ಬಹಿರಂಗ
ಬುಲೆಟ್ straight hit….!
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2018/05/IMG_20180509_214844.jpg&description=ಬುಲೆಟ್ straight hit….!', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2018/05/IMG_20180509_214844.jpg&description=ಬುಲೆಟ್ straight hit….!', 'pinterestShare', 'width=750,height=350'); return false;" title="Pin This Post">
*ಹೆಂಗಸರು* ಕುಕ್ಕರ್ ಗೆ , ಗಂಡಸರು ಲಿಕ್ಕರ್ ಗೆ ಆಸೆ ಪಟ್ಟು ತಮ್ಮ ಅಮೂಲ್ಯವಾದ ಮತವನ್ನು ಮಾರಿಕೊಂಡರೆ ಮುಂದಿನ ದಿನಗಳಲ್ಲಿ ನಿಕ್ಕರೂ ಇಲ್ಲದಂತಾಗುತ್ತದೆ ಯೋಚಿಸಿ ಮತ ಚಲಾಯಿಸಿ…
ನಾನ್ ಈ ಮಾತನ್ನು ಯಾಕೆ ಹೇಳ್ತಿದ್ದೀನಿ ಅಂದ್ರೆ, ಇಂದಿನ ನಮ್ಮಗಳ ಸ್ಥಿತಿ ಧಾರುಣವಾಗಿದೆ…
ಈ ಪ್ರಜಾಪ್ರಭುತ್ವ ದಲ್ಲಿ ಯಾರನ್ನೋ ಪ್ರಜಾಪಾಲಕ ಅಂತ ಆಯ್ಕೆ ಮಾಡಿರ್ತೀವಿ, ಅವ್ರು ನಮ್ಮನ್ ಪಾಲನೆ, ಪೋಷಣೆ ಮಾಡ್ತನೆ ಅಂತ ಆಸೆ ಇಟ್ಕೊಂಡಿರ್ತೀವಿ, ಆದ್ರೆ ಮುಂದಿನ ದಿನಗಳಲ್ಲಿ ಅವರ ಹೇಳ್ದಂಗೆ ಕೇಳೋ ಪರಿಸ್ಥಿತಿ ನಲ್ಲಿ ನಾವ್ ಇರ್ತೀವಿ.. ಇಂಥ ಧಾರುಣ ಸ್ಥಿತಿ ಯಾರಿಗೂ ಬೇಡ…
ಈ ಹಾಳಾದ್ ರಾಜಕೀಯನೇ ಹಂಗೆ ರೀ… ಮೊದ್ಲು ಬಂದು ಕಾಲಿಗ್ ಬೀಳದೇನ್ ಕೇಳ್ತಿರಿ, ಅಮೇಲ್ ಕಾಲಿಗೆಲ್ಲಿ , ಹುಡಿಕೊಂಡ್ ಹೋದ್ರು ಕೈಗೆ ಸಿಗಕಿಲ್ಲ ಅವ್ರು….
ನಂಗು ಒಂದು ಕನಸಿತ್ತು ರೀ..
ಆ ಕನಸಲ್ಲಿ ಬರೀ ಪ್ರಶ್ನೆ ಗಳೇ…
ಆ ಪ್ರಶ್ನೆಗಳನ್ನು ಹುಡಿಕೊಂಡು ಹೋದ್ರೆ ಉತ್ತರಗಳೆ ಪ್ರಶ್ನಾರ್ಥಕ??
ಈ ರಾಜಕೀಯ ಅಂದ್ರೆ ಏನು, ರಾಜಕೀಯ ಅಂತ ಹೆಸರಿಟ್ಟೋರ್ ಯಾರು … ರಾಜಕೀಯ ಅನ್ನದ್ ನಮ್ ಗೆ ಬೇಕಾ…!???!!
ನಾನ್ ಸ್ಲೂಲ್ ನಲ್ಲಿ ಓದೋ ಟೈಮ್ ನಲ್ಲಿ ಪ್ರಜೆಗಳಿಂದ , ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ , ನಮ್ ಪ್ರಜಾಪ್ರಭುತ್ವ ಅಂತ ಏನೋ ಓದಿದ್ ನೆನಪು ಆದ್ರೆ ಈಗಿನ್ ಕಾಲದಲ್ಲಿ ಇದೆಲ್ಲ ಎಲ್ಲಿದೆ ಅನ್ನದೆ ನಂಗೆ ಗೊತ್ತಿಲ್ಲ… ಯಾಕಂದ್ರೆ ಅಲ್ಲಿ ಪ್ರಜೆಗಳಿಗೋಸ್ಕರ ಏನು ನಡಿತ್ತಿಲ್ಲ ಎಲ್ಲ ಅವರವರ ಪರಿವಾರದವರಿಗೆನೆ ನಡಿತ್ತಿರದು. ಅದೆ ಪ್ರಜೆಗಳಿಂದನೆ ಅಧಿಕಾರ ಇಡಿದೋರೆಲ್ಲ ಇವತ್ ಏನ್ ಮಾಡ್ತಿದ್ದಾರೆ…
ಒಂದ್ ಕ್ಷಣ ಯೋಚನೆ ಮಾಡಿ???
