Connect with us

ಲೈಫ್ ಸ್ಟೈಲ್

ಹಲ್ಲುಗಳನ್ನು ಕಪ್ಪುಗೊಳಿಸುವ ಹಲ್ಲಿಟ್ಟು ಗಿಲಾವು ಎಂಬ ಸಾಂಪ್ರದಾಯಿಕ ಕಲೆ..!

Published

on

 

“Some pains are physical,
And some are mental,
But the one that is both Is dental.”

-Ogden Nash.

“ಕೆಲವು ನೋವುಗಳು ದೈಹಿಕ. ಹಾಗೂ ಕೆಲವು ಮಾನಸಿಕ. ಎರಡೂ ಆಗಿರುವ ನೋವೇ ದಾಂತಿಕ!”

– ಆಗ್ಡನ್ ನ್ಯಾಶ್

ದೈಹಿಕವಾಗಿಯೂ ಮಾನಸಿಕವಾಗಿಯೂ ಬಾಧಿಸುವ ದಂತ ನೋವಿಗೆ ನಮ್ಮ ಪೂರ್ವಿಕರು ಅನೇಕ ರೀತಿಯ ಪರಿಹಾರೋಪಾಯಗಳನ್ನು ಕಂಡುಕೊಂಡಿದ್ದರು. ಅಂತಹ ಉಪಾಯಗಳಲ್ಲಿ ಹಲ್ಲಿಟ್ಟು ಎಂಬ ಪುಡಿಯಿಂದ ಹಲ್ಲುಗಳಿಗೆ ಕಪ್ಪು ಗಿಲಾವು ಮಾಡಿಕೊಳ್ಳುವ ಕಲೆಯೂ ಒಂದು. ನನ್ನ ಅಪ್ಪನ ಚಿಕ್ಕಮ್ಮನ ಹೆಸರು ಬುಡ್ಡಕದರಮ್ಮಜ್ಜಿ. ಸುಮಾರು ನಾಲ್ಕೂವರೆ ಅಡಿಗಳಷ್ಟು ಎತ್ತರದ ಮಟ್ಟಸವಾದ ಆಳ್ತನದ ಅವಳು ಕೆಂಪನೆ ಮೈಬಣ್ಣದ ಚೆಲುವೆ. ನಮ್ಮ ಪಕ್ಕದ ಮನೆಯಲ್ಲಿ ತುಂಬು ಸಂಸಾರವಂದಿಗಳಾಗಿ ವಾಸವಿದ್ದಳು. ನನ್ನ ಬಾಲ್ಯದ ದಿನಗಳಲ್ಲಿ ಅವಳು ನಮ್ಮ ಮನೆಗೆ ಬಂದಾಗಲೆಲ್ಲಾ ಕೆಂಪು ವಸಡಿಗೆ ಸಾಲಾಗಿ ಜೋಡಿಸಿದ ಕಪ್ಪು ಮುತ್ತಿನ ಮಣಿಗಳಂತಹ ಅವಳ ಹಲ್ಲುಗಳನ್ನು ತದೇಕ ಚಿತ್ತನಾಗಿ ನೋಡುತ್ತಿದ್ದೆ. “ಏನ್ಮಾಡ್ತಾ ಇದ್ದೀಯೇ…ಗ್ಗೇ.. ಕದರಿ… ಒಂದು ತಾಳೆ ಇಳೆದೆಲೆ ಕೊಡೆ” ಎಂದು ಬುಡ್ಡಕದರಮ್ಮಜ್ಜಿ ನನ್ನ ಅಮ್ಮನನ್ನು ಮಾತಾಡಿಸಿಕೊಂಡು ನಮ್ಮ ಪಕ್ಕದ ಮನೆಯಿಂದ ಗೋಡೆ ತಡವಿಕೊಂಡು ನಮ್ಮ ಮನೆಗೆ ಬರುತ್ತಿದ್ದಳು. ಕೇವಲ ಗೋಟಡಿಕೆ ಚೂರುಗಳನ್ನು ಬಾಯೊಳಗೆ ಅತ್ತಲಿತ್ತ ನಾಗೆಯಿಂದ ಹೊರಳಾಡಿಸುತ್ತಾ ಯಾವುದೋ ಗಂಧರ್ವ ಲೋಕದಿಂದ ಇಳಿದು ಬಂದ ಕನ್ಯೆಯಂತೆ ತರಕು ವಿಳೆದೆಲೆಗಾಗಿ ಬರುತ್ತಿದ್ದಳು. ಕಟವಾಯಿಯಲ್ಲಿ ಸೋರುತ್ತಿದ್ದ ತೊಂಬುಲವನ್ನು ಸೊರ್ರನೆ ಒಳಗೆಳೆದುಕೊಂಡು ಬಾಯಲ್ಲಿ ತೊಂಬುಲ ತುಂಬಿಕೊಂಡೇ ಮಾತಾಡುತ್ತಿದ್ದ ಅವಳ ಮಾತನ್ನು ಆಲಿಸುವುದೊಂದು ಚೆಂದವಾಗಿತ್ತು. ಬಾಯೊಳಗಿನ ತೊಂಬುಲವನ್ನು ಆಚೆಗೆ ಉಗುಳಿ ಬಂದು, ಗಳಾಗಂಟೆ ಬಿಟ್ಟುಕೊಂಡು ನಿಂತುಕೊಂಡಿದ್ದ ನನ್ನ ಕಡೆಗೆ ನೋಡಿ ಕರ್ರಗೆ ನಗುತ್ತಾ, ನನ್ನ ಕೆನ್ನೆ ಸವರಿ ನೆಟಿಗಿಕೊಂಡು, ನನ್ನ ಬುಲಕಾಯಿ ಹಿಡಿದು ಸವರಿ ತನ್ನ ಬೆರಳುಗಳಿಗೆ ತಾನೇ ಮುತ್ತು ಕೊಟ್ಟುಕೊಳ್ಳುತ್ತಿದ್ದಳು.

ನನ್ನ ಅಮ್ಮನ ಹಲ್ಲುಗಳು ಬೆಳ್ಳಗಿದ್ದರೆ ಬುಡ್ಡಕದರಮ್ಮಜ್ಜಿಯ ಹಲ್ಲುಗಳು ಮಾತ್ರ ಕರ್ರಗಿದ್ದವು. ದಿನವೆಲ್ಲಾ ಎಲೆಅಡಕೆ ನಮುಲಿ ನಮುಲಿ ಹಲ್ಲುಗಳು ಹೀಗೆ ಕರ್ರಗಾಗಿರಬಹುದೆಂದೂ, ಮುಂದೊಂದು ದಿನ ನನ್ನ ಅಮ್ಮನು ಮುದುಕಿಯಾಗುವ ಹೊತ್ತಿಗೆ ಅವಳ ಹಲ್ಲುಗಳೂ ಬುಡ್ಡಕದರಮ್ಮಜ್ಜಿಯ ಹಲ್ಲುಗಳಂತೆ ಕರ್ರಗಾಗಬಹುದೆಂದು ನಾನು ಯೋಚಿಸುತ್ತಿದ್ದೆ. ಆದರೆ ನಂತರದ ದಿನಗಳಲ್ಲಿ ಕರಿಹಲ್ಲುಗಳ ಹಿಂದಿನ ಸೀಕ್ರೆಟ್ ಏನೆಂಬುದನ್ನು ನಾನು ಕಂಡುಕೊಂಡೆ. ನಮ್ಮೂರಿನ ಹತ್ತಿರದ ಯಾದಗೆರೆ ಗ್ರಾಮದ ಅಲೆಮಾರಿ ಕೊರಮ ಸಮುದಾಯದ ಹೆಂಗಸರಿಂದ ನಮ್ಮೂರಿನ ಕೆಲವು ಮಧ್ಯ ವಯಸ್ಕ ಹೆಂಗಸರು ಹಲ್ಲಿಟ್ಟು ಎಂಬ ಗಿಡಮೂಲಿಕೆಯ ಪುಡಿಯನ್ನು ತಮ್ಮ ಹಲ್ಲುಗಳಿಗೆ ತಿಕ್ಕಿಸಿಕೊಂಡು ಬಾಯೊಳಗಿದ್ದ ಎಲ್ಲಾ ಹಲ್ಲುಗಳನ್ನು ಕರ್ರಗೆ ಹೊಳೆಯುವಂತೆ ಗಿಲಾವು ಮಾಡಿಕೊಳ್ಳುತ್ತಿದ್ದ ದೃಶ್ಯ ನನ್ನ ಕಣ್ಣಿಗೆ ಬಿತ್ತು. ಬುಡ್ಡಕದರಮ್ಮಜ್ಜಿಯೂ ಕೂಡಾ ಬಲು ಹಿಂದೆ ಇದೇ ಅಲೆಮಾರಿಗಳಿಂದ ತನ್ನ ಹಲ್ಲುಗಳಿಗೆ ಹಲ್ಲಿಟ್ಟು ಹಾಕಿಸಿ ಗಿಲಾವು ಮಾಡಿಸಿಕೊಂಡಿದ್ದಳು.

