Connect with us

ಲೈಫ್ ಸ್ಟೈಲ್

ಹೊಕ್ಕುಳ ಬಳ್ಳಿಯ ಸುತ್ತ..!

Published

on

  • ಯಶೋಧ ಪೂಜಾರಿ, ಮುಂಬೈ

ಮನುಷ್ಯನ ದೇಹದಲ್ಲಿಯ ಉಳಿದೆಲ್ಲ ಅಂಗಗಳಿಗಿಂತ ಮೊಟ್ಟ ಮೊದಲಿಗೆ ರಚನೆಯಾಗುವ ಮಹತ್ವದ ಅಂಗ ಅಂದರೆ ಅದು ಹೊಕ್ಕುಳು . ಇದನ್ನು ನಾಭಿ , ಹೊಕ್ಕುಳು, ನಾವೇಲ್ (Naval) ಬೆಲ್ಲಿ ಬಟನ್ (Belly button) ಮತ್ತು ಸಂಸ್ಕೃತದಲ್ಲಿ ನಭಿ ಅನ್ನುತ್ತಾರೆ. ನಾವು ದೇಹದಲ್ಲಿಯ ಉಳಿದ ಭಾಗಗಳಿಗೆ ಗಮನ ಕೊಡುವಂತೆ ಹೊಕ್ಕುಳಕ್ಕೆ ಕೊಡುವುದಿಲ್ಲ. ಕಾರಣ ಆ ಭಾಗಕ್ಕೆ ಯಾವ ರೋಗವು ತಗುಲುವ ಚಿಂತೆ ಇರುವುದಿಲ್ಲವೆಂದು. ಹಾಗಾಗಿ ನಾಭಿಯ ಬಗ್ಗೆ ಸದಾ ದುರ್ಲಕ್ಷ ಮಾಡುವುದು ಸಾಮಾನ್ಯ.

ಶಿಶು ಗರ್ಭದಲ್ಲಿದ್ದಾಗ ಅದು ದೈಹಿಕ ಮತ್ತು ಮಾನಸಿಕ ಬೆಳವಣಿಗಾಗಿ ಹೊಕ್ಕುಳು ಬಳ್ಳಿಯನ್ನೆ ಅವಲಂಬಿತವಾಗಿರುತ್ತದೆ. ಶಿಶುವಿನ ಸಂಪೂರ್ಣ ಶರೀರದ ವಿಕಾಸಗೊಳ್ಳವುದು ಹೊಕ್ಕುಳದ ಸಹಾಯದಿಂದ. ಒಮ್ಮೆ ಶಿಶು ತಾಯಿ ದೇಹದಿಂದ ಬೇರ್ಪಟ್ಟ ನಂತರ ಹೊಕ್ಕುಳ ಬಳ್ಳಿಯ ಕತ್ತರಿಸಿ ಅದಕ್ಕೆ ಯಾವುದೆ ತರಹದ ಇನ್ಫೆಕ್ಷನ್ ಆಗದಂತೆ ಕ್ಲಿಪ್ ಹಾಕಲಾಗುತ್ತದೆ . ಮುಂದೆ ಎರಡು ಮೂರು ವಾರಗಳ ನಂತರ ಈ ಬಳ್ಳಿಯು ಒಣಗಿ ನೈಸರ್ಗಿಕವಾಗಿ ಶಿಶುವಿನ ದೇಹದಿಂದ ಉದುರುವುದು.

ಹಾಗೆ ಹೊರಚಾಚಿದ ಹೊಕ್ಕುಳಿನ ಭಾಗ ತುಸು ಒಣಗಿದ ನಂತರ ನಿಧಾನ ಸುರುಟಿಯಾಗಿ ಒಳ ಸರಿದು ಆದರ ಮೇಲೆ ಚರ್ಮದ ತೆಳು ಪದರು ಹಬ್ಬಿ ಒಳಮುಖವಾಗಿ ಮುಚ್ಚಿಕೊಂಡು ಬಿಡುತ್ತದೆ. ಹೀಗೆ ಸಹಜವಾಗಿ ನಮ್ಮ ದೇಹ ಯಾವ ವೈದ್ಯಕೀಯ ಸಹಾಯವಿರದೆ ತನ್ನನ್ನು ತಾನು ಸರಿ ಪಡಿಸಿಕೊಳ್ಳುವುದು. ಇಲ್ಲಿಗೆ ಹೊಕ್ಕುಳಿನ ಬಾಹ್ಯ ರೂಪದಿಂದ ಚಟುವಟಿಕೆ ಮುಗಿದರು ದೇಹದ ಒಳಗಡೆ ಅದು ಕೊನೆಯ ತನಕ ಸಕ್ರೀಯವಾಗಿರುವ ಅಂಗವಾಗಿದೆ. ಹಾಗಾಗಿ ಅದನ್ನು ಕಡೆಗಣಿಸಲಾಗದು.