ಇದೇನಪ್ಪ ಇವ್ನು ಹುಚ್ಚನ್ ಥರ ಹೇಳ್ತಾವ್ನೆ ಅಂತ ಅನ್ಕೋ ಬೇಡಿ, ನನ್ನ ಹುಚ್ಚಾ ಅನ್ಕೊಂಡ್ರು ಪರ್ವಾಗಿಲ್ಲ.. ಜಸ್ಟ್ ಥಿಂಕ್ ಮಾಡಿ..!!!
ಪ್ರಜಾಪ್ರಭುತ್ವ ದಲ್ಲಿ ನಮ್ಮ ನಿಮ್ಮಂತ ಪ್ರಜೆಗಳ ಸ್ಥಿತಿ ಹೆಂಗಿದೆ,ನಮ್ ಹೆಂಡತಿ ಮಕ್ಕಳ ಸ್ಥಿತಿ ಹೆಂಗಿದೆ !! ಅದೇ !!! so called ರಾಜಕಾರಣಿಗಳು , ನಮ್ ನಾಯಕರುಗಳು ಅಂತ ನಾವೇನ್ ಅಟ್ಟಕ್ ಹೇರಿಸಿ, ಉಪ್ಪರಿಗೆ ಮೇಲೆ ಕೂರ್ಸಿದವಲ್ಲಾ ??? ಅವರೆಲ್ಲ ಹೆಂಗ್ ಇದಾರೆ,ಅವರ ಹೆಂಡತಿ ,ಮಕ್ಕಳೆಲ್ಲ ಹೆಂಗ್ ಇದಾರೆ ಯೋಚನೆ ಮಾಡಿ ??? ನಾವು ನೀವು
ಅದೇ ಕಿತ್ತೋಗಿರೋ ಮನೆಗಳು , ೧ರುಪಾಯಿ ಕೆಜೆ ಅಕ್ಕಿ ಅನ್ನ, ಬೇಳೆ ಸಾರು, ಅದೇ ಹಳೆ ಮೋಟರ್ ಸೈಕಲ್ ಗಳು , ನೇತಾಕ್ಕೊಂಡ್ ಹೋಗ್ತಿರೋ ಬಸ್ ಗಳು, ಕಿತ್ತೋಗಿರೋ ರೋಡುಗಳು, ಗುಂಡಿ ಬಿದ್ದಿರೋ ೋಡುಗಳು, ತುಕ್ಕಿಡಿದಿರುವ ಬೋರ್ಡುಗಳು, ಕಸ ಕಟ್ಕೊಂಡಿರುವ ಮೋರಿಗಳು, ದುರ್ನಾಥ ಹೊಡಿತಿರೋ ಸುಲಭ ಶೌಚಾಲಯಗಳು , ಅದೇ ಸರ್ಕಾರದ ಹಳೆ ಹರಕು ಮುರುಕ ಕಾಲೇಜುಗಳು , ಬಿದ್ದೋಗ್ತಿರೋ ಶಾಲೆಗಳು ,ತೂಕಡ್ಸೋ ಮೇಷ್ಟ್ರು ಗಳು , ಚೀಟಿ ವ್ಯಾಪಾರ ಮಾಡೋ ಮೇಡಂಗಳು… ಇವು ನಮ್ ಗಳ ಗಾಂಧಿ ಲೋಕ ,ಇವತ್ತು ಎಷ್ಟೋಜನಕ್ಕೆ ಮಲಗಕ್ಕೆ ಸೂರಿಲ್ಲ , ತಿನ್ನಕ್ಕೆ ಅನ್ನ ಇಲ್ಲಾ …ಅದೆ ಎಂ.ಎಲ್ಎ, ಎಂಪಿ ,ಮಂತ್ರಿಗಳ ಹೆಂಡತಿ ಮಕ್ಕಳಿಗೆ ಗಾದ್ರೆ ಏಸಿ ಕಾರಲ್ಲಿ ಓಡಾಟ, ಏಸಿ ಮನೆ , ಬಾಸುಮತಿ ಅಕ್ಕಿ , ಹೈಟೆಕ್ ಸ್ಕೂಲ್ಗಳು, ಫಾರಿನ್ ಹೈಯರ್ ಎಜುಕೇಶನ್, ಫಾರಿನ್ ಟ್ರಿಪ್ಗಳು …ಇನ್ನೂ ಬೇಜಾನು .
ನಮ್ ಅಣ್ತಂದಿರೆಲ್ಕ ಅದೆ ಕೂಲಿನಾಲಿ ಜೀವನ, ಆದ್ರೆ ಅವರ್ ಅಣ್ಣ ತಮ್ಮಂದಿರೆಲ್ಕಾ ತಾಲ್ಲೂಕು ಬೋರ್ಡ್ ಮೆಂಬರ್ಗಳು ,ಜಿಲ್ಲಾ ಪಂಚಾಯತ, ಎಲೆಕ್ಟೆಡ್ ಗಳು ಇನ್ನು ಹೇಳ್ತಾ ಹೋದ್ರೆ ಹೇಳಕ್ಕೆ ಸಾಲಲ್ಲ ನೀವೆ ಯೋಚನೆ ಮಾಡಿ ನಮ್ಗು ಅವರಿಗೂ ಇರೂ ಡಿಫರೆನ್ಸ್ … ಏನು ಅಂತ…??