ನನ್ನ ಅಪ್ಪನ ಅಕ್ಕ ಅಂದರೆ ನನ್ನ ಸೋದರತ್ತೆಯ ಬೆಲ್ಲದಹಳ್ಳಿ ಎಂಬ ಊರಿನಲ್ಲಿಯೂ ಎಲ್ಲಕ್ಕ ಎಂಬ ಕೆಂಪನೆ ಅಜ್ಜಿಯೊಬ್ಬಳು ತನ್ನ ಹಲ್ಲುಗಳನ್ನು ಹಲ್ಲಿಟ್ಟಿನಿಂದ ತಿಕ್ಕಿಕೊಂಡು ಹೊಳೆಯುವ ಕರಿ ಇದ್ದಿಲಿನಂತೆ ಮೆರಗು ಮಾಡಿಕೊಂಡಿದ್ದಳು. ಎಲ್ಲಕ್ಕಜ್ಜಿಯು ವಾರಕ್ಕೊಮ್ಮೆ ಹಲ್ಲಿಟ್ಟಿನ ಪುಡಿಯಿಂದ ಹಲ್ಲುಗಳನ್ನು ಉಜ್ಜಿಕೊಳ್ಳುತ್ತಿದ್ದಳು. ನೂರು ವರ್ಷಗಳಿಗೂ ಹೆಚ್ಚು ಕಾಲ ಬದುಕಿದ್ದ ಆ ಬೆನ್ನು ಬಾಗಿದ ಅಜ್ಜಿಯ ಬಳಿ ನಾನೊಂದು ದಿನ ಅದೂ ಇದೂ ಮಾತಾಡುತ್ತಾ ಹಲ್ಲಿಟ್ಟು ಹಾಕಿಸಿಕೊಳ್ಳುವ ಉದ್ದೇಶ ಕುರಿತು ಕೇಳಿದೆ. “ನಾವು ಸದಾ ಕಾಲ ಬದುಕಿನ ಮ್ಯಾಲಿರೋರು…. ಕೆಲಸ ಮಾಡುವಾಗ ಆಸರಿಕೆ ಬ್ಯಾಸರಿಕೆ ಕಳೆಯೋದಕ್ಕೆ ಎಲೆಅಡಕೆ ಹಾಕ್ತೀವಿ… ಸದಾ ಎಲೆಅಡಕೆ ಹಾಕಿ ಹಲ್ಲುಜ್ಕಂಡ್ ಬೆಳ್ಳಗೆ ಮಾಡ್ಕಂಡ್ ಕೂತ್ಕಮಾಕೆ ಸಾಧ್ಯನಾ ನಮಗೆ? ಒಂದೊಂದ್ ಸಲಿ ಬದುಕಿನ ಯಾಳ್ಯದಾಗೆ ನಮ್ಮ ತಿಕ ಕೆರ್ಕಳಕೂ ಸಡುವಿರಾದಿಲ್ಲ. ಅದುಕ್ಕೆ ಇಂಗೆ ಹಲ್ಲಿಟ್ಟು ಹಾಕಸ್ಕಮ್ತೀವಿ” ಅಂದಳು.

ಈಗಿನ ನಾವು ಬಿಳಿಕೂದಲಿಗೆ ಕಪ್ಪು ಡೈ ಹಾಕುವ ರೀತಿಯಲ್ಲಿಯೇ ಆಗಿನ ಕೆಲವು ಮುದುಕ ಮುದುಕಿಯರು ಹಲ್ಲಿಟ್ಟಿನಿಂದ ಹಲ್ಲುಜ್ಜುವುದನ್ನು ನಾನು ನೋಡಿದ್ದೆ. ಈಗಲೂ ನನ್ನ ನೆನಪಿನಿಂದ ಆ ದೃಶ್ಯಗಳು ಮಾಸಿಲ್ಲ. ಆಗಿನ ದಿನಗಳಲ್ಲಿ ಪ್ರತಿನಿತ್ಯ ಬೆಳಗ್ಗೆ ಎದ್ದು ಮುಖ ತೊಳೆಯುವಾಗ ಮನೆಗಳ ಮಣ್ಣೆಂಟೆಯ ಗೋಡೆಗೆ ನೀರು ಚಿಮುಕಿಸಿ ಬೆರಳಿನಿಂದ ಮಣ್ಣನ್ನು ನಾದಿಕೊಂಡು ಹಲ್ಲುಜ್ಜುವುದು ಅಥವಾ ತೆಂಗಿನ ಕುರಂಬಳೆಯ ಇದ್ದಿಲನ್ನು ಕರಕರನೆ ಜಗಿದು ಬೆರಳಿನಿಂದ ಹಲ್ಲುಜ್ಜುವುದು ಸಾಮಾನ್ಯ ದೃಶ್ಯಗಳಾಗಿದ್ದವು. ಬೇವಿನ ಕಡ್ಡಿಯಿಂದ, ನಂಜನಗೂಡು ಹಲ್ಲುಪುಡಿ ಅಥವಾ ಚಂಪಕಾ ದಂತಚೂರ್ಣದಿಂದ ಹಲ್ಲುಜ್ಜುವುದನ್ನು ಮೇಲ್ವರ್ಗದ ಕಲಿತ ಜನರಲ್ಲಿ ಮಾತ್ರ ನೋಡಬಹುದಾಗಿತ್ತು. ಈಗಿನಂತೆ ಆಗಿನ ಕಾಲದಲ್ಲಿ ದುಬಾರಿ ಬೆಲೆಯ ತರಹೇವಾರಿ ಟೂತ್ ಪೇಸ್ಟು ಬ್ರಶ್ ಗಳು ಹಾಗೂ ದಂತ ಚಿಕಿತ್ಸಾಲಯಗಳು ಮಾರುಕಟ್ಟೆ ಪ್ರವೇಶಿಸಿರಲಿಲ್ಲ. ಆಗಿನ ಜನ ಹಲ್ಲುಗಳ ಬಗ್ಗೆಯಾಗಲೀ ತಲೆಕೂದಲಿನ ಬಗ್ಗೆಯಾಗಲೀ ಅತಿಯಾದ ಎಚ್ಚರಿಕೆ ಮತ್ತು ಆಸಕ್ತಿ ತೋರಿಸುವಂತೆ ಕಾಣಿಸದಿದ್ದರೂ ಅವರು ಮುಪ್ಪಾನು ಮುಪ್ಪಾಗಿ ಸಾಯುವ ದಿನಗಳವರೆಗೂ ತಲೆಕೂದಲು ಕಡುಕಪ್ಪಗೆ ಮತ್ತು ಹಲ್ಲುಗಳು ಸುಭದ್ರವಾಗಿರುವುದನ್ನು ನಾವು ಕಾಣುತ್ತಿದ್ದೆವು.

ಮುದುಕರಿಗಿಂತಲೂ ಹೆಚ್ಚಾಗಿ ಮುದುಕಿಯರು ಮಾತ್ರ ಹಲ್ಲಿಟ್ಟು ತಿಕ್ಕಿಕೊಂಡು ಹಲ್ಲುಗಳನ್ನು ಕರ್ರಗೆ ಮೆರಗುಗೊಳಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆಗಿನ ಅಜ್ಜಿಯರಿಗೆ ಹಲ್ಲುಗಳನ್ನು ಕಪ್ಪುಗೊಳಿಸಿಕೊಳ್ಳುವುದು ಬಹುಶಃ ಫ್ಯಾಷನ್ ಆಗಿರಲಿಲ್ಲ. ವಯೋವೃದ್ಧರಾಗುವತನಕ ಎಲೆಅಡಕೆ ಜಗಿಯಲು ಎಮಕೆ- ಕಾಳುಕಡ್ಡಿ ಮುಂತಾದ ಗಟ್ಟಿ ಪದಾರ್ಥಗಳನ್ನು ಜಗಿಯಲು ಅನುಕೂಲವಾಗುವಂತೆ ಹಲ್ಲುಗಳನ್ನು ಸುಭದ್ರಪಡಿಸಿಕೊಳ್ಳುವುದೇ ಅವರಿಗಿದ್ದ ಮುಖ್ಯ ಉದ್ದೇಶವೆನ್ನಿಸುತ್ತದೆ. ಹಲ್ಲಿಟ್ಟು ಹಾಕಿಸಿಕೊಂಡವರಿಗೆ ಎಂದಿಗೂ ಹುಳುಕುಹಲ್ಲು, ಹಲ್ಲು ಕುಳಿ ಬೀಳುವುದು, ಹಲ್ಲುಗಳ ನಡುವೆ ಸದುವುಗಳಾಗುವುದು ಮುಂತಾದ ಸಮಸ್ಯೆ ಎದುರಾಗುತ್ತಿರಲಿಲ್ಲ. ಫ್ಲೋರೈಡ್ ಯುಕ್ತ ಉಪ್ಪುನೀರು ಸೇವನೆಯ ಪರಿಣಾಮದಿಂದ ಹಲ್ಲುಗಳು ಹಳದಿಗಟ್ಟುವ ಸಮಸ್ಯೆಯೂ ಕಾಣಿಸುತ್ತಿರಲಿಲ್ಲ.