ನಿರ್ಜಿವವಾಗಿರುವಂತೆ ಕಾಣುವ ನಾಭಿಯ ಮಹತ್ವವನ್ನು ಸರಿಯಾಗಿ ತಿಳಿದುಕೊಂಡಲ್ಲಿ ದೇಹದಲ್ಲಿನ ಹಲವು ರೋಗಗಳನ್ನು ವೈದ್ಯರ ಬಳಿ ಹೋಗದೆಯೆ ನಿವಾರಿಸಿಕೊಳ್ಳಲು ಸಾಧ್ಯವಿದೆ.

ನಮ್ಮ ದೇಹಕ್ಕೆ ಬರುವ ಹಲವು ಅನಾರೋಗ್ಯಗಳಿಂದ ಗುಣಪಡಿಸಿ ದೇಹದ ಆಂತರಿಕ ಶಕ್ತಿಯನ್ನು ಬಲಪಡಿಸುವ ಮತ್ತು ಸಕ್ರಿಯಗೊಳಿಸುವ ಸರ್ವೋಚ್ಚ ಶಕ್ತಿ ಈ ಹೊಕ್ಕುಳಕ್ಕೆ ಇದೆ. ಹೊಕ್ಕುಳದ ಸುತ್ತಲು ಶರೀರದ ಪ್ರಮುಖ ಅಂಗಗಳು ಇರುವುದು. ಹೊಕ್ಕುಳವು ಸಂಪೂರ್ಣ ದೇಹಕ್ಕೆ ಶಕ್ತಿಯನ್ನು ಹರಿಸುವುದು ಮತ್ತು ಪ್ರಮುಖ ನರಗಳೆಲ್ಲಾ ನಾಭಿಯ ಮೇಲೆ ಇರುವುದಲ್ಲದೆ ನಮ್ಮ ದೇಹದಲ್ಲಿರುವ ಎಪ್ಪತ್ತೆರಡು ಸಾವಿರಗಿಂತಲೂ ಹೆಚ್ಚು ನರನಾಡಿಗಳು ಈ ನಾಭಿಗೆ ಹಾಯ್ದು ಹೋಗುವವು ಹಾಗಾಗಿ ಹೊಕ್ಕಳ ದೇಹಕ್ಕೆ ಹೆದ್ದಾರಿ ಸಂಪರ್ಕವಿದ್ದಂತೆ.

ಭ್ರೂಣವು ಗರ್ಭದಲ್ಲಿದ್ದಾಗ ನೇರವಾಗಿ ತಾಯಿಯ ದೇಹಕ್ಕೆ ಜೊತೆಯಾಗಿರದೆ ಅದು ಜರಾಯು ಎಂಬ ಅಂಗದ ಮೇಲೆ ಅವಲಂಬಿತವಾಗಿರುತ್ತದೆ. ಭ್ರೂಣವನ್ನು ಗರ್ಭಶಯದ ಭಿತ್ತಿಗೆ ಜೋಡಿಸುವ ಜರಾಯು ಎಂಬ ಈ ಅಂಗವು ಚಪ್ಪಟೆಯಾಗಿ ಗೋಲಾಕಾರದ ಕೆಂಪು ಬಣ್ಣದ ಡಿಸ್ಕ್ ನಂತೆ ಇದ್ದು ಸ್ಪೋಂಜಿಯಾಗಿ ಅಂದರೆ ಮೃದುವಾಗಿ ಇರುವುದು.

ಇದು ಗರ್ಭಧಾರಣೆಯ ಸಂದರ್ಭದಲ್ಲಿ ಬೆಳೆದು ಶಿಶುವಿನಂತೆ ಇದು ಕೂಡ ಬೆಳೆಯುತ್ತಾ ಕೊನೆಯವರೆಗೆ ಸುಮಾರು 1 ಪೌಂಡ್ ನಷ್ಟು ದೊಡ್ಡದಾಗುವುದು. ಇದು ಗರ್ಭಶಯ ಮತ್ತು ಭ್ರೂಣದ ನಡುವೆ ಪೊರೆ, ತೆಳು ಪದರದಂತಿರುವುದು. ಜರಾಯುಗೆ ಪ್ಲಾಸೆಂಟಾ (Placenta) ಅನ್ನುತ್ತಾರೆ. ಭ್ರೂಣದ ಹೊಕ್ಕುಳು ಬಳ್ಳಿಯಂತೆ ಜರಾಯುಗೆ ಕೂಡ ಬಳ್ಳಿ ಇರುತ್ತದೆ. ಜರಾಯು ಬಳ್ಳಿಗೆ placental cord ಎನ್ನುತ್ತಾರೆ. ಶಿಶುವಿನ ಹೊಕ್ಕುಳ ಬಳ್ಳಿಯ ಮತ್ತೊಂದು ತುದಿಯು ಜರಾಯು ಬಳ್ಳಿಗೆ ಜೋಡಣೆಯಾಗಿದ್ದು ಶಿಶು ತನಗೆ ಬೆಳೆಯಲು ಬೇಕಾಗಿರುವ ಅವಶ್ಯಕತೆಯನ್ನು ಈ ಜರಾಯು ಮುಖಾಂತರ ಪಡೆಯುವುದು.