ಇನ್ನು ಎಲೆಕ್ಷನ್ ಟೈಮ್ ಅತ್ರ ಬಂತು ಅಂದ್ರೆ ಮನೆ ಮನೆಗೆ ಬರದು, ಕಂಡ್ಕಂಡೋರ್ ಕಾಲಿಗೆಲ್ಲ ಬಿಳೋದು , ಸುಳ್ಳು ಸುಳ್ಳು ಆಶ್ವಾಸನೆ ಕೊಡದು, ಏನೆ ಸಮಸ್ಯೆ ಗಳಿದ್ರು ಚುನಾವಣಾ ಟೈಮ್ ನಲ್ಲೇ ಕೈ ಆಕದು, ಗರಿ ಗರಿ ನೋಟಗಳನ್ನು ಅಂಚದು, ಹೆಂಡ ಸಾರಾಯಿ ಕುಡ್ಸದು, ಸೀರೆ ಕುಕ್ಕರ್ ತರ್ಸದು, ಕೋಳಿ ಕೋಡದು , ಬಿರ್ಯಾನಿ ಊಟ ಆಕ್ಸದು , ಕಂಪನಿಗಳಲ್ಲಿ ಕೆಲಸ ಕೊಡ್ತೀನಿ ಅನ್ನದು, ಇನ್ನು ಮುಂತಾದವು ನೀವೆ ಯೋಚನೆ ಮಾಡಿ ಇರ್ಲಿ ಇವೆಲ್ಲ ಕತ್ತಲೆ ರಾತ್ರಿಯ ಕನಸುಗಳು.…
ಅಲ್ಲ ರೀ ನೀವೆ ಯೋಚನೆ ಮಾಡಿ , ನಮ್ಮನ್ ಸೇವೆ ಮಾಡ್ತೀನಿ ಅಂತ ಬಂದೋರ್ಗೆ ಇವೆಲ್ಲಾ ಬೇಕ… ಅವರ್ ಅವರು ಮಾಡೋ ಕೆಲಸ,ಅಭಿವೃದ್ದಿ ಕಾರ್ಯಗಳೆ ಅವರನ್ನ ಮತ್ತೆ ಆಯ್ಕೆ ಮಾಡ್ಬೇಕು , ಅಂತ ಕೆಲಸ ಮಾಡಿಲ್ಲ ಅಂದೋರೆ ತಾನೆ , ಪದೆ ಪದೆ ಪ್ರಚಾರ ಮಾಡದು, ಇಂತ ಪ್ರಚಾರಕ್ಕೆ ನಾವೆಲ್ಲರೂ ಬಲಿ ಆಗ್ಬೇಕ , ಬೇಡ ರೀ ಬೇಡ …
ನಿಮ್ಮ ಮತವನ್ನ ನೀವು ಮಾರ್ಕೊತಿರ ಅಂದ್ರೆ ನಿಮ್ ನಿಮ್ ನಿಯತ್ತನ್ನೆ ಮಾರ್ಕೋತಿರ ಅಂತ, ಇಂತ ನಿಯತ್ತಿಲ್ಲದೋರು ಬೆಜಾನ್ ಇದಾರೆ ಬಿಡಿ …
ನಮ್ ಜನ ಎಷ್ಟೇಳುದ್ರು ಉದ್ದಾರ ಆಗಲ್ಲ, ಯಾಕಂದ್ರೆ ಅವರಿಗೂ ಗೊತ್ತಿಲ್ಲ ನಾವ್ ಎಂತೋರ್ಗೆ ನಮ್ ಓಟ್ನಾ ಕೊಡ್ತಿದ್ದೀವಿ , ಅವರ್ ಏನೆನ್ ದಬ್ಬಾಕಿದ್ದಾರೆ ಅಂತಾ ನೀವೆ ಕೇಳ್ಕೊಳ್ಳಿ…. ಒಂದು ಕಟು ಸತ್ಯ ನಿಮ್ಗೆ ಹೇಳ್ತಿನಿ ಕೇಳಿ… ನಾವೆಲ್ಲ ಒಂದು ಸ್ಕೂಲಿಗೆ ನಮ್ ಮಕ್ಕಳನ್ನ ಜಸ್ಟ್ ಅಡ್ಮಿಷನ್ ಮಾಡ್ಸಬೇಕು ಅಂದ್ರೆ ತಂದೆ ತಾಯಿಯರು ಡಿಗ್ರಿ ಹೋಲ್ಡರ್ಸ್ ಆಗಿರ್ಬೇಕು ಅಂತರೆ, ಇನ್ನೂ ಈ ಸರ್ಕಾರ ದ A, B ,C ಗ್ರೇಡ್ ಕೆಲಸ ಮಾಡಕ್ಕೆ ಅಂದ್ರೆ SDA, FDA ,PDO , IAS ,IPS ಇಂತ ಜನಸಂಪರ್ಕ ಸೇವ ಕೆಲಸಕ್ಕೆ ಸೆಲೆಕ್ಟ್ ಆಗ್ಬೇಕು ಅಂದ್ರೆ ಅದಕ್ಕೂ ಒಂದು ರಿಟನ್ ಎಗ್ಸಾಂ ಅಮೇಲೆ ಮುಖಾಮುಖಿ ಇಂಟರ್ವ್ಯೂ ಆಗ್ಬೇಕು,
