Connect with us

ಲೈಫ್ ಸ್ಟೈಲ್

ಎಳ್ಳು ಅಮವಾಸ್ಯೆಯ ಪ್ರಯುಕ್ತ, ಒಂದು ಸುತ್ತು ಹೊಲದತ್ತ

Published

on

ಭಾರತ ದೇಶವು ಹಬ್ಬಗಳಿಗೆ ತವರೂರುರಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಇಲ್ಲಿ ಪ್ರತಿಯೊಂದು ಹಬ್ಬವು ವಿಶೇಷವಾಗಿದೆ. ಹೌದು ನಾನು ಈಗ ಎಳ್ಳು ಅಮವಾಸ್ಯೆಯ ಬಗ್ಗೆ ಮಾತನಾಡುತ್ತಿದ್ದೇನೆ.ನಾನು ಸುಮಾರು ನಾಲ್ಕು ವರ್ಷಗಳಿಂದ ಈ ಹಬ್ಬವನ್ನು ಆಚರಣೆ ಮಾಡಿರಲಿಲ್ಲ. ಹೊಲದಲ್ಲಿ ಬೆಳೆ ಸರಿಯಾದ ರೀತಿಯಲ್ಲಿ ಇಲ್ಲದ ಕಾರಣ, ಎಳ್ಳ ಅಮವಾಸ್ಯೆಗೂ ಮುಂಚೆನೆ ರಾಶಿಮಾಡುವುದು ಹೀಗೆ ಹಲವು ಸಮಸ್ಯೆಗಳಿಂದ ಬೇಸತ್ತು ಕುಟುಂಬದವರು ಎಲ್ಲರೂ ಸೇರಿ ಹೋಗಿರಲಿಲ್ಲ.

ಈ ವರ್ಷ ಮಳೆ ಬೆಳೆ ಎಲ್ಲವೂ ಚೆನ್ನಾಗಿದೆ ಹಾಗಾಗಿ ಕುಟುಂಬರು ಎಲ್ಲರೂ ಸೇರಿ ಹೊಲಕ್ಕೆ ಹೋಗಿ ಎಳ್ಳ ಅಮವಾಸ್ಯೆಯನ್ನು ಸಂಭ್ರಮದಿಂದ ಆಚರಿಸಿದೆವು.ನಮ್ಮ ಮನೆಯಲ್ಲಿ ಎಳ್ಳ ಅಮವಾಸ್ಯೆಗೆ ಒಂದು ವಾರ ಇರುವಾಗಲೆ ಅದ್ಧೂರಿಯಾಗಿ ತಯಾರಿ ನಡೆದಿತ್ತು. ಅಪ್ಪ-ಅಮ್ಮ ಇಬ್ಬರೂ ಸೇರಿ ಸೋದರ ಮಾವ-ಮಾಮಿಗೆ ಫೋನ್ ಮಾಡಿ ಬರಲು ಒತ್ತಾಯಿಸಿದರು. ನನ್ನ ಚಿಕ್ಕಪ್ಪ ಮಗಳು ನಿವೇದಿತಾಳ ಮದುವೆಯಾಗಿದೆ. ಅವಳು ವಿಜಯಪುರ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ನರ್ಸಿಂಗ್ ಓದುತ್ತಿದ್ದಾಳೆ. ತಂಗಿ ನಿವೇದಿತಾ ಮಾವನ ಜೊತೆಗೆ ಬಂದಿದ್ದಳು. ಮಾಮಾ-ಮಾಮಿ ಹಾಗೂ ಅವರ ಮುದ್ದಿನ ಮಗಳು ಮನಸ್ವಿಯನ್ನು ಜೊತೆಗೆ ಕರೆದುಕೊಂಡು ಬಂದಿದ್ದರು.