ಈ ಜರಾಯು ಮಗು ಮತ್ತು ಗರ್ಭಕೋಶದ ಒಳಗೋಡೆಯ ನಡುವಣ ಮೆತ್ತೆಯಂತಿದ್ದು ಮಗುವಿಗೆ ಪ್ರತಿಜೀವಕಗಳನ್ನು ನೀಡುತ್ತಾ ಸೋಂಕಿನಿಂದ ರಕ್ಷಿಸುತ್ತದೆ. ಇದು ಗರ್ಭಶಯದೊಳಗಿದ್ದು ತಾಯಿಯ ರಕ್ತದಿಂದ ಮಗುವಿಗೆ ಬೇಕಾಗುವ ಪೌಷ್ಟಿಕಾಂಶಗಳ್ಳನ್ನು ಹೀರಿ ಮಗುವಿಗೆ ತಲುಪಿಸುವುದಲ್ಲದೆ ಶಿಶುವಿಗೆ ಬೇಕಾಗಿರುವ ಅನಿಲದ ವಿನಿಮಯವನ್ನು ಮತ್ತು ವ್ಯರ್ಥ ಪದಾರ್ಥಗಳ ವಿಸರ್ಜನೆಯ ಹೊಣೆಯನ್ನು ನಿರ್ವಹಿಸುತ್ತದೆ.

ಜರಾಯು ಸ್ತ್ರೀಯರ ದೇಹದಲ್ಲಿ ಅಂಡಾಣು ಫಲಿತವಾದ ಕ್ಷಣದಿಂದಲೇ ಮೊತ್ತಾ ಮೊದಲಿಗೆ ಬೆಳೆಯುವುದು. ಭ್ರೂಣ ಗರ್ಭಾಶಯದೊಳಗೆ ಬೆಳೆದಂತೆ ಅದು ಬೆಳೆಯುತ್ತಾ ಶಿಶುವಿನ ಸಂಪೂರ್ಣ ಸಂರಕ್ಷಣೆ ಮಾಡುವುದಲ್ಲದೆ ಗರ್ಭಿಣಿಯ ಶರೀರದ ಹಾರ್ಮೋನ್ ಗ್ರಂಥಿ ಯನ್ನು ನಿಯಂತ್ರಿಸುವುದು. ಶಿಶು ತಾಯಿಯ ಗರ್ಭದಿಂದ ಹೊರಬಂದ ಬಳಿಕ ಈ ಜರಾಯು ಕೂಡ ಗರ್ಭಕೋಶದಿಂದ ಹೊರ ಹಾಕಲ್ಪಡುತ್ತದೆ.

ಹೊರಗೆ ಬಂದ ಜರಾಯು ತನ್ನಲ್ಲಿರುವ ಪೌಷ್ಟಿಕಾಂಶಗಳನೆಲ್ಲಾ ಕರುಳು ಬಳ್ಳಿಯ ಮೂಖಾಂತರ ಮಗುವಿಗೆ ವರ್ಗಾವಣೆ ಮಾಡಿ ಕೊನೆಗೆ ನಿಷ್ಫಲವಾಗುತ್ತದೆ. ಹೀಗೆ ಸ್ತ್ರೀಯರ ದೇಹದಲ್ಲಿ ಪ್ರತಿ ಹೆರಿಗೆಯಲ್ಲು ಹೊಸ ಜರಾಯು ತಯಾರಾಗಿ ಹೆರಿಗೆಯ ಸಮಯದಲ್ಲಿ ಕೊನೆಗೆ ಕಸದಂತೆ ಹೊರ ಬರುವುದು. ಇದನ್ನು ಮಾಸುಚೀಲ ಅಥವಾ ಕಸ ಅನ್ನುವ ವಾಡಿಕೆ ಇದೆ.

