Connect with us

ದಿನದ ಸುದ್ದಿ

ಭೈರಪ್ಪನವರೇ, ನಿಮ್ಮ ‘ಧರ್ಮಶಾಸ್ತ್ರ’ ಅಂದರೆ ಯಾವುದು..?

Published

on

ಕನ್ನಡದ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರು ಸಂವಿಧಾನದ ಬಗ್ಗೆ, ತಮ್ಮ ‘ಧರ್ಮಶಾಸ್ತ್ರ’ದ ಬಗ್ಗೆ ತಮ್ಮ ಸಹಜ ಅಭಿಪ್ರಾಯಗಳನ್ನು ಹೇಳುತ್ತಾ ಹಿಂದೂಗಳಲ್ಲಿನ ಗಂಡುಹೆಣ್ಣಿನ ಸಂಭಂದದ ಬಗ್ಗೆ, ನಮ್ಮ ನ್ಯಾಯಾಲಯ, ನ್ಯಾಯಾಲಯದ ತೀರ್ಪುಗಳ ಬಗ್ಗೆಯೂ ಕೀಟಲೆಯ ದ್ವನಿಯಲ್ಲಿ ಮಾತನಾಡಿದ್ದಾರೆ!

ಪ್ರಗತಿಪರರು ಸಾಮಾಜಿಕ ಜಾಲತಾಣಗಳಲ್ಲಿ
ಭೈರಪ್ಪನವರ ಮಾತುಗಳನ್ನು ಉಗ್ರವಾಗಿ ವಿರೋಧಿಸುತ್ತಾ ಎಸ್.ಎಲ್.ಭೈರಪ್ಪನವರನ್ನು ವೈಯಕ್ತಿಕ ನಿಂದೆಗೆ ಇಳಿದಿದ್ದಾರೆ.!

ಭೈರಪ್ಪನವರು ಇದನ್ನು ಬಿಟ್ಟು ಮತ್ತೇನು ಮಾತಾಡಲು ಸಾದ್ಯ..? ಅವರು ನಂಬಿದ ಸಿದ್ದಾಂತಕ್ಕೆ ಅವರು ತೋರುವ ಕಾಳಜಿ, ಬದ್ದತೆಗಳು ನಿಜಕ್ಕೂ ಶ್ಲಾಘನೀಯ! ಅವರು ಮಾತಾಡಿರುವುದಾದರೂ ಎಲ್ಲಿ? ಅವರ ಜಾತಿಯವರೇ ಆದವರೊಬ್ಬರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ, ಅವರದೇ ಪರಿಸರದಲ್ಲಿ, ಅವರ ಅನುಯಾಯಿಗಳ ನಡುವೆ. ಅದರಲ್ಲೂ ಅವರು ಅವರದೇ ‘ಧರ್ಮಗ್ರಂಥ’ಗಳನ್ನು ಬೇರೆ ಸಮರ್ಥಿಸಿಕೊಂಡಿದ್ದಾರೆ! ಇದೂ ನನಗೆ ಆಶ್ಚರ್ಯ ಎನಿಸಲಿಲ್ಲ!? ಅವರು, ಅವರ ಯಥಾಸ್ಥಿತಿವಾದದ, ಅವರಿಗೆ ಶ್ರೇಯಕರವಾದ ಧರ್ಮಗ್ರಂಥವನ್ನು ಸಮರ್ಥಿಸದೆ ನಿಮ್ಮ ಧರ್ಮಗ್ರಂಥವಾದ ಸಂವಿಧಾನವನ್ನು ಏಕೆ ಸಮರ್ಥಿಸಬೇಕು? ಅವರ ಧರ್ಮಗ್ರಂಥಗಳಿಗೆ ‘ಹಿಂದೂ’. ‘ಭಾರತೀಯ’ ‘ಪ್ರಾಚೀನ’ ‘ಪುರಾತನ’ ‘ಸನಾತನ’ ಎಂದು ಏನೇ ನಾಮಕರಣ ಮಾಡಿ, ಹೆಸರಿಟ್ಟು ಕರೆದರೂ ಅದು ಬ್ರಾಹ್ಮಣ ಶ್ರೇಷ್ಟತೆಯನ್ನು ಪ್ರತಿಪಾದಿಸುವ ಧರ್ಮಗ್ರಂಥವಾಗಿರುತ್ತದೆ! ಬ್ರಾಹ್ಮಣರಾದ ಭೈರಪ್ಪನವರಿಗೆ, ಅವರ ಕುಲಭಾಂಧವರಿಗೆ ಅದರಿಂದ ಲಾಭವಿದೆ! ಪರಂಪರಾನುಗತವಾಗಿ ಅವರು ಅದರ ಹಣ್ಣುಗಳನ್ನು ಸವಿದಿದ್ದಾರೆ!

