Connect with us

ದಿನದ ಸುದ್ದಿ

ಅನುಚ್ಛೇದ 370 ರದ್ದು | ಒಂದು ವಿಶ್ಲೇಷಣೆ : ಮಿಸ್ ಮಾಡ್ದೆ ಈ ಲೇಖನ ಓದಿ..!

Published

on

ನುಚ್ಛೇದ 370 ರದ್ದು ಪಡಿಸಿರುವುದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಕೊನೆಯಿಲ್ಲದ್ದು. ನನಗೆ ತಿಳಿದಿರುವಷ್ಟು ಮಟ್ಟಿಗೆ ಅನುಚ್ಛೇದ 370 ಹಾಗೂ 35A ರದ್ದಾದ ಕೂಡಲೇ ಜಮ್ಮು-ಕಾಶ್ಮೀರಕ್ಕೆ ಭಾರತದೊಂದಿಗಿರುವ ಸಂವಿಧಾನಾತ್ಮಕ ಸಂಬಂಧ ಕಡಿದು ಹೋಗುವುದಿಲ್ಲ. ಯಾಕೆಂದರೆ ಅನುಚ್ಛೇದ 370 ಬರುವ ಮೊದಲೇ ಜಮ್ಮು-ಕಾಶ್ಮೀರ ಸ್ವತಂತ್ರ ಭಾರತದ ಭಾಗವೆಂದು ಗುರುತಿಸಲ್ಪಟ್ಟಿತ್ತು. ನೆನಪಿರಲಿ ಸ್ವಾತಂತ್ರ್ಯ ನಂತರ ದೇಶದಲ್ಲಿದ್ದ ರಾಜ-ಮಹಾರಾಜರುಗಳ ಸಂಸ್ಥಾನ, ರಾಜ್ಯಗಳೆಲ್ಲಾ ಭಾರತದಲ್ಲಿ ವಿಲೀನವಾದ ಮಾದರಿಯಲ್ಲೇ ಜಮ್ಮು-ಕಾಶ್ಮೀರ ಕೂಡಾ ವಿಲೀನವಾಗಿತ್ತು. ಮೈಸೂರು ಸಂಸ್ಥಾನ, ಮಣಿಪುರ, ತೆಹ್ರಿ ಘರ್ವಾಲ್, ಉದಯಪುರ ಮುಂತಾದ 140 ಸಂಸ್ಥಾನಗಳು ಕೂಡಾ ಭಾರತ ಸ್ವಾತಂತ್ರ್ಯ ಸಿಕ್ಕ ತಕ್ಷಣ ಭಾರತದ ರಾಜ್ಯಗಳಾಗಲಿಲ್ಲ. ಅದಕ್ಕಾಗಿ ಸ್ವತಂತ್ರ ಭಾರತದೊಂದಿಗೆ ಈ ಸಂಸ್ಥಾನಗಳು Instrument of Accession (ವಿಲೀನ ಪತ್ರ)ಗಳಿಗೆ ಸಹಿ ಮಾಡಿ, ಸ್ವತಂತ್ರ ಭಾರತವನ್ನು ಅಧಿಕೃತವಾಗಿ ಸೇರಿದ್ದವು. ಈ ಎಲ್ಲಾ ವಿಲೀನ ಪತ್ರಗಳು ಬಹುಷ ಇವತ್ತೂ ಗೃಹ ಇಲಾಖೆಯ ಕಡತಗಳಲ್ಲಿವೆ.

ದೆಹಲಿಯಲ್ಲಿ ನೆಲೆಸಿರುವ RTI ಕಾರ್ಯಕರ್ತ ಹಾಗೂ ಇತಿಹಾಸ ಸಂಶೋಧಕ ವೆಂಕಟೇಶ ನಾಯಕರು ಇದರ ಬಗ್ಗ್ಗೆ ಕೆಲ ವರುಷಗಳ ಹಿಂದೆ ದೀರ್ಘ ಸಂಶೋಧನೆಯೊಂದನ್ನು ಮಾಡಿ, RTI ಮೂಲಕ ಸ್ವಾತಂತ್ಯ ಸಮಯದಲ್ಲಿ ಸಹಿ ಮಾಡಲಾಗಿದ್ದ ಕೆಲ ವಿಲೀನ ಪತ್ರಗಳ ಪ್ರತಿ ಪಡೆದುಕೊಂಡಿದ್ದರು. ಅವರ ಪ್ರಕಾರ ಜಮ್ಮು-ಕಾಶ್ಮೀರ ಹಾಗೂ ಇತರ 140 ಸಂಸ್ಥಾನಗಳು ಸಹಿ ಮಾಡಿರುವ ವಿಲೀನ ಪತ್ರಗಳಲ್ಲಿ ಹೆಚ್ಚೇನು ವ್ಯತ್ಯಾಸವಿಲ್ಲ. ಈ ಎಲ್ಲಾ ಸಂಸ್ಥಾನಗಳು ಮೊದಲು ಕೇವಲ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಆರ್ಥಿಕ ನಿರ್ಧಾರಗಳನ್ನು ದೇಶಕ್ಕೆ ಬಿಟ್ಟುಕೊಟ್ಟು, ಉಳಿದೆಲ್ಲಾ ಅಧಿಕಾರಗಳನ್ನು ತಮ್ಮಲ್ಲೇ ಇಟ್ಟುಕೊಂಡಿದ್ದವು. ವಿಲೀನ ಪತ್ರದೊಟ್ಟಿಗೆ ಹೆಚ್ಚಿನ ಸಂಸ್ಥಾನಗಳು ಭಾರತದೊಂದಿಗೆ ತಾಟಸ್ಥ್ಯ ಒಪ್ಪಂದಗಳನ್ನೂ ಮಾಡಿಕೊಂಡಿದ್ದವು. ಅಂದರೆ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಆರ್ಥಿಕ ಅಧಿಕಾರಗಳ ಹೊರತು ಬೇರೆ ಯಾವುದೇ ವಿಷಯದಲ್ಲಿ ಭಾರತ ಸರ್ಕಾರ ಈ ಸಂಸ್ಥಾನಗಳ ಮೇಲೆ ತನ್ನ ಹಕ್ಕು ಚಲಾಯಿಸುವುದಿಲ್ಲವೆನ್ನೋದು ಈ ತಾಟಸ್ಥ್ಯ ಒಪ್ಪಂದದ ಹೂರಣವಾಗಿತ್ತು. ಹಾಗಾಗಿ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಹಣಕಾಸಿನ ವಿಷಯಗಳನ್ನು ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲಿ ಈ ಸಂಸ್ಥಾನಗಳಿಗೆ ಪೂರ್ಣ ಸ್ವಾಯತ್ತತೆ ಇತ್ತು, ಬರೀ ಜಮ್ಮು-ಕಾಶ್ಮೀರಕ್ಕೆ ಮಾತ್ರವಲ್ಲ. ಆದರೆ ಮುಂದೆ ಹೆಚ್ಚಿನ ಸಂಸ್ಥಾನಗಳು ತಮ್ಮ ಸ್ವ-ಇಚ್ಛೆಯಿಂದಲೇ ಭಾರತದೊಂದಿಗೆ ಪೂರ್ಣ ಪ್ರಮಾಣದಲ್ಲಿ ವಿಲೀನವಾಗಲು ಒಪ್ಪಂದಕ್ಕೆ ಸಹಿ ಹಾಕಿ ಸ್ವತಂತ್ರ ಭಾರತದ ಪರಿಪೂರ್ಣ ಭಾಗವಾದರು.