ಇಂದಿಗೂ ನಮ್ಮ ಹಳ್ಳಿಗಳಲ್ಲಿ ಇಂತಹ ಕಪ್ಪು ಹಲ್ಲುಗಳ ಮುದುಕಿಯರು ವಿರಳವಾಗಿ ಕಾಣಸಿಗುತ್ತಾರೆ. ಕೆಲವು ಜನ ತಮ್ಮ ನೆನಪಿಗಾಗಿ ಹಚ್ಚೆ ಹಾಕಿಸುವುದು ಮತ್ತು ಹಲ್ಲಿಗೆ ಹಲ್ಲಿಟ್ಟು ಹಾಕಿಸುವುದು ರೂಢಿಗತ ವಿದ್ಯಮಾನವಾಗಿತ್ತು. “ಸತ್ತಾಗ ನಮ್ಮ ಜೊತೆಗೆ ಯಾರೂ ಬರಲ್ಲ… ಬರೋದೊಂದೇ ಹಚ್ಚೆ ಹಲ್ಲಿಟ್ಟು” ಎಂಬ ಲೋಕರೂಢಿಯ ಮಾತು ಜನಜನಿತವಾಗಿತ್ತು. ಇವತ್ತಿನ ಹೊಸ ತಲೆಮಾರಿನ ಜನರಿಗೆ ಹಲ್ಲಿಟ್ಟು ಅಂದ್ರೆ ಗೊತ್ತೇ ಇಲ್ಲ. ಹಲ್ಲಿಟ್ಟು ಕಣ್ಮರೆಯಾಗಿ ರಾಕ್ಷಸ ಸ್ವರೂಪಿಯಾದ ಟ್ಯಾಟೂ ಸಂಸ್ಕೃತಿ ಎಲ್ಲೆಲ್ಲೂ ರಾರಾಜಿಸುತ್ತಿದೆ. ಕವಿಗಳು ಹೆಣ್ಣಿನ ಚಿತ್ತಾಕರ್ಷಕ ಹಲ್ಲುಗಳನ್ನು ದಾಳಿಂಬೆ ಬೀಜಗಳಿಗೆ ಹೋಲಿಸಿದ್ದಾರೆ. ಕೆಂಪು ದಾಳಿಂಬೆ ಬೀಜಗಳನ್ನು ಮತ್ತು ಬಿಳಿಯ ಹಲ್ಲುಗಳನ್ನು ಹೇಗೆ ಒಂದನ್ನೊಂದು ಹೋಲಿಸಿದರೋ ಕಾಣೆ. ಹಲ್ಲಿಟ್ಟು ಹಾಕಿಸಿಕೊಂಡು ಕರ್ರಗೆ ಗಿಲಾವು ಮಾಡಿಕೊಂಡ ಹಲ್ಲುಗಳಂತೂ ಸೀತಾಫಲ ಅಥವಾ ಕಲ್ಲಂಗಡಿ ಹಣ್ಣಿನ ಬೀಜಗಳಂತೆ ಕರ್ರಗೆ ಕಾಣಿಸುತ್ತವೆ.

ಹಿಂದೆ ಪರಕೀಯರು ಮತ್ತು ಕುಲೀನ ರಾಜಮಹಾರಾಜರು ಆಳ್ವಿಕೆ ಮಾಡುತ್ತಿದ್ದ ಕಾಲದಲ್ಲಿ ತಳಸ್ತರ ಸಾಮಾಜಿಕ ವಲಯಗಳ ಹೆಣ್ಣಿನ ಮೇಲೆ ನಡೆಯುತ್ತಿದ್ದ ಶೋಷಣೆಯನ್ನು ತಡೆಗಟ್ಟಲು ಹಲ್ಲಿಟ್ಟಿನ ಗಿಲಾವು ಮಾಡಿಸಿಕೊಳ್ಳುವ ಉಪಾಯವನ್ನು ಮಹಿಳೆಯರು ಕಂಡುಕೊಂಡಿದ್ದರೆಂಬ ಅಭಿಪ್ರಾಯ ಚಾಲ್ತಿಯಲ್ಲಿದೆ. ಈ ಅಭಿಪ್ರಾಯವನ್ನು ಅಷ್ಟಾಗಿ ಒಪ್ಪಲು ಸಾಧ್ಯವಿಲ್ಲ. ಯಾಕೆಂದರೆ ಹಲ್ಲಿಟ್ಟು ಹಾಕಿಕೊಳ್ಳುವುದು ವಿಶ್ವಾದ್ಯಂತ ರೂಢಿಯಲ್ಲಿದ್ದ ಪದ್ದತಿಯಾಗಿತ್ತು. ಕೆಲವು ಆದಿವಾಸಿಗಳು ಮತ್ತು ದುಡಿಯುವ ವರ್ಗಗಳ ಮಹಿಳೆಯರಲ್ಲಿ ಈ ಪದ್ದತಿ ಹೆಚ್ಚು ಚಾಲ್ತಿಯಲ್ಲಿತ್ತು. ಹಲ್ಲಿಟ್ಟನ್ನು ಹಾಕಿಸಿಕೊಂಡು ಹಲ್ಲು ಸವಕಳಿ, ಹುಳುಕಲ್ಲು, ದಂತಕುಳಿ, ಸದುವಲ್ಲು, ವಸಡು ಬಾಧೆ, ಹಲ್ಲು ಕೀಸುಗಟ್ಟುವಿಕೆ ಆಗದಂತೆ ಶಾಶ್ವತವಾಗಿ ದಂತ ರಕ್ಷಣೆ ಮಾಡಿಕೊಳ್ಳುವ ಹಾಗೂ ಮಿರುಗುವ ಕಡುಕಪ್ಪು ದಂತಕಾಂತಿಯನ್ನು ಹೊಂದುವ ಸಾಂಪ್ರದಾಯಿಕತೆ ಮತ್ತು ವೈಜ್ಞಾನಿಕತೆಗಳೇ ಹಲ್ಲಿಟ್ಟು ಹಾಕಿಸಿಕೊಳ್ಳುವುದರ ಹಿಂದಿನ ಅಸಲಿ ಕಾರಣವಿರಬೇಕು ಅನ್ನಿಸುತ್ತಿದೆ. ಹಲ್ಲಿಟ್ಟು ಬಳಸಿ ತೊಳೆದ ಬಾಯಿಯು ಸ್ವಚ್ಛವಾಗಿಯೂ ತಾಜಾತನದಿಂದಲೂ ಇರುವುದರಿಂದ ದುರ್ವಾಸನೆಯಿಂದ ಮುಕ್ತವಾಗಿ ಒಳ್ಳೆಯ ಪರಿಮಳ ತುಂಬಿಕೊಳ್ಳುತ್ತದೆಂಬುದು ಹಲ್ಲಿಟ್ಟು ಹಾಕಿಸಿಕೊಂಡವರ ಅನುಭವದ ಮಾತು. ಹಲ್ಲಿಟ್ಟಿನ ಅತಿಯಾದ ಬಳಕೆಯು ಆರೋಗ್ಯದ ಮೇಲೆ ಅಡ್ಡಪರಿಣಾಮವನ್ನು ಬೀರುತ್ತದೆಂದು ಹೇಳುತ್ತಾರೆ.