ತಾಯಿಯ ಗರ್ಭದಿಂದ ಹೊರಕ್ಕೆ ಬರುವ ಶಿಶುವಿನ ನಾಭಿ ಬಳ್ಳಿಯನ್ನು ಜರಾಯು ಬಳ್ಳಿಯಿಂದ ಬೇರ್ಪಡಿಸಿದ ಬಳಿಕ ಶಿಶು ತನ್ನ ಅವಶ್ಯಕತೆಗಳಿಗಾಗಿ ಬಾಹ್ಯ ಸಂಪರ್ಕಗಳಿಗೆ ಹೊಂದಿಕೊಳ್ಳುವುದು. ಅಲ್ಲಿಂದ ನಾಭಿಯ ದ್ವಾರ ಹೊರಗಡೆಯಿಂದ ಮುಚ್ಚಿದರೂ ಒಳಗಡೆಯಿಂದ ನಮ್ಮ ಇಡಿ ದೇಹಕ್ಕೆ ತಾಯಿ ಬೇರಿನ ಪಾತ್ರವಹಿಸುತ್ತದೆ.

ನವಜಾತ ಶಿಶುವಿಗೆ ಎರಡು ಮೂರು ವರ್ಷಗಳ ತನಕ ನಿತ್ಯ ತೈಲದ ಮಸಾಜ್ ಮಾಡಿ ಹೊಕ್ಕಳಕ್ಕೆ ಕೆಲವು ತೊಟ್ಟು ಎಣ್ಣೆ ಹಾಕಿ ಕ್ಷಣಕಾಲ ಬಿಟ್ಟು ಆ ಮೇಲೆ ಮಗುವಿಗೆ ಸ್ನಾನ ಹಾಕಿಸುವ ರೂಡಿ ಈಗಲೂ ನಮ್ಮಲ್ಲಿ ಕಾಣುತ್ತೇವೆ. ಇದರಿಂದಾಗಿ ಶಿಶುವಿನ ದೇಹ ಕೋಮಲವಾಗಿ ಇರುವುದಲ್ಲದೆ ನಾಭಿ ಮೂಲಕ ಹೀರಿಕೊಂಡ ಎಣ್ಣೆ ಇಡಿ ಶರೀರದೊಳಗೆ ತಲುಪಿ ಮಗುವು ಆರೋಗ್ಯಕರವಾಗಿ ಇರುವಂತೆ ಸಹಾಯ ಮಾಡುತ್ತದೆ.

ಅದಲ್ಲದೆ ಶಿಶುವಿಗೆ ಹೊಟ್ಟೆ ಉಬ್ಬರಿಸಿ ನೋವು ಅನುಭವಿಸಿದರೆ, ಮಲವಿಸರ್ಜನೆಗೆ ತೊಂದರೆ ಇದ್ದರೆ ನಮ್ಮ ಹಿರಿಯರು ಹಿಂಗಿನ ನೀರನ್ನು ಹೊಕ್ಕಳಿನ ಸುತ್ತಲೂ ಉಜ್ಜುವುದು ಅಥವಾ ಓಮ ಕಾಳನ್ನು ಉಗುರು ಬೆಚ್ಚಗೆ ಮಾಡಿ ತೆಳು ಬಟ್ಟೆಯಲ್ಲಿ ಕಟ್ಟಿ ನಾಭಿಯ ಸುತ್ತಾ ಮಸಾಜ್ ಮಾಡವುದನ್ನು ನೋಡುತ್ತೇವೆ. ಹೀಗೆ ಮಾಡುವುದರಿಂದ ಶಿಶುವಿನ ಹೊಟ್ಟೆ ನೋವು ಶಮನವಾಗುತ್ತದೆ.

ಹಿಂದಿನಿಂದಲೂ “ಆಯುರ್ವೇದ ” ವೈದ್ಯಕೀಯ ಪದ್ಧತಿ ಮತ್ತು “ಪ್ರಕೃತಿ ಚಿಕಿತ್ಸೆ ” ಪದ್ದತಿ ಎರಡರಲ್ಲೂ ನಾಭಿಗೆ ಎಣ್ಣೆ ಹಾಕಿದಲ್ಲಿ ಹಲವು ಆರೋಗ್ಯ ದೋಷಗಳಿಂದ ಮುಕ್ತರಾಗಬಹುದು ಎಂಬ ನಂಬಿಕೆ ಈಗಲೂ ಇದೆ. ಹೊಕ್ಕುಳಕ್ಕೆ ಎಣ್ಣೆಯನ್ನು ಹಾಕುವುದರಿಂದ ನಮ್ಮ ಚರ್ಮದ ಆರೈಕೆಗೆ , ಕೂದಲಿನ ಆರೈಕೆ ಮತ್ತು ಮುಟ್ಟಿನ ನೋವು, ಕೀಲು ನೋವು ಮತ್ತು ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಗೆ ಸಂಬಂಧಿಸಿದ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವು ಸಿಗುವುದೆಂದು ಹಿಂದಿನವರ ಹೇಳಿಕೆ. ಹಾಗಾಗಿ ನಾಭಿ ಚಿಕಿತ್ಸೆಯು ಇತ್ತೀಚೆಗೆ ಬಹಳ ವಿಶೇಷತೆಯನ್ನು ಪಡೆದಿದೆ.