‘ಭಾರತೀಯತೆ’ ಅಂದರೆ ಅವರ ಅರ್ಥದಲ್ಲಿ ಅದು ‘ವೈದಿಕೇಯತೆ’ಯೇ ಅಲ್ಲವೆ? ಭಾರತೀಯತೆ ಅರ್ಥಾತ್ ಬ್ರಾಹ್ಮಣೀಯತೆಯನ್ನು ಯಥಾಸ್ಥಿತಿಗೊಳಿಸುವುದು, ಸ್ಥಾವರಗೊಳಿಸುವುದೇ ಅವರ ಮೂಲ ಉದ್ದೇಶವೆಂಬುದನ್ನು ನಾವೇಕೆ ಗ್ರಹಿಸುತ್ತಿಲ್ಲ.? ಇದನ್ನು ಕೇವಲ ಎಸ್.ಎಲ್.ಭೈರಪ್ಪನವರು ಹೇಳುತ್ತಿರುವುದಲ್ಲ, ಇವರ ಪೂರ್ವಿಕರಾದ ಸಂಘಪರಿವಾರದ ಸ್ಥಾಪಕರೆಲ್ಲಾ ಹಿಂದಿನಿಂದಲೂ ಹೇಳುತ್ತಾ ಬಂದಿರುವುದೇ ಇದೇ ಆಗಿದೆ!? ಉದಾಹರಣೆಗೆ ಇಂದು ಎಸ್.ಎಲ್.ಬೈರಪ್ಪನವರು ನಮ್ಮ ಮದುವೆಗಳ, ವಿಚ್ಚೇದನಗಳ, ಗಂಡು ಹೆಣ್ಣು ಸಂಭಂದಗಳ ಪರಿಸ್ಥಿತಿ ಯನ್ನು ಕಂಡು ವ್ಯಂಗ್ಯವಾಡಿದ್ದಾರಲ್ಲ, ಅದನ್ನೇ ಇಂದಿಗೆ ಸರಿಯಾಗಿ ಎಪ್ಪತ್ತು ವರ್ಷಗಳ ಹಿಂದೆ ಭೈರಪ್ಪನವರ ಪೂರ್ವಿಕರಾದ ಗೋಳ್ವಾಲ್ಕರ್ ರವರೂ ಹೇಳಿದ್ದನ್ನು ನಮ್ಮ ಇತಿಹಾಸಕಾರ ರಾಮಚಂದ್ರ ಗುಹ ಕೋಟ್ ಮಾಡಿದ್ದನ್ನೇ ನಾನೂ ಕೋಟ್ ಮಾಡಿದ್ದೇನೆ ಗಮನಿಸಿ….

The RSS sarsanghchalak, M.S. Golwalkar, complained in a speech of August 1949 that the reforms piloted by Ambedkar “has nothing Bharatiya about it. The questions like those of marriage and divorce cannot be settled on the American or British model in this country. Marriage, according to Hindu culture and law is a sanskar which cannot be changed even after death and not a ‘contract’ which can be broken any time”. Golwalkar continued: “Of course some lower castes in Hindu Society in some parts of the country recognise and practise divorce by custom. But their practice cannot be treated as an ideal to be followed by all”. (Organiser, September 6, 1949).