ಈಗಿನ ಆಧುನಿಕ ತರುಣಿಯರಿಗೆ ಬಣ್ಣಗುರುಡುತನ ಜಾಸ್ತಿ. ಸಹಜ ರೂಪವತಿಯರೂ ಕೂಡ ತಮ್ಮ ತುಟಿಗಳಿಗೆ ಬಣ್ಣ ಹಚ್ಚಿಕೊಳ್ಳದೆ ಮನೆಯಿಂದಾಚೆಗೆ ಹೋಗಲು ನಿರಾಕರಿಸುತ್ತಾರೆ. ಅವರಿಗೆ ಬಿಳಿ ಹಲ್ಲುಗಳ ಮೇಲೆಯೇ ಹೆಚ್ಚು ವ್ಯಾಮೋಹ. ಹಲ್ಲಿಟ್ಟಾಕಿ ಹಲ್ಲು ಕಪ್ಪಾಗಿಸಿಕೊಳ್ಳಲು ಇವರು ಒಪ್ಪುವುದಿಲ್ಲ. ಹಲ್ಲು ಮತ್ತು ವಸಡಿನ ಆರೋಗ್ಯಕ್ಕಿಂತಲೂ ಹಲ್ಲು ಬೆಳ್ಳಗಿರೋದು ಮುಖ್ಯ. ಆದುದರಿಂದಲೇ ಈಗಿನವರು ಹಲ್ಲುಗಳು ಥಳಥಳಿಸುವಂತೆ ಬ್ಲೀಚ್ ಮಾಡಿಸಿಕೊಳ್ಳುತ್ತಾರೆ. ಇಂತಹ ಸೌಂದರ್ಯ ವ್ಯಸನದಿಂದ ಸನ್ಯಾಸಿಗಳೂ ಕೂಡಾ ಮುಕ್ತರಾಗಿಲ್ಲವೆಂಬುದಕ್ಕೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರಾವಧೂತ ಮಠದ ಶ್ರೀ ನಂಜಾವಧೂತ ಸ್ವಾಮೀಜಿಯು ತನ್ನ ಹಲ್ಲುಗಳಿಗೆ ಬ್ಲೀಚ್ ಮಾಡಿಸಿಕೊಂಡಿದ್ದಾರೆ. ಆಗಿಂದಾಗ್ಗೆ ಪುರುಷರ ಪಾರ್ಲರ್ ಗೆ ಹೋಗುವ ಪಾರ್ಲರ್ ಸ್ವಾಮೀಜಿಯಾಗಿ ಹೆಸರುವಾಸಿಯಾಗಿದ್ದಾರೆ. ಕೆಲವರಂತೂ ತಮ್ಮ ಹಲ್ಲುಗಳಿಗೆ ಗೋಲ್ಡನ್ ಓವರ್ ಕೋಟ್ ಮಾಡಿಸಿಕೊಂಡಿದ್ದಾರೆ. ಅದು ಅವರವರ ವಯಕ್ತಿಕ ಅಭಿರುಚಿಯೂ ಸ್ವಾತಂತ್ರ್ಯವೂ ಆಗಿರುತ್ತದೆ.

ಹಲ್ಲಿಟ್ಟನ್ನು ದಾಲ್ಚುಣ್ಣ- ಕಾಚು – ಹಸಿರೆಲೆಗಳ ರಸ- ಗಿಡಮೂಲಿಕೆಯ ಪುಡಿಗಳಿಂದ ತಯಾರಿಸುತ್ತಾರೆಂದು ನನ್ನ ಅಪ್ಪ ಹೇಳುತ್ತಿದ್ದದ್ದು ನನಗಿಂದಿಗೂ ನೆನಪಿಗಿದೆ. ನೈಸರ್ಗಿಕ ಸಸ್ಯ ಮೂಲಿಕಾಂಶಗಳಿಂದ ತಯಾರಿಸಲಾದ ಹಲ್ಲಿಟ್ಟು ಹಲ್ಲುಗಳಿಗೆ ಸುರಕ್ಷಿತವೂ ಉಪಯುಕ್ತವೂ ಆಗಿದೆ. ಅದು ಹಲ್ಲುಗಳನ್ನು ಆಳವಾಗಿ ಕಪ್ಪುಗೊಳಿಸುವುದು ಮಾತ್ರವಲ್ಲದೆ ಹಲ್ಲುಗಳ ಕಲೆಗಳು ಮತ್ತೆ ರೂಪುಗೊಳ್ಳುವುದನ್ನು ತಡೆಗಟ್ಟುತ್ತದೆ. ಹಲ್ಲು ಕಪ್ಪು ಮಾಡುವಿಕೆಯು ಧೂಮಪಾನ ಮತ್ತು ಚಹಾ ಅಥವಾ ಕಾಫಿಯನ್ನು ಕುಡಿಯುವುದರಿಂದ ಉಂಟಾದ ಕಲೆಗಳನ್ನು ಕಾಣದ ರೀತಿಯಲ್ಲಿ ಮರೆಮಾಚುತ್ತದೆ, ಹಳದಿ ಹಲ್ಲುಗಳನ್ನು ಹಲ್ಲಿಟ್ಟು ಸಂಪೂರ್ಣವಾಗಿ ಕಪ್ಪುಗೊಳಿಸುತ್ತದೆ. ಈ ಪುಡಿಯು ಕಪ್ಪು ಬಣ್ಣದ ಪರಿಣಾಮವನ್ನು ವ್ಯಕ್ತಿಯ ಜೀವಿತಾಂತ್ಯದವರೆಗೂ ಕಾಪಾಡಿಕೊಳ್ಳುವಂತಹ ಉತ್ತಮ ಗುಣಮಟ್ಟವನ್ನು ಹೊಂದಿದ್ದು ಸರಳ ದೇಶಿ ತಂತ್ರಜ್ಞಾನದಿಂದ ರೂಪಿಸಲಾಗಿರುತ್ತದೆ. ಅದು ಯಾವುದೇ ಹೊಸ ಬಣ್ಣದ ವರ್ಣದ್ರವ್ಯವನ್ನು ಹಲ್ಲುಗಳಿಗೆ ಅಂಟಿಕೊಳ್ಳದಂತೆ ತಡೆಯುತ್ತದೆ.

ಹಲ್ಲುಗಳನ್ನು ಕಪ್ಪಾಗಿಸಿಕೊಳ್ಳುವುದು ಚೀನಾ, ಪೆಸಿಫಿಕ್ ದ್ವೀಪಗಳು ಮತ್ತು ಆಗ್ನೇಯ ಏಷ್ಯಾದ ಜನರಲ್ಲಿ ಇಂದಿಗೂ ವಿರಳವಾಗಿ ರೂಢಿಗಿದೆ. ದಕ್ಷಿಣ ಚೀನಾದಲ್ಲಿ ಮತ್ತು ಜಪಾನ್ ದೇಶದಲ್ಲಿ ಹಲ್ಲು ಕಪ್ಪಾಗಿಸಿಕೊಳ್ಳುವ ಸಂಪ್ರದಾಯಬದ್ಧ ಆಚರಣೆಗಳಿವೆ. ಹಲ್ಲು ಗಿಲಾವು ಮಾಡಿಕೊಳ್ಳುವುದನ್ನು ಪ್ರಬುದ್ಧತೆ, ಸೌಂದರ್ಯ ವರ್ಧನೆ ಮತ್ತು ನಾಗರಿಕತೆಯ ಸಂಕೇತವೆಂದು ನಂಬಲಾಗಿದೆ. ಕಪ್ಪಾದ ಹಲ್ಲುಗಳು ಮನುಷ್ಯರನ್ನು ಪ್ರಾಣಿಗಳಿಂದ ಪ್ರತ್ಯೇಕಿಸುತ್ತವೆಂಬುದು ಮತ್ತೊಂದು ಸಾಮಾನ್ಯ ನಂಬಿಕೆ. ಇದು ಮುಖ್ಯವಾಗಿ ವಯಸ್ಸಾದ ಮಹಿಳೆಯರಲ್ಲಿ ಪ್ರಚಲಿತದಲ್ಲಿದೆ. 1938 ರಲ್ಲಿ ನಡೆದ ಫ್ರೆಂಚ್ ಸಮೀಕ್ಷೆಯೊಂದರ ಪ್ರಕಾರ ವಿಯೆಟ್ನಾಂ ದೇಶದ 80% ಗ್ರಾಮಾಂತರ ಜನಪದರು ಹಲ್ಲುಗಳನ್ನು ಕಪ್ಪಾಗಿಸಿಕೊಂಡಿದ್ದಾರೆ. ವಿಯೆಟ್ನಾಂ ಮತ್ತು ಇತರ ಆಗ್ನೇಯ ಏಷ್ಯಾದ ಮಧ್ಯಕಾಲೀನ ರಾಜರು ಸಹ ಹಲ್ಲುಗಳನ್ನು ಕಪ್ಪಾಗಿಸಿಕೊಂಡಿದ್ದರು. ವಸಾಹತುಶಾಹಿ ಯುಗದಲ್ಲಿ ಪಾಶ್ಚಾತ್ಯ ಸೌಂದರ್ಯದ ಮಾನದಂಡಗಳು ಪರಿಚಯವಾದ ನಂತರದ ಕಾಲದಲ್ಲಿ ಹಲ್ಲಿಟ್ಟು ಗಿಲಾವು ಸಂಸ್ಕೃತಿಯು ಕಣ್ಮರೆಯಾಗುತ್ತಾ ಬಂತು.