ಇಂದಿನ ಆತುರಾತುರವಾದ ಬದುಕಿನಲ್ಲಿ ಎಣ್ಣೆ ಸವರಿ ಕುಳಿತುಕೊಳ್ಳಲು ಯಾರಿಗೆ ತಾನೆ ಸಮಯವಿದೆ ? ಎನ್ನುವ ಯೋಚನೆ ತಕ್ಷಣ ನಮ್ಮಲ್ಲಿ ಬರುವುದು ಸ್ವಾಭಾವಿಕ. ಆದರೆ ಪ್ರಕೃತಿಯಲ್ಲಿ ಸುಲಭವಾಗಿ ಲಭ್ಯವಿರುವ ಪದಾರ್ಥಗಳಿಂದಲೆ ನಾವು ಆರೋಗ್ಯಕರರಾಗಿ ಇರಬಹುದಾದಲ್ಲಿ ಸ್ವಲ್ಪ ಸಮಯ ಸ್ವಂತಕ್ಕಾಗಿ ಬಳಸಿಕೊಂಡಲ್ಲಿ ತಪ್ಪೆನಿದೆ. ಹಾಗಾದರೆ ಬನ್ನಿ
ಹೊಕ್ಕುಳಕ್ಕೆ ತೈಲ ಚಿಕಿತ್ಸೆಯಿಂದ ತ್ವಚೆಯ ಆರೈಕೆಯನ್ನು ಮಾಡಿಕೊಳ್ಳುವ ವಿಧಾನ ತಿಳಿಯೋಣ.

ಎಳ್ಳೆಣ್ಣೆ ( Sesame oil)

ಎಣ್ಣೆಯುಕ್ತ ತ್ವಚೆ( oily skin ) ಇಂತಹ ತ್ವಚೆಯವರಿಗೆ ಹದಿ ಹರೆಯದಲ್ಲಿ ಮೊಡವೆಗಳ ತೊಂದರೆ ಅಧಿಕವಾಗಿರುತ್ತದೆ. ಯಾಕೆಂದರೆ ಇಂತಹ ಚರ್ಮ ಮೇದೋಜೀರಕ ಎಂಬ ಗ್ರಂಥಿಯನ್ನು ಅತಿಯಾಗಿ ಸ್ರವಿಸುವುದರಿಂದ ಚರ್ಮವು ನೈಸರ್ಗಿಕವಾಗಿಯೇ ಎಣ್ಣೆಯನ್ನು ಬಿಡುಗಡೆ ಮಾಡುತ್ತದೆ. ಹಾಗಾಗಿ ಎಣ್ಣೆಯುಕ್ತ ಚರ್ಮ ಉಳ್ಳವರು ತಮ್ಮ ತ್ವಚೆಯ ಬಗ್ಗೆ ಸ್ವಲ್ಪ ಹೆಚ್ಚು ಕಾಳಜಿವಹಿಸಬೇಕು.

ಈ ತ್ವಚೆಯಲ್ಲಿ ಎಣ್ಣೆಯಂಶ ಅತಿಯಾಗಿ ಕಾಣಿಸಿಕೊಳ್ಳುವುದಲ್ಲದೆ ತ್ವಚೆಯು ಸದಾ ಜಿಡ್ಡು ಜಿಡ್ಡಾಗಿದ್ದು ಹೊರಗಿನ ದೂಳು ಪ್ರದೂಷಣಗಳಿಗೆ ಬಹು ಬೇಗ ಪ್ರತಿಕ್ರಿಯಿಸುವುದರಿಂದಾಗಿ ಮುಖದಲ್ಲಿ ಮೊಡವೆ ಮತ್ತು ಬೊಕ್ಕಗಳು ಮೂಡುತ್ತದೆ.

ಇಂತಹ ಎಣ್ಣೆಯುಕ್ತ ತ್ವಚೆಯುಳ್ಳವರು ಸ್ನಾನದ ಬಳಿಕ ಮತ್ತು ಮಲಗುವ ಮುನ್ನ ತಮ್ಮ ನಾಭಿಗೆ ಎಳ್ಳೆಣ್ಣೆಯ ನಾಲ್ಕು ಹನಿಯನ್ನು ಹಾಕಿ ಹತ್ತು ಹದಿನೈದು ನಿಮಿಷ ಬಿಡುವುದರಿಂದ ಮುಖದಲ್ಲಿರುವ ಮೊಡವೆಗಳ ತೊಂದರೆಯನ್ನು ನಿವಾರಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದಾಗಿ ತ್ವಚೆಯು ಅತಿಯಾಗಿ ಎಣ್ಣೆಯಾಂಶ ಬಿಡುಗಡೆ ಮಾಡುವುದನ್ನು ಕ್ರಮೇಣವಾಗಿ ಒಳಗಿನಿಂದಲೇ ನಿಯಂತ್ರಿಸುವುದುರಿಂದಾಗಿ ಕ್ರಮೇಣ ಜಿಡ್ಡಿರದ ಸಾಮಾನ್ಯ ತ್ವಚೆಯಾಗಿ ಮಾರ್ಪಾಡಾಗುತ್ತದೆ.