ಏನೆ ಆದರೂ ಯಾವುದೇ ಒಂದು ಉದ್ಯೋಗ ಮಾಡ್ಬೇಕು ಅಂದ್ರು ಅದಕ್ಕೆ ಇಂತದೆ ವಿದ್ಯಾರ್ಹತೆ ಬೇಕು, ಇಷ್ಟೇ ಮಾರ್ಕ್ಸ್ ತೆಗೆದು ಪಾಸ್ ಆಗ್ಬೇಕು , ದೈಹಿಕವಾಗಿ ಫಿಟ್ ಆಗಿರ್ಬೇಕು ಅಂತೆಲ್ಲಾ ಹತ್ತಾರು ಪರೀಕ್ಷೆ ಗಳು ನಮಗೆ ಇದೆ, ಆದ್ರೆ ನಮ್ಮನ್ನು ಉದ್ದಾರ ಮಾಡೋ so called ನಮ್ ನಾಯಕರು ಅಂತ ಹೇಳ್ತಿರಲ್ಲ ಅಂತ ಜನಪ್ರತಿನಿಧಿಗಳಿಗೆ ಯಾಕೆ, ಒಂದು ಮಾನಧಂಡ ಮಾಡಿ ಅವರಿಗೂ ಒಂದು ಪರೀಕ್ಷೆ ಮಾಡ್ಬಾರ್ದು.. !! ಅದ್ರಲ್ಲಿ ಅವರಿಗೂ ಕೂಡ ಸಾಮಾನ್ಯ ಜ್ಞಾನ, ಜನ ಸಾಮಾನ್ಯರ , ರೈತರ ಬಗ್ಗೆ ಮಾಹಿತಿ , ರಾಜನೀತಿ, ಇತಿಹಾಸ, ಪ್ರಾದೇಶಿಕ ಜ್ಞಾನ, ವಸ್ತುಸ್ಥಿತಿಯ ಅರಿವಿನ ಬಗ್ಗೆ ಅವರಿಗೂ ಒಂದು ಪರೀಕ್ಷೆ ಇಡ್ಲಿ , ಅವಾಗ ಗೊತ್ತಾಗುತ್ತೆ ಇವತ್ ಸಾಮನ್ಯ ಶ್ರೀ ಸಾಮನ್ಯನ ಕಷ್ಟ ಏನು , ಮಾರ್ಕೆಟ್ ನಲ್ಲಿ ತರಕಾರಿ ಬೆಲೆ ,ಡೈರಿಯಲ್ಲಿ ಲೀಟರ್ ಹಾಲಿನ ಬೆಲೆ, ಆಟೋ ಚಾರ್ಜ ಏನಾಗಿದೆ, ಇದೆಲ್ಲಾ ಗೊತ್ತಿದ್ರೆ ತಾನೆ ತಿಳಿಯದು , ಇವತ್ತು ಡಿಗ್ರಿ ವರೆಗು ಓದ್ಬೇಕು ಅನ್ನೋ ಎಷ್ಟೋ ಮಕ್ಕಳ ಕನಸು ಹಾಳಾಗೋಗಿದೆ, ಯಾಕಂದ್ರೆ ಅವರಲ್ಲಿ ಕಿತ್ತು ತಿನ್ನೋ ಬಡತನ ಇದ್ನೆಲ್ಲಾ ಹೊಗಲಾಡ್ಸದ ಯಾವಾಗ. ಇಂತ ಕಷ್ಟ ಸುಖ ಗೊತ್ತಿರ್ಬೇಕು ತಾನೆ , ಅದ್ರಲ್ಲಿ ಪಾಸ್ ಆಗಿ ಅರ್ಹರಾದವರಿಗೆ ಅಂತ ಸ್ಥಾನ ಕಲ್ಪಿಸಬೇಕು… ಹಿಂಗಾದಾಗಲ್ಲೆ ಗೊತ್ತಾಗದು ಇವತ್ ನಮ್ ಜನ ಏನೇನ್ ಪಡು ಪಡ್ತಿದ್ದಾರೆ ಅಂತ. ದುಡ್ಡಿನ ಮದದಿಂದ ಮೆರಿತ್ತಿದವ್ರು, ಅಪ್ಪನ್ ಕಾಲದಿಂದಲೂ ಆಲದ ಮರ ಆಕಿದು ನಾವೇ ಅನ್ಕೊಂಡು ಮೆರಿತ್ತಿದ್ದವರ ಯೋಗ್ಯತೆ ಕೂಡ ಗೊತ್ತಾಗದು…
ನಾವು ಜಸ್ಟ್ ಒಂದು ಜವಾನನ ಕೆಲಸಕ್ಕೆ ಅಪ್ಲೈ ಮಾಡುದ್ರು ಅದಕ್ಕೂ ಇಷ್ಟು ಅಂತ ಅಪ್ಲಿಕೇಷನ್ ಫೀಸ್ ಕಟ್ಬೇಕು, ಪೋಲಿಸ್ ಧೃಡಿಕರಣ ಆಗ್ಬೇಕು , ನಮ್ ಮೇಲೆ ಒಂದು ಕಂಪ್ಲೆಂಟ್ ಇರ್ಬಾರ್ದು ಅಂತೆಲ್ಲಾ ಹೇಳ್ತಾರೆ ಆದ್ರೆ ಕ್ರಿಮಿನಲ್ ಕೇಸ್ ಇದ್ದು, ರೌಡಿ ಶೀಟರ್ ಗಳಾಗಿ, ಆದೋರ್ನೆಲ್ಲ ಚುನಾವಣಾ ಅಭ್ಯರ್ಥಿ ಅಂತ ಹೇಳ್ತಾರೆ ಇದ್ನೆಲ್ಲ ನಿಲ್ಸದು ಯಾವಾಗ ??? .ಅವರಿಗೆ ಒಂದು ನ್ಯಾಯ ನಮಗೆ ಒಂದು ನ್ಯಾಯನ .