ದಕ್ಷಿಣ ಭಾರತದಲ್ಲಿ ಹಲ್ಲುಗಳನ್ನು ಕಪ್ಪಾಗಿಸುವಿಕೆಯು ಲೈಂಗಿಕ ಪರಿಪಕ್ವತೆಗೆ ಸಂಬಂಧಿಸಿದ ಜೀವನ ಚಕ್ರ ಘಟನೆಯಾಗಿ ಮತ್ತು ಲೈಂಗಿಕ ಪ್ರಚೋದಕವಾಗಿ ದೇವದಾಸಿ ಮಹಿಳೆಯರಲ್ಲಿ ಹೆಚ್ಚಾಗಿ ಅಭ್ಯಾಸಕ್ಕೆ ಬಂದಂತಿದೆ. ತಾಂಬೂಲ ಸೇವನೆ ಮತ್ತು ಹಲ್ಲಿಟ್ಟು ಮೆರುಗು ಆರೋಗ್ಯಕರವಾದ ಹಲ್ಲುಗಳನ್ನು ಕಾಪಾಡಿಕೊಳ್ಳುವುದರ ಜೊತೆಗೆ ಲೈಂಗಿಕ ಆಕರ್ಷಣೆಯನ್ನು ಹೆಚ್ಚಿಸಲು ಸಹಕಾರಿ ಎಂದು ನಂಬಲಾಗಿದೆ. ಏಷ್ಯಾದ ಇತಿಹಾಸದುದ್ದಕ್ಕೂ ಹಲ್ಲು ಕಪ್ಪಾಗಿಸುವ ಸಾಂಪ್ರದಾಯಿಕ ಜನಪದ ಸಂಸ್ಕೃತಿಯು ಸಾಕಷ್ಟು ಜನಪ್ರಿಯವಾಗಿದೆ.

ಫೋಟೋ : ಅಂತರ್ಜಾಲ
ವಿಡಿಯೋ ನೆರವು : ಅಂಬಿಕಾ ವಾಸುದೇವ್
ಪ್ರಸ್ತುತ ಪೋಸ್ಟ್ ನ ವಿಡಿಯೋ ವಕ್ತೃ : ಸಾವಂತಮ್ಮ (ಸು.70), ಹೆರಗು ಗ್ರಾಮ, ದುದ್ದ ಹೋಬಳಿ, ಹಾಸನ ತಾಲ್ಲೂಕು, ಹಾಸನ ಜಿಲ್ಲೆ.

ಡಾ.ವಡ್ಡಗೆರೆ ನಾಗರಾಜಯ್ಯ
8722724174

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ

Published

on

  • ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ ಸಾಮರ್ಥ್ಯ ಅವನಿಗಿದೆ.

ಈ ಶಕ್ತಿಯ ಮೂಲಕ ತುಂಬಾ ಶ್ರೇಷ್ಟನಾಗಬೇಕಾದ ಮಾನವ ನಗರೀಕರಣ, ಕೈಗಾರಿಕೀಕರಣ, ಪಾಶ್ಚಾತ್ಯೀಕರಣದ ಪ್ರಭಾವದಿಂದ ಪ್ರೇರಿತನಾಗಿ ಮೂಲ ಸಂಸ್ಕೃತಿಯನ್ನು ಮರೆತು ಮೃಗೀಯ ವರ್ತನೆಗೆ ದಾಸನಾಗಿದ್ದಾನೆ. ಪ್ರಸ್ತುತ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, 20ನೇ ಶತಮಾನದಿಂದೀಚೆಗೆ ಜಗತ್ತನ್ನೇ ತಲ್ಲಣಗೊಳಿಸುವ ಸಾಮಾಜಿಕ ಪಿಡುಗುಗಳಾದ ಬಡತನ, ಭಿಕ್ಷಾಟನೆ, ನಿರುದ್ಯೋಗ, ವರದಕ್ಷಿಣೆ, ಅಪರಾಧ ಮಾದಕ ವಸ್ತು ವ್ಯಸನವು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ.

ಈ ಸಮಸ್ಯೆಗಳನ್ನು ಪರಿಹರಿಸಬೇಕಾಧ ಯುವಜನತೆ ಇಂತಹ ದುಶ್ಚಟಗಳ ಸೆಲೆಯಲ್ಲಿ ಸಿಕ್ಕು ತಮ್ಮ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ.
ಯುವಶಕ್ತಿಯೇ ದೇಶದ ಶಕ್ತಿಯಾಗಿದ್ದು ಭವ್ಯಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾದ ಯುವಜನತೆ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಅಂಧಕಾರದಲ್ಲಿ ಜೀವನ ನಡೆಸುತ್ತ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವುದು ಆಘಾತದ ವಿಷಯ.

ಜೋಸೆಫ್ ಜ್ಯೂಲಿಯನ್ ರವರ ಪ್ರಕಾರ ಮಾದಕ ವಸ್ತುಗಳೆಂದರೆ ಯಾವುದೇ ರಾಸಾಯನಿಕ ವಸ್ತುವಾಗಿದ್ದು ಅದರ ಸೇವನೆಯಿಂದ ದೈಹಿಕ ಕಾರ್ಯ, ಮನಸ್ಥಿತಿ, ಗ್ರಹಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪದೇ ಪದೇ ಬಳಸುವುದರಿಂದ ವ್ಯಕ್ತಿ ಮಾದಕ ವಸ್ತು ವ್ಯಸನಿಯಾಗುತ್ತಾನೆ. ಮಾದಕ ವಸ್ತುವು ಮನಸ್ಸಿಗೆ ಗೊಂದಲವನ್ನು ತರುವ ಪದಾರ್ಥವಾಗಿದ್ದು ಅಮಲು ರೋಗವಾಗಿದೆ. ಭಾರತದ ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಇದರ ಬಳಕೆ ಕಂಡುಬರುತ್ತದೆ. ಶ್ರೀಮಂತರು, ಮಧ್ಯಮ ವರ್ಗದವರು, ವಿದ್ಯಾವಂತರು, ಯುವಕರು, ಮಹಿಳೆಯರು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯವರು ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ವಿದ್ಯಾರ್ಥಿಗಳಲ್ಲಿ ಶೇ 10 ರಷ್ಟು ಒಂದಿಲ್ಲೊAದು ದುಶ್ಚಟಕ್ಕೆ ಒಳಗಾಗಿದ್ದು ಅದರಲ್ಲಿ 14 ರಿಂದ 22 ರ ವಯೋಮಾನದವರು ಹೆಚ್ಚಿದ್ದಾರೆ. ಸ್ವಾತಂತ್ಯç ಪೂರ್ವದಲ್ಲಿ ಶೇ 2 ರಷ್ಟಿದ್ದ ವ್ಯಸನಿಗಳು ಪ್ರಸ್ತುತ ಶೇ 30 ಕ್ಕಿಂತ ಹೆಚ್ಚಿದ್ದಾರೆ. ಜಗತ್ತಿನ ಸುಮಾರು 20 ಕೋಟಿಯಷ್ಟು ಇರುವ ಮಾದಕ ವ್ಯಸನಿಗಳಲ್ಲಿ ಭಾರತದಲ್ಲಿ ಶೇ 7.5 ಕೋಟಿ ವ್ಯಸನಿಗಳಿದ್ದಾರೆಂದು ಅಂದಾಜಿಸಲಾಗಿದೆ.

ನಶೆಯ ಅಲೆ ಸಾವಿನ ಬಲೆಯಾಗುತ್ತಿದ್ದರೂ ಕೂಡ ಈ ದೇಶದಲ್ಲಿ ಊಟವಿಲ್ಲದೆ ಸಾಯುವವರ ಸಂಖ್ಯೆಗಿAತಲೂ ಚಟವನ್ನು ಬೆಳೆಸಿಕೊಂಡು ಸಾಯುವವರು ಹೆಚ್ಚಾಗಿದ್ದಾರೆ.
ಮಾದಕ ವಸ್ತು ಬಳಸುವ ಆತಂಕದ ರಾಷ್ಟçಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿರುವವರಲ್ಲಿ ವಿದ್ಯಾರ್ಥಿಗಳನ್ನೂ ಒಳಗೊಂಡAತೆ ಯುವಜನತೆ ಹೆಚ್ಚಾಗಿದ್ದು ಇದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ದುಶ್ಚಟಗಳ ಆರಂಭಕ್ಕೆ ಕಾರಣಗಳು