ಬಾದಾಮಿ ಎಣ್ಣೆ (Almond oil)

ಈ ಎಣ್ಣೆಯು ವಿಟಮಿನ್ ಇ ಅಂದರೆ ನೈಸರ್ಗಿಕವಾಗಿ ಎಣ್ಣೆಯುಕ್ತ ವಾಗಿದೆ. ಒಣ ತ್ವಚೆ ಅಥವಾ ಶುಷ್ಕ ತ್ವಚೆ (dry skin) ತ್ವಚೆಯಲ್ಲಿ ಎಣ್ಣೆಯಂಶ ಕಡಿಮೆ ಇದ್ದು ಸದಾ ಒಣಗಿದಂತಿರುತ್ತದೆ. ಇಂತಹ ಚರ್ಮವು ವಯಸ್ಸಿಗಿಂತಲೂ ಬೇಗನೆ ಸುಕ್ಕು ಗಟ್ಟಿ ಹೊಳಪಿಲ್ಲದೆ ಕಳೆಗುಂದಿದಂತೆ ಕಾಣುತ್ತದೆ. ಒಣ ಚರ್ಮವನ್ನು ಕಾಂತಿಯುತವಾಗಿ ಮತ್ತು ಆಧ್ರ೯ಕವಾಗಿ ಇಡಲು ಹೊಕ್ಕುಳಕ್ಕೆ ಬಾದಾಮಿ ಎಣ್ಣೆ ಬಳಸಬೇಕು.

ಬಾದಾಮಿ ಎಣ್ಣೆಯನ್ನು ನಾಭಿಗೆ ಹಾಕುವುದರಿಂದ ಇದು ದೇಹದ ಸಂಪೂರ್ಣ ತ್ವಚೆಗೆ ಪೋಷಣೆ ಕೊಡುವುದಲ್ಲದೆ ನಿಮ್ಮ ತ್ವಚೆಗೆ ನೈಸರ್ಗಿಕವಾಗಿ ಹೊಳಪು ಕೊಡುತ್ತದೆ. ಇದರಿಂದಾಗಿ ವಯಸ್ಸಿಗೆ ಪೂರ್ವವಾಗಿ ಬರುವ ಮುಪ್ಪಿನ ಲಕ್ಷಣಗಳನ್ನು ತಡೆಯಬಹುದು.

ಸಾಸಿವೆ ಎಣ್ಣೆ (Mustard oil)

ಹೆಚ್ಚಿನವರಲ್ಲಿ ತಮ್ಮ ತ್ವಚೆ complexion ಅಂದರೆ ಬಣ್ಣದ ಬಗ್ಗೆ ಕೀಳರಿಮೆ ಇರುತ್ತೆ . ಅಂತವರು ತ್ವಚೆಯ (complexion lmprove ) ಬಣ್ಣದ ಮಟ್ಟ ತಿಳಿ ಮಾಡಲು ಹೊಕ್ಕುಳಕ್ಕೆ ಸಾಸಿವೆ ಎಣ್ಣೆಯನ್ನು ಉಪಯೋಗಿಸ ತಕ್ಕದ್ದು. ಸಾಸಿವೆ ಎಣ್ಣೆಯಲ್ಲಿ ತ್ವಚೆಯ ತೇಜಸ್ಸನ್ನು ಹೆಚ್ಚಿಸುವ ಗುಣವಿದೆ. ಹಾಗೆಂದು ಇದನ್ನು ಮುಖಕ್ಕೆ ನೇರವಾಗಿ ಹಚ್ಚಿಕೊಂಡರೆ ಮುಖ ಇನ್ನು ಹೆಚ್ಚು ಕಪ್ಪಾಗುವ ಸಂಭವ ಇರುತ್ತದೆ.