ಆದರೆ ಜಮ್ಮು-ಕಾಶ್ಮೀರದ ಅಂದಿನ ಯುವರಾಜ, ರಾಜ್ಯದ ಮಹಾರಾಜ ಹರಿಸಿಂಗ್ ತನಗೆ ಕೊಟ್ಟ ಅಧಿಕಾರವನ್ನು ಉಪಯೋಗಿಸಿ, ನವೆಂಬರ್ 25, 1949ರಂದು ಒಂದು ಪ್ರಕಟನೆ ಮಾಡಿ, ಶೀಘ್ರದಲ್ಲೇ ಜಾರಿಯಾಗಲಿದ್ದ ಸಂವಿಧಾನ ಎಷ್ಟು ಹಾಗೂ ಯಾವ ಮಟ್ಟಿಗೆ ಜಮ್ಮು-ಕಾಶ್ಮೀರದಲ್ಲಿ ಯುಕ್ತವಾಗಬಹುದೆಂದು ಘೋಷಿಸಿದರು. ಹೀಗಾಗಯೇ ಅನುಚ್ಛೇದ 370 (ಅಂದು ಅನುಚ್ಛೇದ 309) ಜಾರಿಗೆ ಬಂತು. ಇದೆಲ್ಲಾ ಭಾಷಾವಾರು ರಾಜ್ಯಗಳು ಆಗುವ ಮೊದಲು. ಈ ವಿಲೀನ ಪ್ರಕ್ರಿಯೆಯಿಂದಲೇ ಮುಂದೆ ವಿಂಧ್ಯಾ ಪ್ರದೇಶ, ಮತ್ಸ್ಯ ಒಕ್ಕೂಟ, ಪಟಿಯಾಲಾ ಹಾಗೂ ಪೂರ್ವ ಪಂಜಾಬ್ ರಾಜ್ಯಗಳ ಒಕ್ಕೂಟ, ತಿರು-ಕೊಚ್ಚಿ (United State of Travancore and Cochin) ಮುಂತಾದ ದೊಡ್ಡ ಒಕ್ಕೂಟಗಳ ಉದಯವಾಗಿತ್ತು. ಭಾಷಾವಾರು ಪ್ರಾಂತ್ಯಗಳ ರಚನೆಯ ಸಂಧರ್ಭದಲ್ಲಿ ಈ ರಾಜ್ಯಗಳ ಒಕ್ಕೂಟಗಳು ರದ್ದಾದವು.