• ಕ್ಷಣಕಾಲ ಸುಖ ಅನಂತಕಾಲ ದು:ಖಕ್ಕೆ ಕಾರಣ ಎನ್ನುವುದು ಗೊತ್ತಿದ್ದೂ ಅಫೀಮು, ಹೆರಾಯಿನ್, ಬೀಡಿ, ಸಿಗರೇಟು, ಮದ್ಯಪಾನ ಮುಂತಾದ ದುಶ್ಚಟಗಳಿಗೆ ವಿದ್ಯಾವಂತ ಯುವಕರೇ ಬಲಿಯಾಗುತ್ತಿದ್ದಾರೆ.
• ಉಲ್ಲಾಸಕ್ಕಾಗಿ, ಫ್ಯಾಷನ್‌ಗಾಗಿ, ದುರ್ಬಲ ಮನಸ್ಸು, ಏಕಾಂಗಿತನ, ಒತ್ತಡ ನಿವಾರಣೆ ಮಾಡಿಕೊಳ್ಳಲು
• ನೋವು, ದು:ಖಕ್ಕೆ ಪರಿಹಾರವೆಂಬ ಭ್ರಮೆಗೆ ಒಳಗಾಗಿ ತನಗೆ ಅರಿವಿಲ್ಲದಂತೆ ದೊಡ್ಡ ಕಂದಕಕ್ಕೆ ಬಿದ್ದು ನರಳಾಡುವಂತ ಸಂದರ್ಭ ತಂದುಕೊಂಡು ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗುತ್ತಿದ್ದಾರೆ. ತೆರಣಿಯ ಹುಳು ತಾನು ಸುತ್ತಿದ ಬಲೆಯಲ್ಲಿ ತಾನೇ ಬಿದ್ದು ಹೊರಳಾಡುವಂತೆ ಅವರ ಪರಿಸ್ಥಿತಿಯಾಗಿದೆ.

ದುಶ್ಚಟಗಳಿಂದಾಗುವ ಪರಿಣಾಮಗಳು

• ದೇಹ ಮತ್ತು ಮನಸ್ಸಿನ ಸಮತೋಲನ ಕಳೆದುಕೊಳ್ಳುವುದು.
• ವ್ಯಕ್ತಿ ತನ್ನನ್ನು ದಹಿಸಿಕೊಳ್ಳುವುದರ ಜೊತೆಗೆ ಕುಟುಂಬದ ನೆಮ್ಮದಿಗಿ ಭಂಗ ತರುತ್ತಾನೆ.
• ಕುಟುಂಬ, ಸಮಾಜದಿಂದ ನಿಂದನೆಗೆ ಒಳಗಾಗುವನು.
• ಜ್ಞಾನೇಂದ್ರಿಯಗಳ ಮೇಲೆ ಹತೋಟಿ ಕಳೆದುಕೊಳ್ಳುವನು
• ಸಮಾಜಬಾಹಿರ ಚಟುವಟಿಕೆಗಳಾದ ಕಳ್ಳತನ, ಅತ್ಯಾಚಾರ, ಕೊಲೆ ಇಂತಹ ದುಷ್ಕೃತ್ಯಗಳನ್ನು ಮಾಡುವನು.
• ದಾಂಪತ್ಯದಲ್ಲಿ ವಿರಸವುಂಟಾಗಿ ವಿಚ್ಚೇದನಗಳಾಗುವ ಸಾಧ್ಯತೆ.
• ರಸ್ತೆ ಅಪಘಾತಗಳಲ್ಲಿ ಶೇ 1/3 ರಷ್ಟು ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯಿಂದಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರು ಬೆಂಕಿ ದೇಹವನ್ನು ನಾಶ ಮಾಡಿದರೆ ಕುಡಿತ ದೇಹ ಮತ್ತು ಆತ್ಮಗಳೆರಡನ್ನೂ ನಾಶ ಮಾಡುತ್ತದೆ ಎಂದಿದ್ದಾರೆ.

ಪರಿಹಾರ ಕ್ರಮಗಳು

• ಮಾದಕ ವಸ್ತುಗಳ ಹಿಡಿತಕ್ಕೆ ಸಿಲುಕದೆ ಅದರಿಂದ ದೂರವಿರುವುದು.
• ಮಾದಕ ವಸ್ತು ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು.
• ಸಹೋದ್ಯೋಗಿ, ಸ್ನೇಹಿತರಿಗೆ ತಿಳುವಳಿಕೆ ನೀಡುವುದು.
• 18 ವರ್ಷ ವಯಸ್ಸಿನವರೆಗೂ ಪೋಷಕರು ಮಕ್ಕಳ ಬಗ್ಗೆ ಗಮನ ನೀಡಿ ಮಾರ್ಗದರ್ಶನ ಮಾಡುವುದು.
• ಶಾಲೆ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಳಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವುದು.
• ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಆರೋಗ್ಯಕರವಾದ ಹವ್ಯಾಸಗಳನ್ನು ಬೆಳೆಸುವುದು.

ಭಾರತ ಸರ್ಕಾರವು 1951ರಲ್ಲಿ ಅಪಾಯಕಾರಿ ವಸ್ತುಗಳ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ಮಾದಕ ವಸ್ತು ತಯಾರಿಕೆ, ಸಾಗಾಣಿಕೆ, ಮಾರಾಟ ಮತ್ತು ಬಳಕೆಯ ಮೇಲೆ ನಿರ್ಬಂಧ ಹೇರಿದೆ. 1985 ರಲ್ಲಿ ಡ್ರಗ್ಸ್ ಆಕ್ಟ್ ಜಾರಿಗೊಳಿಸಿದೆ. ಈ ಕಾಯ್ದೆ ಮಾದಕ ವಸ್ತುಗಳ ಕಳ್ಳ ವ್ಯಾಪಾರದಲ್ಲಿ ತೊಡಗಿದ ಅಪರಾಧಿಗಳಿಗೆ ಕನಿಷ್ಠ 10 ರಿಂದ 20 ವರ್ಷ ಕಠಿಣ ಶಿಕ್ಷೆ, 1 ರಿಂದ 2 ಲಕ್ಷದವರೆಗೆ ದಂಡ ಘೋಷಿಸಿದೆ.

ಡಿಸೆಂಬರ್-7 1987 ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟುವ ನಿಯಮಾವಳಿಗಳ ಅಂಗೀಕಾರವನ್ನು ಹಲವಾರು ರಾಷ್ಟçಗಳು ಒಪ್ಪಿಕೊಂಡು ವಿಶ್ವದಾದ್ಯಂತ ಮಾದಕ ವಸ್ತುಗಳ ದುರ್ಬಳಕೆ ನಿಯಂತ್ರಿಸುವ ತೀರ್ಮಾನವನ್ನು ಮಾಡಿದವು.

ಜೂನ್-26 ವಿಶ್ವಸಂಸ್ಥೆಯು ಮಾದಕ ವಸ್ತು ದುರ್ಬಳಕೆ ಮತ್ತು ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನವನ್ನು ಆಚರಿಸಿ ಈ ಸಮಸ್ಯೆಯ ನಿಯಂತ್ರಣ ಮತ್ತು ಪರಿಹಾರದ ಕುರಿತು ನಿವಾರಣೆಯಲ್ಲಿ ಸಮುದಾಯ, ಸಮವಯಸ್ಕರು, ಕುಟುಂಬ, ಸಂಘ ಸಂಸ್ಥೆಗಳವರು ಪ್ರಮುಖ ಪಾತ್ರ ವಹಿಸಬೇಕಾಗಿದೆಎಂದು ಮನವರಿಕೆ ಮಾಡಿತು. ಮಾದಕ ವಸ್ತು ದುರ್ಬಳಕೆ ಒಂದು ಮಾನಸಿಕ, ಸಾಮಾಜಿಕ ಸಮಸ್ಯೆಯಾಗಿದ್ದು ಇಡೀ ಸಮುದಾಯವೇ ಇದರ ನಿವಾರಣೋಪಾಯದಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿತು.

ವ್ಯಕ್ತಿ ಒಮ್ಮೆ ಈ ಚಕ್ರವ್ಯೂಹದಲ್ಲಿ ಸಿಲುಕಿಕೊಂಡರೆ ಹೊರಬರುವುದು ಕಷ್ಟಸಾಧ್ಯ. ಆರೋಗ್ಯ ಜೀವನ ನಡೆಸಲು ಮಾದಕ ವಸ್ತುಗಳನ್ನು ತ್ಯಜಿಸಿ ಸುಂದರ ಜೀವನ ನಡೆಸಿ ಎಂಬ ಸಂದೇಶ ಸಾರುತ್ತ ನಾವೆಲ್ಲರೂ ಸಂಘಟಿತರಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದಾಗ ದುಶ್ಚಟಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. (ಜೂನ್-26 ರಂದು ಅಂತರರಾಷ್ಟೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ದಿನ ತನ್ನಿಮಿತ್ತ ಈ ಲೇಖನ – ಡಾ. ಗೀತಾ ಬಸವರಾಜು,ಉಪನ್ಯಾಸಕರು,ಎ.ವಿ.ಕೆ ಮಹಿಳಾ ಕಾಲೇಜು,ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹಿರಿಯ ನಾಗರಿಕರಿಗಿರುವ ಸರ್ಕಾರಿ ಸೌಲಭ್ಯಗಳೇನು..? ; ಮಾಹಿತಿಗೆ ಸಂಪರ್ಕಿಸಿ

Published

on

ಸುದ್ದಿದಿನ,ದಾವಣಗೆರೆ:ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ ವತಿಯಿಂದ ಹಾಗೂ ಇತರೆ ಇಲಾಖೆಗಳಿಂದ ಹಿರಿಯ ನಾಗರಿಕರಿಗೆ ದೊರೆಯುತ್ತಿರುವ ಸೌಲಭ್ಯಗಳ ಅರಿವು ಮೂಡಿಸುವ ಮತ್ತು ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುವ ಉದ್ದೇಶದಿಂದ ತಾಲ್ಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಿಂದ ಹಿರಿಯ ನಾಗರಿಕರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಬಹುದು.

ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರ ವಿವರ:ಹೊನ್ನಾಳಿ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಶೈಲಜಾ ಕೆ.ಎಂ. ಮೊ.ಸಂ: 9482158005, ಚನ್ನಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಕೆ ಸುಬ್ರಮಣ್ಯಂ ಮೊ.ಸಂ: 9945738141, ಜಗಳೂರು ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಎಂ ಕೆ ಶಿವನಗೌಡ ಮೊ.ಸಂ: 9902105734 ಹರಿಹರ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಶಶಿಕಲಾ ಟಿ. ಮೊ.ಸಂ: 9945458058, ದಾವಣಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಚನ್ನಪ್ಪ. ಬಿ ಮೊ.ಸಂ: 9590829024 ಸಂಪರ್ಕಿಸಬೇಕೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ|| ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇವರೇ ನೋಡಿ ಟ್ವೀಟ್ಟರ್, ಪೇಸ್ಬುಕ್ ಮೀಮ್ಸ್ ಸ್ಟಾರ್ ಕ್ಸೇವಿಯರ್ ಉರ್ಫ್ ಓಂಪ್ರಕಾಶ್

Published

on

  • ~ ಸಿದ್ದು ಸತ್ಯಣ್ಣನವರ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದವರಿಗೆ ನೋಡಿದ ಕೂಡಲೇ ನಗು ಉಕ್ಕಿಸಿ, ಉಲ್ಲಸಿತಗೊಳಿಸುವ ಕ್ಸೇವಿಯರ್ ಮೀಮ್ಸ್ ಗಳ ಪರಿಚಯ ಇದ್ದೇ ಇರುತ್ತದೆ. ಕ್ಸೇವಿಯರ್ ಎಂದರೆ ಯಾರು? ಎಂದು ಹೆಸರೇಳಿದರೆ ಗೊತ್ತಾಗದಿರುವವರು ಅವರ ಫೋಟೊ ನೋಡಿದರೆ ಕೂಡಲೇ ಮುಖದ ಮೇಲೆ ನಗು ಮೂಡಿರುತ್ತದೆ.

ತುಂಟ ಕಾಮೆಂಟ್ ಹಾಗೂ ಹಾಸ್ಯದ ತಿರುಳುಗಳ ಪೋಸ್ಟ್ ಮೂಲಕ ಗಮನ ಸೆಳೆಯುವ‌ ಕ್ಸೇವಿಯರ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಸ್ಯಪ್ರಜ್ಞೆಯಿಂದ ಸಾಕಷ್ಟು ಪ್ರಸಿದ್ಧ. ಕ್ಸೇವಿಯರ್ ಹೆಸರಿನಿಂದ ಜನಪ್ರಿಯರಾದ ಇವರ ನಿಜವಾದ ಹೆಸರು ಓಂಪ್ರಕಾಶ್. ಅಸಂಖ್ಯ ಟ್ವೀಟರ್, ಫೇಸ್ಬುಕ್ ಪ್ರೋಫೈಲ್ ಗಳಲ್ಲಿ ಓಂಪ್ರಕಾಶ್ ಅವರ ಫೋಟೊ ಕ್ಸೇವಿಯರ್ ಎಂದೇ ಹಂಚಲ್ಪಟ್ಟಿದೆ.

ಮೀಮ್ಸ್ ಸ್ಟಾರ್ ಎಂದೇ ಪ್ರಖ್ಯಾತರಾಗಿರುವ ಇವರು ಮಧ್ಯವಯಸ್ಕ ಭಾರತೀಯರು ಹೆಚ್ಚಾಗಿ ಇಷ್ಟಪಡುವ ದಪ್ಪಮೀಸೆಯ ಫೋಟೊ ಹೊಂದಿರುವ ಪ್ರೋಫೈಲ್ ಮೂಲಕ ಟ್ವೀಟ್ಟರ್ ಮತ್ತು ಫೇಸ್ಬುಕ್ಕಿನ ಸಾಕಷ್ಟು ಟ್ರೋಲ್, ಮೀಮ್ ಪೇಜುಗಳಲ್ಲಿ ಕಾಣಸಿಗುತ್ತಾರೆ. ಕ್ಸೇವಿಯರ್ ಅಂಕಲ್, ಕ್ಸೇವಿಯರ್ ಮೀಮ್ಸ್, ಕ್ಸೇವಿಯರ್ ಪಾಂಡಾ, ಕ್ಸೇವಿಯರ್ ಮಿಮ್ ಬಾಯ್ ಹೀಗೆ ಇವರ ಹೆಸರಿನ ಮೂಲಕ ಸಾವಿರಾರು ಮೀಮ್ಸ್ ಮೇಕಿಂಗ್ ಪ್ರೋಫೈಲ್ ಗಳು ಲಕ್ಷಾಂತರ ಹಿಂಬಾಲಕರನ್ನು ಹೊಂದಿವೆ. ಮೀಮ್ಸ್ ಗಾಗಿಯೇ ವಿನ್ಯಾಸಗೊಳಿಸಲಾಗಿರುವ, ವಿದೇಶಗಳಲ್ಲೂ ಕೋಟ್ಯಂತರ ಜನರು ಹಿಂಬಾಲಿಸುವ 9gag ಎಂಬ ವೆಬ್ಸೈಟಿನಲ್ಲಿ ಇವರ ಸಾಕಷ್ಟು ಮೀಮ್ಸ್ ಗಳು ಜನಪ್ರಿಯವಾಗಿವೆ. ಫೇಸ್ಬುಕ್, ಟ್ವಿಟ್ಟರ್ ಬಳಸುವವರಿಗೆ ಕ್ಸೇವಿಯರ್ ಹಾಸ್ಯಪ್ರಜ್ಞೆ ಎಂಥದ್ದು ಎಂಬುದನ್ನ ಕೇಳಿದರೆ ನಗುವೇ ಅವರ ಉತ್ತರವಾಗಿರುತ್ತದೆ ಎಂಬುದಕ್ಕೆ ಸಹ ಚೆಂದದ ಮೀಮ್ ಒಂದಿದೆ.

ಕಾನ್ಪುರ ಐಐಟಿ ಸಿಬ್ಬಂದಿಯಾದ ಓಂಪ್ರಕಾಶ್ ಅವರು ಅಲ್ಲಿನ ಭೌತಶಾಸ್ತ್ರ ವಿಭಾಗದ ತಾಂತ್ರಿಕ ಮೇಲ್ವಿಚಾರಕ ಹುದ್ದೆಯಲ್ಲಿದ್ದಾರೆ. ಕ್ಸೇವಿಯರ್ ಎಂದು ಅವರು ಪ್ರಸಿದ್ಧರಾಗಲು ಕಾರಣ ಅವರ ಅಪರಿಮಿತ ಹಾಸ್ಯಪ್ರಜ್ಞೆಯ ‘ಪಕಾಲು ಪಾಪಿಟೋ’ ಎಂಬ ಕಾಲ್ಪನಿಕ ಗುಮಾಸ್ತನ ಪಾತ್ರವನ್ನು ಸೃಷ್ಟಿಸಿದ್ದಕ್ಕಾಗಿ. ಆ ಗುಮಾಸ್ತನ ಮೊದಲ ಟ್ವೀಟ್ ಟ್ವೀಟ್ಟರಿನಲ್ಲಿ ಹೆಚ್ಚುಕಡಿಮೆ 18 ಸಾವಿರ ರೀಟ್ವೀಟ್ ಆಗಿತ್ತು.

ಟ್ವೀಟ್ಟರ್ ನಿಯಮಗಳ ತಾಂತ್ರಿಕ ಕಾರಣಗಳಿಂದ ಸುಮಾರು ಲಕ್ಷ ಹಿಂಬಾಲಕರಿದ್ದ ಈ ಅಕೌಂಟ್ ಸ್ಥಗಿತಗೊಂಡಿತು. ನಂತರ ಕಾಮಿಕ್ ಮೀಮ್ ಗಳಿಂದ ಆರಂಭದಲ್ಲಿ ಪ್ರಸಿದ್ಧರಾಗಿದ್ದ ಓಂಪ್ರಕಾಶ್ ಅವರು ಕೊನೆಗೆ ಕ್ಸೇವಿಯರ್ ಹೆಸರಿನ ಮೂಲಕ ಮೀಮ್ ಪ್ರಿಯರಿಗೆ ಮನೆಮಾತಾದರು. ಓಂಪ್ರಕಾಶ್ ಅವರು ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಕ್ರಮವಾಗಿ 1.4 ಮಿಲಿಯನ್ ಹಾಗೂ 3 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ‘ಪಕಾಲು ಪಾಪಿಟೋ’ ಅಕೌಂಟ್ ತಾಂತ್ರಿಕವಾಗಿ ಸ್ಥಗಿತಗೊಂಡ ಕಾರಣ ಕ್ಸೇವಿಯರ್ ಎಂಬ ಹೆಸರಿನ ತಮಾಷೆಯ ಮೀಮ್ಸ್ ಮೂಲಕ ಇನ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟ್ಟರ್ ಎಲ್ಲ ಕಡೆಗಳಲ್ಲಿ ಕಾಣಿಸುತ್ತಾರೆ. ( ಸಿದ್ದು ಸತ್ಯಣ್ಣನವರ್ ಅವರ ಫೇಸ್ ಬುಕ್ ಪೇಜ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ4 hours ago

ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ

ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ ಜಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ...

ದಿನದ ಸುದ್ದಿ6 hours ago

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ

ಸುದ್ದಿದಿನ,ಶಿವಮೊಗ್ಗ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜೂ. 29 ರ ಬೆಳಗ್ಗೆ 10 ಗಂಟೆಗೆ ಉದ್ಯೋಗ ಮೇಳವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ....

ದಿನದ ಸುದ್ದಿ8 hours ago

ಟಿಇಟಿ ಪರೀಕ್ಷೆಗೆ ಸಕಲ ಸಿದ್ಧತೆ

ಸುದ್ದಿದಿನ,ದಾವಣಗೆರೆ:ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಟಿಇಟಿ ಜೂನ್ 30 ರಂದು ರಾಜ್ಯಾದ್ಯಂತ ನಡೆಯಲಿದ್ದು ದಾವಣಗೆರೆ ನಗರದ 19 ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು....

ದಿನದ ಸುದ್ದಿ20 hours ago

ವಿದ್ಯಾರ್ಥಿನಿಲಯಗಳಿಗೆ ಬಾಡಿಗೆ ಕಟ್ಟಡಗಳು ಬೇಕಾಗಿದೆ ; ಸಂಪರ್ಕಿಸಿ

ಸುದ್ದಿದಿನ,ದಾವಣಗೆರೆ:ನಗರ ವ್ಯಾಪ್ತಿಯಲ್ಲಿ ಹೊಸದಾಗಿ ಮಂಜೂರಾಗಿರುವ 8 ಮೆಟ್ರಿಕ್ ನಂತರ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ನಗರದಲ್ಲಿ ವಿದ್ಯಾರ್ಥಿನಿಲಯಗಳನ್ನು ನಡೆಸಲು ಕನಿಷ್ಠ 900 ಚದರ ಮೀಟರ್ ವಿಸ್ತಿರ್ಣವುಳ್ಳ ಸುಸಜ್ಜಿತವಾದ...

ದಿನದ ಸುದ್ದಿ20 hours ago

ನೀಟ್ ಅಕ್ರಮ ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಕಳಂಕ : ಸಾಬೀರ್ ಜಯಸಿಂಹ

ಸುದ್ದಿದಿನ,ದಾವಣಗೆರೆ:ದೇಶದ ಅತ್ಯಂತ ಕಠಿಣಾತಿ ಕಠಿಣ ಪರೀಕ್ಷೆ ನೀಟ್​​​ನಲ್ಲೂ ಗೋಲ್​​ಮಾಲ್ ನಡೆದಿದೆ. ಬಳಿಕ ನೆಟ್​​​ಪರೀಕ್ಷೆಗೂ ಅಕ್ರಮದ ವಾಸನೆ ಬಡಿದಿದ್ದರಿಂದ ಪರೀಕ್ಷೆ ರದ್ದಾಗಿದೆ. ಪರೀಕ್ಷೆಗಳ ಅಕ್ರಮದ ವಿರುದ್ಧ ದೇಶಾದ್ಯಂತ ಆಕ್ರೋಶ...

ದಿನದ ಸುದ್ದಿ21 hours ago

ಹಿರಿಯ ನಾಗರಿಕರಿಗಿರುವ ಸರ್ಕಾರಿ ಸೌಲಭ್ಯಗಳೇನು..? ; ಮಾಹಿತಿಗೆ ಸಂಪರ್ಕಿಸಿ

ಸುದ್ದಿದಿನ,ದಾವಣಗೆರೆ:ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ ವತಿಯಿಂದ ಹಾಗೂ ಇತರೆ ಇಲಾಖೆಗಳಿಂದ ಹಿರಿಯ ನಾಗರಿಕರಿಗೆ ದೊರೆಯುತ್ತಿರುವ ಸೌಲಭ್ಯಗಳ ಅರಿವು ಮೂಡಿಸುವ ಮತ್ತು ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುವ...

ದಿನದ ಸುದ್ದಿ1 day ago

ಇನ್ನು ಜನನ-ಮರಣ ಪ್ರಮಾಣ ಪತ್ರ ಕೊಡುವ ಅಧಿಕಾರ ಗ್ರಾಮ ಪಂಚಾಯತಿಗೆ

ಸುದ್ದಿದಿನಡೆಸ್ಕ್:ರಾಜ್ಯದಲ್ಲಿ ಜನನ ಅಥವಾ ಮರಣ ನೋಂದಣಿ ಮಾಡಿ 30 ದಿನಗಳ ಒಳಗೆ ಪ್ರಮಾಣಪತ್ರ ವಿತರಿಸುವ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಿ ಮುಖ್ಯ ನೋಂದಣಾಧಿಕಾರಿ ಸುತ್ತೊಲೆ ಹೊರಡಿಸಿದ್ದಾರೆ. ಇದು...

ದಿನದ ಸುದ್ದಿ1 day ago

ಅಂಗನವಾಡಿ ; ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭ : ಸಿಎಂ ಸೂಚನೆ

ಸುದ್ದಿದಿನಡೆಸ್ಕ್:ರಾಜ್ಯದ ಅಂಗನವಾಡಿಗಳಲ್ಲಿ, ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವ ಕುರಿತು ಅಧ್ಯಯನಕ್ಕೆ, ತ್ವರಿತವಾಗಿ ತಜ್ಞರ ಸಮಿತಿ ರಚಿಸಿ, ಎರಡು ತಿಂಗಳೊಳಗೆ ವರದಿ ಪಡೆಯುವಂತೆ, ಶಾಲಾ ಶಿಕ್ಷಣ ಖಾತೆ ಸಚಿವರಿಗೆ,...

ದಿನದ ಸುದ್ದಿ1 day ago

ಆರೋಗ್ಯ ಇಲಾಖೆ ನೇಮಕಾತಿ ; ಸಚಿವ ದಿನೇಶ್ ಗುಂಡೂರಾವ್ ರಿಂದ ಸಿಹಿ ಸುದ್ದಿ

ಸುದ್ದಿದಿನಡೆಸ್ಕ್:ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿಗಳ ಕೊರತೆ ಇದ್ದು, ಹಂತ ಹಂತವಾಗಿ ವೈದ್ಯರ ನೇಮಕ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಡಿಕೇರಿಯಲ್ಲಿ ನಿನ್ನೆ ತಿಳಿಸಿದ್ದಾರೆ....

ದಿನದ ಸುದ್ದಿ1 day ago

ಜಿಎಸ್‌ಟಿ ಭಾರತೀಯರ ಜೀವನ ಸುಧಾರಿಸುವ ಸಾಧನ : ಪ್ರಧಾನಿ ಮೋದಿ

ಸುದ್ದಿದಿನಡೆಸ್ಕ್:ಸರಕು ಮತ್ತು ಸೇವಾ ತೆರಿಗೆ ಜಿಎಸ್‌ಟಿಗೆ ಏಳು ವರ್ಷ ತುಂಬಿದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜಿಎಸ್‌ಟಿ, 140 ಕೋಟಿ ಭಾರತೀಯರ ಜೀವನವನ್ನು ಸುಧಾರಿಸುವ...

Trending