ಹಾಗಾಗಿ ನಾಭಿಗೆ ಈ ಎಣ್ಣೆಯನ್ನು ಹಾಕುವುದರಿಂದ ಇದು ದೇಹದ ಒಳಗಿಂದಲೇ ಆರೈಕೆ ಮಾಡುವುದು. ಸಾಸಿವೆ ಎಣ್ಣೆ ದಣಿವು, ಕಳಪೆ ಸ್ಮರಣೆ ಮತ್ತು ಖಿನ್ನತೆಯ ನಿವಾರಣೆಗೆ ಸಹಾಯ ಮಾಡುತ್ತದೆ. ಕಣ್ಣಿನ ಸೋಂಕು ಮತ್ತು ಕಣ್ಣಿನ ಕಾಯಿಲೆಗಳಿಗೆ ಸಹಾಯ ಮಾಡುತ್ತದೆ. ತಲೆನೋವು ಮತ್ತು ಮೈಗ್ರೇನ್ ಕಡಿಮೆ ಮಾಡುತ್ತದೆ.

ಸೂರ್ಯಕಾಂತಿ ಎಣ್ಣೆ (sunflower oil)

ಕಾಂತಿಯುತವಾದ ತ್ವಚೆ ಅಂದರೆ glowing skin ತ್ವಚೆಯ ಕಾಮನೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಇಂತಹ ತ್ವಚೆಯನ್ನು ಪಡೆಯಲು ಸೂರ್ಯಕಾಂತಿ ಎಣ್ಣೆಯ 2 , 3 ಹನಿಯನ್ನು ಹೊಕ್ಕುಳಿಗೆ ಬಿಡಬೇಕು. ಈ ಎಣ್ಣೆಯು ನಮ್ಮ ತ್ವಚೆಯ ಕಾಂತಿಯನ್ನು ನೈಸರ್ಗಿಕವಾಗಿ ಹೆಚ್ಚಿಸುತ್ತದೆ.

ತೆಂಗಿನ ಎಣ್ಣೆ (coconut oil )

ಈ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿರುವುದು. ಇದು ಕೂದಲ ಬೆಳವಣಿಗೆಗೆ ಅತಿ ಮುಖ್ಯ. ಇದರಿಂದ ಚರ್ಮವು ಮೃದುವಾಗಿ ಇರುವುದು. ಮಹಿಳೆಯರಲ್ಲಿ ಸಂತಾನೋತ್ಪತ್ತಿ ವ್ಯವಸ್ಥೆಗೆ ಇದು ಉತ್ತಮವೆಂದು ಹೇಳಲಾಗುತ್ತದೆ. ತಲೆ ಹೊಟ್ಟು ಮತ್ತು ಒಣ ನೆತ್ತಿಯ ತೊಂದರೆ ನಿವಾರಿಸುತ್ತದೆ.

ಬೇವಿನ ಎಣ್ಣೆ (Neem oil)

ಈ ಎಣ್ಣೆಯು ಮುಖದ ಗುಳ್ಳೆಗಳನ್ನು ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ. ತುರಿಕೆ ಮತ್ತು ದದ್ದುಗಳ ಮೇಲೆ ಪರಿಣಾಮಕಾರಿ.

ಹಸುವಿನ ತುಪ್ಪ ( Cow Ghee )

ಈ ಎಣ್ಣೆಯು ನಯವಾದ ಚರ್ಮಕ್ಕಾಗಿ ಮತ್ತು
ನವಜಾತ ಶಿಶುಗಳ ಮೂಳೆಗಳನ್ನು ಬಲಪಡಿಸಲು ಉಪಯೋಗಕಾರಿ.

ಕ್ಯಾಸ್ಟರ್ ಆಯಿಲ್ (Castor oil)

ಮೊಣಕಾಲು ನೋವು ಮತ್ತು ಇತರ ಕೀಲು ನೋವುಗಳಿಗಾಗಿ,
ಉದ್ದನೆಯ ರೆಪ್ಪೆಗೂದಲಿಗೆ, ಉದ್ದನೆಯ ದಟ್ಟ ಕೂದಲಿಗಾಗಿ,
ಹೆಚ್ಚಿನ ರೀತಿಯ ಹೊಟ್ಟೆಯ ಸಮಸ್ಯೆಗಳ ನಿವಾರಣೆಗೆ ಈ ಎಣ್ಣೆಯು ಉಪಯುಕ್ತ.

ಆಲೀವ್ ಎಣ್ಣೆ ( Olive oil )

ಈ ಎಣ್ಣೆ ಹಾಕುವುದರಿಂದ ಮುಟ್ಟಿನ ನೋವು ಮತ್ತು ಸೆಳೆತಕ್ಕೆ ಸಹಾಯ ಮಾಡುತ್ತದೆ. ಮಕ್ಕಳ ಮೂಳೆ ಮತ್ತು ಸ್ನಾಯುಗಳನ್ನು ಬಲಪಡಿಸುವುದು. ಒಳ್ಳೆಯ ನಿದ್ರೆಗಾಗಿ ಸಹಾಯ ಮಾಡುತ್ತದೆ.
ಹಸಿವಿನ ಕೊರತೆಯ ನಿವಾರಿಸುವುದು. ಮಲಬದ್ಧತೆಗೆ ಪರಿಣಾಮಕಾರಿ.