ಅಮವಾಸ್ಯೆಯ ಹಿಂದಿನ ದಿನ ಸುಮಾರು ರಾತ್ರಿ 12.30ರವರೆಗೂ ಹರಟೆ ಹೊಡೆದೆವು. ಅಮ್ಮ ಹಾಗೂ ಮಾಮಿ ಇಬ್ಬರು ಬೆಳಗ್ಗೆ ಬೇಗನೆ ಎದ್ದು ಮಡಿ ಉಟ್ಟು ಅಡಿಗೆಗೆ ತಯಾರಿ ನಡೆಸಿದರು. ಇಬ್ಬರು ಸೇರಿಕೊಂಡು ಪುಂಡಿಪಲ್ಯೆ, ಹಿಂಡಿಪಲ್ಯೆ, ಬದನೆಕಾಯಿ ಪಲ್ಯೆ, ಹಗಲಕಾಯಿಪಲ್ಯೆ, ಮೆಣಸಿನಕಾಯಿಪಲ್ಯೆ, ಸಜ್ಜಿರೊಟ್ಟಿ, ಸಜ್ಜಿಕಡುಬು, ಬೇಳೆಹೋಳಿಗೆ, ಚಪಾತಿ, ಅನ್ನ ಸಾರು, ಮೊಸರು, ಅಗಸಿಚಟ್ನಿ, ಹಾಗೂ ಊಟದಲ್ಲಿ ನೆಂಚಿಕೊಳ್ಳಲ್ಲು ಹಪ್ಪಳ ಮಾಡಿಕೊಂಡು ತಯಾರಾದರು. ಎಲ್ಲವನ್ನು ಬುತ್ತಿ ಕಟ್ಟಿಕೊಂಡು ಎಲ್ಲರೂ ಸೇರಿ ಹೊಲಕ್ಕೆ ಗಾಡಿಯಲ್ಲಿ ಹೊದೆವು.

ಅಲ್ಲಿ ಎಲ್ಲರೂ ಸೇರಿ ಹೊಲದಲ್ಲಿ ಲಕ್ಷ್ಮಿಗೆ ಪೂಜೆ ಮಾಡಿದೇವು. ನಂತರ ಹಿರಿಯರ ಸಮಾಧಿಗೆ ಪೂಜೆ ನೈವೇದ್ಯ ಮಾಡಿದೆವು. ಎಲ್ಲರೂ ಒಕ್ಕೊರಳಿನಿಂದ ‘ಸಜ್ಜಿರೊಟ್ಟಿ ಚವಳಿಕಾಯಿ ಚೆಂಗಬೋಲೋ’, ‘ಚಲಮುಲಿಗ್ಯೋ ಹುಲುಲಿಗ್ಯೋ’ ಎಂದು ಕೂಗುತ್ತಾ, ಮಾಡಿಕೊಂಡು ಹೊಗಿದ್ದ ಅಡುಗೆಯನ್ನು ಜಮಿನಿನಲ್ಲಿ ಭೂಮಿ ತಾಯಿ ಸಮರ್ಪಿಸಲಾಯಿತು.

ನಂತರ ಎಲ್ಲರೂ ಸೇರಿ ಜೊತೆಯಾಗಿ ಊಟ ಮಾಡಿದೆವು. ಊಟದ ನಂತರ ಪಾನ, ಸಿಹಿ ಪಾನ ತಿಂದೇವು. ನಂತರದಲ್ಲಿ ಎಲ್ಲರೂ ಸೇರಿ ಅಂತ್ಯಾಕ್ಷರಿ ಹಾಡಿ ಸ್ವಲ್ಪ ಸಮಯ ವಿಶ್ರಾಂತಿ ಮಾಡಿ ಮನೆಗೆ ಬಂದೇವು. ಇದರಲ್ಲಿ ನನ್ನ ತಂಗಿಯರಾದ ಕೀರ್ತಿ, ಭಾಗ್ಯ, ಚಿಕ್ಕಪ್ಪ ಇರಲಿಲ್ಲ. ಚಿಕ್ಕಪ್ಪ ಕೆಲಸಕ್ಕೆ ಹೋಗಿದ್ದರು. ಕೀರ್ತಿ ಹಾಗೂ ಭಾಗ್ಯ ವಿದ್ಯಾಭ್ಯಾಸದ ಕಾರಣದಿಂದಾಗಿ ಒಬ್ಬಳು ಧಾರವಾಡ ಮತ್ತು ಬೀದರದಲ್ಲಿದ್ದಾರೆ. ಈ ಮೂವರನ್ನೂ ತುಂಬಾ ಮಿಸ್ ಮಾಡಿಕೊಳ್ಳುತ್ತಾ ಇದ್ದವರ ಜೊತೆಗೆ ತುಂಬಾ ಸಂತೋಷದಿಂದ ಇಂದಿನ ದಿನವನ್ನು ಕಳೆದೆ.

ಕಾಂಚನಾ. ಬಸವರಾಜ. ಪೂಜಾರಿ
3ನೇ ಸೇಮಿಸ್ಟರ್ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಕರ್ನಾಟಕ ರಾಜ್ಯ ಅಕ್ಕಮಾಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ
ವಿಜಯಪುರ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

Photo Gallery | ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025

Published

on

Continue Reading

ದಿನದ ಸುದ್ದಿ

ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

Published

on

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.

ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.

ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಮತ್ತಿನ ಕುಣಿಕೆ

Published

on

  • ಗುರು ಸುಳ್ಯ

ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ

ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ

ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…

ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ

ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ

ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)

ಕವಿ : ಗುರು ಸುಳ್ಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending