ ಮಹಿಳೆ (ಪಿ-1752), ಮುಂಡರಗಿ ತಾಂಡಾದ 11 ವರ್ಷದ ಗಂಡುಮಗು (ಪಿ-1753), ಮುದ್ನಾಳ ದೊಡ್ಡ ತಾಂಡಾದ 30 ವರ್ಷದ ಮಹಿಳೆ (ಪಿ-1754), ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ 6 ವರ್ಷದ ಹೆಣ್ಣುಮಗು (ಪಿ-1755), ಯರಗೋಳ ತಾಂಡಾದ 1 ವರ್ಷದ ಹೆಣ್ಣುಮಗು (ಪಿ-1756), ಚಿಂತನಳ್ಳಿ ತಾಂಡಾದ 30 ವರ್ಷದ ಮಹಿಳೆ (ಪಿ-1757), ಯಾದಗಿರಿ ನಗರದ ದುಖಾನವಾಡಿಯ 38 ವರ್ಷದ ಪುರುಷ (ಪಿ-1758).
ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ 30 ವರ್ಷದ ಮಹಿಳೆ (ಪಿ-1759), ಯಾದಗಿರಿ ತಾಲ್ಲೂಕಿನ ಬಸಂತಪೂರ ತಾಂಡಾದ 23 ವರ್ಷದ ಪುರುಷ (ಪಿ-1760), ಗುರುಮಠಕಲ್ ತಾಲ್ಲೂಕಿನ ಚಿಂತನಳ್ಳಿ ತಾಂಡಾದ 30 ವರ್ಷದ ಪುರುಷ (ಪಿ-1761), ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ 8 ವರ್ಷದ ಹೆಣ್ಣುಮಗು (ಪಿ-1762), ಗುರುಮಠಕಲ್ ತಾಲ್ಲೂಕಿನ ಯಂಪಾಡ್ ಗ್ರಾಮದ 20 ವರ್ಷದ ಮಹಿಳೆ (ಪಿ-1853), ಯಾದಗಿರಿ ತಾಲ್ಲೂಕಿನ ರಾಮಸಮುದ್ರ ಗ್ರಾಮದ 35 ವರ್ಷದ ಮಹಿಳೆ (ಪಿ-1854), ಗುರುಮಠಕಲ್ ತಾಲ್ಲೂಕಿನ ಯಂಪಾಡ್ ಗ್ರಾಮದ 2 ವರ್ಷದ ಗಂಡುಮಗು (ಪಿ-1855), ಯರಗೋಳ ತಾಂಡಾದ 45 ವರ್ಷದ ಪುರುಷ (ಪಿ-1856), ಯರಗೋಳ ತಾಂಡಾದ 40 ವರ್ಷದ ಮಹಿಳೆ (ಪಿ-1857), ಯರಗೋಳ ತಾಂಡಾದ 25 ವರ್ಷದ ಪುರುಷ (ಪಿ-1858).
ಯರಗೋಳ ತಾಂಡಾದ 18 ವರ್ಷದ ಮಹಿಳೆ (ಪಿ-1859), ಯರಗೋಳ ತಾಂಡಾದ 18 ವರ್ಷದ ಮಹಿಳೆ (ಪಿ-1860), ಯರಗೋಳ ತಾಂಡಾದ 18 ವರ್ಷದ ಪುರುಷ (ಪಿ-1861), ಯರಗೋಳ ತಾಂಡಾದ 17 ವರ್ಷದ ಯುವತಿ (ಪಿ-1862), ಯರಗೋಳ ತಾಂಡಾದ 14 ವರ್ಷದ ಗಂಡುಮಗು (ಪಿ-1863), ಯರಗೋಳ ತಾಂಡಾದ 40 ವರ್ಷದ ಮಹಿಳೆ (ಪಿ-1864), ಯರಗೋಳ ತಾಂಡಾದ 23 ವರ್ಷದ ಪುರುಷ (ಪಿ-1865), ಅಲ್ಲಿಪೂರ ತಾಂಡಾದ 48 ವರ್ಷದ ಮಹಿಳೆ (ಪಿ-1866), ಯರಗೋಳ ತಾಂಡಾದ 25 ವರ್ಷದ ಪುರುಷ (ಪಿ-1867), ಯರಗೋಳ ತಾಂಡಾದ 31 ವರ್ಷದ ಪುರುಷ (ಪಿ-1868).
ಯರಗೋಳ ತಾಂಡಾದ 27 ವರ್ಷದ ಪುರುಷ (ಪಿ-1869), ಯರಗೋಳ ತಾಂಡಾದ 7 ವರ್ಷದ ಹೆಣ್ಣುಮಗು (ಪಿ-1870), ಯರಗೋಳ ತಾಂಡಾದ 28 ವರ್ಷದ ಪುರುಷ (ಪಿ-1871), ಯರಗೋಳ ತಾಂಡಾದ 26 ವರ್ಷದ ಮಹಿಳೆ (ಪಿ-1872), ಯರಗೋಳ ತಾಂಡಾದ 47 ವರ್ಷದ ಪುರುಷ (ಪಿ-1873), ಯಾದಗಿರಿ ನಗರದ ದುಖಾನವಾಡಿಯ 14 ತಿಂಗಳ ಹೆಣ್ಣುಮಗು (ಪಿ-1874), ಅಲ್ಲಿಪೂರ ತಾಂಡಾದ 30 ವರ್ಷದ ಪುರುಷ (ಪಿ-1875), ಅಲ್ಲಿಪೂರ ತಾಂಡಾದ 24 ವರ್ಷದ ಪುರುಷ (ಪಿ-1876), ಅಲ್ಲಿಪೂರ ತಾಂಡಾದ 21 ವರ್ಷದ ಮಹಿಳೆ (ಪಿ-1877), ಅಲ್ಲಿಪೂರ ತಾಂಡಾದ 28 ವರ್ಷದ ಪುರುಷ (ಪಿ-1878).
ಯರಗೋಳ ತಾಂಡಾದ 30 ವರ್ಷದ ಮಹಿಳೆ (ಪಿ-1879), ಬಾಚವಾರ ತಾಂಡಾದ 8 ವರ್ಷದ ಹೆಣ್ಣುಮಗು (ಪಿ-1880), ಬಾಚವಾರ ತಾಂಡಾದ 6 ವರ್ಷದ ಹೆಣ್ಣುಮಗು (ಪಿ-1881), ಬಾಚವಾರ ತಾಂಡಾದ 23 ವರ್ಷದ ಪುರುಷ (ಪಿ-1882), ಬಾಚವಾರ ತಾಂಡಾದ 20 ವರ್ಷದ ಪುರುಷ (ಪಿ-1883), ಬಾಚವಾರ ತಾಂಡಾದ 21 ವರ್ಷದ ಹೆಣ್ಣುಮಗು (ಪಿ-1884), ಬಾಚವಾರ ತಾಂಡಾದ 10 ವರ್ಷದ ಹೆಣ್ಣುಮಗು (ಪಿ-1885), ಬಾಚವಾರ ತಾಂಡಾದ 24 ವರ್ಷದ ಪುರುಷ (ಪಿ-1886), ಬಾಚವಾರ ತಾಂಡಾದ 19 ವರ್ಷದ ಪುರುಷ (ಪಿ-1887), ಬಾಚವಾರ ತಾಂಡಾದ 42 ವರ್ಷದ ಪುರುಷ (ಪಿ-1888).
ಬಾಚವಾರ ತಾಂಡಾದ 17 ವರ್ಷದ ಯುವಕ (ಪಿ-1889), ಬಾಚವಾರ ತಾಂಡಾದ 15 ವರ್ಷದ ಯುವಕ (ಪಿ-1890), ಬಸವಂತಪುರ ತಾಂಡಾದ 26 ವರ್ಷದ ಪುರುಷ (ಪಿ-1891), ಬಸವಂತಪುರ ತಾಂಡಾದ 18 ವರ್ಷದ ಯುವಕ (ಪಿ-1892), ಅಲ್ಲಿಪೂರ ತಾಂಡಾದ 20 ವರ್ಷದ ಮಹಿಳೆ (ಪಿ-1893), ಅಲ್ಲಿಪೂರ ತಾಂಡಾದ 52 ವರ್ಷದ ಪುರುಷ (ಪಿ-1894), ಅಲ್ಲಿಪೂರ ತಾಂಡಾದ 48 ವರ್ಷದ ಮಹಿಳೆ (ಪಿ-1895), ಅಲ್ಲಿಪೂರ ತಾಂಡಾದ 22 ವರ್ಷದ ಮಹಿಳೆ (ಪಿ-1896), ಅಲ್ಲಿಪೂರ ತಾಂಡಾದ 21 ವರ್ಷದ ಪುರುಷ (ಪಿ-1897), ಅಲ್ಲಿಪೂರ ತಾಂಡಾದ 35 ವರ್ಷದ ಮಹಿಳೆ (ಪಿ-1898).
ಅಲ್ಲಿಪೂರ ತಾಂಡಾದ 17 ವರ್ಷದ ಯುವಕ (ಪಿ-1899), ಅಲ್ಲಿಪೂರ ತಾಂಡಾದ 55 ವರ್ಷದ ಪುರುಷ (ಪಿ-1900), ಯರಗೋಳ ತಾಂಡಾದ 48 ವರ್ಷದ ಮಹಿಳೆ (ಪಿ-1901), ಬಾಚವಾರ ತಾಂಡಾದ 32 ವರ್ಷದ ಪುರುಷ (ಪಿ-1902), ಅಲ್ಲಿಪೂರ ತಾಂಡಾದ 9 ವರ್ಷದ ಹೆಣ್ಣುಮಗು (ಪಿ-1903), ಅಲ್ಲಿಪೂರ ತಾಂಡಾದ 7 ವರ್ಷದ ಗಂಡುಮಗು (ಪಿ-1904), ಅಲ್ಲಿಪೂರ ತಾಂಡಾದ 38 ವರ್ಷದ ಪುರುಷ (ಪಿ-1905), ಅಲ್ಲಿಪೂರ ತಾಂಡಾದ 31 ವರ್ಷದ ಪುರುಷ (ಪಿ-1906), ಅಲ್ಲಿಪೂರ ತಾಂಡಾದ 21 ವರ್ಷದ ಮಹಿಳೆ (ಪಿ-1907), ಅಲ್ಲಿಪೂರ ತಾಂಡಾದ 32 ವರ್ಷದ ಮಹಿಳೆ (ಪಿ-1908), ಅಲ್ಲಿಪೂರ ತಾಂಡಾದ 17 ವರ್ಷದ ಯುವತಿ (ಪಿ-1909), ಅಲ್ಲಿಪೂರ ತಾಂಡಾದ 15 ವರ್ಷದ ಯುವತಿ (ಪಿ-1910) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಪ್ರತಿಯೊಬ್ಬರೂ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ/ ಟಿಶ್ಯೂ ಪೇಪರ್ ಅನ್ನು ಬಳಸಬೇಕು. ಕೈ ಸ್ವಚ್ಛಗೊಳಿಸುವ ದ್ರಾವಣ (ಸ್ಯಾನಿಟೈಸರ್) ಅಥವಾ ನೀರು ಮತ್ತು ಸೋಪಿನಿಂದ ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು ಮತ್ತು ಸಾಮಾಜಿಕ ಸಮೂಹ ಗುಂಪು ಸೇರುವಿಕೆಯನ್ನು ಮಾಡಬಾರದು.
ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಸಹಾಯವಾಣಿ ಸಂಖ್ಯೆ 104 ಅಥವಾ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 08473 253950 ಹಾಗೂ ವಾಟ್ಸ್ಆ್ಯಪ್ ಸಂಖ್ಯೆ 9449933946 ಗೆ ಸಂಪರ್ಕಿಸಬಹುದು. ಸಾರ್ವಜನಿಕರು ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಸಹಕರಿಸಬೇಕೆಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲೆಯ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯು ಒಟ್ಟಾರೆ ಶೇಕಡ 81.99 ರಷ್ಟು ಸಾಧನೆ ಮಾಡಿದ್ದು, ರಾಜ್ಯದಲ್ಲಿ 25 ನೇ ಸ್ಥಾನ ಪಡೆದಿದೆ. ಈ ಬಾರಿಯೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಅತಿ ಹೆಚ್ಚು ಶೇಕಡ 90.91 ರಷ್ಟು ಫಲಿತಾಂಶ ಪಡೆದು ಮೇಲುಗೈ ಸಾಧಿಸಿದ್ದಾರೆ.
ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 20,810 ವಿದ್ಯಾರ್ಥಿಗಳ ಪೈಕಿ 16,046 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇಕಡ 77.11 ರಷ್ಟು ಹಾಗೂ ಹೊಸದಾಗಿ ಪರೀಕ್ಷೆ ಬರೆದ (Freshers) 18,949 ವಿದ್ಯಾರ್ಥಿಗಳಲ್ಲಿ 15,540 ಮಂದಿ ಉತ್ತೀರ್ಣರಾಗಿದ್ದಾರೆ ಶೇಕಡ 82.01 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಭಾಗವಾರು ಫಲಿತಾಂಶದ ವಿಶ್ಲೇಷಣೆ
ವಿಜ್ಞಾನ ವಿಭಾಗ (Science): ಜಿಲ್ಲೆಯಲ್ಲಿ ಅತಿ ಹೆಚ್ಚು ಸಾಧನೆ ಈ ವಿಭಾಗದಲ್ಲಿ ದಾಖಲಾಗಿದೆ. ಒಟ್ಟು 12,536 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,936 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 87.24). ಹೊಸ ವಿದ್ಯಾರ್ಥಿಗಳ ಪೈಕಿ 11,770 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,736 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 90.91 ರಷ್ಟು ಅದ್ಭುತ ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗ (Commerce)
ಈ ವಿಭಾಗದಲ್ಲಿ ಹಾಜರಾದ 4,295 ವಿದ್ಯಾರ್ಥಿಗಳಲ್ಲಿ 3,075 ಮಂದಿ ಉತ್ತೀರ್ಣರಾಗಿದ್ದಾರೆ (ಶೇ. 71.59). ಹೊಸ ವಿದ್ಯಾರ್ಥಿಗಳ ಪೈಕಿ 3858 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2960 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 76.72 ರಷ್ಟು ಫಲಿತಾಂಶ ಬಂದಿದೆ.
ಕಲಾ ವಿಭಾಗ (Arts): ಕಲಾ ವಿಭಾಗದಲ್ಲಿ ಒಟ್ಟು 3,979 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2,035 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 51.14). ಹೊಸ ವಿದ್ಯಾರ್ಥಿಗಳ ಪೈಕಿ 3321 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1880 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 56.61 ರಷ್ಟು ಫಲಿತಾಂಶ ಬಂದಿದೆ.
ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ವಿಜ್ಞಾನ ವಿಭಾಗವು ಪ್ರಥಮ ಸ್ಥಾನದಲ್ಲಿದ್ದರೆ, ವಾಣಿಜ್ಯ ಮತ್ತು ಕಲಾ ವಿಭಾಗಗಳು ನಂತರದ ಸ್ಥಾನ ಪಡೆದಿವೆ ಎಂದು ಉಪ ನಿರ್ದೇಶಕ ಪಳಿನಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಇಂದು ನಡೆದ ಉಪ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಒಟ್ಟಾರೆ ಶೇ. 68.55ರಷ್ಟು ಮತದಾನ ದಾಖಲಾಗಿದೆ.
ಬೆಳಿಗ್ಗೆಯಿಂದಲೇ ಮತಗಟ್ಟೆಗಳ ಮುಂದೆ ಮತದಾರರು ಉತ್ಸಾಹದಿಂದ ಸರದಿಯಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳು ಹಾಗೂ ಪೊಲೀಸ್ ಬಂದೋಬಸ್ತ್ನಿಂದಾಗಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.
ಯುವಕರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡಿದ್ದು ಕಂಡುಬಂದಿತು. ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಪಡೆಯ ಸಹಕಾರದೊಂದಿಗೆ ಮತದಾನ ಪ್ರಕ್ರಿಯೆಯು ಸುಗಮವಾಗಿ ಜರುಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ
ಸುದ್ದಿದಿನಡೆಸ್ಕ್:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹದಡಿ ಗ್ರಾಮದ ಮತಗಟ್ಟೆಯಲ್ಲಿ ತೃತೀಯ ಲಿಂಗತ್ವ ಮತದಾರರು ಮತಗಟ್ಟೆಗೆ ಆಗಮಿಸಿ ಸಂತೋಷದಿಂದ ಮತ ಚಲಾಯಿಸಿದರು.
ಸಮಾಜದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಎಂಬ ಸಂದೇಶವನ್ನು ಸಾರಿದ ಕ್ಷಣ! ತಮ್ಮ ಅಮೂಲ್ಯ ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಿದ ತೃತೀಯ ಲಿಂಗತ್ವ ಮತದಾರರಿಗೆ ಅಭಿನಂದನೆಗಳು ಎಂದು ಜಿಲ್ಲಾ ಪಂಚಾಯತ್ ಸಿಇಓ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ6 days agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ದಿನದ ಸುದ್ದಿ7 days agoಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
-
ಅಂತರಂಗ3 days agoಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
-
ದಿನದ ಸುದ್ದಿ6 days agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ
-
ದಿನದ ಸುದ್ದಿ1 day agoಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ
-
ದಿನದ ಸುದ್ದಿ3 days agoಸುಸೂತ್ರ ಮತದಾನಕ್ಕೆ ಜಿಲ್ಲಾಡಳಿತದ ಸಕಲ ಸಿದ್ಧತೆ
-
ದಿನದ ಸುದ್ದಿ2 days agoಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoಪರಿಶಿಷ್ಟ ಪಂಗಡದ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ: ಅರ್ಜಿ ಆಹ್ವಾನ