ಯಥಾಸ್ಥಿತಿವಾದ ಅಂದರೆ ಇದೇ.. ಅದಕ್ಕೆ ಕಾಲಮಾನಗಳ ಅಂತರವಿರಲ್ಲ, ಬಾಷೆ ಮತ್ತು ಚಿಂತನೆಯಲ್ಲಿ ವ್ಯತ್ಯಾಸ ಇರಲ್ಲ, ವ್ಯಕ್ತಿ ವ್ಯಕ್ತಿಗಳ ನಡುವೆ ಗೊಂದಲವಿರಲ್ಲ..! ಇದನ್ನೇ ನಮ್ಮವರು ಪ್ಯಾಸಿಸಂ ಎಂದು ಕರೆದರು. ಅಂದು ಅವರು ಪ್ರತಿಪಾದಿಸಿದ್ದು, ಅದು ಮುಂದುವರೆದಿದ್ದೂ, ಇಂದು ಪ್ರತಿಪಾದಿಸುತ್ತಿರುವುದು ಒಂದೇ.‌.!? ಭಾರತೀಯತೆಯ ಹೆಸರಲ್ಲಿ ಬ್ರಾಹ್ಮಣೀಯತೆಯನ್ನು, ಇದರಿಂದ ಭಾರತೀಯರಾದ ಇತರ ಬ್ರಾಹಮಣೇತರರಿಗೆ ಏನೇ ನಷ್ಟವಾದರೂ ಚಿಂತೆಯಿಲ್ಲ ಅವರಿಗೆ ಮಾತ್ರ ಲಾಭವಾಗಬೇಕಷ್ಟೆ ಅವರ ಸವರ್ಣಕುಲದ ಶ್ರೇಷ್ಠತೆ ಉಳಿಯಬೇಕಷ್ಟೆ!

ಇಲ್ಲಿ ಭಾರತೀಯರು, ಅದರಲ್ಲೂ ಬ್ರಾಹ್ಮಣ ಹೆಣ್ಣುಮಕ್ಕಳನ್ನೂ ಸೇರಿಸಿದಂತೆ ಇಡೀ ಸ್ತ್ರೀಕುಲಕ್ಕೆ ಇವರ ‘ಸಿದ್ದಾಂತ’ ಅದೆಷ್ಟು ಅಪಾಯಕಾರಿಯಾಗಿದೆ ಗಮನಿಸಿ? ಭೈರಪ್ಪನವರು ಹೆಣ್ಣಿನ ಮುಟ್ಟಿನ ಬಗ್ಗೆ, ಶಬರಿಮಲೆ ದೇವಾಲಯದ ಪ್ರವೇಶದ ಬಗ್ಗೆ ಅಸಹನೆ ಬೆರೆತ ವ್ಯಂಗ್ಯದಲ್ಲಿ ಮಾತನಾಡಿದ್ದಾರೆ. ಇದರಲ್ಲಿ ಅವರ ‘ಧ್ವನಿ’ಯನ್ನು ಗಮನಿಸಿ..? ಅದೇ ಏಳು ದಶಕಗಳ ಹಿಂದೆ ಅಪ್ಪನ ಆಸ್ತಿಯಲ್ಲಿ(ಪಿತ್ರಾರ್ಜಿತ ಆಸ್ತಿ) ಹೆಣ್ಣು ಮಕ್ಕಳಿಗೆ ಸಮಪಾಲು ನೀಡಬೇಕೆಂದು ಬಾಬಾಸಾಹೇಬರು ‘ಹಿಂದು ಕೋಡ್ ಬಿಲ್’ ತಂದಾಗ, ಅಂದೂ ಬೈರಪ್ಪನವರ ತಲೆಮಾರಿನವರು ಮಾತಾಡಿದ್ದು ಇಲ್ಲಿದೆ ಗಮನಿಸಿ…

An article in the Organiser, dated November 2, 1949, characterised the Hindu Code Bill “as a direct invasion on the faith of the Hindus”, remarking that “its provisions empowering women to divorce is revolting to the Hindu ideology”. An editorial published a month later (“The Hindu Code Bill”, the Organiser, December 7, 1949) led with this paragraph: “We oppose the Hindu Code Bill. We oppose it because it is a derogatory measure based on alien and immoral principles. It is not a Hindu Code Bill. It is anything but Hindu. We condemn it because it is a cruel and ignorant libel on Hindu laws, Hindu culture and Hindu dharma”.

ಮಾತೆತ್ತಿದರೆ ಭಾರತಮಾತೆಯನ್ನು ಉದ್ಗರಿಸುವ ಇವರ ಉದರದಲ್ಲಿರುವ ಸ್ತ್ರೀದ್ವೇಶವನ್ನು ಗಮನಿಸಿ..? ಅಂದಿಗೂ ಇಂದಿಗೂ ಬೈರಪ್ಪನವರ ಮತ್ತವರ ಪೂರ್ವಿಕರ ಚಿಂತನೆ ಮತ್ತು ಉದ್ದೇಶದಲ್ಲಿ ಏನಾದರೂ ಎಳ್ಳಷ್ಟು ವ್ಯತ್ಯಾಸವಿದೆಯೇ..? ಇಂತದ್ದೇ ಸ್ಪಷ್ಟತೆ ಅಂದು ಹಿಟ್ಲರ್ ನಲ್ಲೂ ಇತ್ತು ಇಂದು ಇವರಲ್ಲೂ ಇದೆ!