ಹಾಗಾಗಿ ಅನುಚ್ಛೇದ 370 ರದ್ದಾದ ಮಾತ್ರಕ್ಕೆ ಜಮ್ಮು-ಕಾಶ್ಮೀರ ಭಾರತದ ಕೈತಪ್ಪಿ ಹೋಗುವುದಿಲ್ಲ. ಅದು ಇನ್ನೂ ಭಾರತ ಒಕ್ಕೂಟದ ಅವಿಭಾಜ್ಯ ಅಂಗ ಯಾಕೆಂದರೆ ಜಮ್ಮು-ಕಾಶ್ಮೀರಕ್ಕೆ ಭಾರತ ಒಕ್ಕೂಟದೊಂದಿಗೆ ಅಧಿಕೃತ ಸಂಬಂಧ ಬೆಸೆದಿದ್ದು ಅನುಚ್ಛೇದ 370ದಿಂದಾಗಿ ಅಲ್ಲ ಬದಲಾಗಿ 1947ರಲ್ಲಿ ಸಹಿ ಮಾಡಿದ Instrument of Accessionನಿಂದಾಗಿ. ಆದರೆ ಅನುಚ್ಛೇದ 370 ರದ್ದಾಗಿರುವುದರಿಂದ ಬಿಜೆಪಿಯವರು, ಸಂಘ ಪರಿವಾರ ಹೇಳುವಂತೆ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿರುವ ವಿಶೇಷ ಸ್ಥಾನಮಾನ, ಸ್ವಾಯತ್ತತೆ ಸಂಪೂರ್ಣವಾಗಿ ರದ್ದಾಗಿ, ಅದು ಕೂಡಾ ಇತರ ರಾಜ್ಯಗಳಂತೆಯೇ ಆಗುತ್ತದೆಯೆನ್ನುವುದು ಸತ್ಯವಲ್ಲ. ಯಾಕೆಂದರೆ ಅನುಚ್ಛೇದ 370 ರದ್ದಾದರೆ ಜಮ್ಮು-ಕಾಶ್ಮೀರವನ್ನು ಭಾರತದೊಂದಿಗೆ ಬೆಸೆಯಲು ಉಳಿಯುವ ಏಕೈಕ ಕೊಂಡಿಯೆಂದರೆ 1947ರಲ್ಲಿ ಸಹಿ ಮಾಡಿದ Instrument of Accession. ಈ Instrument of Accession ಪ್ರಕಾರ ಭಾರತ ಸರಕಾರಕ್ಕೆ ಜಮ್ಮು-ಕಾಶ್ಮೀರದಲ್ಲಿ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಹಣಕಾಸಿನ ವಿಷಯಗಳನ್ನು ಹೊರತುಪಡಿಸಿ ಇತರೆ ವಿಷಯಗಳಲ್ಲಿ ಯಾವುದೇ ಹಕ್ಕಿಲ್ಲ.

ಇತರ ಎಲ್ಲಾ ವಿಷಯಗಳನ್ನೂ ಜಮ್ಮು-ಕಾಶ್ಮೀರಕ್ಕೆ ಸಂಪೂರ್ಣ ಸ್ವಾಯತ್ತತೆ ಇದೆ. ಅಂದರೆ ಕೇವಲ ಅನುಚ್ಛೇದ 370ವನ್ನು ರದ್ದು ಮಾಡಿದರೆ ಜಮ್ಮು-ಕಾಶ್ಮೀರಕ್ಕೆ ಸದ್ಯಕ್ಕಿರುವುದಕ್ಕಿಂತಲೂ ಹೆಚ್ಚಿನ ಸ್ವಾಯತ್ತತೆ ಸಿಗುತ್ತದೆ. ಇದರ ಪರಿಣಾಮಗಳನ್ನು ಊಹಿಸಲೂ ಅಸಾಧ್ಯ. ಅದರಿಂದಾಗಿಯೇ ಕೇಂದ್ರ ಸರಕಾರ ಕೇವಲ ಅನುಚ್ಛೇದ 370ವನ್ನು ರದ್ದು ಮಾಡುವ ದುಸ್ಸಾಹಸಕ್ಕೆ ಕೈಹಾಕಿಲ್ಲ ಬದಲಾಗಿ ಅನುಚ್ಛೇದ 370ನ್ನು ರದ್ದು ಮಾಡಿ, ಜಮ್ಮು-ಕಾಶ್ಮೀರವನ್ನು ವಿಭಜಿಸಿ ಲಡಾಖ್ ಕೇಂದ್ರಾಡಾಳಿತ ಪ್ರದೇಶ ಹಾಗೂ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಿಂದು ಘೋಷಿಸಿದೆ. ಇದು ರಾಜ್ಯಸಭೆ, ಲೋಕಸಭೆಯಲ್ಲಿ ಪಾಸಾದರೂ ನ್ಯಾಯಾಂಗ ಹಾಗೂ ಸಂವಿಧಾನದ ಪರೀಕ್ಷೆಗೆ ಒಳಪಡುವುದಂತೂ ಗ್ಯಾರಂಟಿ. ಅನುಚ್ಛೇದ 370 ಎಂದರೆ ಬರೀ ಸ್ವಾಯತ್ತತೆ ಮಾತ್ರವಲ್ಲ. ಅದರಲ್ಲಿ ಅನೇಕ ವಿಸ್ತ್ರತವಾದ ವಿಷಯಗಳು ಅಡಕವಾಗಿವೆ ಹಾಗೂ ಈ ಎಲ್ಲಾ ವಿಷಯಗಳ ವಿಸ್ತ್ರತ ಪರೀಕ್ಷೆ ಸಂವಿಧಾನದ ಪೂರ್ಣ ಪೀಠದ ನೆರಳಿನಲ್ಲಿಯೇ ನಡೆಯಬೇಕು.

ಇದು ಇಷ್ಟಾದರೆ, ನಕಲಿ ರಾಷ್ಟ್ರೀಯವಾದಿಗಳಿಗೆ ಆರ್ಟಿಕಲ್ 370 ಎಂದರೆ ಬರೀ ಜಮ್ಮು-ಕಾಶ್ಮೀರಿಗಳನ್ನು ಹೊರತುಪಡಿಸಿ ದೇಶದ ಬೇರೆ ರಾಜ್ಯದ ಯಾರೂ ಅಲ್ಲಿ ಜಮೀನನ್ನು ಕೊಳ್ಳುವಂತಿಲ್ಲ ಎಂಬುವುದಕ್ಕೆ ಸೀಮಿತ. ಹೋಗ್ಲಿ ಬಿಡಿ. ನಮ್ಮಿಂದ ಮೂರು ಸಾವಿರಕ್ಕಿಂತಲೂ ಹೆಚ್ಚು ಕಿಲೋಮೀಟರ್ ದೂರವಿರುವ ರಾಜ್ಯದಲ್ಲಿ ಜಮೀನು ಖರೀದಿಸುವ ತುರ್ತು ಹಾಗೂ ಜರೂರತ್ತು ಯಾರಿಗೆ, ಯಾಕಿದೆ ಅಂತಾ ಇನ್ನೊಂದು ಚರ್ಚೆ. ಅಲ್ಲಿ ಆರ್ಟಿಕಲ್ 370 ಇದ್ದಾಗಲೂ ನಮ್ಮಂಥ ಸಾಮಾನ್ಯ ನಾಗರಿಕರಿಗೆ ಏನೂ ತೊಂದರೆಯಾಗಿದ್ದಿಲ್ಲ, ಈವಾಗ ಅದು ರದ್ದಾದರೂ ದೇಶದ ಸಾಮಾನ್ಯ ನಾಗರಿಕರಿಗೆ ಯಾವುದೇ ಲಾಭನೂ ಇಲ್ಲ. ಹಾಗಾಗಿ ಆರ್ಟಿಕಲ್ 370 ರದ್ದಾದ ಕೂಡಲೇ ಅಲ್ಲಿ ಹೊರ ರಾಜ್ಯದ ಎಷ್ಟು ಮಂದಿ ಹೋಗಿ ಜಮೀನನ್ನು ಕೊಂಡುಕೊಳ್ಳುತ್ತಾರೋ ನೋಡೋಣ.

ಆದರೆ ಇಂಥದೊಂದು ನಿಯಮ ಬರೀ ಜಮ್ಮು-ಕಾಶ್ಮೀರದಲ್ಲಿ ಮಾತ್ರ ಇದೆ ಎಂದು ಭಕ್ತರು ಮಾತ್ರವಲ್ಲ, ತೊಂಬತ್ತು ಪರ್ಸೆಂಟ್ ಭಾರತನೇ ಎಂದುಕೊಂಡಿದೆ. ಯಾಕೆಂದರೆ ಅವರಿಗೆ ಸಂವಿಧಾನದ ಆರ್ಟಿಕಲ್ 371G, 371A ಹಾಗೂ ಇತರ ಅನುಚ್ಛೇದಗಳ ಬಗ್ಗೆ ಬಗ್ಗೆ ಎಳ್ಳಷ್ಟೂ ಪರಿಜ್ಞಾನವಿಲ್ಲವೆನ್ನೋದು ಸಾರ್ವಕಾಲಿಕ ಸತ್ಯ. ಸದ್ಯಕ್ಕೆ ಬಿಜೆಪಿ ಆಡಳಿತವಿರುವ ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಸಿಕ್ಕಿಂ ಮುಂತಾದ ರಾಜ್ಯಗಳಲ್ಲೂ ಹೊರಗಿನವರು ಜಮೀನನ್ನು ಖರೀದಿಸುವಂತಿಲ್ಲ ಅಥವಾ ಅಲ್ಲಿನವರು ಹೊರಗಿನವರಿಗೆ ಜಮೀನನ್ನು ಮಾರುವಂತಿಲ್ಲ. ಮೇಘಾಲಯ, ಮಣಿಪುರಗಳ ಹೆಚ್ಚಿನ ಭೂಪ್ರದೇಶದಲ್ಲೂ ಇಂಥದೊಂದು ಕಾನೂನು ಅನ್ವಯವಾಗುತ್ತೆ. ಆದರೆ ಈ ರಾಜ್ಯಗಳ ಬಗ್ಗೆ ಮಾತಾನಾಡಿದರೆ ಮತಗಳು ಸಿಗೋಲ್ಲ. ಸಿಗಬೇಕಾದರೆ ಜಮ್ಮು-ಕಾಶ್ಮೀರದ ಬಗ್ಗೆ ಮಾತಾನಾಡಬೇಕು ಯಾಕೆಂದರೆ ಅದು ಮುಸ್ಲೀಮರ ರಾಜ್ಯ (ವಾಟ್ಸಾಪ್ ಯೂನಿವರ್ಸಿಟಿಯ ಪ್ರಕಾರ). ದೇಶದಲ್ಲಿ ಹಿಂದೂಗಳ ಪರವಾಗಿ ಮಾತಾನಾಡುವುದಕ್ಕಿಂತ, ಮುಸ್ಲೀಮರ ವಿರುದ್ದ ಮಾತಾನಾಡಿದರೆ ಹೆಚ್ಚು ಮತಗಳು ಸಿಗಬಲ್ಲವೆನ್ನೋದು ಕಳೆದ ಮೂರು ದಶಕಗಳಲ್ಲಿ ಈ ದೇಶ ಕಂಡುಕೊಂಡಿರುವ ಸತ್ಯ.

ಹಾಗಾಗಿ ನಾವಿವತ್ತು ಅನುಚ್ಛೇದ 370 ಹಾಗೂ 35A ರದ್ದು ಮಾಡಿರುವ ಬಗ್ಗೆ ಹಾಗೂ ಅದರ ಉದ್ದೇಶಗಳ ಬಗ್ಗೆ ಮಾತಾನಾಡುವುದಕ್ಕಿಂತ ಹೆಚ್ಚಾಗಿ ಮಾತಾನಾಡಬೇಕಾಗಿರುವುದು ಇದನ್ನು ರದ್ದು ಮಾಡಿರುವ ರೀತಿ. ಇದೊಂದು Majoritarian Tyranny (ಬಹುಸಂಖ್ಯಾತ ನಿರಂಕುಶ ಪ್ರಭುತ್ವ) ತನ್ನ ಸುಪರ್ಧಿಯಲ್ಲಿರುವ ಅಗಾಧ Brutal Force ಉಪಯೋಗಿಸಿ ತನಗೆ ಬೇಕಾದುದನ್ನು ಮಾಡಬಲ್ಲದೆನ್ನುವುದಕ್ಕೆ ಕ್ಲಾಸಿಕ್ ಉದಾರಹರಣೆ. ಅನುಚ್ಛೇದ 370 ಹಾಗೂ 35A ರದ್ದು ಮಾಡಬೇಕಿತ್ತೇ? ಅದನ್ನು ಸಾಂವಿಧಾನಿಕ ರೀತಿಯಲ್ಲಿ ಮಾಡಬಹುದಿತ್ತು. ಆದರೆ ಈ ಸರಕಾರಕ್ಕೆ ಅನುಚ್ಛೇದ 370 ಹಾಗೂ 35A ರದ್ದು ಮಾಡುವುದಕ್ಕಿಂತ ಹೆಚ್ಚಾಗಿ ದೇಶದ ಅಲ್ಪಸಂಖ್ಯಾತ ಸಮುದಾಯಕ್ಕೊಂದು ಎಚ್ಚರಿಕೆ ಕೊಡಬೇಕೆನ್ನುವ ಆಸೆಯಿದ್ದಂತೆ ತೋರುತ್ತಿದೆ. ಅಂದರೆ ಈ ದೇಶದಲ್ಲಿ ನಾವು ಬಹುಸಂಖ್ಯಾತರು, ನಮ್ಮ ಸಂಖ್ಯಾಬಲ ಶಾಸನಸಭೆಗಳಲ್ಲಿ ಇದ್ದರೆ, ಈ ಸಂಖ್ಯಾಬಲವನ್ನು ಉಪಯೋಗಿಸಿ, ನಾವು ಅಲ್ಪಸಂಖ್ಯಾತರಾದ ನಿಮ್ಮ ಸಲಹೆ, ಅನುಮತಿಯಿಲ್ಲದೆ ನಮಗೆ ಬೇಕಾದ ಕಾನೂನುಗಳನ್ನು ತರಬಲ್ಲೆವು ಎಂದು ತೋರಿಸಲೇಬೇಕೆಂದು ಪಣತೊಟ್ಟಂತಿದೆ ಈ ಸರಕಾರ. ಉಗ್ರವಾದ, ಪಾಕೀಸ್ಥಾನ ಮುಂತಾದವುಗಳೆಲ್ಲಾ ಸಬೂಬು ಮಾತ್ರ.

ಈ ಕಾರಣದಿಂದಾಗಿಯೇ ಇವತ್ತು ಅನುಚ್ಛೇದ 370 ಹಾಗೂ 35Aನ್ನು ರದ್ದು ಮಾಡಿದ ರೀತಿ ಪ್ರಶ್ನಾರ್ಹ. ರಾಜ್ಯದ ಮೂವರು ಮುಖ್ಯಮಂತ್ರಿಗಳು ಹಾಗೂ ಇತರ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿರಿಸಿ, ಮನೆಗೊಬ್ಬ್ರರಂತೆ ಸೈನಿಕರನ್ನು ನೇಮಿಸಿ, ಕರ್ಫ್ಯೂ ಹಾಕಿ, ಮಾಧ್ಯಮ, ಅಂತರ್ಜಾಲ, ಮೊಬೈಲ್ಗಳನ್ನು ನಿಷೇಧಿಸಿ, ತುರ್ತು ಪರಿಸ್ಥಿತಿಯನ್ನು ನಿರ್ಮಿಸಿ, ಲೋಕಸಭೆ, ರಾಜ್ಯಸಭೆಯಲ್ಲಿ ಚರ್ಚೆ ಕೂಡಾ ಮಾಡದೇ, ವಿರೋಧ ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳದೆ ಇಂಥದೊಂದು ನಿರ್ಧಾರ ಕೈಗೊಂಡಿದ್ದಾರೆಂದರೆ ಅದರ ಹಿಂದಿನ ಉದ್ದೇಶಗಳೂ ಅನುಮಾನಸ್ಪದ ಹಾಗೂ ಪ್ರಶ್ನಾರ್ಹವೇ. ಇದನ್ನು ರದ್ದು ಮಾಡಲು ಜಮ್ಮು-ಕಾಶ್ಮೀರದ ವಿಧಾನಸಭೆಯ ಅನುಮತಿ ಕೂಡಾ ಅಗತ್ಯವೆಂದು ಸಂವಿಧಾನವೇ ಹೇಳಿದೆ. ಆದರೆ ರಾಜ್ಯ ಸರ್ಕಾರವನ್ನು ಮೊದಲೇ ಬರ್ಖಾಸ್ತುಗೊಳಿಸಿ, ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತಂದು, ಇವತ್ತು ರಾಜ್ಯಪಾಲರ ಪತ್ರವೇ ವಿಧಾನಸಭೆಯ ಅನುಮತಿಯೆಂದು ಹೇಳಿ, ಅನುಚ್ಛೇದ 370 ಹಾಗೂ 35Aನ್ನು ರದ್ದು ಮಾಡಿರುವ ನಿರ್ಧಾರ ಎಷ್ಟು ಸರಿ ಹಾಗೂ ಎಷ್ಟು ತಪ್ಪೆಂದು ಮುಂದಿನ ದಿನಗಳಲ್ಲಿ ಈ ದೇಶದ ಸಂವಿಧಾನವೇ ನಿರ್ಧರಿಸಲಿದೆ. ಅನುಚ್ಛೇದ 370 ಹಾಗೂ 35A ಇದ್ದರೆ ಅಥವಾ ರದ್ದಾದರೆ ಅದರ ಹೆಚ್ಚಿನ ಪರಿಣಾಮಗಳನ್ನು ಅನುಭವಿಸುವವರು, ಲಾಭವನ್ನು ಪಡೆಯುವವರು ಇಲ್ಲ ನಷ್ಟ ಅನುಭವಿಸುವವರು ಆ ರಾಜ್ಯದ ಜನರು. ಹಾಗಾಗಿ ಅನುಚ್ಛೇದ 370 ಹಾಗೂ 35A ರದ್ದು ಮಾಡುವ ಮೊದಲು ಅವರ ಜನಮತ ಸಂಗ್ರಹವಾಗಬೇಕಿತ್ತು. ಅದಾಗಲಿಲ್ಲ ಯಾಕೆಂದರೆ ಈ ನಿರ್ಧಾರ ಅಲ್ಲಿನ ಪ್ರಜೆಗಳ ಒಳಿತಿಗಲ್ಲ ಬದಲಾಗಿ ದೆಹಲಿಯಲ್ಲಿ ಸರ್ಕಾರ ನಡೆಸುವವರ ಹಾಗೂ ಅವರ ರಿಮೋಟ್ ಕಂಟ್ರೋಲ್ ಇಟ್ಟುಕೊಂಡಿರುವವರ ಒಳಿತಿಗಾಗಿ. ಇಂಥದೊಂದು Majoritarian Tyranny ಹಾಗೂ Brutal Force ಇಟ್ಟುಕೊಂಡು, ಅಲ್ಲಿನ ಜನರನ್ನು, ನಾಯಕರನ್ನು ಗನ್ಪಾಯಿಂಟ್ನಲ್ಲಿಟ್ಟುಕೊಂಡು ಅನುಚ್ಛೇದ 370 ಹಾಗೂ 35Aನ್ನು ಹಿಂದಿನ ಯಾವುದೇ ಸರ್ಕಾರನೂ ಮಾಡಬಹುದಿತ್ತು. ಅವರು ಮಾಡಲಿಲ್ಲ ಯಾಕೆಂದರೆ ಅದು ಅಸಾಂವಿಧಾನಿ ಅಷ್ಟೇ ಅಲ್ಲ ಪ್ರಜಾಪ್ರಭುತ್ವ ವಿರೋಧಿ ಕೂಡಾ. ಇವತ್ತು ನಾವು ಪ್ರಶ್ನಿಸಬೇಕಾಗಿರುವುದು ಅನುಚ್ಛೇದ 370 ಹಾಗೂ 35Aನ್ನು ರದ್ದು ಮಾಡಿರುವುದಲ್ಲ ಬದಲಾಗಿ ಅದನ್ನು ರದ್ದು ಮಾಡಿದ ಅಸಾಂವಿಧಾನಿಕ, ನಿರಂಕುಶ, ಸರ್ವಾಧಿಕಾರಿ ರೀತಿ.

ಯಾಕೆಂದರೆ ಇವತ್ತು ಜಮ್ಮು-ಕಾಶ್ಮೀರದಲ್ಲಾಗಿರುವುದು ನಾಳೆ ಕರ್ನಾಟಕದಲ್ಲೂ ಆಗಬಹುದು. ಕೇಂದ್ರ ಸರಕಾರ ತನಗೆ ಬೇಕಾದ ಯಾವುದೋ ಒಂದು ನಿರ್ಧಾರವನ್ನು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ರಾಜ್ಯ ಸರಕಾರವನ್ನು ಬರ್ಖಾಸ್ತುಗೊಳಿಸಿ, ತಮ್ಮದೇ ಕೈಗೊಂಬೆಯಾಗಿರುವ ರಾಜ್ಯಪಾಲರ ಅನುಮತಿ ಪಡೆದು, ರಾಷ್ಟ್ರಪತಿಯವರ ಅದೇಶದ ಮೂಲಕ ನಮ್ಮ ಮೇಲೆ ಹೇರಬಹುದು. ಇದೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ. ಆದರೆ ಇಂಥ ಪ್ರಶ್ನೆಗಳನ್ನು ಕೇಳುವವರೆಲ್ಲಾ ದೇಶದ್ರೋಹಿಗಳು, ಪಾಕೀಸ್ಥಾನಿಗಳು, ಜಿಹಾದಿಗಳೆಂದು ಮೊದಲೇ ಫರ್ಮಾನು ಹೊರಡಿಸಲಾಗಿರುವುದರಿಂದ, ಪ್ರಶ್ನೆ ಕೇಳುವವರೂ ತಡವರಿಸುವುದಂತೂ ಗ್ಯಾರಂಟಿ.