ಒಬ್ಬ ಕಿರಾತಕನಕೈಗೆ ಆಡಳಿತ ಕೊಟ್ರೆ ಏನ್ ತಾನೆ ಮಾಡ್ತಾನೆ!! ಇರದ್ ಬರೋದ್ನೆಲ್ಲಾ ಕೊಳ್ಳೆ ಹೊಡ್ಕೊಂಡ್ ಹೋಗ್ತಾನೆ…
ಇವತ್ತು ಒಬ್ಬ ರೈತ 50ಸಾವಿರ ಬ್ಯಾಂಕಲ್ಲಿ ಸಾಲ ತಗೋತಾನೆ , ಬ್ಯಾಂಕನವರು ಕೋಡೋ ಹಿಂಸೆಯಿಂದ ನೇಣಾಕೊಂಡು ಕೊನೆಗೊಮ್ಮೆ ಸಾಯ್ತಾನೆ.. ಆದ್ರೆ ಇವತ್ತು ಸಾವಿರಾರು ಕೋಟಿ ಸಾಲ ಮಾಡಿದ್ರು ಫಾರಿನ್ ನಲ್ಲಿ ಜುಮ್ ಅಂತಾ ಹೋಡಾಡ್ಕೊಂಡಿ ಇದ್ದಾರೆ. ಇಂತೋರ್ನೆಲ್ಕ ಒದ್ದು ಬುದ್ದಿ ಕಲಿಸೋ ಒಬ್ಬ ಸಾಮನ್ಯರಿಗೆ ನಿಮ್ ಅಧಿಕಾರ ನೀಡಿ.
ಯಾರೆ ಆಗ್ಲಿ ಯಾರಿಗೆ ಅರ್ಹತೆ ಇರುತ್ತೋ ಅಂತವರಿಗೆ ವಿಧಾನಸೌದದ ಎಂಟ್ರಿ ನೀಡ್ಬೇಕು…
ಅದೇ ಥರ ಗ್ರಾಮ ಪಂಚಾಯತ ಸದಸ್ಯನಿಗೂ ಕೂಡ ಒಂದ್ ಅರ್ಹತೆ ಬೇಕು , ಡಿಗ್ರಿ ಮಾಡಿರ್ಬೇಕು… ಆ ಊರಿನ ಹಾಗು ಹೋಗು ಗೊತ್ತಿರ್ಬೇಕು.. ಅಟ್ ಲಿಸ್ಟ್ ವಾರಕ್ಕೆ ಒಂದ್ ಟೈಮ್ ಜನಸಭೆ ಮಾಡ್ಬೇಕು ಆ ಊರಲ್ಲಿ ಏನೇನ ಅವಸ್ಯಕತೆ ಇದೆ ಅನ್ನದ್ನ ಅವನು ತಿಳಿಬೇಕು… ಒಳ್ಳೆ ಕುಡಿಯೋ ನೀರು, ವಿದ್ಯುತ್ ದೀಪದ ಕಂಬ ಸರಿಯಾಗಿದ್ಯ, ಮೋರಿನಲ್ಲಿ ನೀರು ಸರಿಯಾಗ ಹೋಗ್ತಿದ್ಯ ಅನ್ನೋ ಕಾಮನ್ ಸೆನ್ಸ್ ಅವನಿಗೆ ಇರ್ಬೇಕು.. ಅದೆ ಥರ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯತ, ಶಾಸಕ, ಸಂಸದ ಕೂಡ ಪ್ರತಿ ಹಳ್ಳಿ ಹಳ್ಳಿಗೂ ಬಂದು ಆ ಗ್ರಾಮದ ಕನಿಷ್ಟ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡ್ಬೇಕು… ಇನ್ನು ಡಿಗ್ರಿ ಮಾಡಿ ನಿರುದ್ಯೋಗಿ ಗಳಿಗೆ ಒಂದೊಳ್ಳೆ ಕೆಲಸ ಕಲ್ಪಿಸಿಕೊಡಬೇಕು. ಆಯ ತಾಲ್ಲೂಕಿನಲ್ಲಿ ಆದಷ್ಟು ಉದ್ಯೋಗ ಸೃಷ್ಟಿ ಮಾಡ್ಬೇಕು… ಇಂತ ಕೆಪಾಸಿಟರ್ ಯಾರಿದರೋ ಅವರಿಗೆ ಪಟ್ಟ ಕಟ್ಬೇಕು…
ಇನ್ನು ಮಂತ್ರಿ ಮಂಡಲದ ಬಗ್ಗೆ ಹೇಳದೆ ಆದ್ರೆ ಒಂದೊಂದು ಮಂತ್ರಿ ಪದವಿಗೂ ಇಂತಿಷ್ಟೇ ಅರ್ಹತೆ ಇರ್ಬೇಕು, ಉದಾಹರಣೆಗೆ ಆರೋಗ್ಯ ಮಂತ್ರಿ ಆಗ್ಬೇಕು ಅಂದ್ರೆ ಮೆಡಿಕಲ್ ಓದಿರ್ಬೇಕು, ಕ್ರೀಡಾ ಸಚಿವ ಸ್ಪೋರ್ಟ್ಸ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪದಕವನ್ನು ಗೆದ್ದಿರ್ಬೇಕು. ಕಾನೂನು ಸಚಿವ ಆಗೋನು ಕಾನೂನು ಪದವಿ ಪಡೆದಿರ್ಬೇಕು. ಲೋಕೋಪಯೋಗಿ ಸಚಿವ ಸಿವಿಲ್ ಇಂಜಿನಿಯರಿಂಗ್ ಮಾಡಿರ್ಬೇಕು. ಶಿಕ್ಷಣ ಸಚಿವ ಡಬಲ್ ಡಿಗ್ರಿ ಪಡೆದಿರಬೇಕು, ಮುಖ್ಯ ಮಂತ್ರಿ ಆಗೋನು ಎಲ್ಲಾ ವಿಷ್ಯದಲ್ಲೂ ಆಲ್ ರೌಂಡರ್ ಆಗಿರ್ಬೇಕು. ಇಂಗಿದಾಗ್ಲೆ ತಾನೆ ನಮ್ಗಳ ಕಷ್ಟ ನು ತಿಳಿಯದು .