ನಾವು ಭೈರಪ್ಪನಂತವರನ್ನು ಬೈಯುವುದನ್ನು ನಿಲ್ಲಿಸಬೇಕು ಇಂದಾದರೂ ಒಂದಾಗಿ ಪರ್ಯಾಯಗಳನ್ನು ಹುಡುಕಬೇಕು.. ಈ ದೇಶವನ್ನು ಇವರಿಂದ ಉಳಿಸಬೇಕಾದರೆ ಇವರ ಮಾತುಗಳನ್ನು, ಇವರ ನುಡಿಕಟ್ಟನ್ನು ಅದರ ಹಿಂದಿನ ದುರುದ್ದೇಶಗಳನ್ನು ಮುಂದಿನ ತಲೆಮಾರಿಗಾದರೂ ಅರ್ಥಮಾಡಿಸಬೇಕು..

ಸಿ.ಎಸ್.ದ್ವಾರಕಾನಾಥ್

ನಮ್ಮ ಸಂವಿಧಾನದಲ್ಲಿ ಪರಂಪರೆ’ ಇಲ್ಲ ಎಂದು ಹೇಳಿದ ಎಸ್.ಎಲ್.ಭೈರಪ್ಪ ಅವರ ಸುದ್ದಿ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.prajavani.net/stories/stateregional/shreevasta-smruti-632572.html

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

Published

on

ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ‍್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್‌ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್‌ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು

Published

on

ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.

ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್‌ಆರ್‌ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್‌ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.

ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ

Published

on

ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ ವಸತಿ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು 15 ಜನವರಿ 2026 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ2 days ago

2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ...

ದಿನದ ಸುದ್ದಿ2 days ago

ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು

ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ...

ದಿನದ ಸುದ್ದಿ2 days ago

ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ...

ದಿನದ ಸುದ್ದಿ3 days ago

ಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ

ಸುದ್ದಿದಿನ,ದಾವಣಗೆರೆ:ಭಾರತೀಯ ಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಹೊಸ ಸೌಲಭ್ಯವನ್ನು ಆಯೋಜಿಸಲಾಗಿದೆ. ಈ ಸೌಲಭ್ಯದಿಂದ ನಾಗರಿಕರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಸ್ಪೀಡ್ ಪೊಸ್ಟ್ , ಪಾರ್ಸಲ್...

ದಿನದ ಸುದ್ದಿ4 days ago

ಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ದಾವಣಗೆರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ಮಾಧ್ಯಮ ಕ್ಷೇತ್ರದಲ್ಲಿ ಮತ್ತು ಮಾಧ್ಯಮ ಚಟುವಟಿಕೆಗಳ...

ದಿನದ ಸುದ್ದಿ5 days ago

ಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಬುಧುವಾರದಿಂದ ರೈತರಿಂದ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ರವರು ತಿಳಿಸಿದರು. ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ...

ದಿನದ ಸುದ್ದಿ5 days ago

ಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ

~ಅನಿರೀಕ್ಷಿತ್ ನಾರಾಯಣ ಕೆಲ ಮುನ್ನೆಚ್ಚರಿಕೆಯ ಅಂಶಗಳನ್ನು ಪಾಲಿಸುವುದರಿಂದ ಗ್ಯಾಸ್ ಗೀಸರ್ ನಿಂದ ಆಗುವ ಅಪಾಯವನ್ನು ತಡೆಗಟ್ಟಬಹುದು. 1. ಮೊದಲಿಗೆ ಇದು ಎಲ್ಲರಿಗೂ ಗೊತ್ತಿರುವ ವಿಷಯ. ಗ್ಯಾಸ್ ಗೀಸರ್...

ದಿನದ ಸುದ್ದಿ1 week ago

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು....

ದಿನದ ಸುದ್ದಿ1 week ago

ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ...

ದಿನದ ಸುದ್ದಿ1 week ago

ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ...

Trending