Almeida Gladson
(Facebook post)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ

Published

on

ಸುದ್ದಿದಿನಡೆಸ್ಕ್:ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್ ಸಂಪರ್ಕದ ಕಡಿತದಿಂದ ತೊಂದರೆಗೊಳಗಾಗದಂತೆ ನಾಳೆ ಮತ್ತು ಇದೇ 15ರ ಭಾನುವಾರವೂ ಬೆಸ್ಕಾಂ ಉಪ ವಿಭಾಗಗಳ ಕ್ಯಾಶ್ ಕೌಂಟರ್‌ಗಳು ತೆರೆದಿರಲಿವೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್ ಸಂಪರ್ಕ ಕಡಿತದಿಂದ ತೊಂದರೆಗೆ ಒಳಗಾಗಬಾರದು ಹಾಗೂ ಆನ್‌ಲೈನ್ ಪೇಮೆಂಟ್ ಬಳಸದವರ ಅನಕೂಲಕ್ಕಾಗಿ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬಿಲ್ ಬಂದ 30 ದಿನದೊಳಗೆ ವಿದ್ಯುತ್ ಶುಲ್ಕ ಪಾವತಿಸದಿದ್ದಲ್ಲಿ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದಿದ್ದಲ್ಲಿ ಕೆಇಆರ್‌ಸಿ ನಿಯಮಾವಳಿ ಅನ್ವಯ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಿದ್ದು, ಸೆಪ್ಟೆಂಬರ್ 1ರಿಂದಲೇ ಈ ನಿಯಮ ಜಾರಿಯಾಗಿದೆ ಎಂದು ಹೇಳಿದೆ.

ವಿದ್ಯುತ್ ಬಿಲ್ ಬಾಕಿ ಮೊತ್ತ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ 100 ರೂಪಾಯಿ ಗಳಿಗಿಂತ ಅಧಿಕವಾಗಿದ್ದಲ್ಲಿ, ಅಂತಹ ಸ್ಥಾಪನಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ಗೃಹ ಜ್ಯೋತಿಯೋಜನೆ ಅಡಿ ಶೂನ್ಯ ಬಿಲ್ ಪಡೆಯುತ್ತಿರುವ ಗ್ರಾಹಕರ ಹಿಂಬಾಕಿ ಶೂನ್ಯವಿದ್ದಲ್ಲಿ ಈ ಬಗ್ಗೆ ಚಿಂತಿಸಬೇಕಿಲ್ಲ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ

Published

on

ಸುದ್ದಿದಿನಡೆಸ್ಕ್:ಹತ್ತು ವರ್ಷಗಳ ಬಳಿಕ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಿ, ನಿರ್ಣಯ ತೆಗೆದುಕೊಳ್ಳಲು ಸೆಪ್ಟೆಂಬರ್ 17ಕ್ಕೆ ಸಂಪುಟ ಸಭೆ ನಡೆಯಲಿದೆ.

ಜಿಲ್ಲೆಯ ಮಿನಿ ವಿಧಾನಸೌಧದಲ್ಲಿರುವ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಬಗ್ಗೆ ವಿಶೇಷ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಈ ಹಿಂದೆ 2014ರ ನವೆಂಬರ್ 28ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ

Published

on

ಸುದ್ದಿದಿನಡೆಸ್ಕ್:ಇಂದು ಗಣೇಶ ಚತುರ್ಥಿ, ದೇಶ ಸೇರಿ ನಾಡಿನದ್ಯಂತ ಹಿಂದೂ ಸಂಪ್ರದಾಯದಲ್ಲಿ ನಾಡಿನ ಜನತೆ ತಮ್ಮ ಒಳಿತಿಗಾಗಿ, ಜ್ಞಾನ ಸಮೃದ್ಧಿಗಾಗಿ ಶಿವನ ಪುತ್ರ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಅತ್ಯಂತ ಶ್ರದ್ದಾ ಭಕ್ತಿಯಿಂದ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ ಅದರಂತೆ ಬೆಂಗಳೂರು ಜನತೆ ಮನೆ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶನ ಮೂರ್ತಿಗಳನ್ನು ಜಲ ಮೂಲಗಳಲ್ಲಿ ವಿಸರ್ಜಿಸಲು ಬೆಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಇನ್ನೂ ಗಣೇಶ ಚತುರ್ಥಿ ವಿಶೇಷವಾಗಿ ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತ್ತೆ ಅನೇಕ ಸಚಿವರು ಹಾಗೂ ಗಣ್ಯರು ಶುಭ ಹಾರೈಸಿದ್ದಾರೆ.

ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮದ್ಯಪಾನಾಸಕ್ತರು ಗಲಭೆಮಾಡುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ ನಿಯಮಗಳಡಿ ಇಂದಿನಿಂದ ಉಡುಪಿ ಜಿಲ್ಲೆಯಾದ್ಯಂತ ಹಾಗೂ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಇದೇ 9 ಮತ್ತು ಸೆಪ್ಟೆಂಬರ್ 11 ರಂದು ಮಧ್ಯಾಹ್ನ 2 ರಿಂದ ಮದ್ಯರಾತ್ರಿ 12.00 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ನೈಸರ್ಗಿಕವಾಗಿ ತಯಾರಿಸಿದ ಮಣ್ಣಿನ ಗಣೇಶನ ವಿಗ್ರಹಗಳನ್ನು ಮಾತ್ರ ಬಳಸುವ ಮೂಲಕ ಕೆರೆ, ನದಿ ಮೂಲಗಳು ಕಲುಷಿತಗೊಳಿಸದಂತೆ ಕಾಪಾಡುವುದು ನಮ್ಮ ಕರ್ತವ್ಯ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ10 hours ago

ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ

ಸುದ್ದಿದಿನಡೆಸ್ಕ್:ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್ ಸಂಪರ್ಕದ ಕಡಿತದಿಂದ ತೊಂದರೆಗೊಳಗಾಗದಂತೆ ನಾಳೆ ಮತ್ತು ಇದೇ 15ರ ಭಾನುವಾರವೂ ಬೆಸ್ಕಾಂ ಉಪ ವಿಭಾಗಗಳ ಕ್ಯಾಶ್ ಕೌಂಟರ್‌ಗಳು ತೆರೆದಿರಲಿವೆ...

ದಿನದ ಸುದ್ದಿ10 hours ago

ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ

ಸುದ್ದಿದಿನಡೆಸ್ಕ್:ಹತ್ತು ವರ್ಷಗಳ ಬಳಿಕ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧರಿಸಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಿ, ನಿರ್ಣಯ...

ದಿನದ ಸುದ್ದಿ19 hours ago

ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ

ಸುದ್ದಿದಿನಡೆಸ್ಕ್:ಇಂದು ಗಣೇಶ ಚತುರ್ಥಿ, ದೇಶ ಸೇರಿ ನಾಡಿನದ್ಯಂತ ಹಿಂದೂ ಸಂಪ್ರದಾಯದಲ್ಲಿ ನಾಡಿನ ಜನತೆ ತಮ್ಮ ಒಳಿತಿಗಾಗಿ, ಜ್ಞಾನ ಸಮೃದ್ಧಿಗಾಗಿ ಶಿವನ ಪುತ್ರ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ...

ದಿನದ ಸುದ್ದಿ1 day ago

ಸರ್ಕಾರಿ ಐಟಿಐ ಪ್ರವೇಶಕ್ಕೆ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನಲ್ಲಿ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಂ.ಎಂ.ಟಿ.ಎಂ 1, ಡಿಎಂಎಂ 20, ಸಿಒಪಿಎ 20, ವೆಲ್ಡರ್ 34 ಹಾಗೂ ರೋಬೊಟಿಕ್ಸ 12 ಖಾಲಿ ಇರುವ...

ದಿನದ ಸುದ್ದಿ1 day ago

ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಯುವಜನರನ್ನು ಸ್ವಾವಲಂಭಿಯಾಗಿ ಉತ್ತೇಜಿಸುವ ದೃಷ್ಠಿಯಿಂದ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿ ಇರುವ ಪರಿಶಿಷ್ಟ...

ದಿನದ ಸುದ್ದಿ2 days ago

ರಾಯಚೂರು | ಶಾಲಾ ಬಸ್ ಅಪಘಾತ ; ಇಬ್ಬರು ವಿದ್ಯಾರ್ಥಿಗಳು ಸಾವು

ಸುದ್ದಿದಿನಡೆಸ್ಕ್:ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ಶಾಲಾ ಬಸ್ ಮತ್ತು ಸರ್ಕಾರಿ ಬಸ್ ನಡುವೆ ಗುರುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟು, ಹಲವು...

ದಿನದ ಸುದ್ದಿ4 days ago

ಪೌತಿ ಖಾತೆ ಆಂದೋಲನ ; ಸಚಿವ ಕೃಷ್ಣ ಬೈರೇಗೌಡ

ಸುದ್ದಿದಿನಡೆಸ್ಕ್:ಬಹು ಮಾಲೀಕತ್ವ ಹೊಂದಿರುವ ಖಾಸಗಿ ಜಮೀನುಗಳ ಪೋಡಿ ಕಾರ್ಯ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿನ ದರಾಖಾಸ್ತು ಪೋಡಿ ಕಾರ್ಯ ಹಾಗೂ ಜಮೀನು ಮಾಲೀಕತ್ವವನ್ನು ವಾರಸುದಾರರಿಗೆ ಮಾಡಿಕೊಡುವ ಪೋತಿ...

ದಿನದ ಸುದ್ದಿ5 days ago

ಮುಡಾ ಪ್ರಕರಣ ; ಅರ್ಜಿ ವಿಚಾರಣೆ ಮುಂದೂಡಿಕೆ

ಸುದ್ದಿದಿನಡೆಸ್ಕ್:ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿರುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಉಚ್ಛ ನ್ಯಾಯಾಲಯ ಮುಂದೂಡಿದೆ. ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ...

ದಿನದ ಸುದ್ದಿ5 days ago

KPSC | 2 ತಿಂಗಳೊಳಗೆ ಮರು ಪರೀಕ್ಷೆ

ಸುದ್ದಿದಿನಡೆಸ್ಕ್:ಇತ್ತೀಚಿನ ಕೆ.ಪಿ.ಎಸ್.ಸಿ. ಗಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ, ಅಸಮರ್ಪಕ ಕನ್ನಡಾನುವಾದ ಹಿನ್ನೆಲೆ, ಎಲ್ಲ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತೆ, 2 ತಿಂಗಳೊಳಗೆ ಮರು ಪರೀಕ್ಷೆ ನಡೆಸುವಂತೆ, ಕರ್ನಾಟಕ ಲೋಕ...

ದಿನದ ಸುದ್ದಿ5 days ago

ADITYA-L1 | ಇಸ್ರೋ ಆದಿತ್ಯ ಎಲ್-1 ನೌಕೆ ಉಡಾವಣೆಗೆ ಒಂದು ವರ್ಷ; ಸೂರ್ಯನ ಅಧ್ಯಯನದಲ್ಲಿ ಮಹತ್ವದ ಪ್ರಗತಿ

ಸುದ್ದಿದಿನಡೆಸ್ಕ್:ಇಸ್ರೋದಿಂದ ಆದಿತ್ಯ ಎಲ್-1 ನೌಕೆ ಯಶಸ್ವಿ ಉಡಾವಣೆಗೊಂಡು ಇಂದಿಗೆ ಒಂದು ವರ್ಷ ಪೂರೈಸಿದೆ. 2023ರ ಸೆಪ್ಟೆಂಬರ್ 2 ರಂದು ಉಡಾವಣೆಗೊಂಡಿರುವ ಎಲ್-1ನೌಕೆ ಕಕ್ಷೆ ತಲುಪಿದ್ದು, ಭೂಮಿಯಿಂದ ಸುಮಾರು...

Trending