ಇಂಗೆ ನೀವೆ ಯೋಚನೆ ಮಾಡಿ ಯಾವ್ ಯಾವ್ ಮಂತ್ರಿ ಗಳಿಗೆ ಏನೇನ್ ಅರ್ಹತೆ ಇರ್ಬೇಕು ಅಂತ…
ಆದ್ರೆ ಇವಗಿನ ಪರಿಸ್ಥಿತಿ ಏನಾಗಿದೆ ಗೊತ್ತಾ ??
ಒಬ್ಬ ಕೊಲೆಗಡುಕ ನಮ್ಮನ್ ಆಳೋ ಮಂತ್ರಿ, ಒಬ್ಬ ಕಳ್ಳ ಸರ್ಕಾರದ ಖಜಾನೆಯ ಕಾಯೋ ಸೇವಕ, ಒಬ್ಬ ರೇಪಿಷ್ಟ್ , ದರೋಡೆಕೋರರ ಕೈಗೆ ನಮ್ಮ ಆಡಳಿತ ಕೊಡ್ತಿದ್ತೀವಿ ಅಂದ್ರೆ ಏನಾಗ್ಬೋದು… ನೀವೆ ಯೋಚನೆ ಮಾಡಿ . ಇವೆಲ್ಲಕ್ಕೂ ಅರ್ಹರು ಅನ್ಸುದ್ರೆ ಅಂತವರಿಗೆ ನಿಮ್ ಮತಗಳನ್ನು ನೀಡಿ.. ಗೆಲ್ಲವರಿಗೂ ಕಾಲಿಗೆ ಬಿದ್ದು ಅಮೇಲ್ ಕೈಗೂ ಸಿಗದೆ ಹೋಡಾಡೋರ್ನಾ ನಂಬಕ್ ಹೋಗ್ಬೇಡಿ , ಕೆಲಸ ಮಾಡಿ ಜನತೆನ ರಕ್ಷಣೆ ಮಾಡಿ ಸಾಮನ್ಯರ ಕಷ್ಟ ನಷ್ಟ ಗಳಿಗೆ ಸ್ಪಂದನೆ ಮಾಡುವವರು
ಸಾಮನ್ಯರ ಸಾಮಾಜಿಕ ಬದುಕಿಗೆ, ಹೋರಾಟ ಮಾಡೋರು, ಅವರ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡೋರ್ನ, ಆಯ್ಕೆ ಮಾಡಿ.
ಅದೇ ಜಾತಿ ಹೆಸರಲ್ಲಿ ರಾಜಕೀಯ ಮಾಡಿ, ಜಾತಿ ಮೇಲೆ ಜಾತಿ ಎತ್ಕಟ್ಟಿ ಧರ್ಮದ ಮೇಲೆ ಧರ್ಮನ ಹೊಡ್ಯೋ ಚೀಪ್ ಪೊಲಿಟಿಕಲ್ ನಾ ನೀವೆ ತುಳಿದು ಸಾಯಿಸಿ… ರೀ ಇದ್ದಿದ್ ಒಂದೆ ಜಾಗ ಅನ್ಸುತ್ತೆ ಜಾತಿ ಧರ್ಮ ಗೊತ್ತಿಲ್ದೆ ಅಣ್ಣ ತಂಗಿ, ಅಕ್ಕ ತಮ್ಮನಂತೆ ಒಟ್ಟಾಗಿ ಇರ್ತಿದ್ದ ಜಾಗ ಶಾಲೆ, ಕಾಲೇಜು ಆದ್ರೆ ಇದೆ ಪಾಪಿಗಳ ಕಣ್ಣಿಗ್ ಬಿದ್ದು ಕಲಿತು ಒಂದಾಗಿ ಆಡೋ ಜಾಗದಲ್ಲೂ ಜಾತಿ ಅನ್ನೋ ವಿಷ ಬೀಜವನ್ನು ಬಿತ್ತಿದ್ದಾರೆ.. ಅಂತೋರ್ನೆಲ್ಲಾ ಹತ್ರಕ್ಕೆ ಸೇರ್ಸಕ್ಕೆ ಹೋಗ್ಬೇಡಿ…
ಇವಾಗಂತು ಸರ್ಕಾರದ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಿದೆ..ಪಂಚಾಯತ ಆಫೀಸ್ ನಿಂದ, ಡಿಸಿ ಆಫೀಸ್ ನವರೆಗೂ ಲಂಚಾವತಾರ ಹೆಗ್ಗಿಲ್ದೆ ನಡಿತಿದೆ. ಲಂಚಾ ಇಲ್ದಲೆ ಇವಗ ಮಂಚಕ್ಕೂ ಸೇರ್ಸಲ್ಲ ಅಂತಾರೆ… ಇನ್ಕ್ಲೂಡಿಂಗ್ ಪೊಲೀಸ್ ಠಾಣೆ ಕೂಡ, ಎಲ್ಲೋ ಕೂತ್ಕೊಂಡು ಇಲ್ಲಿನ ಆರಕ್ಷಕರನ್ನ ಕಂಟ್ರೋಲ್ ಮಾಡ್ತವ್ರೆ… ಅದ್ನೆಲ್ಲಾ ಮೆಟ್ಟೋ ಒಬ್ಬ ಧಕ್ಷ ಪ್ರತಿನಿಧಿಯನ್ನ ನಾವು ಆಯ್ಕೆ ಮಾಡ್ಬೇಕು , ಪಾರದರ್ಶಕವಾಗಿ ಆಡಳಿತ ಮಾಡ್ಬೇಕು. ಅದ್ಬಿಟ್ಟು ತಿಂಗಳು ತಿಂಗಳು ರೋಲ್ ಕಾಲ್ ತಗೋಳೊ ಕಂತ್ರಿಗಳನಲ್ಲಾ…
ಒಬ್ಬ ಲೋಕೋಪಯೋಗಿ ಸಚಿವನಿಗೆ ಗೊತ್ತಿರ್ಬೇಕು ಒಂದು ರಸ್ತೆ ನಿರ್ಮಾಣ ಮಾಡ್ಬೇಕು ಅಂದ್ರೆ ಎಷ್ಟು ಮೂಟೆ ಸಿಮೆಂಟು ಆಕ್ಬೇಕು, ಎಷ್ಟು ಮರಳು ಆಕ್ಬೇಕು , ಎಂತ ಮರಳು ಬೇಕು, ಅದ್ಬಿಟ್ಟು ರಾತ್ರೋ ರಾತ್ರಿ ಕದ್ದು ಮರಳು ಸಾಗಿಸೋದಲ್ಲ … ಒಂದು ರೋಡ್ ಕ್ಯೂರಿಂಗ್ ಆಗಕ್ಕೆ ಎಷ್ಟು ದಿನ ನೀರಾಕ್ಬೇಕು., ಗುಣಮಟ್ಟದ ಡಾಂಬರಿಕರಣನ ಚೆಕ್ ಮಾಡಕ್ ಗೊತ್ತಿರ್ಬೇಕು ಇಲ್ಲಾ ಅಂದ್ರೆ ಕೋಟಿ ಕೋಟಿ ಲೂಟಿನೆ. ಕೆಲಸ ಆಗ್ದಲ್ಲೆ ಇರೋ ರೋಡ್ನಲ್ಲಿ ಬಿಲ್ ಮಾಡ್ಕೊಂಡು ಮೂರು ನಾಮ ಹಾಕ್ತರೆ… ಇದು ಯಾರಪ್ಪನ ದುಡ್ಡಲ್ಲಾ ನಾವು ನೀವು ಕಷ್ಟ ಪಟ್ಟು ನೀಡಿರೋ ಕಂದಾಯದ ದುಡ್ಡು…
ಯಾರಿಂದನೂ ನೀವು ಬದುಕು ಬೇಕಿಲ್ಲ ಯಾರೀಂದಲೋ ಅನ್ನ ತಿನ್ನಬೇಕಿಲ್ಲ ಆಗಾಗಿ ಯೋಚನೆ ಮಾಡಿ ಮತ ನೀಡಿ… ನಿನ್ನ ಮನೆ, ನಿನ್ನ ಊರು, ನಿನ್ನ ರಾಜ್ಯದ ಅಭಿವೃದ್ದಿ ನಿನ್ನ ಕೈಯಲ್ಲಿ. ನೀನು ಹಾಕುವ ಒಂದು ಮತದಲ್ಲಿದೆ..
.. ಸಾಮಾನ್ಯರಲ್ಲೇ ಸಾಮಾನ್ಯ ನಾಗಿ ಇರೋ ಒಬ್ಬ ಸಾಮಾನ್ಯನನ್ನು ಆಯ್ಕೆ ಮಾಡಿ
,ಒಬ್ಬ ಆಟೋ ಓಡ್ಸಿ ಬದುಕೋನ್ ಜೀವನದ ಕಷ್ಟಸುಖದ ಬಗ್ಗೆ ಗೊತ್ತಿರ್ಬೇಕು
ಅಂತೋನ್ ಆಯ್ಕೆಮಾಡಿ.
ಕನ್ನಡ ನೆಲ , ಜಲ, ಭಾಷೆ ಗಾಗಿ ಹಗಲು ರಾತ್ರಿ ಎನ್ನದೆ ಕೆಲಸ ಮಾಡಿ, ಹೋರಾಡೋ ಒಬ್ಬ ಕನ್ನಾಡಾಭಿನಾನಿನ ಗದ್ದುಗೆಗೆ ಹೇರಿಸಿ ಕನ್ನಡದ ಪರ ನಿಲ್ಲಿಸಿ…ಇಲ್ಲಾಂದ್ರೆ ಕನ್ನಡ ನಮ್ದಲ್ಲ. ಈಗ್ಲೆ ನಮ್ ಕೈನಲ್ಲಿಲ್ಲ ,ನಮ್ ಮನೆ ಮಠ ಹೆಂಡತಿ ಮಕ್ಕಳೊಂದಿಗೆ ಅವರಿಗೆ ಮಾರ್ಕೋಬಿಡ್ತಾರೆ. ಫಾರೀನ್ ನಲ್ಲಿ ಹೋಡಾಡೋರ್ಗೆಲ್ಲಾ ಅಧಿಕಾರ ಕೊಟ್ಟು ಇರೋ ಬರೋ ಸರ್ಕಾರಿ ಜಮೀನನ್ನು ತಮ್ ಹೆಂಡತಿ, ಮಕ್ಕಳ ಹೆಸರಿಗೆ ಬರ್ಸಕೊಳ್ಳೋ ಕಳ್ ನನ್ ಮಕ್ಳಿಗೆ ನಿಮ್ ಅಧಿಕಾರ ನೀಡ್ಬೇಡಿ…
ಮತದಾನ ನಿಮ್ಮ ಹಕ್ಕು ,ನಿಮ್ಮ ಹಕ್ಕನ್ನು ನೀವು ಯಾರಿಗೂ ಮೂರು ಕಾಸಿಗೆ ಮಾರ್ಕೊಬೇಡಿ… ಬೇರೆ ಬೇರೆ ನೆರೆ ರಾಜ್ಯದಲ್ಲಿ, ದೇಶಗಳನ್ನು ನೋಡಿ ನಾವು ಅವರ ಸರಿ ಸಮಾನ ನಿಲ್ಬೇಕು ಅನ್ನುವ ಪರಿಕಲ್ಪನೆ ಇಟ್ಕೊಂಡು ಮತ ನೀಡಿ….
ನೋಡ್ರಪ್ಪ ಜಾಸ್ತಿ ಕೊರಿತ್ತಿದ್ದಾನೆ ಅಂತ ಮಾತ್ರ ಅನ್ಕೊಬೇಡಿ. ಇನ್ನು ಇದೆ ಆದ್ರೆ ಇಷ್ಟೆ ಸಾಕು ಇದು ನನ್ ಒಬ್ಬನ ಮಾತಲ್ಲ ನಿಮ್ಮೆಲ್ಲರ ಮಾತು .. ನೀವೇನ್ ಹೇಳಕ್ ಆಗಲ್ಲ ಅಂತ ಇದ್ರೋ ಅದನ್ನೇ ನಾನು ಇವತ್ ನಿಮ್ ಮುಂದೆ ಹೇಳ್ತಿರೋದು.…. ನಾನೇನಾದ್ರು ಹೇಳಿದ ಸರಿ ಅನ್ಸುದ್ರೆ ಇನ್ನು ನಾಲ್ಕು ಜನಕ್ಕೆ ಕಳ್ಸಿ, ಏನಾದ್ರು ತಪ್ಪಿದ್ರೆ ನಿಮ್ ಮನೆ ಮಗ ಅನ್ಕೊಂಡು ನನ್ ತಪ್ಪೇನು ಅಂತ ಹೇಳಿ ತಿದ್ದಿ…
ಇಂತಿ ನಿಮ್ ಪ್ರೀತಿಯ
-ವಿದ್ಯಾರ್ಥಿ ಮಿತ್ರ ಕಿರಣ್

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
~ಗೋವರ್ಧನ ನವಿಲೇಹಾಳು
ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.
ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.
ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.
ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್ನ ನಷ್ಟ ಅಪಾರ. ಲೆಬನಾನ್ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್ಎಚ್ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.
ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?
ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.
ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.
ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್ನ ಮಕ್ಕಳ ಸಾವುಗಳು, ಇಸ್ರೇಲ್ನ ಗಾಯಗೊಂಡ ಕುಟುಂಬಗಳು, ಗಲ್ಫ್ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
~ಗೋವರ್ಧನ ನವಿಲೇಹಾಳು
ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.
ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ; ಎಚ್ಚರಿಕೆಯೂ ಹೌದು.
ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಲೆಕ್ಟ್ರಾಲ್ ಬಾಂಡ್ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.
ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.
ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.
ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್ಗಳಾಗಿ ಪರಿವರ್ತಿಸುತ್ತದೆ.
ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.
ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ
ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್ಲೈನ್ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.
ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.
ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.
ಸುದ್ದಿದಿನ | ವಾಟ್ಸಾಪ್ | 9980346243

-
ಅಂಕಣ6 days agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ದಿನದ ಸುದ್ದಿ7 days agoಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
-
ಅಂತರಂಗ3 days agoಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
-
ದಿನದ ಸುದ್ದಿ6 days agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ
-
ದಿನದ ಸುದ್ದಿ1 day agoಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ
-
ದಿನದ ಸುದ್ದಿ3 days agoಸುಸೂತ್ರ ಮತದಾನಕ್ಕೆ ಜಿಲ್ಲಾಡಳಿತದ ಸಕಲ ಸಿದ್ಧತೆ
-
ದಿನದ ಸುದ್ದಿ2 days agoಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoಪರಿಶಿಷ್ಟ ಪಂಗಡದ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ: ಅರ್ಜಿ ಆಹ್ವಾನ