ಇಲ್ಲಿ ಮುಖ್ಯವಾಗಿ ನೆನಪಿನಲ್ಲಿಡಬೇಕಾದ ಅಂಶವೆಂದರೆ ಹೊಕ್ಕಳಕ್ಕೆ ಉಪಯೋಗಿಸಲು ಅತಿ ಶುದ್ಧವಾದ ನೈಸರ್ಗಿಕವಾದ ಎಣ್ಣೆಯನ್ನೆ ಬಳಸಬೇಕು. ಕಲಬೆರಕೆಯ ಎಣ್ಣೆಯನ್ನು ಬಳಸದಿರಿ. ಎಣ್ಣೆಯ ಮೂಲ ಗುಣ ಸಕ್ರೀಯಗೊಳ್ಳಲು ಬಳಸುವ ಮುನ್ನ ಸ್ವಲ್ಪ ಬಿಸಿ ಮಾಡಿಕೊಂಡು ಬಳಸಬೇಕು.

ಹೀಗೆ ಉಗುರು ಬೆಚ್ಚಗಿನ ಎಣ್ಣೆಯನ್ನು ರಾತ್ರಿಯಲ್ಲಿ ಮಲಗುವ ಮುನ್ನ ಹತ್ತಿಯಲ್ಲಿ ಅದ್ದಿ 2-3 ಹನಿ ಹೊಕಳಕ್ಕೆ ಬಿಡಬೇಕು. 15-20 ನಿಮಿಷದ ಬಳಿಕ ವೃತ್ತಾಕಾರದ ಪ್ರದಕ್ಷಿಣಾಕಾರದ ಚಲನೆಯಲ್ಲಿ ನಾಭಿಯ ಸುತ್ತಾ ಮಸಾಜ್ ಮಾಡಿಕೊಳ್ಳಬೇಕು. ಹಾಗೆಯೇ ನಿತ್ಯ ಸ್ನಾನ ಮಾಡುವಾಗ ಹೊಕ್ಕುಳವನ್ನು ತೊಳೆದು ಶುಚಿಯಾಗಿ ಇಟ್ಟುಕೊಳ್ಳಬೇಕು. ಇಲ್ಲಾವಾದಲ್ಲಿ ಸೊಂಕು ತಗಲುವ ಸಾಧ್ಯತೆ ಇರುತ್ತದೆ. ಹೀಗೆ ಮಾಡಿ ನೋಡಿ ತಮ್ಮ ತ್ವಚೆಯಲ್ಲಿ ಆರೋಗ್ಯದಲ್ಲಿ ಆಗುವ ವ್ಯತ್ಯಾಸವನ್ನು ತಾವಾಗಿಯೇ ಗಮನಿಸಿ ಆನಂದಿಸಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

ಅಂಕಣ

Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?

Published

on

indian birthwort, Aristolochia tagala

‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.

ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:

ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.

ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ

‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?

ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್‌ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.

‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?

ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.

ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.

ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

Continue Reading

ದಿನದ ಸುದ್ದಿ

ಗೃಹಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ

Published

on

ಸುದ್ದಿದಿನಡೆಸ್ಕ್:ಗೃಹಬಳಕೆಯ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.

ಗೃಹ ಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯನ್ನು 111 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಸಚಿವಾಲಯ, ವಾಣಿಜ್ಯ ಸಿಲೆಂಡರ್ ಬೆಲೆಯು ಅಂತಾರಾಷ್ಟ್ರೀಯ ಕಚ್ಚಾ ಅನಿಲ ಮತ್ತು ಸಂಬAಧಿತ ದರಗಳ ಮೇಲೆ ಅವಲಂಬಿತವಾಗಿದ್ದು, ಆಗಾಗ್ಗೆ ಮಾರುಕಟ್ಟೆಯ ದರಗಳು ಬದಲಾಗುತ್ತವೆ. ಆದರೆ, ಗೃಹ ಬಳಕೆಯ ಸಿಲೆಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದೆ.

ದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್ ಬೆಲೆ 950 ರೂಪಾಯಿಯಾಗಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದು 553 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇದು ಆಗಸ್ಟ್ 2023 ರಿಂದ ನವೆಂಬರ್ 2025ರವರೆಗೆ ಹೋಲಿಸಿದರೆ, ಶೇಕಡಾ 39 ರಷ್ಟು ದರ ಕಡಿತವನ್ನು ಸೂಚಿಸುತ್ತದೆ. ಜನರಿಗೆ ಸುಸ್ಥಿರ ಇಂಧನ ಪೂರೈಕೆಗೆ ಒತ್ತು ನೀಡಲಾಗಿದ್ದು, ದರ ಬದಲಾವಣೆ ಇಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending